ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ! – Kannada News | Karnataka Engineering Fee Hike: Students Shocked as Govt Increases Fees by 7.5 percent for Second Consecutive Year

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ (Karnataka) ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ತಾಂತ್ರಿಕ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 2026-27ನೇ ಸಾಲಿನ ಎಂಜಿನಿಯರಿಂಗ್ (Engineering) ಕೋರ್ಸ್‌ಗಳ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗದ ಪೋಷಕರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಶುಲ್ಕದ ಪಟ್ಟಿ ಹೀಗಿದೆ

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ (CET) ಸೀಟು ಪಡೆಯುವ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಹಣ ಪಾವತಿಸಬೇಕಿದೆ.

  • ಟೈಪ್-1 ಕಾಲೇಜುಗಳು: ಪ್ರಸ್ತುತ ಇರುವ 81,800 ರೂ. ಶುಲ್ಕವು ಇನ್ನು ಮುಂದೆ 87,935 ರೂ. ಗೆ ಏರಿಕೆಯಾಗಲಿದೆ.
  • ಟೈಪ್-2 ಕಾಲೇಜುಗಳು: ಪ್ರಸ್ತುತ ಇರುವ 91,000 ರೂ. ಶುಲ್ಕವು ಇನ್ನು ಮುಂದೆ 97,825 ರೂ. ಗೆ ಏರಲಿದೆ.

ಸತತ ಏರಿಕೆಗೆ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ

ಕಳೆದ 2025-26ನೇ ಸಾಲಿನಲ್ಲಿಯೂ ಸಹ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ವರ್ಷವೂ ಶುಲ್ಕ ಏರಿಕೆಯಾಗುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿದ್ದೇವೆ. ಈಗ ಶಿಕ್ಷಣದ ಶುಲ್ಕವನ್ನೂ ಹೆಚ್ಚಿಸಿದರೆ ಉನ್ನತ ಶಿಕ್ಷಣ ಸಾಮಾನ್ಯರಿಗೆ ಗಗನಕುಸುಮವಾಗಲಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಈ ವರ್ಷ ಪಿಯುಸಿ ಬಳಿಕ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಶುಲ್ಕ ಏರಿಕೆ ಮಾಡುವುದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು. ಸರ್ಕಾರ ಕೂಡಲೇ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಯಶಸ್ಸಿಗೆ ಪ್ರಯತ್ನ, ದೈವಾನುಕೂಲದಿಂದ ಕಾರ್ಯಸಿದ್ಧಿ – Kannada News | Daily Horoscope April 14, 2026: Zodiac wise Astrology Forecast and Tips

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಮಂಗಳವಾರದಂದು ಒತ್ತಡದಿಂದ ಕೆಲಸ, ಅನಪೇಕ್ಷಿತ ಮಾತು, ವ್ಯಾಪಾರ ಸುಗಮ, ವಾಹನದಿಂದ ಲಾಭ, ಮಿತ್ರರ ಜೊತೆ ಯಾತ್ರೆ, ಹಣದ ಆಗಮನ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರಾ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:04, ಯಮಗಂಡ ಕಾಲ 09:19 – 10:52, ಗುಳಿಕ ಕಾಲ 12:25 – 13:58

ಮೇಷ ರಾಶಿ :

ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಅಲ್ಪಾವಧಿಯ ಹೂಡಕೆಯಿಂದ ಅಲ್ಪ ಲಾಭ. ಇಂದು ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲಸವನ್ನು ಇಂದು ಮನಸ್ಸಿನಿಂದ ಮಾಡಿ.

ವೃಷಭ ರಾಶಿ :

ದೂರ ಪ್ರಯಾಣದಿಂದ ಪ್ರಯಾಸ. ಅನಾರೋಗ್ಯಕ್ಕೆ ಕಾರಣ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ, ಮನಸ್ಸಿಗೆ ಅಲ್ಪ ಶಾಂತತೆ. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ.

ಮಿಥುನ ರಾಶಿ :

ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಅತಿಥಿಗಳಿಗೆ ಊಟೋಪಾಚರದಲ್ಲಿ ಗಮನ ಕೊಡುವಿರಿ. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ವಾಹನ ದುರಸ್ತಿಯಿಂದ ಧನನಷ್ಟ ಮತ್ತು ವಾಹನ ಮೇಲಿನ ನಂಬಿಕೆ ಹೋಗುವುದು. ಯಾರೆದುರೂ ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು.

ಕರ್ಕಾಟಕ ರಾಶಿ :

ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಏನನ್ನಾದರೂ ಜನಬಲದ ಮೂಲಕ ಸಾಧಿಸುವುದು ಸುಲಭ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ

ಸಿಂಹ ರಾಶಿ :

ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಉತ್ಸಾಹಕ್ಕೆ ಬರುವ ಅಡ್ಡಿಗಳನ್ನು ನೀವು ಸಹಿಸಲಾರಿರಿ. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ದುಃಖಿಸಬೇಕಾದೀತು. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತ ಗೊಳಿಸಲಾಗುವುದು.

ಕನ್ಯಾ ರಾಶಿ :

ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಹೆಚ್ಚು ಲಾಭ ಪಡೆಯಲು ಹೋಗಿ ಯಾರಿಗಾದರೂ ಸಿಕ್ಕಿಹಾಕಿಕೊಳ್ಳುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ.

ತುಲಾ ರಾಶಿ :

ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಮಂದಿರಗಳಿಗೆ ಭೇಟಿ ನೀಡಿ ಸ್ವಲ್ಪ ಸಮಯವನ್ನು ಅಲ್ಲಿ ಕಳೆದು ಬರುವುದು ಒಳಿತು. ಇಂದು ನೀವು ನಿಮ್ಮ ಕುಟುಂಬದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಿರಿ. ಅನಪೇಕ್ಷಿತ ಚರ್ಚೆಯು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು.

ವೃಶ್ಚಿಕ ರಾಶಿ :

ಅಪ್ರಿಯಾವಾದ ಆಪಾದನೆಗಳು ಬರಬಹುದು. ಹಠದ ಸ್ವಭಾವವು ನಿಮ್ಮನ್ನು ಒಂಟಿಗನನ್ನಾಗಿ ಮಾಡುತ್ತದೆ‌. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಸಜ್ಜನರ ಸಂಯೋಗದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅನುಭವಗಳನ್ನು ನೀವು ಪಡೆಯುತ್ತೀರಿ. ಪ್ರತಿಭೆಯ ಖ್ಯಾತಿಯನ್ನು ನೀವು ಪಡೆಯಬಹುದು.

ಧನು ರಾಶಿ :

ಇಂದು ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ವಿದೇಶದ ವ್ಯಕ್ತಿಗಳಿಂದ ತೊಂದರೆ. ಸಂಗಾತಿಯ ಜೊತೆಗೆ ಸಣ್ಣ ಕಲಹವು ಆಗಬಹುದು. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ. ನೀವು ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ನಿಮ್ಮ ಪಾಲಿನ ಕರ್ತವ್ಯಗಳನ್ನು ಮುಂದುವರಿಸಿ. ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು.

ಮಕರ ರಾಶಿ :

ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಅದಕ್ಕೆ ಇಲ್ಲವೆನ್ನಬೇಡಿ. ಸುರಕ್ಷತೆಯ ಗಮನಾಗಮನ ಇಂದು ಬಹಳ ಮುಖ್ಯ. ಯಾರ ಸಹಕಾರವೂ ನಿಮ್ಮನ್ನು ಏನೂ ಮಾಡಲಾಗದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.

ಕುಂಭ ರಾಶಿ :

ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ವಾದ-ವಿವಾದಗಳನ್ನು ಮಾಡಲಿದ್ದೀರಿ. ದೂರಪ್ರಯಾಣವನ್ನು ಮಾಡಿ ಆಯಾಸಗೊಳ್ಳಬೇಡಿ. ಸ್ಥಿರಾಸ್ತಿಯ ಮಾಹಿತಿಯನ್ನು ಕೊಡಬೇಕಾಗುವುದು. ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವುದೂ ಇಷ್ಟವಾಗದು.

ಮೀನ ರಾಶಿ :

ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಶ್ರಮದ ಫಲವನ್ನು ಉಣ್ಣುವ ಕಾಲ ಬಂದಿರುತ್ತದೆ. ಇಂದು ನೀವು ಅಪರಿಚಿತರಿಂದ ಬೆಂಬಲ ಪಡೆಯಬಹುದು. ಲಾಭದ ಹಾದಿಯು ಅಡ್ಡಿಯಿಂದ ಚಿಂತೆ ಕಾಡಬಹುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು – Kannada News | TCS sexual harassment case, six women cops undercover operation at the office for 40 days

ಮುಂಬೈ, ಏಪ್ರಿಲ್ 13: ದೇಶದ ಅತಿದೊಡ್ಡ ಐಟಿ ಸರ್ವಿಸಸ್ ಸಂಸ್ಥೆಯಾದ ಟಿಸಿಎಸ್​ನ ನಾಶಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ (Sexual harassment) ಇತ್ಯಾದಿ ಅನ್ಯಾಯ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಟಿಸಿಎಸ್ (TCS) ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಸತ್ಯಾಂಶ ಪತ್ತೆ ಮಾಡಲು ಆರು ಮಹಿಳಾ ಪೊಲೀಸರು ಅಂಡರ್​ಕವರ್ ಆಪರೇಷನ್ ಮಾಡಿ ಕಾಮಾಂಧರ ಬಣ್ಣ ಬಯಲು ಮಾಡಲು ನೆರವಾಗಿದ್ದಾರೆ. ಟಿಸಿಎಸ್​ನ ಎಚ್​ಆರ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರು ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್

ಟಿಸಿಎಸ್​ನ ನಾಶಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಇತ್ಯಾದಿ ಘಟನೆಗಳು ನಡೆಯುತ್ತಿವೆ ಎಂದು ಸಾಲು ಸಾಲಾಗಿ ಕೆಲ ಉದ್ಯೋಗಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸರನ್ನು ಅಂಡರ್​ಕವರ್ ಆಪರೇಷನ್​ಗೆ ಕಳುಹಿಸಲಾಯಿತು. ಟಿಸಿಎಸ್ ಉದ್ಯೋಗಿಗಳ ಸೋಗಿನಲ್ಲಿ ಈ ಆರು ಮಹಿಳಾ ಪೊಲೀಸರು ಕಚೇರಿಯಲ್ಲಿ ಪ್ರತಿಯೊಬ್ಬರ ಚಲನವಲನ, ವರ್ತನೆಗಳ ಮೇಲೆ ಕಣ್ಣಿಡುತ್ತಾ ಹೋಗಿದ್ದರು. ಅದರಲ್ಲೂ ದೂರಿನಲ್ಲಿ ಪ್ರಸ್ತಾಪವಾದ ಆರೋಪಿಗಳ ಮೇಲೆ ಅವರು ನಿಗಾ ಇರಿಸಿದ್ದರು.

ಇದನ್ನೂ ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

40 ದಿನಗಳವರೆಗೆ ಈ ಆಪರೇಷನ್ ನಡೆದಿತ್ತು. ಬಿಪಿಒ ಕಚೇರಿಯಲ್ಲಿ ಮೀಟಿಂಗ್​ಗಳು ಮತ್ತು ವರ್ಕ್​ಸ್ಟೇಶನ್​ಗಳಲ್ಲಿ ಆರೋಪಿಗಳ ವರ್ತನೆಯನ್ನು ಗಮನಿಸತೊಡಗಿದ್ದರು. ಕಚೇರಿಯಲ್ಲಿ ತಮ್ಮ ಕೆಲಸದ ಅವಧಿ ಮುಗಿದ ಬಳಿಕ ಈ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಮಾಹಿತಿಯನ್ನೂ ಒಪ್ಪಿಸುತ್ತಿದ್ದರು. ಆರೋಪಿಗಳ ವಿರುದ್ಧ ಕೇಳಿಬಂದ ಆರೋಪಗಳಲ್ಲಿ ಹುರುಳಿದೆ ಎನ್ನುವುದು ಪೊಲೀಸರಿಗೆ ಮನವರಿಕೆ ಆಗಿತ್ತು.

ಟಿಸಿಎಸ್​ನ ಮಹಿಳಾ ಉದ್ಯೋಗಿಯೊಬ್ಬರು ಮಾರ್ಚ್ 26ರಂದು ದೇವಲಾಲಿ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ. ತನ್ನ ಮೇಲೆ ಹಿರಿಯ ಸಹೋದ್ಯೋಗಿಯಿಂದ ರೇಪ್ ಆಗಿದೆ ಎಂದು ಆರೋಪಿಸುತ್ತಾರೆ. ತನಿಖೆ ನಡೆಯುತ್ತಿರುವಂತೆಯೇ ಮತ್ತಷ್ಟು ಉದ್ಯೋಗಿಗಳು ಮುಂದೆ ಬಂದು ಕಂಪ್ಲೇಂಟ್ ನೀಡುತ್ತಾರೆ. ಮಾರ್ಚ್ 26ರಿಂದ ಏಪ್ರಿಲ್ 3ರವರೆಗೆ ಎಂಟು ಎಫ್​ಐಆರ್​ಗಳು ದಾಖಲಾಗುತ್ತವೆ.

ಟಿಸಿಎಸ್​ನ ಈ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳನ್ನು ಆಲಿಸಲು ಇಂಟರ್ನಲ್ ಕಂಪ್ಲೇಂಟ್ ಕಮಿಟಿ ಇದೆ. ಆದರೆ, ಉದ್ಯೋಗಿಗಳು ಇಲ್ಲಿ ದೂರು ಕೊಡಲು ಹಿಂಜರಿದಿದ್ದರು. ಆದರೆ, ಎಚ್​ಆರ್​ಗೆ ಉದ್ಯೋಗಿಗಳು ನೀಡಿದ ದೂರಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು 

ಪೊಲೀಸರು ಈ ಎಚ್​ಆರ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ನಾಶಿಕ್ ಟಿಸಿಎಸ್ ಬಿಪಿಒದಲ್ಲಿ ಲೈಂಗಿಕ ಕಿರುಕುಳ ಘಟನೆಗಳು ಮಾತ್ರವಲ್ಲ, ದಬ್ಬಾಳಿಕೆ, ಬೆದರಿಕೆ, ಧಾರ್ಮಿಕ ಅವಹೇಳನ ಇತ್ಯಾದಿ ಪೀಡನೆಗಳು ನಡೆಯುತ್ತಿವೆ ಎಂಬುದು ದೂರುಗಳಿಂದ ತಿಳಿದುಬರುತ್ತದೆ.

ಸದ್ಯ ಈ ಪ್ರಕರಣದ ತನಿಖೆ ನಡೆಸಲು ಎಸ್​ಐಟಿ ರಚಿಸಲಾಗಿದೆ. ಸಂದೀಪ್ ಮಿಟ್ಕೆ ಈ ಎಸ್​ಐಟಿ ತಂಡದ ನೇತೃತ್ವ ವಹಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs RR: ರಾಜಸ್ಥಾನಕ್ಕೆ ಮುಳುವಾದ ಅತಿಯಾದ ಆತ್ಮವಿಶ್ವಾಸ; ಸನ್‌ರೈಸರ್ಸ್ ವಿರುದ್ಧ ಹೀನಾಯ ಸೋಲು

ಬಲಿಷ್ಠ ಬ್ಯಾಟಿಂಗ್ ಹಾಗೂ ತನ್ನ ಮಾರಕ ಬೌಲಿಂಗ್ ದಾಳಿಯಿಂದ 2026 ರ ಐಪಿಎಲ್‌ನಲ್ಲಿ ಏಕೈಕ ಅಜೇಯ ತಂಡವಾಗಿ ಉಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 57 ರನ್​​ಗಳಿಂದ ಹೀನಾಯವಾಗಿ ಸೋಲಿಸುವಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಯಶಸ್ವಿಯಾಗಿದೆ. ರಾಜಸ್ಥಾನ್ ತಂಡವನ್ನು ಸನ್‌ರೈಸರ್ಸ್ ತಂಡ ಸೋಲಿಸಿತು ಎನ್ನುವುದಕ್ಕಿಂತ, ಸನ್‌ರೈಸರ್ಸ್ ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಇಬ್ಬರು ಯುವ ವೇಗಿಗಳಾದ ಪ್ರಫುಲ್ ಹಿಂಗೆ ಹಾಗೂ ಸಕೀಬ್ ಹುಸೇನ್ ಅವರ ಮಾರಕ ದಾಳಿಗೆ ರಾಜಸ್ಥಾನ್ ಮಂಡಿಯೂರಿತು ಎಂದರೆ ತಪ್ಪಾಗಲಾರದು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 216 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಇಬ್ಬರು ಯುವ ವೇಗಿಗಳ ದಾಳಿಗೆ ತತ್ತರಿಸಿ 156 ರನ್​ಗಳಿಗೆ ಆಲೌಟ್ ಆಯಿತು. ಸನ್‌ರೈಸರ್ಸ್ ಪರ ಪ್ರಫುಲ್ 4 ವಿಕೆಟ್ ಪಡೆದರೆ, ಸಕೀಬ್ 4 ವಿಕೆಟ್ ಕಬಳಿಸಿದರು.

Source link

ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಫುಲ್ ಖುಷ್

ನವದೆಹಲಿ, (ಏಪ್ರಿಲ್ 13): ಕರ್ನಾಟಕ ಸಂಪುಟ ಪುನಾರಚನೆ (cabinet reshuffle) ಹಕ್ಕೋತ್ತಾಯಕ್ಕಾಗಿ ಕಾಂಗ್ರೆಸ್ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದು, ಇಂದು (ಏಪ್ರಿಲ್ 13) ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿ ಮಾಡಿ ಮಾಡಿದ್ದಾರೆ. ನವದೆಹಲಿಯ ರಾಜಾಜಿ ಮಾರ್ಗದಲ್ಲಿರುವ ನಿವಾಸದಲ್ಲಿ ಖರ್ಗೆ ಅವರನ್ನು ಭೇಟಿಯಾದ ಹಿರಿಯ ಶಾಸಕರು ಸಂಪುಟ ಪುನಾರಚನೆಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಪರಿಗಣಿಸುವಂತೆ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಖರ್ಗೆ ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರಾದ ಅಶೋಕ್ ಪಟ್ಟಣ, ಹಾಗೂ ಟಿಬಿ ಜಯಚಂದ್ರ ಸ್ಪಷ್ಟಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಸಹನೂಭೂತಿಯಿಂದ ನಮ್ಮ ಮನವಿ ಕೇಳಿದ್ದು, ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮ ಮನವಿ ನಾವು ಮಾಡಿದ್ದೇವೆ. ಸಿಎಂ ಬದಲಾವಣೆ ಕುರಿತು ನಾವು ಯಾವುದೇ ಚರ್ಚೆ ಮಾಡಿಲ್ಲ. ನಾಲ್ಕು ಗೋಡೆಗಳ ನಡುವೆ ಈ ವಿಷಯ ಇದೆ. ಖರ್ಗೆಯವರು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೆ ಅನ್ನುವ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ: ಸಂಪುಟ ಪುನಾರಚನೆಗೆ ಡಿಕೆಶಿ ವಿರೋಧ: ದಿಲ್ಲಿಗೆ ಹೋದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ

Source link

ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಅಹಮದಾಬಾದ್, ಏಪ್ರಿಲ್ 13: ಗುಜರಾತ್‌ನ ಉನಾ ತಾಲೂಕಿನ ತೋಟವೊಂದರ ಬಾವಿಯಲ್ಲಿ ಬಿದ್ದಿದ್ದ ಸಿಂಹವನ್ನು ರಕ್ಷಿಸಲಾಗಿದೆ. ನವಬಂದರ್‌ನ ಅರಣ್ಯ ಪ್ರದೇಶದ ಬಳಿ ಬೇಟೆಯನ್ನು ಹುಡುಕುತ್ತಿದ್ದ ಸಿಂಹವೊಂದು (Lion video) ಆಕಸ್ಮಿಕವಾಗಿ ನೀರಿನಿಂದ ತುಂಬಿದ ತೆರೆದ ಬಾವಿಗೆ ಬಿದ್ದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಂಹದ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ್ ಸಾಂಘವಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೊಚ್ಚಲ ಪಂದ್ಯದ ಮೊದಲ ಓವರ್​ನಲ್ಲೇ 3 ವಿಕೆಟ್ ಉರುಳಿಸಿದ ಪ್ರಫುಲ್ ಹಿಂಗೆ ಯಾರು?

ಪ್ರತಿಭಾನ್ವೀತ ಆಟಗಾರರಿಗೆ ಐಪಿಎಲ್ (IPL) ಒಂದು ಸುವರ್ಣ ವೇದಿಕೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ (SRH) ತಂಡ ರನ್​ಗಳ ಶಿಖರ ಕಟ್ಟಿದರೂ ಕಳಪೆ ಬೌಲಿಂಗ್​ನಿಂದಾಗಿ ಪಂದ್ಯಗಳನ್ನು ಸೋಲಬೇಕಾಯಿತು. ಹೀಗಾಗಿ ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೆ ಸನ್‌ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು. ಆ ಬದಲಾವಣೆಯ ಭಾಗವಾಗಿ ತಂಡವನ್ನು ಕೂಡಿಕೊಂಡಿದ್ದ ಪ್ರಫುಲ್ ಹಿಂಗೆ (Praful Hinge) ಎಂಬ ಯುವ ವೇಗಿ ಯಾರೂ ಊಹಿಸದಂತಹ ಪ್ರದರ್ಶನವನ್ನು ತಮ್ಮ ಚೊಚ್ಚಲ ಪಂದ್ಯದ ಮೊದಲ ಓವರ್​ನಲ್ಲೇ ನೀಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಎಂಬ 24 ವರ್ಷದ ಯುವ ವೇಗಿ ತನಗೆ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ಬೌಲ್ ಮಾಡಿದ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೇ ಮೂವರು ಬ್ಯಾಟ್ಸ್‌ಮನ್​ಗಳನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯ ಆರಂಭಕ್ಕೂ ಮುನ್ನ ಪ್ರಫುಲ್ ಹಿಂಗೆ ಎಂದರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಚೊಚ್ಚಲ ಪಂದ್ಯದಲ್ಲೇ ವಿಸ್ಮಯ ಸೃಷ್ಟಿಸಿದ ಪ್ರಫುಲ್ ಒಂದು ರಾತ್ರಿಯಲ್ಲೇ ಭಾರತ ಕ್ರಿಕೆಟ್​ನ ಮನೆಮಾತಾಗಿದ್ದಾರೆ.

ಪ್ರಫುಲ್ ಹಿಂಗೆ ಯಾರು?

ಪ್ರಫುಲ್ ಹಿಂಗೆ ವಿದರ್ಭ ಪರ ದೇಶೀಯ ಕ್ರಿಕೆಟ್ ಆಡುವ ಭಾರತೀಯ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್ ಆಗಿದ್ದು, ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. 2024 ರಲ್ಲಿ ವಿದರ್ಭ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್, 2025-26 ರ ಋತುವಿನಲ್ಲಿ 10 ಪಂದ್ಯಗಳನ್ನಾಡಿ 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ವಿಜಯ್ ಹಜಾರೆ ಟ್ರೋಫಿ ಗೆದ್ದ ವಿದರ್ಭ ತಂಡದ ಭಾಗವಾಗಿದ್ದರು. ಇದರ ಪರಿಣಾಮವಾಗಿ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ಪ್ರಫುಲ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು.

ಇದು ಅಂತಿಂಥ ದಾಖಲೆಯಲ್ಲ; ವೈಭವ್ ಸೇರಿದಂತೆ ಮೂವರು ಆಟಗಾರರು ಸೊನ್ನೆಗೆ ಔಟ್..!

3 ಓವರ್​ಗಳಲ್ಲಿ 4 ವಿಕೆಟ್

ಇನ್ನು ಈ ಪಂದ್ಯದಲ್ಲಿ ಪ್ರಫುಲ್ ಹಿಂಗೆ ದಾಳಿಗೆ ನಲುಗಿದ ನಾಲ್ವರು ಬ್ಯಾಟ್ಸ್‌ಮನ್​ಗಳಲ್ಲಿ ವೈಭವ್ ಸೂರ್ಯವಂಶಿ, ಧೃವ್ ಜುರೇಲ್, ಲ್ಹುವಾನ್-ಡ್ರೆ ಪ್ರಿಟೋರಿಯಸ್ ಹಾಗೂ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ ಸೇರಿದ್ದಾರೆ. ಈ ನಾಲ್ಕು ವಿಕೆಟ್​ಗಳಲ್ಲಿ ಮೊದಲ ಮೂರು ವಿಕೆಟ್​ಗಳು ಒಂದೇ ಓವರ್​ನಲ್ಲಿ ಉರುಳಿದವು. ಅದರಲ್ಲೂ ಈ ಮೂವರು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಪ್ರಫುಲ್ ತಮ್ಮ ಖೋಟಾದ ಎರಡನೇ ಓವರ್​ನ ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಆದರಿಲ್ಲಿ ಪರಾಗ್ 4 ರನ್​ ಬಾರಿಸಿ ತನ್ನ ರನ್ ಖಾತೆ ತೆರೆದಿದ್ದರು.

Source link

ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರನ್ನು ಕಳೆದುಕೊಂಡು ಭಾರತದ ಸಂಗೀತ ಲೋಕ ಬಡವಾಗಿದೆ. ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಆಗಿದೆ. ಸಾವಿರಾರು ಗೀತೆಗಳ ಮೂಲಕ ಆಶಾ ಭೋಸ್ಲೆ ಅವರು ಜನಮನ ಗೆದ್ದಿದ್ದರು. ಕನ್ನಡದಲ್ಲಿ ಅವರು ಧ್ವನಿ ನೀಡಿದ್ದು 4 ಹಾಡುಗಳಿಗೆ ಮಾತ್ರ. ಆ ಪೈಕಿ ಕೊನೆಯ ಹಾಡು, ಅಂದರೆ ನಾಲ್ಕನೇ ಹಾಡು ಬಿಡುಗಡೆ ಆಗಿಲ್ಲ. ಆ ಗೀತೆಗೆ ವೀರ್ ಸಮರ್ಥ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಕಡಿಮೆ ಸಂಭಾವನೆ ಕೊಟ್ಟರೂ ಕೂಡ ಆಶಾ ಭೋಸ್ಲೆ ಅವರು ಆ ಗೀತೆಯನ್ನು ಹಾಡಲು ಒಪ್ಪಿಕೊಂಡಿದ್ದರು. ಆ ಘಟನೆಯನ್ನು ಈಗ ವೀರ್ ಸಮರ್ಥ್ (Veer Samarth) ಅವರು ಮೆಲುಕು ಹಾಕಿದ್ದಾರೆ. ಸಂಗೀತದ ಬಗ್ಗೆ ಆಶಾ ಭೋಸ್ಲೆ ಅವರಿಗೆ ಇದ್ದ ಪ್ರೀತಿ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ‘ಟಿವಿ9’ ಜೊತೆ ವೀರ್ ಸಮರ್ಥ್ ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ನಿಧನರಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿದ ಮೂರು ಗೀತೆಗಳು ಬಿಡುಗಡೆ ಆಗಿವೆ. ಆದರೆ ನಾಲ್ಕನೇ ಹಾಡು ರಿಲೀಸ್ ಆಗಲೇ ಇಲ್ಲ. ಆ ಗೀತೆಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದರು. ಆ ದಿನಗಳನ್ನು ವೀರ್ ಸಮರ್ಥ್ (Veer Samarth) ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಮಾಣಿಕ್ಯ’ ಎಂಬ ಸಿನಿಮಾದ ಸಲುವಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆಶಾ ಭೋಸ್ಲೆ ಅವರಿಂದ ಹಾಡಿಸಬೇಕು ಎಂಬುದು ವೀರ್ ಸಮರ್ಥ್ ಅವರ ಕನಸಾಗಿತ್ತು. ‘ನಾವು ಒಂದು ಸಿ.ಡಿ. ಸಿದ್ಧಪಡಿಸಿ ಆಶಾ ಭೋಸ್ಲೆ ಅವರ ಮಗನಿಗೆ ಕಳಿಸಿದ್ದೆವು. ಹಲವು ತಿಂಗಳು ಕಳೆದರೂ ಪ್ರತಿಕ್ರಿಯೆ ಬರಲಿಲ್ಲ. ನಂತರ ನಾವು ಸುಮ್ಮನಾದೆವು. ಆದರೆ ಒಂದು ದಿನ ಅನಿರೀಕ್ಷಿತವಾಗಿ ನಮಗೆ ಕರೆ ಬಂತು. ಸ್ವತಃ ಆಶಾ ಭೋಸ್ಲೆ ಅವರು ಕರೆ ಮಾಡಿ ಹಾಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು. ನನಗೆ ಶಾಕ್ ಆಯಿತು’ ಎಂದು ವೀರ್ ಸಮರ್ಥ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!

ನವದೆಹಲಿ, ಏಪ್ರಿಲ್ 13: ರಾತ್ರಿಯಾಗುತ್ತಿದ್ದಂತೆ ಕಳ್ಳರು ಅಲರ್ಟ್ ಆಗಿ ಬಿಡುತ್ತಾರೆ. ಎಷ್ಟೇ ಬಂದೋಬಸ್ತ್ ಇದ್ದರೂ ಕಳ್ಳರಿಂದ ಅಂಗಡಿ, ಮನೆಗಳನ್ನು ಕಾಪಾಡಿಕೊಳ್ಳುವುದೇ ನಗರಗಳ ಜನರಿಗೆ ದೊಡ್ಡ ತಲೆನೋವು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಕಳ್ಳರು ದರೋಡೆ ಮಾಡಲೆಂದು ಅಂಗಡಿಯೊಳಗೆ ನುಗ್ಗುತ್ತಾರೆ. ಆದರೆ, ಅಂಗಡಿಯ ಹೊರಗಿದ್ದ ಜನರು ಆ ಶಾಪ್​ನ ಶಟರ್ ಎಳೆದು ಆ ಕಳ್ಳರನ್ನು ಕೂಡಿಹಾಕುತ್ತಾರೆ. ಇದರಿಂದ ಒಳಗಿರುವ ಕಳ್ಳರು ಗಾಬರಿಯಾಗಿ ಕಿರುಚಾಡುತ್ತಾ ಶಟರ್ ಬಾಗಿಲು ಬಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಿದ್ದ ಜನರ ಜಾಣತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version