ಇನ್ನೂ ಸಹ 100% ಫಿಟ್ ಆಗಿಲ್ಲ: ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡ ಕೊಹ್ಲಿ – Kannada News | ‘I’m still not 100%’ Says Virat Kohli

ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಎಂದರೆ ಕೇವಲ ಒಬ್ಬ ಆಟಗಾರನಲ್ಲ, ಅದೊಂದು ಅದಮ್ಯ ಉತ್ಸಾಹದ ಜ್ವಾಲೆ. ಆದರೆ, ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಫೀಲ್ಡಿಂಗ್ ಮಾಡದೇ ಬ್ಯಾಟಿಂಗ್​ಗೆ ಮಾತ್ರ ಆಗಮಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಫಿಟ್​ನೆಸ್ ಸಮಸ್ಯೆ.

ಈ ಫಿಟ್​ನೆಸ್ ಸಮಸ್ಯೆಯ ನಡುವೆಯೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಕೇವಲ 34 ಎಸೆತಗಳನ್ನು ಎದುರಿಸಿದ ಕೊಹ್ಲಿ 49 ರನ್ ಬಾರಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಬಳಿಕ ಮಾತನಾಡಿದ ಕೊಹ್ಲಿ ದೈಹಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಆತಂಕಕಾರಿ ವಿಷಯವನ್ನು ಸ್ವತಃ ಕೊಹ್ಲಿ ಅವರೇ ಬಹಿರಂಗಪಡಿಸಿದ್ದಾರೆ.

“ನಾನು ಇನ್ನೂ 100% ಫಿಟ್ ಆಗಿಲ್ಲ”

ಪಂದ್ಯ ಮುಗಿದ ಬಳಿಕ ತಮ್ಮ ಫಿಟ್​ನೆಸ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ನಾನಿನ್ನೂ ನೂರಕ್ಕೆ ನೂರರಷ್ಟು ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಕಳೆದ 4-5 ದಿನಗಳಿಂದ ಆರೋಗ್ಯದ ಏರುಪೇರಿನಿಂದಾಗಿ ವೈದ್ಯಕೀಯ ತಪಾಸಣೆಯಲ್ಲಿದ್ದೆ. ಆದರೂ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ನನಗೆ ತೃಪ್ತಿ ನೀಡಿದೆ,” ಎಂದು ಹೇಳಿದ್ದಾರೆ.

ಬದಲಾದ ಪಿಚ್​!

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಪೂರಕವಾಗಿರುತ್ತದೆ. ಆದರೆ ಇಂದಿನ ಪಿಚ್ ಬಗ್ಗೆ ಮಾತನಾಡಿದ ಕೊಹ್ಲಿ, “ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲು ಇರುವುದರಿಂದ ಪಿಚ್ ಒಣಗಿದಂತಾಗಿತ್ತು. ಚೆಂಡು ನಿಧಾನವಾಗಿ ಬರುತ್ತಿತ್ತು. ಹಾಗಾಗಿ, ಆರಂಭದ 5-6 ಓವರ್‌ಗಳಲ್ಲೇ ಹೆಚ್ಚಿನ ರನ್ ಗಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು. ಸಾಲ್ಟ್ ಜೊತೆಗೂಡಿ ಪವರ್‌ಪ್ಲೇನಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು,” ಎಂದಿದ್ದಾರೆ.

ಪಾಟಿದಾರ್​ಗೆ ಬಹುಪರಾಕ್

ಆರ್​​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಬ್ಯಾಟಿಂಗ್​ ಅನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ, “ರಜತ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡುವ ರೀತಿ ಅದ್ಭುತವಾಗಿದೆ. ನಮ್ಮ ತಂಡದ ಮ್ಯಾನೇಜ್‌ಮೆಂಟ್, ಬ್ಯಾಟಿಂಗ್ ಕ್ರಮಾಂಕವನ್ನು ರೂಪಿಸಿರುವ ರೀತಿ ನಮಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದೆ. ನನ್ನ ನಂತರ ರಜತ್, ರೊಮಾರಿಯೋ ಮತ್ತು ಟಿಮ್ ಡೇವಿಡ್ ಅವರಂತಹ ಸ್ಫೋಟಕ ಆಟಗಾರರು ಇರುವುದು ನಮಗೆ ಭಯವಿಲ್ಲದೆ ಆಡಲು ಧೈರ್ಯ ನೀಡುತ್ತದೆ. ಐದು ವಿಕೆಟ್ ಬಿದ್ದರೂ ಈ ಆಟಗಾರರು ಕೇವಲ ನಾಲ್ಕು ಓವರ್‌ಗಳಲ್ಲಿ 50 ರನ್ ಸಿಡಿಸಬಲ್ಲರು. ಹೀಗಾಗಿ ನಾವು ಯಾವುದೇ ಒತ್ತಡದಿಂದ ಆಡಬೇಕಾದ ಪರಿಸ್ಥಿತಿ ತಂಡದಲ್ಲಿಲ್ಲ ಎಂದಿದ್ದಾರೆ.

ಮುಂದಿನ ಸವಾಲು

ಬದಲಾಗುತ್ತಿರುವ ಕ್ರಿಕೆಟ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ಪ್ರತಿ ಪಂದ್ಯವೂ 230-240 ರನ್ ಗಳಿಸುವ ಪಂದ್ಯವಾಗಿರುವುದಿಲ್ಲ. ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಒತ್ತಡ ಹೆಚ್ಚಾದಾಗ ಕೇವಲ ವೇಗದ ಆಟವಷ್ಟೇ ಅಲ್ಲದೆ, ಚಾಕಚಕ್ಯತೆಯೂ ಮುಖ್ಯವಾಗುತ್ತದೆ.

ಪರಿಸ್ಥಿತಿಗೆ ತಕ್ಕಂತೆ ಯಾರು ಹೊಂದಿಕೊಂಡು ಆಡುತ್ತಾರೋ ಅವರು ಸುದೀರ್ಘ ಕಾಲ ಪಂದ್ಯಾವಳಿಯಲ್ಲಿ ಉಳಿಯುತ್ತಾರೆ. ನಾನು ಕೂಡ ಆಧುನಿಕ ಕ್ರಿಕೆಟ್‌ನ ಬೇಡಿಕೆಗೆ ತಕ್ಕಂತೆ ನನ್ನ ಆಟವನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದಾಖಲೆಯಲ್ಲ… ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆಯೇ ಧೂಳೀಪಟ

ತಂಡಕ್ಕೆ ಸ್ಫೂರ್ತಿಯಾದ ಕೊಹ್ಲಿ

ಮೊಣಕಾಲು ನೋವು ಮತ್ತು ಜ್ವರದಂತಹ ಸಮಸ್ಯೆಯಿದ್ದರೂ ತಂಡಕ್ಕಾಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಅವರ ಬದ್ಧತೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ತಾನು ಕೇವಲ “10 ಪ್ರತಿಶತದಷ್ಟು ರಿದಮ್‌ನಲ್ಲಿದ್ದೇನೆ” ಎಂದು ಅವರು ಹೇಳಿದ್ದರೂ, ಆ 10 ಪ್ರತಿಶತವೇ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.

Source link

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ – Kannada News | Naa Ninna Bidalaare Twist: Durga and Ambika Are Sisters! Shocking Revelation

‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Na Ninna Bidalre) ಪ್ರಮುಖ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ದುರ್ಗಾ ಹಾಗೂ ಅಂಬಿಕಾ ಮಧ್ಯೆ ಸಾಕಷ್ಟು ಬಾಂಧವ್ಯ ಬೆಳೆದಿತ್ತು. ಅಂಬಿಕಾ ಆತ್ಮವಾದರೂ ಅದು ಕಾಣಿಸುತ್ತಾ ಇದ್ದಿದ್ದು ದುರ್ಗಾಗೆ ಮಾತ್ರ ಆಗಿತ್ತು. ಹೀಗೇಕೆ ಎಂಬ ಪ್ರಶ್ನೆ ದುರ್ಗಾಗೆ ಅನೇಕ ಬಾರಿ ಕಾಡಿದ್ದೂ ಇದೆ ಎಂದರೂ ತಪ್ಪಾಗಲಾರದು. ಈಗ ಈ ಪ್ರಶ್ನೆಗೆ ಉತ್ತರ ಏನೋ ಸಿಕ್ಕಿದೆ. ಆದರೆ, ಅದು ತುಂಬಾ ತಡವಾಯಿತೇ ಎಂಬ ಪ್ರಶ್ನೆ ಮೂಡಿದೆ.

ಮಾಳವಿಕಾ ಮಾಡುತ್ತಿದ್ದ ಮಾಟದ ತಂತ್ರಕ್ಕೆ ಅಂಬಿಕಾ ಬಲಿಪಶುವಾಗಿದ್ದು ಗೊತ್ತೇ ಇದೆ. ಅಂಬಿಕಾಗೆ ತನ್ನ ಮನಸ್ಸು ಹಿಡಿತಕ್ಕೆ ಸಿಗದೆ ಕೆಟ್ಟದನ್ನು ಮಾಡುತ್ತಿದ್ದಳು. ಇದರಿಂದ ದುರ್ಗಾ ತುಂಬಾನೇ ಭಯಗೊಂಡಳು. ಆ ಬಳಿಕ ದುರ್ಗಾ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಳು. ಹೇಗಾದರೂ ಮಾಡಿ ಅಂಬಿಕಾ ಆತ್ಮಕ್ಕೆ ಶಾಂತಿಕೊಡಬೇಕು ಎಂದು ಮನೆಯವರು ನಿರ್ಧರಿಸಿದಾಗ ಇದಕ್ಕೆ ಒಪ್ಪಿಗೆ ಕೊಟ್ಟಳು.

ಅಂಬಿಕಾ ಸತ್ತ ದಿನದಿಂದಲೂ ಆಕೆಗೆ ಶ್ರಾದ್ಧ ಆಗಿರಲಿಲ್ಲ. ಹೀಗಾಗಿ, ಅವಳ ಆತ್ಮ ಎಲ್ಲ ಕಡೆಗಳಲ್ಲಿ ಸುತ್ತಾಡುತ್ತಾ ಇತ್ತು. ಕೊನೆಗೂ ಅವಳ ಶ್ರಾದ್ಧ ಮಾಡಲಾಗಿದೆ. ಈ ಮೂಲಕ ಅಂಬಿಕಾ ಆತ್ಮವನ್ನು ಮಾಳವಿಕಾ ಬಂಧಿಸಿಟ್ಟುಕೊಂಡಿದ್ದಾಳೆ. ಈ ವಿಷಯ ಮಾಳವಿಕಾಗೆ ಮಾತ್ರ ಗೊತ್ತು. ಈ ಮಧ್ಯೆ ಅಂಬಿಕಾ ಶ್ರಾದ್ಧ ಮುಗಿದ ಬಳಿಕ ದುರ್ಗಾಗೆ ನಿಜ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಅಂಬಿಕಾ ಹಾಗೂ ದುರ್ಗ ಅಕ್ಕ ತಂಗಿ. ಈ ವಿಷಯ ತಡವಾಗಿ ಅವಳಿಗೆ ಗೊತ್ತಾಗಿದೆ. ಇದನ್ನು ಕೇಳಿ ದುರ್ಗಾ ಶಾಕ್​​ಗೆ ಒಳಗಾಗಿದ್ದಾಳೆ. ಇದಕ್ಕೂ ಕಾರಣ ಇದೆ. ಅಕ್ಕನ ಹುಡುಕಬೇಕು ಎಂಬ ಏಕೈಕ ಕಾರಣಕ್ಕೆ ದುರ್ಗಾ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬಂದರೂ ಅಕ್ಕ ಸಿಗಲಿಲ್ಲ. ಇದಕ್ಕೆ ಆಕೆ ದೇವರಿಗೆ ಶಾಪ ಹಾಕುತ್ತಿದ್ದಳು. ಈಗ ನೋಡಿದರೆ ಎಲ್ಲವೂ ಬದಲಾಗಿದೆ. ಗೆಜ್ಜೆ ಮೂಲಕ ಈ ವಿಷಯ ಗೊತ್ತಾಗಿದೆ.ಅಂಬಿಕಾ ಅನ್ನೋದು ಪ್ರಮುಖ ಪಾತ್ರ. ಆ ಪಾತ್ರವೇ ಯಾವ ಕಾರಣಕ್ಕೂ ಕೊನೆಯಾಗಲ್ಲ ಎಂಬುದು ಅನೇಕರ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ – Kannada News | TCS Nashik Closure: ATS,NIA Probe into Organized Physical Harassment and Conversion Plot

ನಾಸಿಕ್, ಏಪ್ರಿಲ್ 16: ಭಾರತದ ಐಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS)  ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ.

ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಅವರು ಈ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. “ಇದು ಕೇವಲ ವೈಯಕ್ತಿಕ ಘರ್ಷಣೆಯಲ್ಲ, ಬದಲಿಗೆ ಇದೊಂದು ಸಂಘಟಿತ ಜಾಲದಂತೆ ಕಂಡುಬರುತ್ತಿದೆ. ಹಿರಿಯ ಅಧಿಕಾರಿಗಳೇ ತಮ್ಮ ಕೈಕೆಳಗಿನ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ,” ಎಂದು ಅವರು ತಿಳಿಸಿದ್ದಾರೆ ಎಂದು ನ್ಯೂಸ್​ 18 ವರದಿ ಮಾಡಿದೆ.

ತನಿಖೆಯ ತೀವ್ರತೆಯನ್ನು ಪರಿಗಣಿಸಿ, ಪ್ರಕರಣದ ವಿವರಗಳನ್ನು ಭಯೋತ್ಪಾದನಾ ನಿರೋಧಕ ದಳ (ATS) ಮತ್ತು ರಾಷ್ಟ್ರೀಯ ತನಿಖಾ ದಳ (NIA) ಗೆ ನೀಡಲಾಗಿದೆ. ಈ ಜಾಲಕ್ಕೆ ವಿದೇಶಿ ಹಣಕಾಸಿನ ನೆರವು ಅಥವಾ ಅಂತಾರಾಷ್ಟ್ರೀಯ ಸಂಪರ್ಕಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಎಫ್‌ಐಆರ್ ದಾಖಲಾದ ಪ್ರಮುಖ ಆರೋಪಿಗಳು
ಪ್ರಸ್ತುತ ಎಂಟು ಉದ್ಯೋಗಿಗಳ ವಿರುದ್ಧ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.

ಮತ್ತಷ್ಟು ಓದಿ: ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿಯ ಸ್ಫೋಟಕ ಹೇಳಿಕೆ

ನಿದಾ ಖಾನ್: ಧಾರ್ಮಿಕ ಕಿರುಕುಳ ನೀಡಿದ ಆರೋಪ, ಅಶ್ವಿನಿ ಚಿನಾನಿ (ಮಾಜಿ ಎಚ್‌ಆರ್ ಹೆಡ್): ದೂರು ನೀಡಲು ಬಂದವರನ್ನು ಹೆದರಿಸಿ, ಆರೋಪಿಗಳಿಗೆ ಸಾಥ್ ನೀಡಿದ ಆರೋಪ. ಉಳಿದಂತೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗದಿಂದ ತನಿಖಾ ಸಮಿತಿ ರಚನೆ
ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಸತ್ಯಶೋಧನೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಏಪ್ರಿಲ್ 18 ರಂದು ನಾಸಿಕ್‌ಗೆ ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಸಂಗ್ರಹಿಸಲಿದೆ.

ಬಲಿಪಶುಗಳಿಗೆ ಪೊಲೀಸರ ಕರೆ
ದೌರ್ಜನ್ಯಕ್ಕೊಳಗಾದ ಇನ್ನೂ ಹೆಚ್ಚಿನ ಮಹಿಳೆಯರು ಅಥವಾ ಪುರುಷ ಉದ್ಯೋಗಿಗಳು ಇದ್ದಲ್ಲಿ, ಅವರು ಯಾವುದೇ ಭಯವಿಲ್ಲದೆ ಮುಂದೆ ಬಂದು ದೂರು ನೀಡುವಂತೆ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಆತಂಕ ಮೂಡಿದ್ದು, ಕಾರ್ಪೊರೇಟ್ ವಲಯದಲ್ಲಿ ಇಂತಹ ‘ಸಂಘಟಿತ ಮತಾಂತರ’ದ ಯತ್ನಗಳು ನಡೆಯುತ್ತಿರುವುದು ಬೆಚ್ಚಿಬೀಳಿಸುವಂತಿದೆ.

ಟಿಸಿಎಸ್ ನಾಸಿಕ್ ಶಾಖೆಯು ಈಗ ಬಿಕೋ ಎನ್ನುತ್ತಿದೆ. ಒಂದು ಕಡೆ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಐಟಿ ಕ್ಷೇತ್ರದ ಸುರಕ್ಷತೆಯ ಬಗ್ಗೆ ಜನರಲ್ಲಿ ಪ್ರಶ್ನೆಗಳು ಎದ್ದಿವೆ. ತನಿಖೆ ಮುಂದುವರೆದಂತೆ ಇನ್ನಷ್ಟು ಆಘಾತಕಾರಿ ಸತ್ಯಗಳು ಹೊರಬರುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮಾಡಿದ್ರೆ ಕರ್ನಾಟಕದಲ್ಲೆಷ್ಟಾಗುತ್ತೆ? ಇಲ್ಲಿದೆ ಮಾಹಿತಿ – Kannada News | Lok Sabha Delimitation 2026: Karnataka’s Seats May Rise to 42 as India Plans Up to 850 MP Constituencies

ಬೆಂಗಳೂರು, ಏಪ್ರಿಲ್ 16: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನು 816 ಅಥವಾ 850ಕ್ಕೆ ಏರಿಸುವ ಸಾಧ್ಯತೆ ಇದೆ. ಇದು ಹಲವು ದಶಕಗಳ ನಂತರ ದೇಶದ ಲೋಕಸಭಾ ಸ್ಥಾನಗಳಲ್ಲಿ ನಡೆಯುತ್ತಿರುವ ಅತಿ ದೊಡ್ಡ ಹೆಚ್ಚಳವಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಈ ಬದಲಾವಣೆಗಳು ಕಾರ್ಯರೂಪಕ್ಕೆ ಬರಬಹುದು. ಒಂದು ವೇಳೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ, ಕರ್ನಾಟಕದಲ್ಲಿ ಪ್ರಸ್ತುತ ಇರುವ 28 ಸ್ಥಾನಗಳು 2011ರ ಜನಗಣತಿ ಆಧಾರದಲ್ಲಿ 41ಕ್ಕೆ ಅಥವಾ ಶೇ 50 ಹೆಚ್ಚಳ ಸೂತ್ರದ ಪ್ರಕಾರ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಯಾವ್ಯಾವ ರಾಜ್ಯಗಳಲ್ಲಿ ಲೆಕ್ಕಾಚಾರ ಹೇಗೆ ಬದಲಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ನಂ.1 ಬಿಜಿಯೆಸ್ಟ್ ರೈಲು ‘ಪರಶುರಾಮ್ ಎಕ್ಸ್‌ಪ್ರೆಸ್’; ಮಂಗಳೂರು ಮಾರ್ಗದಲ್ಲೇ ಅತಿ ಹೆಚ್ಚು ದಟ್ಟಣೆ – Kannada News | Southern India’s Rail Demand Soars: Vande Bharat and Coastal Routes Lead Nation’s Busiest Trains

ತಿರುವನಂತಪುರಂ, ಏ.16: ಕಾಯ್ದಿರಿಸಿದ ಸೀಟುಗಳ ಬುಕ್ಕಿಂಗ್ ಅಂಕಿಅಂಶಗಳ ಪ್ರಕಾರ, ಮಂಗಳೂರು ಮತ್ತು ಕೇರಳದ ನಡುವೆ ಸಂಚರಿಸುವ ರೈಲುಗಳು ದೇಶದಲ್ಲೇ ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿವೆ. ಅದರಲ್ಲೂ ವಿಶೇಷವಾಗಿ ಪರಶುರಾಮ್ ಎಕ್ಸ್‌ಪ್ರೆಸ್ ದಾಖಲೆಯ ಮಟ್ಟದ ಆಕ್ಯುಪೆನ್ಸಿಯನ್ನು (Occupancy) ದಾಖಲಿಸಿದೆ.ಪರಶುರಾಮ್ ಎಕ್ಸ್‌ಪ್ರೆಸ್ ಕನ್ಯಾಕುಮಾರಿಯಿಂದ ಮಂಗಳೂರಿಗೆ ಸಂಚರಿಸುವಾಗ 267.67% ಆಕ್ಯುಪೆನ್ಸಿಯನ್ನು ಹೊಂದಿದೆ. ಅಂದರೆ, ಕಾಯ್ದಿರಿಸಿದ ಪ್ರತಿಯೊಂದು ಸೀಟಿಗೆ ಸರಾಸರಿ ಸುಮಾರು ನಾಲ್ವರು ಪ್ರಯಾಣಿಕರು ಲಭ್ಯವಿರುತ್ತಾರೆ (ಒಬ್ಬರು ಇಳಿದ ನಂತರ ಮತ್ತೊಬ್ಬರು ಅದೇ ಸೀಟನ್ನು ಬುಕ್ ಮಾಡುವ ಪ್ರಕ್ರಿಯೆ ಸೇರಿ).

ಭಾರತದ ಟಾಪ್ 10 ಅತ್ಯಂತ ಜನದಟ್ಟಣೆಯ ರೈಲುಗಳ ಪೈಕಿ 8 ರೈಲುಗಳು ಕೇರಳ ಮತ್ತು ಕರ್ನಾಟಕದ ಕರಾವಳಿ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಮಂಗಳೂರು-ಕನ್ಯಾಕುಮಾರಿ, ತಿರುವನಂತಪುರಂ-ನವದೆಹಲಿ ಕೇರಳ ಎಕ್ಸ್‌ಪ್ರೆಸ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಸೆಮಿ ಹೈಸ್ಪೀಡ್ ರೈಲುಗಳಲ್ಲಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 187.78% ಆಕ್ಯುಪೆನ್ಸಿಯೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಂಗಳೂರು-ತಿರುವನಂತಪುರಂ ವಂದೇ ಭಾರತ್ ಕೂಡ 173.33% ದಟ್ಟಣೆಯನ್ನು ಹೊಂದಿದೆ.ಈ ಅಂಕಿಅಂಶಗಳು ದಕ್ಷಿಣ ಭಾರತದ, ವಿಶೇಷವಾಗಿ ಮಂಗಳೂರು ಮತ್ತು ಕೇರಳ ಮಾರ್ಗಗಳಲ್ಲಿನ ರೈಲ್ವೆ ವ್ಯವಸ್ಥೆಯ ಮೇಲಿರುವ ಅಗಾಧ ಒತ್ತಡವನ್ನು ಸಾಬೀತುಪಡಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಲವ್ ಜಿಹಾದ್’ ಆರೋಪ: ಮದುವೆಗೆ ನಿರಾಕರಿಸಿದ ಹಿಂದೂ ಯುವತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಜುಹೇಬ್

ಹೆಚ್ಚು ದಟ್ಟಣೆ ಇರುವ ಟಾಪ್ ರೈಲುಗಳು:

ಪರಶುರಾಮ್ ಎಕ್ಸ್‌ಪ್ರೆಸ್ (ಕನ್ಯಾಕುಮಾರಿ–ಮಂಗಳೂರು) – 267.67%

ಇಂದೋರ್ ಎಕ್ಸ್‌ಪ್ರೆಸ್ (ತಿರುವನಂತಪುರಂ ನೋರ್ತ್–ಇಂದೋರ್) – 266.24%

ಕೇರಳ ಎಕ್ಸ್‌ಪ್ರೆಸ್ (ತಿರುವನಂತಪುರಂ–ನವದೆಹಲಿ) – 259.88%

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿಯ ಸ್ಫೋಟಕ ಹೇಳಿಕೆ – Kannada News | TCS Nashik Boss: Send Wife for Child, IT Employee Alleges Religious Conversion, Harassment

ನಾಸಿಕ್, ಏಪ್ರಿಲ್ 16: ನಾಸಿಕ್‌ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಈ ಘಟನೆಗಳು ಕಾರ್ಪೊರೇಟ್ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಕೇವಲ ಕೆಲಸದ ಒತ್ತಡದ ಬಗ್ಗೆ ಕೇಳುತ್ತಿದ್ದ ಐಟಿ ಕ್ಷೇತ್ರದಲ್ಲಿ, ಈಗ ಮತಾಂತರದ ಸಂಚು ಮತ್ತು ನೈತಿಕ ಅಧಃಪತನದ ಆಘಾತಕಾರಿ ಕಥೆಗಳು ಹೊರಬರುತ್ತಿವೆ. ಒಂದೆಡೆ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಟಿಸಿಎಸ್‌ನ ನಾಸಿಕ್ ಶಾಖೆಯ ಪುರುಷ ಉದ್ಯೋಗಿಯೊಬ್ಬರು ತಮಗಾದ ಅಮಾನವೀಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದು ಕೇವಲ ಕಚೇರಿಯ ಕಿರುಕುಳವಾಗಿರದೆ, ಒಬ್ಬ ವ್ಯಕ್ತಿಯ ಧರ್ಮ, ವೈಯಕ್ತಿಕ ಜೀವನ ಮತ್ತು ಘನತೆಯನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ.

ನೈತಿಕತೆಯ ಎಲ್ಲ ಮಿತಿ ಮೀರಿದ ಬಾಸ್
ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂತ್ರಸ್ತ ಉದ್ಯೋಗಿ, ಟೀಮ್ ಲೀಡರ್ ತೌಸಿಫ್ ಅತ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ನೀಡಿದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. 2022ರಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆರಂಭವಾದ ಈ ಕಿರುಕುಳ 2026ರ ಮಾರ್ಚ್‌ವರೆಗೆ ಮುಂದುವರೆದಿದೆ.

ಸಂತ್ರಸ್ತ ಉದ್ಯೋಗಿ ಮತ್ತು ಅವರ ಪತ್ನಿಗೆ ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಈ ಸೂಕ್ಷ್ಮ ವಿಷಯವನ್ನೇ ಗುರಿಯಾಗಿಸಿಕೊಂಡ ವ್ಯಕ್ತಿ, ವೈದ್ಯಕೀಯ ಚಿಕಿತ್ಸೆಯಿಂದ ಮಗು ಪಡೆಯಲು ಸಾಧ್ಯವಿಲ್ಲ, ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ವಿಕೃತವಾಗಿ ಹೇಳಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.

ಮತ್ತಷ್ಟು ಓದಿ:
ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಬಲವಂತದ ನಮಾಜ್ ಮತ್ತು ಮತಾಂತರದ ಸಂಚು
ಕಟ್ಟಾ ಹಿಂದೂ ನಂಬಿಕೆಯುಳ್ಳ ಈ ಉದ್ಯೋಗಿ ರುದ್ರಾಕ್ಷಿ ಮಾಲೆ ಧರಿಸುವುದನ್ನೇ ಆತ ವಿವಾದ ಮಾಡಿದ್ದ, 2023ರ ಈದ್ ಸಂದರ್ಭದಲ್ಲಿ ಸಂತ್ರಸ್ತನನ್ನು ಮನೆಗೆ ಕರೆದೊಯ್ದು, ಬಲವಂತವಾಗಿ ತಲೆಗೆ ಟೋಪಿ ಹಾಕಿ, ನಮಾಜ್ ಮಾಡಿಸಿ ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿ ಅವಮಾನಿಸಲಾಗಿತ್ತು.

ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವುದು, ಮಾಂಸಾಹಾರ ಸೇವಿಸಲು ಒತ್ತಾಯಿಸುವುದು ಮತ್ತು ಕಲ್ಮಾ ಪಠಿಸುವಂತೆ ಪೀಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಆದಾಗ, ನಿಮ್ಮ ತಂದೆ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಆರೋಪಿ ಹೇಳಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಕೆಲಸದ ಸ್ಥಳವೇ ಯುದ್ಧಭೂಮಿ
ಕೇವಲ ಮಾನಸಿಕವಲ್ಲದೆ ದೈಹಿಕವಾಗಿಯೂ ಸಂತ್ರಸ್ತನನ್ನು ಕಾಡಲಾಗಿತ್ತು. ಸಂತ್ರಸ್ತ ಪ್ರತಿಭಟಿಸಿದಾಗ ತೌಸಿಫ್ ಅತ್ತರ್ ಆತನ ಮೇಲೆ ಟೇಬಲ್ ಫ್ಯಾನ್ ಎಸೆದು ಕೊಲ್ಲುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತನನ್ನು ಕೆಲಸದಿಂದ ತೆಗೆಯಲು ಪ್ರಧಾನ ಕಚೇರಿಗೆ ಸುಳ್ಳು ದೂರುಗಳನ್ನು ನೀಡುವ ಮೂಲಕ ಆತನ ವೃತ್ತಿಜೀವನವನ್ನೇ ಹಾಳು ಮಾಡಲು ಈ ತಂಡ ಯತ್ನಿಸಿತ್ತು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೌಸಿಫ್ ಅತ್ತರ್, ಡ್ಯಾನಿಶ್ ಶೇಖ್ ಮತ್ತು ಮಾನವ ಸಂಪನ್ಮೂಲ (HR) ವಿಭಾಗದ ನಿದಾ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಈ ತಂಡವು ಕೇವಲ ಈತನನ್ನು ಮಾತ್ರವಲ್ಲದೆ, ಮಹಿಳಾ ಉದ್ಯೋಗಿಗಳಿಗೂ ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ಪೀಡಿಸುತ್ತಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದುಬಂದಿದೆ.

ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರಚೋದನೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರ ಒಳಗೆ ಇಂತಹ ಘಟನೆಗಳು ವರ್ಷಗಟ್ಟಲೆ ನಡೆಯುತ್ತಿದ್ದರೂ ಮ್ಯಾನೇಜ್‌ಮೆಂಟ್ ಗಮನಕ್ಕೆ ಬರದಿರುವುದು ಆಶ್ಚರ್ಯದ ಸಂಗತಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:39 am, Thu, 16 April 26

Source link

RCB ನಮಗೆ ಅವಮಾನ ಮಾಡಿದ್ದಾರೆ! ದೂರು ದಾಖಲಿಸಿದ CSK – Kannada News | IPL 2026: CSK complaint on RCB Match

IPL 2026: ಐಪಿಎಲ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿ ಅಂದರೆ ಅದು ಬರೀ ಪಂದ್ಯವಲ್ಲ, ಅದೊಂದು ಎಮೋಷನ್. ಈ ಬಾರಿಯ ‘ಸೌತ್ ಡರ್ಬಿ’ ಪಂದ್ಯವು ಬ್ಯಾಟ್-ಬಾಲ್ ಕಾಳಗವನ್ನು ಮೀರಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡದ ಡಿಜೆ ವರ್ತನೆಯ ವಿರುದ್ಧ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ (BCCI) ಅಧಿಕೃತ ದೂರು ನೀಡಿದೆ.

ವಿವಾದದ ಮೂಲವೇನು?

ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧ ಪಂದ್ಯದ ವೇಳೆ ಸಿಎಸ್‌ಕೆ ಆಟಗಾರರು ಔಟಾದಾಗ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ರಂಜಿಸುವ ನೆಪದಲ್ಲಿ ಡಿಜೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಮೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಸಿಎಸ್‌ಕೆ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಸಿಎಸ್‌ಕೆ ನೀಡಿದ ದೂರಿನಲ್ಲಿ ಏನಿದೆ?

ಚೆನ್ನೈ ಸೂಪರ್ ಕಿಂಗ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ದೂರಿನಲ್ಲಿರುವ ಮುಖ್ಯ ಅಂಶಗಳು ಈ ಕೆಳಗಿನಂತಿವೆ…

  • ಗೌರವಕ್ಕೆ ಧಕ್ಕೆ: “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು ಅವರು ವಾದಿಸಿದ್ದಾರೆ.
  • ಅವಹೇಳನಕಾರಿ ಕಾಮೆಂಟ್: ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ನೇಮಿಸಿದ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂಬುದು ತಂಡದ ಆರೋಪ.
  • ಅವಮಾನ: “ಡಿಜೆಗಳು ತವರು ತಂಡವನ್ನು ಬೆಂಬಲಿಸಲಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ಸರಿಯಲ್ಲ” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.

ಹಳೆಯ ದ್ವೇಷದ ಮುಂದುವರಿಕೆ?

ಈ ವಿವಾದಕ್ಕೆ 2025ರ ಐಪಿಎಲ್ ಸೀಸನ್‌ನ ನಂಟೂ ಇದೆ. ಕಳೆದ ವರ್ಷ ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಈ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಚನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಅಲ್ಲಿನ ಡಿಜೆ ಕೂಡ ಇದಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದರು. ಆಗ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮಧ್ಯಪ್ರವೇಶಿಸಿ ಇದನ್ನು ತಡೆದಿತ್ತು. ಈಗ ಬೆಂಗಳೂರಿನಲ್ಲಿ ಅದೇ ರೀತಿಯ ಘಟನೆ ಮರುಕಳಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.

ಬಿಸಿಸಿಐನ ಮುಂದಿನ ಹೆಜ್ಜೆ:

ಐಪಿಎಲ್ ಆಡಳಿತ ಮಂಡಳಿಯು ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆಯಂತಹ ಅಂಶಗಳು ನುಸುಳದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?

ಒಟ್ಟಾರೆಯಾಗಿ, ಐಪಿಎಲ್ ಅಂಗಳದಲ್ಲಿ ತಂಡಗಳ ನಡುವಿನ ಪೈಪೋಟಿ ಆರೋಗ್ಯಕರವಾಗಿದ್ದಷ್ಟು ಕ್ರಿಕೆಟ್‌ಗೆ ಚಂದ. ತವರು ತಂಡವನ್ನು ಬೆಂಬಲಿಸುವುದು ಡಿಜೆಗಳ ಕರ್ತವ್ಯವಾದರೂ, ಅದು ಎದುರಾಳಿ ತಂಡದ ಗೌರವಕ್ಕೆ ಧಕ್ಕೆ ತರುವಂತಿರಬಾರದು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಈಗ ಬಿಸಿಸಿಐ ಈ ದೂರನ್ನು ಹೇಗೆ ನಿಭಾಯಿಸಲಿದೆ ಮತ್ತು ಮುಂಬರುವ ಪಂದ್ಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

RCB ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ನಿಕೋಲಸ್ ಪೂರನ್ – Kannada News | Nicholas pooran post match interview after RCB vs LSG Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 23ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 146 ರನ್​ಗಳು ಮಾತ್ರ. 147 ರನ್​ಗಳ ಸುಲಭ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 15.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇನ್ನು ಈ ಪಂದ್ಯದ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸಿದ್ದರು. ಇದಾಗ್ಯೂ ಎಲ್​ಎಸ್​ಜಿ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹಂಗಾಮಿ ನಾಯಕ ನಿಕೋಲಸ್ ಪೂರನ್, ಈ ಸೀಸನ್ ನಮಗೆ ನಿಜಕ್ಕೂ ಕಠಿಣವಾಗಿದೆ. ನಾವು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲವಾಗುತ್ತಿದ್ದೇವೆ.

ಆರ್​ಸಿಬಿ ವಿರುದ್ಧ  ಕನಿಷ್ಠ 175 ರನ್ ಗಳಿಸಿದ್ದರೆ ನಾವು ಪೈಪೋಟಿ ನೀಡಬಹುದಿತ್ತು. ಆದರೆ ಬ್ಯಾಟಿಂಗ್ ಕ್ರಮಾಂಕದ ವೈಫಲ್ಯಕ್ಕೆ ಇಂದು ನಾವು ದೊಡ್ಡ ಬೆಲೆ ತೆತ್ತಿದ್ದೇವೆ. ಅಂದರೆ ಸೋಲಿಗೆ ನಮ್ಮ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ನಿಕೋಲಸ್ ಪೂರನ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಹುಡುಗರು ಮೈದಾನದಲ್ಲಿ ತುಂಬಾ ಶ್ರಮಪಡುತ್ತಿದ್ದಾರೆ, ಅದಕ್ಕೆ ಅವರಿಗೆ ಕ್ರೆಡಿಟ್ ಸಲ್ಲಬೇಕು. ಆದರೆ ಕ್ರೀಸ್‌ನಲ್ಲಿ ಜವಾಬ್ದಾರಿಯುತ ಆಟದ ಅವಶ್ಯಕತೆಯಿದೆ. ತಾಳ್ಮೆಯಿಂದಿದ್ದು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ ಎಂದು ಇದೇ ವೇಳೆ ಪೂರನ್ ಅಭಿಪ್ರಾಯಪಟ್ಟರು.

ನಿಕೋಲಸ್ ಪೂರನ್ ಅವರ ವೈಯಕ್ತಿಕ ಬ್ಯಾಟಿಂಗ್ ಕೂಡ ಈ ಬಾರಿ ದೊಡ್ಡ ಮಟ್ಟದ ಸದ್ದು ಮಾಡಿಲ್ಲ. ಈ ಬಗ್ಗೆ ಮಾತನಾಡಿದ ಅವರು, ನಾನು ಚೆಂಡನ್ನು ಚೆನ್ನಾಗಿ ಬಾರಿಸುತ್ತಿದ್ದೇನೆ, ಬ್ಯಾಟಿಂಗ್ ಫೀಲ್ ಚೆನ್ನಾಗಿದೆ. ಆದರೆ ದುರದೃಷ್ಟವಶಾತ್ ಅದು ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತಿಲ್ಲ. ನಾನು ಈ ಹಿಂದೆಯೂ ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ, ಇದರಿಂದ ಹೇಗೆ ಹೊರಬರಬೇಕೆಂದು ನನಗೆ ತಿಳಿದಿದೆ. ಶೀಘ್ರದಲ್ಲೇ ಲಯಕ್ಕೆ ಮರಳುವ ನಂಬಿಕೆಯಿದೆ ಎಂದರು.

ಇದನ್ನೂ ಓದಿ: ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?

ಒಟ್ಟಾರೆಯಾಗಿ, ಲಕ್ನೋ ತಂಡವು ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಪುಟಿದೇಳಬೇಕಾದರೆ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅದರಂತೆ ಏಪ್ರಿಲ್ 19 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಲಯಕ್ಕೆ ಮರಳಲಿದೆಯಾ ಕಾದು ನೋಡಬೇಕಿದೆ.

Source link

ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ: ಚಿಕ್ಕಮಗಳೂರು ಮೂಲದ ಕಿಲಾಡಿ ಮಿಥುನ್ ಬೆಂಗಳೂರಿನಲ್ಲಿ ಅರೆಸ್ಟ್! – Kannada News | Fake IAS Officer Arrested in Bengaluru: Chikkamagaluru Man Conned Doctors and Businessmen of Crores

ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿದ್ದ ಆರೋಪಿ ಮಿಥುನ್Image Credit source: tv9

ಬೆಂಗಳೂರು, ಏಪ್ರಿಲ್ 16: ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಬಿದ್ದಿರುವುದು ಬೆಳಕಿಗೆ ಬಂದಿದೆ.

ವಂಚನೆಯ ಜಾಲ ಹೆಣೆದಿದ್ದು ಹೇಗೆ?

ಬಂಧಿತ ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ವಿಭಾಗದ ಮುಖ್ಯಸ್ಥ ಹಾಗೂ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರಿಗೆ, ತಾನು ಐಎಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ ಈತ, ಸ್ವತಃ ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿ ಎಲ್ಲರನ್ನೂ ನಂಬಿಸುವಲ್ಲಿ ಯಶಸ್ವಿಯಾಗಿದ್ದ.

41 ಲಕ್ಷ ರೂಪಾಯಿ ವಂಚನೆ

ಜಿಲ್ಲಾ ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಮಿಥುನ್ ನಂಬಿಸಿದ್ದ. ಇದಕ್ಕಾಗಿ ಶೇ 20ರಷ್ಟು ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ ಬರೋಬ್ಬರಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.

ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ತನ್ನ ಪ್ರಭಾವ ತೋರಿಸಲು ಬೆಂಗಳೂರಿನ ಓರ್ವ ಡಿಸಿಪಿ ಹೆಸರನ್ನು ಬಳಸಲು ಹೋಗಿ ಅಮೃತಹಳ್ಳಿ ಪೊಲೀಸರಿಗೆ ಅನುಮಾನ ಬರುವಂತೆ ಮಾಡಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಪಾಸಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ ಪ್ರಭಾವಿ ಸ್ವಾಮೀಜಿಗಳನ್ನೂ ಈತ ನಂಬಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ!

ಸದ್ಯ ಪೊಲೀಸರು ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇನ್ನೂ ಹಲವು ಆಸ್ಪತ್ರೆ ಮಾಲೀಕರಿಗೆ ಈತ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ದಿಢೀರ್ ಪತ್ತೆ; ಹೇಳಿದ್ದೇನು? – Kannada News | Darshan’s Ex Manager Mallikarjun Resurfaces, Reveals Disappearance Reason

ನಟ ದರ್ಶನ್ ಅವರು (Darshan) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ಸಾಕಷ್ಟು ಟೀಕೆಗಳು ಬಂದವು. ಇದೇ ವೇಳೆ ಅವರ ಮಾಜಿ ಮ್ಯಾನೇಜರ್ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ವಿಷಯ ಕೂಡ ಮುನ್ನೆಲೆಗೆ ಬಂತು. ‘ಅವರನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ತನಿಖೆ ಆಗಬೇಕು’ ಎಂದೆಲ್ಲ ಒತ್ತಾಯಿಸಲಾಯಿತು. ಈಗ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ಮಲ್ಲಿಕಾರ್ಜುನ್ ಅವರೇ ಎಲ್ಲರ ಎದುರು ಬಂದಿದ್ದು, ಇಷ್ಟು ದಿನ ತಲೆಮರಿಸಿಕೊಂಡಿದ್ದಕ್ಕ ಕಾರಣ ನೀಡಿದ್ದಾರೆ.

ಮಲ್ಲಿಕಾರ್ಜುನ ಅವರು ವೃತ್ತಿಯಲ್ಲಿ ನಿರ್ಮಾಪಕರಾಗಿದ್ದರು. ವಿತರಣೆ ಕೂಡ ಮಾಡುತ್ತಿದ್ದರು. ಅವರು ಯಶ್ ಅಭಿನಯದ ‘ಮೊದಲ ಸಲ’ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಅವರು ಹೋಟೆಲ್ ಉದ್ಯಮ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ. ಆ ಬಳಿಕ ದರ್ಶನ್ ಮ್ಯಾನೇಜರ್ ಆದರು. ನಂತರ ಅವರು ಕೆಲವು ವರ್ಷ ಮಾಯ ಆದರು. ರೇಣುಕಾಸ್ವಾಮಿ ಕೊಲೆ ಪ್ರಕರಣ ಚರ್ಚೆಗೆ ಬಂದಾಗ ಮಲ್ಲಿಕಾರ್ಜುನ ನಾಪತ್ತೆ ಪ್ರಕರಣದ ತನಿಖೆಯೂ ಆಗಬೇಕು ಎಂಬ ಒತ್ತಾಯ ಕೇಳಿ ಬಂತು.

ಈಗ ಮಲ್ಲಿಕಾರ್ಜುನ ಪತ್ತೆಯಾಗಿದ್ದಾರೆ. ಇಂದು (ಏಪ್ರಿಲ್ 16) ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಬಗ್ಗೆ ಸುತ್ತೋಲೆ ನೀಡಿರೋ ಅವರು, ‘ನಾನು ಮಲ್ಲಿಕಾರ್ಜುನ್ ಬಿ ಸಂಕನಗೌಡರ. ಮೂಲತಃ ಗದಗದವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹಾಯಕ ನಿರ್ದೇಶಕ ನಾಗಿ,ಸಹ ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿತರಕನಾಗಿ, ಕೆಲಸ ಮಾಡಿದ್ದೇನೆ. ಕೆಲವು ಅನಿವಾರ್ಯ ಕಾರಣಗಳಿಂದ, ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆ ಮತ್ತು ಉದ್ಯಮದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು’ ಎಂದು ಅವರು ನಾಪತ್ತೆ ಹಿಂದಿನ ಉದ್ದೇಶ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಫಾರಂ ಹೌಸ್ ಮ್ಯಾನೇಜರ್ ಎನ್ನಲಾದ ವ್ಯಕ್ತಿಯ ಆತ್ಮಹತ್ಯೆ: ಪ್ರಕರಣದ ಮರು ತನಿಖೆ?

‘ಕೆಲವು ವರ್ಷಗಳಾದ ಮೇಲೆ ಮತ್ತೆ ನಾನು ವಾಪಾಸ್ ಬಂದಿದ್ದೀನಿ. ನನ್ನ ಮುಂದಿನ ಯೋಜನೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ವೇಳೆ ದರ್ಶನ್ ಬಗ್ಗೆಯೂ ಅವರು ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version