ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ – Kannada News | Shivamogga Murder Case: Husband Mahesh reveals Wife Suchitra And Kamalakar Bhat Relationship

ಶಿವಮೊಗ್ಗ, (ಫೆಬ್ರವರಿ 05): ಕೊಲೆ ಕೇಸ್‌ನಲ್ಲಿ  (Murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಈತನ ಲವರ್‌ ಸುಚಿತ್ರಾ ಜೈಲು ಪಾಲಾಗಿದ್ದಾರೆ. ಈ ಜೋಡಿಹಕ್ಕಿ ಜೈಲು ಸೇರ್ತಿದ್ದಂತೆ ಇವರ ಒಂದೊಂದೇ ಕಾಮಪುರಾಣ ಹೊರಗೆ ಬರುತ್ತಿವೆ. ನಿತ್ಯಪೂಜೆ ಅಂತಾ ಬೆಳ್ಳಂ ಬೆಳಗ್ಗೆ ಟಿವಿಯಲ್ಲಿ ಬರುತ್ತಿದ್ದ ಕಮಲಾಕರ, ರಾತ್ರಿ ಆಗುತ್ತಿದ್ದಂತೆಯೇ  ಸುಚಿತ್ರಾಳ ಜತೆ ಮಂಚ ಏರ್ತಿದ್ದ. ಕಮಲಾಕರ ಹಾಗೂ ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾಗ ಆಡಿಯೋ ವೈರಲ್ ಆಗಿದೆ. ಇನ್ನು ಮತ್ತೊಂದೆಡೆ ದಾಳಿಯಿಂದ ಗಾಯಗೊಂಡಿರುವ ಸುಚಿತ್ರಾಳ ಪತಿ ಮಹೇಶ್, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವೇಳೆ ಹೆಂಡ್ತಿ ಸುಚಿತ್ರಾಳ ಮತ್ತಷ್ಟು ನವರಂಗಿ ಆಟವನ್ನು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

Source link

‘ಟಾಕ್ಸಿಕ್’ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು? – Kannada News | Why Yash not yet started Toxic movie promotions

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ‘ಕೆಜಿಎಫ್’ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರವಾದ್ದರಿಂದ ಸಹಜವಾಗಿಯೇ ಕುತೂಹಲ ಗಗನಕ್ಕೇರಿದೆ. ಚಿತ್ರದ ಬಿಡುಗಡೆಗೆ ಮಾರ್ಚ್ 19 ಕ್ಕೆ ನಿಗದಿ ಆಗಿದೆ. ಬಿಡುಗಡೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದ್ದರೂ ದೊಡ್ಡ ಮಟ್ಟದ ಪ್ರಚಾರ ಶುರುವಾಗದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಬಜೆಟ್‌ನ ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹಲವು ತಿಂಗಳುಗಳ ಮೊದಲೇ ಪ್ರಚಾರ ಆರಂಭವಾಗುತ್ತದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಈಗಲೇ ಸಿನಿಮಾದ ಪ್ರಚಾರವನ್ನು ರಾಜಮೌಳಿ ಆರಂಭಿಸಿಬಿಟ್ಟಿದ್ದಾರೆ. ಯಶ್ ಸಹ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸುವ ನಟ, ಏಕೆಂದರೆ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಸಂದರ್ಭದಲ್ಲಿ ದೇಶದಾದ್ಯಂತ ಸಂಚರಿಸಿ ಸಿನಿಮಾ ಪ್ರಚಾರನ್ನು ಏಕಾಂಗಿಯಾಗಿ ಮಾಡಿದ್ದರು. ಆದರೆ ಯಶ್ ಈ ಬಾರಿ ಬೇರೆಯದೇ ತಂತ್ರ ಅನುಸರಿಸುತ್ತಿರುವ ಅನುಮಾನವಿದೆ.

ಟಾಕ್ಸಿಕ್ ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದ ಎಡಿಟಿಂಗ್ ಹಾಗೂ ವಿಎಫ್‌ಎಕ್ಸ್ (VFX) ಕೆಲಸಗಳು ಪ್ರಚಾರಕ್ಕಿಂತ ಹೆಚ್ಚು ಸಮಯ ಪಡೆದುಕೊಳ್ಳುತ್ತಿವೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರ ತಡವಾಗಲು ಇದೂ ಸಹ ಕಾರಣ ಇರಬಹುದು. ಸಿನಿಮಾದ ಪ್ರಚಾರದ ಹೆಸರಲ್ಲಿ ಈ ವರೆಗೆ ಕೇವಲ ಒಂದು ಟೀಸರ್ ಮತ್ತು ಸಿನಿಮಾದ ನಟಿಯರ ಕ್ಯಾರೆಕ್ಟರ್ ಪೋಸ್ಟರ್​​ಗಳನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಯಶ್ ಅಥವಾ ಚಿತ್ರತಂಡದ ಯಾರೊಬ್ಬರು ಬಹಿರಂಗವಾಗಿ ಪ್ರಚಾರವನ್ನು ಆರಂಭಿಸಿಯೇ ಇಲ್ಲ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾಗೆ ಯಶ್ ಮೇಲೆ ಯಾಕಿಷ್ಟು ಕೋಪ?

ಯಶ್ ಯಾವಾಗಲೂ ‘ಸರ್ಪ್ರೈಸ್’ ನೀಡುವಲ್ಲಿ ನಿಸ್ಸೀಮರು. ಜನವರಿಯಲ್ಲಿ ಬಿಡುಗಡೆಯಾದ ‘ರಾಯ’ನ ಪಾತ್ರದ ಪರಿಚಯ ಈಗಾಗಲೇ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಪ್ರಚಾರವನ್ನು ಕೊನೆಯ ಕ್ಷಣದಲ್ಲಿ ಅಬ್ಬರದಿಂದ ಮಾಡುವ ಮೂಲಕ ಹೈಪ್ ಅನ್ನು ನೇರವಾಗಿ ಥಿಯೇಟರ್‌ಗೆ ಕೊಂಡೊಯ್ಯುವ ಪ್ಲಾನ್ ಸಹ ಯಶ್ ಅವರದ್ದಾಗಿರುವ ಸಾಧ್ಯತೆ ಇದೆ. ‘ಕೆಜಿಎಫ್’ ಸಮಯಕ್ಕಿಂತಲೂ ಭಿನ್ನವಾಗಿ ಈ ಬಾರಿ ಪ್ರಚಾರ ಮಾಡುವ ಯೋಜನೆ ಯಶ್ ಅವರಿಗೆ ಇದ್ದಂತಿದೆ.

ಇಂದಿನ ದಿನಗಳಲ್ಲಿ ಪ್ರಚಾರವು ಸಿನಿಮಾದ ಓಪನಿಂಗ್‌ಗೆ ಬಹಳ ಮುಖ್ಯ. ಉತ್ತಮ ಪ್ರಚಾರದಿಂದ ಉತ್ತಮ ಓಪನಿಂಗ್ ಸಿಗುತ್ತದೆ ಎಂಬುದು ಸಿನಿಮಾ ರಂಗದಲ್ಲಿ ಇರುವ ನಂಬಿಕೆ. ಆದರೆ, ಯಶ್ ಅವರ ಬ್ರ್ಯಾಂಡ್ ವ್ಯಾಲ್ಯೂ ಮತ್ತು ‘ಕೆಜಿಎಫ್’ ನಂತರದ ಅವರ ವರ್ಚಸ್ಸು ಜನರನ್ನು ಥಿಯೇಟರ್‌ಗೆ ಸೆಳೆಯಲು ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್ ಬಿಡುಗಡೆ ಬಳಿಕ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.

ಪ್ರಚಾರದಲ್ಲಿ ಆಗುತ್ತಿರುವ ವಿಳಂಬ ಯಶ್ ಅಭಿಮಾನಿಗಳಿಗೆ ಸ್ವಲ್ಪ ಆತಂಕ ತಂದಿದ್ದರೂ, ಯಶ್ ಅವರು ಯಾವಾಗಲೂ ಗುಣಮಟ್ಟಕ್ಕೆ ಆದ್ಯತೆ ನೀಡುವುದರಿಂದ ‘ಟಾಕ್ಸಿಕ್’ ಪ್ರಚಾರವೂ ಸಹ ಪರಿಣಾಮಕಾರಿ ಮತ್ತು ಸ್ಟೈಲಿಷ್ ಆಗಿಯೇ ಆಗಲಿದೆ ಎಂಬುದು ನಿರೀಕ್ಷೆ. ಮಾರ್ಚ್ 19ರ ಯುಗಾದಿ ಹಬ್ಬದಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕವಿವಿ ಶುಲ್ಕ ಏರಿಕೆ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು – Kannada News | Dharwad KUD PhD Fee Hike: SC, ST Students Protest, Burn Thesis at VC Chamber

ಧಾರವಾಡ, ಫೆಬ್ರವರಿ 05: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಸ್‌ಸಿ/ಎಸ್‌ಟಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಶುಲ್ಕ ವಿಧಿಸಿರುವ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಸಿ ಚೇಂಬರ್ ಬಳಿ ಸಂಶೋಧನಾ ಪ್ರಬಂಧವನ್ನು ಸುಟ್ಟುಹಾಕಿ ವಿದ್ಯಾರ್ಥಿಗಳು ಕಣ್ಣೀರಿಟ್ಟಿರುವಂತಹ ಘಟನೆ ನಡೆದಿದೆ. ಮೊದಲ ವರ್ಷ 1,350 ಶುಲ್ಕ ಕಟ್ಟಿದ್ದ ಸಂಶೋಧನಾ ವಿದ್ಯಾರ್ಥಿಗಳು, 2ನೇ ವರ್ಷಕ್ಕೆ 4,000 ರೂ. ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಕವಿವಿ ಆಡಳಿತ ಮಂಡಳಿ ವಿರುದ್ಧ ಸಂಶೋಧನಾ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಖ್ಖರಿಗೆ ಮಾಡಿದ ಅವಮಾನ; ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ – Kannada News | Rahul Gandhi Called Ravneet Singh Bittu as traitor Because He Is Sikh PM Modi says in Parliament

ನವದೆಹಲಿ, ಫೆಬ್ರವರಿ 5: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಹುಲ್ ಗಾಂಧಿ (Rahul Gandhi) ಇದುವರೆಗೂ ಕಾಂಗ್ರೆಸ್ ತೊರೆದ ಯಾರನ್ನೂ ದೇಶದ್ರೋಹಿ ಎಂದು ಕರೆದಿಲ್ಲ, ಆದರೆ ರವನೀತ್ ಬಿಟ್ಟು ಸಿಖ್ ಆಗಿರುವುದರಿಂದಲೇ ಅವರನ್ನು ದೇಶದ್ರೋಹಿ ಎಂದು ಕರೆದರು. ಸಿಖ್ಖರನ್ನು ಕಂಡರೆ ಕಾಂಗ್ರೆಸ್​​ನವರಿಗೆ ಆಗುವುದಿಲ್ಲ ಎಂದು ಮೋದಿ ಟೀಕಿಸಿದ್ದಾರೆ.

“ನಿನ್ನೆ ಸಂಸತ್ ಹೊರಗೆ ಒಂದು ಘಟನೆ ನಡೆಯಿತು. ಈ ಸದನದ ಸಂಸದ ರವನೀತ್ ಸಿಂಗ್ ಬಿಟ್ಟು ಅವರನ್ನು ಕಾಂಗ್ರೆಸ್‌ನ ಯುವ ರಾಜ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ‘ದೇಶದ್ರೋಹಿ’ ಎಂದು ಕರೆದರು. ಅವರ ದುರಹಂಕಾರ ಆಕಾಶಕ್ಕೇರಿದೆ. ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ಬಾರಿ ವಿಭಜನೆಯಾಗಿದೆ, ಅದೆಷ್ಟೋ ಕಾಂಗ್ರೆಸ್ ನಾಯಕರು ಪಕ್ಷ ಬದಲಾಯಿಸಿದ್ದಾರೆ. ಆದರೆ, ಯಾರನ್ನೂ ಇದುವರೆಗೂ ಅವರು ‘ದೇಶದ್ರೋಹಿ’ ಎಂದು ಕರೆಯಲಿಲ್ಲ. ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆಯಲು ಅವರು ಸಿಖ್ ಸಮುದಾಯದವರು ಎಂಬುದೇ ಕಾರಣ. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಇದು ಕಾಂಗ್ರೆಸ್‌ನಲ್ಲಿ ತುಂಬಿರುವ ಸಿಖ್ಖರ ಮೇಲಿನ ದ್ವೇಷದ ಅಭಿವ್ಯಕ್ತಿಯಾಗಿತ್ತು. ರವನೀತ್ ಬಿಟ್ಟು ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಕುಟುಂಬದ ಸದಸ್ಯ. ಅಂಥವರನ್ನು ದೇಶದ್ರೋಹಿ ಎಂದು ಕರೆಯುವುದನ್ನು ದೇಶ ಹೇಗೆ ಸಹಿಸಿಕೊಳ್ಳುತ್ತದೆ? ಇದು ಅತ್ಯಂತ ದುರದೃಷ್ಟಕರ” ಎಂದು ಪ್ರಧಾನಿ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ? – Kannada News | Hubballi: Auto Driver Crore Transactions Shock Police; Cybercrime Suspected

ಹುಬ್ಬಳ್ಳಿ, ಫೆಬ್ರವರಿ 05: ಆತ ಆಟೋ ಚಾಲಕ (Auto driver). ಆದರೆ ಆತನ ಬ್ಯಾಂಕ್​​ ಖಾತೆ ವಹಿವಾಟು ನೋಡಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು ನಡೆದಿದೆ.  ದೇಶದ ವಿವಿಧೆಡೆ ನಡೆದಿರುವ ಸೈಬರ್ ಅಪರಾಧ ಪ್ರಕರಣಗಳ (cyber crime) ಬೆನ್ನು ಹತ್ತಿದ್ದಾಗ ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟಿ ಕೋಟಿ ರೂ ವ್ಯವಹಾರ ನಡೆದಿರುವುದು ಇದೀಗ ಬಯಲಾಗಿದೆ.

ನಡೆದದ್ದೇನು?

ದೇಶದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಹತ್ತಾರು ವಾಮ ಮಾರ್ಗಗಳ ಮೂಲಕ  ಕೋಟಿ ಕೋಟಿ‌ ಹಣ ವಂಚಿಸುವ ಜಾಲ ಸಕ್ರಿಯವಾಗಿದೆ. ಆದರೆ ಇಂತಹದೊಂದು ಅಕ್ರಮ ಬೆನ್ನು ಹತ್ತಿದಾಗ ಪೊಲೀಸರಿಗೆ ಬಹುತೇಕವಾಗಿ ಆರೋಪಿಗಳು ಪತ್ತೆಯಾಗುವುದಿಲ್ಲ. ನಕಲಿ ವಿಳಾಸ, ನಕಲಿ ಆಧಾರ್ ಕಾರ್ಡ್ ನೀಡಿ ಅಕೌಂಟ್ ಮಾಡಿಸಿಕೊಂಡು ವಂಚಕರು ವಂಚಿಸಿರುತ್ತಾರೆ. ಇನ್ನು ಅನೇಕರು ತಾವು ವಂಚನೆಗೊಳಗಾದ ಮೇಲೆ ಸೈಬರ್ ದೂರು‌ ಹೆಲ್ಪಲೈನ್ ನಂಬರ್ 1930ಗೆ ಕರೆ ಮಾಡಿ ದೂರು ನೀಡುತ್ತಾರೆ. ಆದರೆ ಬಹುತೇಕ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: ಧಾರವಾಡ: ಇಲ್ಲಿ ಇಡೀ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು! ಅಪರಾಧ ಕೃತ್ಯವೂ ಇಳಿಕೆ

ಇನ್ನು ಬೆಂಗಳೂರಿನ ಸೈಬರ್ ಕಮಾಂಡ್ ಸೆಂಟರ್​ಗೆ ಕೆಲ ದಿನಗಳಿಂದ ದೂರು ದಾಖಲಾಗಿದ್ದವು. ಬಹುತೇಕ ದೂರುದಾರರು‌ ಒಂದೇ ಅಕೌಂಟ್ ನಂಬರ್ ನೀಡಿದ್ದರು. ಆ ಅಕೌಂಟ್ ಪರಿಶೀಲಿಸಿದಾಗ ಇದು ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿರು ಅಕೌಂಟ್ ಅನ್ನೋದು ಗೊತ್ತಾಗಿತ್ತು. ಹೀಗಾಗಿ ಬೆಂಗಳೂರು ಸೈಬರ್ ಕಮಾಂಡ್ ಸೆಂಟರ್​​ ಸಿಬ್ಬಂದಿ ಹುಬ್ಬಳ್ಳಿ ಸೆನ್ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಟೋ ಚಾಲಕನ ಖಾತೆಯಿಂದ ಕೋಟಿ ಕೋಟಿ ವರ್ಗಾವಣೆ

ಈ ಬಗ್ಗೆ ಎರಡು ದಿನಗಳ ಹಿಂದೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸೆನ್ ಠಾಣೆ ಪೊಲೀಸರು, ಅಕೌಂಟ್ ಯಾರದ್ದು ಅಂತ ಪತ್ತೆ ಮಾಡಿದ್ದರು. ಆಗ ಈ ಅಕೌಂಟ್ ಗೋಪನಕೊಪ್ಪ ನಿವಾಸಿ ಇರ್ಫಾನ್ ಎಂಬುವವರದ್ದು ಎಂದು ಗೊತ್ತಾಗಿದೆ. ಇರ್ಫಾನ್ ಅಕೌಂಟ್ ಪರಿಶೀಲನೆ ನಡೆಸಿದಾಗ ಸ್ವತಃ ಸೆನ್ ಠಾಣೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಇರ್ಫಾನ್ ಅಕೌಂಟ್​ಗೆ ದೇಶದ ವಿವಿಧಡೆಯಿಂದ ಕೋಟಿ ಕೋಟಿ ಹಣ ಜಮೆಯಾಗಿದ್ದರೆ, ಇರ್ಫಾನ್ ಅಕೌಂಟ್​ನಿಂದ 50ಕ್ಕೂ ಹೆಚ್ಚು ಖಾತೆಗಳಿಗೆ ಕೋಟ್ಯಂತರ ರೂ ಹಣ ವರ್ಗಾವಣೆಯಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಇರ್ಫಾನ್ ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಲ್ಲಿ ಬ್ಯಾಂಕ್ ಆಫ್​​ ಬರೋಡಾ ಶಾಖೆಯಲ್ಲಿ ಅಕೌಂಟ್ ಮಾಡಿಸಿದ್ದರು. ನಂತರ ಅದನ್ನು ಸೈಬರ್‌ ವಂಚಕರಿಗೆ ನೀಡಿ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಇರ್ಫಾನ್ ವಿರುದ್ಧ ಕೇಳಿಬಂದಿದ್ದು, ದೂರು ದಾಖಲಾಗಿದೆ.

ಆಟೋ ಚಾಲಕ ಮತ್ತು ಆಗಾಗ ಅಡುಗೆ ಕೆಲಸ ಮಾಡುವ ಇರ್ಫಾನ್ ಅಕೌಂಟ್​ನಿಂದ ಕೋಟಿ ಕೋಟಿ ಹಣ ಜಮೆ ಮತ್ತು ವರ್ಗಾವಣೆ ಆಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಇನ್ನು ಇರ್ಫಾನ್ ತನ್ನ ಅನೇಕ ಸಂಬಂಧಿಗಳ ಅಕೌಂಟ್​ಗೆ ಸಾಕಷ್ಟು ಹಣ ವರ್ಗಾವಣೆ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಸೆನ್ ಠಾಣೆ ಪೊಲೀಸರು, ಯಾವೆಲ್ಲಾ ಅಕೌಂಟ್​ನಿಂದ ಇರ್ಫಾನ್ ಅಕೌಂಟ್​ಗೆ ಹಣ ಜಮೆಯಾಗಿದೆ, ಯಾರ ಅಕೌಂಟ್​ಗೆ ವರ್ಗಾವಣೆ ಆಗಿದೆ ಅನ್ನೋದರ ಬಗ್ಗೆ ಬ್ಯಾಂಕ್​​ಗೆ ಮಾಹಿತಿ ಕೇಳಿದ್ದು, ಮಾಹಿತಿಗಾಗಿ ಕಾಯುತ್ತಿದ್ದಾರೆ. ಇನ್ನು ಇರ್ಫಾನ್​​ಗೆ ನೋಟಿಸ್ ನೀಡಿ ನಿನ್ನೆ ಠಾಣೆಗೆ ಕರೆದು ವಿಚಾರಣೆ ಕೂಡ ಮಾಡಲಾಗಿದೆ. ಸೈಬರ್ ಅಪರಾಧಗಳಲ್ಲಿ ಇರ್ಫಾನ್ ಭಾಗಿ ಆಗಿದ್ದರಾ ಅಥವಾ ಅವರ ಅಕೌಂಟ್​ನ್ನು ವಂಚಕರು ದುರುಪಯೋಗ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ಸದ್ದು ಮಾಡಿದ ಸೈಬರ್ ಕ್ರೈಂ: ಗೃಹ ಸಚಿವ ಪರಮೇಶ್ವರ್ ಕೊಟ್ರು ಆಘಾತಕಾರಿ ಮಾಹಿತಿ

ಆರಂಭಿಕ ವಿಚಾರಣೆಯಲ್ಲಿ ಇರ್ಫಾನ್ ಅಕೌಂಟ್​ನಿಂದ ಕೋಟ್ಯಂತರ ರೂ. ಹಣ ಜಮೆ ಮತ್ತು ವರ್ಗಾವಣೆ ಆಗಿದ್ದು, ಇದರ ಬಗ್ಗೆ ತನಿಖೆ ಮಾಡಲು ಪ್ರತ್ಯೇಕ ತಂಡವನ್ನೇ ರಚಿಸಲಾಗಿದೆ. ತನಿಖೆ ನಂತರವೇ ಸೈಬರ್ ಅಪರಾಧಗಳಲ್ಲಿ ಇರ್ಫಾನ್ ಪಾತ್ರದ ಬಗ್ಗೆ ನಿಖರ ಮಾಹಿತಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಶೀತ ಕಡಿಮೆ ಮಾಡಿ ಆರೋಗ್ಯ ಕಾಪಾಡಬಲ್ಲ 10 ಸುಲಭ ಪರಿಹಾರಗಳನ್ನು ತಿಳಿಸಿದ ಬಾಬಾ ರಾಮದೇವ್ – Kannada News | Baba Ramdev suggests best 10 home remedies to keep body warm during winters

ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರ ಆಯುರ್ವೇದ ವಿಧಾನಗಳು ಇಳಿ ವಯಸ್ಸಿನಲ್ಲೂ ಆರೋಗ್ಯ ಕಾಪಾಡಬಲ್ಲುವು. ಆಯುರ್ವೇದ ಪರಿಹಾರಗಳ ಜೊತೆಗೆ, ಸಾಧ್ಯವಾದಷ್ಟು ಯೋಗವನ್ನು ಅಭ್ಯಾಸ ಮಾಡಲು ಸ್ವಾಮಿ ರಾಮದೇವ್ ಶಿಫಾರಸು ಮಾಡುತ್ತಾರೆ. ಬಾಬಾ ರಾಮದೇವ್ ಹಲವಾರು ಕಾಲೋಚಿತ ಪರಿಹಾರಗಳನ್ನು ಹಂಚಿಕೊಳ್ಳುತ್ತಾರೆ. ಚಳಿಗಾಲದಲ್ಲಿ ದೇಹವನ್ನು ನ್ಯಾಚುರಲ್ ಆಗಿ ಹೇಗೆ ಬೆಚ್ಚಗಾಗಿಸುವುದು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ. ಶೀತದ ವಾತಾವರಣದಿಂದ ಹಲವು ಆರೋಗ್ಯ ಸಮಸ್ಯೆಗಳಾಗುತ್ತವೆ. . ಶೀತ ಋತುವು ಅದರೊಂದಿಗೆ ಅನೇಕ ಸವಾಲುಗಳನ್ನು ತರುತ್ತದೆ. ಶೀತ ಮಾತ್ರವೇ ನಿಯಂತ್ರಿಸುತ್ತೇನೆಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಮ್ಮು ಕೂಡ ಸುಲಭವಾಗಿ ಸೋಂಕಬಹುದು. ಈ ಶೀತದ ವಾತಾವರಣದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡುವುದು ಬಹಳ ಮುಖ್ಯ.

ಚಳಿಗಾಲದಲ್ಲಿ ದೇಹವನ್ನು ನೈಸರ್ಗಿಕವಾಗಿ ಬೆಚ್ಚಗಾಗಿಸುವ ಪರಿಣಾಮಕಾರಿ ಮಾರ್ಗಗಳನ್ನು ಬಾಬಾ ರಾಮದೇವ್ ಒಂದು ವೀಡಿಯೊದಲ್ಲಿ ವಿವರಿಸುತ್ತಾರೆ. ಬಾಬಾ ಪ್ರಕಾರ, ಈ ಆಯುರ್ವೇದ ವಿಧಾನಗಳು ದೇಹವನ್ನು ಬೆಚ್ಚಗಿಡುವುದಲ್ಲದೆ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಶೀತ ಮತ್ತು ಜ್ವರವನ್ನು ತಪ್ಪಿಸಲು ನಮಗೆ ಸಹಾಯ ಮಾಡುತ್ತವೆ. ಅರಿಶಿನದಿಂದ ಹಿಡಿದು ಶಿಲಾಜಿತ್ ಮತ್ತು ಯೋಗದವರೆಗಿನ ವಿವಿಧ ವಿಧಾನಗಳನ್ನು ಸ್ವಾಮೀಜಿ ವಿವರಿಸುತ್ತಾರೆ. ಈ ಲೇಖನದಲ್ಲಿ, ನಾವು ಅಂತಹ 10 ಮನೆಮದ್ದುಗಳನ್ನು ಹಂಚಿಕೊಳ್ಳುತ್ತೇವೆ. ಶೀತ ಋತುವಿನಲ್ಲಿ ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎಂಬುದರ ವಿವರ ಇಲ್ಲಿದೆ.

ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ

ಚಳಿಗಾಲದಲ್ಲಿ ದೇಹ ಬೆಚ್ಚಗಿಡಲು 10 ಮನೆಮದ್ದುಗಳು

ಅರಿಶಿನ ಮತ್ತು ಶುಂಠಿ ಪರಿಹಾರ – ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ಅರಿಶಿನ ಮತ್ತು ಶುಂಠಿ ನೀರನ್ನು ಕುಡಿಯಲು ಬಾಬಾ ರಾಮದೇವ್ ಶಿಫಾರಸು ಮಾಡುತ್ತಾರೆ. ಇದು ದೇಹಕ್ಕೆ ತಕ್ಷಣದ ಆಂತರಿಕ ಉಷ್ಣತೆಯನ್ನು ನೀಡುತ್ತದೆ. ಈ ಎರಡು ವಸ್ತುಗಳೊಂದಿಗೆ ನೀರು ಕುಡಿಯುವುದರಿಂದ ಮತ್ತೊಂದು ಪ್ರಯೋಜನವೆಂದರೆ ಅದು ಕೆಮ್ಮು ಮತ್ತು ಶೀತಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಕರಿಮೆಣಸು ಮತ್ತು ಬಾದಾಮಿ – ಚಳಿಗಾಲದಲ್ಲಿ ನಿಮ್ಮ ದೇಹವನ್ನು ನೈಸರ್ಗಿಕವಾಗಿ ಬೆಚ್ಚಗಾಗಿಸಲು ಕರಿಮೆಣಸು ಮತ್ತು ಬಾದಾಮಿ ಪಾಕವಿಧಾನವನ್ನು ಪ್ರಯತ್ನಿಸಿ. ಐದು ಬಾದಾಮಿ ಮತ್ತು ಐದು ಕರಿಮೆಣಸನ್ನು ಅಗಿಯಲು ರಾಮದೇವ್ ಹೇಳುತ್ತಾರೆ. ಕರಿಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಶೀತ ಮತ್ತು ಕೆಮ್ಮು ದೂರವಿಡಲು ಸಹಾಯ ಮಾಡುತ್ತದೆ.

ಅರಿಶಿನ ಹಾಲು ಮತ್ತು ಜೇನುತುಪ್ಪ – ಚಳಿಗಾಲದಲ್ಲಿ ಪ್ರತಿದಿನ ಅರಿಶಿನದೊಂದಿಗೆ ಬೆರೆಸಿದ ಹಾಲು ಅಥವಾ ಸ್ವಲ್ಪ ಜೇನುತುಪ್ಪದೊಂದಿಗೆ ಬಿಸಿನೀರನ್ನು ಕುಡಿಯುವುದರಿಂದ ದೇಹವು ಬೆಚ್ಚಗಿರುತ್ತದೆ. ಇವೆರಡೂ ಶೀತದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.

ಕೇಸರಿ ಪರಿಹಾರ: ತುಂಬಾ ದುಬಾರಿಯಾಗಿರುವ ಕೇಸರಿ ದೇಹಕ್ಕೆ ತಕ್ಷಣದ ಉಷ್ಣತೆಯನ್ನು ನೀಡುತ್ತದೆ. ಇದರ ಅನೇಕ ಗುಣಗಳಿಂದಾಗಿ ಶೀತ ನಿಯಂತ್ರಣಗೊಳ್ಳುತ್ತದೆ. ಪ್ರತಿದಿನ ಒಂದು ಅಥವಾ ಎರಡು ಕೇಸರಿ ದಳಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ ಎಂದು ಸ್ವಾಮಿ ರಾಮದೇವ್ ಸಲಹೆ ನೀಡುತ್ತಾರೆ.

ಶುದ್ಧ ತುಪ್ಪ ಸೇವಿಸುವುದು ಉತ್ತಮ – ಯಾರಾದರೂ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಮತ್ತು ಅತಿಯಾದ ಶೀತವನ್ನು ಅನುಭವಿಸಿದರೆ, ಅವರು ಬೆಳಿಗ್ಗೆಯೇ ಶುದ್ಧ ತುಪ್ಪವನ್ನು ಸೇವಿಸಬೇಕು. ಹಾಗೆ ಮಾಡುವುದರಿಂದ ದೇಹವು ಒಳಗಿನಿಂದ ಬಲಗೊಳ್ಳುತ್ತದೆ ಎಂದು ರಾಮದೇವ್ ಸಲಹೆ ನೀಡುತ್ತಾರೆ.

ಕಲ್ಲು ಸಕ್ಕರೆ ಪ್ರಯೋಜನಕಾರಿ: ಬೆಳಿಗ್ಗೆ ಕಲ್ಲುಸಕ್ಕರೆಯೊಂದಿಗೆ 100 ಗ್ರಾಂ ಬಾದಾಮಿ ಮತ್ತು 20 ಗ್ರಾಂ ಕರಿಮೆಣಸನ್ನು ಸೇವಿಸಿ. ಈ ಪದಾರ್ಥಗಳನ್ನು ಅಗಿಯುವುದರಿಂದ ದೇಹವು ಬೆಚ್ಚಗಾಗುವುದಲ್ಲದೆ, ಆಂತರಿಕ ಶಕ್ತಿಯನ್ನು ನೀಡುತ್ತದೆ. ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಶೀತವನ್ನು ತಡೆಯುತ್ತದೆ.

ದೀರ್ಘ ಉಸಿರಾಟ – ದೇಹವನ್ನು ಒಳಗಿನಿಂದ ಬೆಚ್ಚಗಾಗಿಸಲು ಆಳವಾದ, ದೀರ್ಘವಾದ ಉಸಿರಾಟವು ನೈಸರ್ಗಿಕ ಮಾರ್ಗವಾಗಿದೆ ಎಂದು ರಾಮದೇವ್ ಹೇಳುತ್ತಾರೆ. ಇದು ದೇಹಕ್ಕೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ, ಇದು ಆಂತರಿಕ ಶಾಖವನ್ನು ನೀಡುತ್ತದೆ.

ಪವರ್ ಯೋಗ ಮತ್ತು ಸೂರ್ಯ ನಮಸ್ಕಾರ – ದೈನಂದಿನ ಯೋಗ ವ್ಯಾಯಾಮಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅವು ಬೇಗನೆ ಶಾಖವನ್ನು ಕೊಡಲು ಸಹಾಯ ಮಾಡುತ್ತವೆ. ಪವರ್ ಯೋಗ, ಸಿಟ್-ಅಪ್ಸ್ ಮತ್ತು ಸೂರ್ಯ ನಮಸ್ಕಾರಗಳನ್ನು ಮಾಡುವಂತೆ ಬಾಬಾ ರಾಮದೇವ್ ಶಿಫಾರಸು ಮಾಡುತ್ತಾರೆ. ಈ ವ್ಯಾಯಾಮಗಳು ದೇಹವನ್ನು ಸಕ್ರಿಯವಾಗಿರಿಸುತ್ತವೆ, ಸ್ನಾಯುಗಳನ್ನು ಬಲಪಡಿಸುತ್ತವೆ. ಶೀತವನ್ನೂ ಕಡಿಮೆ ಮಾಡುತ್ತವೆ.

ಭಸ್ತ್ರಿಕಾ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ – ವೀಡಿಯೊದಲ್ಲಿ, ಯೋಗ ಗುರುಗಳು ಐದು ನಿಮಿಷಗಳ ಕಾಲ ಭಸ್ತ್ರಿಕಾ ಪ್ರಾಣಾಯಾಮವನ್ನು ಅಭ್ಯಾಸ ಮಾಡಲು ಶಿಫಾರಸು ಮಾಡುತ್ತಾರೆ. ಅವರ ಪ್ರಕಾರ, ಈ ಅಭ್ಯಾಸವು ಶ್ವಾಸಕೋಶವನ್ನು ಬಲಪಡಿಸುತ್ತದೆ ಮತ್ತು ಉಸಿರಾಟದ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಕಪಾಲಭಾತಿ ಮತ್ತು ಅನುಲೋಮ-ವಿಲೋಮ – ಪ್ರತಿಯೊಬ್ಬರೂ ಪ್ರತಿದಿನ 5 ನಿಮಿಷಗಳ ಕಾಲ ಕಪಾಲಭಾತಿ ಮತ್ತು 5 ನಿಮಿಷಗಳ ಕಾಲ ಅನುಲೋಮ-ವಿಲೋಮವನ್ನು ಅಭ್ಯಾಸ ಮಾಡಬೇಕೆಂದು ರಾಮದೇವ್ ಹೇಳುತ್ತಾರೆ. ಈ ಪ್ರಾಣಾಯಾಮ ವ್ಯಾಯಾಮಗಳು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ. ಅವರು ಬೆಳಿಗ್ಗೆ ಹೊತ್ತು ಶಂಖವನ್ನು ಊದುವುದು ಸಹ ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೇದಿಕೆ ಮೇಲೆ ಅಶ್ಲೀಲ ಹಾಡು: ನಾಯಕನ ವಿರುದ್ಧ ಕೇಸು ದಾಖಲು – Kannada News | Hero Chandrahas Barabar Premistha song controversy police case

ಸಿನಿಮಾ (Cinema) ನಾಯಕರುಗಳು ಸಿನಿಮಾಗಳಲ್ಲಿ ಹಾಗೂ ನಿಜ ಜೀವನದಲ್ಲಿ ‘ನಾಯಕ’ರಾಗಿ ಉಳಿದಿಲ್ಲ. ನಾಯಕರೆಂದರೆ ರೌಡಿಗಳು, ಕತ್ತರಿಸುವವರು, ಕೊಲ್ಲವವರು ಆಗಿದ್ದಾರೆ. ನಿಜ ಜೀವನದಲ್ಲಿಯೂ ಕೆಲ ನಾಯಕ ನಟರು ಅದೇ ರೀತಿಯ ರೌಡಿ, ದುಷ್ಟ ವರ್ತನೆಗಳನ್ನು ತೋರುತ್ತಾರೆ. ಇಂಥಹಾ ‘ದುಷ್ಟ ನಾಯಕ’ರ ಪಟ್ಟಿಗೆ ಹೊಸ ಸೇರ್ಪಡೆ ಚಂದ್ರಹಾಸ್. ತೆಲುಗಿನ ಈ ಹೊಸ ಹೀರೋ, ವೇದಿಕೆ ಮೇಲೆ ಅಸಭ್ಯವಾದ ಹಾಡು ಹಾಡಿದ್ದಲ್ಲದೆ, ಪ್ರಶ್ನೆ ಮಾಡಿದವರಿಗೆ ಬೆದರಿಕೆ ಸಹ ಹಾಕಿದ್ದಾರೆ.

ಆಟಿಟ್ಯೂಡ್ ಸ್ಟಾರ್ ಎಂದು ಅಡ್ಡ ಹೆಸರಿಟ್ಟುಕೊಂಡಿರುವ ಚಂದ್ರಹಾಸ್, ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರ. ಇದೀಗ ಅವರ ನಟನೆಯ ‘ಬರಾಬರ್ ಪ್ರೇಮಿಸ್ತ’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲವಾದ ಹಾಡೊಂದನ್ನು ಹಾಡಿದ್ದರು. ಎದುರಿಗೆ ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಖ್ಯಾತ ನಟ ಜೆಡಿ ಚಕ್ರವರ್ತಿ ಸೇರಿದಂತೆ ಹಲವು ಹಿರಿಯರು ಕೂತಿದ್ದರೂ ಸಹ ನಟ ಚಂದ್ರಹಾಸ್ ಬಹಳ ಹೆಮ್ಮೆ, ಅಹಂನಿಂದ ಅಶ್ಲೀಲವಾದ ಹಾಡೊಂದನ್ನು ಹಾಡಿದ್ದಾರೆ.

ಇದನ್ನೂ ಓದಿ:‘ಧುರಂಧರ್’ ಸಿನಿಮಾ ನಿರ್ಮಾಪಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ

ಹಾಡಿನಲ್ಲಿ ಸೊಂಟದ ಕೆಳಗಿನ ಪದಗೆಳ ಬಳಕೆಯನ್ನು ಮಾಡಿದ್ದಾರೆ. ಇದು ಅತಿಥಿ ಜೆಡಿ ಚಕ್ರವರ್ತಿ ಸೇರಿದಂತೆ ಅಲ್ಲಿದ್ದ ಹಲವು ಮಹಿಳೆಯರಿಗೆ, ಪತ್ರಕರ್ತರಿಗೆ ಇರುಸು ಮುರುಸು ಉಂಟು ಮಾಡಿದೆ. ಹಾಡಿನ ಬಳಿಕ ಅಲ್ಲೇ ಇದ್ದ ಕೆಲ ಪತ್ರಕರ್ತರು ಅಸಭ್ಯ ಹಾಡಿನ ಔಚಿತ್ರವನ್ನು ಚಂದ್ರಹಾಸ್ ಬಳಿ ಪ್ರಶ್ನೆ ಮಾಡಿದಾಗ ಚಂದ್ರಹಾಸ್ ಸಿಟ್ಟಾಗಿ ಒಬ್ಬ ಪತ್ರಕರ್ತನಿಗೆ ಬೆದರಿಕೆ ಸಹ ಹಾಕಿದ್ದಾರೆ. ಅದರ ಬೆನ್ನಲ್ಲೆ ಚಂದ್ರಹಾಸ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ವಿವಾದದ ರೂಪ ಪಡೆಯುತ್ತಿದ್ದಂತೆ ‘ಬರಾಬರ್ ಪ್ರೇಮಿಸ್ತ’ ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಮತ್ತು ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ. “ಆ ಹಾಡು ನಮ್ಮ ಸಿನಿಮಾದಲ್ಲಿಲ್ಲ, ನಮ್ಮ ಹೀರೋ ಅವರ ಅತಿ ಉತ್ಸಾಹದಿಂದ ಮಾಡಿದ ಕೆಲಸ ಅದು. ಇದರಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ನಟ ಚಂದ್ರಹಾಸ್ ಮಾತ್ರ, ‘ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲ ಭಾಗವನ್ನಷ್ಟೆ ಕಟ್ ಮಾಡಿ, ನನ್ನ ತೇಜೋವಧೆಗೆ ಬಳಸಲಾಗುತ್ತಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದೇನು? – Kannada News | BMRCL CPRO Yashavanth Chavan Talks about Namma Metro Ticket Hike from February 9th

ಬೆಂಗಳೂರು, (ಫೆಬ್ರವರಿ 05): ನಮ್ಮ ಮೆಟ್ರೋ ಬೆಂಗಳೂರಿಗರ (Bengaluru Namma Metro) ಜೀವನಾಡಿಗಳಲ್ಲಿ ಒಂದು.ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಜನ ಮೆಟ್ರೋ ಹತ್ತುತ್ತಾರೆ. ಆದ್ರೆ ಮೆಟ್ರೋ ಟಿಕೆಟ್ ದರವೇ ಸಿಟಿ ಮಂದಿಗೆ ದೊಡ್ಡ ಕಿರಿಕಿರಿಯಾಗಿ ಬದಲಾಗಿದೆ. ಫೆಬ್ರವರಿ 9ನೇ ತಾರೀಕಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಲಿದೆ. ಈ ಬಗ್ಗೆ ಏರಿಕೆ ಮಾಡಿದ್ದು ನಾವಲ್ಲ, ನಾವಲ್ಲ ಎಂದು ಬಿಜೆಪಿ, ಕಾಂಗ್ರೆಸ್ ನಡುವೆ ಸಮರ ನಡೆಯುತ್ತಿದೆ. ಇನ್ನು ಈ ಬಗ್ಗೆ ಬಿಎಂಆರ್​​ಸಿಎಲ್ CPRO ಯಶವಂತ್ ಚೌವ್ಹಾಣ್ ಮಾತನಾಡಿದ್ದು, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಕೇಂದ್ರ ಸಚಿವರನ್ನು ಭೇಟಿಯಾದ ತೇಜಸ್ವಿ ಸೂರ್ಯ ಹೇಳಿದ್ದೇನು?

Source link

‘ರಕ್ಕಸಪುರದೋಳ್’, ‘ಜೆಸಿ’ ಜೊತೆ ಹಲವು ಸಿನಿಮಾಗಳು ಈ ವಾರ ರಿಲೀಸ್ – Kannada News | Rakkasapuradhol JC The University and other movies releasing on 6 February

ಫೆಬ್ರವರಿ 6ರಂದು ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು (New Kannada Movies) ಬಿಡುಗಡೆ ಆಗುತ್ತಿವೆ. 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈ ವಾರದ ಪ್ರಮುಖ ಆಕರ್ಷಣೆ ಎಂದರೆ ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ (Rakkasapuradhol) ಮತ್ತು ಡಾಲಿ ಧನಂಜಯ ನಿರ್ಮಾಣದ ‘ಜೆಸಿ ದಿ ಯೂನಿವರ್ಸಿಟಿ’. ಇವುಗಳು ಮಾತ್ರವಲ್ಲದೇ ‘ಕಟ್ಲೆ’, ‘ಕರಿಕಾಡ’, ‘ಘಾರ್ಗಾ’, ‘ಸುಖೀಭವ’ ಮುಂತಾದ ಸಿನಿಮಾಗಳು ತೆರೆಕಾಣುತ್ತಿವೆ. ಫೆಬ್ರವರಿ 6ರಂದು ಬಿಡುಗಡೆ ಆಗಲಿರುವ ಕನ್ನಡ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ..

ರಕ್ಕಸಪುರದೋಳ್: ಈ ವಾರದ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದು. ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮರ್ಡರ್ ಮಿಸ್ಟರಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಹಿರಿಯ ನಿರ್ದೇಶಕ ಪ್ರೇಮ್ ಅವರ ಸಹಾಯಕ ರವಿ ಸಾರಂಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸ್ವಾದಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಜೆ.ಸಿ. ದಿ ಯೂನಿವರ್ಸಿಟಿ: ಈ ಸಿನಿಮಾದಲ್ಲಿ ಸೂರ್ಯ ಪ್ರಖ್ಯಾತ್ ಅವರು ನಟಿಸಿದ್ದಾರೆ. ಡಾಲಿ ಧನಂಜಯ ಅವರು ಈ ಸಿನಿಮಾಗೆ ಹಣ ಹೂಡಿದ್ದಾರೆ. ಈ ಮೊದಲು ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಪ್ರಖ್ಯಾತ್ ಅಭಿನಯಿಸಿದ್ದರು. ಈಗ ಜೆ.ಸಿ. ದಿ ಯೂನಿವರ್ಸಿಟಿ ಸಿನಿಮಾ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ. ಚೇತನ್ ಜಯರಾಮ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಕರಿಕಾಡ: ಹಳ್ಳಿಗಾಡಿನ ಕಥಾಹಂದರ ಇರುವ ‘ಕರಿಕಾಡ’ ಸಿನಿಮಾ ಕೂಡ ಈ ವಾರ ರಿಲೀಸ್ ಆಗುತ್ತಿದೆ. ಕಾಡ ನಟರಾಜ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಬಲರಾಜ್​ವಾಡಿ, ವಿಜಯ್ ಚೆಂಡೂರು ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ಈ ಸಿನಿಮಾವನ್ನು ತೆರೆಕಾಣಿಸಲಾಗುತ್ತಿದೆ.

ಕಟ್ಲೆ: ಈ ಸಿನಿಮಾದಲ್ಲಿ ಹಾಸ್ಯ ನಟ ಕೆಂಪೇಗೌಡ ಅವರು ನಟಿಸಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ಇದು. ಹಲವಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿದ್ದ ಅವರು ಈಗ ಹೀರೋ ಆಗಿದ್ದಾರೆ. ಆ ಕಾರಣದಿಂದ ‘ಕಟ್ಲೆ’ ಸಿನಿಮಾ ಅವರ ಪಾಲಿಗೆ ಸ್ಪೆಷಲ್ ಆಗಿದೆ. ಶ್ರೀವಿಧಾ ಅಭಿನಂದನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಭೂತ-ಪ್ರೇತಗಳ ‘ರಕ್ಕಸಪುರ’ದಲ್ಲಿ ರಾಜ್ ಬಿ ಶೆಟ್ರು ರಕ್ಷಕನಾ-ರಾಕ್ಷಸನಾ?

ಸರ್ಕಾರಿ ಶಾಲೆ ಹೆಚ್​8: ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ನಟಿಸಿದ್ದಾರೆ. ಗುಣ ಹರಿಯಬ್ಬೆ, ರಾಘವೇಂದ್ರ ರಾಜ್​​ಕುಮಾರ್, ಮೇಘಶ್ರೀ, ಸುಚೇಂದ್ರ ಪ್ರಸಾದ್, ವೈಜನಾಥ್ ಬಿರಾದರ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಗುಣ ಹರಿಯಬ್ಬೆ ಅವರ ನಿರ್ದೇಶನ ಈ ಸಿನಿಮಾಗಿದೆ.

ಅರುಣ್ ರಾಮ್​ ಪ್ರಸಾದ್ ನಟನೆಯ ‘ಘಾರ್ಗಾ’, ಮಹೇಂದ್ರ ಕುಮಾರ್ ಅಭಿನಯದ ‘ಸುಖೀಭವ’, ಮೊಹಮದ್ ಅಬ್ಜಲ್ ನಟನೆಯ ‘ನೆನಪುಗಳ ಮಾತು ಮಧುರ’, ಆಕರ್ಷ್ ಆದಿತ್ಯ ಅಭಿನಯದ ‘ಬಯಕೆಗಳು ಬೇರೂರಿದಾಗ’, ಅಥರ್ವ ಪ್ರಕಾಶ್ ನಟನೆಯ ‘ನಾನ್-ವೆಜ್’ ಸಿನಿಮಾ ಕೂಡ ಫೆಬ್ರವರಿ 6ರಂದು ಬಿಡುಗಡೆ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಟಿಕೆಟ್ ದರ ಏರಿಕೆಗೆ ಬೆನ್ನಲ್ಲೇ ಕೇಂದ್ರ ಸಚಿವರನ್ನು ಭೇಟಿಯಾದ ತೇಜಸ್ವಿ ಸೂರ್ಯ ಹೇಳಿದ್ದೇನು? – Kannada News | Namma Metro Fare Hike: Tejasvi Surya meet ml khattar to Urge Fare Fixation Committee Overhaul

ತೇಜಸ್ವಿ ಸೂರ್ಯ, ಮನೋಹರ್ ಲಾಲ್ ಖಟ್ಟರ್​​, ನಮ್ಮ ಮೆಟ್ರೋ Image Credit source: Tejasvi Surya X

ಬೆಂಗಳೂರು, ಫೆಬ್ರವರಿ 05: ದೇಶದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ (Namma Metro) ಇದೀಗ ಮತ್ತೆ ದರ ಏರಿಕೆಗೆ ಮುಂದಾಗಿದೆ. ಶೇ.5ರಷ್ಟು ಮೆಟ್ರೋ ಟಿಕೆಟ್ ಪ್ರಯಾಣ ದರ ದುಬಾರಿಯಾಗಿದ್ದು, ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಈಗಾಗಲೇ ಮೆಟ್ರೋ ಪ್ರಯಾಣಿಕರು ಬಿಎಂಆರ್​ಸಿಎಲ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಎಂ.ಎಲ್​​ ಖಟ್ಟರ್​​ ಅವರನ್ನು ಭೇಟಿ ಮಾಡಿ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಟಿಕೆಟ್ ದರ ಮತ್ತೆ ಏರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಫೆ. 9ರಿಂದ ಮೆಟ್ರೋ ಪರಿಷ್ಕೃತ ಪ್ರಯಾಣ ದರ ಜಾರಿಯಾಗುತ್ತಿದೆ. ಆ ಮೂಲಕ ಸಾರ್ವಜನಿಕ ವ್ಯಾಪಕ ವಿರೋಧವನ್ನು ಕಡೆಗಣಿಸಿ, ಪ್ರಯಾಣಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರುವುದಕ್ಕೆ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್

ಈ ವಿಷಯವನ್ನು ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವ ಎಂ.ಎಲ್​​ ಖಟ್ಟರ್​​ ಅವರನ್ನು ಇಂದು ಭೇಟಿ ಮಾಡಿ ವಿವರವಾಗಿ ಮಾಹಿತಿ ನೀಡಿದ್ದು, ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಮನವಿ ಮಾಡಿದ್ದಾರೆ.

ದರ ನಿಗದಿ ಸಮಿತಿಗೆ ಸಲ್ಲಿಸಲಾದ ಲೆಕ್ಕಾಚಾರಗಳಲ್ಲಿ ಹಲವು ವೈಪರೀತ್ಯಗಳು ಇರುವುದನ್ನು ಗಮನಕ್ಕೆ ತರಲಾಗಿದ್ದು, ಅದರಲ್ಲೂ ಪ್ರಸ್ತುತ ವರ್ಷದಲ್ಲಿನ ದೋಷಗಳು ಸೇರಿವೆ. ಇದರಿಂದ ಪ್ರಯಾಣಿಕರಿಗೆ ಅಧಿಕ ದರ ವಿಧಿಸಲಾಗಿದ್ದು, ಗರಿಷ್ಠ ಟಿಕೆಟ್ ದರವನ್ನು 95 ರೂಪಾಯಿಗೆ ಏರಿಸಲಾಗಿದೆ.

ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ?

ಈ ದೋಷಪೂರ್ಣ ದರ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ಮುಂದುವರಿಸಲು ಅವಕಾಶ ನೀಡಬಾರದು. ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಗತ್ಯವಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ದರ ಪರಿಷ್ಕರಿಸಲು ಹೊಸ ದರ ನಿಗದಿ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತಾಗಿ ಸಕಾರಾತ್ಮಕವಾಗಿ ಪರಿಗಣಿಸಲಾಗುವುದೆಂದು ಸಚಿವ ಎಂ.ಎಲ್​​ ಖಟ್ಟರ್ ಅವರು ಭರವಸೆ ನೀಡಿರುವುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version