Panchamrutha: ವಿಷ್ಣು ಪೂಜೆಯಲ್ಲಿ ಪಂಚಾಮೃತದ ಮಹತ್ವವೇನು? ಇದನ್ನು ಸೇವಿಸುವಾಗ ಮಾಡಲೇಬಾರದ ತಪ್ಪುಗಳಿವು! – Kannada News | Panchamrutha in Vishnu Puja: Importance, Preparation and Mistakes to Avoid for Blessings

ಧಾರ್ಮಿಕ ಗ್ರಂಥಗಳು ಭಗವಾನ್ ವಿಷ್ಣುವನ್ನು ಬ್ರಹ್ಮಾಂಡದ ರಕ್ಷಕ ಮತ್ತು ಪಾಲಕ ಎಂದು ಬಣ್ಣಿಸುತ್ತವೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ವಿಷ್ಣು ಭೂಮಿಯ ಮೇಲೆ ಅನೇಕ ಅವತಾರಗಳನ್ನು ಎತ್ತಿದ್ದಾನೆ. ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನವೆಂದರೆ ಅದು ಏಕಾದಶಿ. ಏಕಾದಶಿಯ ದಿನದಂದು ಉಪವಾಸ ವ್ರತವನ್ನು ಆಚರಿಸಿ, ವಿಷ್ಣುವನ್ನು ಆರಾಧಿಸುವುದರಿಂದ ಮಾನವನಿಗೆ ಮೋಕ್ಷ ಸಿಗುತ್ತದೆ ಮತ್ತು ಮರಣಾನಂತರ ವೈಕುಂಠದಲ್ಲಿ ಸ್ಥಾನ ಲಭಿಸುತ್ತದೆ ಎಂಬುದು ಸನಾತನ ಧರ್ಮದ ಗಾಢ ನಂಬಿಕೆಯಾಗಿದೆ.

ಪೂಜೆಯ ಫಲ ನೀಡುವ ಪವಿತ್ರ ಪಂಚಾಮೃತ:

ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಧಾರ್ಮಿಕ ಆಚರಣೆ, ಹಬ್ಬ ಅಥವಾ ಪೂಜಾ ಸಮಾರಂಭಗಳು ಪಂಚಾಮೃತವನ್ನು ಅರ್ಪಿಸದೆ ಪೂರ್ಣಗೊಳ್ಳುವುದಿಲ್ಲ. ಪಂಚಾಮೃತವಿಲ್ಲದೆ ಮಾಡುವ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಪೂಜೆಯಿಂದ ಯಾವುದೇ ಸತ್ಫಲಗಳು ದೊರೆಯುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಸತ್ಯನಾರಾಯಣ ಸ್ವಾಮಿ ಪೂಜೆಯಿಂದ ಹಿಡಿದು ಶ್ರೀಕೃಷ್ಣನ ಆರಾಧನೆಯವರೆಗೆ ಮಹಾವಿಷ್ಣುವಿನ ಎಲ್ಲಾ ರೂಪಗಳ ಪೂಜೆಯಲ್ಲೂ ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಪಂಚಾಮೃತ ಎಂದರೇನು ಮತ್ತು ಅದನ್ನು ತಯಾರಿಸುವುದು ಹೇಗೆ?

ಪಂಚಾಮೃತ ಎಂದರೆ ಐದು ಅಮೃತ ಸದೃಶ್ಯ ಪದಾರ್ಥಗಳ ಪವಿತ್ರ ಮಿಶ್ರಣವಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಿರುವಂತೆ ಇದರ ತಯಾರಿಕೆಗೆ ಬಳಸುವ ಐದೂ ಪದಾರ್ಥಗಳು ಅತ್ಯಂತ ಮಂಗಳಕರವಾಗಿದ್ದು, ಪ್ರತಿಯೊಂದಕ್ಕೂ ವಿಶೇಷ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ. ಶುದ್ಧ ಹಸುವಿನ ಹಾಲು, ಮೊಸರು, ಹಸುವಿನ ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳೇ ಆ ಐದು ಪದಾರ್ಥಗಳು. ಈ ಎಲ್ಲಾ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಒಂದು ಶುದ್ಧವಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ ದೇವರಿಗೆ ಅರ್ಪಿಸಲು ನೈವೇದ್ಯವನ್ನು ಸಿದ್ಧಪಡಿಸಲಾಗುತ್ತದೆ.

ತುಳಸಿ ಎಲೆಯಿಲ್ಲದೆ ಅಪೂರ್ಣವಾಗುವ ನೈವೇದ್ಯ:

ವಿಷ್ಣು ಮತ್ತು ಅವನ ಅವತಾರಗಳಿಗೆ ಪಂಚಾಮೃತವನ್ನು ಅರ್ಪಿಸುವಾಗ ಅದಕ್ಕೆ ತುಳಸಿ ದಳವನ್ನು (ಎಲೆ) ಸೇರಿಸುವುದು ಕಡ್ಡಾಯವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಎಲೆಗಳಿಲ್ಲದೆ ಮಹಾವಿಷ್ಣುವು ಪಂಚಾಮೃತವನ್ನಾಗಲಿ ಅಥವಾ ಬೇರೆ ಯಾವುದೇ ನೈವೇದ್ಯವನ್ನಾಗಲಿ ಸ್ವೀಕರಿಸುವುದಿಲ್ಲ. ಇದರೊಂದಿಗೆ ಪಂಚಾಮೃತವನ್ನು ಎಂದಿಗೂ ಅವಮಾನಿಸಬಾರದು ಅಥವಾ ವ್ಯರ್ಥ ಮಾಡಬಾರದು. ದೇವರಿಗೆ ಅರ್ಪಿಸಿದ ಪಂಚಾಮೃತವನ್ನು ನಿಂದಿಸುವವರು ಅಥವಾ ಅಪವಿತ್ರಗೊಳಿಸುವವರು ತಮ್ಮ ಪುಣ್ಯವನ್ನು ನಾಶಪಡಿಸಿಕೊಂಡು, ಪಾಪದ ಭಾಗಿಗಳಾಗುತ್ತಾರೆ ಎಂದು ಧರ್ಮಗ್ರಂಥಗಳು ಎಚ್ಚರಿಸುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪಂಚಾಮೃತ ತಯಾರಿಕೆಯಲ್ಲಿ ಪಾಲಿಸಬೇಕಾದ ಕಠಿಣ ನಿಯಮಗಳು:

ಪಂಚಾಮೃತವನ್ನು ತಯಾರಿಸುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಇದನ್ನು ಯಾವಾಗಲೂ ಸೂರ್ಯಾಸ್ತದ ಮೊದಲು, ಅಂದರೆ ಹಗಲಿನ ವೇಳೆಯಲ್ಲೇ ತಯಾರಿಸಬೇಕು. ಇದರ ತಯಾರಿಕೆಗೆ ಕಡ್ಡಾಯವಾಗಿ ದೇಸಿ ಹಸುವಿನ ಹಾಲನ್ನು ಮಾತ್ರ ಬಳಸಬೇಕು, ಯಾವುದೇ ಕಾರಣಕ್ಕೂ ಎಮ್ಮೆ ಹಾಲು ಅಥವಾ ಪ್ಯಾಕೆಟ್ ಹಾಲನ್ನು ಬಳಸಬಾರದು. ಕೊನೆಯದಾಗಿ, ದೇವರಿಗೆ ನೈವೇದ್ಯ ಇಡುವ ಮುನ್ನ ಅದಕ್ಕೆ ಪವಿತ್ರವಾದ ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಸೇರಿಸುವುದನ್ನು ಮರೆಯಬಾರದು.

ಪಂಚಾಮೃತ ಸೇವಿಸುವಾಗ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

ದೇವಸ್ಥಾನಗಳಲ್ಲಿ ಅಥವಾ ಪೂಜೆಯ ನಂತರ ಪಂಚಾಮೃತ ಪ್ರಸಾದವನ್ನು ಸ್ವೀಕರಿಸುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಪಂಚಾಮೃತವನ್ನು ಯಾವಾಗಲೂ ಬಲಗೈ ಕೆಳಗೆ ಎಡಗೈಯನ್ನು ಇಟ್ಟು, ಎರಡೂ ಕೈಗಳಿಂದ ಗೌರವಪೂರ್ವಕವಾಗಿ ಸ್ವೀಕರಿಸಿ ಸೇವಿಸಬೇಕು. ಪ್ರಸಾದವನ್ನು ಕುಡಿಯುವಾಗ ಅದು ತಪ್ಪಾಗಿಯೂ ನೆಲದ ಮೇಲೆ ಚೆಲ್ಲಬಾರದು. ನೆಲದ ಮೇಲೆ ಚೆಲ್ಲುವುದು ದೇವರಿಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್: ಉದ್ಯೋಗಿಯ ಅದೃಷ್ಟಕ್ಕೆ ನೆಟ್ಟಿಗರು ಫಿದಾ! – Kannada News | Viral Video: Bengaluru Woman Attends Google Office Mango Festival, Netizens Envious

ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್Image Credit source: unfilteredgazal instagram account

ಬೆಂಗಳೂರು, ಜೂನ್ 13: ನಗರದಲ್ಲಿರುವ ಗೂಗಲ್ (Google) ಕಚೇರಿಯಲ್ಲಿ ನಡೆದ ವಿಶಿಷ್ಟ ‘ಮ್ಯಾಂಗೋ ಫೆಸ್ಟಿವಲ್’ (ಮಾವಿನಹಣ್ಣಿನ ಹಬ್ಬ) ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲಿನ ಉದ್ಯೋಗಿಯೊಬ್ಬರು ಫೆಸ್ಟಿವಲ್​ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನಾ ಬಗೆಯ ಮಾವಿನ ತಿನಿಸುಗಳನ್ನು ತೋರಿಸಿ ನೆಟ್ಟಿಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ನಡೆದ ಮಾವಿನಹಣ್ಣಿನ ಹಬ್ಬದ ವಿಡಿಯೋ ವೈರಲ್ ಆಗಿದೆ.
  • ಮಾವಿನಹಣ್ಣಿನ ವಿಧವಿಧದ ತಿನಿಸುಗಳನ್ನು ಸವಿಯಲು ಉದ್ಯೋಗಿ ಕಚೇರಿಗೆ ಭೇಟಿ ನೀಡಿದ್ದಾರೆ.
  • ಗೂಗಲ್ ವರ್ಕ್ ಕಲ್ಚರ್ ನೋಡಿ ತಮಗೂ ಕೆಲಸ ಬೇಕೆಂದು ನೆಟ್ಟಿಗರು ಬಯಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಯುವತಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಮಾವಿನ ಹಣ್ಣಿನ ಖಾದ್ಯಗಳನ್ನು ಸವಿಯಲೆಂದೇ ಸಂಜೆ 4 ಗಂಟೆಗೆ ಆಫೀಸ್ ತಲುಪಿದ ಆಕೆ, ಅಲ್ಲಿನ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಣ್ಮನ ಸೆಳೆಯುವ ಮಾವಿನ ತಿನಿಸುಗಳು

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾವಿನಹಣ್ಣಿನ ಪ್ರಿಯರಿಗೆ ಸ್ವರ್ಗವೇ ಸೃಷ್ಟಿಯಾದಂತಿತ್ತು. ದೊಡ್ಡ ದೊಡ್ಡ ಟ್ರೇಗಳಲ್ಲಿ ಜೋಡಿಸಿಟ್ಟ ವಿವಿಧ ತಳಿಯ ಮಾವಿನಹಣ್ಣುಗಳು, ಸುಂದರವಾದ ಮ್ಯಾಂಗೋ ಕೇಕ್, ಮ್ಯಾಂಗೋ ಟಾರ್ಟ್ಸ್ (Tarts), ಮಾವಿನಹಣ್ಣಿನ ಸ್ಲೈಸ್‌ಗಳು ಹಾಗೂ ಬಾಯಲ್ಲಿ ನೀರೂರಿಸುವ ಮ್ಯಾಂಗೋ ಶೇಕ್‌ಗಳು ಸೇರಿದಂತೆ ಮಾವಿನಹಣ್ಣಿನಿಂದ ಸಿದ್ಧಪಡಿಸಿದ ಹತ್ತಾರು ಬಗೆಯ ಭಕ್ಷ್ಯಗಳು ಈ ಹಬ್ಬದ ಆಕರ್ಷಣೆಯಾಗಿದ್ದವು.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗೂಗಲ್ ಕಚೇರಿಯ ಈ ಐಷಾರಾಮಿ ವರ್ಕ್‌ ಕಲ್ಚರ್ ಮತ್ತು ಸೌಲಭ್ಯಗಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ. ನನಗೂ ಗೂಗಲ್‌ನಲ್ಲಿ ಕೆಲಸ ಬೇಕು, ಅಲ್ಲಿಗೆ ಸೇರಲು ಹೇಗೆ ತಯಾರಿ ನಡೆಸಬೇಕು? ಎಂದು ಕೆಲವರು ಕೇಳಿದ್ದರೆ, “ನಾನು ಮಾವಿನಹಣ್ಣಿನ ದೊಡ್ಡ ಅಭಿಮಾನಿ, ಗೂಗಲ್ ಕಚೇರಿಯ ಈ ಸಂಭ್ರಮ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಚೇರಿಗಳಲ್ಲಿ ಇಂತಹ ಹಬ್ಬಗಳು ಉದ್ಯೋಗಿಗಳ ಉತ್ಸಾಹ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬರುತ್ತಿವೆ ಜಬರ್ದಸ್ಥ್ ಸಿನಿಮಾಗಳು, ಪಟ್ಟಿ ಇಲ್ಲಿದೆ

Source link

ಧರ್ಮಸ್ಥಳ ಬುರುಡೆ ಕೇಸ್‌: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್​ಐಟಿಗೆ ಗಿರೀಶ್ ಮಟ್ಟಣ್ಣನವರ್​​ ದೂರು – Kannada News | Dharmasthala Case: Girish Mattennavar Files SIT Complaint Against Chinnayya, Seeks Brain Mapping

ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ Image Credit source: tv9 kannada

ಮಂಗಳೂರು, ಜೂನ್​​ 07: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಮಾಸ್ಕ್​ಮ್ಯಾನ್ ಚಿನ್ನಯ್ಯ, ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ. 200 ಕೋಟಿ ರೂ ಫಂಡಿಂಗ್ ಮತ್ತು ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ರಿಟ್ ಅರ್ಜಿ  ಕೂಡ ಸಲ್ಲಿದ್ದಾನೆ. ಇದೀಗ ಗಿರೀಶ್ ಮಟ್ಟಣ್ಣನವರ್​​ (Girish Mattannavar), ಚಿನ್ನಯ್ಯ ಬ್ರೈನ್ ಮ್ಯಾಪಿಂಗ್​​ ಮತ್ತು ಆತ ಸಲ್ಲಿರುವ ರಿಟ್ ಅರ್ಜಿ ಮೇಲೆ ತನಿಖೆ ಮಾಡುವಂತೆ ಎಸ್​​ಐಟಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಚಿನ್ನಯ್ಯ ವಿರುದ್ಧ ಮಟ್ಟಣ್ಣನವರಿಂದ SITಗೆ ದೂರು
  • ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್​​​ಗೆ ಒತ್ತಾಯ
  • ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ ಎಂದ ಮಟ್ಟಣ್ಣನವರ್

ಧರ್ಮಸ್ಥಳ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಎಸ್​​ಐಟಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್ ಮತ್ತು ಯೂಟ್ಯೂಬರ್ ಅಭಿಷೇಕ್ ಚಿನ್ನಯ್ಯ ವಿರುದ್ಧ ದೂರು ನೀಡಿದ್ದಾರೆ.

ಚಿನ್ನಯ್ಯನ ಮೇಲೆ ದೂರು ನೀಡಿದ ಗಿರೀಶ್ ಮಟ್ಟಣ್ಣನವರ್

ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್​​ಐಟಿಗೆ ದೂರು ನೀಡಿರುವ ಗಿರೀಶ್ ಮಟ್ಟಣ್ಣನವರ್​​, ಚಿನ್ನಯ್ಯನ ಹೇಳಿಕೆ ಪ್ರಕಾರ ನಮ್ಮೆಲ್ಲರನ್ನು ತನಿಖೆಗೆ ಒಳಪಡಿಸಬೇಕು. ನನ್ನ ಬ್ರೈನ್ ಮ್ಯಾಪಿಂಗ್​​ನ್ನು ಲೈವ್​ನಲ್ಲಿ ಮಾಡಲಿ ಎಂದು ಹೇಳಿದ್ದಾರೆ. 200 ಕೋಟಿ ರೂ ಹಣದ ತನಿಖೆ ಸೇರಿದಂತೆ ಆತ ಸಲ್ಲಿಸಿರುವ ರಿಟ್ ಅರ್ಜಿ ಮೇಲೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಆತನ ಜಾಮೀನು ಅರ್ಜಿ ರದ್ದು ಮಾಡಲು ನ್ಯಾಯಾಲಯಕ್ಕೆ ಎಸ್​ಐಟಿ ಅರ್ಜಿ ಹಾಕಬೇಕು ಮತ್ತು ಚಿನ್ನಯ್ಯನಿಗೆ ಪೊಲೀಸ್ ಭದ್ರತೆ ನೀಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಿರೀಶ್ ಮಟ್ಟಣ್ಣನವರ್​ ಹೇಳಿದ್ದಿಷ್ಟು 

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯನ ಬೇಡಿಕೆಯಂತೆ ಚಂದ್ರಶೇಖರ್ ಸ್ವಾಮೀಜಿ ಬಳಿ ನಾವು ಹೋಗಿದ್ದು ನಿಜ. ಪಾಯಿಂಟ್ ತೋರಿಸುವಾಗ ಎಲ್ಲೆಲ್ಲೋ ಹೋಗುತ್ತಿದ್ದೇನೆ.‌ ಕಣ್ಣು ಮಂಜು ಮಂಜಾಗುತ್ತಿದೆ ಅಂತಾ ಚಿನ್ನಯ್ಯ ಹೇಳಿದ್ದ. ಹೀಗಾಗಿ ಮಾಟ, ಮಂತ್ರ ಸಂಬಂಧ ಚಂದ್ರಶೇಖರ ಸ್ವಾಮೀಜಿ ಬಳಿ ಹೋಗಿದ್ವಿ. ಅವರು ಯಾವ ಪೊಲೀಸರಿಗೂ ಶಿಫಾರಸ್ಸು ಮಾಡಿಲ್ಲ ಎಂದಿದ್ದಾರೆ.

ಪ್ರಕಾಶ್ ರಾಜ್ ಅವರೇ ಅದನ್ನು ಹೇಳುತ್ತಾರೆ‌

ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು,
ಪ್ರಕಾಶ್ ರಾಜ್ ಕರೆ ಮಾಡಿದ್ದ ವಿಚಾರ ನಾನು ಹೇಳಲ್ಲ. ಪ್ರಕಾಶ್ ರಾಜ್ ಅವರೇ ಅದನ್ನು ಹೇಳುತ್ತಾರೆ‌. ನೈತಿಕವಾಗಿ ಸಾಕಷ್ಟು ಜನ ಬೆಂಬಲ ಕೊಟ್ಟಿದ್ದಾರೆ ಎಂದರು.

ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ ಎಂದ ಮಟ್ಟಣ್ಣನವರ್

ಇನ್ನು ಚಿನ್ನಯ್ಯನಿಗೆ ಹಿಂಸೆ ಕೊಟ್ಟು ಕೈ-ಕಾಲು ಒತ್ತಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ. ಆತ ನಮ್ಮ ಜೊತೆ ಬಹಳ ಪ್ರೀತಿಯಿಂದ ಇದ್ದ. ನಾವು ಬೇಡ ಅಂದ್ರು ಕಾಲು ಒತ್ತುತ್ತಿದ್ದ. ನನಗೆ ಕಾಲು ನೋವಿದ್ದು ನನ್ನ ಪತ್ನಿ ಒಂದು ತೈಲ ಕೊಟ್ಟಿದ್ದರು. ಅದು ಚಿನ್ನಯ್ಯನಿಗೆ ಗೊತ್ತಿತ್ತು. ಆದ್ರಿಂದ ಆತನೇ ಹಿಂದೆ ಬಿದ್ದು ನನ್ನ ಕಾಲನ್ನು ಒತ್ತುತ್ತಿದ್ದ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು, ಸಹ ಪೈಲಟ್ ಪಾರು – Kannada News | 5 Air Force personnel killed co pilot survives in AN 32 aircraft crash in Assam’s Jorhat Air Base

ಜೋರ್ಹತ್, ಜೂನ್ 13: ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಇಂದು ಸಂಭವಿಸಿದ AN-32 ಸಾರಿಗೆ ವಿಮಾನ ಅಪಘಾತದಲ್ಲಿ ಭಾರತೀಯ ವಾಯುಪಡೆಯ (IAF) 5 ಜನ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. “ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ AN-32 ಸಾರಿಗೆ ವಿಮಾನದ ಅಪಘಾತದಲ್ಲಿ ಭಾರತೀಯ ವಾಯುಪಡೆಯ ಐವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದ ಸಹ-ಪೈಲಟ್ ಅದೃಷ್ಟವಶಾತ್ ಬದುಕುಳಿದಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ವಾಯುಪಡೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ವಾಯುಪಡೆಯು ‘ಕೋರ್ಟ್ ಆಫ್ ಇನ್‌ಕ್ವೈರಿ’ಗೆ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆಯ ವಿಮಾನವು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದ ಸ್ಥಳ ನಿರ್ವಹಣಾ ಸಿಬ್ಬಂದಿ ಈಗಾಗಲೇ ಘಟನಾ ಸ್ಥಳದಲ್ಲಿದ್ದು, ಪ್ರಾಥಮಿಕ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ.

ಈ ವಿಮಾನವು ಜೋರ್ಹತ್ ವಾಯುನೆಲೆಯಿಂದ ಟೇಕ್-ಆಫ್ ಆಗುವ ಸಂದರ್ಭದಲ್ಲಿ ಅಥವಾ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವಿಮಾನ ಪತನಗೊಂಡ ತಕ್ಷಣವೇ ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದ ಐವರು ಐಎಎಫ್ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಮಾನವು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಇಂಧನ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ವಿಮಾನದ ಬಹುತೇಕ ಭಾಗ ಸುಟ್ಟು ಭಸ್ಮವಾಗಿತ್ತು.

ಇದನ್ನೂ ಓದಿ: ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು

ಈ ದುರಂತದಲ್ಲಿ ಮೃತಪಟ್ಟ ವಾಯುಪಡೆಯ ಸಿಬ್ಬಂದಿಗಳನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರವಾಯು ಖೇಮಾರಾಮ್ ಕುಮಾವತ್ ಮತ್ತು ದಾನಿಶ್ ಆಲಂ ಎಂದು ಗುರುತಿಸಲಾಗಿದೆ. “ಭಾರತೀಯ ವಾಯುಪಡೆಯು ಮೃತರ ಕುಟುಂಬಸ್ಥರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ. ಈ ದುಃಖದ ಸಮಯದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಐಎಎಫ್ ತಿಳಿಸಿದೆ.

ಜೋರ್ಹತ್ ವಾಯುನೆಲೆಯಲ್ಲಿ ಸಂಭವಿಸಿದ ಅಪಘಾತದ ನಂತರದ ಪರಿಸ್ಥಿತಿಯನ್ನು ತೋರಿಸುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ದೃಶ್ಯಗಳಲ್ಲಿ ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಮೇಲೇಳುತ್ತಿರುವುದು ಕಂಡುಬಂದಿದ್ದು, ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ತುರ್ತು ಕಾರ್ಯಾಚರಣೆಯನ್ನು ಆರಂಭಿಸಿವೆ. ವರದಿಗಳ ಪ್ರಕಾರ, ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣ ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಟೇಕ್​ಆಫ್ ವೇಳೆ ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!

AN-32 ಎಂಬುದು ಸೋವಿಯತ್ ಒಕ್ಕೂಟದ (ರಷ್ಯಾ) ಕಾಲದ ಅವಳಿ-ಎಂಜಿನ್ ಹೊಂದಿರುವ ಟರ್ಬೊಪ್ರಾಪ್ ಸಾರಿಗೆ ವಿಮಾನವಾಗಿದ್ದು, ಇದು 1980ರ ದಶಕದಲ್ಲಿ ಭಾರತೀಯ ಸೇವೆಗೆ ಸೇರ್ಪಡೆಗೊಂಡಿತು. ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಈ ವಿಮಾನವನ್ನು ಸೈನಿಕರು, ಅಗತ್ಯ ಸಾಮಗ್ರಿಗಳು ಮತ್ತು ಮಿಲಿಟರಿ ಉಪಕರಣಗಳ ಸಾಗಣೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಈ ವಿಮಾನವು ಸುಮಾರು 40ರಿಂದ 50 ಪ್ರಯಾಣಿಕರನ್ನು ಅಥವಾ 7.5 ಟನ್‌ಗಳಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಾಯುಪಡೆಯು ಪ್ರಸ್ತುತ ಸುಮಾರು 105ರಷ್ಟು AN-32 ವಿಮಾನಗಳ ಉನ್ನತ ಫ್ಲೀಟ್ ಅನ್ನು ನಿರ್ವಹಿಸುತ್ತಿದ್ದು, ಅವುಗಳಲ್ಲಿ ಹಲವನ್ನು ಆಧುನೀಕರಿಸಲಾಗಿದೆ. ಸುಮಾರು 35 ವಿಮಾನಗಳನ್ನು ಉಕ್ರೇನ್ ಮೂಲದ ‘ಉಕ್ರ್‌ಸ್ಪೆಟ್ಸ್‌ಎಕ್ಸ್‌ಪೋರ್ಟ್’ ಸಂಸ್ಥೆಯು ಮೇಲ್ದರ್ಜೆಗೆ ಏರಿಸಿದ್ದರೆ, ಉಳಿದ ವಿಮಾನಗಳ ಆಧುನೀಕರಣ ಕಾರ್ಯವನ್ನು ಭಾರತದಲ್ಲೇ ಸ್ವದೇಶಿಯಾಗಿ ಕೈಗೊಳ್ಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:18 pm, Sat, 13 June 26

Source link

Women’s T20 World Cup: ಭಾರತ- ಪಾಕ್ ನಡುವೆ ಫೈಟ್; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Pakistan Women’s T20 World Cup 2026: Match Preview, Date, Time and Live Stream

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌, ಶ್ರೀಲಂಕಾ ತಂಡವನ್ನು 87 ರನ್​​ಗಳಿಂದ ಮಣಿಸಿ ಗೆಲುವಿನ ಶುಭಾರಂಭ ಮಾಡಿದೆ. ಇದೀಗ ಈ ಪಂದ್ಯಾವಳಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನದ ನಡುವೆ ಭಾನುವಾರದಂದು ಅಂದರೆ ಜೂನ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಕಲ ತಯಾರಿ ಮಾಡಿಕೊಂಡಿವೆ. ಈ ಲೀಗ್​ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸುವ ಇರಾದೆಯಲ್ಲಿವೆ. ಟೀಂ ಇಂಡಿಯಾಕ್ಕೆ ಹೋಲಿಸಿಕೊಂಡರೆ, ಪಾಕಿಸ್ತಾನ ಅಷ್ಟು ಬಲಿಷ್ಠವಾಗಿರದ ಕಾರಣ, ಈ ಪಂದ್ಯದಲ್ಲಿ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಂದಿಗೂ ಟಿ20 ಸರಣಿಯನ್ನು ಆಡಿಲ್ಲ. ಆದರೆ ಈ ಎರಡೂ ತಂಡಗಳು ಐಸಿಸಿ ಟೂರ್ನಿಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್ ಅಥವಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿಯವರೆಗೆ, ಈ ಎರಡೂ ತಂಡಗಳು 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.

ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ

ಇಲ್ಲಿಯವರೆಗೆ, ಟಿ20 ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳ ನಡುವೆ 8 ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈಗ, ಈ ಎರಡೂ ತಂಡಗಳು ಒಂಬತ್ತನೇ ಬಾರಿಗೆ ಮುಖಾಮುಖಿಯಾಗಲಿವೆ. ಕೊನೆಯ ಬಾರಿಗೆ ಎರಡೂ ತಂಡಗಳು 2024 ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು.

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಜೂನ್ 14 ರಂದು ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಉಭಯ ತಂಡಗಳು

ಭಾರತ ಟಿ20 ವಿಶ್ವಕಪ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.

ಪಾಕಿಸ್ತಾನ ಟಿ20 ವಿಶ್ವಕಪ್ ತಂಡ: ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯೇಶಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಸೈರಾ ಜಬೀನ್, ಮುನೀಬಾ ಅಲಿ, ತುಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Diamond Astrology: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ! – Kannada News | Diamond Astrology: Guide to Wearing Vajra for Prosperity and Precautions

ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
Image Credit source: Pinterest

ನವರತ್ನಗಳಲ್ಲಿ ವಜ್ರಕ್ಕೆ ಅತ್ಯಂತ ಮೌಲ್ಯಯುತ ಹಾಗೂ ವಿಶೇಷ ಸ್ಥಾನವಿದೆ. ತನ್ನ ಅಪ್ರತಿಮ ಹೊಳಪಿನಿಂದಲೇ ಜಗತ್ತನ್ನೇ ಆಕರ್ಷಿಸುವ ವಜ್ರವು ಕೇವಲ ಆಭರಣವಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಅತ್ಯಂತ ಶಕ್ತಿಶಾಲಿ ರತ್ನವಾಗಿದೆ. ವಜ್ರವನ್ನು ಸುಖ, ಸಮೃದ್ಧಿ, ಸೌಂದರ್ಯ ಮತ್ತು ಐಷಾರಾಮಿ ಜೀವನದ ಅಧಿಪತಿಯಾದ ಶುಕ್ರ ಗ್ರಹದ ರತ್ನವೆಂದು ಪರಿಗಣಿಸಲಾಗುತ್ತದೆ. ವಜ್ರದ ಉಂಗುರ ಅಥವಾ ಆಭರಣಗಳನ್ನು ಧರಿಸುವುದರಿಂದ ಜೀವನದಲ್ಲಿ ಆಕರ್ಷಣೆ ಹೆಚ್ಚುತ್ತದೆ ಮತ್ತು ಆರ್ಥಿಕ ಪ್ರಗತಿಯಾಗುತ್ತದೆ ಎಂಬ ನಂಬಿಕೆಯಿದೆ.

ಸರಿಯಾದ ಜ್ಞಾನವಿಲ್ಲದೆ ವಜ್ರ ಧರಿಸಬೇಡಿ:

ವಜ್ರಗಳು ಮನುಷ್ಯನ ವೈವಾಹಿಕ ಜೀವನ ಮತ್ತು ಭೌತಿಕ ಸುಖಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಶುಕ್ರ ಗ್ರಹದ ಶುಭ ದೃಷ್ಟಿಯಿಂದ ಲಾಭ ಪಡೆಯಲು ಮತ್ತು ನಿಮ್ಮ ಜೀವನದ ಸೌಂದರ್ಯವನ್ನು ಹೆಚ್ಚಿಸಲು ವಜ್ರಗಳು ಅದ್ಭುತವಾದ ರತ್ನವಾಗಿದೆ. ಆದಾಗ್ಯೂ, ಜ್ಯೋತಿಷ್ಯದ ಸರಿಯಾದ ಜ್ಞಾನವಿಲ್ಲದೆ ಕೇವಲ ಫ್ಯಾಶನ್‌ಗಾಗಿ ವಜ್ರವನ್ನು ಧರಿಸುವುದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸರಿಯಾದ ಮಾಹಿತಿಯಿಲ್ಲದೆ ವಜ್ರ ಧರಿಸಿದರೆ ಅದು ಶಾಪವಾಗಿ ಪರಿಣಮಿಸಿ, ಜೀವನದಲ್ಲಿ ದೊಡ್ಡ ಮಟ್ಟದ ಹಾನಿಯನ್ನುಂಟುಮಾಡಬಹುದು.

ಈ 5 ರಾಶಿಯವರು ವಜ್ರವನ್ನು ಧರಿಸಲೇಬಾರದು:

ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಕೆಲವು ರಾಶಿಗಳ ಅಧಿಪತಿಗಳಿಗೂ ಮತ್ತು ಶುಕ್ರ ಗ್ರಹಕ್ಕೂ ಶತ್ರುತ್ವ ಇರುತ್ತದೆ. ಹಾಗಾಗಿ, ಮೇಷ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ವಜ್ರವನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಈ ರಾಶಿಗಳ ಜಾತಕದವರಿಗೆ ವಜ್ರ ಧರಿಸುವುದು ನಕಾರಾತ್ಮಕ ಫಲಗಳನ್ನು ನೀಡಬಹುದು. ಇದರೊಂದಿಗೆ, ಭೌತಿಕ ಸುಖಗಳನ್ನು ತ್ಯಜಿಸಿ ಆಧ್ಯಾತ್ಮಿಕ ಉನ್ನತಿ ಅಥವಾ ಮೋಕ್ಷವನ್ನು ಬಯಸುವವರು ಸಹ ವಜ್ರಗಳನ್ನು ಧರಿಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ವಜ್ರ ಧರಿಸುವುದರಿಂದ ಯಾರಿಗೆ ಅದೃಷ್ಟ ಒಲಿಯಲಿದೆ?

ಕೆಲವು ರಾಶಿಗಳಿಗೆ ಶುಕ್ರನು ಯೋಗಕಾರಕನಾಗಿರುತ್ತಾನೆ. ಜ್ಯೋತಿಷ್ಯದ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ವಜ್ರ ಧರಿಸುವುದು ಅತ್ಯಂತ ಶುಭ ಮತ್ತು ಲಾಭದಾಯಕ ಎಂದು ಪರಿಗಣಿಸಲಾಗಿದೆ. ಇನ್ನು ಕರ್ಕಾಟಕ ರಾಶಿಯವರಿಗೂ ಸಹ ಕೆಲವು ವಿಶೇಷ ಜಾತಕದ ಪರಿಸ್ಥಿತಿಗಳಲ್ಲಿ ವಜ್ರ ಧರಿಸುವುದರಿಂದ ಲಾಭವಾಗುತ್ತದೆ. ಮುಖ್ಯವಾಗಿ ಗ್ಲಾಮರ್, ಚಿತ್ರರಂಗ, ಫ್ಯಾಶನ್ ಡಿಸೈನಿಂಗ್, ಸಂಗೀತ ಅಥವಾ ಮಾಧ್ಯಮ (Media) ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವವರಿಗೆ ವಜ್ರವು ವೃತ್ತಿಜೀವನದಲ್ಲಿ ಭಾರಿ ಯಶಸ್ಸನ್ನು ತಂದುಕೊಡುತ್ತದೆ.

ವಜ್ರ ಧರಿಸುವಾಗ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

ವಜ್ರವು ಎಷ್ಟು ವೇಗವಾಗಿ ಧನ ಲಾಭವನ್ನು ನೀಡುತ್ತದೆಯೋ, ಅಷ್ಟೇ ವೇಗವಾಗಿ ನಕಾರಾತ್ಮಕ ಪರಿಣಾಮವನ್ನೂ ಬೀರಬಲ್ಲದು. ಆದ್ದರಿಂದ ಕೇವಲ ಪ್ರದರ್ಶನಕ್ಕಾಗಿ ಅಥವಾ ಫ್ಯಾಶನ್‌ಗಾಗಿ ಪರಿಣಿತ ಜ್ಯೋತಿಷಿಗಳ ಸಲಹೆ ಪಡೆಯದೆ ವಜ್ರವನ್ನು ಧರಿಸಬೇಡಿ. ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನವನ್ನು ನೋಡಿಕೊಂಡೇ ರತ್ನ ಧರಿಸಬೇಕು. ಇನ್ನು ಸಾಮಾನ್ಯವಾಗಿ 21 ವರ್ಷದ ನಂತರ ಮತ್ತು 50 ವರ್ಷಗಳ ಒಳಗೆ ವಜ್ರವನ್ನು ಧರಿಸಲು ಅತ್ಯುತ್ತಮ ವಯಸ್ಸು ಎಂದು ಪರಿಗಣಿಸಲಾಗುತ್ತದೆ.

ನಿಮ್ಮ ವೈವಾಹಿಕ ಜೀವನದಲ್ಲಿ ಈಗಾಗಲೇ ಭಿನ್ನಾಭಿಪ್ರಾಯ ಅಥವಾ ಸಮಸ್ಯೆಗಳು ನಡೆಯುತ್ತಿದ್ದರೆ, ಜ್ಯೋತಿಷಿಗಳ ಸಲಹೆಯಿಲ್ಲದೆ ವಜ್ರ ಧರಿಸುವುದನ್ನು ತಪ್ಪಿಸಿ. ಕೊನೆಯದಾಗಿ, ಯಾವುದೇ ಕಲೆ ಇರುವ, ಬಿರುಕು ಬಿಟ್ಟ ಅಥವಾ ಮುರಿದ ವಜ್ರವನ್ನು ಎಂದಿಗೂ ಧರಿಸಬೇಡಿ. ಇದು ಸಮಾಜದಲ್ಲಿ ಅಪಖ್ಯಾತಿ, ನಷ್ಟ ಅಥವಾ ಅಪಘಾತಗಳಿಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಿಗ್ ಬಾಸ್​​ನಿಂದ ಒಂದು ರೂಪಾಯಿಯೂ ಸಿಗಲಿಲ್ಲ’; ವಂಚನೆ ಬಗ್ಗೆ ಅಬ್ದು ರೋಜಿಕ್ ಮಾತು – Kannada News | Abdu Rozik’s Shocking Bigg Boss Truth: No Payment, Management Cheated Me

ಬಿಗ್ ಬಾಸ್​​ಗೆ ತೆರಳುವ ಮೂಲಕ ಅಬ್ದು ರೋಜಿಕ್ ಅವರಿಗೆ (Abdu Rozik) ಭಾರತದಲ್ಲೂ ಸಾಕಷ್ಟು ಫ್ಯಾನ್ಸ್ ಸಿಕ್ಕರು. ಸಲ್ಮಾನ್ ಖಾನ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಆದರೆ, ಈಗ ಅವರು ಬಿಗ್ ಬಾಸ್ ಅಲ್ಲಿ ನಡೆದ ಒಂದು ಶಾಕಿಂಗ್ ವಿಷಯ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ತಮಗೆ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದಿರುವ ಅವರು ತಮ್ಮ ಹಳೆಯ ಮ್ಯಾನೇಜ್‌ಮೆಂಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಅಬ್ದು ರೋಜಿಕ್, ‘ಈ ಜಗತ್ತಿನಲ್ಲಿ ಜನರಿಗೆ ನಿಮ್ಮ ಬಗ್ಗೆ ನಿಜವಾದ ಕಾಳಜಿ ಇರುವುದಿಲ್ಲ. ನಾನು ನನ್ನ ತಂಡದ ಜೊತೆ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡಿದ್ದು ನಿಜ. ಆದರೆ ನಾನು ಮಾಡಿದ ಶೋಗಳಿಂದ ಬಂದ ಹಣವನ್ನೆಲ್ಲಾ ಅವರೇ ಜೇಬಿಗೆ ಇಳಿಸಿಕೊಂಡರು. ನಿಮಗೆ ಆಶ್ಚರ್ಯ ಎನಿಸಬಹುದು, ಬಿಗ್ ಬಾಸ್ ಶೋನಿಂದ ನನಗೆ ಒಂದೇ ಒಂದು ಡಾಲರ್ ಹಣವೂ ಸಿಕ್ಕಿಲ್ಲ. ಅವರು ನನಗೆ ವಂಚಿಸಿದರು. ನನ್ನ ಇಡೀ ಸಂಪಾದನೆಯನ್ನು ಲೂಟಿ ಮಾಡಿದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕ್ಯಾಮೆರಾ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ಅಬ್ದು ಅವರ ಅಸಲಿ ಜೀವನ ತೀರಾ ಭಿನ್ನವಾಗಿದೆ. ‘ಜನರು ನನ್ನ ಪ್ರಸಿದ್ಧಿಯನ್ನು ನೋಡಿ ನಾನು ಕೋಟ್ಯಧಿಪತಿ ಇರಬಹುದು ಅಂದುಕೊಳ್ಳುತ್ತಾರೆ. ಆದರೆ ನನ್ನ ಹೆಗಲ ಮೇಲೆ ನಾನು ಎಂತಹ ನೋವಿನ ಹೊರೆಯನ್ನು ಹೊತ್ತಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ಕ್ಯಾಮೆರಾ ಮುಂದೆ ನಾನು ನಗುತ್ತಾ, ಎಲ್ಲರ ಜೊತೆ ಫೋಟೋ ತೆಗೆಸಿಕೊಳ್ಳುತ್ತೇನೆ. ಆದರೆ ಮನೆಗೆ ಹೋದಾಗ ಮಾನಸಿಕ ಒತ್ತಡ ಮತ್ತು ಸಾಲು ಸಾಲು ಸಮಸ್ಯೆಗಳು ನನ್ನನ್ನು ಕಾಡುತ್ತವೆ. ಜನರ ದೃಷ್ಟಿಯಲ್ಲಿ ನಾನು ಶ್ರೀಮಂತ, ಆದರೆ ಸತ್ಯ ಏನೆಂದರೆ ನನ್ನ ಬಳಿ ಇವತ್ತಿಗೂ ಒಂದು ಸ್ವಂತ ಕಾರಾಗಲಿ ಅಥವಾ ಸ್ವಂತ ಮನೆಯಾಗಲಿ ಇಲ್ಲ’ ಎಂದು ಅಬ್ದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ದುಬೈನಲ್ಲಿ ಅರೆಸ್ಟ್; ಹಣ ಇದ್ರೂ ಹೀಗಾ ಮಾಡೋದು?

‘ನನ್ನ ಹೈಟ್ ನೋಡಿ ಜನ ನನ್ನನ್ನು ಕೀಳಾಗಿ ಕಾಣುತ್ತಾರೆ. ಇವನಿಗೆ ಏನೂ ತಿಳಿಯುವುದಿಲ್ಲ, ಸುಲಭವಾಗಿ ಮೂರ್ಖನನ್ನಾಗಿ ಮಾಡಬಹುದು ಎಂದುಕೊಳ್ಳುತ್ತಾರೆ. ನಾನು ಎಲ್ಲೇ ಕೆಲಸಕ್ಕೆ ಹೋದರೂ ಜನ ನನ್ನೊಂದಿಗೆ ನೇರವಾಗಿ ಮಾತನಾಡುವುದಿಲ್ಲ, ನನ್ನ ಮ್ಯಾನೇಜ್‌ಮೆಂಟ್ ಜೊತೆಯೇ ಮಾತನಾಡುತ್ತಾರೆ. ಆದರೆ ನನಗೆ ಎಲ್ಲವೂ ಅರ್ಥವಾಗುತ್ತದೆ. ನಾನು ಎಲ್ಲರಲ್ಲೂ ಕೇಳಿಕೊಳ್ಳುವುದು ಇಷ್ಟೇ, ದಯವಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ, ನನಗೆ ಮೋಸ ಮಾಡಬೇಡಿ’ ಎಂದು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೂಫಾನ್ ಸೆಂಚುರಿ… ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ ಶುರು! – Kannada News | Vaibhav Sooryavanshi’s Brother Aashirwad Smashes Century

ಪ್ರತಿಭೆ ಎಂಬುದು ರಕ್ತದಲ್ಲೇ ಹರಿದುಬರುತ್ತದೆ ಎಂಬುದಕ್ಕೆ ಸೂರ್ಯವಂಶಿ ಕುಟುಂಬವೇ ಸಾಕ್ಷಿ. ಅಣ್ಣ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಭಾರತ ತಂಡಕ್ಕೆ ಆಯ್ಕೆಯಾಗಿದ್ದರೆ, ಅತ್ತ 10 ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ ಬ್ಯಾಟ್ ಹಿಡಿದು ಅಬ್ಬರಿಸಲಾರಂಭಿಸಿದ್ದಾನೆ. ಅದು ಸಹ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

87 ಎಸೆತಗಳಲ್ಲಿ 103 ರನ್!

ಬಿಹಾರದ ಸಮಷ್ಟಿಪುರದ ‘ಕ್ರಿಕೆಟ್ ಅಕಾಡೆಮಿ ತಾಜ್‌ಪುರ್’ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಬಲಗೈ ಬ್ಯಾಟರ್ ಆಶೀರ್ವಾದ್ ಸೂರ್ಯವಂಶಿ , ಎದುರಾಳಿ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದಾರೆ.

ಕೇವಲ 87 ಎಸೆತಗಳನ್ನು ಎದುರಿಸಿದ ಆಶೀರ್ವಾದ್ 20 ಫೋರ್​ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 103 ರನ್ ಸಿಡಿಸಿದ್ದಾರೆ. ಅಂದರೆ, ಕೇವಲ ಬೌಂಡರಿಗಳ ಮೂಲಕವೇ 86 ರನ್ ಕಲೆಹಾಕಿದ್ದು ಇವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿದೆ.

ಆಶೀರ್ವಾದ್ ಅವರ ಈ ಸ್ಫೋಟಕ ಇನಿಂಗ್ಸ್ ನೆರವಿನಿಂದ ‘ಕ್ರಿಕೆಟ್ ಅಕಾಡೆಮಿ ತಾಜ್‌ಪುರ್’ ತಂಡ 29.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು.

ಅಣ್ಣನಿಂದ ಜೈಕಾರ, ತಂದೆಯ ಹೆಮ್ಮೆ:

ಪ್ರಸ್ತುತ ಭಾರತ ‘ಎ’ ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ ಹಿರಿಯ ಸಹೋದರ ವೈಭವ್ ಸೂರ್ಯವಂಶಿ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪಂದ್ಯದ ಸ್ಕೋರ್ ಕಾರ್ಡ್ ಹಂಚಿಕೊಂಡು “ಕಂಗ್ರಾಜುಲೇಷನ್ಸ್ ಆಶೀರ್ವಾದ್” ಎಂದು ಸಹೋದರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಇಬ್ಬರು ಗಂಡು ಮಕ್ಕಳ ಯಶಸ್ಸಿನ ಹಿಂದೆ ಶ್ರಮಿಸಿರುವ ತಂದೆ ಹಾಗೂ ಕೋಚ್ ಸಂಜೀವ್ ಸೂರ್ಯವಂಶಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

“ಸದ್ಯ ನನ್ನ ಸಂಪೂರ್ಣ ಗಮನ ಹಿರಿಯ ಮಗ ವೈಭವ್ ಮೇಲಿದೆ. ಆದರೆ ಆಶೀರ್ವಾದ್ ಕೂಡ ಅತ್ಯಂತ ಕಠಿಣ ಪರಿಶ್ರಮ ಪಡುತ್ತಿದ್ದಾನೆ. ಮುಂದಿನ ಎರಡು ವರ್ಷಗಳಲ್ಲಿ ಆತನನ್ನು ಉನ್ನತ ಮಟ್ಟದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಿದ್ಧಪಡಿಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಜೋರ್ಡನ್ ಕಾಕ್ಸ್​

ಕ್ರಿಕೆಟ್ ಜಗತ್ತಿನ ಹೊಸ ಆಶಾಕಿರಣಗಳು:

ಐಪಿಎಲ್ 2026 ರಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದು, ಸದ್ಯ ಹಿರಿಯರ ಭಾರತ ತಂಡಕ್ಕೂ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಅವರ ಹಾದಿಯಲ್ಲೇ ಈಗ ಆಶೀರ್ವಾದ್ ಕೂಡ ಹೆಜ್ಜೆ ಇಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸೂರ್ಯವಂಶಿ ಸಹೋದರರ ಈ ಜೋಡಿ ಮುಂಬರುವ ದಿನಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Source link

ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!

ಧಾರವಾಡ, ಜೂನ್ 13: ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಮೇಲೆ ಭೀಕರ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದಿದ್ದಾರೆ. ಸೆಲ್‌ನಿಂದ ಹೊರಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ತನಿಖೆ ಎದುರಿಸುತ್ತಿರುವ ಆರೋಪಿ (A1) ಮೊಹಮ್ಮದ್ ಖಾಸಿಫ್ ಮತ್ತು ರೆಹಾನ್ ಶರೀಫ್ (A4), ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಾಳು ವಾರ್ಡನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೈದಿಗಳ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪುಂಡಾಟಿಕೆಗೆ ಜೈಲರ್ ಕಠಿಣ ಶಿಕ್ಷೆ ವಿಧಿಸಿದ್ದು, ಮುಂದಿನ ಒಂದು ತಿಂಗಳು ಕುಟುಂಬದವರ ಭೇಟಿಗೆ ನಿಷೇಧ ಹೇರಿದ್ದಾರೆ. ಪರಿಣಾಮ, ಶಿವಮೊಗ್ಗದಿಂದ ಕೈದಿಗಳನ್ನು ನೋಡಲು ಬಂದಿದ್ದ ಕುಟುಂಬಸ್ಥರು ಜೈಲಿನಿಂದ ಬರಿಗೈಲಿ ವಾಪಸ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version