ಪಹಲ್ಗಾಮ್ ದಾಳಿಗೆ ವರ್ಷ: ಭಯೋತ್ಪಾದನೆಗೆ ಭಾರತ ತಲೆಬಾಗದು, ಹುತಾತ್ಮರಿಗೆ ಪ್ರಧಾನಿ ಮೋದಿ ಭಾವಪೂರ್ಣ ಶ್ರದ್ಧಾಂಜಲಿ – Kannada News | PM Modi Pays Tribute to Pahalgam Victims, Assures They Won’t Be Forgotten

ನವದೆಹಲಿ, ಏಪ್ರಿಲ್ 22: ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲಿಯಾದ ಮುಗ್ಧ ಜೀವಗಳನ್ನು ಸ್ಮರಿಸಿದ್ದಾರೆ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪ್ರಧಾನಿ, ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಅಪಾರ ನಷ್ಟವನ್ನು ನಿಭಾಯಿಸುತ್ತಿರುವ ದುಃಖಿತ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ ಎಂದು ಬರೆದಿದ್ದಾರೆ.

ದಾಳಿಯ ನೆನಪಿನೊಂದಿಗೆ, ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ, ಒಂದು ರಾಷ್ಟ್ರವಾಗಿ, ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ, ಎಂದು ಅವರು ಘೋಷಿಸಿದ್ದಾರೆ.

ಭಯೋತ್ಪಾದಕರ ಯಾವುದೇ ಹೇಯ ಯೋಜನೆಗಳು ಭಾರತದ ಏಕತೆ ಮತ್ತು ಶಾಂತಿಯನ್ನು ಕದಡಲು ಯಶಸ್ವಿಯಾಗುವುದಿಲ್ಲ ಎಂಬ ಭರವಸೆಯನ್ನು ಅವರು ದೇಶದ ಜನತೆಗೆ ನೀಡಿದ್ದಾರೆ. ದಾಳಿಯ ನಂತರ ಭಾರತವು ಕೈಗೊಂಡಿದ್ದ ‘ಆಪರೇಷನ್ ಸಿಂಧೂರ್’ ಮತ್ತು ಅದರ ಮೂಲಕ ಭಯೋತ್ಪಾದಕ ನೆಲೆಗಳನ್ನು ಧೂಳೀಪಟ ಮಾಡಿದ್ದನ್ನು ಈ ಸಂದರ್ಭದಲ್ಲಿ ದೇಶದಾದ್ಯಂತ ಸ್ಮರಿಸಲಾಗುತ್ತಿದೆ. ಪ್ರಧಾನಿಯವರ ಈ ಇಂದಿನ ಹೇಳಿಕೆಯು, ಭದ್ರತಾ ವಿಚಾರದಲ್ಲಿ ಭಾರತ ಹೊಂದಿರುವ ‘ಜೀರೋ ಟಾಲರೆನ್ಸ್’ (Zero Tolerance) ನೀತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

ಮತ್ತಷ್ಟು ಓದಿ: ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ

ಪ್ರಧಾನಿ ಮೋದಿ ಅವರ ಈ ಮಾತುಗಳು ಕೇವಲ ಸಾಂತ್ವನವಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಶಪಥವಾಗಿದೆ. ಪಹಲ್ಗಾಮ್‌ನ ಗಾಯಗಳು ಇನ್ನೂ ಹಸಿಯಾಗಿದ್ದರೂ, ಭಾರತದ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಬೆಟ್ಟದಂತೆ ಅಚಲವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭೂಗತ ಲೋಕದ ನಂಟಿನಿಂದ ಭಯಬಿದ್ದಿದ್ದ ‘ಗಲಾಟೆ ಅಳಿಯಂದ್ರು’ ನಟಿ; ಬಾಲಿವುಡ್ ಶಾಶ್ವತಾಗಿ ತೊರೆದರು – Kannada News | Galate Aliyandru Actress Sakshi Shivanand Quit Bollywood Fearing Underworld Nexus

90 ರ ದಶಕದಲ್ಲಿ, ಬಾಲಿವುಡ್ ಭೂಗತ ಜಗತ್ತಿನೊಂದಿಗಿನ ಸಂಪರ್ಕ ಹೊಂದಿತ್ತು. ಆ ಸಮಯದಲ್ಲಿ, ಭೂಗತ ಜಗತ್ತಿನವರು ನಿರ್ಮಾಪಕರು, ನಟರು ಮತ್ತು ಫೈನಾನ್ಸರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ನಿರಂತರ ವರದಿಗಳು ಬರುತ್ತಿದ್ದವು. ಕೆಲವು ನಟಿಯರು ಡಾನ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಈ ಸಮಯದಲ್ಲಿ, ಉದಯೋನ್ಮುಖ ನಟಿಯ ವೃತ್ತಿಜೀವನ ನಾಶವಾಯಿತು ಮತ್ತು ಅವರು ಎಲ್ಲವನ್ನೂ ಬಿಟ್ಟು ಹೋಗಬೇಕಾಯಿತು.

ನಾವು ಮಾತನಾಡುತ್ತಿರುವ ನಟಿ ಸಾಕ್ಷಿ ಶಿವಾನಂದ್. ಅವರು 1993 ರಲ್ಲಿ ತೆಲುಗು ಚಿತ್ರ ‘ಅನ್ನಾ ವದಿನಾ’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಶಿವರಾಜ್​ಕುಮಾರ್ ನಟನೆಯ ‘ಗಲಾಟೆ ಅಳಿಯಂದ್ರು’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ‘ನಾನು ನಾನೇ’, ‘ಸೈನಿಕ’, ಕೋದಂಡ ರಾಮ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ಅವರು ಕನ್ನಡದಲ್ಲಿ ‘ಸೌಂದರ್ಯ’ ಹೆಸರಿನ ಸಿನಿಮಾ ಮಾಡಿದರು. ಅವರಿಗೆ ನಿಜವಾದ ಖ್ಯಾತಿ ಸಿಕ್ಕಿದ್ದು ತಮಿಳು ಮತ್ತು ತೆಲುಗು ಚಿತ್ರಗಳಿಂದ. ಸಾಕ್ಷಿ ಮಲಯಾಳಂ ಸೂಪರ್‌ಸ್ಟಾರ್‌ಗಳಾದ ಮಮ್ಮುಟ್ಟಿ ಮತ್ತು ಚಿರಂಜೀವಿಯಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದರು.

ಸಾಕ್ಷಿ 2000 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಗೋವಿಂದ ಅವರೊಂದಿಗೆ ಕೆಲಸ ಮಾಡಿದರು ಮತ್ತು ಹಿಂದಿ ಚಿತ್ರರಂಗದಲ್ಲಿ ಅವರ ಜನಪ್ರಿಯತೆ ಹೆಚ್ಚಾಗಲು ಪ್ರಾರಂಭಿಸಿತು. ಆದರೆ ಅವರ ಜನಪ್ರಿಯತೆ ಹೆಚ್ಚಾದಂತೆ, ಅವರಿಗೆ ಭೂಗತ ಲೋಕದಿಂದ ಕರೆಗಳು ಬರಲು ಪ್ರಾರಂಭಿಸಿದವು.

ಸಾಕ್ಷಿ ಅವರು ನಟಿಸಿದ ‘ತುಮ್’ ಚಿತ್ರದ ನಿರ್ಮಾಪಕರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಕೊಂಡರು. ಸಂದರ್ಶನವೊಂದರಲ್ಲಿ ಅವರು, ‘ಚಿತ್ರದ ನಿರ್ಮಾಪಕರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದಾಗ, ನಾನು ತುಂಬಾ ಭಯಭೀತನಾಗಿದ್ದೆ. ನಾನು ಸಂಪೂರ್ಣವಾಗಿ ನಡುಗಿದೆ. ಬಾಲಿವುಡ್‌ನಲ್ಲಿ ಭೂಗತ ಜಗತ್ತು ತುಂಬಾ ಆಳವಾಗಿ ಬೇರೂರಿದೆ ಎಂದು ಎಲ್ಲರೂ ನನಗೆ ಹೇಳುತ್ತಿದ್ದರು. ಹಾಗಾಗಿ ನಾನು ಅಲ್ಲಿಂದ ಓಡಿಹೋಗಿ ಮತ್ತೆ ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ‘ರೆಹಮಾನ್ ಡಕಾಯಿತ್ ಪಾತ್ರದಲ್ಲಿ ನೀವೇ ನಟಿಸಬೇಕಿತ್ತು’; ಶಿವಣ್ಣನ ಎದುರು ಫ್ಯಾನ್ಸ್ ಬೇಡಿಕೆ ಇಟ್ಟಿದ್ದೇಕೆ?

ಸಾಕ್ಷಿ ತನ್ನ ಫೋನ್ ಸಂಖ್ಯೆಯನ್ನು ಬದಲಾಯಿಸಿಕೊಂಡು ‘ತುಮ್’ ಚಿತ್ರದ ತಂಡದಿಂದ ಎಲ್ಲರನ್ನೂ ದೂರವಿಡಲು ಪ್ರಾರಂಭಿಸಿದರು. ಇದು ಅವರು ಬಾಲಿವುಡ್ ವೃತ್ತಿಜೀವನವನ್ನು ಶಾಶ್ವತವಾಗಿ ಕೊನೆಗೊಳಿಸಿತು. ‘ಆ ಅಂಡರ್‌ವರ್ಲ್ಡ್ ಘಟನೆಯಿಂದ ನಾನು ಭಯಪಡದಿದ್ದರೆ, ನಾನು ಇಂದು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಆ ಸಮಯದಲ್ಲಿ, ನಾನು ಒಳಗೊಳಗೆ ಸಂಪೂರ್ಣವಾಗಿ ನಡುಗುತ್ತಿದ್ದೆ. ನಿರ್ಮಾಪಕರಿಂದ ನನಗೆ ನಿರಂತರವಾಗಿ ಕರೆಗಳು ಬರುತ್ತಿದ್ದರಿಂದ ನಾನು ನನ್ನ ಸಂಖ್ಯೆಯನ್ನು ಬದಲಾಯಿಸಿದ್ದೆ’ ಎಂದು ಅವರು ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು. ಸಾಕ್ಷಿ ಶಿವಾನಂದ್ ಈಗ ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಅವರು ತಮ್ಮ ಸಾಮಾನ್ಯ ಜೀವನದಲ್ಲಿ ಸಂತೋಷವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ! – Kannada News | Bangalore Air Pollution Crisis: Hubballi Air Quality is getting better

ಹುಬ್ಬಳ್ಳಿಯಲ್ಲಿ ಹಠಾತ್ತನೆ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು, ಏಪ್ರಿಲ್ 22: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 100ಕ್ಕಿಂತ ಕಡಿಮೆಯಿದ್ದು, ಇಷ್ಟು ದಿನ ಮಾರಕವಾಗಿದ್ದ ಗಾಳಿ ಇಂದು ಉಸಿರಾಟಕ್ಕೆ ಯೋಗ್ಯವಾಗಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 135
  • ಮಂಗಳೂರು-111
  • ಮೈಸೂರು – 153
  • ಬೆಳಗಾವಿ – 74
  • ಕಲಬುರ್ಗಿ-73
  • ಶಿವಮೊಗ್ಗ –133
  • ಬಳ್ಳಾರಿ – 144
  • ಹುಬ್ಬಳ್ಳಿ- 86
  • ಉಡುಪಿ –120
  • ವಿಜಯಪುರ – 101

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗ್ತಾಳಾ ಜಯದೇವ್ ತಾಯಿ ಶಕುಂತಲ? ಸಹಾಯಕ್ಕೆ ಬಂದ ಗೌತಮ್ – Kannada News | Amruthadhare: Shakuntala’s Transformation? Gautam Saves Her After Jayadev Throws Her Out!

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಜಯದೇವ್ ಒಂಟಿಯಾಗುವ ದಿನವು ಸಮೀಪಿಸಿದೆ ಎಂದೇ ಹೇಳಬಹುದು. ಏಕೆಂದರೆ, ಈಗಾಗಲೇ ತಾಯಿಯನ್ನು ಆತ ದೂರ ಮಾಡಿಕೊಂಡಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಆಗಮಿಸಿದ್ದಾನೆ. ಇದರಿಂದ ಶಕುಂತಲ ಬದಲಾಗುವ ಎಲ್ಲಾ ಸೂಚನೆ ಇದೆ.

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ, ಗೌತಮ್ ಆ ರೀತಿಯ ವ್ಯಕ್ತಿ ಅಲ್ಲ ಎನ್ನಬಹುದು. ಆತ, ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಂಡಿದ್ದಾನೆ. ಇದು ಆತನ ದೊಡ್ಡ ಗುಣ. ಆದರೆ, ಈ ವಿಷಯ ಶಕುಂತಲಗೆ ಗೊತ್ತಾಗಿಲ್ಲ. ಜಯದೇವ್ ತನ್ನ ಪ್ರೀತಿಯ ಮಗ ಎನ್ನುತ್ತಿದ್ದಳು.

ಕ್ಲಬ್​ಗೆ ತೆರಳಿದ್ದ ಶಕುಂತಲ, 3 ಕೋಟಿ ರೂಪಾಯಿ ಕಳೆದುಕೊಂಡಳು ಮತ್ತು ಈ ವೇಳೆ ಸಹಾಯಕ್ಕಾಗಿ ಜಯದೇವ್ ಬಳಿ ಹಣ ಕೇಳಿದಳು. ಜಯದೇವ್ ಆ್ಯಪ್ ಒಂದನ್ನು ಮಾಡಿ, ನೂರಾರು ಕೋಟಿ ಸುರಿದು ಅಲ್ಲಿ ಹಣ ಕಳೆದುಕೊಂಡ ಟೆನ್ಶನ್ ಅಲ್ಲಿ ಇದ್ದ. ಇದೇ ಸಮಯಕ್ಕೆ ಬಂದ ಶಕುಂತಲಾ ಹಣ ಕೇಳಿದಳು ಮತ್ತು ಇದು ಜಯದೇವ್ ಕೋಪಕ್ಕೆ ಕಾರಣ ಆಯಿತು. ಆತ ಕೂಗಾಡಿದ್ದಾನೆ. ಈ ಕೂಗಾಟದ ಬಳಿಕ ಮತ್ತಷ್ಟು ಸಿಟ್ಟಾದ ಜೆಡಿ, ಆಕೆಯನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿದ್ದಾನೆ. ಇದರಿಂದ ಜೆಡಿ ಪತ್ನಿ ಕೂಡ ಖುಷಿ ಆಗಿದ್ದಾಳೆ. ಈ ವೇಳೆ ಆಕೆಗೆ ತಪ್ಪಿತಸ್ಥ ಭಾವನೆ ಕಾಡಿದೆ. ಗೌತಮ್​​ನ ಆ ರೀತಿ ನಡೆಸಿಕೊಂಡು ತಪ್ಪು ಮಾಡಿದೆ ಎನಿಸಿದೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಈಗ ತನ್ನ ತಾಯಿಯನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ವಿಷಯ ಗೌತಮ್​​ಗೆ ತಿಳಿದಿದೆ ಎಂದೇ ಹೇಳಬಹುದು. ಈ ವಿಷಯವನ್ನು ಗೌತಮ್​​ಗೆ ತಿಳಿಸಿದ್ದು ಲಕ್ಷ್ಮೀಕಾಂತ್. ಈ ವಿಷಯ ತಿಳಿದ ಬಳಿಕ ಗೌತಮ್ ಕರುಳು ಚುರಕ್ ಎಂದಿದೆ. ಆತ ತಾಯಿಯನ್ನು ಸೇವ್ ಮಾಡಬಹುದು. ಈ ಘಟನೆ ಬಳಿಕವಾದರೂ ಗೌತಮ್ ಮೇಲೆ ಮಾಳವಿಕಾಗೆ ಪ್ರೀತಿ ಮೂಡಬಹುದೇ? ಆಕೆ ಬದಲಾಗಬಹುದೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:09 am, Wed, 22 April 26

Source link

ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ – Kannada News | Kangana Ranaut’s Cow Leather Bag Sparks Controversy: BJP MP Faces Heat for Hermes Choice

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು (Kangana Ranaut) ಆಗಾಗ ವಿವಿಧ ಕಾರಣಕ್ಕೆ ಚರ್ಚೆ ಆಗುತ್ತಾ ಇರುತ್ತಾರೆ. ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಾರೆ. ಅವರು ನಿಡುವ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತದೆ. ಈಗ ಅವರು ತೆಗೆದುಕೊಂಡು ಬಂದ ಬ್ಯಾಗ್ ಬಗ್ಗೆ ಚರ್ಚೆ ನಡೆದಿದೆ. ಅವರು ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದರೇ ಎಂಬ ಪ್ರಶ್ನೆ ಮೂಡಿದೆ.

ಕಂಗನಾ ರಣಾವತ್ ಅವರು ಸದ್ಯ ಪಶ್ಚಿಮ ಬಂಗಾಳದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಬ್ಯಾಗ್ ಒಂದನ್ನು ಹಿಡಿದು ನಿಂತಿದ್ದಾರೆ. ಬಿಳಿ ಬಣ್ಣದಲ್ಲಿ ಈ ಬ್ಯಾಗ್ ಇದೆ. ಇದು ಹೆರ್ಮ್ಸ್ ವಚೆ ಹಂಟರ್ ಕಂಪನಿಯ ಬ್ಯಾಗ್. ಈ ಬ್ಯಾಗ್​​ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ.

ಬ್ಯಾಗ್​​​ನ ಬೆಲೆ ಇಲ್ಲಿ ಅಷ್ಟಾಗಿ ಚರ್ಚೆ ಆಗುತ್ತಿಲ್ಲ. ಏಕೆಂದರೆ ಅನೇಕ ಸೆಲೆಬ್ರಿಟಿಗಳು ಲಕ್ಷಾಂತರ ರೂಪಾಯಿ ಬೆಲೆಯ ಬ್ಯಾಗ್ ಅನ್ನೇ ಹಿಡಿದು ಓಡಾಡುತ್ತಾರೆ. ಆದರೆ, ಇಲ್ಲಿ ಚರ್ಚೆ ಆಗುತ್ತಿರುವುದು ಕಂಗನಾ ಬ್ಯಾಗ್ ತಯಾರಿಸಲು ಬಳಕೆ ಮಾಡಿದ ವಸ್ತುವಿನ ಬಗ್ಗೆ. ಹೆರ್ಮ್ಸ್ ವಚೆ ಹಂಟರ್ ಕಂಪನಿಯವರು ತಯಾರಿಸುವ ಬ್ಯಾಗ್ ಗೋವಿನ ಚರ್ಮದ್ದು. ಇದು ಫ್ರಾನ್ಸ್ ಕಂಪನಿ ಆಗಿದೆ. ಈಗ ಕಂಗನಾ ಬ್ಯಾಗ್ ವಿಷಯ ಸಾಕಷ್ಟು ಚರ್ಚೆ ಆಗುತ್ತಿದೆ.

ಅಂದಹಾಗೆ ಇದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ. ಆ ಬ್ಯಾಗ್ ನಿಜಕ್ಕೂ ಹೆರ್ಮ್ಸ್ ವಚೆ ಹಂಟರ್ ಕಂಪನಿಯದ್ದೇನಾ ಅಥವಾ ಇದನ್ನು ಆ ರೀತಿ ಊಹಿಸಲಾಗಿದೆಯೇ ಎಂಬ ಬಗ್ಗೆ ಕಂಗನಾ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಅವರ ಅಭಿಮಾನಿಗಳು ಕಂಗನಾ ಪರ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ

ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಸಿನಿಮಾ ರಂಗ ತೊರೆಯೋದಾಗಿ ಹೇಳಿದ್ದರು. ಆದರೆ, ಈಗ ಅವರಿಗೆ ರಾಜಕೀಯವೇ ಸಾಕಾದಂತೆ ಇದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು – Kannada News | Pahalgam Terror Attack: One Year On, Survivors Still Battle Trauma and Loss

ಬೈಸರನ್, ಏಪ್ರಿಲ್ 22: ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಪಹಲ್ಗಾಮ್‌(Pahalgam)ನ ಬೈಸರನ್ ಕಣಿವೆಯಲ್ಲಿ ಇಂದು ಪ್ರವಾಸಿಗರ ಗದ್ದಲವಿರಬಹುದು, ಆದರೆ ಒಂದು ವರ್ಷದ ಹಿಂದೆ ಅಲ್ಲಿ ಕೇಳಿಬಂದ ಗುಂಡಿನ ಚಕಮಕಿ ಮತ್ತು ಸಾವು-ನೋವಿನ ಆಕ್ರಂದನ ಇಂದಿಗೂ ಅಲ್ಲಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಅಮಾಯಕ ಪ್ರವಾಸಿಗರನ್ನು, ವಿಶೇಷವಾಗಿ ಪುರುಷರನ್ನು ಗುರಿಯಾಗಿಸಿಕೊಂಡು ನಡೆದ ಆ ದಾಳಿ ಅನೇಕ ಸುಂದರ ಕುಟುಂಬಗಳನ್ನು ಛಿದ್ರಗೊಳಿಸಿದೆ.

ಸಂತೋಷದ ಪ್ರವಾಸ  ನೋವಿನಲ್ಲಿ ಅಂತ್ಯ
ವಿಶಾಖಪಟ್ಟಣಂನ ನಿವೃತ್ತ ಬ್ಯಾಂಕ್ ಅಧಿಕಾರಿ, 68 ವರ್ಷದ ಚಂದ್ರಮೌಳಿ ಅವರು ತಮ್ಮ ಪತ್ನಿ ನಾಗಮಣಿ ಮತ್ತು ಸ್ನೇಹಿತರೊಂದಿಗೆ ಕಾಶ್ಮೀರದ ಸೌಂದರ್ಯ ಸವಿಯಲು ಹೋಗಿದ್ದರು. ದಾಲ್ ಸರೋವರದ ಶಿಕಾರ ಸವಾರಿ, ಟುಲಿಪ್ ಗಾರ್ಡನ್‌ನ ಸೌಂದರ್ಯ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಅವರಿಗೆ ಆ ಪ್ರವಾಸವೇ ಕೊನೆಯದಾಗುತ್ತದೆ ಎಂದು ತಿಳಿದಿರಲಿಲ್ಲ. ಏಪ್ರಿಲ್ 22ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಲ್ಲಿ ಎಲ್ಲವೂ ಸುಂದರವಾಗಿತ್ತು. ಆದರೆ ಹಠಾತ್ ಅಪ್ಪಳಿಸಿದ ಗುಂಡಿನ ಸದ್ದು ಎಲ್ಲವನ್ನೂ ಬದಲಿಸಿತು.

ಬೇಡಿದರೂ ಬಿಡದ ಹಂತಕರು
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಂದ್ರಮೌಳಿ ಅವರು ಶೌಚಾಲಯದಿಂದ ಹಿಂತಿರುಗುತ್ತಿದ್ದಾಗ ದಾಳಿ ನಡೆಯಿತು. ಜೀವ ಉಳಿಸಿಕೊಳ್ಳಲು ಅವರು ಬೇಲಿ ದಾಟಲು ಪ್ರಯತ್ನಿಸಿದರೂ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವೇಗವಾಗಿ ಓಡಲು ಸಾಧ್ಯವಾಗಲಿಲ್ಲ. ಹತ್ತಿರ ಬಂದ ಭಯೋತ್ಪಾದಕರ ಮುಂದೆ ಚಂದ್ರಮೌಳಿ ಅವರು ಕರುಣೆಗಾಗಿ ಬೇಡಿಕೊಂಡರೂ, ಕ್ರೂರ ದಾಳಿಕೋರರು ಕಿಂಚಿತ್ತೂ ದಯೆ ತೋರದೆ ಅವರ ಮೇಲೆ ಗುಂಡು ಹಾರಿಸಿದರು.

ಕಣ್ಣೆದುರೇ ಕಂಡ ನರಕಯಾತನೆ
ಪತ್ನಿ ನಾಗಮಣಿ ಮತ್ತು ಇತರರು ಪೊದೆಗಳ ಹಿಂದೆ ಅಡಗಿ ಪ್ರಾಣ ಉಳಿಸಿಕೊಂಡರಾದರೂ, ತಮ್ಮ ಪ್ರೀತಿಪಾತ್ರರನ್ನು ತಮ್ಮ ಕಣ್ಣೆದುರೇ ಕಳೆದುಕೊಂಡಿದ್ದರು. ಏಪ್ರಿಲ್ 23ರಂದು ಚಂದ್ರಮೌಳಿ ಅವರ ಪಾರ್ಥಿವ ಶರೀರ ವಿಶಾಖಪಟ್ಟಣಕ್ಕೆ ಬಂದಾಗ ಇಡೀ ನಗರವೇ ಕಣ್ಣೀರು ಸುರಿಸಿತ್ತು. ‘ಆಪರೇಷನ್ ಸಿಂಧೂರ್’ ಮೂಲಕ ಸರ್ಕಾರ ಉಗ್ರರನ್ನು ಸದೆಬಡಿದಿರಬಹುದು, ಆದರೆ ಕಳೆದುಹೋದ ಜೀವಗಳು ಮತ್ತೆ ಬರಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: Operation Mahadev:ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ

ಬದುಕುಳಿದವರ ಹೋರಾಟ
ಇಂದು ಒಂದು ವರ್ಷ ಕಳೆದರೂ, ಆ ಘಟನೆಯಿಂದ ಬದುಕುಳಿದವರು ‘ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್’ (PTSD) ನಿಂದ ಬಳಲುತ್ತಿದ್ದಾರೆ. ಸಣ್ಣ ಶಬ್ದ ಕೇಳಿದರೂ ನಡುಗುವುದು, ಜನದಟ್ಟಣೆಯ ಸ್ಥಳಗಳನ್ನು ಕಂಡು ಹೆದರುವುದು ಅವರ ಜೀವನದ ಭಾಗವಾಗಿದೆ. ನಾಗಮಣಿ ಅವರಂತಹ ಎಷ್ಟೋ ಮಹಿಳೆಯರಿಗೆ ಕಾಶ್ಮೀರದ ನೆನಪು ಎಂದರೆ ಈಗ ಕೇವಲ ರಕ್ತ ಮತ್ತು ಗುಂಡಿನ ಸದ್ದಾಗಿದೆ. ಬೈಸರನ್ ಕಣಿವೆ ಇಂದು ಸುಂದರವಾಗಿ ಕಾಣುತ್ತಿರಬಹುದು, ಆದರೆ ಅಲ್ಲಿನ ಮಣ್ಣಿನಲ್ಲಿ ಬೆರೆತಿರುವ ಅಮಾಯಕರ ರಕ್ತದ ಕಥೆ ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ? – Kannada News | Bengaluru Love Tragedy: Girl Planned end life After Burning Boyfriend Alive in Byadarahalli; Stunning Details Emerge

ಮೃತ ಕಿರಣ್‌ (ಎಡಚಿತ್ರ) ಹಾಗೂ ಆರೋಪಿImage Credit source: tv9

ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಜೀವಂತ ದಹನ ಮಾಡಿದ (Byadarahalli Murder Case) ಭೀಕರ ಘಟನೆಗೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ವಿಚಾರಗಳು ಬಯಲಾಗಿವೆ. ಪ್ರಿಯಕರ ಕಿರಣ್‌ನನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ಪ್ರೇಮಾ ಸ್ಕೆಚ್ ಹಾಕಿದ್ದಳು ಎಂಬ ಸ್ಫೋಟಕ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ. ಅಲ್ಲದೆ, ಅದಕ್ಕಾಗಿ ಏನೇನು ಸಿದ್ಧತೆ ಮಾಡಿಕೊಂಡಿದ್ದಳು ಎಂಬುದೂ ಗೊತ್ತಾಗಿದೆ.

ಸಾವಿಗೆ ಶರಣಾಗಲು ಮಾಡಿಕೊಂಡಿದ್ದಳು ಸಕಲ ಸಿದ್ಧತೆ!

ಪ್ರಿಯಕರ ಕಿರಣ್‌ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಪ್ರೇಮಾ ಕೂಡ ಅದೇ ಬೆಂಕಿಯಲ್ಲಿ ಆಹುತಿಯಾಗಲು ನಿರ್ಧರಿಸಿದ್ದಳು. ಒಂದು ವೇಳೆ ಬೆಂಕಿಯಿಂದ ಬದುಕುಳಿದರೆ ಆತ್ಮಹತ್ಯೆ ಮಾಡಿಕೊಳ್ಳಲು ರೂಮಿನಲ್ಲಿ ವಿಷದ ಬಾಟಲಿ ಹಾಗೂ ಮಾತ್ರೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಳು. ಆದರೆ, ಕಿರಣ್ ಬೆಂಕಿಯಲ್ಲಿ ನರಳುತ್ತಾ ಕಿರುಚಾಡುತ್ತಿದ್ದಾಗ ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಪ್ರೇಮಾ ಭಯಬಿದ್ದು ಹೊರಕ್ಕೆ ಓಡಿ ಬಂದಿದ್ದಾಳೆ. ಅರೆಬರೆ ಬಟ್ಟೆಯಲ್ಲಿದ್ದ ಆಕೆಯನ್ನು ಕಂಡು ಪಕ್ಕದ ಮನೆಯ ಮಹಿಳೆ ಮಾನವೀಯತೆಯ ದೃಷ್ಟಿಯಿಂದ ಬಟ್ಟೆ ನೀಡಿ ರಕ್ಷಿಸಿದ್ದರು.

ಕೊಲೆಗೆ ಪ್ರಚೋದನೆ ನೀಡಿದ್ದು ‘ಮಾಜಿ ಲವರ್’ ಫೋಟೋ!

ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದ ಕಿರಣ್ ಮತ್ತು ಪ್ರೇಮಾ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕಿರಣ್, ಪ್ರೇಮಾಳನ್ನು ಕಡೆಗಣಿಸಿ ತನ್ನ ಹಳೆಯ ಪ್ರಿಯತಮೆಯ ಜೊತೆ ಮತ್ತೆ ಸಂಪರ್ಕದಲ್ಲಿದ್ದ. ಮಾಜಿ ಪ್ರಿಯತಮೆಯ ಹುಟ್ಟುಹಬ್ಬವನ್ನು ಆಚರಿಸಿ ಕಿರಣ್ ಫೋಟೋಗಳನ್ನು ತೆಗೆಸಿಕೊಂಡಿದ್ದ. ಇದನ್ನು ಕಂಡು ಆಕ್ರೋಶಗೊಂಡ ಪ್ರೇಮಾ ಕಿರಣ್ ಜೊತೆ ಜಗಳವಾಡಿದ್ದಳು. ಕಿರಣ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದರಿಂದ ಸೇಡು ಮತ್ತಷ್ಟು ಹೆಚ್ಚಾಗಿತ್ತು.

ಆನ್‌ಲೈನ್‌ನಲ್ಲಿ ಹ್ಯಾಂಡ್‌ಕಪ್ ಖರೀದಿ

‘ನೀನು ಹೇಳಿದ ದಿನವೇ ನಾವು ಮದುವೆಯಾಗೋಣ’ ಎಂದು ನಂಬಿಸಿ ಕಿರಣ್‌ನನ್ನು ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಕೇವಲ ಎರಡು ದಿನಗಳಲ್ಲಿ ಕೊಲೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದ ಈಕೆ, ಆನ್‌ಲೈನ್‌ನಲ್ಲಿ ಹ್ಯಾಂಡ್‌ಕಪ್ (ಕೈಕೋಳ) ಬೆಲ್ಟ್ ಖರೀದಿಸಿದ್ದಳು ಎನ್ನಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಪ್ರೇಮಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಆರಂಭದಲ್ಲಿ, ಕಿರಣ್ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಪ್ರೇಮಾಳೇ ಕೈಕಾಲು ಕಟ್ಟಿ ಆತನಿಗೆ ಬೆಂಕಿ ಹಚ್ಚಿದ್ದು ದೃಢಪಟ್ಟಿದೆ. ಪ್ರೀತಿಯಲ್ಲಿ ಉಂಟಾದ ಬಿರುಕು ಮತ್ತು ಕಿರಣ್ ಮತ್ತೊಬ್ಬ ಯುವತಿಯ ಜೊತೆ ಸಂಬಂಧ ಹೊಂದಿದ್ದೇ ಈ ಕಗ್ಗೊಲೆಗೆ ಮೂಲ ಕಾರಣ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಕಾದ ಕೆಂಡದಂತಾಗಿದ್ದ ಕರಾವಳಿಯಲ್ಲಿ ಇಂದು ವರ್ಷಧಾರೆ! – Kannada News | Karnataka Weather Forecast: Thunderstorm all over Karnataka

ಕಾದ ಕೆಂಡದಂತಾಗಿದ್ದ ರಾಜ್ಯಕ್ಕಿಂದು ವರ್ಷಧಾರೆ!

ಬೆಂಗಳೂರು, ಏಪ್ರಿಲ್ 22: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ  (Karnataka Weather)   ಹೆಚ್ಚಾಗಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದೆ. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಮಳೆ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಏಪ್ರಿಲ್ 23ರವರೆಗೂ ಇದೇ ವಾತಾವರಣವಿರಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎನ್ನಲಾಗಿದೆ. ಉತ್ತರ ಒಳನಾಡಿನ ವಿಜಯಪುರ, ಬೆಳಗಾವಿ, ಹಾವೇರಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಡುವ ಬಿಸಿಲಿನ ನಡುವೆ ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ! – Kannada News | El Nino Threat in Karnataka, India: IMD Warns of Drought and Monsoon Failure Amid Rising Temperatures

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ಹವಾಮಾನ ಇಲಾಖೆಯು ‘ಎಲ್ ನಿನೋ (El Nino)’ ಸುಳಿವು ನೀಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪೆಸಿಫಿಕ್ ಸಾಗರದ ಉಷ್ಣಾಂಶದಲ್ಲಿನ ಏರಿಕೆಯಿಂದ ಉಂಟಾಗುವ ಈ ಹವಾಮಾನ ವೈಪರೀತ್ಯವು ಭಾರತದ ಮುಂಗಾರು ಮಳೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಎಲ್ ನಿನೋ ಎಂದರೇನು?

ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶವು ವಾಡಿಕೆಗಿಂತ ಹೆಚ್ಚಾಗುವುದನ್ನೇ ‘ಎಲ್ ನಿನೋ’ ಎನ್ನಲಾಗುತ್ತದೆ. ಇದರಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿ ಗಾಳಿಯ ದಿಕ್ಕು ಬದಲಾಗುತ್ತದೆ. ಇದರ ನೇರ ಪರಿಣಾಮ ನೈಋತ್ಯ ಮುಂಗಾರು ಮಳೆಯ ಮೇಲೆ ಉಂಟಾಗಲಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಮಳೆ ಕಡಿಮೆಯಾದರೆ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿ ತೀವ್ರ ಬರಗಾಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಕೃಷಿ ಮತ್ತು ಆರ್ಥಿಕತೆಗೆ ಪೆಟ್ಟು

ಮುಂಗಾರು ಮಳೆ ಕುಂಠಿತಗೊಂಡರೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾಗಲಿದೆ. ಇದು ಆಹಾರ ಭದ್ರತೆಗೆ ಧಕ್ಕೆ ತರುವುದಲ್ಲದೆ, ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.

ಶಾಲೆಗಳಿಗೆ ರಜೆ, ಸಮಯ ಬದಲಾವಣೆ

ಒಡಿಶಾದ ತಿಟ್ಲಾಘರ್​ನಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾದ 9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಶಾಲಾ ಸಮಯವನ್ನು ಬದಲಿಸಲಾಗಿದ್ದು, ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ತರಗತಿ ನಡೆಸಲು ಸೂಚಿಸಲಾಗಿದೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಂತಹದೇ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ!

ಒಟ್ಟಾರೆಯಾಗಿ, ಅಗ್ನಿಕುಂಡದಂತಾಗಿರುವ ಭೂಮಿಗೆ ಎಲ್ ನಿನೋ ಎಂಟ್ರಿಯು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಮುಂಬರುವ ದಿನಗಳಲ್ಲಿ ಬರಗಾಲ ಎದುರಿಸಲು ಸಜ್ಜಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್ – Kannada News | Trump Halts Iran Attack Amid Pakistan Mediation: Diplomatic Push for Peace

ವಾಷಿಂಗ್ಟನ್ , ಏಪ್ರಿಲ್ 22: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿರುವ ಟ್ರಂಪ್, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ನಾಯಕರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ರಾಜತಾಂತ್ರಿಕ ನಡೆ
ಡೊನಾಲ್ಡ್​ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್​​ ಪ್ಲಾಟ್​ಫಾರ್ಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಾಕಿಸ್ತಾನದ ಫೀಲ್ಡ್​ ಮಾರ್ಷಲ್ ಆಸಿಮ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರು ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಗೆ ಸಮಯ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಒಂದು ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ದಾಳಿಯನ್ನು ತಡೆ ಹಿಡಿಯುವಂತೆ ಪಾಕಿಸ್ತಾನ ಮನವಿ ಮಾಡಿದೆ. ಅವರ ಪ್ರಸ್ತಾಪ ಬರುವವರೆಗೆ ಮತ್ತು ಚಚರ್ಚಗಳು ತಾರ್ಕಿಕ ಅಂತ್ಯ ಕಾಣುವವರೆಗೆ ತಾವು ಕದನ ವಿರಾಮ ವಿಸ್ತರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ: ಟ್ರಂಪ್ ಅವರ ದಿಗ್ಬಂಧನ ತಂತ್ರ
ಜಾಗತಿಕ ತೈಲ ವ್ಯಾಪಾರದ ನಾಡಿಮಿಡಿತವಾಗಿರುವ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರೆ ಇರಾನ್ ದಿನಕ್ಕೆ ಸುಮಾರು 500 ಮಿಲಿಯನ್ ಡಾಲರ್ ಆದಾಯ ಗಳಿಸುತ್ತದೆ. ಆದರೆ ಅಮೆರಿಕದ ನೌಕಾಪಡೆಯು ಈ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಇರಾನ್ ಆರ್ಥಿಕವಾಗಿ ಕಂಗೆಟ್ಟಿದೆ.

ಇರಾನ್ ಈ ಜಲಸಂಧಿಯನ್ನು ತಾನೇ ಮುಚ್ಚುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಟ್ರಂಪ್ ಪ್ರಕಾರ, ಇದು ಕೇವಲ ತನ್ನ ಮರ್ಯಾದೆ ಉಳಿಸಿಕೊಳ್ಳಲು ಇರಾನ್ ಮಾಡುತ್ತಿರುವ ನಾಟಕ. ಅಮೆರಿಕ ಈಗಾಗಲೇ ಅದನ್ನು ಮುಚ್ಚಿರುವುದರಿಂದ ಇರಾನ್ ಅಸಹಾಯಕವಾಗಿದೆ.

ಮತ್ತಷ್ಟು ಓದಿ: ನನ್ನಿಂದ ಖುಷಿಯಾಗಿರುವ ಚೀನಾದ ಅಧ್ಯಕ್ಷ ಬಿಗಿ ಅಪ್ಪುಗೆ ನೀಡುತ್ತಾರೆ; ಟ್ರಂಪ್

ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಮೊದಲ ಹಂತದ ಕದನ ವಿರಾಮ ಬುಧವಾರಕ್ಕೆ ಅಂತ್ಯಗೊಂಡಿತ್ತು. ಎರಡನೇ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಸ್ಥಗಿತಗೊಂಡಿದ್ದವು. ಟ್ರಂಪ್ ಮೊದಲು ಕದನ ವಿರಾಮ ವಿಸ್ತರಣೆ ನಿರಾಕರಿಸಿದ್ದರೂ, ಕೊನೆಯ ಕ್ಷಣದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಮನಸ್ಸು ಬದಲಿಸಿದ್ದಾರೆ. ಆದರೂ ಅಮರಿಕ ಸೇನೆಗೆ ಯಾವುದೇ ಕ್ಷಣದಲ್ಲಿ ದಾಳಿಗೆ ಸಿದ್ದರಾಗಿರಿ ಎಂದು ಅವರು ಆದೇಶಿಸಿದ್ದಾರೆ.

ಮುಂದಿನ ಹಾದಿ ಕಠಿಣ
ಈ ಕದನ ವಿರಾಮ ವಿಸ್ತರಣೆಯು ತಾತ್ಕಾಲಿಕವಾಗಿದ್ದು, ಇರಾನ್ ಮಂಡಿಸುವ ಪ್ರಸ್ತಾಪದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಒಂದೋ ಒಪ್ಪಂದವಾಗಬೇಕು, ಇಲ್ಲದಿದ್ದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ. ಟ್ರಂಪ್ ಅವರ ಈ ನಡೆ ಇರಾನ್ ಸರ್ಕಾರವನ್ನು ಆರ್ಥಿಕವಾಗಿ ಹೈರಾಣಾಗಿಸಿ, ಅವರನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡುವ ತಂತ್ರದ ಭಾಗವಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version