ತಂಡ ಬದಲಿಸುವಂತೆ ಫಿನ್ ಅಲೆನ್​ಗೆ 3.37 ಕೋಟಿ ರೂ. ಆಫರ್! – Kannada News | KKR Star Finn Allen Set for Record Breaking BBL Deal

ನ್ಯೂಝಿಲೆಂಡ್ ತಂಡದ ಸ್ಫೋಟಕ ದಾಂಡಿಗ ಫಿನ್ ಅಲೆನ್ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಸೀಸನ್‌ಗಾಗಿ ವಿವಿಧ ಫ್ರಾಂಚೈಸಿಗಳು ಅಲೆನ್ ಅವರಿಗೆ ಬರೋಬ್ಬರಿ 6,00,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 3.37 ಕೋಟಿ ರೂಪಾಯಿ) ಆಫರ್ ನೀಡಿದೆ.

ಕಳೆದ ಸೀಸನ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲೆನ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪರ್ತ್ ಸ್ಕಾರ್ಚರ್ಸ್ ಫ್ರಾಂಚೈಸಿ ಹರಸಾಹಸ ಪಡುತ್ತಿದೆ. ಏಕೆಂದರೆ ಅಲೆನ್​ಗಾಗಿ ಪ್ರಮುಖ ಫ್ರಾಂಚೈಸಿಗಳು ತೆರೆಮರೆಯಲ್ಲೇ ಬಿಗ್ ಆಫರ್ ನೀಡುತ್ತಿದೆ.

ಮುಗಿಬಿದ್ದ ಫ್ರಾಂಚೈಸಿಗಳು:

ಬಿಬಿಎಲ್‌ನ ಹಳೆಯ ನಿಯಮಗಳ ಪ್ರಕಾರ ಫಿನ್ ಅಲೆನ್ ಕಳೆದ ಬಾರಿ 4,20,000 ಡಾಲರ್ ಒಪ್ಪಂದ ಹೊಂದಿದ್ದರು. ಆದರೆ, ಈ ಬಾರಿ ಕ್ರಿಕೆಟ್ ಆಸ್ಟ್ರೇಲಿಯಾ (CA) ತಂದಿರುವ ಹೊಸ ‘ಮಾರ್ಕ್ಯೂ ಪ್ಲೇಯರ್ ಪೂಲ್’ ನಿಯಮದಿಂದಾಗಿ ಆಟಗಾರರ ಮೌಲ್ಯ ಗಗನಕ್ಕೇರಿದೆ.

ಸ್ಟಾರ್ಸ್ ಮತ್ತು ಸ್ಟ್ರೈಕರ್ಸ್ ಪೈಪೋಟಿ:

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಫ್ರಾಂಚೈಸಿಗಳು ಈಗಾಗಲೇ ಫಿಲ್ ಅಲೆನ್​ಗೆ 6 ಲಕ್ಷ ಡಾಲರ್​ನ ಆಫರ್ ನೀಡಿದೆ.

ಇತ್ತ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನೂತನ ಮುಖ್ಯ ಕೋಚ್ ಕ್ಯಾಮರೋನ್ ವೈಟ್ ಅವರು ಈ ಹಿಂದೆ ಅಮೆರಿಕದ ಎಂಎಲ್‌ಸಿ ಲೀಗ್‌ನಲ್ಲಿ ಫಿನ್ ಅಲೆನ್ ಅವರಿಗೆ ತರಬೇತಿ ನೀಡಿದ್ದರು. ಹೀಗಾಗಿ ಅಲೆನ್ ಮೆಲ್ಬೋರ್ನ್ ಸ್ಟಾರ್ಸ್ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಟೋಕ್ಸ್ ಜೊತೆ ಪೈಪೋಟಿ:

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರಿಗೂ ಸಿಡ್ನಿ ಸಿಕ್ಸರ್ಸ್ ಇಷ್ಟೇ ಮೊತ್ತದ ಆಫರ್ ನೀಡಿದೆ. ಆದರೆ ಸ್ಟೋಕ್ಸ್ ಪೂರ್ಣ ಸೀಸನ್‌ಗೆ ಲಭ್ಯವಿರದ ಕಾರಣ, ಇಡೀ ಟೂರ್ನಿಗೆ ಲಭ್ಯವಿರಲಿರುವ ಫಿನ್ ಅಲೆನ್ ಅವರೇ ಬಿಬಿಎಲ್ ಇತಿಹಾಸದ ಗರಿಷ್ಠ ಸಂಭಾವನೆ ಪಡೆಯುವ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಅಲೆನ್ ಡಿಮ್ಯಾಂಡ್‌ಗೆ ಕಾರಣವೇನು?

ಕಳೆದ 2025–26ರ ಬಿಬಿಎಲ್ ಸೀಸನ್‌ನಲ್ಲಿ ಫಿನ್ ಅಲೆನ್ ಅಕ್ಷರಶಃ ಅಬ್ಬರಿಸಿದ್ದರು. ಅವರ ಅಬ್ಬರದ ಬ್ಯಾಟಿಂಗ್ ಅಂಕಿ-ಅಂಶಗಳು ಹೀಗಿವೆ…

ಟಿ20 ಕ್ರಿಕೆಟ್‌ನಲ್ಲಿ ಸದ್ಯ ಅತ್ಯಂತ ಅಪಾಯಕಾರಿ ಬ್ಯಾಟರ್ ಎನಿಸಿಕೊಂಡಿರುವ ಫಿನ್ ಅಲೆನ್ ಅಂತಿಮವಾಗಿ ಬಿಬಿಎಲ್‌ನ ಯಾವ ಫ್ರಾಂಚೈಸಿಗೆ ಸಹಿ ಹಾಕಲಿದ್ದಾರೆ ಎಂಬುದೇ ಈಗ ಕುತೂಹಲ.

Source link

Vidyasiri Scholarship 2026: ವಿದ್ಯಾಸಿರಿ ಸ್ಕಾಲರ್‌ಶಿಪ್​​​​; ತಿಂಗಳಿಗೆ 1,500ರೂ. ಆರ್ಥಿಕ ನೆರವು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ! – Kannada News | Vidyasiri Scholarship 2026 27: Get 1,500 Rs Monthly Financial Assistance; Apply Online by August 31

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲು ‘ವಿದ್ಯಾಸಿರಿ ಸ್ಕಾಲರ್‌ಶಿಪ್ 2026-27′ ಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಸ್ವಂತ ಅಥವಾ ಖಾಸಗಿ ವಸತಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿ ವೆಚ್ಚವನ್ನು ಭರಿಸಲು ಸರ್ಕಾರವು ತಿಂಗಳಿಗೆ 1,500 ರೂ. ಗಳಂತೆ (ಗರಿಷ್ಠ 10 ತಿಂಗಳಿಗೆ ಒಟ್ಟು ₹15,000) ಆರ್ಥಿಕ ಸಹಾಯಧನವನ್ನು ನೀಡುತ್ತದೆ. ಈ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಯೋಜನೆಗೆ ಯಾರು ಅರ್ಹರು?

ಈ ಯೋಜನೆಯಡಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಮೂಲತಃ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಅಲ್ಲದೆ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 2B, 3A, ಹಾಗೂ 3B (OBC) ಗೆ ಸೇರಿದವರಾಗಿರಬೇಕು. ಪಿಯುಸಿ (PUC), ಐಟಿಐ (ITI), ಡಿಪ್ಲೊಮಾ, ಪದವಿ (UG), ಸ್ನಾತಕೋತ್ತರ ಪದವಿ (PG) ಹಾಗೂ ಇತರ ಪೋಸ್ಟ್-ಮೆಟ್ರಿಕ್ ಕೋರ್ಸ್‌ಗಳಲ್ಲಿ ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ, ಸರ್ಕಾರಿ ಅಥವಾ ಇಲಾಖೆಯ ವಸತಿನಿಲಯಗಳಲ್ಲಿ (ಹಾಸ್ಟೆಲ್) ವಾಸಕ್ಕೆ ಸ್ಥಳಾವಕಾಶ ಪಡೆದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅಗತ್ಯವಿರುವ ಪ್ರಮುಖ ದಾಖಲೆಗಳು:

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಬಳಿ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಚಾಲ್ತಿಯಲ್ಲಿರುವ ಆದಾಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇದರ ಜೊತೆಗೆ ಅರ್ಹತಾ ಪರೀಕ್ಷೆಯ ಹಿಂದಿನ ವರ್ಷದ ಅಂಕಪಟ್ಟಿ, ಪ್ರಸಕ್ತ ಸಾಲಿನ ಕಾಲೇಜು ಪ್ರವೇಶ ದೃಢೀಕರಣ ಪತ್ರ ಅಥವಾ ಐಡಿ ಕಾರ್ಡ್, ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಸಕ್ರಿಯ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ರಾಜ್ಯ ಸ್ಕಾಲರ್‌ಶಿಪ್ ಪೋರ್ಟಲ್ (SSP – State Scholarship Portal) ssp.karnataka.gov.in ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. 2026-27ನೇ ಸಾಲಿನ ವಿದ್ಯಾಸಿರಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“22,000 ರೂ. ಖರ್ಚಾಗಿದೆ, ಕ್ಷಮಿಸಿ”: ಕದ್ದ ಚಿನ್ನ-ಹಣ ವಾಪಸ್ ತಂದು ಸಾರಿ ಪತ್ರವಿಟ್ಟ ಕಳ್ಳರು

ಕಾಕಿನಾಡ, ಆ.4: ದೋಚಿದ ಚಿನ್ನಾಭರಣ ಹಾಗೂ ನಗದನ್ನು ಎರಡು ವಾರಗಳ ಬಳಿಕ ಮಾಲೀಕರ ಮನೆ ಅಂಗಳಕ್ಕೇ ಎಸೆದು, “ಕ್ಷಮಿಸಿ, ಮಾಡಿದ ತಪ್ಪು ಒಪ್ಪಿಕೊಳ್ಳುತ್ತಿದ್ದೇವೆ” ಎಂದು ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಾಲ ಗಣೇಶ್ ಎಂಬುವವರು ತಮ್ಮ ಕುಟುಂಬದೊಂದಿಗೆ ಜುಲೈ 18 ರಂದು ಸ್ವಗ್ರಾಮಕ್ಕೆ ತೆರಳಿದ್ದರು.

ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು, ಬೀಗ ಮುರಿದು ಒಳನುಗ್ಗಿ ಸುಮಾರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50,000 ರೂ. ನಗದು ದೋಚಿ ಪರಾರಿಯಾಗಿದ್ದರು. ಮನೆಗೆ ಹಿಂತಿರುಗಿದ ಗಣೇಶ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಕಳ್ಳತನ ನಡೆದ 15 ದಿನಗಳ ನಂತರ, ಅಂದರೆ ಆಗಸ್ಟ್ 2ರಂದು ತೆಲ್ಲವಾರಿನ ಜಾವ ಗಣೇಶ್ ಅವರ ಮನೆಯ ಅಂಗಳದಲ್ಲಿ ಕವರ್‌ ಒಂದರಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಕವರ್‌ನೊಂದಿಗೆ ಹಸ್ತಪ್ರತಿಯ ಲೇಖನವೊಂದನ್ನು (ಕ್ಷಮಾಪಣಾ ಪತ್ರ) ಇಡಲಾಗಿತ್ತು. “ನಾವು ಮಾಡಿದ್ದು ತಪ್ಪೇ… ದಯವಿಟ್ಟು ಕ್ಷಮಿಸಿ. ದೋಚಿದ ಹಣದಲ್ಲಿ 22,000 ರೂ. ವರೆಗೆ ಖರ್ಚು ಮಾಡಿದ್ದೇವೆ. ಆ ಹಣವನ್ನು ಮರಳಿಸಲು ಸಾಧ್ಯವಿಲ್ಲ. ಉಳಿದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ನೀಡುತ್ತಿದ್ದೇವೆ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ

22,000 ರೂ. ನಗದು ಕಳೆದುಕೊಂಡರೂ, ಲಕ್ಷಾಂತರ ರೂಪಾಯಿ ಮೌಲ್ಯದ ತಮ್ಮ ಅಮೂಲ್ಯ ಚಿನ್ನಾಭರಣಗಳು ಹಾಗೂ ಉಳಿದ ಹಣ ವಾಪಸ್ ಸಿಕ್ಕಿದ್ದಕ್ಕೆ ಮನೆಯಜಮಾನ ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳತನ ಮಾಡಿ ವಾಪಸ್ ಕ್ಷಮೆ ಕೇಳಿ ಸೊತ್ತು ಮರಳಿಸಿದ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಳ್ಳತನ ಮಾಡಿ ಸೊತ್ತು ಮರಳಿಸಿದ ಖದೀಮರು ಯಾರು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ChatGPT ಬಳಸಿ ಪ್ರಾಂಕ್ ಮಾಡೋ ಮುನ್ನ ಎಚ್ಚರ! ಎಐ ಬಳಸಿ ನಕಲಿ ಫ್ಲೈಟ್ ಸೃಷ್ಟಿದಿದ ವ್ಯಕ್ತಿ ಮೇಲೆ ಎಫ್​ಐಆರ್ – Kannada News | Fake Flight Ticket Created Using ChatGPT: Police Book Forgery Case in Hyderabad

ಹೈದರಾಬಾದ್, ಆಗಸ್ಟ್ 04: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ಚಾಟ್‌ಜಿಪಿಟಿ (ChatGPT) ತಮಾಷೆಗೆ ಅಥವಾ ದುರ್ಬಳಕೆಗೆ ಬಳಸಿಕೊಂಡರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಚಾಟ್‌ಜಿಪಿಟಿ ಬಳಸಿ ನಕಲಿ ವಿಮಾನ ಟಿಕೆಟ್ (Fake Flight Ticket) ಸೃಷ್ಟಿಸಿದ ಆರೋಪದ ಮೇಲೆ ಶಂಶಾಬಾದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?

ಅಸ್ಲಂ ಎಂಬ ವ್ಯಕ್ತಿ ಹೈದರಾಬಾದ್‌ನ ಶಂಶಾಬಾದ್ (ರಾಜೀವ್ ಗಾಂಧಿ ಇಂಟರ್ನ್ಯಾಷನಲ್) ವಿಮಾನ ನಿಲ್ದಾಣದಿಂದ ಗೋವಾಕ್ಕೆ ಪ್ರಯಾಣಿಸಲು ಆಗಮಿಸಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಟಿಕೆಟ್ ಪರಿಶೀಲಿಸುವಾಗ ದಾಖಲೆಯಲ್ಲಿದ್ದ ಕೆಲ ವ್ಯತ್ಯಾಸಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ತಪಾಸಣೆ ನಡೆಸಿದಾಗ ಅದು ನಕಲಿ ಟಿಕೆಟ್ ಎಂಬುದು ಸ್ಪಷ್ಟವಾಗಿದೆ.

ವಿಚಾರಣೆ ವೇಳೆ ಅಸ್ಲಂ, ಈ ಟಿಕೆಟ್‌ ಅನ್ನು ತಮ್ಮ ಸ್ನೇಹಿತ ಚಾಟ್‌ಜಿಪಿಟಿ (ChatGPT) ಮೂಲಕ ಕ್ರಿಯೇಟ್ ಮಾಡಿ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ದೂರಿನನ್ವಯ ಶಂಶಾಬಾದ್ ಪೊಲೀಸರು ದಾಖಲೆ ನಕಲು (Forgery) ಮತ್ತು ವಂಚನೆ ಕಾಯ್ದೆಯಡಿ ನಕಲಿ ಟಿಕೆಟ್ ತಯಾರಿಸಿದ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

AI ಬಳಸುವಾಗ ಎಚ್ಚರ

ಚಾಟ್‌ಜಿಪಿಟಿ ಅಥವಾ ಇತರೆ AI ಟೂಲ್‌ಗಳನ್ನು ಬಳಸಿ ನಕಲಿ ಟಿಕೆಟ್‌ಗಳು, ಗುರುತಿನ ಚೀಟಿಗಳು ಅಥವಾ ಯಾವುದೇ ಅಧಿಕೃತ ದಾಖಲೆಗಳನ್ನು ಸೃಷ್ಟಿಸುವುದು ಅಥವಾ ಬಳಸುವುದು ಭಾರತೀಯ ದಂಡ ಸಂಹಿತೆ (IPC/BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ತಮಾಷೆ ಅಥವಾ ‘ಪ್ರಾಂಕ್’ ಹೆಸರಿನಲ್ಲಿ ಇಂತಹ ಕೃತ್ಯ ಎಸಗಿದರೂ ಜೈಲು ಶಿಕ್ಷೆ ಮತ್ತು ದಂಡ ಎದುರಿಸಬೇಕಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸಿಎಂ ಪುತ್ರನಿಗೆ ಕನ್ನಡದ ಈ ಸಿನಿಮಾ ಬಲು ಇಷ್ಟವಂತೆ – Kannada News | Jason Vijay likes KGF movie said it is my favourite movie

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡು ಸಿಎಂ ಆಗಿದ್ದಾರೆ. ತಮಿಳುನಾಡು ಸಿಎಂ ಆದ ಬಳಿಕ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಜಯ್ ಅವರ ಮಗ ಜೇಸನ್ ಈ ಹಿಂದೆ ವಿಜಯ್ ಅವರ ಜೊತೆಗೆ ಕೆಲವು ಸಿನಿಮಾಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸ್ವತಂತ್ರ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ತಮ್ಮ ಮೊದಲ ಸಿನಿಮಾನಲ್ಲಿ ನಟನೆ ಸಹ ಮಾಡಿದ್ದಾರೆ ವಿಜಯ್ ಪುತ್ರ. ಅಂದಹಾಗೆ ವಿಜಯ್ ಪುತ್ರ ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ.

ವಿಜಯ್ ಪುತ್ರ ಜೇಸನ್, ‘ಸಿಗ್ಮ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ, ಅಮೆರಿಕದಲ್ಲಿ ಸಿನಿಮಾ ಪಟ್ಟುಗಳನ್ನು ಕಲಿತು ಬಂದಿರುವ ಜೇಸನ್, ಬಹಳ ಸ್ಟೈಲಿಷ್ ಆಗಿ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಂದೀಪ್ ಕೃಷ್ಣ ನಾಯಕ. ಕೆಲವೇ ದಿನಗಳಲ್ಲಿ ‘ಸಿಗ್ಮ’ ಸಿನಿಮಾದ ಬಿಡುಗಡೆ ಆಗಲಿದೆ. ಜೇಸನ್ ಅವರು ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ನೀಡಿರುವ ಸಂದರ್ಶನದಲ್ಲಿ ತಮಗೆ ಇಷ್ಟವಾದ ಕನ್ನಡ ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು?

ವಿಜಯ್ ಪುತ್ರ, ಜೇಸನ್ ಅವರಿಗೆ ಕನ್ನಡದ ‘ಕೆಜಿಎಫ್’ ಸಿನಿಮಾ ಬಲು ಇಷ್ಟವಂತೆ. ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿರುವ ಜೇಸನ್, ‘ಕೆಜಿಎಫ್, ನನಗೆ ಬಹಳ ಇಷ್ಟವಾದ ಕಮರ್ಶಿಯಲ್ ಸಿನಿಮಾ. ಅದು ಒಂದು ರೀತಿ ಹಿಸ್ಟಾರಿಕ್ ಸೆಟಪ್ ಇರು ಫಿಕ್ಷನಲ್ ಕತೆ. ಆದರೆ ಅದನ್ನು ಎಷ್ಟು ಚೆನ್ನಾಗಿ ಜನರಿಗೆ ಕನ್ವಿನ್ಸ್ ಆಗುವಂತೆ ಜೊತೆಗೆ ಮಾಸ್ ಆಗಿ ಇರುವಂತೆ ನಿರೂಪಣೆ ಮಾಡಿದ್ದಾರೆ. ಅಲ್ಲದೆ, ಒಟ್ಟು ಆ ಸಿನಿಮಾ ಟೋನ್ ಸಹ ನನಗೆ ಬಹಳ ಇಷ್ಟ. ಸಿನಿಮಾದ ನಿರ್ದೇಶಕರು ಆ ಜಾನರ್​​ಗೆ, ಆ ಕತೆಗೆ ತನ್ನನ್ನು ತಾವು ಸಮರ್ಪಿಸಿಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಜೇಸನ್ ಹೇಳಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಕಮರ್ಶಿಯಲ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಸಿನಿಮಾ. ಆಧುನಿಕ ಪ್ಯಾನ್ ಇಂಡಿಯಾ ಕಮರ್ಶಿಯಲ್ ಸಿನಿಮಾ ಎಂದರೆ ಹೀಗಿರಬೇಕು ಎಂದು ತೋರಿಸಿದ ಸಿನಿಮಾ ‘ಕೆಜಿಎಫ್’. ಜೇಸನ್ ವಿಜಯ್ ಮಾತ್ರವೇ ಅಲ್ಲ, ಹಲವಾರು ಯುವ ನಿರ್ದೇಶಕರು, ಸಿನಿಮಾ ನಟರಿಗೆ ‘ಕೆಜಿಎಫ್’ ಮೆಚ್ಚಿನ ಸಿನಿಮಾ. ‘ಕೆಜಿಎಫ್’ ಅನ್ನು ಮಾದರಿಯಾಗಿ ಇರಿಸಿಕೊಂಡು ಸಿನಿಮಾ ಮಾಡಿದವರ, ಮಾಡುತ್ತಿರುವರು ಸಾಕಷ್ಟು ಮಂದಿ ಇದ್ದಾರೆ.

ಜೇಸನ್ ವಿಜಯ್ ‘ಸಿಗ್ಮಾ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಸಿನಿಮಾನಲ್ಲಿ ಸಂದೀಪ್ ಕೃಷ್ಣ ನಾಯಕ, ಫಾರಿಯಾ ಅದ್ಬುಲ್ಲಾ ನಾಯಕಿ. ಜೊತೆಗೆ ಸಂಪತ್ ರಾಜ್, ರಾಜ್ ಸುಂದರಂ, ಶಿವ ಪಂಡಿತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ಬೆದರಿಕೆ ಹಾಕಿದವರು ಯಾರು? ಸಿಎಂಗೇ ನೇರ ಕಡೆ ಮಾಡಿ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್ – Kannada News | Who threatened to resign? The Congress High Command has sought information by the CM DK Shivakumar

ಬೆಂಗಳೂರು, ಆಗಸ್ಟ್ 4: ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಕೈತಪ್ಪಿದ ಕೆಲವು ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕರೆ ಮಾಡಿ, ರಾಜೀನಾಮೆ ಬೆದರಿಕೆ ಹಾಕುವವರ ವಿವರ ಕೇಳಿದೆ. ಅಲ್ಲದೆ, ರಾಜೀನಾಮೆ ನೀಡಿದರೆ ಅದನ್ನು ತಕ್ಷಣವೇ ಅಂಗೀಕರಿಸುವಂತೆ ಸೂಚಿಸಿದೆ.

ಇದರ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್‌ ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿ, ರಾಜೀನಾಮೆ ನೀಡಿದರೆ ಕೂಡಲೇ ಅದನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿ ಹುದ್ದೆಗಳನ್ನು ನೀಡಲಾಗುವುದು. ಆದರೂ ರಾಜೀನಾಮೆಗೆ ಮುಂದಾದರೆ, ಹೈಕಮಾಂಡ್ ಸೂಚನೆಯಂತೆ ಅದನ್ನು ಸ್ವೀಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿತಾಸಕ್ತಿ ಎಲ್ಲಕ್ಕಿಂತ ಮುಖ್ಯ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಲನ್: ದಿ ಬಾಯ್​’ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ – Kannada News | Balan: The Boy Malayalam Movie Review and ZEE5 OTT Release

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ನಿರ್ದೇಶಕ ಚಿದಂಬರಂ ಇದೀಗ ‘ಬಾಲನ್: ದಿ ಬಾಯ್’ ಹೆಸರಿನ ಮತ್ತೊಂದು ಅದ್ಭುತ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಜುಲೈ 31 ರಿಂದ ‘ಜೀ5’ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತಾಯಿ ಮತ್ತು ಮಗನ ನಡುವಿನ ಭಾವುಕ ಕಥೆ ಸದ್ಯ ಒಟಿಟಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ಕಥೆಯು ಜೈಲಿನಿಂದ ಪ್ರಾರಂಭವಾಗುತ್ತದೆ. ಅಲ್ಲಿ ಕೈದಿಯಾಗಿರುವ ನಾಯಕಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವಿಗೆ ಬಾಲನ್ ಎಂದು ಹೆಸರಿಡಲಾಗುತ್ತದೆ. ಜೈಲಿನಿಂದ ಹೊರಬಂದ ಮೇಲೆ ಮಗನಿಗೆ ಒಳ್ಳೆಯ ಭವಿಷ್ಯ ಕೊಡಲು ತಾಯಿ ಹೆಣಗಾಡುತ್ತಾಳೆ. ತನ್ನ ಕತ್ತಲೆಯ ಗತಕಾಲ ಮಗನಿಗೆ ತಿಳಿಯಬಾರದು ಎಂದು ಆಕೆ ಪದೇ ಪದೇ ಹೆಸರು ಹಾಗೂ ಜಾಗಗಳನ್ನು ಬದಲಾಯಿಸುತ್ತಾ ಸಾಗುತ್ತಾಳೆ.

ಕಾಡಿನಂಚಿನ ಒಂಟಿ ಮನೆಯಲ್ಲಿ ಆಶ್ರಯ ಸಿಕ್ಕರೂ ಆಕೆಯ ಹಿಂದಿನ ಕಹಿ ಘಟನೆಗಳು ಮತ್ತೆ ಬೆನ್ನಟ್ಟುತ್ತವೆ. ಈ ಎಲ್ಲಾ ಸಂಕಷ್ಟಗಳ ನಡುವೆ ತಾಯಿ ತನ್ನ ಮಗನನ್ನು ಹೇಗೆ ರಕ್ಷಿಸುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಕಥಾವಸ್ತು.

ಇದನ್ನೂ ಓದಿ: ‘ಈ ವರ್ಷದ ಫೇವರಿಟ್ ಸಿನಿಮಾ’; ಒಟಿಟಿಯಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ನೋಡಿ ಹೊಗಳಿದ ಸ್ಟಾರ್ ನಟ

ನಟಿ ಫರ್ಜಾನಾ ಪಾಲತಿಂಗಲ್ ಅಭಿನಯದಲ್ಲೇ ತಾಯಿಯ ನೋವನ್ನು ಜೀವಿಸಿದ್ದಾರೆ. ಬಾಲನ್ ಪಾತ್ರದ ಆಧಿಶೇಷನ್ ಕೆ.ಆರ್ ತಮ್ಮ ಮುಗ್ಧತೆಯಿಂದ ಗಮನ ಸೆಳೆಯುತ್ತಾರೆ. ನಟ ಟೊವಿನೋ ಥಾಮಸ್ ಅವರ ಅತಿಥಿ ಪಾತ್ರ ಚಿತ್ರಕ್ಕೆ ದೊಡ್ಡ ಬಲ ತಂದಿದೆ. ಸುಶಿನ್ ಶ್ಯಾಮ್ ಅವರ ಹಿನ್ನೆಲೆ ಸಂಗೀತ ಮತ್ತು ಶೈಜು ಖಾಲಿದ್ ಅವರ ಕ್ಯಾಮೆರಾ ಕೆಲಸ ಈ ಸಿನಿಮಾವನ್ನು ಮತ್ತಷ್ಟು ಸುಂದರವಾಗಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Cabinet Expansion: ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ – Kannada News | K.N. Rajanna Criticises Karnataka Cabinet Over Lack of Womens Representation, Recalls Historical Leadership Changes

ಬೆಂಗಳೂರು, ಆಗಸ್ಟ್ 04: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆಗಳ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇತಿಹಾಸ ಗಮನಿಸಿದರೆ, ಐದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಿದಾಗಲೆಲ್ಲಾ ಮುಂದಿನ ಚುನಾವಣೆಯಲ್ಲಿ ಆ ಪಕ್ಷ ನೆಲಕಚ್ಚಿದೆ.

ಹಿಂದೆ ವೀರೇಂದ್ರ ಪಾಟೀಲ್, ಬಂಗಾರಪ್ಪ ಹಾಗೂ ಬಿಜೆಪಿಯ ಯಡಿಯೂರಪ್ಪ ಅವರ ಬದಲಾವಣೆ ವೇಳೆ ಇದು ಸಾಬೀತಾಗಿದೆ ಎಂದು ನೆನಪಿಸಿದರು. ಇದೇ ವೇಳೆ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಿಳೆಯರಿಗೆ ಅವಕಾಶ ನೀಡದೇ ಸಂಪುಟ ರಚಿಸುವುದು ಸರಿಯಾದ ಕಾಂಪೋಸಿಷನ್ ಅಲ್ಲ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DHFWS Recruitment 2026: ವಿಜಯಪುರದಲ್ಲಿ 26 ನರ್ಸಿಂಗ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – Kannada News | DHFWS Vijayapura Recruitment 2026: Apply Offline for 26 Nursing Officer and Other Posts by August 7

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ

ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು (DHFWS) 2026ನೇ ಸಾಲಿನ ನೂತನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 26 ನರ್ಸಿಂಗ್ ಆಫೀಸರ್, ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಹಾಗೂ ಫಾರ್ಮಸಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯಪುರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 26 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿ.ಎಸ್ಸಿ ನರ್ಸಿಂಗ್ ಮುಗಿಸಿದ ಅಭ್ಯರ್ಥಿಗಳಿಗೆ 04 ನರ್ಸಿಂಗ್ ಆಫೀಸರ್ ಹುದ್ದೆಗಳು, ಡಿಪ್ಲೊಮಾ ನರ್ಸಿಂಗ್ ಮುಗಿಸಿದವರಿಗೆ 12 ನರ್ಸಿಂಗ್ ಆಫೀಸರ್ ಹುದ್ದೆಗಳು ಕಾಯ್ದಿರಿಸಲ್ಪಟ್ಟಿವೆ. ಇದರೊಂದಿಗೆ ಡಿಎಂಎಲ್‌ಟಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 07 ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಹುದ್ದೆಗಳು ಹಾಗೂ ಡಿ.ಫಾರ್ಮ ಮುಗಿಸಿದ ಅಭ್ಯರ್ಥಿಗಳಿಗೆ 03 ಫಾರ್ಮಸಿ ಆಫೀಸರ್ ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿ.ಎಸ್ಸಿ ನರ್ಸಿಂಗ್, ಡಿಪ್ಲೊಮಾ ಇನ್ ನರ್ಸಿಂಗ್ (ಜಿಎನ್‌ಎಂ), ಡಿಎಂಎಲ್‌ಟಿಸಿ ಅಥವಾ ಡಿ.ಫಾರ್ಮ ಉತ್ತೀರ್ಣರಾಗಿರಬೇಕು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನ:

ಆಸಕ್ತ ಅಭ್ಯರ್ಥಿಗಳು ಮೊದಲು ವಿಜಯಪುರ ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ವಯಸ್ಸಿನ ಪುರಾವೆ, ಗುರುತಿನ ಚೀಟಿ, ಅನುಭವದ ಪತ್ರ ಹಾಗೂ ಇತ್ತೀಚಿನ ಭಾವಚಿತ್ರಗಳ ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ಲಗತ್ತಿಸಬೇಕು. ಈ ಎಲ್ಲಾ ದಾಖಲೆಗಳನ್ನು “ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ವಿಜಯಪುರ ಜಿಲ್ಲೆ” ಈ ವಿಳಾಸಕ್ಕೆ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.

ನೆನಪಿಡಬೇಕಾದ ಪ್ರಮುಖ ದಿನಾಂಕಗಳು:

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ಜುಲೈ 28 ರಿಂದಲೇ ಪ್ರಾರಂಭವಾಗಿದೆ. ಭರ್ತಿ ಮಾಡಿದ ಅರ್ಜಿಗಳು ಕಚೇರಿಗೆ ತಲುಪಲು ಆಗಸ್ಟ್ 07 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಒಳಿತು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸುವುದರ ಹಿಂದಿದೆ ಈ ಕಾರಣ – Kannada News | Why are mirrors installed in front of the bed in hotel rooms?

ಸಾಮಾನ್ಯವಾಗಿ ಟ್ರಾವೆಲ್, ಟ್ರಿಪ್ ಎಂದು ಹೊರಗಡೆ ಹೋಟೆಲ್ ರೂಮ್ (Hotel Room) ಅಥವಾ ಲಾಡ್ಜ್ ಬುಕ್ ಮಾಡುವುದು ಸಹಜ. ವಿಶ್ರಾಂತಿ ಪಡೆಯಲೆಂದು ಹೋಟೆಲ್ ರೂಮ್‌ಗೆ ಹೋಗಿ ಬೆಡ್ ಮೇಲೆ ಕುಳಿತುಕೊಂಡಾಗ ಕಣ್ಣ ಮುಂದೆ ಕಾಣುವುದೇ ಈ ಫಳ ಫಳ ಹೊಳೆಯುವ ಕನ್ನಡಿ. ಬೆಡ್ ಮುಂದೆಯೆ ಯಾಕೆ ಕನ್ನಡಿ ಅಳವಡಿಸಲಾಗಿರುತ್ತದೆ ಎಂಬ ಬಗ್ಗೆ ಯಾರು ಕೂಡ ಯೋಚನೆ ಮಾಡಲ್ಲ. ಹೋಟೆಲ್ ರೂಮ್‌ನಲ್ಲಿ ಮಿರರ್‌ಗಳನ್ನು ಅಳವಡಿಸುವುದರ ಹಿಂದೆ ಕೆಲ ಕಾರಣಗಳಿವೆ. ಈ ಮಿರರ್‌ಗಳು ಬೆಳಕನ್ನು ರೂಮ್ ಒಳಗೆ ಬರುವಂತೆ ಮಾಡುತ್ತದೆ.  ಹೋಟೆಲ್‌ ರೂಮ್‌ಗಳು ಕಡಿಮೆ ಸ್ಥಳವಕಾಶ ಹೊಂದಿದ್ರು, ದೊಡ್ಡದಾಗಿ ಕಾಣುವಂತೆ ಮಾಡಲು ಇದು ಸಹಕಾರಿಯಾಗಿದೆ.

ಬೆಡ್ ಮುಂದೆ ಕನ್ನಡಿ ಅಳವಡಿಸುವುದು ಏಕೆ?

ಬೆಡ್ ಮುಂದೆ ಕನ್ನಡಿ ಅಳವಡಿಸುವುದರಿಂದ ಸಣ್ಣ ಕೋಣೆಯನ್ನು ದೊಡ್ಡದಾಗಿ ಹಾಗೂ ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಹೋಟೆಲ್ ರೂಮ್‌ಗಳಲ್ಲಿ ಗೋಡೆಗಳು ಕಡಿಮೆ ಇರುವುದರಿಂದ ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್‌ನ್ನು ಹಾಸಿಗೆಯ ಎದುರುಗಡೆ ಇರಿಸುವುದು ಅನಿವಾರ್ಯ. ಅದಲ್ಲದೇ, ಈ ಕೊಠಡಿಯ ಕಿಟಕಿಯಿಂದ ಬರುವ ಸಹಜ ಬೆಳಕನ್ನು ಕನ್ನಡಿ ಪ್ರತಿಫಲಿಸಸುತ್ತದೆ. ಹೆಚ್ಚುವರಿ ಲೈಟ್ಸ್ ಬಳಸದೆಯೇ ಕೋಣೆ ತುಂಬಾ ಪ್ರಕಾಶಮಾನವಾಗಿ ಆಕರ್ಷಕವಾಗಿ ಕಾಣುತ್ತದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ

ಸುರಕ್ಷತೆ ದೃಷ್ಟಿಯಿಂದ ಈ ಕೆಲಸ ತಪ್ಪದೇ ಮಾಡಿ

ನೀವು ಹೋಟೆಲ್ ಗೆ ತಂಗಲು ಹೋದಾಗ ಕನ್ನಡಿಯನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕನ್ನಡಿಗಳು ಸಾಮಾನ್ಯವಾದದ್ದೇ ಅಥವಾ ಟು-ವೇ ಮಿರರ್ ಗಳೇ ಎಂದು ಪರೀಕ್ಷಿಸಿಕೊಳ್ಳಿ. ನೀವು ಈ ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇಟ್ಟಾಗ, ಬೆರಳಿಗೆ ಹಾಗೂ ಪ್ರತಿಬಿಂಬಕ್ಕೆ ಮಧ್ಯೆ ಸಣ್ಣ ಅಂತರ ಕಂಡುಬಂದರೆ ಯಾವುದೇ ಸಮಸ್ಯೆಯಿಲ್ಲ, ಸುರಕ್ಷಿತವಾಗಿದೆ ಎಂದರ್ಥ. ನಿಮ್ಮ ಬೆರಳಿನ ತುದಿ ಯಾವುದೇ ಅಂತರವಿಲ್ಲದೇ ಪ್ರತಿಬಿಂಬವನ್ನು ಮುಟ್ಟಿದರೆ, ನೀವು ತಕ್ಷಣವೇ ಎಚ್ಚೆತ್ತುಕೊಳ್ಳುವುದು ಅವಶ್ಯಕ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version