Headlines

ಹಾಲಿವುಡ್​​ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ – Kannada News | Kill movie director moved to Hollywood, working with Jamie Foxx

ಭಾರತದ ಕೆಲವಾರು ನಟ-ನಟಿಯರು ಹಾಲಿವುಡ್ (Hollywood)​​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ತಂತ್ರಜ್ಞರುಗಳಿಗೆ ಹಾಲಿವುಡ್​​ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಎಆರ್ ರೆಹಮಾನ್ ಹೊರತಾಗಿ ಇನ್ಯಾವ ಭಾರತದ ತಂತ್ರಜ್ಞರು ಸಹ ಹಾಲಿವುಡ್​​ನಲ್ಲಿ ಕೆಲಸ ಮಾಡಿಲ್ಲವೆಂದೇ ಹೇಳಬಹುದು. ಅದರಲ್ಲೂ ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಿರ್ದೇಶಕರುಗಳು ಹಾಲಿವುಡ್​​ಗೆ ಹೋಗಿದ್ದೇ ಇಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರು ಒಂದು ಸಿನಿಮಾ ಹಿಟ್ ನೀಡಿದ್ದೇ ತಡ ಹಾಲಿವುಡ್​​ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟನೊಡನೆ ಸಿನಿಮಾ ಮಾಡಲಿದ್ದಾರೆ. 2023 ರಲ್ಲಿ…

Read More

WTC Final: ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ಗೇರಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು? – Kannada News | India’s WTC Final Dream: Qualification Chances for 2026 27 Revealed

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲೆರಡು ಆವೃತ್ತಿಗಳಲ್ಲಿ ಫೈನಲ್​ಗೇರಿದ್ದ ಭಾರತ ತಂಡ ಆ ಎರಡೂ ಆವೃತ್ತಿಗಳ ಫೈನಲ್‌ನಲ್ಲಿ ಎಡವಿತ್ತು. ಇನ್ನು ಮೂರನೇ ಆವೃತ್ತಿಯಲ್ಲಿ ಟೀಂ ಇಂಡಿಯಾಕ್ಕೆ ಫೈನಲ್​ಗೇರಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಆವೃತ್ತಿಯಲ್ಲಾದರೂ ಫೈನಲ್​ಗೇರಿ ಚಾಂಪಿಯನ್‌ ಆಗಬೇಕೆಂಬ ಟೀಂ ಇಂಡಿಯಾದ ಕನಸು ನನಸಾಗುವ ಸಾಧ್ಯತೆಗಳು ಕ್ಷಿಣಿಸುತ್ತಿವೆ. ಆದಾಗ್ಯೂ ಗಿಲ್ ಪಡೆಗೆ ಈಗಲೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಫೈನಲ್​ಗೇರುವ ಅವಕಾಶವಿದೆ. ಹಾಗಿದ್ದರೆ ಭಾರತ ತಂಡ ಡಬ್ಲ್ಯೂಟಿಸಿ ನಾಲ್ಕನೇ ಆವೃತ್ತಿಯ ಫೈನಲ್​ಗೇರಲು ಏನು ಮಾಡಬೇಕು? ಉಳಿದಿರುವ ಪಂದ್ಯಗಳಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು…

Read More

‘ರಾಮಾಯಣ’ ಸಿನಿಮಾದ ಇಂಗ್ಲಿಷ್ ಟ್ರೇಲರ್ ನೋಡಿ ವಿದೇಶಿ ಪ್ರೇಕ್ಷಕರು ಹೇಳಿದ್ದೇನು? – Kannada News | Yash starrer Ramayana movie English trailer Brahma AI Technology fans reaction

ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ (Ramayana) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಟ್ರೇಲರ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಇಂಗ್ಲಿಷ್ ಡಬ್ಬಿಂಗ್ ಟ್ರೇಲರ್ (Ramayana English Trailer) ನೋಡಿದ ಪ್ರೇಕ್ಷಕರು, ಇದು ಮೂಲ ಹಿಂದಿ ಆವೃತ್ತಿಗಿಂತಲೂ ಉತ್ತಮವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸುತ್ತಿದ್ದಾರೆ. ಪ್ರಸಿದ್ಧ ವಿಎಫ್‌ಎಕ್ಸ್‌ ಸಂಸ್ಥೆ DNEG ಅಭಿವೃದ್ಧಿಪಡಿಸಿರುವ ‘ಬ್ರಹ್ಮ ಎಐ’ ತಂತ್ರಜ್ಞಾನವನ್ನು ಬಳಸಿ ‘ರಾಮಾಯಣ’ ಟ್ರೇಲರ್‌ನ ಲಿಪ್-ಸಿಂಕ್ ಮಾಡಲಾಗಿದೆ….

Read More

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ – Kannada News | Bheema River Swells to Dangerous Levels in Yadgir After Heavy Rains in Maharashtra

ಯಾದಗಿರಿ, ಆಗಸ್ಟ್​ 06: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಜನಿ ಹಾಗೂ ವೀರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಬಳಿಯ ಭೀಮಾ ನದಿಯು ಮೈದುಂಬಿ ಭೋರ್ಗರೆಯುತ್ತಿದೆ. ಗುರುಸುಣಗಿ ಬ್ಯಾರೇಜ್‌ನ 24 ಕ್ರಸ್ಟ್ ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ತೆರೆದು ನದಿಗೆ ಸುಮಾರು 1.20 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು, ನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವೀರಾಂಜನ ದೇವಸ್ಥಾನಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮುಂಬರುವ ದಿನಗಳಲ್ಲಿ ನದಿಗೆ ನೀರು ಹರಿವು ಇನ್ನಷ್ಟು ಹೆಚ್ಚಾಗುವ…

Read More

Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌? – Kannada News | Most of the items are prices end in 99; Know the psychology behind this pricing strategy

ನಾವು ಮಾಲ್, ಮಾರುಕಟ್ಟೆ ಅಥವಾ ಆನ್‌ಲೈನ್ ಶಾಪಿಂಗ್ ಸೈಟ್‌ಗೆ ಭೇಟಿ ನೀಡಿದಾಗಲೆಲ್ಲಾ, ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಬೆಲೆ (prices) ಎಷ್ಟಿದೆ ಎಂದು ಪರಿಶೀಲಿಸುತ್ತೇವೆ. ಹೀಗೆ ಬೆಲೆ ನೋಡುವಾಗ ಬಹುತೇಕ ಹೆಚ್ಚಿನ ಉತ್ಪನ್ನಗಳ ಬೆಲೆ 99 ಸಂಖ್ಯೆಯಲ್ಲಿ ಕೊನೆಗೊಳ್ಳುವುದನ್ನು ನೋಡಿರುತ್ತೀರಿ ಅಲ್ವಾ.  ಕಂಪನಿಗಳು ಸಾಮಾನ್ಯವಾಗಿ ಉತ್ಪನ್ನಗಳ ಬೆಲೆಯನ್ನು ₹100 ಅಥವಾ ₹1,000 ಬದಲಿಗೆ ₹99 ಅಥವಾ ₹999 ಕ್ಕೆ ನಿಗದಿಪಡಿಸುತ್ತವೆ. ಉದಾಹರಣೆಗೆ ₹99, ₹199, ₹499, ₹10,999 ಈ ರೀತಿ ಬೆಲೆ ಇರುತ್ತವೆ. ಕಂಪನಿಗಳು ಈ…

Read More

ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ – Kannada News | Nagpur class 12 student Kidnapped, harassed By Instagram Frien Food Order Helped police to Save Her

ನಾಗ್ಪುರ, ಆಗಸ್ಟ್ 6: ಸಾಮಾಜಿಕ ಜಾಲತಾಣದಲ್ಲಿ ಕಾಣುವುದಿಲ್ಲವೂ ನಿಜ ಎನ್ನಲಾಗದು. ಇನ್​ಸ್ಟಾಗ್ರಾಂನಲ್ಲಿ 20 ವರ್ಷದ ಯುವಕನೊಂದಿಗೆ ಫ್ರೆಂಡ್​ ಆಗಿದ್ದ 12ನೇ ತರಗತಿಯ ಬಾಲಕಿ ಫ್ರೆಂಡ್‌ಶಿಪ್ ದಿನ (Friendship Day) ಆತನಿಗೆ ಸಿಗುವುದಾಗಿ ತಿಳಿಸಿದ್ದಳು. ಆದರೆ, ಅದೇ ದಿನ ಆತ ಆಕೆಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ, 2 ದಿನ ರಹಸ್ಯವಾದ ಸ್ಥಳದಲ್ಲಿ ಬಚ್ಚಿಟ್ಟು ಚಿತ್ರಹಿಂಸೆ ನೀಡಿದ್ದ. ಹಿರಿಯ ಅಧಿಕಾರಿಯ ಮಗಳಾದ ಆಕೆ ಮನೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ತೆರಳಿದ್ದಳು. ಆದರೆ, ಆಕೆ ರಾತ್ರಿಯಾದರೂ…

Read More

ಪಿಓಪಿ ಗಣೇಶ ಮೂರ್ತಿ ನಿಷೇಧ, ಶಬ್ಧ ಮಾಲೀನ್ಯಕ್ಕೂ ಅವಕಾಶವಿಲ್ಲ: ಈಶ್ವರ್​​​​ ಖಂಡ್ರೆ ಸೂಚನೆ – Kannada News | Minister Eshwar Khandre directs gram panchayats to permit only eco friendly clay Ganesh idols

ಬೆಂಗಳೂರು, (ಆಗಸ್ಟ್ 06): ಸೆಪ್ಟೆಂಬರ್ 14ರಂದು ನಾಡಿನಾದ್ಯಂತ ಆಚರಿಸಲಾಗುವ ಗಣೇಶ ಹಬ್ಬದ (Ganesh Festival) (Ganesh Festival) ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿರ್ಮಿತ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ(Ganesh Idol) ವಿಸರ್ಜನೆಗೆ ಅವಕಾಶ ನೀಡದೆ, ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪತಿ ಪೂಜಿಸಲು ಪ್ರೇರೇಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಅಲ್ಲದೇ ಗಣೇಶ ಉತ್ಸವ ವೇಳೆ ಶಬ್ಧ ಮಾಲೀನ್ಯಕ್ಕೆ ಅವಕಾಶವಿಲ್ಲ…

Read More

ಸಚಿವ ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ – Kannada News | Siddaramaiah Fan Arrested for Derogatory Comments Against Minister Byrati Suresh on Social Media

ಬೆಂಗಳೂರು, ಆಗಸ್ಟ್​ 06: ಸಚಿವ ಭೈರತಿ ಸುರೇಶ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿ ಜಯಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭೈರತಿ ಸುರೇಶ್ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗಿದೆ ಎಂಬ ದೂರಿನ ಅನ್ವಯ ಆರ್.ಟಿ.ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಿವಾಸಿಯಾದ ಜಯಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ, ಜಯಕುಮಾರ್ ಪೊಲೀಸರ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತಷ್ಟು ವಿಡಿಯೋ ನೋಡಲು…

Read More

ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ – Kannada News | Zepto, BookMyShow and other 7 digital platforms penalized for Dark Patterns

ನವದೆಹಲಿ, ಆಗಸ್ಟ್ 6: ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ಡಾರ್ಕ್ ಪ್ಯಾಟರ್ನ್ (Dark Patterns) ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ (CCPA – Central Consumer Protection Authority) “ಡಾರ್ಕ್ ಪ್ಯಾಟರ್ನ್‌” ಬಳಸಿದ್ದಕ್ಕಾಗಿ ಜೆಪ್ಟೋ, ಬುಕ್‌ಮೈಶೋ, ಸ್ಪೈಸ್‌ಜೆಟ್, ಇಂಡಿಗೋ ಸೇರಿದಂತೆ 9 ಪ್ರಮುಖ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ದಂಡ ವಿಧಿಸಿದೆ. ಸರ್ಕಾರವು ರಾಜ್ಯಸಭೆಗೆ ನೀಡಿದ ಮಾಹಿತಿಯಂತೆ, ಈ ಕಂಪನಿಗಳಿಂದ ಒಟ್ಟು ₹20 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಯಾವ…

Read More

ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ‘ಫಿಟ್​ನೆಸ್​ ಟೆಸ್ಟ್’ ಜಾರಿ! – Kannada News | BCCI’s Fitness Shock: No More Soft Targets for Senior Indian Players

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾ ಆಟಗಾರರ ಫಿಟ್‌ನೆಸ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇದುವರೆಗೆ ಹಿರಿಯ ಆಟಗಾರರಿಗೆ ನೀಡಲಾಗಿದ್ದ ಸುಲಭ ಮತ್ತು ಸಡಿಲವಾದ ವೈಯಕ್ತಿಕ ಫಿಟ್‌ನೆಸ್ ಗುರಿಗಳನ್ನು ಮಂಡಳಿಯು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇಂಗ್ಲೆಂಡ್​, ಐರ್ಲೆಂಡ್ ಪ್ರವಾಸದ ಹಿನ್ನಡೆ ಹಾಗೂ ಆಟಗಾರರ ನಿರಂತರ ಗಾಯದ ಸಮಸ್ಯೆಗಳಿಂದ ಎಚ್ಚೆತ್ತಿರುವ ಬಿಸಿಸಿಐ, ಇನ್ಮುಂದೆ ಜೂನಿಯರ್-ಸೀನಿಯರ್ ಎನ್ನದೆ ಎಲ್ಲರಿಗೂ ಏಕರೂಪದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಬೆಂಗಳೂರಿನಲ್ಲಿರುವ ಬಿಸಿಸಿಐನ ಹೊಸ ‘ಸೆಂಟರ್ ಆಫ್ ಎಕ್ಸಲೆನ್ಸ್’…

Read More