ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ – Kannada News | I Advised PM Modi Not To Come Lok Sabha Congress MPs Planned Something Om Birla On Speech Row

ನವದೆಹಲಿ, ಫೆಬ್ರವರಿ 5: “ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಏನೋ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಹೀಗಾಗಿಯೇ ನಿನ್ನೆಯ ಅಧಿವೇಶನಕ್ಕೆ ಬಾರದಂತೆ ಮತ್ತು ಕಲಾಪವನ್ನು ಉದ್ದೇಶಿಸಿ ಭಾಷಣ ಮಾಡದಂತೆ ನಾನೇ ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದೆ” ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಲೋಕಸಭಾ ಅಧಿವೇಶನವನ್ನು (Lok Sabha Session) ಮುಂದೂಡಲಾಗಿತ್ತು. ಇದಕ್ಕೆ ಕಾರಣವಾದ ಗದ್ದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಪ್ರಧಾನಮಂತ್ರಿಗಳ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಭದ್ರತಾ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಲೋಕಸಭೆಗೆ ಬರದಂತೆ ನಾನೇ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

“ಲೋಕಸಭೆಯ ಕೊಠಡಿಯೊಳಗೆ ಕೆಲವು ವಿರೋಧ ಪಕ್ಷದ ಸದಸ್ಯರು “ದುರ್ವರ್ತನೆ” ತೋರಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ಸಮಯದಲ್ಲಿ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಬಹುದು ಎಂಬ ಪೂರ್ವ ಮಾಹಿತಿ ನನಗೆ ಸಿಕ್ಕಿತ್ತು. ಇತಿಹಾಸದಲ್ಲಿ ಎಂದಿಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಂಸತ್ತಿನ ಸದನಕ್ಕೆ ತಂದಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಪೀಠದ ಬಳಿಗೆ ಹೋಗಿ ಗದ್ದಲ ನಡೆಸಿದರು. ಇದು ಅನಿರೀಕ್ಷಿತ ದಾಳಿಗೂ ಕಾರಣವಾಗಬಹುದು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ಸಂಭವಿಸಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿಯನ್ನುಂಟು ಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ಒತ್ತಾಯಿಸಿದೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಕಲಾಪವನ್ನು ಮುಂದೂಡಲಾಯಿತು. ನಿನ್ನೆ ನಡೆದದ್ದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ” ಎಂದು ಲೋಕಸಭಾ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನು ಓದದಂತೆ ನಿರ್ಬಂಧಿಸಿದ ನಂತರ ಬುಧವಾರ ಲೋಕಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಬಿಜೆಪಿಯ ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ರಾಹುಲ್ ಗಾಂಧಿಯ ಈ ಕ್ರಮವನ್ನು ಬಲವಾಗಿ ವಿರೋಧಿಸಿದರು.

ಬಳಿಕ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಎಡ್ವಿನಾ ಮತ್ತು ನೆಹರು ಮತ್ತು ದಿ ಮಿತ್ರೋಖಿನ್ ಆರ್ಕೈವ್‌ನಂತಹ ಪುಸ್ತಕಗಳನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದರು. ಸದನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಯಾವುದೇ ಪುಸ್ತಕ, ಪತ್ರಿಕೆ ಅಥವಾ ಪತ್ರವನ್ನು ಸಂಸದರು ಓದುವಂತಿಲ್ಲ. ರಾಹುಲ್ ಗಾಂಧಿ ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸುವುದನ್ನು ತಡೆಯಲು ಇದೇ ನಿಯಮವನ್ನು ಅನ್ವಯಿಸಲಾಗಿತ್ತು ಎಂದು ಸದನದಲ್ಲಿ ತಿಳಿಸಲಾಯಿತು.

ಇದನ್ನೂ ಓದಿ: ಮಹಿಳಾ ಸಂಸದರನ್ನು ಛೂ ಬಿಟ್ಟ ಕಾಂಗ್ರೆಸ್; ಇಂದು ಸಂಸತ್​​ನಲ್ಲಿ ಮೋದಿ ಭಾಷಣ ಮಾಡದಿರಲು ಕಾರಣವೇನು?

ಆದರೂ ನಿಶಿಕಾಂತ್ ದುಬೆ ಅವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಗೆ ಕಾರಣವಾಯಿತು. ಅವರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಳಿಕ ಸಂಜೆ 5 ಗಂಟೆಯವರೆಗೆ ಕಲಾಪ ಮುಂದೂಡಬೇಕಾಯಿತು. ಕಲಾಪ ಮುಂದೂಡಿಕೆಯ ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ದುಬೆ ಅವರಿಗೆ ಪುಸ್ತಕಗಳಿಂದ ಉಲ್ಲೇಖಿಸಲು ಅವಕಾಶ ನೀಡಿದ್ದನ್ನು ಆಕ್ಷೇಪಿಸಿದರು. ಅದೇ ನಿಯಮವನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪುಸ್ತಕವನ್ನು ಓದಲು ಅವಕಾಶವನ್ನು ನಿರಾಕರಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದಂತೆ ನಿಶಿಕಾಂತ್ ದುಬೆ ಅವರನ್ನು ಕೂಡ ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಆದರೆ, ಸ್ಪೀಕರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಸಂಜೆ 5 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಭಟನೆಗಳು ತೀವ್ರಗೊಂಡವು. ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ನೇತೃತ್ವದಲ್ಲಿ ಮಹಿಳಾ ಸಂಸದರು ಪ್ರತಿಭಟನೆಯ ವೇಳೆ ಪ್ರಧಾನಿಯವರ ಕುರ್ಚಿಯ ಕಡೆಗೆ ತೆರಳಿ ಮುತ್ತಿಗೆ ಹಾಕಿದರು. ಯಾವುದೇ ಕಾರಣಕ್ಕೂ ಮೋದಿಗೆ ಭಾಷಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಹೀಗಾಗಿ, 1 ದಿನದ ಕಲಾಪವನ್ನು ಮುಂದೂಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ – Kannada News | Elon Musk becomes first person in the world to have assets valued 800 billion USD

ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಸ್ಪೇಸ್​ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್.

ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್​ಎಐ ವಿಲೀನ ಆದ ನಂತರ ಮಸ್ಕ್ ಅವರ ಶ್ರೀಮಂತಿಕೆ ತಾರಕಕ್ಕೇರಿದೆ. ಎಕ್ಸ್​ಎಐ ಅನ್ನು ಖರೀದಿಸಿದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ ಬಹಳ ಹೆಚ್ಚಾಗಿದೆ. ಈ ಡೀಲ್​ಗೆ ಮುನ್ನ ಸ್ಪೇಸ್​ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್​ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ 542 ಬಿಲಿಯನ್ ಡಾಲರ್​ಗೆ ಏರಿದೆ. ಇದರಲ್ಲಿ ಇಲಾನ್ ಮಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಹೊಂದಿದ್ದಾರೆ.

ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಫೋರ್ಬ್ಸ್ ಬಿಲಿಯನೇರ್​ಗಳ ಪಟ್ಟಿಯ ಪ್ರಕಾರ ಅವರ ಆಸ್ತಿ ಮೌಲ್ಯ 854 ಬಿಲಿಯನ್ ಡಾಲರ್​ಗೆ ಏರಿತು. ಈ ವರದಿ ಬರೆಯುವ ಸಂದರ್ಭದಲ್ಲಿ ಅವರ ಆಸ್ತಿಮೌಲ್ಯ 841 ಬಿಲಿಯನ್ ಡಾಲರ್ ಇತ್ತು. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಸ್ಕ್ ಅವರಿಗಿದೆ. ಟೆಸ್ಲಾದ ಬ್ಯುಸಿನೆಸ್ ಗುರಿಯನ್ನು ಈಡೇರಿಸಿದರೆ ಈ ಸ್ಟಾಕ್ ಆಪ್ಷನ್​ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.

ಇದನ್ನೂ ಓದಿ: ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?

ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರಿವರು…

  1. ಇಲಾನ್ ಮಸ್ಕ್: 841.1 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 272.4 ಬಿಲಿಯನ್ ಡಾಲರ್
  3. ಸೆರ್ಗೇ ಬ್ರಿನ್: 251.3 ಬಿಲಿಯನ್ ಡಾಲರ್
  4. ಜೆಫ್ ಬೇಜೋಸ್: 244.3 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 229.3 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 190.6 ಬಿಲಿಯನ್ ಡಾಲರ್
  7. ಬರ್ನಾರ್ಡ್ ಆರ್ನಾಲ್ಟ್: 165.3 ಬಿಲಿಯನ್ ಡಾಲರ್
  8. ಜೆನ್ಸೆನ್ ಹುಆಂಗ್: 151.3 ಬಿಲಿಯನ್ ಡಾಲರ್
  9. ವಾರನ್ ಬಫೆಟ್: 149.5 ಬಿಲಿಯನ್ ಡಾಲರ್
  10. ಅಮಾನ್ಷಿಯೋ ಆರ್ಟೆಗಾ: 148.5 ಬಿಲಿಯನ್ ಡಾಲರ್
  11. ರಾಬ್ ವಾಲ್ಟನ್: 146 ಬಿಲಿಯನ್ ಡಾಲರ್
  12. ಜಿಮ್ ವಾಲ್ಟನ್: 143.3 ಬಿಲಿಯನ್ ಡಾಲರ್
  13. ಅಲೈಸ್ ವಾಲ್ಟನ್: 134.1 ಬಿಲಿಯನ್ ಡಾಲರ್
  14. ಮಿಚೆಲ್ ಡೆಲ್: 130 ಬಿಲಿಯನ್ ಡಾಲರ್
  15. ಸ್ಟೀವ್ ಬಾಲ್ಮರ್: 129.7 ಬಿಲಿಯನ್ ಡಾಲರ್
  16. ಮೈಕೇಲ್ ಬ್ಲೂಂಬರ್ಗ್: 109.4 ಬಿಲಿಯನ್ ಡಾಲರ್
  17. ಕಾರ್ಲೊಸ್ ಸ್ಲಿಮ್ ಹೆಲು: 108 ಬಿಲಿಯನ್ ಡಾಲರ್
  18. ಬಿಲ್ ಗೇಟ್ಸ್: 105.5 ಬಿಲಿಯನ್ ಡಾಲರ್
  19. ಮುಕೇಶ್ ಅಂಬಾನಿ: 103.4 ಬಿಲಿಯನ್ ಡಾಲರ್
  20. ಫ್ರಾಂಕಾಯ್ಸ್ ಬೆಟೆನ್​ಕೋರ್ಟ್ ಮೆಯೆರ್ಸ್: 97.3 ಬಿಲಿಯನ್ ಡಾಲರ್
  21. ಥಾಮಸ್ ಪೀಟರ್​ಫಿ: 85.3 ಬಿಲಿಯನ್ ಡಾಲರ್
  22. ಜುಲಿಯಾ ಕೋಚ್: 81.1 ಬಿಲಿಯನ್ ಡಾಲರ್
  23. ಚ್ಯಾಂಗ್​ಪೆಂಗ್ ಝಾಹೋ: 78.8 ಬಿಲಿಯನ್ ಡಾಲರ್
  24. ಚಾರ್ಲ್ಸ್ ಕೋಚ್: 73.7 ಬಿಲಿಯನ್ ಡಾಲರ್
  25. ಝೋಂಗ್ ಶಂಶನ್: 70 ಬಿಲಿಯನ್ ಡಾಲರ್
  26. ಝಾಂಗ್ ಯಿಮಿಂಗ್: 69.3 ಬಿಲಿಯನ್ ಡಾಲರ್
  27. ಗೌತಮ್ ಅದಾನಿ: 67.1 ಬಿಲಿಯನ್ ಡಾಲರ್
  28. ಜೆಫ್ ಯಾಸ್: 65.6 ಬಿಲಿಯನ್ ಡಾಲರ್
  29. ಜರ್ಮನ್ ಲಾರಿಯಾ ಮೊಟಾ ವೆಲಾಸ್ಕೋ: 63.1 ಬಿಲಿಯನ್ ಡಾಲರ್
  30. ಮಾ ಹುವಾಟೆಂಗ್: 57.7 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

UPSC CSE and IFS Notification OUT: UPSC ನಾಗರಿಕ ಸೇವಾ ಪರೀಕ್ಷೆ; 933 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟ – Kannada News | UPSC CSE and IFS 2026 Notification OUT: Apply for 933 Posts by Feb 24! Eligibility and Details

ಕೇಂದ್ರ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವಾ ಪರೀಕ್ಷೆ (CSE) ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (IFS)ಗಳ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶದ ಉನ್ನತ ಆಡಳಿತಾತ್ಮಕ ಸೇವೆಗಳಲ್ಲಿ ವೃತ್ತಿಜೀವನ ನಿರ್ಮಿಸಲು ತಯಾರಿ ನಡೆಸುತ್ತಿರುವ ಯುವಜನರಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ. ಈ ಪರೀಕ್ಷೆಗಳ ಮೂಲಕ IAS, IPS, IFS ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 933 ಹುದ್ದೆಗಳನ್ನು ಭರ್ತಿ ಮಾಡಲು UPSC ಉದ್ದೇಶಿಸಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೂಚನೆಗಳನ್ನು ಆಯೋಗವು ಅಧಿಸೂಚನೆಯಲ್ಲಿ ನೀಡಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

UPSC 2026ರ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 4ರಿಂದ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು UPSCಯ ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 24,ಸಂಜೆ 6 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಅಂತಿಮ ದಿನದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು, ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಪೂರ್ಣಗೊಳಿಸುವಂತೆ ಆಯೋಗವು ಸಲಹೆ ನೀಡಿದೆ.

ಹುದ್ದೆಗಳ ವಿತರಣೆ ಮತ್ತು ಮೀಸಲಾತಿ:

ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಘೋಷಿಸಲಾದ 933 ಹುದ್ದೆಗಳಲ್ಲಿ ಸುಮಾರು 35 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ಕೇಂದ್ರ ಸೇವೆಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಮೀಸಲಾತಿ ಸಂಬಂಧಿತ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸಲಾಗುತ್ತದೆ.

ಅರ್ಹತೆ ಮತ್ತು ವಯಸ್ಸಿನ ಮಿತಿ:

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಸಹ ಪ್ರಾಥಮಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯಸ್ಸಿನ ಮಿತಿಯನ್ನು ಆಗಸ್ಟ್ 1, 2026ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ವಯೋಮಿತಿ 21 ರಿಂದ 32 ವರ್ಷಗಳವರೆಗೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯುತ್ತದೆಯಾದರೆ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಪ್ರಯತ್ನಗಳ ಗರಿಷ್ಠ ಸಂಖ್ಯೆ:

UPSC ನಾಗರಿಕ ಸೇವಾ ಪರೀಕ್ಷೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ ಆರು ಬಾರಿ ಪ್ರಯತ್ನಿಸಬಹುದು. ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಒಂಬತ್ತು ಪ್ರಯತ್ನಗಳಿಗೆ ಅವಕಾಶವಿದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಪ್ರಯತ್ನಗಳ ಸಂಖ್ಯೆಗೆ ಮಿತಿ ವಿಧಿಸಲಾಗಿಲ್ಲ; ಆದರೆ ಅವರು ನಿಗದಿತ ವಯೋಮಿತಿಯೊಳಗೆ ಇರಬೇಕು.

ಇದನ್ನೂ ಓದಿ: IIT ಮದ್ರಾಸ್ ಸಮ್ಮರ್ ಇಂಟರ್ನ್‌ಶಿಪ್; ತರಬೇತಿಯ ಜೊತೆಗೆ 30,000 ರೂ. ಸ್ಟೈಫಂಡ್

OTR ಮತ್ತು ಅರ್ಜಿ ಶುಲ್ಕ:

ಈ ಬಾರಿ ಅರ್ಜಿ ಸಲ್ಲಿಸಲು ಒಂದು ಬಾರಿ ನೋಂದಣಿ (One Time Registration – OTR) ಕಡ್ಡಾಯವಾಗಿದೆ. ಅಭ್ಯರ್ಥಿಗಳು ಮೊದಲು OTR ಪ್ರೊಫೈಲ್ ರಚಿಸಿ, ನಂತರವೇ ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು. ಸಾಮಾನ್ಯ ಮತ್ತು OBC ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100ರೂ. ಆಗಿದ್ದು, ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಪ್‌ಲೋಡ್ ಮಾಡುವ ಫೋಟೋ ಇತ್ತೀಚಿನದಾಗಿರಬೇಕು ಮತ್ತು ಅದರಲ್ಲಿ ಅಭ್ಯರ್ಥಿಯ ಹೆಸರು ಹಾಗೂ ದಿನಾಂಕ ಸ್ಪಷ್ಟವಾಗಿ ಕಾಣಿಸಬೇಕು.

ಪರೀಕ್ಷಾ ಕೇಂದ್ರ ಆಯ್ಕೆ:

ಪ್ರಾಥಮಿಕ ಪರೀಕ್ಷೆಯ ಕೇಂದ್ರಗಳನ್ನು “ಮೊದಲು ಬಂದವರಿಗೆ ಆದ್ಯತೆ” ಆಧಾರದ ಮೇಲೆ ಹಂಚಲಾಗುತ್ತದೆ. ಆದ್ದರಿಂದ, ನಿಮ್ಮ ಆದ್ಯತೆಯ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಪಡೆಯಲು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಇದು ನಿಮ್ಮ ಪರೀಕ್ಷಾ ಅನುಭವವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ – Kannada News | Parliament Budget Session: PM Narendra Modi Speech In Rajya Sabha, here Is Live streaming

ನವದೆಹಲಿ, (ಫೆಬ್ರವರಿ 05): ಕೇಂದ್ರ ಬಜೆಟ್ ಅಧಿವೇಶನ (Union Budget session 2026) ಅಂತಿಮ ಹಂತಕ್ಕೆ ಬಂದಿದೆ. ನಿನ್ನೆ (ಫೆಬ್ರವರಿ 04) ಲೋಕಸಭಾ ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣ ಮಾಡಬೇಕಿತ್ತು. ಆದರೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಗಳ ಅಂಶಗಳನ್ನು ಉಲ್ಲೇಖಿಸಲು ಸದನದಲ್ಲಿ ಅವಕಾಶ ನೀಡದ ಕಾರಣ ವಿರೋಧ ಪಕ್ಷಗಳ ಸಂಸದರು ಗಲಾಟೆ ಮಾಡಿದ್ದರು. ಹೀಗಾಗಿ ಲೋಕಸಭೆಯಲ್ಲಿ ಮೋದಿ ಮಾಡಬೇಕಿದ್ದ ಭಾಷಣವನ್ನು ರದ್ದು ಮಾಡಲಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಿದ್ದು, ಇದರ ನೇರಪ್ರಸಾರ ಇಲ್ಲಿದೆ ನೋಡಿ.

Source link

ಚಾಮರಾಜನಗರ ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು: ಎರಡೇ ದಿನಗಳಲ್ಲಿ ಮೃತಪಟ್ಟ 11 ಗೋವು – Kannada News | Chamarajanagar: 11 Cows Die in 2 Days, Poisoning Feared

ಚಾಮರಾಜನಗರ, ಫೆಬ್ರವರಿ 05: ಕಾಡು ಪ್ರಾಣಿಗಳ ಹಾವಳಿಹಿಂದ ಜಾನುವಾರುಗಳನ್ನು ಕಳೆದುಕೊಂಡು ಮೊದಲೇ ಕಂಗಾಲಾಗಿದ್ದ ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ನಡೆಯುತ್ತಿದ್ದು, ಕೇವಲ ಎರಡು ದಿನಗಳ ಅವಧಿಯಲ್ಲಿ ಒಂದೆರಡಲ್ಲ ಬರೋಬ್ಬರಿ 11 ಗೋವುಗಳು ಮೃತಟಪಟ್ಟಿವೆ. ಜಾನುವಾರುಗಳಿಗೆ ವಿಷ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಹಸುಗಳ ಮಾಲಕರು ಕಣ್ಣೀರಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ನಿನ್ನೆ ಮೃತಪಟ್ಟಿದ್ದವು. ಪರಶಿವ ಎಂಬವರಿಗೆ ಸೇರಿದ ಹಸುಗಳು ಜಮೀನಿನ ಪಕ್ಕದಲ್ಲಿ ಗೋವಿನ ಮೃತದೇಹಗಳು ಬಿದ್ದಿದ್ದು, ಬೆಳಗ್ಗೆ ಮೇವು ಹಾಕಲು ಜಮೀನಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ತಹಶೀಲ್ಧಾರ್ ಚೈತ್ರಾ, ಪಶು ವೈದ್ಯಾಧಿಕಾರಿ ಸಿದ್ದರಾಜು ಪರಿಶೀಲನೆ ನಡೆಸಿದ್ದರು. ಮೇಲ್ನೊಟಕ್ಕೆ ವಿಷ ಪೂರಿತ ಆಹಾರ ಅಥವಾ ವಿಷ ಪೂರಿತ ನೀರು ಸೇವಿಸಿ ಹಸುಗಳು ಮೃತಪಟ್ಟಿರುವ ಬಗ್ಗೆ ಅಂದಾಜಿಸಲಾಗಿತ್ತು. 8 ಹಸುಗಳ ಪೈಕಿ 6 ಮೃತಪಟ್ಟಿದ್ದರೆ ಇನ್ನು 2 ನಾಪತ್ತೆಯಾಗಿರುವ ವಿಚಾರ ಈ ವೇಳೆ ಗೊತ್ತಾಗಿತ್ತು.

ಇದನ್ನೂ ಓದಿ: ಸುಳ್ವಾಡಿಯಲ್ಲಿ ಭಾರೀ ದುರಂತ; ಫ್ಲೋರೈಡ್ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ

ಘಟನೆ ಮಾಸುವ ಮುನ್ನವೇ ಇದೇ ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಇಂದು 5 ಹಸುಗಳ ನಿಗೂಢವಾಗಿ ಮೃತಪಟ್ಟಿವೆ. ಗ್ರಾಮದ ತಂಗವೇಲು ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹಸುಗಳನ್ನ ಕಳೆದುಕೊಂಡಿರುವ ಮಾಲಕರಿ ಕಣ್ಣೀರು ಹಾಕಿದ್ದು, ಜೀವನೊಪಾಯಕ್ಕೆ ಇದ್ದಿದ್ದೆ ಈ ಹಸುಗಳು. ಈಗ ನಮ್ಮ ಕತೆ ಏನು ಎಂದು ಭಾವುಕರಾಗಿದ್ದಾರೆ. ಹಸು ಸಾವಿಗೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಡವಾಗಿ ಸಭೆಗೆ ಆಗಮಿಸಿದ ಆಧಿಕಾರಿಗಳಿಗೆ ಚಳಿ ಬಿಡಿಸಿದ ರೈತರು

2 ತಾಸುಗಳ ಕಾಲ ತಡವಾಗಿ ಸಭೆಗೆ ಆಗಮಿಸಿದ ಆಧಿಕಾರಿಗಳಿಗೆ ರೈತರು ಚಳಿಬಿಡಿಸಿರುವ ಘಟನೆ ಚಾಮರಾಜನಗರದ ಜಿಲ್ಲಾಧಿಕಾರಿ ಭವನದಲ್ಲಿ ನಡೆದಿದೆ. ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್​​ಗೆ ರೈತರು ಹಿಗ್ಗಾ ಮುಗ್ಗಾ ಜಾಡಿಸಿದ್ದು, ಈ ವೇಳೆ ಮಾಧ್ಯಮದವರಿಗೆ ವಿಡಿಯೋ ರೆಕಾರ್ಡ್ ಮಾಡದಂತೆ ಎಡಿಸಿ ಜವರೇಗೌಡ ಸೂಚಿಸಿದ ಪ್ರಸಂಗವೂ ನಡೆದಿದೆ. ಕಬಿನಿ ಹಿನ್ನೀರು, ಬಂಡೀಪುರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಮ್ ಸ್ಟೇ ಹಾಗೂ ಹೋಟೇಲ್​​ಗಳ ತೆರವು ವಿಚಾರವಾಗಿ ಸಭೆ ಕರೆಯಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕಾರ್ಯಕರ್ತರ ಪ್ರತಿಕ್ರಿಯೆ – Kannada News | Karnataka Sena Pade activists talk about Rajath Kishan reels controversy

ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ (Rajath Kishan) ಅವರು ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಅವರು ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದಿದ್ದಕ್ಕೆ ದೂರು ದಾಖಲಾಗಿದೆ. ‘ಕರ್ನಾಟಕ ಸೇನಾ ಪಡೆ’ (Karnataka Sena Pade) ಕಾರ್ಯಕರ್ತರು ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಪಾರಂಪರಿಕ ಕಟ್ಟಡ ಆಗಿರುವ ನಮ್ಮ ಡಿಸಿ ಕಚೇರಿ ಎದುರು ರಜತ್ ಸಿಗರೇಟ್ ಸೇದಿ, ರೀಲ್ಸ್ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಸಿಗರೇಟ್ ಸೇದುವುದು ಅಪರಾಧ. ಅಂಥದ್ದರಲ್ಲಿ ಸೆಲೆಬ್ರಿಟಿ ಆದ ಇವರು ಈ ರೀತಿ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಇದರಿಂದ ಯುವ ಜನತೆಗೆ ಏನು ಸಂದೇಶ ನೀಡುತ್ತಾರೆ? ಸಿಗರೇಟ್ ಸೇದಿದರೆ ಇವರೇನೂ ದೊಡ್ಡ ಹೀರೋ ಅಂದುಕೊಂಡಿದ್ದಾರಾ? ರಜತ್ (Rajath)​ ಅವರಿಗೆ ಈ ರೀತಿ ಫೋಟೋಶೂಟ್ ಮಾಡಲು ಅನುಮತಿ ಕೊಟ್ಟವರು ಯಾರು? ರಜತ್ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

9 ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಇದುವರೆಗೆ ಮುರಿಯಲಾಗದ ದಾಖಲೆಗಳಿವು – Kannada News | T20 World Cup History: Records, Champions & Fascinating Facts from 2007 to 2024

ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳು; ಟಿ20 ವಿಶ್ವಕಪ್​ನಲ್ಲಿ ಮೂರು ತಂಡಗಳು ಮಾತ್ರ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಆ ಮೂರು ತಂಡಗಳಲ್ಲಿ ಭಾರತ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸೇರಿವೆ. 2007ಮತ್ತು 2024 ರ ಭಾರತ ಪ್ರಶಸ್ತಿ ಎತ್ತಿ ಹಿಡಿದರೆ, 2012 ಮತ್ತು 2016 ರಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ, ಇಂಗ್ಲೆಂಡ್ 2010 ಮತ್ತು 2022 ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.

Source link

ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ – Kannada News | Honeymoon murder 2.0: Newlywed wife killed husband with lover masks it as accident in Rajasthan

ನವದೆಹಲಿ, ಫೆಬ್ರವರಿ 5: ಆಶಿಶ್ ಮತ್ತು ಅಂಜಲಿ ಇಬ್ಬರೂ ಮದುವೆಯಾಗಿ ಕೇವಲ 3 ತಿಂಗಳಾಗಿತ್ತು. ಬಹಳ ಅನ್ಯೋನ್ಯವಾಗಿಯೇ ಇದ್ದ ಅವರ ನಡುವೆ ಯಾವ ಜಗಳವೂ ಆಗಿರಲಿಲ್ಲ. ಅದೊಂದು ದಿನ ಅವರಿಬ್ಬರೂ ರಾತ್ರಿ ವಾಕಿಂಗ್ ಹೋಗಿದ್ದರು. ಆಗ ವೇಗವಾಗಿ ಬಂದ ವಾಹನವೊಂದು ಆಶಿಶ್​​ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ದೂರಕ್ಕೆ ಹಾರಿ ಬಿದ್ದ ಆಶಿಶ್ ಅಂಜಲಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದ. ಆಕೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದಾಗ ವಾಹನದಿಂದ ಇಳಿದ ಕೆಲವು ಮಂದಿ ಅಂಜಲಿಯ ಮೈಮೇಲಿದ್ದ ಒಡವೆಯನ್ನು ದೋಚಿಕೊಂಡು, ಆಕೆಯನ್ನು ತಳ್ಳಿ ಪರಾರಿಯಾಗಿದ್ದರು. ಇದು ಅಂಜಲಿ ಪೊಲೀಸರ ಬಳಿ ಹೇಳಿದ್ದ. ಕತೆ. ಮೊದಲು ಪೊಲೀಸರು ಇದೊಂದು ಅಪಘಾತ (Accident) ಎಂದೇ ಭಾವಿಸಿದ್ದರು.

ಆದರೆ, ಅದ್ಯಾಕೋ ಪೊಲೀಸರಿಗೆ ಅಂಜಲಿಯ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಇದಕ್ಕೆ ಕೆಲವೇ ತಿಂಗಳ ಹಿಂದೆ ನಡೆದಿದ್ದ ಮೇಘಾಲಯದ ಹನಿಮೂನ್ ಮರ್ಡರ್ ಕೂಡ ಒಂದು ಕಾರಣ. ಹೆಂಡತಿ ಹಾಗೂ ಆಕೆಯ ಪ್ರಿಯಕರನ ಸಂಚಿನಿಂದ ರಾಜಾ ರಘುವಂಶಿ ಕೊಲೆಯಾಗಿದ್ದರು.

ರಾಜಾ ರಘುವಂಶಿಯನ್ನು ಆತನ ಹೆಂಡತಿ ಸೋನಂ ಕೊಲೆ ಮಾಡಿಸಿದ ರೀತಿಯಲ್ಲೇ ಅಂಜಲಿ ಕೂಡ ತನ್ನ ಗಂಡನನ್ನು ಕೊಲ್ಲಲು ಪ್ಲಾನ್ ಮಾಡಿರಬಹುದಾ? ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಈ ದೃಷ್ಟಿಕೋನದಿಂದ ಯೋಚನೆ ಮಾಡಿದ ಪೊಲೀಸರು ಅಂಜಲಿ ಮೇಲೊಂದು ಕಣ್ಣಿಟ್ಟಿದ್ದರು. ಹೀಗಾಗಿ, ಮತ್ತೊಮ್ಮೆ ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ತನಿಖೆ ನಡೆಸಿದಾಗ ಅಂಜಲಿ ತನ್ನ ಗೆಳೆಯ ಸಂಜು ಜೊತೆ ಸೇರಿ ಗಂಡ ಆಶಿಶ್ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಬಯಲಾಗಿದೆ. ಈ ಮೂಲಕ ಮೇಘಾಲಯದ ರೀತಿಯಲ್ಲೇ ರಾಜಸ್ಥಾನದ ಹನಿಮೂನ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆ ದಿನ ಆಗಿದ್ದೇನು?:

ಅದು ಜನವರಿ 30ರ ಸಂಜೆ. ರಾತ್ರಿ 9ರ ಸುಮಾರಿಗೆ ರಸ್ತೆಯಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ತಕ್ಷಣ ಆ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಅಂಜಲಿ ಪೊಲೀಸರಿಗೆ ಮಾಹಿತಿ ನೀಡಿದಳು. ಆಗ ಪೊಲೀಸರು ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಿದರು. ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಸಹ ಕರೆಸಲಾಯಿತು.

ಇದನ್ನೂ ಓದಿ: ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

23 ವರ್ಷದ ಅಂಜಲಿ ತಾನು ಮತ್ತು ತನ್ನ ಪತಿ ಸಂಜೆ ವಾಕಿಂಗ್‌ಗೆ ಹೋದಾಗ ಆಶಿಶ್ ಮತ್ತು ತನಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಳು. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಸಹ ಅವರು ಹೇಳಿದ್ದಳು. ಆದರೆ, ತನಿಖೆಯ ಸಮಯದಲ್ಲಿ ವಾಸ್ತವ ಮತ್ತು ಅಂಜಲಿ ನೀಡಿದ ಸಾಕ್ಷ್ಯದ ನಡುವೆ ವ್ಯತ್ಯಾಸಗಳು ಕಂಡುಬಂದಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತು. ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್‌ನ ದೇಹದಲ್ಲಿ ಗಾಯದ ಗುರುತುಗಳಿರುವುದಾಗಿ ತಿಳಿಸಲಾಗಿತ್ತು. ವೈದ್ಯಕೀಯ ವರದಿಯ ಪ್ರಕಾರ ಅವನ ಕತ್ತು ಹಿಸುಕಿ ಕೊಲ್ಲಲ್ಪಟ್ಟಂತೆ ಕಂಡುಬಂದಿತ್ತು. ಮತ್ತೊಂದೆಡೆ, ಚಿನ್ನ ದೋಚಿದರೂ ಅಂಜಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.

ಅಂಜಲಿ ತನ್ನ ಮನೆಯ ಹತ್ತಿರ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂದು ಆಕೆಯ ಫೋನ್ ದಾಖಲೆಗಳು ದೃಢಪಡಿಸಿತ್ತು. ಅಂಜಲಿ ಮತ್ತು ಆಶಿಶ್ 3 ತಿಂಗಳ ಹಿಂದೆ ವಿವಾಹವಾದರು. ಆದರೆ, ಈ ಮದುವೆಯಿಂದ ಅಂಜಲಿ ಅತೃಪ್ತಳಾಗಿದ್ದಳು. ಆಕೆ ತವರುಮನೆಗೆ ಬಂದಾಗ ಮತ್ತೆ ಮಾಜಿ ಪ್ರಿಯಕರ ಸಂಜು ಜೊತೆ ಸಂಬಂಧ ಬೆಳೆಸಿದಳು. ಆ ಸಮಯದಲ್ಲಿ ಇಬ್ಬರೂ ಆಶಿಶ್‌ನ ಕೊಲೆಯ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

ಗಂಡನ ಮನೆಗೆ ಹೋದ ಬಳಿಕ ಮೊದಲೇ ಪ್ಲಾನ್ ಮಾಡಿದಂತೆ ಜನವರಿ 30ರಂದು ಅಂಜಲಿ ರಾತ್ರಿ ಊಟವಾದ ನಂತರ ಆಶಿಶ್‌ನ ಜೊತೆ ವಾಕಿಂಗ್ ಹೋಗಿದ್ದಳು. ಆಗ ಆಕೆ ಬೇಕೆಂದೇ ಆಶಿಶ್‌ನನ್ನು ಒಂದು ನಿರ್ಜನ ರಸ್ತೆಗೆ ಕರೆದೊಯ್ದಳು. ಅಲ್ಲಿ ಸಂಜು ಮತ್ತು ಅವನ ಸಹಚರರಾದ ರೋಹಿತ್, ಬಾದಲ್ ಪೊದೆಗಳಲ್ಲಿ ಅಡಗಿಕೊಂಡಿದ್ದರು. ಅವರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದು, ನಂತರ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು. ತನ್ನ ಮೇಲೆ ಅನುಮಾನ ಬರಬಾರದು ಎಂದು ಅಂಜಲಿ ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿ, ದರೋಡೆಯಾಗಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಳು. ಆ ದಾಳಿಯ ನಂತರ ಅವಳು ಪ್ರಜ್ಞಾಹೀನಳಂತೆ ನಟಿಸಿದಳು. ಆದರೆ ಆಶಿಶ್‌ನ ದೇಹದ ಮೇಲಿದ್ದ ಗಾಯದ ಗುರುತುಗಳು ಕೊಲೆಯ ಸಂಚು ಬಯಲಾಗಲು ಕಾರಣವಾಯಿತು.

ಪೊಲೀಸ್ ತನಿಖೆ ವೇಳೆ ಅಂಜಲಿ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದುದರಿಂದ ಪೊಲೀಸರು ಅನುಮಾನಗೊಂಡರು. ಕೊನೆಗೆ ಈ ಬಗ್ಗೆ ಅಂಜಲಿಯ ತನಿಖೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಳು. ಪೊಲೀಸರು ಅಂಜಲಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ? – Kannada News | Reason why HAL out of race for AMCA fighter jet project

ಬೆಂಗಳೂರು, ಫೆಬ್ರುವರಿ 5: ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ ತಯಾರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಎಎಂಸಿಎ ಯೋಜನೆಯ (AMCA project) ರೇಸ್​ನಿಂದ ಎಚ್​ಎಎಲ್ ಹೊರಬಿದ್ದಿದೆ. ಟಾಟಾ ಗ್ರೂಪ್, ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಗುಂಪುಗಳು (Consortium) ಈಗ ಈ ರೇಸ್​ನಲ್ಲಿ ಉಳಿದಿವೆ. ಮುಂದಿನ ದಿನಗಳಲ್ಲಿ ಒಂದು ಸಂಸ್ಥೆಗೆ ಎಎಂಸಿಎ ಅಭಿವೃದ್ಧಿಪಡಿಸುವ ಮಹತ್ವದ ಪ್ರಾಜೆಕ್ಟ್ ಸಿಗಲಿದೆ. ಬಿಇಎಂಎಲ್, ಬಿಇಎಲ್, ಡಾಟಾ ಪ್ಯಾಟರ್ನ್ಸ್ ಇತ್ಯಾದಿ ಕಂಪನಿಗಳು ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಕನ್ಸಾರ್ಟಿಯಂಗಳಲ್ಲಿ ಇವೆ.

ಎಎಂಸಿಎ ಪ್ರಾಜೆಕ್ಟ್​ಗೆ ಆಯ್ಕೆಯಾದ ಸಂಸ್ಥೆಯು ಪ್ರೋಟೊಟೈಪ್​ಗಳನ್ನು ಮೊದಲು ನಿರ್ಮಿಸಬೇಕಾಗುತ್ತದೆ. ಈ ಪ್ರೋಟೋಟೈಪ್ ನಿರ್ಮಾಣ ಯೋಜನೆಯೇ 16,000 ಕೋಟಿ ರೂ ಆಗಿರುತ್ತದೆ. ಇವುಗಳ ಪ್ರಯೋಗಗಳು ಯಶಸ್ವಿಯಾದ ಬಳಿಕ ಫೈಟರ್ ಜೆಟ್​ಗಳ ಉತ್ಪಾದನೆ ಶುರುವಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳಾಗುವ ನಿರೀಕ್ಷೆ ಇದೆ. ಪ್ರೋಟೋಟೈಪ್​ನ ಮೊದಲ ಫ್ಲೈಟ್ 2028 ಅಥವಾ 2029ರಲ್ಲಿ ನಡೆಯಬಹುದು. ಇದಕ್ಕೆ ಹಸಿರು ನಿಶಾನೆ ಸಿಕ್ಕರೆ ಜೆಟ್​ಗಳ ಪ್ರೊಡಕ್ಷನ್ 2035ರಲ್ಲಿ ಆರಂಭವಾಗಬಹುದು.

ಸದ್ಯ ಎಎಂಸಿಎ ಪ್ರಾಜೆಕ್ಟ್ ರೇಸ್​ನಲ್ಲಿ ಕಣಕ್ಕಿಳಿದಿರುವುವೆಲ್ಲಾ ಖಾಸಗಿ ಸಂಸ್ಥೆಗಳೇ ಎನ್ನುವುದು ವಿಶೇಷ. ಭಾರತೀಯ ವಾಯುಪಡೆಗೆ ನೂರಕ್ಕೂ ಅಧಿಕ ಫೈಟರ್​ಗಳ ಅಗತ್ಯ ಇದೆ. ಹೀಗಾಗಿ, ಈ ಎಎಂಸಿಎ ಪ್ರಾಜೆಕ್ಟ್​ನ ಮೌಲ್ಯ ಹಲವು ಲಕ್ಷ ಕೋಟಿ ರೂಗಳಿಗೂ ಅಧಿಕ ಇರಬಹುದು.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ಎಚ್​ಎಎಲ್ ಈ ರೇಸ್​ನಿಂದ ಹೊರಬಿದ್ದಿದ್ದು ಯಾಕೆ?

ಫೈಟರ್ ಜೆಟ್ ತಯಾರಿಕೆ ಎಂದರೆ ಡೀಫಾಲ್ಟ್ ಆಗಿ ಎಲ್ಲರ ಕಣ್ಣು ಎಚ್​ಎಎಲ್​ನತ್ತಲ್ಲೇ ನೆಟ್ಟಿರುತ್ತದೆ. ಆದರೆ, ಎಎಂಸಿಎ ಪ್ರೋಗ್ರಾಮ್​ಗೆ ಸರ್ಕಾರ ಖಾಸಗಿಯವರಿಗೂ ಅವಕಾಶ ಕೊಡಲು ನಿರ್ಧರಿಸಿತು. ಪ್ರಾಜೆಕ್ಟ್​ಗೆ ಇಒಐ ಸಲ್ಲಿಸಲು ಕೆಲ ಮಾನದಂಡಗಳನ್ನು ಸರ್ಕಾರ ನಿಗದಿ ಮಾಡಿತು. ಅಂಥ ಒಂದು ಮಾನದಂಡದಲ್ಲಿ ಎಚ್​ಎಎಲ್ ವಿಫಲವಾಯತು ಎನ್ನಲಾಗಿದೆ.

ಎಚ್​ಎಎಲ್​ಗೆ ಮುಳುವಾದ ಆ ಮಾನದಂಡ ಯಾವುದು?

ಒಂದು ಕಂಪನಿಯ ಟರ್ನೋವರ್​ಗಿಂತ ಅದರ ಆರ್ಡರ್ ಬುಕ್ ಮೂರು ಪಟ್ಟು ಹೆಚ್ಚಾಗಿದ್ದರೆ ಪ್ರಾಜೆಕ್ಟ್ ಪರಿಗಣನೆಗೆ ಆದ್ಯತೆ ಕೊಡಲಾಗುವುದಿಲ್ಲ ಎನ್ನುವುದು ಒಂದು ನಿಯಮ. ಈ ವಿಚಾರವು ಎಚ್​ಎಎಲ್​ಗೆ ಮುಳುವಾಯಿತು. ಎಚ್​​​ಎಎಲ್​ನ ಟರ್ವೋವರ್​ಗಿಂತ ಅದರ ಆರ್ಡರ್ ಬುಕ್ ಎಂಟು ಪಟ್ಟು ಹೆಚ್ಚಿದೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಎಎಂಸಿಎ ಪ್ರಾಜೆಕ್ಟ್ ಯಾಕೆ ಮುಖ್ಯ?

ಎಎಂಸಿಎ ಪ್ರಾಜೆಕ್ಟ್ ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ದೇಶೀಯವಾಗಿ ಐದನೇ ತಲೆಮಾರಿನ ಸ್ಟೀಲ್ತ್ ಜೆಟ್ ತಯಾರಿಸುವ ಯೋಜನೆ ಇದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ಐದನೇ ತಲೆಮಾರಿನ ಜೆಟ್ ತಯಾರಿಸಿವೆ. ಫ್ರಾನ್ಸ್​ನ ರಫೇಲ್ ಜೆಟ್ 4.5 ತಲೆಮಾರಿನ ಜೆಟ್ ಎನಿಸಿದೆ. ಸ್ವಂತವಾಗಿ ಐದನೇ ತಲೆಮಾರಿನ ಜೆಟ್ ತಯಾರಿಕೆ ಎಂದರೆ ಅದರ ಎಂಜಿನ್ ಸೇರಿದಂತೆ ಪ್ರತಿಯೊಂದನ್ನೂ ದೆಶೀಯವಾಗಿ ಅಭಿವೃದ್ಧಿಪಡಿಸಿ ತಯಾರಿಸಬೇಕು. ಸ್ವಾವಲಂಬಿ ಭಾರತಕ್ಕೆ ಇದು ತಾಜಾ ನಿದರ್ಶನವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ! – Kannada News | Udupi Youth wins Rs 49 crore lottery in UAE’s Big Ticket lucky draw, to share prize with friend

ಉಡುಪಿ, (ಫೆಬ್ರವರಿ 05):ಓಮನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ (Karnataka) ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ (UAE’s Big Ticket lucky draw) 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ. ಉಡುಪಿಯ (Udupi) ಉದ್ಯಾವರ ಮೂಲದ 33 ವರ್ಷದ ಶಂತನು ಓಮನ್​​​ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.

ಸ್ನೇಹಿತನೊಂದಿಗೆ ಸೇರಿ ಟಿಕೆಟ್ ಖರೀದಿಸಿದ್ದ ಶಂತನು

ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಸೇರಿಕೊಂಡು ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಂತನು ಹೇಳಿಕೊಂಡಿದ್ದಾನೆ. ಇನ್ನು ಶಂತನು ಲಾಟರಿಯಲ್ಲಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದನ್ನೂ ನೋಡಿ: ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ

ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆಯೇ  ಶಂತನು, ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

1992ರಲ್ಲಿ ಯುಎಇನಲ್ಲಿ ಬಿಗ್‌ ಟಿಕೆಟ್‌ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರೂ.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರರೂ.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ಈ ಲಾಟರಿಯಲ್ಲಿ ಕರ್ನಾಟಕದ ಯುವಕನಿಗೆ ಅದೃಷ್ಟ ಖುಲಾಯಿಸಿದೆ. ಇನ್ನು ಈ ಡ್ರಾದಲ್ಲಿ ಜಾಕ್​ಪಾಟ್ ಜೊತೆಗೆ ಹಲವು ಬಹುಮಾನಗಳು ಸೇರಿದ್ದವು. ಐದು ಜನಕ್ಕೆ ತಲಾ ದಿರ್​​ಹುಂ ಬಹುಮಾನದ ಜೊತೆಗೆ ಐಷರಾಮಿ ವಾಹನಗಳನ್ನು ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version