ಹನುಮನ ಭಕ್ತರ ಗಮನಕ್ಕೆ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಬರುವ ಭಕ್ತರಿಗೆ ಸಮಯ ನಿಗದಿ – Kannada News | New Rules for devotees, timing Set to Koppal anjanadri hanuman darshan Over temperature

ಕೊಪ್ಪಳ, (ಏಪ್ರಿಲ್ 16): ಆಂಜನೇಯನ ಜನ್ಮಸ್ಥಳ ಕೊಪ್ಪಳದ (Koppal) ಅಂಜನಾದ್ರಿಯಲ್ಲಿ (anjanadri Betta) ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಬೆಟ್ಟ ಏರುವ ಭಕ್ತರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗುತ್ತಿದ್ದು, ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೊಪ್ಪಳ ಜಿಲ್ಲಾಡಳಿತ, ಮಧ್ಯಾಹ್ನದ ವೇಳೆ ಬೆಟ್ಟ ಏರುವುದನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ ನಾಲ್ಕು ಗಂಟೆಯ ಬಳಿಕ ಮಾತ್ರ ಭಕ್ತರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇದೇ ಸಮಯದಲ್ಲಿ ಭಕ್ತರು  ಬಂದ್ರೆ ಮಾತ್ರ ಅಂಜನಾದ್ರಿ ಬೆಟ್ಟ ಹತ್ತಬಹುದು.

ಅಂಜನಾದ್ರೆ ಬೆಟ್ಟ ಹತ್ತಲು ಸಮಯ ನಿಗದಿ

ಅಂಜನಾದ್ರಿ ದೇವರ ದರ್ಶನಕ್ಕೆಂದು ಸ್ಥಳೀಯರು ಮಾತ್ರವಲ್ಲ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇನ್ನು ಮುಂದೆ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸಮಯದ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಸಮಯ ಮಿತಿ ಇಲ್ಲದೇ ದೇವರ ದರ್ಶನಕ್ಕೆ ಹೋಗುತ್ತಿರುವ ಭಕ್ತರಿಗೆ ಇನ್ಮುಂದೆ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ವರೆಗೆ ಮಾತ್ರ ಬೆಟ್ಟ ಹತ್ತು ಸಮಯ ನಿಗದಿಪಡಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಅಂಜನಾದ್ರಿ ಬೆಟ್ಟ ಗೇಟ್ ಓಪನ್ ಆಗಲಿದೆ.

ಇದನ್ನೂ ಓದಿ: ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?

ಸಮಯದ ಮಿತಿ ಯಾಕೆ?

ಹನುಮನ ಜನ್ಮಭೂಮಿ, ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿರುವ ಅಂಜನಾದ್ರಿ ಪರ್ವತ ಈಗ ಅಕ್ಷರಶಃ ಕೆಂಡದಂತಾಗಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು, 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆಯಬೇಕಿದೆ. ಆದರೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಬೆಟ್ಟ ಏರುವ ಭಕ್ತರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಿರ್ಜಲೀಕರಣ (Dehydration) ಮತ್ತು ಸುಸ್ತಿನಿಂದಾಗಿ ಹಲವರು ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದಿದ್ದಾರೆ. ಕೆಲ ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದೆ. ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಹೊಸ ಆದೇಶ ಜಾರಿ ಮಾಡಿದ್ದಾರೆ. ​ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಭಕ್ತರಿಗೆ ಬೆಟ್ಟ ಏರಲು ಪ್ರವೇಶ ನಿಷೇಧಸಿದ್ದಾರೆ.

ಸಂಜೆ 4 ಗಂಟೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ‌. ​ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದಾರೆ. ಪ್ರಾಣಾಪಾಯ ತಡೆಯಲು ಈ ಕ್ರಮ ಅನಿವಾರ್ಯವಾಗಿತ್ತು ಅನ್ನೋದು ಕೆಲ ಪ್ರವಾಸಿಗರ ಅಭಿಪ್ರಾಯವಾಗಿದೆ. ಬಿಸಿಲು ತುಂಬಾ ಜಾಸ್ತಿ ಇದೆ, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳ ನಿರ್ಧಾರ ಒಳ್ಳೆಯದು. ಆದರೆ ಬೆಟ್ಟದ ಮೇಲೆ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಪ್ರಖರತೆ ಕಡಿಮೆಯಾಗುವವರೆಗೂ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರು ಸಮಯದ ಬದಲಾವಣೆಯನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Hindu Death Rituals: ಸತ್ತವರ ಬಾಯಲ್ಲಿ ಚಿನ್ನ, ತುಳಸಿ ಮತ್ತು ಗಂಗಾ ಜಲವನ್ನು ಏಕೆ ಇಡಲಾಗುತ್ತದೆ? – Kannada News | Hindu Death Rituals: Sacred Items for Moksha and Soul’s Journey

ಸನಾತನ ನಂಬಿಕೆಗಳ ಪ್ರಕಾರ, ಸಾವು ಎಂಬುದು ಅಂತ್ಯವಲ್ಲ, ಅದು ಕೇವಲ ಒಂದು ಬದಲಾವಣೆ. “ಜಾತಸ್ಯ ಹಿ ಧ್ರುವೋ ಮೃತ್ಯುಃ” ಎನ್ನುವಂತೆ ಹುಟ್ಟಿದವನಿಗೆ ಸಾವು ನಿಶ್ಚಿತ. ಆದರೆ ಈ ಐಹಿಕ ಪ್ರಪಂಚವನ್ನು ತೊರೆದು ಅಜ್ಞಾತ ಲೋಕದ ಕಡೆಗೆ ಸಾಗುವ ಆತ್ಮಕ್ಕೆ ದಾರಿದೀಪವಾಗುವುದು ನಮ್ಮ ಶಾಸ್ತ್ರೋಕ್ತ ಆಚರಣೆಗಳು. ಗರುಡ ಪುರಾಣದಂತಹ ಪವಿತ್ರ ಗ್ರಂಥಗಳು ಉಲ್ಲೇಖಿಸುವಂತೆ, ಆತ್ಮವು ಯಮನ ಹಿಡಿತದಿಂದ ಮುಕ್ತವಾಗಿ ಮೋಕ್ಷದ ಹಾದಿ ಹಿಡಿಯಲು ಕೆಲವು ಪವಿತ್ರ ವಸ್ತುಗಳು ‘ದೈವಿಕ ಗುರಾಣಿ’ಯಾಗಿ ಕಾರ್ಯನಿರ್ವಹಿಸುತ್ತವೆ.

ಚಿನ್ನ- ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತ:

ಚಿನ್ನವು ಕೇವಲ ಲೋಹವಲ್ಲ, ಅದು ಅಗ್ನಿ ದೇವರ ಸಾಕಾರ ರೂಪ. ಇದನ್ನು ಅತ್ಯಂತ ಪವಿತ್ರ ಮತ್ತು ದೈವಿಕ ಶುದ್ಧತೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಮರಣದ ಸಮಯದಲ್ಲಿ ಬಾಯಿಯಲ್ಲಿ ಚಿನ್ನದ ತುಣುಕನ್ನು ಇಡುವುದರಿಂದ ಆತ್ಮಕ್ಕೆ ಆಧ್ಯಾತ್ಮಿಕ ಶುದ್ಧೀಕರಣ ದೊರೆಯುತ್ತದೆ. ಚಿನ್ನದ ದೈವಿಕ ಅಂಶವು ಆತ್ಮವನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಂದರೆ ಉನ್ನತ ಲೋಕಗಳ ಕಡೆಗೆ ಮುನ್ನಡೆಸುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಿರಿಯರು ನಂಬುತ್ತಾರೆ.

ಗಂಗಾ ಜಲ-ಪಾಪ ವಿಮೋಚನೆಯ ಸಂಜೀವಿನಿ:

ಸ್ವರ್ಗದಿಂದ ಧರೆಗಿಳಿದ ಗಂಗೆಗೆ ಪಾಪಗಳನ್ನು ತೊಳೆಯುವ ಅದ್ಭುತ ಶಕ್ತಿಯಿದೆ. ಜೀವನದುದ್ದಕ್ಕೂ ಅರಿತೋ ಅರಿಯದೋ ಮಾಡಿದ ತಪ್ಪುಗಳ ನಿವಾರಣೆಗೆ ಗಂಗಾ ಜಲವು ರಾಮಬಾಣ. ಮರಣದ ಶಯ್ಯೆಯಲ್ಲಿರುವಾಗ ಅಥವಾ ನಂತರ ಬಾಯಿಗೆ ಗಂಗಾ ಜಲವನ್ನು ಸುರಿಯುವುದರಿಂದ ಆತ್ಮವು ಯಾವುದೇ ನೋವಿಲ್ಲದೆ, ದುಷ್ಟಶಕ್ತಿಗಳ ಬಾಧೆಯಿಲ್ಲದೆ ದೇಹವನ್ನು ತ್ಯಜಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತುಳಸಿ ವೈಕುಂಠ ಪ್ರಾಪ್ತಿಯ ದಾರಿ:

ತುಳಸಿಯನ್ನು ಸಾಕ್ಷಾತ್ ಮಹಾಲಕ್ಷ್ಮಿಯ ರೂಪ ಮತ್ತು ವಿಷ್ಣುವಿನ ಅತ್ಯಂತ ಪ್ರಿಯವಾದ ಅಂಶವೆಂದು ಪೂಜಿಸಲಾಗುತ್ತದೆ. ಗರುಡ ಪುರಾಣದ ಉಲ್ಲೇಖದಂತೆ, ಮೃತರ ಬಾಯಿಯಲ್ಲಿ ತುಳಸಿ ಎಲೆಯನ್ನು ಇಡುವುದರಿಂದ ಅವರು ಯಮಧರ್ಮನ ಕಠಿಣ ಶಿಕ್ಷೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ತುಳಸಿಯ ಸಾನ್ನಿಧ್ಯವು ಆತ್ಮವನ್ನು ನೇರವಾಗಿ ಭಗವಾನ್ ವಿಷ್ಣುವಿನ ಪರಮಪದವಾದ ‘ವೈಕುಂಠ’ಕ್ಕೆ ಕೊಂಡೊಯ್ಯುತ್ತದೆ ಎಂಬ ಗಾಢ ನಂಬಿಕೆಯಿದೆ.

ಮಾನಸಿಕ ಶಾಂತಿ ಮತ್ತು ಸಂಪ್ರದಾಯದ ಗೌರವ:

ಈ ಆಚರಣೆಗಳು ಕೇವಲ ವಿಧಿವಿಧಾನಗಳಲ್ಲ, ಇವು ಅಗಲಿದ ಜೀವಕ್ಕೆ ನೀಡುವ ಅಂತಿಮ ಗೌರವ. ತಮ್ಮ ಪ್ರೀತಿಪಾತ್ರರಿಗೆ ಅಂತಿಮ ಕ್ಷಣದಲ್ಲಿ ಪವಿತ್ರವಾದದ್ದನ್ನು ನೀಡಿದೆವು ಎಂಬ ತೃಪ್ತಿ ಮೃತರ ಕುಟುಂಬಕ್ಕೆ ಮಾನಸಿಕ ಶಾಂತಿ ನೀಡುತ್ತದೆ. ಸಾವಿರಾರು ವರ್ಷಗಳಿಂದ ನಡೆದುಬಂದ ಈ ಸಂಪ್ರದಾಯಗಳು ನಮ್ಮ ಸಂಸ್ಕೃತಿಯಲ್ಲಿ ಸಾವನ್ನು ಒಂದು ಪವಿತ್ರ ಪರಿವರ್ತನೆಯಾಗಿ ಕಾಣುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದ ನಂ.1, ಏಷ್ಯಾದ ನಂ.2, ವಿಶ್ವದ ನಂ.3..! ಬಾಬರ್ ಐತಿಹಾಸಿಕ ಸಾಧನೆ

Source link

ದೇಶದ ಮಹಿಳೆಯರು ನಿಮ್ಮನ್ನೆಂದೂ ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ – Kannada News | Those who oppose the bill will not be spared by the women of India PM Modis warning to Opposition

ನವದೆಹಲಿ, ಏಪ್ರಿಲ್ 16: ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವವರನ್ನು ಭಾರತದ ಮಹಿಳೆಯರು ಖಂಡಿತ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. “ಒಬ್ಬ ಸ್ನೇಹಿತನಾಗಿ ಮಹಿಳಾ ಮಸೂದೆಯನ್ನು ವಿರೋಧಿಸುವವರಿಗೆ ನನ್ನ ಬಳಿ ಕೆಲವು ಸಲಹೆಗಳಿವೆ. ಯಾವುದೇ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಯಾರನ್ನೂ ಭಾರತದ ಮಹಿಳೆಯರು ಕ್ಷಮಿಸಿಲ್ಲ” ಎಂದು ಮೋದಿ ಹೇಳಿದ್ದಾರೆ.

2023ರಲ್ಲಿ ಮೊದಲು ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದರೆ ವಿಳಂಬವಾದ ಜನಗಣತಿ ಪ್ರಕ್ರಿಯೆಯಿಂದಾಗಿ ಜಾರಿಗೆ ತರಲಾಗಿಲ್ಲ. ಆದರೆ, 2011ರ ಜನಗಣತಿಯ ಆಧಾರದ ಮೇಲೆ ಈ ಮಸೂದೆಯನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವು ಈಗ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಮೀಸಲಾತಿ ಮಸೂದೆಗೆ ರಾಜಕೀಯದ ಬಣ್ಣ ಬಳಿಯಬೇಡಿ; ಸಂಸತ್​​ನಲ್ಲಿ ಪ್ರಧಾನಿ ಮೋದಿ ಭಾಷಣ – Kannada News | Parliament Special Session No Need To Give it Political Colour PM Modi says On Women’s Quota Bill

ನವದೆಹಲಿ, ಏಪ್ರಿಲ್ 16: ಮಹಿಳಾ ಮೀಸಲಾತಿ ಮಸೂದೆಯ (Women’s Reservation Bill) ಬಗ್ಗೆ ಇಂದಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಮಸೂದೆಯನ್ನು ಮಹಿಳಾ ಸಬಲೀಕರಣದ “ಐತಿಹಾಸಿಕ ಹೆಜ್ಜೆ” ಎಂದು ಬಣ್ಣಿಸಿದ್ದಾರೆ.’ಮಹಿಳಾ ಮೀಸಲಾತಿಗೆ ರಾಜಕೀಯದ ಬಣ್ಣ ಬಳಿಯುವ ಅಗತ್ಯವಿಲ್ಲ’ ಎಂದು ಹೇಳಿರುವ ಪ್ರಧಾನಿ ಮೋದಿ ಈ ಕಾಯ್ದೆಯನ್ನು 25-30 ವರ್ಷಗಳ ಹಿಂದೆಯೇ ಜಾರಿಗೊಳಿಸಬೇಕಿತ್ತು ಎಂದಿದ್ದಾರೆ.

ಸೀಮಾ ನಿರ್ಣಯ ಮಸೂದೆ ಮತ್ತು ಮಹಿಳಾ ಕೋಟಾ ಮಸೂದೆಯ ಕುರಿತು ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನು ಒಂದು ಪಕ್ಷವನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳನ್ನು ನಾನು ಭೇಟಿಯಾದೆ. ಯಾರೂ ಮಹಿಳಾ ಮೀಸಲಾತಿ ಮಸೂದೆಯನ್ನು ತಾತ್ವಿಕವಾಗಿ ವಿರೋಧಿಸಲಿಲ್ಲ. ಆದರೆ ಅದಾದ ನಂತರ ಒಂದು ರಾಜಕೀಯ ದೃಷ್ಟಿಕೋನವನ್ನು ಇಟ್ಟುಕೊಂಡು ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ನಾನು ಅಂತಹ ಜನರಿಗೆ ಸ್ನೇಹಿತನಂತೆ ಒಂದು ಸಲಹೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಒಟ್ಟಿಗೆ ಇದನ್ನು ಜಾರಿಗೊಳಿಸಿದರೆ ದೇಶಕ್ಕೆ ಮಾಡಿದ ಸೇವೆಗಾಗಿ ಇತಿಹಾಸವು ನಮ್ಮನ್ನು ನೆನಪಿಸಿಕೊಳ್ಳುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Women Reservation Bill: ಗದ್ದಲದ ನಡುವೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಾವು ಭಾರತೀಯರು ರಾಷ್ಟ್ರಕ್ಕೆ ಹೊಸ ದಿಕ್ಕು ನೀಡಲು ಒಗ್ಗೂಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ. ಈ ಅಭಿವೃದ್ಧಿಯ ಪ್ರಯಾಣದಲ್ಲಿ ಹೊಸ ಆಯಾಮವನ್ನು ಸೇರಿಸಲು ನಮಗೆ ಪವಿತ್ರವಾದ ಅವಕಾಶ ನೀಡಲಾಗಿದೆ. ರಾಷ್ಟ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯಾದ ಮಹಿಳೆಯರನ್ನು ಸೇರಿಸಿಕೊಳ್ಳುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ

“ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೆ, ಇದು ಎಲ್ಲರಿಗೂ, ಇಡೀ ರಾಷ್ಟ್ರಕ್ಕೆ ಸಾಮೂಹಿಕ ಯಶಸ್ಸು. ಇದು ಯಾವುದೇ ಒಂದು ಪಕ್ಷಕ್ಕೆ ಸಿಕ್ಕ ವಿಜಯವಾಗಿರುವುದಿಲ್ಲ. ಹೀಗಾಗಿ ಈ ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:38 pm, Thu, 16 April 26

Source link

SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಕೆಡವಿದ್ದ ಆರೋಪಿ ಅರೆಸ್ಟ್​​: ಸ್ನೇಹಿತರು ಜೈಲಿಗೆಹೋದರೆಂಬ ಸಿಟ್ಟಲ್ಲಿ ಅಪ್ರಾಪ್ತನಿಂದ ಕೃತ್ಯ – Kannada News | SSLC Student Sanketh’s Grave Vandalism: Minor Arrested in Shivamogga

ಸಂಕೇತ್ ಸಮಾಧಿ ಕೆಡವಿರುವುದುImage Credit source: Tv9 Kannada

ಶಿವಮೊಗ್ಗ, ಏಪ್ರಿಲ್​​ 16: ಜಗಳಬಿಡಿಸಲು ಹೋಗಿ ಅಪ್ರಾಪ್ತರಿಂದ ಭೀಕರವಾಗಿ ಕೊಲೆಯಾಗಿದ್ದ SSLC ವಿದ್ಯಾರ್ಥಿ ಸಂಕೇತ್​​ನ ಸಮಾಧಿ ಧ್ವಂಸಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಕೇತ್​​ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ಆರೋಪಿಗಳ ಅಪ್ರಾಪ್ತ ಸ್ನೇಹಿತನೇ ಈ ಕೃತ್ಯ ಎಸಗಿರೋದು ಬಯಲಾಗಿದ್ದು, ಮಾರ್ಚ್​​ 31ರಂದು ಸಂಕೇತ್​​ ಸಮಾಧಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಹಿನ್ನೆಲೆ ಆರೋಪಿ ಪತ್ತೆಗೆ ತೀವ್ರ ತನಿಖೆ ನಡೆಸಿದ್ದ ತುಂಗಾನಗರ ಪೋಲಿಸರು, ಹಲವು ಆಯಾಮಗಳಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದರು. ಅಂತಿಮವಾಗಿ ತ್ತಾಂತ್ರಿಕ ಆಧಾರದ ಹಿನ್ನೆಲೆಯಲ್ಲಿ ಸಮಾಧಿ ಕೆಡವಿದ್ದ ಅಪ್ರಾಪ್ತ ಆರೋಪಿಯನ್ನ ಬಂಧಿಸಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನಲೆಯಲ್ಲಿ ಶಿವಮೊಗ್ಗ ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ  ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿರೋದನ್ನು ಸಂಕೇತ್​​ ನೋಡಿದ್ದಾನೆ. ಹೀಗಾಗಿ ಗಿರೀಶ್​ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದ. ಆ ವೇಳೆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದ. ಕೂಡಲೇ ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದ. ಇದರಿಂದ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ಯತ್ನ ನಡೆಸಲಾಗಿತ್ತಾದರೂ ಮಾರ್ಗ ಮಧ್ಯೆಯೇ ಆತ ಪ್ರಾಣಬಿಟ್ಟಿದ್ದ. ಫೆ.23ರಂದು ಘಟನೆ ನಡೆದಿತ್ತು.

ಇದನ್ನೂ ಓದಿ: ಕೊಲೆಯಾದ SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು; ಪೋಷಕರಿಗೆ ಮತ್ತೆ ಆಘಾತ

ಮೃತ ಸಂಕೇತ್​​ನ ಅಂತ್ಯಕ್ರಿಯೆಯನ್ನು ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದ್ದ ಪೋಷಕರು, ಮಗನ ನೆನಪಿಗಾಗಿ ಮಾ.26ರಂದು ಸಮಾಧಿಯನ್ನು ನಿರ್ಮಿಸಿದ್ದರು. ಅದಾಗಿ ಕೆಲ ದಿನಗಳು ಕಳೆಯುವ ಒಳಗಾಗಿಯೇ ಸಂಕೇತ್​​ ಸಮಾಧಿಯನ್ನೂ ಧ್ವಂಸಗೊಳಿಸಲಾಗಿತ್ತು. ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಲ್ಲದೆ, ಗ್ರಾನೈಟ್​​ಗಳನ್ನು ಒಡೆದುಹಾಕಲಾಗಿತ್ತು. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆಗಿಳಿದ ಪೊಲೀಸು ಕೊನೆಗೂ ಆರೋಪಿ ಬಾಲಕನನ್ನು ಬಂದಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ಟಾರ್ ನಟರ ಅಂಗರಕ್ಷಕರಿಗೆ ಕೋಟಿಗಳಲ್ಲಿ ಸಿಗುವುದು ಸಂಬಳ ನಿಜವೇ? – Kannada News | How much salary did celebrities bodyguards receive

ಸಿನಿಮಾ (Cinema) ಸೆಲೆಬ್ರಿಟಿಗಳಿಗೆ ಭದ್ರತೆಯ ಅವಶ್ಯಕತೆ ಬಹಳ ಇರುತ್ತದೆ. ಕೆಲವು ಸಿನಿಮಾ ಸ್ಟಾರ್​​ಗಳಿಗೆ ಸರ್ಕಾರವೇ ಭದ್ರತೆ ಒದಗಿಸುತ್ತದೆಯಾದರೂ ಬಹುತೇಕ ಎಲ್ಲ ಸ್ಟಾರ್ ನಟ, ನಟಿಯರು ಖಾಸಗಿ ಭದ್ರತೆಯವರನ್ನು ಇರಿಸಿಕೊಂಡಿರುತ್ತಾರೆ. ದೈತ್ಯ ದೇಹಿಗಳಾದ ಇವರುಗಳಿಗೆ ಸ್ಟಾರ್​ ನಟ, ನಟಿಯರ ಅಂಗರಕ್ಷಣೆಯೇ ಕೆಲಸ. ಅಂದಹಾಗೆ ಈ ಅಂಗರಕ್ಷಕರಿಗೆ ಅಥವಾ ಬಾಡಿಗಾರ್ಡ್​​ಗಳಿಗೆ ಸಿಗುವ ಸಂಬಳ ಎಷ್ಟು ಗೊತ್ತೆ? ಶಾರುಖ್ ಖಾನ್ ಅವರ ಮಾಜಿ ಬಾಡಿಗಾರ್ಡ್ ಇದೀಗ ಈ ಬಗ್ಗೆ ಮಾತನಾಡಿದ್ದಾರೆ.

ಕೆಲವು ಸ್ಟಾರ್ ನಟರ ಅಂಗರಕ್ಷಕರು ಬಹಳ ಜನಪ್ರಿಯರು ಸಹ ಆಗಿಬಿಡುತ್ತಾರೆ. ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ, ಶಾರುಖ್ ಖಾನ್ ಅಂಗರಕ್ಷಕ ರವಿ, ಸುದೀಪ್ ಅವರ ಅಂಗರಕ್ಷಕನೂ ಸಾಕಷ್ಟು ಜನಪ್ರಿಯ. ಅಂದಹಾಗೆ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ವರ್ಷಕ್ಕೆ ಸುಮಾರು 2.50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಶಾರುಖ್ ಖಾನ್ ಅಂಗರಕ್ಷನಿಗೆ ವರ್ಷಕ್ಕೆ 3 ಕೋಟಿ ಸಂಬಳವಂತೆ ಹೀಗೆ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಇದೀಗ ಶಾರುಖ್ ಖಾನ್ ಅವರ ಮಾಜಿ ಭದ್ರತಾ ವ್ಯವಸ್ಥಾಪಕ ಯಾಸಿನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದ ಮಾಜಿ ಭದ್ರತಾ ವ್ಯವಸ್ಥಾಪಕ ಯಾಸಿನ್ ಖಾನ್, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಭದ್ರತೆಯವರಿಗೆ ವರ್ಷಕ್ಕೆ 3-4 ಕೋಟಿ ಸಂಬಳ ಕೊಡುವ ಸುದ್ದಿಗಳು ಬಹುತೇಕ ಸುಳ್ಳು. ಅವರವರ ಜವಾಬ್ದಾರಿಯ ಮಟ್ಟಕ್ಕೆ ಅನುಗುಣವಾಗಿ ಅವರಿಗೆ ಸಂಭಾವನೆ ನೀಡಲಾಗುತ್ತದೆ. ಬಹುತೇಕ ಅಂಗರಕ್ಷಕರಿಗೆ ತಿಂಗಳಿಗೆ 1 ಲಕ್ಷದಿಂದ ಎರಡು ಲಕ್ಷ ರೂಪಾಯಿ ಸಂಬಳ ಇರುತ್ತದೆ. ಶೂಟಿಂಗ್, ಪಬ್ಲಿಕ್ ಕಾರ್ಯಕ್ರಮಗಳಿಗೆ ಹೋದಾಗ ತುಸು ಹೆಚ್ಚು ಹಣ ಸಿಗಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ:ನಂಬಿಕೆ ದ್ರೋಹ ಮಾಡಿದರು: ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ

ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಮತ್ತು ಶಾರುಖ್ ಖಾನ್ ಅಂಗರಕ್ಷಕ ರವಿ ಸಿಂಗ್ ಅವರುಗಳಿಗೆ ಹೆಚ್ಚು ಸಂಭಾವನೆ ಸಿಗಬಹುದು, ಆದರೆ ಅವರಿಬ್ಬರು ಕೇವಲ ಉದ್ಯೋಗಿಗಳಾಗಿ ಉಳಿದಿಲ್ಲ, ಬದಲಿಗೆ ಆಯಾ ನಟರ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ದಶಕಗಳಿಂದ ಈ ನಟರ ನೆರಳಿನಂತೆ ಕೆಲಸ ಮಾಡುತ್ತಿರುವ ಇವರಿಗೆ ಸಿಗುವ ಗೌರವ ಮತ್ತು ಸೌಲಭ್ಯಗಳು ಅಗಾಧವಾಗಿರುತ್ತವೆ ಎಂದಿದ್ದಾರೆ ಯಾಸಿನ್.

ಸ್ಟಾರ್ ನಟರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಾವಿರಾರು ಜನ ಮುಗಿಬೀಳುತ್ತಾರೆ. ಅಂತಹ ಸಂದರ್ಭಗಳಲ್ಲಿ ನಟರ ಪ್ರಾಣ ರಕ್ಷಣೆ ಮಾಡುವುದು ಅತ್ಯಂತ ಕಠಿಣವಾದ ಕೆಲಸ. ಈ ಒತ್ತಡ ಮತ್ತು ಅಪಾಯವನ್ನು ಪರಿಗಣಿಸಿ ಅವರಿಗೆ ಈ ಮಟ್ಟದ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಶಾರುಖ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಅವರು ಬಾಲಿವುಡ್‌ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇವರು ಶಾರುಖ್ ಅವರ ಸಾರ್ವಜನಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಅವರ ವಿದೇಶಿ ಪ್ರವಾಸಗಳಲ್ಲೂ ಸದಾ ಜೊತೆಗಿರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Pisces Horoscope: ಏಪ್ರಿಲ್ ನಲ್ಲಿ ಮೀನ ರಾಶಿಯವರಿಗೆ ಈ ಉದ್ಯೋಗ ಲಾಭಪ್ರದವಾಗಿ ಬರಲಿದೆ – Kannada News | Pisces April 2026 Horoscope: Career Success, Finance Insights and Relationship Challenges

ಮೀನ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳು ಜೀವನದ ಹೊಸ ಪಾಠಗಳನ್ನು ಕಲಿಯುವ ಹಾಗೂ ತಾಳ್ಮೆಯನ್ನು ಪರೀಕ್ಷಿಸುವ ಕಾಲ. ನಿಮ್ಮ ರಾಶಿಯಲ್ಲಿಯೇ ನಾಲ್ಕು ಗ್ರಹರಿದ್ದು, ಅನಂತರ ಮೂರು ಅಶುಭ ಗ್ರಹಗಳ ಸಂಯೋಗವಿರಲಿದೆ. ಏನೇ ಅಂದುಕೊಂಡರೂ ಅದನ್ನು ಸಾಧಿಸಿ ತೋರಿಸುವುದು ಕಷ್ಟ. ಪೂರ್ವಾಭಾದ್ರ ನಕ್ಷತ್ರದವರು ಅಲ್ಪ ಮಟ್ಟಿನ ಕಷ್ಟವನ್ನೂ, ಉತ್ತರಾಭಾದ್ರ, ರೇವತಿ ನಕ್ಷತ್ರದವರು ಅಧಿಕ ನೋವನ್ನೂ ಅನುಭವಿಸಬೇಕಾಗುವುದು.

​ಸಂಗಾತಿಯ ಜೊತೆ ಸಂಬಂಧ:

ಸಂಗಾತಿಯೊಂದಿಗೆ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡಬಹುದು. ಅನಗತ್ಯ ವಾದಗಳು ದೂರವಿರಲಿ. ಪರಸ್ಪರ ನಂಬಿಕೆ ಮತ್ತು ಪ್ರೀತಿಯಿಂದ ಈ ತಿಂಗಳ ಸವಾಲುಗಳನ್ನು ಎದುರಿಸಬಹುದು. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಆರ್ಥಿಕತೆ, ಆದಾಯ ಮತ್ತು ಖರ್ಚು :

​ಆದಾಯದ ಮೂಲಗಳು ಚೆನ್ನಾಗಿದ್ದರೂ, ಹಣ ಉಳಿಸುವುದು ಸ್ವಲ್ಪ ಕಷ್ಟವಾಗಬಹುದು. ನಿರೀಕ್ಷಿತ ಮೂಲಗಳಿಂದ ಹಣ ಬರುವುದು ಕೊಂಚ ವಿಳಂಬವಾಗಬಹುದು. ಶುಭ ಕಾರ್ಯಗಳಿಗೆ ಅಥವಾ ಧಾರ್ಮಿಕ ಕೆಲಸಗಳಿಗೆ ಧನವ್ಯಯವಾಗುವ ಸಾಧ್ಯತೆ ಇದೆ. ಸುಮ್ಮನೆ ಭೋಗ ವಸ್ತುಗಳ ಮೇಲೆ ಹಣ ಚೆಲ್ಲಬೇಡಿ.

ಸಾಲದ ಪರಿಸ್ಥಿತಿ :

ಈ ತಿಂಗಳು ಹೊಸದಾಗಿ ದೊಡ್ಡ ಮೊತ್ತದ ಸಾಲಕ್ಕೆ ಕೈ ಹಾಕದಿರುವುದು ಉತ್ತಮ. ​ಹಳೆಯ ಸಾಲಗಳನ್ನು ಮರುಪಾವತಿಸಲು ಬೇಕಾದ ಯೋಜನೆಗಳನ್ನು ರೂಪಿಸಿ. ಸಾಲದ ವಿಚಾರದಲ್ಲಿ ಯಾರನ್ನೂ ಕು ನಂಬಬೇಡಿ.

ಉದ್ಯೋಗ ಮತ್ತು ವ್ಯಾಪಾರ :

​ಕೆಲಸದಲ್ಲಿ ನಿಮ್ಮ ನಿಷ್ಠೆಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವರ್ಗಾವಣೆಗೆ ಕಾಯುತ್ತಿದ್ದವರಿಗೆ ಶುಭ ಸೂಚನೆ ಬರಲಿದೆ. ನಿಮ್ಮ ಸರ್ಜನಾತ್ಮಕತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ. ಉದ್ಯಮಿಗಳಿಗೆ ಲಾಭದಾಯಕ ತಿಂಗಳು. ಹೊಸ ಹೂಡಿಕೆಗೆ ಇದು ಸಕಾಲವಾದರೂ, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ.

ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ :

ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಕಡಿಮೆ. ಆಲಸ್ಯ ಅಥವಾ ಕ್ರೀಡೆ, ಮನೋರಂಜನೆಯ ಕಡೆ ಒಲವು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮನ್ಯ ಯಶಸ್ಸು ಸಿಗಬ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ವೀಸಾ ಮತ್ತು ದಾಖಲಾತಿ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರಲಿದೆ.

ಸರ್ಕಾರಿ ಕಾರ್ಯಗಳು:

ದೀರ್ಘಕಾಲದಿಂದ ಮುಂದುವರಿಯದೇ ಒಂದೆಡೆಗೆ ಬಿದ್ದಿದ್ದ ಸರ್ಕಾರಿ ಕೆಲಸಗಳು ಹಾಗೂ ಭೂಮಿಗೆ ಸಂಬಂಧಿಸಿದ ದಾಖಲೆಗಳ ಕಾರ್ಯಗಳು ವೇಗ ಪಡೆಯುತ್ತವೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿರುವವರಿಗೆ ಗೌರವ ಪ್ರಾಪ್ತಿಯನ್ನು ನಿರೀಕ್ಷಿಸಬಹುದು.

ಕೃಷಿ ಮತ್ತು ಆದಾಯ:

​ಕೃಷಿಕರಿಗೆ ಈ ತಿಂಗಳು ಉತ್ತಮ ಫಲಿತಾಂಶ ಸಿಗಲಿದೆ. ಹೈನುಗಾರಿಕೆ ಅಥವಾ ತೋಟಗಾರಿಕೆಯಲ್ಲಿ ಲಾಭ ನಿರೀಕ್ಷಿಸಬಹುದು. ಭೂಮಿಯಲ್ಲಿ ಹೊಸ ಬೆಳೆ ಬೆಳೆಯಲು ಕೃಷಿ ಭೂಮಿ ಸಮೃದ್ಧವಾಗಿಸುವುದು ಉತ್ತಮ. ಭೂಮಿಯ ಫಲವತ್ತತೆ ಮತ್ತು ನೀರಾವರಿ ಬಗ್ಗೆ ಹೆಚ್ಚಿನ ಗಮನ ಹರಿಸಿ.

​ಈ ತಿಂಗಳು ನಿಮ್ಮ ರಾಶಿಯಲ್ಲಿ ಗ್ರಹಗತಿಗಳ ಬದಲಾವಣೆಯಿರುವುದರಿಂದ ಮಾನಸಿಕ ಶಾಂತಿಗಾಗಿ ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಕೇಳಿಸಿಕೊಳ್ಳಿ. ಗುರುವಾರದಂದು ಹಳದಿ ಬಣ್ಣದ ಆಹಾರವನ್ನು ಸೇವಿಸಿ ಅಥವಾ ದಾನ ಮಾಡಿ, ನೀವೂ ಧರಿಸಿ.

– ಲೋಹಿತ ಹೆಬ್ಬಾರ್

Published On – 3:44 pm, Thu, 16 April 26

Source link

ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ; ಸ್ಪಷ್ಟನೆ ಕೊಟ್ಟಿಲ್ಲವೇಕೆ ಮಲ್ಲಿಕಾರ್ಜುನ? – Kannada News | Darshan Manager Missing Case: The Mystery Behind Mallikarjun’s Silence

ಮಲ್ಲಿಕಾರ್ಜುನ ಅವರು ದರ್ಶನ್ ಮಾಜಿ ಮ್ಯಾನೇಜರ್ ಆಗಿದ್ದರು. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಸಿಕ್ಕಿ ಬೀಳುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅವರು ಕಾಣೆಯಾಗಿ ಹಲವು ವರ್ಷಗಳೇ ಕಳೆದಿದ್ದವು. ಇದರಲ್ಲಿ ದರ್ಶನ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದವು. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಆದರೆ, ಮಲ್ಲಿಕಾರ್ಜುನ ಅವರು ಮಾತ್ರ ಸ್ಪಷ್ಟನೆ ನೀಡಲು ಬರಲಿಲ್ಲ. ಹೀಗೆಕೆ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ಇದನ್ನು ಹೇಳಲು ಬರಬೇಕು ಎಂದಾಗ ಎದುರಾದ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

40 ನಿರ್ಮಾಪಕರು, 1000 ಸಭೆಗಳು: ಬಾಲಿವುಡ್​​ನಲ್ಲಿ ಹೀಗೊಂದು ಭಿನ್ನ ಪ್ರಯತ್ನ

ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ತಮ್ಮ ಹಳೆಯ ಕಳೆಯನ್ನು ಕಳೆದುಕೊಳ್ಳುತ್ತಿದೆ. ಆಗೊಂದು ಈಗೊಂದು ಹಿಟ್ ಬರುತ್ತಿವೆಯಾದರೂ ದಕ್ಷಿಣದ ಚಿತ್ರರಂಗಕ್ಕೆ ಹೋಲಿಸಿದರೆ, ಗೆಲುವಿನ ಸರಾಸರಿ ಕಡಿಮೆ. ಅಲ್ಲದೆ, ಬಾಲಿವುಡ್ ನಲ್ಲಿ ನೆಪೊಟಿಸಮ್ ಸಹ ಅತಿಯಾಗಿದ್ದು, ಹೊರಗಿನ ಪ್ರತಿಭಾವಂತರು ಬಾಲಿವುಡ್​ಗೆ ಕಾಲಿಡುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಇದೀಗ ಇದಕ್ಕೆಲ್ಲ ಇತಿಶ್ರೀ ಹಾಡಲು, ಬಾಲಿವುಡ್​​ನಲ್ಲಿ ಹೊಸದೊಂದು ಪ್ರಯೋಗ ಶುರುವಾಗಿದೆ.​​

ಬಾಲಿವುಡ್ ಚಿತ್ರರಂಗದ ಬಾಗಿಲು ಸದಾ ‘ಇನ್ಸೈಡರ್’ ಮಾತ್ರ ತೆರೆದಿರುತ್ತದೆ ಎನ್ನಲಾಗುತ್ತದೆ. ಇದನ್ನು ಸುಳ್ಳು ಮಾಡಲೆಂದು ಹಾಗೂ ಹೊಸ ರೀತಿಯ ಕತೆಗಾರರನ್ನು, ನಿರ್ದೇಶಕರನ್ನು ಹುಟ್ಟುಹಾಕಲು ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ (SWA) ಹಮ್ಮಿಕೊಂಡಿರುವ ಪ್ರಯತ್ನದಿಂದಾಗಿ, ಪ್ರತಿಭಾವಂತ ಕಥೆಗಾರರು ಮತ್ತು ಲೇಖಕರಿಗೆ ನೇರವಾಗಿ ದೊಡ್ಡ ನಿರ್ಮಾಣ ಸಂಸ್ಥೆಗಳನ್ನು ತಲುಪುವ ಅವಕಾಶ ಸಿಗುತ್ತದೆ.

ಮುಂಬೈನಲ್ಲಿ ನಡೆಯಲಿರುವ ಈ ಮೆಗಾ ಇವೆಂಟ್‌ನಲ್ಲಿ, ಬಾಲಿವುಡ್‌ನ ಸುಮಾರು 40 ಪ್ರಮುಖ ನಿರ್ಮಾಣ ಸಂಸ್ಥೆಗಳು ಭಾಗವಹಿಸಲಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಈ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹೊಸ ಲೇಖಕರ ನಡುವೆ 1,000ಕ್ಕೂ ಹೆಚ್ಚು ಮುಖಾಮುಖಿ ಸಭೆಗಳು ನಡೆಯುತ್ತವೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ‘ಕತೆ ಹೇಳುವಿಕೆ’ (ಸ್ಟೋರಿ ಪಿಚ್ಚಿಂಗ್) ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್

ಬಾಲಿವುಡ್‌ನಲ್ಲಿ ಗಾಡ್‌ಫಾದರ್ ಇಲ್ಲದ ಅಥವಾ ಯಾವುದೇ ಸಂಪರ್ಕವಿಲ್ಲದ ಲೇಖಕರಿಗೆ ತಮ್ಮ ಕಥೆಗಳನ್ನು ದೊಡ್ಡ ನಿರ್ಮಾಪಕರಿಗೆ ವಿವರಿಸಲು ಇದು ಸುವರ್ಣಾವಕಾಶವಾಗಿತ್ತು. ಧರ್ಮಾ ಪ್ರೊಡಕ್ಷನ್ಸ್‌, ಎಕ್ಸೆಲ್ ಎಂಟರ್ಟೈನ್‌ಮೆಂಟ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ಸಂಸ್ಥೆಗಳ ಕ್ರಿಯೇಟಿವ್ ಹೆಡ್‌ಗಳು ಈ ಸಭೆಗಳಲ್ಲಿ ಭಾಗವಹಿಸಿ ಹೊಸ ಕಥೆಗಳನ್ನು ಆಲಿಸಿದ್ದಾರೆ. ಲೇಖಕರಿಗೆ ತಮ್ಮ ಕಥೆಯನ್ನು ಹೇಳಲು ನಿಗದಿತ ಸಮಯವನ್ನು ನೀಡಲಾಗಿತ್ತು . ಇದರಿಂದ ಪ್ರತಿ ಲೇಖಕರಿಗೂ ಸಮಾನ ಅವಕಾಶ ಸಿಕ್ಕಿತು.

ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಕಥೆಗಳ ಬರ ಎದುರಾಗಿದೆ ಎಂಬ ದೂರಿನ ನಡುವೆ, ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ ಈ ಹೆಜ್ಜೆ ಇಟ್ಟಿದೆ. ಕಥೆ ಆಯ್ಕೆಯಲ್ಲಿ ಪಾರದರ್ಶಕತೆ ತರುವುದು.
ಚಿತ್ರರಂಗದ ಬೆನ್ನೆಲುಬಾದ ಲೇಖಕರಿಗೆ ಸಿಗಬೇಕಾದ ಮನ್ನಣೆ ಮತ್ತು ಸಂಭಾವನೆಯನ್ನು ಕೊಡಿಸುವುದು. ಕೇವಲ ಸ್ಟಾರ್ ನಟರ ಮೇಲೆ ಅವಲಂಬಿತವಾಗದೆ, ಗಟ್ಟಿಯಾದ ಕಥೆಗಳ ಮೇಲೆ ಸಿನಿಮಾ ಮಾಡುವ ಸಂಸ್ಕೃತಿಯನ್ನು ಬೆಳೆಸುವುದು ಈ ಎಕ್ಸ್ಪೋನ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ನಂತರ ಹಲವಾರು ಹೊಸ ಲೇಖಕರು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಚಿತ್ರರಂಗದ ಈ ಬದಲಾವಣೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಮತ್ತು ನವೀನ ಕಥೆಗಳು ಬೆಳ್ಳಿತೆರೆಯ ಮೇಲೆ ಬರಲು ಸಹಕಾರಿಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version