ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ನೆಲಮಂಗಲ, ಏಪ್ರಿಲ್​​ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್​ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಆರ್​ಟಿಒ ಕಚೇರಿಯ ಪ್ರೊಬೇಷನರಿ ಇನ್ಸ್​ಪೆಕ್ಟರ್​ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000 ರೂಪಾಯಿ ಹಣವನ್ನು ಲಂಚ ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂ. ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ಇವರನ್ನು ಖೆಡ್ಡಾಕೆ ಕೆಡವಿದ್ದಾರೆ. ಓವರ್​ಲೋಡ್ ಟ್ರಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಪ್ರಶಾಂತ್ ದತ್ತಾತ್ರೇಯ ಎಂಬುವವರು ಲೋಕಾಯುಕ್ತಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್​ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದು ಹಾಕಲು ಈ ಸರಳ ವಿಧಾನ ಅನುಸರಿಸಿ

ಇಂದಿನ ಈ ಕಾಲಘಟ್ಟದಲ್ಲಿ ಕೃಷಿಯಲ್ಲಿ ಕೀಟನಾಶಕಗಳನ್ನು (pesticides) ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕೀಟನಾಶಕಗಳು ಬೆಳೆಗಳನ್ನು ರೋಗಗಳು ಮತ್ತು ಕೀಟಗಳಿಂದ ರಕ್ಷಿಸುತ್ತವೆ ನಿಜ. ಆದರೆ ಈ ರಾಸಾಯನಿಕಗಳ ಅವಶೇಷಗಳು ಹಣ್ಣು, ತರಕಾರಿಗಳ ಮೇಲ್ಮೈನಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಹೀಗಿರುವಾಗ ಮಾರುಕಟ್ಟೆಯಿಂದ ತಂದಂತಹ ಹಣ್ಣು-ತರಕಾರಿಗಳನ್ನು ಬರೀ ನೀರಿನಿಂದ ತೊಳೆದರೆ ರಾಸಾಯನಿಕ ಶೇಷ ಹಾಗೆಯೇ ಉಳಿದು ಬಿಡುತ್ತದೆ. ಇದು ನಮ್ಮ ದೇಹವನ್ನು ತಲುಪಿ ಕ್ರಮೇಣ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಈ ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನು ಅಸಮತೋಲನ, ಅಲರ್ಜಿ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅದಕ್ಕಾಗಿ‌ ಹಣ್ಣು ತರಕಾರಿಗಳನ್ನು ತೊಳೆಯಲು  ನೀವು ಈ ಕ್ಲೀನಿಂಗ್ ಟಿಪ್ಸ್‌ ಫಾಲೋ ಮಾಡಿ.

ಹಣ್ಣು- ತರಕಾರಿಗಳಿಂದ ಕೀಟನಾಶಕಗಳನ್ನು ತೆಗೆದುಹಾಕುವ ಸರಳ ವಿಧಾನ:

ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ: ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಲು ದೊಡ್ಡ ಪಾತ್ರೆಯನ್ನು ಬಳಸಿ. ನೀರನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಎರಡರಿಂದ ಐದು ನಿಮಿಷಗಳ ಕಾಲ ಅದರಲ್ಲಿ ಬಿಡಿ. ತೊಳೆಯುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ನೆನೆಸುವುದರಿಂದ ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಂತರ ನಲ್ಲಿಯನ್ನು ಆನ್ ಮಾಡಿ ಹಣ್ಣು ತರಕಾರಿಗಳನ್ನು ಉಜ್ಜುವ ಮೂಲಕ ಚೆನ್ನಾಗಿ ಸ್ವಚ್ಛಗೊಳಿಸಿ. ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿ ಸಿಲುಕಿರುವ ಕೀಟನಾಶಕಗಳು, ಧೂಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಕನಿಷ್ಠ 2-3 ನಿಮಿಷಗಳ ಕಾಲ ಅವುಗಳನ್ನು ಚೆನ್ನಾಗಿ ಸ್ಕ್ರಬ್ ಮಾಡಬೇಕು.

ಉಪ್ಪು ನೀರಿನಲ್ಲಿ ನೆನೆಸಿ: ಕೀಟನಾಶಕಗಳನ್ನು ತೆಗೆದುಹಾಕಲು ಉಪ್ಪುನೀರು ತುಂಬಾ ಸಹಾಯಕವಾಗಿದೆ. ನೀರಿಗೆ 1-2 ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಅದರಲ್ಲಿ 10-15 ನಿಮಿಷಗಳ ಕಾಲ ನೆನೆಸಿಡಿ. ಉಪ್ಪಿನ ದ್ರಾವಣವು ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿರುವ ರಾಸಾಯನಿಕಗಳನ್ನು ಸಡಿಲಗೊಳಿಸುತ್ತದೆ, ಇದರಿಂದ ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ಈ ವಿಧಾನವು ಬದನೆಕಾಯಿ, ಬೆಂಡೆಕಾಯಿ ಮತ್ತು ಎಲೆಕೋಸು ಮುಂತಾದ ತರಕಾರಿಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ನೆನೆಸಿದ ನಂತರ, ಅವುಗಳನ್ನು ಮತ್ತೆ ಶುದ್ಧ ನೀರಿನಿಂದ ತೊಳೆಯಬೇಕು.

ಅಡಿಗೆ ಸೋಡಾ ಬಳಸಿ: ಅರ್ಧ ಟೀಚಮಚ ಅಡಿಗೆ ಸೋಡಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10-15 ನಿಮಿಷಗಳ ಕಾಲ ನೆನೆಸಿಡಿ. ಅಡಿಗೆ ಸೋಡಾ ಹಣ್ಣು, ತರಕಾರಿಗಳ ಮೇಲಿನ ರಾಸಾಯನಿಕಗಳು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಈ ವಿಧಾನವು ಸೇಬು, ಟೊಮೆಟೊ ಮತ್ತು ಕ್ಯಾಪ್ಸಿಕಂನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಶುಚಿಗೊಳಿಸಲು  ಉಪಯುಕ್ತವಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಮದ್ದುಗಳು ಬೆಸ್ಟ್‌

ವಿನೆಗರ್‌ನಿಂದ ಸ್ವಚ್ಛಗೊಳಿಸಿ: ವಿನೆಗರ್ ನೈಸರ್ಗಿಕ ಶುಚಿಗೊಳಿಸುವ ಏಜೆಂಟ್ ಆಗಿದ್ದು, ಅದು ಬ್ಯಾಕ್ಟೀರಿಯಾ ಮತ್ತು ಸ್ವಲ್ಪ ಮಟ್ಟಿಗೆ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ 1-2 ಚಮಚ ವಿನೆಗರ್ ಸೇರಿಸಿ, ನಂತರ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ಈ ವಿಧಾನವು ಟೊಮೆಟೊ ಅಥವಾ ಸೌತೆಕಾಯಿಯಂತಹ ತರಕಾರಿಗಳನ್ನು ಕ್ಲೀನ್‌ ಮಾಡಲು ಒಳ್ಳೆಯದು. ಆದ್ರೆ ಹೆಚ್ಚು ವಿನೆಗರ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ರುಚಿ ಮತ್ತು ವಾಸನೆಯ ಮೇಲೆ ಪರಿಣಾಮ ಬೀರುತ್ತದೆ.

ಉಗುರು ಬೆಚ್ಚಗಿನ ನೀರು: ತರಕಾರಿಗಳು ಮತ್ತು ಹಣ್ಣುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದಕ್ಕೆ ಬೇಕಾದರೆ ಉಪ್ಪನ್ನು ಕೂಡ ಸೇರಿಸಬಹುದು. ಇದು ಹಣ್ಣು ತರಕಾರಿಗಳ ಮೇಲ್ಮೈನಲ್ಲಿ ಅಂಟಿರುವ ರಾಸಾಯನಿಕ ಶೇಷಗಳನ್ನು ತೆಗೆದು ಹಾಕುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಶಾ ಭೋಸ್ಲೆ ಬದಲು ಬೇರೆ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ ಅಥಿಯಾ ಶೆಟ್ಟಿ; ಸಖತ್ ಟ್ರೋಲ್

ಭಾರತೀಯ ಚಿತ್ರರಂಗದ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಗಲಿಕೆಯಿಂದ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರು ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಈ ದುಃಖದ ಸಂದರ್ಭದಲ್ಲೂ ನಟಿ ಅಥಿಯಾ ಶೆಟ್ಟಿ (Athiya shetty) ಅವರು ಮಾಡಿದ ಒಂದು ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭರದಲ್ಲಿ ಅಥಿಯಾ ಅವರು ಲತಾ ಮಂಗೇಶ್ಕರ್ (Lata Mangeshkar) ಫೋಟೋವನ್ನು ಹಂಚಿಕೊಂಡಿರುವುದೇ ಈ ವಿವಾದಕ್ಕೆ ಕಾರಣ ಆಗಿದೆ.

ಏಪ್ರಿಲ್ 12ರಂದು ಮುಂಬೈನಲ್ಲಿ ಆಶಾ ಭೋಸ್ಲೆ ನಿಧನರಾದ ನಂತರ, ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತಾಪ ಸೂಚಕ ಸಂದೇಶವೊಂದನ್ನು ಹಾಕಿದ್ದರು. ಆದರೆ, ಆ ಸಂದೇಶದೊಂದಿಗೆ ಅವರು ಲಗತ್ತಿಸಿದ್ದು ಆಶಾ ಭೋಸ್ಲೆ ಅವರ ಫೋಟೋವನ್ನಲ್ಲ. ಬದಲಾಗಿ, 2022ರಲ್ಲಿ ನಿಧನರಾದ ಲತಾ ಮಂಗೇಶ್ಕರ್ ಅವರ ಫೋಟೋವನ್ನು!

ಈ ತಪ್ಪನ್ನು ತಕ್ಷಣವೇ ಗುರುತಿಸಿದ ನೆಟ್ಟಿಗರು ಅಥಿಯಾ ವಿರುದ್ಧ ಮುಗಿಬಿದ್ದಿದ್ದಾರೆ. ತಪ್ಪು ಅರಿವಾದ ತಕ್ಷಣ ಅಥಿಯಾ ಆ ಪೋಸ್ಟ್ ಡಿಲೀಟ್ ಮಾಡಿ, ನಂತರ ಆಶಾ ಭೋಸ್ಲೆ ಅವರ ಸರಿಯಾದ ಫೋಟೋವನ್ನು ಹಂಚಿಕೊಂಡರೂ ಸಹ, ಅದಾಗಲೇ ಅದರ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು. ಅಥಿಯಾ ಅವರ ಈ ನಡೆಯನ್ನು ‘ಬೇಜವಾಬ್ದಾರಿತನ’ ಎಂದು ಕರೆದಿರುವ ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ.

‘ಬುದ್ಧಿಯಿಲ್ಲದ ಬ್ಯೂಟಿ’ ಎಂದು ನೆಟ್ಟಿಗರೊಬ್ಬರು ಅಥಿಯಾ ಅವರನ್ನು ಟ್ರೋಲ್ ಮಾಡಿದ್ದಾರೆ. ‘ಅಥಿಯಾ ಶೆಟ್ಟಿ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಆಶಾ ಭೋಸ್ಲೆ ಅವರ ಬದಲಿಗೆ ಲತಾ ಜೀ ಫೋಟೋ ಹಾಕಿದ್ದಾರೆ. ನೆಪೋ ಕಿಡ್​ಗಳಿಗೆ ಕಷ್ಟಪಡದೆ ಪ್ರಸಿದ್ಧಿ ಬೇಕು. ಅದಕ್ಕೇ ಇಂತಹ ಎಡವಟ್ಟುಗಳನ್ನು ಮಾಡುತ್ತಾರೆ’ ಎಂಬ ಖಾರದ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

‘ಇಂತಹ ಗಂಭೀರ ವಿಷಯಗಳಲ್ಲಿ ಇಷ್ಟು ಅಸಡ್ಡೆ ತೋರುವುದು ಸರಿಯಲ್ಲ. ಕನಿಷ್ಠ ಫೋಟೋ ಸರಿಯಾಗಿದೆಯೇ ಎಂದು ಪರಿಶೀಲಿಸುವ ವ್ಯವಧಾನವೂ ಇಲ್ಲದಿದ್ದರೆ ಸುಮ್ಮನಿರಬೇಕು’ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತಮ್ಮದೇ ಚಿತ್ರರಂಗದ ಹಿರಿಯರ ಬಗ್ಗೆ ಇಷ್ಟೊಂದು ಅಜ್ಞಾನ ಸರಿಯಲ್ಲ’ ಎಂದು ಕೂಡ ಅಥಿಯಾ ಶೆಟ್ಟಿ ಅವರನ್ನು ಟೀಕಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

ಸಂಬಳ ಇತ್ಯಾದಿ ನಿಯಮಿತ ಸಂಪಾದನೆ ಹೊಂದಿರುವ ಜನರಿಗೆ ಎಸ್​ಐಪಿ (SIP- Systematic Investment Plan) ಮೂಲಕ ಹೂಡಿಕೆ ಮಾಡುವುದು ಬಹಳ ಪ್ರಯೋಜನಕಾರಿ. ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಾಗ ದೀರ್ಘಾವಧಿಯಲ್ಲಿ ಅಚ್ಚರಿ ಎನಿಸುವಷ್ಟು ದೊಡ್ಡ ಮೊತ್ತವಾಗಿ ಬೆಳೆದಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳಿಂದ ಇದು ಸಾಧ್ಯ. ಎಸ್​ಐಪಿಗಳು ಎಲ್ಲಾ ಅಗತ್ಯಗಳಿಗೂ ಹೊಂದಿಕೆಯಾಗುವ ಹೂಡಿಕೆ ಯೋಜನೆಗಳಾಗಿವೆ. ಎಸ್​ಐಪಿ ಜೊತೆಗೆ ಸ್ಟೆಪ್ ತಂತ್ರ ಅನುಸರಿಸಿದರೆ ಪ್ರಯೋಜನ ಇನ್ನೂ ಹೆಚ್ಚಿನದ್ದಾಗಿರುತ್ತದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ಅವರು ಎಸ್​ಐಪಿ ಹಾಗೂ ವಾರ್ಷಿಕ ಸ್ಟೆಪಪ್ ತಂತ್ರ ಮಾಡುವ ಮ್ಯಾಜಿಕ್ ಅನ್ನು ತೋರಿಸಿ, ಎಕ್ಸ್ ಪೋಸ್ಟ್ ಹಾಕಿದ್ದಾರೆ. ‘ಸಣ್ಣ ಮೊತ್ತದ ಎಸ್​ಐಪಿ ಇದ್ದರೆ ವಾರ್ಷಿಕ ಶೇ. 10 ಸ್ಟೆಪಪ್ ಏಕೈಕ ಪರಿಹಾರ ಎನಿಸುತ್ತದೆ’ ಎಂದು ತಿಳಿಸಿರುವ ಕೌಶಿಕ್ ಅವರು ಒಂದು ಉದಾಹರಣೆ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

25ರ ವಯಸ್ಸಿನಲ್ಲಿ ನೀವು 2,000 ರೂಗಳ ಮಾಸಿಕ ಎಸ್​ಐಪಿ ಹೂಡಿಕೆ ಆರಂಭಿಸುತ್ತೀರಿ. ಹೀಗೆ 55 ವರ್ಷ ವಯಸ್ಸಿನವರೆಗೆ, ಪ್ರತೀ ತಿಂಗಳು ಹೂಡಿಕೆ ಮಾಡಿದಾಗ, ಮತ್ತು ಆ ಫಂಡ್​ನಿಂದ ಶೇ. 12ರಷ್ಟು ರಿಟರ್ನ್ ಬಂದರೆ 2,000 ರೂಗಳ ಮಾಸಿಕ ಎಸ್​ಐಪಿಯ ಮೌಲ್ಯ 70.6 ಲಕ್ಷ ರೂ ಆಗುತ್ತದೆ. ಶೇ. 6ರ ಹಣದುಬ್ಬರ ಪರಿಗಣಿಸಿ, 30 ವರ್ಷಗಳ ನಂತರ ಈ 70 ಲಕ್ಷ ರೂನ ನಿಜಮೌಲ್ಯ ಇವತ್ತಿನ 12.3 ಲಕ್ಷ ರೂಗೆ ಸಮವಾಗಿರುತ್ತದೆ ಎನ್ನುವುದು ಕೌಶಿಕ್ ಅವರ ವಾದ.

ಮ್ಯಾಜಿಕ್​ನಂತೆ ಕೆಲಸ ಮಾಡುತ್ತೆ ಸ್ಟೆಪಪ್ ಎಸ್​ಐಪಿ

ಎಸ್​ಐಪಿ ಹೂಡಿಕೆಯಲ್ಲಿ ಸ್ಟೆಪಪ್ ವಿಧಾನ ಜನಪ್ರಿಯವಾಗಿದೆ. ಸ್ಟೆಪಪ್ ಎಂದರೆ ಹೂಡಿಕೆ ಹೆಚ್ಚಿಸುವುದು. ಸಂಬಳದವರಾಗಿದ್ದರೆ ವರ್ಷ ವರ್ಷ ವೇತನ ಏರಿಕೆ ಆಗುವ ಅವಕಾಶ ಇರುತ್ತದೆ. ಹೀಗೆ ಆದಾಯ ಹೆಚ್ಚಿದಾಗ ಹೂಡಿಕೆಯನ್ನೂ ಹೆಚ್ಚಿಸುವುದು ಉತ್ತಮ. ಅದೇ ಸ್ಟೆಪಪ್.

ನಿಮ್ಮ ಮಾಸಿಕ 2,000 ರೂ ಎಸ್​ಐಪಿಗೆ ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಿ. 30 ವರ್ಷದಲ್ಲಿ ನಿಮ್ಮದು 2.17 ಕೋಟಿ ರೂ ಕಾರ್ಪಸ್ ಆಗಿರುತ್ತದೆ. ಅದೂ ಕೇವಲ 2,000 ರೂ ಮಾಸಿಕ ಹೂಡಿಕೆಯಿಂದಲೇ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಮಾಸಿಕ 10,000 ರೂ ಎಸ್​ಐಪಿ, 25 ವರ್ಷ ಸ್ಟೆಪಪ್​ನೊಂದಿಗೆ…

ಒಂದು ವೇಳೆ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡಬಲ್ಲಿರಾದರೆ, ಮತ್ತು ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸಬಲ್ಲಿರಾದರೆ, 25 ವರ್ಷದಲ್ಲಿ ನಿಮ್ಮ ಹೂಡಿಕೆ ಹೆಚ್ಚೂಕಡಿಮೆ 4 ಕೋಟಿ ರೂ ಮೊತ್ತ ನಿಮ್ಮೊಂದಿಗೆ ಇರುತ್ತದೆ. ಇದೇ ರೀತಿ ಹೂಡಿಕೆಯನ್ನು ಇನ್ನೂ ಐದು ವರ್ಷ ಮುಂದುವರಿಸಿಬಿಟ್ಟರೆ ನಿಮ್ಮ ಕಾರ್ಪಸ್ ಬರೋಬ್ಬರಿ 8 ಕೋಟಿ ರೂ ಆಗುತ್ತದೆ. ಇವೆಲ್ಲಾ ಎಣಿಕೆಗಳು ನಿಜವಾಗಬೇಕಾದರೆ ನೀವು ಹೂಡಿಕೆ ಮಾಡಿರುವ ಫಂಡ್ ವಾರ್ಷಿಕ ಶೇ. 12ರ ವೇಗದಲ್ಲಿ ಗಳಿಕೆ ಮಾಡಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ತಲೆದೂರಿದ ಕಸದ ಸಮಸ್ಯೆ: ಜಿಬಿಎ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಗರಂ

ಬೆಂಗಳೂರು, ಏಪ್ರಿಲ್​ 13: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಕಸದ (Garbage) ಸಮಸ್ಯೆ ತಲೆದೂರಿದೆ. ಹೀಗಾಗಿ ಬಿದ್ದ ರಾಶಿ ರಾಶಿ ಕಸವನ್ನು ಜನರೇ ಎತ್ತಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ರಸ್ತೆ ಬಳಿ ಬಿದ್ದ ಕಸವನ್ನು ಜನರೇ ಜೆಸಿಬಿ ಮತ್ತು ಲಾರಿ ಕರೆಸಿ ಕಸ ಎತ್ತಿಸಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಈ ಮಧ್ಯೆ  ನಗರದಲ್ಲಿನ ಕಸವನ್ನು ಸಂಗ್ರಹ ಮಾಡಿ, ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಬಿಎ ವಿರುದ್ಧ ಉದ್ಯಮಿ ಗರಂ

ಈ ಬಗ್ಗೆ ಎಕ್ಸ್​ನಲ್ಲಿ ಕಸದ ವಿಡಿಯೋ ಮಾಡಿ ಪೋಸ್ಟ್ ಮಾಡಿ, ಟ್ವೀಟ್ ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಳಿಸಿಕೊಳ್ಳುತ್ತಿದೆಯಾ? ಇಲ್ಲಾ ನಟಿಸುತ್ತಿದೆಯಾ? ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಸದ ಸಮಸ್ಯೆಗೆ ಕಿರಣ್ ಮಜುಂದಾರ್​​ ಕಿಡಿಕಾರಿದ್ದರು.

ತಾವೇ ಕಸ ಎತ್ತಿದ ಸ್ಥಳೀಯರು 

ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 171 ಗುರಪ್ಪನಪಾಳ್ಯದಲ್ಲಿ ಎಲೆಡೆ ಕಸದ ದರ್ಶನವೇ ಆಗುತ್ತೆ. ವಾರ ಅಲ್ಲ, ತಿಂಗಳುಗಳೇ ಕಳೆದರೂ ಕಸ ಎತ್ತುವುದಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡಿಲ್ಲ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಈ ವಾರ್ಡ್ ಅನ್ನ ಮರೆತೇ ಬಿಟ್ಟಿದ್ದಾರೆ. ಹೀಗಾಗಿ ದಿಕ್ಕು ತೋಚದ ಸ್ಥಳೀಯರು ತಾವೇ ನಿನ್ನೆ ಕಸ ಎತ್ತಿಸಿದ್ದಾರೆ. ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕ ಮಾಸ್ತಿ ಜಾಕಿರ್ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಕಸ ಎತ್ತುವ ಅಭಿಯಾನ ಮಾಡಿದ್ದಾರೆ.

ಅಧಿಕಾರಿಗಳಿಗೆ ಹಿಡಿಶಾಪ

ಅದೇ ರೀತಿ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ಸ್ಥಳೀಯ ನಿವಾಸಿಗಳು ರೊಚ್ಚಿಗೆದ್ದಿದ್ದರು. GBA ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಿದ್ದು ನಾರುತ್ತಿರುವ ಕಸದ ರಾಶಿಯಿಂದ ಎದುರಾಗಿರುವ ಅನಾನುಕೂಲಗಳನ್ನು ಹೇಳುತ್ತಾ ಹಿಡಿಶಾಪ ಹಾಕಿದರು. ಕಸವನ್ನಾದರೂ ಎತ್ತಿ, ಇಲ್ಲವಾದರೆ ಮತ್ತೆ ಕಸ ಬೀಳದಂತೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಪುಟ ಪುನಾರಚನೆಗೆ ಡಿಕೆಶಿ ವಿರೋಧ: ದಿಲ್ಲಿಗೆ ಹೋದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ

ಬೆಂಗಳೂರು, (ಏಪ್ರಿಲ್ 13): ಕರ್ನಾಟಕದಲ್ಲಿ ಎರಡು ಉಪ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ (Cabinet Reshuffle) ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25 ಕ್ಕೂ ಅಧಿಕ ಶಾಸಕರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆದ್ರೆ, ಶಾಸಕರ ದೆಹಲಿ ಯಾತ್ರೆಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಬೆಂಬಲಿಸಿದರೆ ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ಅಲ್ಲದೇ ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದ್ದು, ಇದು ರಾಜ್ಯ ಕಾಂಗ್ರೆಸ್​​​ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ

ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಶಾಸಕರ ದೆಹಲಿ ಪ್ರವಾಸ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲಾ ಶಾಸಕರು ಮಾತನಾಡಬೇಕು. ಕೆಲವರು ಏನೇನು​ ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮೀಡಿಯಾ ನಿಮ್ಮ ಭವಿಷ್ಯ ಅಲ್ಲ, ಪಾರ್ಟಿ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಇದು ಸಂಪುಟ ಪುನಾರಚನೆ ಕೇಳುವ ಟೈಂ ಅಲ್ಲ. ಈಗ ಮಂತ್ರಿ ಮಾಡೋ ಟೈಂ ಅಲ್ಲ, ಮೊದಲು ಚುನಾವಣೆ ಮಾಡೋಣ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ತೀವ್ರಗೊಂಡ ಸಚಿವ ಸಂಪುಟ ಪುನಾರಚನೆ ಕೂಗು: ದಿಲ್ಲಿ ಯಾತ್ರೆ ಕೈಗೊಂಡಿರುವ ಶಾಸಕರು ಯಾರ್ಯಾರು?

ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ

ವರಿಷ್ಠರನ್ನ ಭೇಟಿ ಮಾಡೋದು ತಪ್ಪೇನಿಲ್ಲ. ಆದ್ರೆ ಬೇಕಾಬಿಟ್ಟಿ ಏನೇನೋ ಕಮೆಂಟ್ ಮಾಡೋದಾದ್ರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಹತ್ತಿರ ಕೆಲವರು ಬಂದು ಹೇಳಿದ್ದರು. ಹೋಗಿ ಕೇಳೋದರಲ್ಲಿ ತಪ್ಪು ಇಲ್ಲ . ಫಸ್ಟ್ ಎಂಎಎಲ್ ಆದವರು, ಎರಡನೇ ಬಾರಿ ಆದವರು ಕೇಳೋದು ತಪ್ಪು ಏನೆಲ್ಲ. ಹಿಂದೆ ಎಲ್ಲಾ ನಡೆದಿದೆ. ಆದ್ರೆ ಇದು ಟೈಮ್ ಅಲ್ಲ, ಇದು ಟೈಮ್ ಅಲ್ಲ. ಈಗ ಎಲೆಕ್ಷನ್ ಇನ್ನೂ ನಡೆಯುತ್ತಿದೆ. ಹೀಗಾಗಿ ಮೊದಲು ಎಲೆಕ್ಷನ್ ಮಾಡೋಣ ಎಂದಿದ್ದಾರೆ.

ಶಾಸಕರ ದೆಹಲಿ ದಂಡಯಾತ್ರೆ ಬೆಂಬಲಿಸಿದ ಸಿಎಂ

ಹೌದು…ಅತ್ತ ಡಿಕೆ ಶಿವಕುಮಾರ್ ಸಚಿವ ಪುನಾರಚಣೆಗೆ ವಿರೋಧ ವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದ್ರೆ, ಇದಕ್ಕೂ ಮೊದಲು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಸಂಬಂಧ ದೆಹಲಿಗೆ ತೆರಳಿದ ಶಾಸಕರ ಪರವಾಗಿ ಮಾತನಾಡಿದ್ದಾರೆ

ಶಾಸಕರ ನಡೆ ಬಗ್ಗೆ ನಿನ್ನೆ(ಏಪ್ರಿಲ್ 12) ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲಿಸಿದ್ದಾರೆ.

ಮತ್ತೆ ಶುರುವಾಯ್ತಾ ಡಿಕೆಶಿ-ಸಿದ್ದರಾಮಯ್ಯ ಮುಸುಕಿನ ಗುದ್ದಾಟ?

ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಮಯ ಸಂದರ್ಭ ಬಂದಾಗೆಲ್ಲಾ ಡಿಕೆ ಶಿವಕುಮಾರ್ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ.  ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಆಗಾಗ ದೆಹಲಿಗೆ ಹೋಗಿರು ಬರುತ್ತಲೇ ಇದ್ದಾರೆ. ಇನ್ನು ಅವರ ಬೆಂಬಲಿಗ ಶಾಸಕರು ಸಹ ನಾಯಕತ್ವ ಬದಲಾವಣೆ ಬಗ್ಗೆಯೂ ಧ್ವನಿ ಎತ್ತುತ್ತಲೇ ಇದ್ದಾರೆ. ಆದ್ರೆ, ಇದೀಗ ಸಂಪುಟ ಪುನಾರಚನೆಗೆ ಡಿಕೆ ಶಿವಕುಮಾರ್ ಆಗಲಿ ಅಥವಾ ಅವರ ಬಣದ ಶಾಸಕರಾಗಲಿ ಯಾವುದೇ ಬೆಂಬಲ ಕೊಡುತ್ತಿಲ್ಲ, ಬದಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನಿರ್ಮಿಸಿದ್ದು, ಖರೀದಿಸಿದ್ದಲ್ಲ’; ಕಟ್ಟುಮಸ್ತಾದ ದೇಹದ ಫೋಟೋ ಹಂಚಿಕೊಂಡ ಜೂನಿಯರ್ ಎನ್​​​ಟಿಆರ್

ಜೂನಿಯರ್ ಎನ್​​ಟಿಆರ್ (JR NTR) ಅವರು ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಅವರು ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಾಗಿ ಅವರು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಈಗ ಜೂನಿಯರ್ ಎನ್​ಟಿಆರ್ ಅವರು ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಜೂನಿಯರ್ ಎನ್​​ಟಿಆರ್ ಅವರು ಕೊನೆಯದಾಗಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದು ‘ದೇವರ’ ಚಿತ್ರದಲ್ಲಿ. ಈ ಸಿನಿಮಾ ಮೋಡಿ ಮಾಡುವಲ್ಲಿ ವಿಫಲವಾಯಿತು. ಆ ಬಳಿಕ ಅವರು ‘ವಾರ್ 2’ ಸಿನಿಮಾ ಮಾಡಿದರು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈಗ ಅವರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ನಿಂತಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ತಂಡದವರು ಪ್ರತಿ ಹಂತದಲ್ಲೂ ಇದಕ್ಕೆ ಸ್ಪಷ್ಟನೆ ನೀಡುತ್ತಾ ಹೊಗುತ್ತಿದ್ದಾರೆ. ಈಗ ಜೂನಿಯರ್ ಎನ್​​ಟಿಆರ್ ಟ್ರೋಲ್​​ಗಳಿಗೆ ಉತ್ತರ ನೀಡಿದ್ದಾರೆ.

ಜೂನಿಯರ್ ಎನ್​ಟಿಆರ್ ಅವರು ಈಗ ಹಿಂಭಾಗದಿಂದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಫಿಟ್ ಆದ ಬಾಡಿ ಗಮನ ಸೆಳೆದಿದೆ. ‘ಇದನ್ನು ನಿರ್ಮಿಸಿದ್ದು, ಖರೀದಿ ಮಾಡಿದ್ದಲ್ಲ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಅವರು ಉತ್ತರ ಕೊಟ್ಟಿದ್ದಾರೆ.

‘ಡ್ರ್ಯಾಗನ್’ ಚಿತ್ರಕ್ಕಾಗಿ ಜೂ.ಎನ್​ಟಿಆರ್ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಕೆಲವರಿಗೆ ಈ ಬಗ್ಗೆ ಬೇಸರ ಇದೆ. ಅವರು ಸಿನಿಮಾ ಶೂಟ್ ಮುಗಿದ ಬಳಿಕ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಸಲಾರ್’ ಚಿತ್ರವನ್ನು. ಈ ಸಿನಿಮಾ ಹಿಟ್ ಆಗಿಲ್ಲ. ಆ ಬಳಿಕ ಅವರು ‘ಡ್ರ್ಯಾಗನ್’ ಚಿತ್ರ ಒಪ್ಪಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಮ ಪಾಶದಂತೆ ಹಾರಿ ಬಂದ ಓಮ್ನಿ: ಪಾದಚಾರಿಗಳ ಮೇಲೆ ಎರಗಿದ ಭಯಾನಕ ದೃಶ್ಯ

ಬೆಳ್ತಂಗಡಿ, ಏ.13: ತಾಲೂಕಿನ ಕೊಡಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳ ಮೇಲೆ ಉರುಳಿ ಬಿದ್ದಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಬೊಲೆರೋ ಜೀಪ್‌ನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು, ತೀಕ್ಷ್ಣವಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಉರುಳುತ್ತಾ ಬಂದ ಕಾರು ಹಠಾತ್ತಾಗಿ ಪಾದಚಾರಿಗಳ ಗುಂಪಿನ ಮೇಲೆ ಹರಿದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಕೂದಲೆಳೆ ಅಂತರದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಮತ್ತೊಬ್ಬ ಮಹಿಳೆ ಪಲ್ಟಿಯಾದ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಕಾರಿನ ಅಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ಹೊರತೆಗೆದು ತಕ್ಷಣವೇ ಆಟೋರಿಕ್ಷಾ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಇಡೀ ಘಟನೆಯ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026: ಅಡ್ವಾನ್ಸ್ ಎಗ್ಜಾಮ್ ಸಿಟಿ ಇಂಟಿಮೇಶನ್ ಸ್ಲಿಪ್ ಬಿಡುಗಡೆ; ಡೌನ್​ಲೋಡ್ ಮಾಡುವುದು ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 13: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಈ ವರ್ಷದ ನೀಟ್ ಯುಜಿ (NEET UG 2026) ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ‘ಅಡ್ವಾನ್ಸ್ ಎಗ್ಜಾಮ್ ಸಿಟಿ ಇಂಟಿಮೇಶನ್ ಸ್ಲಿಪ್’ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಸ್ಲಿಪ್ ಮೂಲಕ ಅಭ್ಯರ್ಥಿಗಳು ತಮ್ಮ ಪರೀಕ್ಷೆ ನಡೆಯುವ ನಗರವನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ಈ ವಿವರಗಳನ್ನು ಪರಿಶೀಲಿಸಬಹುದು. ಆದರೆ, ಸಂಸ್ಥೆ ಸ್ಪಷ್ಟಪಡಿಸಿರುವಂತೆ ಈ ಸ್ಲಿಪ್ ಕೇವಲ ಮಾಹಿತಿಗಾಗಿ ಮಾತ್ರವಾಗಿದ್ದು, ಇದು ಪ್ರವೇಶ ಪತ್ರ (Admit Card) ಆಗಿರುವುದಿಲ್ಲ. ಅಡ್ಮಿಟ್ ಕಾರ್ಡ್‌ನಲ್ಲಿ ಮಾತ್ರ ಪರೀಕ್ಷಾ ಕೇಂದ್ರದ ನಿಖರ ವಿಳಾಸ, ಪ್ರವೇಶ ಸಮಯ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು ನೀಡಲಾಗುತ್ತವೆ. ಆದ್ದರಿಂದ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್​ಗಾಗಿ ಕಾಯಬೇಕಾಗುತ್ತದೆ.

ಪರೀಕ್ಷೆ ಯಾವಾಗ?

ನೀಟ್ ಪರೀಕ್ಷೆ ಮೇ 3, 2026ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಪರೀಕ್ಷೆಯನ್ನು ಪೆನ್ ಮತ್ತು ಪೇಪರ್ ಮಾದರಿಯಲ್ಲಿ ನಡೆಸಲಾಗುತ್ತದೆ. ಭಾರತದಲ್ಲಿನ 552 ನಗರಗಳು ಹಾಗೂ ವಿದೇಶದಲ್ಲಿನ 14 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತದೆ.

ಈ ಸಿಟಿ ಸ್ಲಿಪ್ ವಿದ್ಯಾರ್ಥಿಗಳಿಗೆ ಪೂರ್ವ ಯೋಜನೆಗೆ ಸಹಾಯ ಮಾಡುತ್ತದೆ. ದೂರದ ಸ್ಥಳಗಳಿಗೆ ಪ್ರಯಾಣಿಸುವವರು ರೈಲು, ವಿಮಾನ ಅಥವಾ ವಸತಿ ವ್ಯವಸ್ಥೆಗಳನ್ನು ಮುಂಚಿತವಾಗಿ ಬುಕ್ ಮಾಡಿಕೊಳ್ಳಬಹುದು. ಇದರಿಂದ ಪರೀಕ್ಷಾ ದಿನದ ಒತ್ತಡವನ್ನು ಕಡಿಮೆ ಮಾಡಬಹುದು.

ಸಿಟಿ ಇಂಟಿಮೇಶನ್ ಸ್ಲಿಪ್ ಡೌನ್‌ಲೋಡ್ ಮಾಡುವುದು ಹೇಗೆ?

ಅಭ್ಯರ್ಥಿಗಳು ಅಧಿಕೃತ NTA ಅಥವಾ NEET ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ರುಜುವಾತುಗಳೊಂದಿಗೆ ಲಾಗಿನ್ ಆಗಬೇಕು. ಡ್ಯಾಶ್‌ಬೋರ್ಡ್ ಒಳಗೆ ಹೋದ ನಂತರ, ಪರೀಕ್ಷಾ ನಗರದ ವಿವರಗಳನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.ವಿದ್ಯಾರ್ಥಿಗಳು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಮತ್ತು ಪರೀಕ್ಷಾ ದಿನಾಂಕದ ಮೊದಲು ನಗರದ ಸ್ಥಳವನ್ನು ಚೆನ್ನಾಗಿ ತಿಳಿದುಕೊಳ್ಳಲು ಸೂಚಿಸಲಾಗಿದೆ.

ತಾಂತ್ರಿಕ ದೋಷ ಎದುರಾದರೆ ಏನು ಮಾಡಬೇಕು?

ಸ್ಲಿಪ್ ಡೌನ್‌ಲೋಡ್ ಆಗದಿದ್ದಲ್ಲಿ ಅಥವಾ ತಾಂತ್ರಿಕ ತೊಂದರೆ ಎದುರಾದಲ್ಲಿ, ಅಭ್ಯರ್ಥಿಗಳು NTA ಸಹಾಯವಾಣಿ ಸಂಖ್ಯೆ 011-40759000 ಅಥವಾ 011-69227700 ಅಥವಾ neetug2026@nta.ac.in ಅನ್ನು ಇಮೇಲ್ ಮೂಲಕ ಸಂಪರ್ಕಿಸಬಹುದು. ಅಧಿಕೃತ ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸಂಸ್ಥೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಹಾಸನ (ಏಪ್ರಿಲ್.13): 8 ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ (Lover) ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ಚಿಸ್ಟ್ ಸಿಕ್ಕಿದೆ. ಮನೆಬಿಟ್ಟು ಹೋಗಿ ಪ್ರಿಯಕರನ ಕೈಯಿಂದ ತಾಳಿಕಟ್ಟಿಸಿಕೊಂಡಿದ್ದ ಮಹಿಳೆ ಇದೀಗ ತನ್ನನ್ನು ವಾಪಸ್ ಕರೆದುಕೊಂಡು ಹೋಗಿ ಎಂದು ಗಂಡನ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೌದು…ಪ್ರಕಾಶ್-ಹರ್ಷಿತಾ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಪ್ರಿಯಕರನಿಂದ ಹೋಗಿದ್ಯಾಕೆ? ಕಾರಿನಲ್ಲಿ ತಾಳಿಕಟ್ಟಿಸಿಕೊಂಡಿದ್ಯಾಕೆ? ಎನ್ನುವುದನ್ನು ಗಂಡನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಪ್ಪಾಯ್ತು ಎಂದು ಸಹ ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ : ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ಪ್ರಕಾಶ್-ಹರ್ಷಿತಾ ಮಾತನಾಡಿದ ಆಡಿಯೋನಲ್ಲೇನಿದೆ?

ಪ್ರಕಾಶ್ (ಗಂಡ) : ಇಷ್ಟೆಲ್ಲಾ ಆಗಿದೆ ಅಪ್ಪಿ ಏನ್ಮಾಡೋದು, ನೋಡಿದ್ರೆ ಅವನು‌ ನೂರಕ್ಕೆ ನೂರು ಈ ತರ ಆಗಿದೆ ಬೇಕಾದರೆ ರಿಪೋರ್ಟ್ ಎಲ್ಲಾ ಇದೆ ಕಳುಸ್ಲಾ ಅಂದ

ಹರ್ಷಿತಾ (ಹೆಂಡ್ತಿ) : ಕಳುಸ್ಕೊಡಿ ಆಯ್ತು

ಪ್ರಕಾಶ್ : ಗೊತ್ತಾಗುತ್ತಲಾ ಈಗ ಆಗಿರೋದು ಏನು ಅಂಥ, ನೀನು ಅದು ಹೇಗೆ ಕಾರಿನಲ್ಲಿ ನಗು ನಗುತ್ತಾ ತಾಳಿ ಕಟ್ಟಿಸಿಕೊಂಡೆ, ಬ್ಲಾಕ್‌ಮೇಲೆ ಮಾಡಿದ್ರೆ ನಿನ್ನ ಮನಸ್ಸಿನಲ್ಲಿ, ಮುಖದಲ್ಲಿ ಇದು ಇರಬೇಕಿತ್ತು

ಹರ್ಷಿತಾ : ಅವಾಗ ಬ್ಲಾಕ್‌ಮೇಲ್ ಅಲ್ಲಾ, ಈಗ ಲಾಸ್ಟ್‌ಗೆ ಬ್ಲಾಕ್‌ಮೇಲ್ ಮಾಡಿದ್ದು ಅದಕ್ಕೆ ಬಂದಿದ್ದು, ಇಲ್ಲ ಅಂದರೆ ಏನಕ್ಕೆ ಬರ್ತಿದ್ದೆ

ಪ್ರಕಾಶ್ : ಅವಾಗ ಮಾತ್ರ ಏಕೆ ಖುಷಿಯಾಗಿ ಕಟ್ಟಿಸಿಕೊಂಡೆ

ಹರ್ಷಿತಾ : ಅವಾಗ ಅವನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದ, ನನ್ನ ತಲೆಗೆ ಎಲ್ಲಿ ಬರುತ್ತೆ ನಾನು ಹೇಳಿಬಿಟ್ಟು ಸುಮ್ನೆ ಬರೋಣ ಅಂಥ ಬಂದೆ, ಹಿಂಗೆ ಆಗುತ್ತೆ, ಬ್ಲಾಕ್ ಮೇಲ್ ಮಾಡ್ತಾನೆ ಅಂಥ ಗೊತ್ತಿರಲಿಲ್ಲ

ಪ್ರಕಾಶ್ : ಅವನ್ಯಾಕೆ ಸೂಸೈಡ್ ಮಾಡ್ಕತನೆ, ನಿನಗೆ ಏಕೆ ಹೀಗ್ ಮಾಡ್ದಾ, ನೀನು ಹೇಳದ್ರಲ್ಲಿ ಒಂದು ಕ್ಲಾರಿಫಿಕೇಷನ್ ಇಲ್ಲಾ

ಹರ್ಷಿತಾ : ಸೂಸೈಡ್ ಮಾಡ್ಕತಿನಾ ಅಂದ ಅದ್ಕೆ

ಪ್ರಕಾಶ್ : ನೀನು ಕಾರಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಿದ್ದಿಯಲ್ಲವಾ

ಹರ್ಷಿತಾ : ಒಂಚೂರು ವಿಷ ಕುಡಿದಿದ್ದಕ್ಕೆ ಹಾಸನಕ್ಕೆ ಬಂದೆ

ಪ್ರಕಾಶ್ : ಪಡುವಲಹಿಪ್ಪೆ ಆಸ್ಪತ್ರೆಯಲ್ಲಿ ರೆಡ್ ಶರ್ಟ್ ಹಾಕೊಂಡು ಗ್ಲೂಕೋಸ್ ಹಾಕುಸ್ಕಂಡು ನೀನು ಮದುವೆ ಆಗಲಿಲ್ಲ ಎಂದರೆ ಸೂಸೈಡ್ ಮಾಡ್ಕತಿನಿ ಅಂಥ ಅವನಿಗೆ ಕಳ್ಸಿದಿಯಾ, ಆ ಫೋಟೋ ನನ್ನ ಹತ್ರ ಇದೆ

ಹರ್ಷಿತಾ : ನಾನು ಮದುವೆಯಾಗು ಅಂಥ ಏನು ಹೇಳೇ ಇಲ್ಲ, ಯಾವುದೇ ಕಾರಣಕ್ಕೂ ಹೇಳೇ ಇಲ್ಲಾ, ನಾನು ಯಾವ ಟೀ ಶರ್ಟ್ ಹಾಕಂಡು ಏನಕ್ಕೆ ಹೋಗಲಿ

ಪ್ರಕಾಶ್ : ಹ್ಯಾಪಿ ಮ್ಯಾರಿಡ್ ಲೈಫ್ ಕಿರಾಕತ ಅಂಥ ಕಳ್ಸಿದಿಯಾ, ಅವತ್ತು ನೀನು ಬಹಳ ಖುಷಿಯಾಗಿದಿಯಾ, ಇಲ್ಲಿ ಸಾಕ್ಷಿ ಸಿಗುತ್ತಿದಿದೆಯೆಲ್ಲಾ, ನಾನು ಆಸ್ಪತ್ರೆಯಿಂದ ಮನೆಗೆ ಬಂದಾಗ ಅವನು ಊಟ ಮಾಡಿಸಿ ಹೋದನಂತೆ

ಹರ್ಷಿತಾ : ಅವನು ಹೇಗೆ ಊಟ ಮಾಡುಸ್ತನೆ, ಪಕ್ಕದ ಬೆಡ್ ಅವರು ಇರಲಿಲ್ಲಾ, ಅವನು ಬಂದು ನೋಡಿಕೊಂಡು ಹೋದ ಅಷ್ಟೇ, ಊಟ ಮಾಡಿಸಲಿಲ್ಲ

ಪ್ರಕಾಶ್ : ನಾನು ಊಟ ತಂದು ಕೊಟ್ಟಿರಲಿಲ್ವಾ ಮುಂಡಗೋಡಿಗೆ ಹೋಗಿ ಲೋಕೇಷನ್ ಹಾಕು ಅಂಥ ಹೇಳಿರ್ಲಿಲ್ವಾ

ಹರ್ಷಿತಾ : ನಾನು ತಡೆ ಒಡೆಸಲು ಹೋಗಿದ್ದೆ

ಪ್ರಕಾಶ್ : ಈಗಲೂ ಸುಳ್ಳು ಹೇಳ್ತಿದಿಯಲ್ಲಾ, ಹೇಳು ಈಗ

ಹರ್ಷಿತಾ : ಸರಿ ಈಗ ಬರ್ತಿನಿ, ಅವನು ಜೊತೆ ಹೋಗಲ್ಲ, ಅವನಿಗೂ ನನಗೂ ಸಂಬಂಧವಿಲ್ಲ, ಅವನ ಹತ್ತಿರನೂ ಸಹಿ ಹಾಕಿಸಿಕೊಳ್ಳಿ, ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ, ಪಾಪು ಮುಖ ನೋಡ್ಕಂಡು ಇರ್ತಿನಿ, ಬಂದು ಕರ್ಕಂಡು ಹೋಗಿ ಇಲ್ಲಿಂದ

ಪ್ರಕಾಶ್: ಬೇರೆ ಏನೇನ್ ಮುಚ್ಚಿಟ್ಟಿದ್ದೀ ನನ್ನಿಂದ ಹೇಳು

ಹರ್ಷಿತಾ : ಇಷ್ಟೇ ಬೇರೆ ಏನು ನಡೆದಿಲ್ಲಾ

ಪ್ರಕಾಶ್ : ಸುಳ್ಳು ಮೇಲೆ ಸುಳ್ಳು ಹೇಳ್ಕಂಡೆ ಹೋದೆ

ಹರ್ಷಿತಾ : ಮನೆ ಹತ್ತಿರ ಬಂದು ಜಗಳ ಆಡ್ತಿರಾ ಅಂಥ ಹೇಳ್ದೆ

ಪ್ರಕಾಶ್ : ನನ್ನ ಕೈಯಲ್ಲಿ ಏನು ಆಗಲ್ಲ ಅನ್ಕೊಂಡೆ ಅಲ್ವಾ, ಎಲ್ಲಾ ಏನಂತಾರೆ ಗೊತ್ತಾ ಈಗ, ಮೂಮೂಲಿ ಕ್ರಿಮಿನಲ್ ಅಲ್ಲಾ, ಇಂಟರ್‌ನ್ಯಾಷನಲ್ ಕ್ರಿಮಿನಲ್ ತರ ಯೋಚನೆ ಮಾಡಿದ್ದಾಳೆ ಅಂತಾರೆ, ಆ ತರ ಮೈಂಡ್ ಯಾರಿಗೂ ಓಡಿಲ್ಲ, ಆ ಸ್ಪೀಡ್‌ಲಿ ಮೈಂಡ್ ಓಡ್ಸಿದಿಯಾ

ಹರ್ಷಿತಾ : ಎಲ್ಲಾ ಅವನು ಹೇಳ್ಕೊಟ್ಟಿದ್ದು, ನಾನೇನು ಹೇಳಿಲ್ಲ, ಲಾಯರ್ ಹತ್ರ ಅವನೇ ಮಾತನಾಡಿದ್ದು, ನೀನು ಹೋದರೆ ಫೋಟೋಸ್ ಸೋಷಿಯಲ್‌ ಮಿಡಿಯಾಗೆ ಹಾಕ್ತಿನಿ ಅಂಥ ಹೆದ್ರುಸ್ದಾ, ನನ್ನ ಹತ್ತಿರ ದುಡ್ಡು ಎಲ್ಲಿ ಇತ್ತು ಲಾಯರ್‌ಗೆ ಕೊಡೊಕೆ

ಪ್ರಕಾಶ್ : ಅವರ ಮನೆ ಆಯಾ ಮಾಡ್ಸೋ ವಿಡಿಯೋ ಮಾಡಿದ್ದೀರಿ ಮನೆ, ಸೈಟ್ ಸಿಗುತ್ತೆ ಅಂಥ ಖುಷಿ ಆಗ್ಬಿಟ್ಟೆ ಅಲ್ವಾ

ಹರ್ಷಿತಾ : ಅವನು ಬ್ಲಾಕ್‌ಮೇಲ್ ಮಾಡ್ದಾ, ಅವನು ಸೋಷಿಯಲ್ ಮಿಡೀಯಾದಲ್ಲಿ ಹಾಕಿದ್ರೆ ಏನ್ ಮಾಡ್ಲಿ

ಪ್ರಕಾಶ್ : ನೀನು ಹೇಳಬೇಕಿತ್ತು

ಹರ್ಷಿತಾ : ನಾನು ರಕ್ಷಿ ಹತ್ತಿರ ಹೇಳ್ಕೊಬೇಕಿತ್ತು

ಪ್ರಕಾಶ್ : ಅವತ್ತು ಬೇಡ, ಇನ್ಸ್‌ಪೆಕ್ಟರ್ ಅಷ್ಟು ಕೇಳ್ದಾಗ್ಲೆ ಹೇಳಬೇಕಿತ್ತಲ್ವಾ, ಯಾವುದು ಹೊರಗಡೆ ಬರ್ದಂಗೆ ಮಾಡೋರು, ಗೊರೂರಲ್ಲಿ ಅಷ್ಟೊಂದು ಹೇಳಿದ್ರು, ನೀನು ಏನು ಮಾಡ್ಲಿಲ್ವಲಾ, ಯಾವ್ಯಾವ ತರ ಸುಳ್ಳು ಹೇಳ್ದೆ, ಈಗಲೂ ಸುಳ್ಳು ಹೇಳ್ದೆ ನೀನು, ಕನ್ಸಿವ್ ಆಗಿದೆ ಅಂದೆ, ನನ್ನಿಂದ ಅಂತೂ ಆಗಿಲ್ಲ, ಈಗ ಕ್ಲಿಯರ್ ಮಾಡ್ಕಂಡಾ, ಈಗ ಪಕ್ಕ ಅವನಿಂದ ಅಲ್ವಾ

ಹರ್ಷಿತಾ : ಕ್ಲಿಯರ್ ಮಾಡ್ಕಂಡೆ, ಅವನದ್ದು ಅಂಥ ಹೇಗೆ ಪಕ್ಕಾ ಆಗುತ್ತೆ, ನನಗೆ ಬೇಡ ಅಂಥ ಕ್ಲಿಯರ್ ಮಾಡ್ಕಂಡೆ, ಅವನ ಜೊತೆ ಸೇರಿದ್ರೆ ಸುಮ್ನೆ ಮಾಡ್ಕೊತ್ತಿದ್ದೆ

ಪ್ರಕಾಶ್ : ಸೇರಿರೋದ್ಕೆ ಬೇಡ ಅಂತ ಈ ತರ ಮಾಡ್ಕಂಡಿದಿಯಾ

ಹರ್ಷಿತಾ : ನಾನು ನನಗೆ ಬೇಡ ಅಂಥ ಮಾಡ್ಕಂಡಿದ್ದು

ಪ್ರಕಾಶ್ : ಎಸ್‌ಎಸ್‌ಎಂ ಆಸ್ಪತ್ರೆಗೆ ತೋರ್ಸಿದ್ನಾ

ಹರ್ಷಿತಾ : ಎಸ್‌ಎಸ್‌ಎಂಗಲ್ಲ, ನಾನು ಅವನಿಗೆ ಏನು ಹೇಳಿಲ್ಲ, ನಿಮಗೆ ಹೇಳ್ಕಂಡು ಮಾಡ್ಕೊಂಡಿರೋದು

ಪ್ರಕಾಶ್ : ಅವನು ನನ್ನಂದಾನೆ ಆಗಿರೋದು ರಿಪೋರ್ಟ್ ಇದೆ ಅಂಥ ಹೇಳ್ದಾ

ಹರ್ಷಿತಾ : ನೀವು ತಾನೇ ಸಹಿ ಮಾಡಿದ್ದು ಆಸ್ಪತ್ರೆಲಿ, ಅವನನ್ನು ಕೇಳಿದ್ರೆ ಅವನೇ ಮಾಡ್ದಿದ್ದಾ ತಾನೇ

ಪ್ರಕಾಶ್ : ನನ್ನನ್ನು ಉಪಯೋಗಿಸಿಕೊಂಡೆ ಅಷ್ಟೇ, ನನ್ನನ್ನು ನಂಬ್ಸಿದಿಯಾ, ಇಷ್ಟು ವರ್ಷದಿಂದ ಆಗದ್ದು ಈಗ ಹೇಗೆ ಆಗುತ್ತೆ

ಹರ್ಷಿತಾ : ಆ ತರ ಇದ್ದಿದ್ರೆ ಅವನನ್ನು ಕೇಳಿ ಅವನತ್ರನೇ ತೆಗಿಸಿಕೊಳ್ತಿದ್ದೆ

ಪ್ರಕಾಶ್ : ಅರ್ಧ ಗಂಟೆಯಿಂದಲೂ ಸುಳ್ಳೇ ಹೇಳ್ತಿದಿಯಾ

ಹರ್ಷಿತಾ : ಸತ್ಯ ಹೇಳ್ತಿದ್ದೀನಿ ಅಷ್ಟೇ, ಅವನು ಬ್ಲಾಕ್‌ಮೇಲ್ ಮಾಡ್ದಾ, ಅದಕ್ಕೆ ಹೋಗಿದ್ದು, ಗೋಲ್ಡ್ ಹರಾಜಾಗುತ್ತೆ ಅಂಥ ತಗೊಂಡು ಹೋದೆ, ದುಡ್ಡು ನಾನೇ ಹಾಕ್ಲಿಲ್ವಾ

ಪ್ರಕಾಶ್ : ಹಾಕ್ದೆ, ಅಲ್ಲಿ ಕೋಟಿ ಕೋಟಿ ಸಿಗುತ್ತೆ, ಅವನತ್ರ ಮನೆ, ಸೈಟ್ ಸಿಗುತ್ತೆ, ದಿಲ್‌ದಾರ್ ಆಗಿ ಇರಬಹುದು ಅಂಥ ಹಾಕ್ದೆ, ಅವನ ಕಥೆ ಏನು ಹೇಳು

ಹರ್ಷಿತಾ : ನನಗು ಅವನಿಗೂ ಸಂಬಂಧವಿಲ್ಲ, ಪೊಲೀಸ್ ಠಾಣೆಯಲ್ಲಿ ಬರ್ಕೊಡ್ತಿನಿ

ಪ್ರಕಾಶ್ : ನಿರಂಜನ್ ಅನ್ನೋನ್ನನ್ನ ಏಕೆ ಉಪಯೋಗಿಸಿಕೊಂಡೆ

ಹರ್ಷಿತಾ : ಆದರ್ಶ್‌ಗೆ ಎಲ್ಲಾ ಗೊತ್ತು ಅದು

ಪ್ರಕಾಶ್ : ಫೋಟೋ ಎಲ್ಲಾ ಕಳ್ಸಿದಿಯಾ, ಇವರ ಜೊತೆ ನನ್ನ ಎಂಗೇಜ್ಮೆಂಟ್ ಇದೆ ಅಂಥ, ಇಸ್ಕ್ಟಾಗ್ರಾಂ ಅಕೌಂಟ್ ಏಕೆ ಎರಡೆರಡು ಮಾಡ್ಕೊಂಡೆ

ಹರ್ಷಿತಾ : ನನ್ನ ಹತ್ತಿರ ಎರಡು ಎಲ್ಲಿದೆ, ಒಂದೇ ಅಕೌಂಟ್ ಇರೋದು

ಪ್ರಕಾಶ್ : ವರ್ಷಾ 29 ನಾ

ಹರ್ಷಿತಾ : ಅದಲ್ಲಾ, ವರ್ಷಾP29 ರೆಡ್ ಶರ್ಟ್ ಹಾಕಿರೋದು, ಅದನ್ನು ಹ್ಯಾಕ್ ಮಾಡಿ ಎಲ್ಲರಿಗೂ ಮೆಸೇಜ್ ಮಾಡಿದ್ರು, ಕಿರಗಡಲು ದರ್ಶು ಕೇಳಿ

ಪ್ರಕಾಶ್ : ನೀನು ಬರ್ತಾ ಬರ್ತಾ ಸಿಂಗಲ್ ಫೋಟೋ ಹಾಕೋದು, ಏಕೆ ಬೇಕಾಗಿತ್ತು ನಿನಗೆ ಇದೆಲ್ಲವಾ, ಅವಾಗ್ಲೆ ವಾರ್ನ್ ಮಾಡಿದ್ದೆ, ನಾನೇ ಊಟ ಮಾಡ್ಸಿದ್ದೆ, ಅವತ್ತು ನಾನು ತಿಳಿದುಕೊಳ್ಳಲಿಲ್ಲ, ನಿನಗೆ ದುಡ್ಡು ಮುಖ್ಯ ಆಯ್ತು ಅಷ್ಟೇ, ಫೋನ್ ಇಡು

Source link

Exit mobile version