Category Archives: Blog

Your blog category

AI Monks: ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’! ಎಐ ಬುದ್ಧನ ಬೋಧನೆಗೆ ಜಗತ್ತೇ ಫಿದಾ – Kannada News | AI Monks: The Future of Spirituality? Robot Priests in Japan and Korea Transforming Faith

ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’Image Credit source: Pinterest

ಟೋಕಿಯೋ: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಕೇವಲ ಉದ್ಯಮ ಮತ್ತು ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಈಗ ಅದು ಆಧ್ಯಾತ್ಮಿಕ ಲೋಕಕ್ಕೂ ಕಾಲಿಟ್ಟಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಈಗ ‘ರೋಬೋಟ್ ಸನ್ಯಾಸಿಗಳು’ ಧರ್ಮ ಬೋಧನೆ ಮಾಡುತ್ತಿದ್ದು, ಭವಿಷ್ಯದಲ್ಲಿ ರೋಬೋಟ್‌ಗಳೇ ಧಾರ್ಮಿಕ ಗುರುಗಳಾಗಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ದಕ್ಷಿಣ ಕೊರಿಯಾದಲ್ಲಿ ‘ಗಾಬಿ’ ಎಂಬ ಎಐ ಸನ್ಯಾಸಿ:

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ ಪ್ರಸಿದ್ಧ ‘ಜೋಗ್ಯೆಸಾ’ ದೇಗುಲದಲ್ಲಿ ‘ಗಾಬಿ’ (Gabi) ಎಂಬ ಹ್ಯೂಮನಾಯ್ಡ್ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. 130 ಸೆಂಟಿಮೀಟರ್ ಎತ್ತರವಿರುವ ಈ ರೋಬೋಟ್, ಸಾಂಪ್ರದಾಯಿಕ ಬೌದ್ಧ ಉಡುಪನ್ನು ಧರಿಸಿ, ಬೌದ್ಧ ದೀಕ್ಷೆಯನ್ನೂ ಸ್ವೀಕರಿಸಿದೆ. ಅಷ್ಟೇ ಅಲ್ಲದೆ, “ನಾನು ಬೌದ್ಧ ಧರ್ಮಕ್ಕೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿದೆ.

ಜಪಾನ್‌ನ 400 ವರ್ಷ ಹಳೆಯ ದೇವಸ್ಥಾನದಲ್ಲಿ ರೋಬೋಟ್ ಉಪದೇಶ:

ಜಪಾನ್‌ನ ಕ್ಯೋಟೋದಲ್ಲಿರುವ 400 ವರ್ಷಗಳ ಇತಿಹಾಸವಿರುವ ಕೊಡೈ-ಜಿ ದೇಗುಲದಲ್ಲಿ ‘ಕಾನನ್’ (Kannon) ಎಂಬ ರೋಬೋಟ್ ಅನ್ನು ಸ್ಥಾಪಿಸಲಾಗಿದೆ. ಯುವ ಪೀಳಿಗೆಯನ್ನು ಆಧ್ಯಾತ್ಮದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ರೋಬೋಟ್ ಜಪಾನಿ ಭಾಷೆಯಲ್ಲಿ ಬೌದ್ಧ ಧರ್ಮದ ತತ್ವಗಳನ್ನು ಬೋಧಿಸುತ್ತದೆ ಮತ್ತು ಅದನ್ನು ಇಂಗ್ಲಿಷ್ ಹಾಗೂ ಚೈನೀಸ್ ಭಾಷೆಗಳಿಗೂ ಭಾಷಾಂತರಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ರೋಬೋಟ್ ಸನ್ಯಾಸಿಗಳ ಅಗತ್ಯವೇಕೆ?

ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಬೌದ್ಧ ಸನ್ಯಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಕೊರತೆಯನ್ನು ನೀಗಿಸಲು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಇದಲ್ಲದೇ ಎಐ ರೋಬೋಟ್‌ಗಳು ಕಠಿಣವಾದ ಧರ್ಮಗ್ರಂಥಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ವಿವರಿಸಬಲ್ಲವು. ತಂತ್ರಜ್ಞಾನದ ಮೇಲೆ ಆಸಕ್ತಿ ಹೊಂದಿರುವ ಇಂದಿನ ಯುವಕರಿಗೆ ಈ ‘ಹೈಟೆಕ್’ ಬೋಧನೆ ಹೆಚ್ಚು ಹತ್ತಿರವಾಗುತ್ತಿದೆ.

ಮನುಷ್ಯರ ಸ್ಥಾನ ತುಂಬಬಲ್ಲವೇ ಈ ರೋಬೋಟ್‌ಗಳು?

ರೋಬೋಟ್‌ಗಳು ಮಾಹಿತಿ ಮತ್ತು ಜ್ಞಾನವನ್ನು ನೀಡಬಲ್ಲವೇ ಹೊರತು, ಮನುಷ್ಯರಂತೆ ಕರುಣೆ, ದಯೆ ಅಥವಾ ಆಧ್ಯಾತ್ಮಿಕ ಅನುಭೂತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇವು ಕೇವಲ ಮೊದಲೇ ಪ್ರೋಗ್ರಾಂ ಮಾಡಲಾದ ಡೇಟಾ ಆಧಾರದ ಮೇಲೆ ಕೆಲಸ ಮಾಡುತ್ತವೆ. ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಧರ್ಮ ಮತ್ತು ತಂತ್ರಜ್ಞಾನದ ಈ ಮಿಲನವು ಹೊಸ ಸಂಚಲನವನ್ನಂತೂ ಸೃಷ್ಟಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ: ಅಡುಗೆ ಎಣ್ಣೆ ಬೆನ್ನಲ್ಲೇ ಅಕ್ಕಿ ದರವೂ ಭಾರಿ ಏರಿಕೆ! – Kannada News | Rice and Cooking Oil Prices Hike in Bengaluru: Common Man Hit by Double Blow of Price Rise

ಬೆಂಗಳೂರು, ಮೇ 14: ಬೆಂಗಳೂರಿನ (Bengaluru) ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ವಾರವಷ್ಟೇ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿದ್ದು, ಅದರ ಬೆನ್ನಲ್ಲೇ ಈಗ ಅಕ್ಕಿ ದರವೂ (Rice Price) ಗಗನಕ್ಕೇರಲು ಸಜ್ಜಾಗಿದೆ. ಕಚ್ಚಾ ವಸ್ತುಗಳ ಕೊರತೆ ಹಾಗೂ ರಫ್ತು ಪ್ರಮಾಣದಲ್ಲಿನ ಏರಿಕೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರೊಂದಿಗೆ ಇಂಧನ, ಆಟೋ ಎಲ್​​ಪಿಜಿ, ಕಮರ್ಷಿಯಲ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿ ಬಹುತೇಕ ಅಗತ್ಯ ವಸ್ತುಗಳು ತುಟ್ಟಿಯಾದಂತಾಗಿದೆ.

ಮುಖ್ಯಾಂಶಗಳು

  • ಅಕ್ಕಿ ಬೆಲೆಯಲ್ಲಿ ಸಗಟು ದರದಲ್ಲಿ 4 ರಿಂದ 5 ರೂಪಾಯಿ ಹಾಗೂ ಚಿಲ್ಲರೆ ದರದಲ್ಲಿ 8 ರಿಂದ 10 ರೂಪಾಯಿವರೆಗೆ ಏರಿಕೆ.
  • ಅಡುಗೆ ಎಣ್ಣೆ ದರವು ಸಗಟು ಮಾರುಕಟ್ಟೆಯಲ್ಲಿ ಲೀಟರ್‌ಗೆ 3 ರೂಪಾಯಿ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 5 ರಿಂದ 10 ರೂಪಾಯಿವರೆಗೆ ಏರಿಕೆ.
  • ಶ್ರೀಲಂಕಾ ಸೇರಿದಂತೆ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಮತ್ತು ಬೆಲೆ ಏರಿಕೆ ಭೀತಿ.

ಬೆಲೆ ಏರಿಕೆಯ ವಿವರ

ಹೋಲ್‌ಸೇಲ್ (ಸಗಟು) ಮಾರುಕಟ್ಟೆಯಲ್ಲಿ ಒಂದು ಅಕ್ಕಿ ಚೀಲದ ಬೆಲೆ 55 ರಿಂದ 60 ರೂಪಾಯಿಯಷ್ಟು ಏರಿಕೆಯಾಗುತ್ತಿದ್ದು, ರಿಟೇಲ್ (ಚಿಲ್ಲರೆ) ಮಾರುಕಟ್ಟೆಯಲ್ಲಿ ಒಂದು ಚೀಲದ ಮೇಲೆ 60 ರಿಂದ 80 ರೂಪಾಯಿಯಷ್ಟು ಹೊರೆ ಬೀಳಲಿದೆ. ಇಷ್ಟೇ ಅಲ್ಲದೆ, ಈ ತಿಂಗಳ ಅಂತ್ಯದ ವೇಳೆಗೆ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಸಗಟು ದರದಲ್ಲಿ ಮತ್ತೆ 4 ರಿಂದ 5 ರೂಪಾಯಿ ಏರಿಕೆಯಾಗಲಿದೆ ಎಂದು ಬೆಂಗಳೂರಿನಲ್ಲಿ ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಅಕ್ಕಿ ಬೆಲೆ ಏರಿಕೆಗೆ ಕಾರಣಗಳೇನು?

ಕೃಷಿ ಉತ್ಪನ್ನಗಳ ಕಚ್ಚಾ ವಸ್ತುಗಳ ಕೊರತೆಯು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಭಾರತದಿಂದ ಶ್ರೀಲಂಕಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತು ಆಗುತ್ತಿದ್ದು, ಅಲ್ಲಿಂದ ಇತರ ದೇಶಗಳಿಗೆ ರಫ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಕ್ಕಿ ದಾಸ್ತಾನು ಕಡಿಮೆಯಾಗುತ್ತಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಇದನ್ನೂ ಓದಿ: ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಔಷಧ ಬೆಲೆ ಏರಿಕೆ

ಅಡುಗೆ ಎಣ್ಣೆಯ ಬೆಲೆಯೂ ಈಗಾಗಲೇ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ – Kannada News | K. N. Rajanna Says Narendra Modi Is the Most Popular Leader After Indira Gandhi

ತುಮಕೂರು, ಮೇ 14: ಇಂದಿರಾ ಗಾಂಧಿ ಬಿಟ್ಟರೆ ಮಾಸ್​​ ಲೀಡರ್​​ ನರೇಂದ್ರ ಮೋದಿಯೇ ಎಂದು ಮಾಜಿ ಸಚಿವ, ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೇಳಿದ್ದಾರೆ. ನಾನು ಹೀಗೆ ಹೇಳಿರೋದನ್ನು ಕೇಳಿದರೆ ನಮ್ಮಲ್ಲಿ ಕೆಲವರ ಕಣ್ಣು ಕೆಂಪಾಗುತ್ತೆ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧ ಕಿಡಿ ಕಾರಿರುವ ರಾಜಣ್ಣ, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಅಥವಾ ಇಲ್ಲವೋ ಅದು ನಮ್ಮ ಪಕ್ಷದ ವಿಚಾರ. ಸಿಎಂ ಸ್ಥಾನಕ್ಕೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪತ್ನಿ ನಿಧನ, ಬ್ಯಾಂಕ್ ಖಾತೆ ಫ್ರೀಝ್: ಸಂಕಷ್ಟಕ್ಕೆ ಸಿಲುಕಿದ ಮಾಜಿ ಕ್ರಿಕೆಟಿಗ – Kannada News | Bank Freezes Ex Cricketer Coutinho’s Account Post Wife’s Death

ಖ್ಯಾತ ಕ್ರೀಡಾ ಅಂಕಣಕಾರ ಹಾಗೂ ಕ್ರಿಕೆಟ್ ತರಬೇತುದಾರ ಆಸ್ಟಿನ್ ಕೌಟಿನ್ಹೋ ಅವರ ಜಂಟಿ ಬ್ಯಾಂಕ್ ಖಾತೆಯನ್ನು ಇಂಡಿಯನ್ ಬ್ಯಾಂಕ್ ನಿಯಮಬಾಹಿರವಾಗಿ ಫ್ರೀಝ್ (ಸ್ಥಗಿತ) ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ನಿಧನದ ನಂತರದ ಕಠಿಣ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಿಬ್ಬಂದಿಯ ಈ ಅಮಾನವೀಯ ಧೋರಣೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವಾ ನ್ಯೂನತೆಯ ವಿರುದ್ಧ ಕೌಟಿನ್ಹೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ದಿವಂಗತ ಪತ್ನಿಯ ಪಿಂಚಣಿ ಬಾಕಿ ಇದೆ ಎಂಬ ನೆಪವೊಡ್ಡಿ, ಮುಂಬೈನ ಚೆಂಬೂರು ಶಾಖೆಯ ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಇವರ ಜಂಟಿ ಉಳಿತಾಯ ಖಾತೆಯನ್ನು ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.

ರಾಜ್ಯ ಮತ್ತು ಐಪಿಎಲ್ ಮಟ್ಟದ ಯುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಹಾಗೂ ಉಚಿತ ಮಾರ್ಗದರ್ಶನ ನೀಡುವ ಉದಾತ್ತ ಉದ್ದೇಶಕ್ಕಾಗಿ ತಮಗೆ ಈ ಹಣದ ತುರ್ತು ಅಗತ್ಯವಿದೆ ಎಂದು ಕೌಟಿನ್ಹೋ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಹೊರತಾಗಿಯೂ ಒಬ್ಬ ಹಿರಿಯ ನಾಗರಿಕರನ್ನು ಬ್ಯಾಂಕ್ ನಡೆಸಿಕೊಂಡ ರೀತಿ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬ್ಯಾಂಕ್ ಪ್ರತಿಕ್ರಿಯೆ:

ಈ ವಿಷಯ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಚರ್ಚೆಯಾಗುತ್ತಿದ್ದಂತೆ, ಇಂಡಿಯನ್ ಬ್ಯಾಂಕ್ ಗ್ರಾಹಕರಿಗೆ ಆದ ಅನಾನುಕೂಲತೆಗೆ ಕ್ಷಮೆಯಾಚಿಸಿದೆ.

ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಂಪರ್ಕ ವಿವರಗಳನ್ನು ನೇರ ಸಂದೇಶದ (DM) ಮೂಲಕ ಕಳುಹಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ ಮತ್ತು ಗೌಪ್ಯತೆಯ ಕಾರಣಗಳಿಗಾಗಿ ಸಾರ್ವಜನಿಕ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ಆಸ್ಟಿನ್ ಕೌಟಿನ್ಹೋ ಅವರಲ್ಲಿ ಮನವಿ ಮಾಡಿದ್ದಾರೆ.

 ಸಾರ್ವಜನಿಕರ ಬೆಂಬಲ:

ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂಸದ ಕಾರ್ತಿ ಪಿ ಚಿದಂಬರಂ ಸೇರಿದಂತೆ ಹಲವು ಪ್ರಮುಖರು ಕೌಟಿನ್ಹೋ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ಸಾಮಾನ್ಯ ಜನರು ಬ್ಯಾಂಕಿಂಗ್ ಪ್ರಕ್ರಿಯೆಗಳಲ್ಲಿ ಎದುರಿಸುತ್ತಿರುವ ಕಠಿಣ ಸವಾಲುಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕಿಂಗ್ ನಿಯಮಗಳು: ಗ್ರಾಹಕರ ನಿಧನದ ನಂತರ ಏನಾಗುತ್ತೆ?

  • ಖಾತೆ ಫ್ರೀಝ್: ಸಾಮಾನ್ಯವಾಗಿ ಯಾವುದೇ ಗ್ರಾಹಕರು ಮೃತಪಟ್ಟಾಗ, ಅವರ ಖಾತೆಯ ಹಣದ ದುರುಪಯೋಗ ತಡೆಯಲು ಬ್ಯಾಂಕ್‌ಗಳು ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ.
  • ಜಂಟಿ ಖಾತೆ: ಒಂದು ವೇಳೆ ಅದು ‘ಐದರ್ ಆರ್ ಸರ್ವೈವರ್’ (Either or Survivor) ಜಂಟಿ ಖಾತೆಯಾಗಿದ್ದರೆ, ಜೀವಂತವಿರುವ ಸಂಗಾತಿಯು ಖಾತೆಯನ್ನು ಮುಂದುವರಿಸಬಹುದು. ಆದರೆ ಮೃತರ ಹೆಸರನ್ನು ತೆಗೆದುಹಾಕಬೇಕಾಗುತ್ತದೆ.
  • ಅಗತ್ಯ ದಾಖಲೆಗಳು: ಮೃತರ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ಕ್ಲೈಮ್ ಮಾಡಲು ಮರಣ ಪ್ರಮಾಣಪತ್ರ, ಉತ್ತರಾಧಿಕಾರಿಗಳ ಗುರುತಿನ ಚೀಟಿ ಮತ್ತು ನಿಗದಿತ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಆರ್​ಸಿಬಿ ನಿಯಮ ಏನು ಹೇಳುತ್ತೆ?

ಜಂಟಿ ಬ್ಯಾಂಕ್ ಖಾತೆದಾರರಲ್ಲಿ ಒಬ್ಬರು ಮರಣ ಹೊಂದಿದಾಗ ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅತ್ಯಂತ ಸ್ಪಷ್ಟ ಹಾಗೂ ಗ್ರಾಹಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.  ಆಸ್ಟಿನ್ ಕೌಟಿನ್ಹೋ ಅವರ ಪ್ರಕರಣದ ಹಿನ್ನೆಲೆಯಲ್ಲಿ ಆರ್‌ಬಿಐ ನಿಯಮಗಳು ಏನು ಹೇಳುತ್ತವೆ ಎಂಬ ವಿವರ ಇಲ್ಲಿದೆ…

  1. ಖಾತಾ ನಿಯಮ: ಜಂಟಿ ಖಾತೆಯು ‘ಐದರ್ ಆರ್ ಸರ್ವೈವರ್ರ್’ (Either or Survivor) ಅಥವಾ ‘ಫಾರ್ಮರ್ ಆರ್ ಸರ್ವೈವರ್’ ನಿಯಮದ ಅಡಿಯಲ್ಲಿದ್ದರೆ, ಒಬ್ಬ ಖಾತೆದಾರರು ಮೃತಪಟ್ಟ ತಕ್ಷಣ ಉಳಿದ ಖಾತೆದಾರನಿಗೆ ಆ ಖಾತೆಯನ್ನು ನಿರ್ವಹಿಸಲು ಬ್ಯಾಂಕ್‌ಗಳು ಅಬಾಧಿತ ಪ್ರವೇಶ (Unimpeded Access) ನೀಡಬೇಕು.
  2. ಖಾತೆ ಫ್ರೀಝ್ ಮಾಡುವಂತಿಲ್ಲ: ಆರ್‌ಬಿಐ ನಿಯಮಗಳ ಪ್ರಕಾರ, ಇಂತಹ ಜಂಟಿ ಖಾತೆಗಳನ್ನು ಬ್ಯಾಂಕ್‌ಗಳು ಅನಗತ್ಯವಾಗಿ ಫ್ರೀಝ್ (ಸ್ಥಗಿತ) ಮಾಡುವಂತಿಲ್ಲ. ಬದುಕುಳಿದಿರುವ ವ್ಯಕ್ತಿಗೆ ಹಣವನ್ನು ಹಿಂಪಡೆಯಲು ಪೂರ್ಣ ಹಕ್ಕಿರುತ್ತದೆ.
  3. ಸರಳ ಪ್ರಕ್ರಿಯೆ: ಮೃತರ ಖಾತೆಯಲ್ಲಿರುವ ಹಣವನ್ನು ಬದುಕುಳಿದಿರುವವರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಯಾವುದೇ ತಕರಾರು ಮಾಡುವಂತಿಲ್ಲ.

ಯಾವ ದಾಖಲೆಗಳು ಬೇಕಾಗಿಲ್ಲ?

ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಉತ್ತರಾಧಿಕಾರ ಪ್ರಮಾಣಪತ್ರ (Succession Certificate), ಇಚ್ಛಾಪತ್ರ (Probate of Will), ಅಥವಾ ಯಾವುದೇ ರೀತಿಯ ಬಾಂಡ್ ಅಥವಾ ಶ್ಯೂರಿಟಿಯನ್ನು ಕಡ್ಡಾಯವಾಗಿ ಕೇಳುವಂತಿಲ್ಲ.

ಯಾವ ದಾಖಲೆಗಳು ಸಾಕು?

ಕೇವಲ ಮರಣ ಪ್ರಮಾಣಪತ್ರ, ನಿಗದಿತ ಕ್ಲೈಮ್ ಫಾರ್ಮ್ ಮತ್ತು ಬದುಕುಳಿದಿರುವ ವ್ಯಕ್ತಿಯ ಅಧಿಕೃತ ಗುರುತಿನ ಚೀಟಿ (OVD/KYC) ಸಲ್ಲಿಸಿದರೆ ಸಾಕು. ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ 15 ದಿನಗಳ ಒಳಗಾಗಿ ಬ್ಯಾಂಕ್‌ಗಳು ಇಂತಹ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಬೇಕು.

ವಿನಾಕಾರಣ ಎರಡು ತಿಂಗಳ ಕಾಲ ಜಂಟಿ ಖಾತೆಯನ್ನು ಫ್ರೀಜ್ ಮಾಡುವುದು ಮತ್ತು ಹಿರಿಯ ನಾಗರಿಕರಿಗೆ ತೊಂದರೆ ಕೊಡುವುದು ಆರ್‌ಬಿಐನ ‘ಗ್ರಾಹಕ ಸೇವಾ ನೀತಿ’ಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಗ್ರಾಹಕರು ಏನು ಮಾಡಬಹುದು?

ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಹಕರು ಈ ಕೆಳಗಿನ ಕ್ರಮ ಕೈಗೊಳ್ಳಬಹುದು…

  • ಲಿಖಿತ ದೂರು: ಮೊದಲು ಬ್ಯಾಂಕಿನ ವ್ಯವಸ್ಥಾಪಕರಿಗೆ (ಬ್ಯಾಕ್ ಮ್ಯಾನೇಜರ್) ಆರ್‌ಬಿಐ ನಿಯಮಾವಳಿಗಳನ್ನು ಉಲ್ಲೇಖಿಸಿ ಲಿಖಿತ ದೂರು ನೀಡಬೇಕು.
  • ಬ್ಯಾಂಕಿಂಗ್ ಒಂಬುಡ್ಸ್‌ಮನ್: ಬ್ಯಾಂಕ್ 30 ದಿನಗಳ ಒಳಗಾಗಿ ಸೂಕ್ತ ಪರಿಹಾರ ನೀಡದಿದ್ದರೆ, ಗ್ರಾಹಕರು ನೇರವಾಗಿ ಆರ್‌ಬಿಐ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು.

ಇದನ್ನೂ ಓದಿ: RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರ ಆರ್ಥಿಕ ಹಿತರಕ್ಷಣೆಗೆ ಆರ್‌ಬಿಐ ಅತ್ಯಂತ ಸ್ಪಷ್ಟ ಮತ್ತು ಜನಸ್ನೇಹಿ ನಿಯಮಗಳನ್ನು ರೂಪಿಸಿದೆ. ಆದರೆ ತಳಮಟ್ಟದ ಬ್ಯಾಂಕ್ ಶಾಖೆಗಳು ಈ ನಿಯಮಗಳನ್ನು ಗಾಳಿಗೆ ತೂರಿ, ಜಂಟಿ ಖಾತೆಗಳನ್ನು ಅನಗತ್ಯವಾಗಿ ಫ್ರೀಝ್ ಮಾಡುವ ಮೂಲಕ ಗ್ರಾಹಕರಿಗೆ ಮಾನಸಿಕ ಹಾಗೂ ಆರ್ಥಿಕ ಕಿರುಕುಳ ನೀಡುತ್ತಿರುವುದು ಖಂಡನೀಯ. ಇಂತಹ ಸನ್ನಿವೇಶಗಳಲ್ಲಿ ಗ್ರಾಹಕರು ಬ್ಯಾಂಕುಗಳ ವಿಳಂಬ ನೀತಿಗೆ ಮಣಿಯದೆ, ಆರ್‌ಬಿಐ ಒಂಬುಡ್ಸ್‌ಮನ್ ವೇದಿಕೆಯನ್ನು ಬಳಸಿಕೊಂಡು ದಂಡದ ಸಹಿತ ಪರಿಹಾರ ಪಡೆಯಲು ಮುಂದಾಗಬೇಕು. ಬ್ಯಾಂಕಿಂಗ್ ವ್ಯವಸ್ಥೆಯು ಕೇವಲ ಲಾಭದ ಕೇಂದ್ರವಾಗದೆ, ಸಾರ್ವಜನಿಕರ ನಂಬಿಕೆಗೆ ಅರ್ಹವಾದ ಮತ್ತು ಮಾನವೀಯತೆಯುಳ್ಳ ಸೇವೆಯನ್ನು ಒದಗಿಸಿದಾಗ ಮಾತ್ರ ಇಂತಹ ವ್ಯವಸ್ಥಿತ ದೋಷಗಳಿಗೆ ಶಾಶ್ವತ ಮುಕ್ತಿ ಸಿಗಲು ಸಾಧ್ಯ.

Source link

ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೂನ್‌ನಿಂದ ಓಡಲಿದೆ ಸೂಪರ್ ಫಾಸ್ಟ್ ರೈಲು; ಬೆಳಗಾವಿ, ಹುಬ್ಬಳ್ಳಿ ಜನರಿಗೂ ಲಾಭ!

ಬೆಂಗಳೂರು, ಮೇ.14 : ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ವಾಣಿಜ್ಯ ನಗರಿ ಮುಂಬೈ ನಡುವೆ ವೇಗದ ರೈಲು ಸಂಪರ್ಕ ಕಲ್ಪಿಸುವ ದಶಕಗಳ ಬೇಡಿಕೆ ಈಗ ಈಡೇರುವ ಸಮಯ ಬಂದಿದೆ. ಈ ವರ್ಷದ ಜೂನ್ ಅಂತ್ಯದೊಳಗೆ ಈ ಮಾರ್ಗದಲ್ಲಿ ಹೊಸ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಪ್ರಲ್ಹಾದ್ ಜೋಶಿ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ, ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಸಚಿವರು ಹಸಿರು ನಿಶಾನೆ ತೋರಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ ಇದರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಸಂಚರಿಸುವ ಪ್ರಮುಖ ನಗರಗಳು:

ಈ ಹೊಸ ರೈಲು ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಈ ಭಾಗದ ಪ್ರಯಾಣಿಕರಿಗೆ ಮುಂಬೈ ತಲುಪಲು ಸುಲಭವಾಗಲಿದೆ. ಪ್ರಮುಖ ನಿಲ್ದಾಣಗಳು ಇಲ್ಲಿವೆ:

ತುಮಕೂರು

ದಾವಣಗೆರೆ

ಹಾವೇರಿ

ಹುಬ್ಬಳ್ಳಿ-ಧಾರವಾಡ

ಬೆಳಗಾವಿ

ಇದನ್ನೂ ಓದಿ: ಇಂದಿನ ಹವಾಮಾನ ವರದಿ: ವರುಣನ ಆಗಮನಕ್ಕೆ ಸಜ್ಜಾದ ಬೆಂಗಳೂರು; ನಿಮ್ಮ ಜಿಲ್ಲೆಯ ಸ್ಥಿತಿ ಹೇಗಿದೆ ನೋಡಿ!

ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಅಥವಾ ವಿಮಾನ ಯಾನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಈ ಸೂಪರ್ ಫಾಸ್ಟ್ ರೈಲು ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದ್ದು, ಭವಿಷ್ಯದಲ್ಲಿ ಇದನ್ನು ‘ವಂದೇ ಭಾರತ್ ಸ್ಲೀಪರ್’ ರೈಲನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ ಎಂದು ಜೋಶಿ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನನ್ನು 25 ಬಾರಿ ಬೆತ್ತಲು ಮಾಡಿದರು, ಖಾಸಗಿ ಭಾಗ ಎತ್ತಿ ನೋಡಿದರು; ನಟಿ ಕಣ್ಣೀರು – Kannada News | Sandeepa Virk Exposes Jail Horror: 25 Nude Inspections and Humiliation of Women

ನಟಿ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸಂದೀಪಾ ವಿರ್ಕ್ ಪ್ರಸ್ತುತ ತಮ್ಮ ವೃತ್ತಿಜೀವನಕ್ಕಿಂತ ವೈಯಕ್ತಿಕ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ . 6 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂತು. ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ನಾಲ್ಕು ತಿಂಗಳುಗಳನ್ನು ಕಳೆಯಬೇಕಾಯಿತು. ಈಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಹೊರಬಂದ ನಂತರ, ಅವರು ಜೈಲಿನಲ್ಲಿ ತಮ್ಮ ನೋವಿನ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ತುಂಬಾ ಆಘಾತಕಾರಿ ವಿಷಯಗಳನ್ನು ಹೇಳಿದ್ದಾರೆ.

ಸಂದೀಪಾ ವಿರ್ಕ್ ತುಂಬಾ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಈ ವಿಷಯಗಳನ್ನು ಪಾಡ್‌ಕ್ಯಾಸ್ಟ್‌ನಲ್ಲಿ ವಿವರಿಸಿದ್ದಾರೆ. ‘ಜೈಲಿನಲ್ಲಿ ನನ್ನನ್ನು ಪದೇ ಪದೇ ಬೆತ್ತಲೆಗೊಳಿಸಲಾಯಿತು. ನ್ಯಾಯಾಲಯಕ್ಕೆ ಹಾಜರಾದ ನಂತರ, ಬಸ್ ಹತ್ತುವ ಮೊದಲು ಎಲ್ಲರ ಮುಂದೆ ಒಮ್ಮೆ ನನ್ನನ್ನು ಬೆತ್ತಲೆಗೊಳಿಸಲಾಗುತ್ತದೆ. ಯೋಚಿಸಿ. ನನ್ನನ್ನು ಮೂರು ಬಾರಿ ಬೆತ್ತಲೆಗೊಳಿಸಲಾಯಿತು. ಜನರು ನಾನು ಜೈಲಿಗೆ ಮಾತ್ರ ಹೋಗಿದ್ದೇನೆ ಎಂದು ಭಾವಿಸುತ್ತಾರೆ. ಆದರೆ ಹಾಗಲ್ಲ. ಅದರ ನಂತರ ಏನಾಯಿತು ಎಂದು ನನಗೆ ತಿಳಿದಿದೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ತಪಾಸಣೆಯ ಹೆಸರಿನಲ್ಲಿ ನನ್ನನ್ನು 25-30 ಬಾರಿ ಬೆತ್ತಲೆಗೊಳಿಸಲಾಗಿದೆ’ ಎಂದು ಹೇಳುತ್ತಾ, ಸಂದೀಪಾ ಕಣ್ಣೀರು ಹಾಕಿದರು.

‘ಜೈಲಿಗೆ ಹೋಗುವ ಪ್ರಕ್ರಿಯೆಯು ಎಷ್ಟು ಭಯಾನಕ ಮತ್ತು ಅವಮಾನಕರವಾಗಿರುತ್ತದೆಯೆಂದರೆ, ಒಬ್ಬ ವ್ಯಕ್ತಿಯು ತನ್ನನ್ನು ತಾನು ಮರೆತುಬಿಡುತ್ತಾನೆ. ನಮ್ಮ ಸಮಾಜ ಮತ್ತು ವ್ಯವಸ್ಥೆಯಲ್ಲಿರುವ ದೊಡ್ಡ ನ್ಯೂನತೆಯೆಂದರೆ, ನೀವು ತಪ್ಪಿತಸ್ಥರೆಂದು ಸಾಬೀತಾಗುವ ಮೊದಲೇ ನಿಮ್ಮನ್ನು ಆರೋಪಿ ಎಂದು ಪರಿಗಣಿಸಲಾಗುತ್ತದೆ. ಜೈಲಿಗೆ ಪ್ರವೇಶಿಸುವ ಸಮಯದಲ್ಲಿ ನಡೆಯುವ ತಪಾಸಣೆ ಮಹಿಳೆಯ ಸ್ವಾಭಿಮಾನವನ್ನು ನಾಶಪಡಿಸುತ್ತದೆ. ಸ್ತನಗಳನ್ನು ಮೇಲಕ್ಕೆತ್ತಿ ಎಲ್ಲಾ ಕಡೆಯಿಂದ ಪರಿಶೀಲಿಸಲಾಗುತ್ತದೆ’ ಎಂದು ಅವರು ಹೇಳಿದರು.

‘ಜೈಲಿನಲ್ಲಿ ಭದ್ರತೆಗಾಗಿ ನಿಯೋಜಿಸಲಾದ ಮಹಿಳಾ ಭದ್ರತಾ ಸಿಬ್ಬಂದಿಗಳು ತುಂಬಾ ಕೆಟ್ಟವರಾಗಿದ್ದಾರೆ. ಜೈಲಿನಲ್ಲಿ ಮಹಿಳೆಯರ ತಪಾಸಣೆ ತುಂಬಾ ನಾಚಿಕೆಗೇಡಿನ ಸಂಗತಿ. ಸ್ತನ ಗಾತ್ರ ದೊಡ್ಡದಾಗಿರುವ ಮಹಿಳೆಯರ ಸ್ತನಗಳನ್ನು ಎತ್ತಿ ಪರಿಶೀಲಿಸಲಾಗುತ್ತದೆ. ಅವರ ಅಡಿಯಲ್ಲಿ ಏನಾದರೂ ಅಡಗಿದೆಯೇ ಎಂದು ಪರಿಶೀಲಿಸಲು ಇದನ್ನು ಮಾಡಲಾಗುತ್ತದೆ. ಇದೆಲ್ಲವೂ ಅಸಹ್ಯಕರ ಮತ್ತು ಅಸಂವೇದನಾಶೀಲವಾಗಿದೆ’ ಎಂದು ಅವರು ಹೇಳಿದರು.

‘ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಹಿಳಾ ಭದ್ರತಾ ಸಿಬ್ಬಂದಿ ಒಮ್ಮೆ ತಪಾಸಣೆ ಮಾಡಿದ ಮೇಲೆಯೂ ಇದು ಮುಗಿಯುವುದಿಲ್ಲ. ಬೇರೆ ಬೇರೆ ಕರ್ತವ್ಯದ ಭದ್ರತಾ ಸಿಬ್ಬಂದಿಯ ಮುಂದೆ ನೀವು ಪದೇ ಪದೇ ಬೆತ್ತಲೆಯಾಗಬೇಕಾಗುತ್ತದೆ. ನ್ಯಾಯಾಲಯದಿಂದ ಜೈಲಿಗೆ ಬಂದಾಗಲೂ ಮತ್ತೊಮ್ಮೆ ವಿವಸ್ತ್ರಗೊಳಿಸಿ ತಪಾಸಣೆ ಮಾಡುತ್ತಾರೆ. ಹೀಗೆ ದಿನಕ್ಕೆ ಮೂರು ಬಾರಿ ಬೆತ್ತಲೆಯಾಗಬೇಕಾದ ಪರಿಸ್ಥಿತಿ ಇರುತ್ತದೆ. ಇಷ್ಟೇ ಅಲ್ಲದೆ, ಮಹಿಳಾ ಅಪರಾಧಿಗಳನ್ನು ಟಾರ್ಚ್ ಬೆಳಕಿನ ಮೂಲಕವೂ ತಪಾಸಣೆ ಮಾಡಲಾಗುತ್ತದೆ’ ಎಂದು ಅವರು ನೋವಿನಿಂದ ಹೇಳಿದರು.

ಇದನ್ನೂ ಓದಿ: ‘ನಾನು ಸಾವಿಗಾಗಿ ಕೋರಿದೆ’; ಡಾರ್ಲಿಂಗ್ ಕೃಷ್ಣ ಸಿನಿಮಾ ನಟಿಯ ತಿಹಾರ್ ಜೈಲು ಅನುಭವ

ಸಂದೀಪಾ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಪಂಜಾಬಿ ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಕಾಸ್ಟಿಂಗ್ ಕೌಚ್ ಎದುರಿಸಬೇಕಾಗಿ ಬಂದ ಕಾರಣ ಅವರು ಚಿತ್ರೀಕರಣದ ಸಮಯದಲ್ಲಿ ಅನೇಕ ಚಿತ್ರಗಳನ್ನು ತೊರೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 510 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 14: ನಿನ್ನೆ ಚಿನ್ನ, ಬೆಳ್ಳಿ ಮೇಲೆ ಕೇಂದ್ರದ ಆಮದು ಸುಂಕ ಏರಿಕೆಯಿಂದ ಶೇ. 6ರಿಂದ 8ರಷ್ಟು ಬೆಲೆ ಹೆಚ್ಚಳ ಆಗಿತ್ತು. ಅದರ ಬೆನ್ನಲ್ಲೇ ಇವೆರಡು ಲೋಹಗಳ ಬೆಲೆ ಸುಮಾರಉ 300-400 ರೂನಷ್ಟು ಇಳಿಕೆ ಆಗಿದೆ. ಹೂಡಿಕೆದಾರರು ಲಾಭಕ್ಕಾಗಿ ಚಿನ್ನ (Gold) ಮಾರಿರುವುದು ಇದಕ್ಕೆ ಕಾರಣವಿರಬಹುದು. ಎಂಸಿಎಕ್ಸ್​ನಲ್ಲಿ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯೂ 10 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,62,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 30,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 32,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,233 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,880 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,789 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,880 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,880 ರೂ
  • ಚೆನ್ನೈ: 15,001 ರೂ
  • ಮುಂಬೈ: 14,880 ರೂ
  • ದೆಹಲಿ: 14,895 ರೂ
  • ಕೋಲ್ಕತಾ: 14,880 ರೂ
  • ಕೇರಳ: 14,880 ರೂ
  • ಅಹ್ಮದಾಬಾದ್: 14,885 ರೂ
  • ಜೈಪುರ್: 14,895 ರೂ
  • ಲಕ್ನೋ: 14,895 ರೂ
  • ಭುವನೇಶ್ವರ್: 14,880 ರೂ

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,866 ರುಪಾಯಿ)
  • ದುಬೈ: 522 ಡಿರಾಮ್ (13,612 ರುಪಾಯಿ)
  • ಅಮೆರಿಕ: 146.50 ಡಾಲರ್ (14,033 ರುಪಾಯಿ)
  • ಸಿಂಗಾಪುರ: 186.10 ಸಿಂಗಾಪುರ್ ಡಾಲರ್ (14,004 ರುಪಾಯಿ)
  • ಕತಾರ್: 520 ಕತಾರಿ ರಿಯಾಲ್ (13,665 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,557 ರುಪಾಯಿ)
  • ಓಮನ್: 55.50 ಒಮಾನಿ ರಿಯಾಲ್ (13,809 ರುಪಾಯಿ)
  • ಕುವೇತ್: 43 ಕುವೇತಿ ದಿನಾರ್ (13,446 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 300 ರೂ
  • ಚೆನ್ನೈ: 320 ರೂ
  • ಮುಂಬೈ: 300 ರೂ
  • ದೆಹಲಿ: 300 ರೂ
  • ಕೋಲ್ಕತಾ: 300 ರೂ
  • ಕೇರಳ: 320 ರೂ
  • ಅಹ್ಮದಾಬಾದ್: 300 ರೂ
  • ಜೈಪುರ್: 300 ರೂ
  • ಲಕ್ನೋ: 300 ರೂ
  • ಭುವನೇಶ್ವರ್: 320 ರೂ
  • ಪುಣೆ: 300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:09 am, Thu, 14 May 26

Source link

ಕಾಡಿನ ರಾಜ ‘ಸಿಂಹ’ ಕಣ್ರೋ… KKR ಟ್ರೋಲ್​ಗೆ RCB ತಿರುಗೇಟು! – Kannada News | Ipl 2026: rcb reply back to kkrs troll

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ರೈವಲ್ರಿ ಅತ್ಯಂತ ರೋಚಕವಾದದ್ದು. ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಈ ಎರಡು ತಂಡಗಳ ಅಭಿಮಾನಿಗಳು ಹಾಗೂ ಫ್ರಾಂಚೈಸಿಗಳ ನಡುವೆ ಸದಾ ಯುದ್ಧ ನಡೆಯುತ್ತಲೇ ಇರುತ್ತದೆ. ಅದು ಈ ಬಾರಿ ಕೂಡ ನಡೆದಿದೆ. ಐಪಿಎಲ್​ನ 57ನೇ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವು ಆರ್‌ಸಿಬಿಯನ್ನು ಕಾಲೆಳೆಯಲು ಹೈ-ಬಜೆಟ್ ‘ಫಾರೆಸ್ಟ್ ಕಿಂಗ್’ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು.

ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು  ಕೆಕೆಆರ್ ಸ್ಪಷ್ಟ ಸಂದೇಶ ನೀಡಿದ್ದರು. ಇಲ್ಲಿ ಹುಲಿಯನ್ನು ರೂಪಕವಾಗಿ ಬಳಸಿಕೊಂಡಿದ್ದು ಬೆಂಗಾಲ್ ಟೈಗರ್ಸ್​ (ಕೆಕೆಆರ್) ಎಂಬುದಾಗಿ. ಇನ್ನು ಕಾಡಿನ ನಿಜವಾದ ರಾಜ ಹುಲಿ ಎನ್ನಲು ಮುಖ್ಯ ಕಾರಣ ಆರ್​ಸಿಬಿ ಸಿಂಬಲ್ ಸಿಂಹ ಆಗಿರುವುದು.

ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್​ಸಿಬಿಯ ಹೀನಾಯ ದಾಖಲೆಯನ್ನು ಹೀಯಾಳಿಸಿದ್ದರು. ಇನ್ನು ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್​ಗೇರುತ್ತೇವೆ ಎಂದು ಪರೋಕ್ಷವಾಗಿ ಆರ್​ಸಿಬಿಗೆ ಸವಾಲು ಹಾಕಿದ್ದರು.

ಆದರೆ ಈ “ಮಾತಿಗೆ ಮಾತಿಗಿಂತ, ಬ್ಯಾಟಿನ ಸೌಂಡೇ ಸೂಕ್ತ ಉತ್ತರ” ಎಂಬಂತೆ, ಆರ್‌ಸಿಬಿಯ ಅಸಲಿ ‘ಕಿಂಗ್’ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸಿ ಕೆಕೆಆರ್ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ 193 ರನ್​ಗಳ ಗುರಿಯನ್ನು ಆರ್​ಸಿಬಿ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇತ್ತ ಪಂದ್ಯ ಮುಗಿಯುತ್ತಿದ್ದಂತೆ ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್‌ಗೆ ‘ಕರ್ಮ’ದ ಪಾಠ ಕಲಿಸಿದ್ದಾರೆ. “ಕೆಕೆಆರ್ ಮೀಡಿಯಾ ತಂಡ ಪ್ರೋಮೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಆರ್‌ಸಿಬಿ ಪಂದ್ಯ ಗೆಲ್ಲುವುದರಲ್ಲಿ ಬ್ಯುಸಿಯಾಗಿದೆ” ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್​ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಕಾಲೆಳೆದಿದ್ದಾರೆ.

ಇದರ ಜೊತೆಗೆ  “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್​ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.

ಒಟ್ಟಿನಲ್ಲಿ ಉಭಯ ತಂಡಗಳ ಪಂದ್ಯಗಳ ಮನರಂಜನೆಯ ಜೊತೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೋಷಿಯಲ್ ಮೀಡಿಯಾ ಫೈಟ್ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮೈದಾನದ ಒಳಗಿನ ರೋಚಕ ಸಿಕ್ಸರ್-ಬೌಂಡರಿಗಳು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಈ ಡಿಜಿಟಲ್ ಜಿದ್ದಾಜಿದ್ದಿ ಐಪಿಎಲ್ ಕ್ರಿಕೆಟ್ ಹಬ್ಬದ ಮಜಾವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗಲಾರದು.

Published On – 10:38 am, Thu, 14 May 26

Source link

‘ಒಮ್ಮೆ ಜೋರಾಗಿ ಉಸಿರು ತೆಗೆದರು’; ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ – Kannada News | Auto Driver Explain The Last moment of Dileep Raj

ನಟ ದಿಲೀಪ್ ರಾಜ್ ಅವರ ಅಂತಿಮ ಕ್ಷಣಗಳ ಬಗ್ಗೆ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ. ದಿಲೀಪ್ ಅವರು ಮನೆಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿದ್ದರು. ದೇವೇಂದ್ರ ಮತ್ತು ಮನೆಯ ಸೆಕ್ಯೂರಿಟಿ ಸೇರಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡರು. ಬೆಂಗಳೂರು ಆರ್​​​ಆರ್​​ ನಗರದ ಆರ್ಚ್​​​ ಬಳಿ ಬರುವಾಗ ದಿಲೀಪ್ ರಾಜ್ ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡಂರಂತೆ. ಆಗಲೇ ಉಸಿರು ಹೋಗಿತ್ತು ಎಂಬ ಅನುಮಾನ ಆಟೋ ಚಾಲಕನದ್ದು. ಅವರು ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲಿವುಡ್ ಸೂಪರ್ ಸ್ಟಾರ್​ ಸಿನಿಮಾ ನಿರ್ದೇಶಿಸಲಿರುವ ತೆಲುಗು ನಿರ್ದೇಶಕ – Kannada News | Indian origin director Aneesh Chaganty to direct Tom Cruise’s next movie

ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್​​ಗೆ (Hollywood) ಪದಾರ್ಪಣೆ ಮಾಡಿ, ಅಲ್ಲಿನ ಸ್ಟಾರ್ ನಟ-ನಟಿಯರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ಅಮಿತಾಬ್ ಬಚ್ಚನ್, ಧನುಶ್ ಇನ್ನೂ ಕೆಲವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ನಿರ್ದೇಶಕರು ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಿಲ್ಲ. ಭಾರತೀಯ ಮೂಲದ ಕೆಲವೇ ಕೆಲವು ಸಿನಿಮಾ ನಿರ್ದೇಶಕರುಗಳು ಹಾಲಿವುಡ್​​ನಲ್ಲಿದ್ದಾರೆ. ಇದೀಗ ಭಾರತೀಯ ಮೂಲದ ನಿರ್ದೇಶಕರೊಬ್ಬರು ಹಾಲಿವುಡ್​ನ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ.

‘ಮಿಷನ್ ಇಂಪಾಸಿಬಲ್’, ‘ಟಾಪ್ ಗನ್’ ಸೇರಿದಂತೆ ಹಲವು ವಿಶ್ವಿ ವಿಖ್ಯಾತ ಆಕ್ಷನ್ ಸಿನಿಮಾ ಸರಣಿಗಳಲ್ಲಿ ನಟಿಸಿರುವ ಟಾಮ್ ಕ್ರೂಸ್, ವಿಶ್ವದ ಟಾಪ್ ನಟರಲ್ಲಿ ಪ್ರಮುಖರು. ವಿಶ್ವದಲ್ಲಿ ಅತಿ ಹೆಚ್ಚು ಪರಿಚಿತ ನಟ ಸಹ ಹೌದು. ಇದೀಗ ಟಾಮ್ ಕ್ರೂಸ್ ಅವರು ‘ಡೂಪ್ಲಾಂಗರ್’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಭಾರತೀಯ ಮೂಲದ ನಿರ್ದೇಶಕ. ಅದೂ ತೆಲುಗು ಮೂಲದ ನಿರ್ದೇಶಕ ಎಂಬುದು ಮತ್ತಷ್ಟು ವಿಶೇಷ. ತೆಲುಗು ಮೂಲದ ಅನೀಶ್ ಚಗಂಟಿ ಅವರು ಟಾಮ್ ಕ್ರೂಸ್ ಅವರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ. ಅನೀಶ್ ನಿರ್ದೇಶಿಸಲಿರುವ ಈ ಸಿನಿಮಾ ಸಸ್ಪನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಕತೆಯನ್ನೂ ಸಹ ಒಳಗೊಂಡಿದ್ದು, ಟಾಮ್ ಕ್ರೂಸ್ ಸಹ ಆಸಕ್ತಿ ವ್ಯಕ್ತಪಡಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಹಾಲಿವುಡ್ ಮಂದಿಯ ಎದುರು ಹೇಗೆ ಮಾತಾಡಿದ್ರು ನೋಡಿ ಯಶ್

ಅನೀಶ್ ಅವರ ಪೋಷಕರು ಅವಿಭಜಿತ ಆಂಧ್ರ ಪ್ರದೇಶದವರು. 1980 ರಲ್ಲಿ ಅವರು ಅಮೆರಿಕಕ್ಕೆ ವಲಸೆ ಹೋದರು. ಅನೀಶ್ ಚಗಂಟಿಗೆ ಆರಂಭದಿಂದಲೂ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇತ್ತು. ಅವರು ಹಲವಾರು ಶಾರ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ನಿರ್ಮಾಣ ಸಹ ಮಾಡಿದ್ದಾರೆ. ಅವುಗಳಲ್ಲಿ ಹಲವು ಶಾರ್ಟ್ ಸಿನಿಮಾಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಸಹ ಲಭಿಸಿವೆ.

2018 ರಲ್ಲಿ ಬಿಡುಗಡೆ ಆದ ‘ಸರ್ಚಿಂಗ್’ ಅನೀಶ್ ಅವರ ಮೊದಲ ಸಿನಿಮಾ. ತಂದೆಯೊಬ್ಬ ಕಾಣೆಯಾದ ಮಗಳನ್ನು ಕೇವಲ ಮೊಬೈಲ್, ಇಂಟರ್ನೆಟ್, ಸೋಷಿಯಲ್ ಮೀಡಿಯಾ ಬಳಸಿ ಹುಡುಕುವ ಕತೆಯನ್ನು ಆ ಸಿನಿಮಾ ಒಳಗೊಂಡಿದ್ದು, ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಒಟಿಟಿಯಲ್ಲಿ ಈಗಲೂ ಸಹ ದೊಡ್ಡ ಸಂಖ್ಯೆಯ ವೀಕ್ಷಕರು ಆ ಸಿನಿಮಾಕ್ಕೆ ಇದ್ದಾರೆ. ಆ ಬಳಿಕ ‘ರನ್’ ಹೆಸರಿನ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ಅನೀಶ್ ನಿರ್ದೇಶಿಸಿದ್ದರು. 2023 ರಲ್ಲಿ ‘ಮಿಸ್ಸಿಂಗ್’ ಹೆಸರಿನ ಸಿನಿಮಾವನ್ನು ಅನೀಶ್ ನಿರ್ದೇಶಿಸಿದರು. ಇದೂ ಸಹ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link