ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ – Kannada News

ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಆಡೆಸ್ಸಿ’ ಚಿತ್ರದ ಮುಂಗಡ ಬುಕಿಂಗ್ (The Odyssey Advance Booking) ಭಾರತದಲ್ಲಿ ಆರಂಭವಾಗಿದೆ. ಜೂನ್ 8ರಂದು ಬೆಳಗ್ಗೆ 10 ಗಂಟೆಗೆ ಬುಕಿಂಗ್ ಶುರು ಆಗುತ್ತಿದ್ದಂತೆಯೇ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ‘ದಿ ಆಡೆಸ್ಸಿ’ (The Odyssey) ಸಿನಿಮಾ ಮುಂದಿನ ತಿಂಗಳು (ಜುಲೈ 17) ಬಿಡುಗಡೆಯಾಗಲಿದ್ದರೂ, ಈಗಲೇ ಟಿಕೆಟ್‌ಗೆ ಈ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಇದರ ನಡುವೆ, ಉತ್ತರ ಭಾರತದಲ್ಲಿ ಟಿಕೆಟ್ ದರ ಬರೋಬ್ಬರಿ 3000 ರೂಪಾಯಿ ತಲುಪಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಸಂಪೂರ್ಣವಾಗಿ ಚಿತ್ರೀಕರಿಸಲಾಗಿರುವ ‘ದಿ ಆಡೆಸ್ಸಿ’ ಚಿತ್ರದ ಪ್ರದರ್ಶನಕ್ಕಾಗಿ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಪಿಕ್ಚರ್ಸ್ ಸದ್ಯಕ್ಕೆ ಕೇವಲ ಎರಡು ಶೋಗಳನ್ನು ಮಾತ್ರ ಘೋಷಿಸಿದೆ. ಅದೂ ಕೇವಲ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಮಾತ್ರ! ಒಂದು ಮುಂಜಾನೆಯ ಶೋ ಹಾಗೂ ಮತ್ತೊಂದು ಸಂಜೆ ಅಥವಾ ರಾತ್ರಿಯ ಶೋ ಆಗಿರಲಿದೆ.

ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹಿಂದಿನ ಚಿತ್ರ ‘ಆಪನ್‌ಹೈಮರ್’ ಬಿಡುಗಡೆಯಾದಾಗಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇತ್ತು. ಆದರೆ ಆಗ ಟಿಕೆಟ್ ದರಗಳು ಈ ಪ್ರಮಾಣದಲ್ಲಿ ದುಬಾರಿಯಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೇವಲ ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ಮಾತ್ರ ಇಂತಹ ಕ್ರೇಜಿ ಡಿಮ್ಯಾಂಡ್ ಕಂಡುಬಂದಿತ್ತು.

ಮಹಾರಾಷ್ಟ್ರದ ಪುಣೆ ನಗರವು ‘ದಿ ಆಡೆಸ್ಸಿ’ ಸಿನಿಮಾದ ಅತ್ಯಂತ ದುಬಾರಿ ಸ್ಕ್ರೀನಿಂಗ್‌ಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಆರಂಭಿಕ ಟಿಕೆಟ್ ದರವೇ 1400 ರೂಪಾಯಿಗಳಾಗಿದ್ದು, ಗರಿಷ್ಠ ಬೆಲೆ 3000 ರೂಪಾಯಿಗಳನ್ನು ಮುಟ್ಟಿರುವುದು ಸಿನಿಪ್ರೇಕ್ಷಕರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಕೂಡ ಈ ಸಿನಿಮಾದ ಟಿಕೆಟ್ ಬೆಲೆ 800 ರೂಪಾಯಿಗಳಿಂದ ಆರಂಭವಾಗಿ 2 ಸಾವಿರ ರೂಪಾಯಿಗಳ ತನಕ ಇದೆ.

ಮುಂಬೈನಲ್ಲಿ ಟಿಕೆಟ್ ದರಗಳು ಸ್ವಲ್ಪ ಮಟ್ಟಿಗೆ ಕೈಗೆಟುಕುವಂತಿದ್ದು, ಬಹುತೇಕ ಕಡೆ 1000 ರೂಪಾಯಿಗಿಂತ ಕಡಿಮೆ ಇವೆ. ಮುಂಬೈನ ‘ಪಿವಿಆರ್ ಲೋವರ್ ಪರೇಲ್’ನಲ್ಲಿ ಮಾತ್ರ ದರಗಳು ಸ್ವಲ್ಪ ಹೆಚ್ಚಾಗಿದ್ದು, ಅಲ್ಲಿ ಆರಂಭಿಕ ಬೆಲೆ 700 ರೂ. ಇದ್ದು, ಗರಿಷ್ಠ 1400 ರೂ.ವರೆಗಿದೆ. ಒಟ್ಟಾರೆಯಾಗಿ ಮುಂಬೈ ನಗರದಲ್ಲಿ ಗರಿಷ್ಠ ಟಿಕೆಟ್ ದರ 2000 ರೂಪಾಯಿಗಳ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಭಾರತೀಯ ಪ್ರೇಕ್ಷಕರು ಯಾವಾಗಲೂ ಹಾಲಿವುಡ್ ಸಿನಿಮಾಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತಾರೆ. ಆದರೆ, ನಮ್ಮದೇ ದೇಶದ ಸಿನಿಮಾಗಳಿಗೆ ಹೋಲಿಸಿದರೆ ವಿದೇಶಿ ಚಿತ್ರಗಳಿಗೆ ಈ ಮಟ್ಟದ ದರ ನಿಗದಿಪಡಿಸುತ್ತಿರುವುದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ದುಬಾರಿ ಬೆಲೆಯಿಂದಾಗಿ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು ಅಂದುಕೊಳ್ಳುವ ಅದೆಷ್ಟೋ ಪ್ರೇಕ್ಷಕರಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು? – Kannada News

ಐಷಾರಾಮಿ ಕಾರುಗಳು (Luxury cars) ಅಥವಾ ದೊಡ್ಡ ಬಂಗಲೆಗಳು ಒಬ್ಬರ ‘ಆರ್ಥಿಕ ಯಶಸ್ಸಿನ’ (Financial Success) ನಿಜವಾದ ಅಳತೆಗೋಲಾಗಲು ಸಾಧ್ಯವೇ ಇಲ್ಲ. ಆರ್ಥಿಕ ಸ್ವಾತಂತ್ರ್ಯದ ಬುಡ ಇಲ್ಲದ ಐಷಾರಾಮ್ಯತೆಯು ಅಡಿಪಾಯ ಇಲ್ಲದ ಕಟ್ಟಡಗಳಂತೆ ಯಾವಾಗ ಬೇಕಾದರೂ ಕುಸಿಯಬಹುದು. ಇತ್ತೀಚಿನ ದಿನಗಳಲ್ಲಿ ಇವೆಲ್ಲವೂ ಕೇವಲ ಸಾಲದ (EMI) ಮೇಲೆ ನಿಂತಿರುವ ‘ದೃಶ್ಯ ವೈಭವ’ ಅಷ್ಟೇ ಆಗಿರಬಹುದು. ಹಾಗಾದರೆ, ಒಬ್ಬ ವ್ಯಕ್ತಿ ನಿಜವಾಗಿಯೂ ಆರ್ಥಿಕವಾಗಿ ಯಶಸ್ವಿಯಾಗಿದ್ದಾನೆ ಅನ್ನಲು ಇರುವ ನೈಜ ಸಂಕೇತಗಳು ಯಾವುವು? ಆರ್ಥಿಕ ತಜ್ಞರ ಪ್ರಕಾರ, ಬ್ಯಾಂಕ್ ಬ್ಯಾಲೆನ್ಸ್ ದೊಡ್ಡದಾಗಿರುವುದಕ್ಕಿಂತ ನಮ್ಮ ಆರ್ಥಿಕ ಅಭ್ಯಾಸಗಳು ಎಷ್ಟು ಗಟ್ಟಿಯಾಗಿವೆ ಎಂಬುದು ಮುಖ್ಯ. ನಿಜವಾದ ಆರ್ಥಿಕ ಯಶಸ್ಸನ್ನು ಈ ಕೆಳಗಿನ ಅಂಶಗಳ ಮೂಲಕ ಅಳೆಯಬಹುದು:

ಸಾಲ ಮುಕ್ತ ಜೀವನ

ಯಾರಿಗೆ ಯಾವುದೇ ರೀತಿಯ ಕೆಟ್ಟ ಸಾಲಗಳು (Bad debt) (ಉದಾಹರಣೆಗೆ: ಕ್ರೆಡಿಟ್ ಕಾರ್ಡ್ ಬಾಕಿ, ದುಬಾರಿ ಬಡ್ಡಿಯ ವೈಯಕ್ತಿಕ ಸಾಲ ಅಥವಾ ಐಷಾರಾಮಿ ವಸ್ತುಗಳ ಮೇಲಿನ EMI) ಇರುವುದಿಲ್ಲವೋ, ಅವರೇ ನಿಜವಾದ ಆರ್ಥಿಕ ಯಶಸ್ಸಿನ ಮೊದಲ ಮೆಟ್ಟಿಲನ್ನು ತಲುಪಿದವರು. ಗಳಿಸುವ ಹಣದಲ್ಲಿ ದೊಡ್ಡ ಭಾಗ ಸಾಲದ ಕಂತು ಕಟ್ಟಲು ಹೋಗದೆ, ನಿಮ್ಮ ಕೈಯಲ್ಲೇ ಉಳಿಯುತ್ತಿದ್ದರೆ ನೀವು ಆರ್ಥಿಕವಾಗಿ ಯಶಸ್ವಿ ಎಂದರ್ಥ.

ತುರ್ತು ನಿಧಿಯ ಸುರಕ್ಷತೆ

ಜೀವನದಲ್ಲಿ ಅನಿರೀಕ್ಷಿತವಾಗಿ ಉದ್ಯೋಗ ನಷ್ಟ, ಅನಾರೋಗ್ಯ ಅಥವಾ ಯಾವುದೇ ಬಿಕ್ಕಟ್ಟು ಎದುರಾದರೂ ಕನಿಷ್ಠ 6 ರಿಂದ 12 ತಿಂಗಳುಗಳ ಕಾಲ ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಜೀವನ ನಡೆಸಲು ಬೇಕಾಗುವಷ್ಟು ಹಣವನ್ನು ಎತ್ತಿಟ್ಟಿರುವ ವ್ಯಕ್ತಿ ನಿಜವಾದ ಆರ್ಥಿಕ ನೆಮ್ಮದಿ ಹೊಂದಿರುತ್ತಾನೆ. ಈ ಸುರಕ್ಷತಾ ಭಾವವೇ ಯಶಸ್ಸಿನ ಸಂಕೇತ.

ಇದನ್ನೂ ಓದಿ: ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ

ಸ್ಥಿರ ಆದಾಯದ ಮೂಲಗಳು (Passive Income)

ನೀವು ಪ್ರತಿದಿನ ಕೆಲಸ ಮಾಡದಿದ್ದರೂ ನಿಮ್ಮ ಹಣ ನಿಮಗಾಗಿ ಕೆಲಸ ಮಾಡಬೇಕು. ರಿಯಲ್ ಎಸ್ಟೇಟ್‌ನಿಂದ ಬರುವ ಬಾಡಿಗೆ, ಷೇರು ಮಾರುಕಟ್ಟೆಯ ಡಿವಿಡೆಂಡ್, ಮ್ಯೂಚುವಲ್ ಫಂಡ್ ಅಥವಾ ಸ್ಥಿರ ಠೇವಣಿಗಳಿಂದ (FD) ಬರುವ ಬಡ್ಡಿ ನಿಮ್ಮ ತಿಂಗಳ ಕನಿಷ್ಠ ಖರ್ಚುಗಳನ್ನು ನಿಭಾಯಿಸುವಷ್ಟಿದ್ದರೆ, ನೀವು ಆರ್ಥಿಕ ಸ್ವಾತಂತ್ರ್ಯವನ್ನು (Financial Freedom) ಪಡೆದಿದ್ದೀರಿ ಎಂದರ್ಥ.

ಆಯ್ಕೆಗಳ ಸ್ವಾತಂತ್ರ್ಯ

ನಿಜವಾದ ಶ್ರೀಮಂತಿಕೆ ಎಂದರೆ ದುಬಾರಿ ಕಾರು ಖರೀದಿಸುವುದಲ್ಲ, ಬದಲಿಗೆ “ನಿಮಗೆ ಇಷ್ಟ ಬಂದಾಗ, ಇಷ್ಟ ಬಂದ ಕೆಲಸವನ್ನು, ಇಷ್ಟ ಬಂದವರ ಜೊತೆ ಮಾಡುವ ಸ್ವಾತಂತ್ರ್ಯ” ಹೊಂದಿರುವುದು. ಕೇವಲ ಹಣಕ್ಕಾಗಿ ಮಾತ್ರವೇ ಇಷ್ಟವಿಲ್ಲದ ಕೆಲಸದಲ್ಲಿ ಸಿಲುಕಿಕೊಳ್ಳದೆ, ನಿಮ್ಮ ಪ್ಯಾಶನ್ ಅಥವಾ ಆಸಕ್ತಿಯನ್ನು ಹಿಂಬಾಲಿಸುವ ಧೈರ್ಯ ನಿಮಗೆ ಹಣ ನೀಡಿದರೆ ಅದೇ ನಿಜವಾದ ಆರ್ಥಿಕ ಯಶಸ್ಸು.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್

ಭವಿಷ್ಯದ ಸುರಕ್ಷತೆ ಮತ್ತು ವಿಮೆ

ನಿಮ್ಮ ನಿವೃತ್ತಿ ಜೀವನಕ್ಕೆ (Retirement) ಬೇಕಾದ ನಿಧಿ ಸಿದ್ಧವಿರುವುದು, ಕುಟುಂಬಕ್ಕೆ ಸೂಕ್ತವಾದ ಜೀವವಿಮೆ (Term Insurance) ಮತ್ತು ಆರೋಗ್ಯ ವಿಮೆ (Health Insurance) ಇರುವುದು ಆರ್ಥಿಕ ಯಶಸ್ಸಿನ ಪ್ರಮುಖ ಲಕ್ಷಣ. ನಾಳೆ ಏನಾದರೂ ಅನಾಹುತ ಸಂಭವಿಸಿದರೂ ಕುಟುಂಬವು ಆರ್ಥಿಕವಾಗಿ ಬೀದಿಗೆ ಬೀಳುವುದಿಲ್ಲ ಎಂಬ ಭರವಸೆ ಇರುವುದೇ ನಿಜವಾದ ಯಶಸ್ಸು.

ಸಮಾಜಕ್ಕೆ ತೋರಿಸಿಕೊಳ್ಳಲು ಮಾಡುವ ಖರ್ಚು ನಿಮ್ಮನ್ನು ಒಳಗಿನಿಂದ ಟೊಳ್ಳು ಮಾಡುತ್ತದೆ. ಕಾರು, ಬಂಗಲೆಗಳು ಕೇವಲ ‘ಶ್ರೀಮಂತವಾಗಿ ಕಾಣುವ’ (Looking Rich) ಸಾಧನಗಳಷ್ಟೇ. ಆದರೆ ಸಾಲವಿಲ್ಲದ ನೆಮ್ಮದಿ, ಹೂಡಿಕೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ನಿಮ್ಮನ್ನು ‘ನಿಜವಾಗಿಯೂ ಶ್ರೀಮಂತವಾಗಿ’ (Being Rich) ಇಡುತ್ತವೆ. ನಿಮ್ಮ ಹಣದ ಮೇಲಿನ ನಿಯಂತ್ರಣ ನಿಮ್ಮ ಕೈಯಲ್ಲಿದ್ದರೆ, ನೀವು ಯಶಸ್ವಿಗಳೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಗೆದ್ದು ದಿಗ್ಗಜರ ಪಟ್ಟಿಗೆ ಸೇರಿದ ಮಾನವ್ – Kannada News

ಆತಿಥೇಯ ಟೀಂ ಇಂಡಿಯಾ, ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಮೂರು ದಿನಗಳಲ್ಲಿ ಗೆದ್ದುಕೊಂಡಿತು. ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆಯನ್ನು ನಿರ್ಮಿಸಿತು. ತಂಡದ ಈ ಐತಿಹಾಸಿಕ ಗೆಲುವಿನ ಪ್ರಮುಖ ಪಾತ್ರವಹಿಸಿದ್ದು, ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮಾನವ್ ಸುತಾರ್ (Manav Suthar). ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಸುತಾರ್, ಎರಡು ಇನ್ನಿಂಗ್ಸ್​ಗಳನ್ನು ಸೇರಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದರು. ಈ ಪ್ರದರ್ಶನಕ್ಕಾಗಿ ಸುತಾರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ರೋಹಿತ್ ಶರ್ಮಾ ಕ್ಲಬ್ ಸೇರಿದ ಮಾನವ್

ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಸುತಾರ್, ರೋಹಿತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರ ಕ್ಲಬ್‌ಗೆ ಸೇರಿದ್ದಾರೆ. ಸುತಾರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಒಂಬತ್ತನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುತಾರ್ ಮತ್ತು ರೋಹಿತ್ ಅವರಲ್ಲದೆ, ಪ್ರವೀಣ್ ಅಮ್ರೆ, ಆರ್‌ಪಿ ಸಿಂಗ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಸಾಧನೆಯ ಜೊತೆಗೆ ಚೊಚ್ಚಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಪಡೆದ ಹತ್ತನೇ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯರು

  • 1992 – ಪ್ರವೀಣ್ ಅಮ್ರೆ
  • 2006 – ಆರ್.ಪಿ. ಸಿಂಗ್
  • 2011 – ರವಿಚಂದ್ರನ್ ಅಶ್ವಿನ್
  • 2013 – ಶಿಖರ್ ಧವನ್
  • 2013 – ರೋಹಿತ್ ಶರ್ಮಾ
  • 2018 – ಪೃಥ್ವಿ ಶಾ
  • 2021 – ಶ್ರೇಯಸ್ ಅಯ್ಯರ್
  • 2023 – ಯಶಸ್ವಿ ಜೈಸ್ವಾಲ್
  • 2026 – ಮಾನವ್ ಸುತಾರ್

IND vs AFG: W,W,W.. 25 ವರ್ಷಗಳ ವಿಕೆಟ್ ಬರ ನೀಗಿಸಿದ ಮಾನವ್ ಸುತಾರ್

ಪಂದ್ಯಶ್ರೇಷ್ಠ ಗೆದ್ದ ನಂತರ ಮಾನವ್ ಹೇಳಿದ್ದೇನು?

ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಸುತಾರ್, ‘ಭಾರತದ ಕ್ಯಾಪ್ ಪಡೆಯುವುದು ಬಹಳ ವಿಶೇಷವಾದ ಭಾವನೆ. ಭಾರತಕ್ಕಾಗಿ ಆಡುವುದು ಮತ್ತು ಟೆಸ್ಟ್ ಕ್ರಿಕೆಟ್ ಆಡುವುದು ಆರಂಭದಿಂದಲೂ ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ನಾನು ಬ್ಯಾಟಿಂಗ್ ಮಾಡಲು ಹೋದಾಗ ಒಂದೆರಡು ಎಸೆತಗಳ ನಂತರ ಪಿಚ್ ಯಾವ ರೀತಿ ವರ್ತಿಸುತ್ತಿದೆ ಎಂಬುದು ತಿಳಿಯಿತು. ಅಲ್ಲದೆ ಬ್ಯಾಟಿಂಗ್ ಮಾಡುವಾಗಲೇ, ಈ ವಿಕೆಟ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ ಎಂದು ನಾನು ಅರಿತುಕೊಂಡೆ. ನಂತರ, ನಾನು ಬೌಲಿಂಗ್ ಮಾಡಲು ಆರಂಭಿಸಿದ ಮೊದಲ ಓವರ್​ನಲ್ಲೇ ಅದು ಸಾಭೀತಾಯಿತು. ಬೌಲಿಂಗ್ ಮಾಡುವಾಗ ನನ್ನ ಗಮನವು ಸರಿಯಾದ ಲೈನ್, ಲೆಂತ್ ಮೇಲೆ ಇತ್ತು. ಈ ಟೆಸ್ಟ್‌ನಿಂದ ನಾನು ಕಲಿತ ಪಾಠವೆಂದರೆ ಸಾಧ್ಯವಾದಷ್ಟು ಸ್ಥಿರವಾಗಿ ಬೌಲಿಂಗ್ ಮಾಡುವುದು, ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳ್ಮೆ ಅತ್ಯಗತ್ಯ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Mon, 8 June 26

Source link

ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ – Kannada News

ಟೆಹ್ರಾನ್, ಜೂನ್ 8: ಇಸ್ರೇಲ್ ಮತ್ತು ಇರಾನ್ ನಡುವೆ ಇತ್ತೀಚೆಗೆ ನಡೆದ ಕ್ಷಿಪಣಿ ದಾಳಿಗಳ ಬಳಿಕ, ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬೈರೂತ್ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಕಾರವಾಗಿ ಇರಾನ್ (Iran) ಇತ್ತೀಚೆಗೆ ಇಸ್ರೇಲ್ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಇರಾನ್‌ನ ಮಿಲಿಟರಿ ಜಂಟಿ ಕಮಾಂಡ್, ಇಸ್ರೇಲ್ ವಿರುದ್ಧದ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಆದರೆ, “ಒಂದು ವೇಳೆ ಇಸ್ರೇಲ್ ಮತ್ತೆ ನಮ್ಮ ವಿರುದ್ಧ ಯಾವುದೇ ರೀತಿಯ ಆಕ್ರಮಣಶೀಲತೆ ತೋರಿದರೆ, ನಮ್ಮ ಮುಂದಿನ ಪ್ರತಿಕ್ರಿಯೆ ಮತ್ತಷ್ಟು ತೀವ್ರವಾಗಿರುತ್ತದೆ” ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಿಕ್ಕಟ್ಟನ್ನು ಶಾಂತಗೊಳಿಸಲು ಸಕ್ರಿಯವಾಗಿ ಮಧ್ಯಪ್ರವೇಶಿಸಿದ್ದಾರೆ. ಇರಾನ್‌ನ ಕ್ಷಿಪಣಿ ದಾಳಿಗೆ ತಕ್ಷಣವೇ ಪ್ರತಿಕಾರ ತೀರಿಸಿಕೊಳ್ಳದಂತೆ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಫೋನ್ ಕರೆ ಮಾಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವ ಶಾಂತಿಗೆ ಬಿಗ್ ಬೂಸ್ಟ್: ಇಸ್ರೇಲ್-ಲೆಬನಾನ್ ಕದನ ವಿರಾಮಕ್ಕೆ ಒಪ್ಪಿಗೆ, ಇರಾನ್ ಮಾತುಕತೆಗೂ ಮುಕ್ತವಾದ ಹಾದಿ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡಲು ತುಂಬಾ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಈ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವವರೆಗೆ ಇರಾನ್ ಮೇಲಿನ ಮತ್ತು ‘ಸ್ಟ್ರೈಟ್ ಆಫ್ ಹಾರ್ಮುಜ್’ ಮಾರ್ಗದ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕದನ ವಿರಾಮಕ್ಕೆ ಉಭಯ ದೇಶಗಳು ಒಲವು ತೋರಿದ್ದರೂ, ಇರಾನ್‌ನ ನೈಋತ್ಯ ಭಾಗದಲ್ಲಿರುವ ‘ಮಹಶಹರ್’ (Mahshahr) ಪೆಟ್ರೋಕೆಮಿಕಲ್ ಸ್ಥಾವರ ಮತ್ತು ಇತರ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಇತ್ತೀಚೆಗೆ ಬಾಂಬ್ ದಾಳಿ ನಡೆಸಿತ್ತು. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಇರಾನ್ ಈ ಇಂಧನ ಘಟಕವನ್ನು ಬಳಸುತ್ತಿತ್ತು ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್‌ನ ಈ ದಾಳಿಗೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್‌ನ ‘ಹೈಫಾ’ (Haifa) ನಗರದಲ್ಲಿರುವ ಇಂಧನ ಘಟಕವನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು.

ಇದನ್ನೂ ಓದಿ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಬೆನ್ನಲ್ಲೇ ಶಾಂತಿ ಮಾತುಕತೆಗೆ ಮುಂದಾದ ಟ್ರಂಪ್

ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ‘ತಕ್ಷಣದ ಕದನ ವಿರಾಮ’ಕ್ಕೆ ಎದುರು ನೋಡುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಕುರಿತು ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಶಾಂತಿಯ ಕೊನೆಯ ಹಂತದ ಮಾತುಕತೆಗಳು ಪ್ರಗತಿಯಲ್ಲಿವೆ. ಈ ವಿಷಯದಲ್ಲಿ ಯಾವುದೇ ಮೂರ್ಖತನ ಅಡ್ಡಿಯಾಗದಿದ್ದರೆ ಸಾಕು. ಅಂತಿಮ ಒಪ್ಪಂದಕ್ಕೆ ಬರುವವರೆಗೆ ಇರಾನ್ ಮೇಲಿನ ದಿಗ್ಬಂಧನ ಸಂಪೂರ್ಣವಾಗಿ ಜಾರಿಯಲ್ಲಿರುತ್ತದೆ. ಪ್ರಕ್ರಿಯೆಗಳು ವೇಗವಾಗಿ ನಡೆಯಬೇಕು” ಎಂದಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿಯಿಂದ ಇರಾನ್ ತನ್ನ ದೇಶದ ಮೇಲೆ ಸುಮಾರು 30 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು – Kannada News

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಇಂಟರ್‌ನೆಟ್‌ (internet) ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ. ಈ ಜಗತ್ತಿನಲ್ಲಿರುವ ಬಹುತೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಫುಡ್‌  ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಹಣ ವರ್ಗಾವಣೆ ಮಾಡುವುದು, ಶಾಪಿಂಗ್‌ ಮಾಡುವುದು ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿರುವ  ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮಾತನಾಡುವುದು ಈ ಎಲ್ಲವೂ ಇಂಟರ್‌ನೆಟ್‌ ಮೂಲಕವೇ ನಡೆಯುತ್ತಿವೆ. ಮುಖ್ಯವಾಗಿ ಉದ್ಯೋಗ ಸ್ಥಳದಲ್ಲೂ ಇಂಟರ್‌ನೆಟ್‌ ಬೇಕೇ ಬೇಕು. ಒಟ್ಟಿನಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಹೀಗಿರುವಾಗ ಇಲ್ಲೊಂದು ದೇಶದಲ್ಲಿ ಮಾತ್ರ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ ಇಲ್ವೇ  ಇಲ್ಲ. ಆ ದೇಶ ಯಾವುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇಂಟರ್ನೆಟ್‌ ವ್ಯವಸ್ಥೆ ಇಲ್ಲದ ದೇಶ ಯಾವುದು ಗೊತ್ತಾ?

ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವೆಂದರೆ ಅದು ಎರಿಟ್ರಿಯಾ. ಈ ದೇಶವು ವಿಶ್ವದಲ್ಲೇ ಅತ್ಯಂತ ಕಡಿಮೆ ಸಂಪರ್ಕ ಹೊಂದಿರುವ ದೇಶವೆಂದು ಪರಿಗಣಿಸಲಾಗಿದೆ. ಪೂರ್ವ ಆಫ್ರಿಕಾದ ಕೆಂಪು ಸಮುದ್ರದ ಬಳಿಯಿರುವ ಈ ದೇಶದಲ್ಲಿ ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲ. ಇಲ್ಲಿ ಇಂಟರ್ನೆಟ್ ಪ್ರವೇಶವು ತುಂಬಾ ಸೀಮಿತವಾಗಿದೆ ಮತ್ತು ಜನಸಂಖ್ಯೆಯ ಒಂದು ಸಣ್ಣ ಭಾಗ ಮಾತ್ರ ಇಂಟರ್‌ನೆಟ್‌ ಬಳಸಲು ಸಾಧ್ಯವಾಗುತ್ತಿದೆ. ಇಲ್ಲಿನ ಸರ್ಕಾರ ಇಂಟರ್ನೆಟ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಇಂಟರ್ನೆಟ್ ಸೇವೆಗಳು ಪ್ರಾಥಮಿಕವಾಗಿ ಸರ್ಕಾರಿ ನೆಟ್‌ವರ್ಕ್‌ಗಳ ಮೂಲಕ ಮಾತ್ರ ಲಭ್ಯವಿದೆ, ಆದರೆ ಖಾಸಗಿ ಇಂಟರ್ನೆಟ್ ಸೇವೆಗಳು ಅಸ್ತಿತ್ವದಲ್ಲಿಲ್ಲ.

ನಾವೆಲ್ಲರೂ 4G ಮತ್ತು 5G ಯುಗದಲ್ಲಿದ್ದರೆ, 18 ನೇ ಶತಮಾನದಿಂದ ಯಾವುದೇ ಅಭಿವೃದ್ಧಿಯನ್ನು ಅನುಭವಿಸಿಲ್ಲ. ಈ ದೇಶದಲ್ಲಿ, ಸರ್ಕಾರವು ಜನರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಪ್ರಸ್ತುತ, ಸಂಪೂರ್ಣ ದೂರಸಂಪರ್ಕ ಜಾಲವು ಸರ್ಕಾರದ ಕೈಯಲ್ಲಿದೆ. ಪರಿಣಾಮವಾಗಿ, ಖಾಸಗಿ ಕಂಪನಿಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿ ಮೊಬೈಲ್ ಡೇಟಾ ಲಭ್ಯವಿಲ್ಲ. ಇಲ್ಲಿನ ಪ್ರಮುಖ ನಗರಗಳಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಇಂಟರ್ನೆಟ್ ಕೆಫೆಗಳಿವೆ. ಇಂಟರ್ನೆಟ್ ಕೆಫೆಗಳು ಅಸ್ತಿತ್ವದಲ್ಲಿದ್ದರೂ, ಅಲ್ಲಿ ಕಟ್ಟುನಿಟ್ಟಿನ ನಿಯಮಗಳು ಅನ್ವಯಿಸುತ್ತವೆ. ಅಲ್ಲದೆ ಇಂಟರ್ನೆಟ್ ವೇಗ ತುಂಬಾ ನಿಧಾನವಾಗಿದ್ದು, ನೆಟ್‌ವರ್ಕ್‌ 2G ಗಿಂತಲೂ ಸ್ಲೋ ಆಗಿದೆ. ಮತ್ತು ವೆಚ್ಚವು ಹೆಚ್ಚು. ಇದರಿಂದಾಗಿ ಇಂಟರ್ನೆಟ್ ಪ್ರವೇಶ ಹೊಂದಿರುವವರು ಸಹ ಅದನ್ನು ವ್ಯಾಪಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಈ ದೇಶದ ಜನಸಂಖ್ಯೆಯ ಕೇವಲ 1 ಪ್ರತಿಶತದಷ್ಟು ಜನರು ಮಾತ್ರ ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದಾರೆ.

ಎರಿಟ್ರಿಯಾದಲ್ಲಿ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ ಏಕಿಲ್ಲ?

ಎರಿಟ್ರಿಯಾದಲ್ಲಿದ ಇಂಟರ್ನೆಟ್ ಕೊರತೆಗೆ ಇಲ್ಲಿನ ಸರ್ವಾಧಿಕಾರ, ರಾಜಕೀಯ ವ್ಯವಸ್ಥೆ  ಮತ್ತು ಆರ್ಥಿಕ ಪರಿಸ್ಥಿತಿ ಮುಖ್ಯ ಕಾರಣ. ಒಟ್ಟಾರೆಯಾಗಿ ಇಂಟರ್ನೆಟ್ ಪ್ರವೇಶದ ಕೊರತೆಯು ಇಲ್ಲಿ ಶಿಕ್ಷಣ, ವ್ಯವಹಾರ ಮತ್ತು ಸಂವಹನದ ಮೇಲೆ  ಸಾಕಷ್ಟು ಪರಿಣಾಮ ಬೀರಿವೆ. ದೇಶಿಯ ವ್ಯವಹಾರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುತ್ತಿವೆ. ಇದಲ್ಲದೆ, ಯುವಜನರು ತಮ್ಮ ಪ್ರತಿಭೆಯನ್ನು ಜಾಗತಿಕವಾಗಿ ಪ್ರದರ್ಶಿಸಲು ಅವಕಾಶಗಳ ಕೊರತೆಯಿದೆ. ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳ ಲಭ್ಯತೆಯ ಕೊರತೆಯಿಂದಾಗಿ, ಅವರು ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುತ್ತದೆ. ಜಗತ್ತು ವೇಗವಾಗಿ ಡಿಜಿಟಲ್‌ಮಯವಾಗುತ್ತಿದ್ದರೆ, ಎರಿಟ್ರಿಯಾ ಮಾತ್ರ ಇನ್ನೂ ಬಹಳ ಹಿಂದುಳಿದಿದೆ. ಇದಕ್ಕೆ ಇಲ್ಲಿನ ಸರ್ವಾಧಿಕಾರವೇ ಮುಖ್ಯ ಕಾರಣವೆನ್ನಬಹುದು.

ಇದನ್ನೂ ಓದಿ: ಭಯಗೊಂಡಾಗ ಕೈ ಕಾಲುಗಳು ನಡುಗುವುದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ಎರಿಟ್ರಿಯಾವನ್ನು ಆಫ್ರಿಕಾದ ಉತ್ತರ ಕೊರಿಯಾ ಎಂದೂ ಕರೆಯಲಾಗುತ್ತದೆ:

ಈ ದೇಶವನ್ನು ಆಫ್ರಿಕಾದ ಉತ್ತರ ಕೊರಿಯಾ ಎಂದೂ ಕರೆಯುತ್ತಾರೆ. ಈ ದೇಶಕ್ಕೆ ಯಾವುದೇ ಅಧಿಕೃತ ಭಾಷೆ ಇಲ್ಲ. ಎರಿಟ್ರಿಯನ್ನರು ಗ್ರೀಕ್, ಅರೇಬಿಕ್ ಮತ್ತು ಇಂಗ್ಲಿಷ್ ಜೊತೆಗೆ ಕುಶಿಟಿಕ್ ಮತ್ತು ಆಪ್ರೋ-ಏಷ್ಯಾಟಿಕ್ ಭಾಷೆಗಳನ್ನು ಮಾತನಾಡುತ್ತಾರೆ. ಅಲ್ಲದೆ ಎರಿಟ್ರಿಯಾ ಇನ್ನೂ ಸರ್ವಾಧಿಕಾರದ ಆಳ್ವಿಕೆಯಲ್ಲಿದೆ. ಸ್ವಾತಂತ್ರ್ಯದ ನಂತರ ಎಂದಿಗೂ ಚುನಾವಣೆಗಳು ನಡೆದಿಲ್ಲ. ಈ ದೇಶದ ನಾಗರಿಕರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಈ ದೇಶದಲ್ಲಿ ಯಾವುದೇ ಎಟಿಎಂಗಳಿಲ್ಲ.  ಅಲ್ಲದೆ ಎರಿಟ್ರಿಯಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿವೆ. ಇಲ್ಲಿ ಯಾವುದೇ ಖಾಸಗಿ ಚಾನೆಲ್‌ಗಳಿಲ್ಲ ಮತ್ತು ಸ್ವತಂತ್ರ ಪತ್ರಕರ್ತರೂ ಇಲ್ಲ. ಒಂದೇ ಒಂದು ದೂರದರ್ಶನ ಚಾನೆಲ್ ಇದೆ ಮತ್ತು ಇದರಲ್ಲಿ ಯಾವುದೇ ವಿದೇಶಿ ಚಾನೆಲ್‌ಗಳು ಪ್ರಸಾರವಾಗುವುದಿಲ್ಲ. ಇಲ್ಲಿನ ನಿವಾಸಿಗಳು ಸರ್ಕಾರದ ಅನುಮತಿಯಿಲ್ಲದೆ ದೇಶವನ್ನು ಬಿಡುವಂತಿಲ್ಲ. ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುವ ಯಾರನ್ನಾದರೂ ಕಂಡ ತಕ್ಷಣವೇ ಗುಂಡು ಹಾರಿಸಲಾಗುತ್ತದೆ. ಇದಲ್ಲದೆ ಎರಿಟ್ರಿಯಾವು ಬಹಳ ಕಟ್ಟುನಿಟ್ಟಾದ ಪ್ರವಾಸಿ ನಿರ್ಬಂಧಗಳನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆ ಭೇಟಿ ನೀಡುವ ದೇಶಗಳಲ್ಲಿ ಒಂದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣ ಅಮೆರಿಕಕ್ಕೆ ಅದಾನಿ ಲಗ್ಗೆ; ಅರ್ಜೆಂಟೀನಾದಲ್ಲಿ 10 ವರ್ಷದ ಗುತ್ತಿಗೆ ಪಡೆದ ಅದಾನಿ ಪೋರ್ಟ್ಸ್ – Kannada News

ನವದೆಹಲಿ, ಜೂನ್ 8: ಭಾರತದ ಅತಿದೊಡ್ಡ ಖಾಸಗಿ ಸಮಗ್ರ ಸಾರಿಗೆ ನಿರ್ವಹಣೆ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ (APSEZ), ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ದಕ್ಷಿಣ ಅಮೆರಿಕಾದ ಮಾರುಕಟ್ಟೆಗೆ ಮೊದಲ ಪ್ರವೇಶ ಪಡೆದಿದೆ. ಅದಾನಿ ಪೋರ್ಟ್ಸ್ ಸಂಸ್ಥೆಯು ಅರ್ಜೆಂಟೀನಾದಲ್ಲಿ 10 ವರ್ಷಗಳ ಸುದೀರ್ಘ ಅವಧಿಯ ಎಲ್‌ಎನ್‌ಜಿ (LNG – ದ್ರವೀಕೃತ ನೈಸರ್ಗಿಕ ಅನಿಲ) ಸಾಗಣೆ ಮತ್ತು ಮರೈನ್ ಸೇವೆಗಳ (Marine Services) ಗುತ್ತಿಗೆಯನ್ನು ಪಡೆದುಕೊಂಡಿದೆ.

ಈ ಒಪ್ಪಂದದೊಂದಿಗೆ ಅದಾನಿ ಪೋರ್ಟ್ಸ್ ದಕ್ಷಿಣ ಅಮೆರಿಕಾ ಖಂಡದಲ್ಲಿ (South America) ತನ್ನ ಮೊದಲ ವ್ಯವಹಾರವನ್ನು ಆರಂಭಿಸುತ್ತಿದೆ. ಇದು ಕಂಪನಿಯ ಜಾಗತಿಕ ವಿಸ್ತರಣಾ ಯೋಜನೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಅದಾನಿ ಪೋರ್ಟ್ಸ್​ನ ಅಂಗಸಂಸ್ಥೆಯಾದ ಅದಾನಿ ಹಾರ್ಬರ್ ಇಂಟರ್​ನ್ಯಾಷನಲ್ (ಎಫ್​ಝಡ್​ಸಿಒ) ಮತ್ತು ಅರ್ಜೆಂಟೀನಾದ ಮೆರಿಡಿಯನ್ ಗ್ರೂಪ್ ಜೊತೆಗೂಡಿ ರಚಿಸಲಾದ ಸಮೂಹಕ್ಕೆ ಈ ಗುತ್ತಿಗೆ ಸಿಕ್ಕಿದೆ.

ಅರ್ಜೆಂಟೀನಾದ ಬಂದರುಗಳಲ್ಲಿ ಎಲ್‌ಎನ್‌ಜಿ ಹಡಗುಗಳಿಗೆ ಅಗತ್ಯವಿರುವ ಕಡಲ ಸೇವೆಗಳನ್ನು (Marine Services) ಅದಾನಿ ಪೋರ್ಟ್ಸ್ ಒದಗಿಸಲಿದೆ. ಇದು 10 ವರ್ಷಗಳ ದೀರ್ಘಾವಧಿಯ ಒಪ್ಪಂದವಾಗಿದ್ದು, ಕಂಪನಿಗೆ ಸ್ಥಿರವಾದ ಆದಾಯವನ್ನು ತಂದುಕೊಡಲಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಅದಾನಿ ಪೋರ್ಟ್ಸ್ ಈಗಾಗಲೇ ಭಾರತದಲ್ಲಿ ಬಂದರು ನಿರ್ವಹಣೆ, ಟಗ್‌ಬೋಟ್‌ಗಳು ಮತ್ತು ಪೈಲಟೇಜ್ ಸೇವೆಗಳಲ್ಲಿ ಅಪಾರ ಅನುಭವ ಹೊಂದಿದೆ. ಇದೇ ನೈಪುಣ್ಯತೆಯನ್ನು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ವಯಿಸಲಾಗುತ್ತಿದೆ.

ಷೇರು ಮಾರುಕಟ್ಟೆಯ ಮೇಲೆ ಪ್ರಭಾವ

ಈ ಸುದ್ದಿಯ ಬೆನ್ನಲ್ಲೇ ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಹೂಡಿಕೆದಾರರಲ್ಲಿ ಸಂಸ್ಥೆಯ ಜಾಗತಿಕ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೆಚ್ಚಿದೆ.

ಇದನ್ನೂ ಓದಿ: ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಅದಾನಿ ಪೋರ್ಟ್ಸ್ ಕೇವಲ ಭಾರತಕ್ಕೆ ಸೀಮಿತವಾಗದೆ, ಶ್ರೀಲಂಕಾ, ಇಸ್ರೇಲ್ ಮತ್ತು ಇದೀಗ ಅರ್ಜೆಂಟೀನಾದಂತಹ ದೇಶಗಳಲ್ಲಿ ತನ್ನ ಜಾಲವನ್ನು ವಿಸ್ತರಿಸುತ್ತಿರುವುದು, ಜಾಗತಿಕ ಬಂದರು ನಿರ್ವಹಣಾ ಕ್ಷೇತ್ರದಲ್ಲಿ ಭಾರತದ ಕಂಪನಿಯೊಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಸೂಚಿಸುತ್ತದೆ. ಈ ಒಪ್ಪಂದವು ಕಂಪನಿಯು ಎಲ್‌ಎನ್‌ಜಿ ಮತ್ತು ಇಂಧನ ಸಾಗಣೆ ವಲಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಮುಂದಿನ 6 ದಿನ ಭಾರೀ ಮಳೆ ಎಚ್ಚರಿಕೆ,ಕರಾವಳಿಗೆ ರೆಡ್ ಅಲರ್ಟ್ – Kannada News

ಬೆಂಗಳೂರು (ಜೂ.08): ಕರ್ನಾಟಕದಲ್ಲಿ ಮುಂಗಾರು (Karnataka Monsoon Rain) ಅಬ್ಬರ ಜೋರಾಗಿದ್ದು, ಇಂದಿನಿಂದ ಅಂದರೆ ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ (Karavali) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೇ ಜೂನ್ 10 ಮತ್ತು 11 ರಂದು ಕೂಡ ಭಾರೀ ಮಳೆ ಮುಂದುವರಿಯಲಿದ್ದು, ಇಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ತಿಳಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಮುಂಗಾರು ಅಬ್ಬರ ಜೋರು
  • ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ
  • ಕರಾವಳಿ ದಕ್ಷಿನ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ
  • ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 8ರಿಂದ 11ರವರೆಗೆ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ 8ರಿಂದ 10ರವರೆಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 8ರಿಂದ ಜೂನ್ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನ ವಾಯು ಗುಣಮಟ್ಟ ಇಂದು ಉತ್ತಮ, ಉಡುಪಿಯ ಎಕ್ಯೂಐ ಎಲ್ಲದಕ್ಕಿಂತ ಬೆಸ್ಟ್!

ಉತ್ತರ ಮತ್ತು ದಕ್ಷಿಣ ಒಳನಾಡು

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇನ್ನುಳಿದಂತೆ ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಜೂನ್ 14 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.

ರೆಡ್ ಮತ್ತು ಆರೆಂಜ್ ಅಲರ್ಟ್​ ಎಲ್ಲೆಲ್ಲಿ-ಯಾವಾಗ?

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜೂನ್ 9 ರಂದು, ಒಂದು ಅಥವಾ ಎರಡು ಸ್ಥಳಗಳಲ್ಲಿ ಅತ್ಯಧಿಕ (204.5mm) ಸಾಧ್ಯತೆ ಇದೆ. ಇದರಿಂದ IMD ಯಿಂದ #ರೆಡ್‌ಅಲರ್ಟ್ ನೀಡಲಾಗಿದ್ದು, ಜನರು ಮುನ್ನೆಚ್ಚರಿಕೆ ವಹಿಸಲು ಕೋರಿದೆ.

ಇನ್ನು ಜೂನ್ 10 ಮತ್ತು 11 ರಂದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 8 ರಿಂದ 10 ರವರೆಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 8 ರಿಂದ 11 ರವರೆಗೆ, ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ (64.5mm -115.4mm) (115.5mm-204.4mm) ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.

ಬೆಂಗಳೂರು ಹವಾಮಾನ ವರದಿ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ. ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್ – Kannada News

ಭಾರತೀಯ ಚಿತ್ರರಂಗದಲ್ಲಿ ಸಮಾಜದ ಕಣ್ಣು ತೆರೆಸುವಂತಹ ಸಾಮಾಜಿಕ ಕಳಕಳಿಯ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಭ್ರಷ್ಟಾಚಾರ, ಬಡತನ, ಗ್ರಾಮೀಣ ಭಾಗದ ಸಮಸ್ಯೆಗಳು, ಲಿಂಗ ತಾರತಮ್ಯ, ಮಹಿಳಾ ಸಬಲೀಕರಣ ಮುಂತಾದ ವಿಷಯಗಳ ಕುರಿತು ಈಗಾಗಲೇ ಹಲವು ಭಾಷೆಗಳಲ್ಲಿ ನೂರಾರು ಸಿನಿಮಾಗಳು ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶವನ್ನು ತೀವ್ರವಾಗಿ ಕಾಡುತ್ತಿರುವ, ಸರ್ಕಾರಗಳು ಹಾಗೂ ಚಿತ್ರರಂಗವೂ ಅಷ್ಟಾಗಿ ಗಮನಹರಿಸದ ಆಹಾರ ಕಲಬೆರಕೆ ಕುರಿತು ಈಗೊಂದು ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ‘ದಿ ಇಂಡಿಯಾ ಸ್ಟೋರಿ’ (The India Story) ಎಂದು ಶೀರ್ಷಿಕೆ ಇಡಲಾಗಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮತ್ತು ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಆಹಾರ ಕಲಬೆರಕೆ ದಂಧೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬೆಳ್ಳಿತೆರೆಯ ಮೇಲೆ ಬಿಚ್ಚಿಡಲು ಈ ಸಾಮಾಜಿಕ ಕಳಕಳಿಯ ಸಿನಿಮಾ ಸಜ್ಜಾಗಿದೆ. ಸದ್ಯ ಈ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ದೇಶದ ಆಹಾರ ಸುರಕ್ಷತೆಯ ಆತಂಕಕಾರಿ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ ಈ ಟೀಸರ್.

‘ದಿ ಇಂಡಿಯಾ ಸ್ಟೋರಿ’ ಚಿತ್ರದ ಟೀಸರ್:

ಆಘಾತಕಾರಿ ಅಂಕಿಅಂಶಗಳನ್ನು ಈ ಟೀಸರ್ ತೆರೆದಿಟ್ಟಿದೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ಜ್ವಲಂತ ಸಮಸ್ಯೆಯ ಸುತ್ತ ಈ ಸಿನಿಮಾದ ಕಥೆ ಇರಲಿದೆ. ನಾವು ಪ್ರತಿದಿನ ಸೇವಿಸುವ ಆಹಾರದ ಹಿಂದಿರುವ ಕರಾಳ ಸತ್ಯಗಳು, ಕಾರ್ಪೊರೇಟ್ ಭ್ರಷ್ಟಾಚಾರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಅಪಾಯಗಳನ್ನು ಈ ಸಿನಿಮಾ ಚರ್ಚಿಸಲಿದೆ.

‘ದಿ ಇಂಡಿಯಾ ಸ್ಟೋರಿ’ ಚಿತ್ರವು ಜನರಿಗೆ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಮಹತ್ವದ ಸಂದೇಶವನ್ನು ನೀಡಲು ಹೊರಟಿದೆ ಎಂಬುದು ಟೀಸರ್ ನೋಡಿದರೆ ತಿಳಿಯುತ್ತದೆ. ಚೇತನ್ ಡಿ.ಕೆ. ನಿರ್ದೇಶನದ ಈ ಚಿತ್ರವನ್ನು ಸಾಗರ್ ಬಿ. ಶಿಂದೆ ನಿರ್ಮಿಸಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ ಜುಲೈ 24ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸ್ಟಾರ್ ಹೀರೋ ನೀಡಿದ ಆ ಒಂದು ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ ಕಾಜಲ್ ಅಗರ್ವಾಲ್

ಆಹಾರದಲ್ಲಿ ಬಳಸಲಾಗುವ ರಾಸಾಯನಿಕ ಇಂಜೆಕ್ಷನ್‌ಗಳು, ಕೀಟನಾಶಕಗಳ ಅತಿಯಾದ ಬಳಕೆ ಮತ್ತು ವ್ಯವಸ್ಥೆಯ ನಿರ್ಲಕ್ಷ್ಯವನ್ನು ಚಿತ್ರತಂಡ ಯಾವುದೇ ಮುಲಾಜಿಲ್ಲದೆ ನೇರವಾಗಿ ತೋರಿಸಿದೆ ಎನ್ನಲಾಗಿದೆ. ಒಂದು ವೇಳೆ ಸಿನಿಮಾದಲ್ಲಿ ಯಾವುದೇ ಕಟ್ಟುಕಥೆಗಳಿಲ್ಲದೆ ನೈಜವಾದ ಗ್ರೌಂಡ್ ರಿಯಾಲಿಟಿಯನ್ನು ತೋರಿಸಿದರೆ, ಇದು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ – Kannada News

ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿ Image Credit source: Tv9 kannada

ದಾವಣಗೆರೆ, ಜೂ.8: ಜಿಲ್ಲೆಯ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಬದುಕು ಸಿಗುವ ‘ವಿದೇಶ ಭಾಗ್ಯ’ ಒದಗಿಬಂದಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ಅಮೆರಿಕಾ, ಇಂಗ್ಲೆಂಡ್ ಹಾಗೂ ಇಟಲಿ ಸೇರಿದಂತೆ ವಿವಿಧ ಪ್ರಮುಖ ದೇಶಗಳ ದಂಪತಿಗಳ ಮಡಿಲು ಸೇರಲು ಸಜ್ಜಾಗಿದ್ದಾರೆ. ಇದರ ಭಾಗವಾಗಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕೃತ ಪ್ರಕ್ರಿಯೆಯಲ್ಲಿ ಒಂದು ವರ್ಷದ ಅನಾಥ ಗಂಡು ಮಗುವನ್ನು ಇಟಲಿಯ ದಂಪತಿಗಳು ಕಾನೂನುಬದ್ಧವಾಗಿ ದತ್ತು (Adoption) ಪಡೆದುಕೊಂಡಿದ್ದಾರೆ.

ಇಟಲಿ ದೇಶದ ವೈರಿ ಹಾಗೂ ಪ್ರಿಯಾ ದಂಪತಿಗಳು ಈ ಮಗುವನ್ನು ದತ್ತು ಪಡೆದ ಅದೃಷ್ಟವಂತರಾಗಿದ್ದಾರೆ. ಪ್ರಿಯಾ ಅವರು ಮೂಲತಃ ಚೆನ್ನೈ ಮೂಲದವರಾಗಿದ್ದರೂ, ಇಟಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ದಂಪತಿಗಳು ಮಗುವಿಗಾಗಿ ಕಳೆದ ಮೂರು ವರ್ಷಗಳಿಂದ ಹಂಬಲಿಸುತ್ತಿದ್ದರು. ಕೇಂದ್ರ ಸರ್ಕಾರದ ಕಾರಾ (CARA) ಸಂಸ್ಥೆಯ ನಿಯಮಾವಳಿಗಳ ಪ್ರಕಾರ, ಕಳೆದ 2023 ರಲ್ಲೇ ಮಗು ದತ್ತು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸುಮಾರು ವರ್ಷಗಳ ಕಾಯುವಿಕೆಯ ನಂತರ ಇಂದು ಅವರ ಕನಸು ನನಸಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ

ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿದ್ದ ಈ ಗಂಡು ಮಗುವನ್ನು, ದಾವಣಗೆರೆ ಜಿಲ್ಲಾಧಿಕಾರಿ (DC) ಜಿ.ಎಂ. ಗಂಗಾಧರಸ್ವಾಮಿ ಅವರ ಸಮ್ಮುಖದಲ್ಲಿ ದಂಪತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮಗುವನ್ನು ಪಡೆಯುತ್ತಿದ್ದಂತೆ ದತ್ತು ತಂದೆ ವೈರಿ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದರು. “ಕಳೆದ ಮೂರು ವರ್ಷಗಳಿಂದ ನಾನು ಮತ್ತು ನನ್ನ ಪತ್ನಿ ಮಗುವಿಗಾಗಿ ಪ್ರಾರ್ಥಿಸುತ್ತಿದ್ದೆವು. ಇಂದು ನಮ್ಮ ಹಂಬಲ ಈಡೇರಿದೆ. ನನಗೆ ‘ಅಪ್ಪ’ ಎಂಬ ಕಿರೀಟ ಸಿಕ್ಕ ದಿನವಿದು” ಎಂದು ಗದ್ಗದಿತ ಕಂಠದಿಂದ ಸಂಭ್ರಮ ಹಂಚಿಕೊಂಡರು. ದಾವಣಗೆರೆಯ ಬಾಲಮಂದಿರದ ಮಕ್ಕಳು ವಿದೇಶಿ ನೆಲದಲ್ಲಿ ರಾಜವೈಭೋಗದ ಬದುಕು ಕಾಣುತ್ತಿರುವುದು ಇಲಾಖೆಯ ಅಧಿಕಾರಿಗಳ ಮುಖದಲ್ಲೂ ಮಂದಹಾಸ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಹೊಸ ಪಕ್ಷ ಕಟ್ಟುವ ಸಾಧ್ಯತೆ – Kannada News

ನವದೆಹಲಿ, ಜೂನ್ 8: ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಹೊಡೆತವನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ವಿಭಜನೆಯಾಗಿತ್ತು. ಇದೀಗ ಸಂಸದೀಯ ಪಕ್ಷದಲ್ಲಿ ವಿಭಜನೆ ಬಹುತೇಕ ಖಚಿತವಾಗಿದೆ. ಬಂಡಾಯವೆದ್ದಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರು ಕೇಂದ್ರ ಸಚಿವ ಮತ್ತು ಪಕ್ಷದ ವೀಕ್ಷಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಹಾಜರಿದ್ದರು. ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ, ಹಿರಿಯ ಡಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 20 ಟಿಎಂಸಿ ಸಂಸದರು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದರು. ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯಲ್ಲಿ ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಪೀಕರ್​ಗೆ ಪತ್ರ ಬರೆದಿರುವ ಟಿಎಂಸಿ ಸಂಸದರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ರಾಜಕೀಯ ವಲಯದ ಮೂಲಗಳ ಪ್ರಕಾರ, ಪತ್ರ ಬರೆದಿರುವ ಈ 20 ಪ್ಲಸ್ ಸಂಸದರು ಟಿಎಂಸಿಯಿಂದ ಸಂಪೂರ್ಣವಾಗಿ ಹೊರಬಂದು ಹೊಸ ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆಗಳು ದಟ್ಟವಾಗಿವೆ. ಸಂಸತ್ತಿನಲ್ಲಿ ತಮ್ಮ ಸಂಸದ ಸ್ಥಾನಕ್ಕೆ ಯಾವುದೇ ಧಕ್ಕೆ ಬರದಂತೆ ಕಾನೂನುಬದ್ಧವಾಗಿ ಪಕ್ಷದಿಂದ ಹೊರಬರಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಕ್ರೋಢೀಕರಿಸಲು ಈ ಬಂಡಾಯದ ಗುಂಪು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ನೇತೃತ್ವದ ಅತೃಪ್ತರ ಬಣ ಇದೇ ಪ್ಲಾನ್ ಮಾಡಿತ್ತು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ, ಮತ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಪತ್ರ; ಇಂಡಿಯ ಸಭೆಯ 5 ನಿರ್ಧಾರಗಳಿವು

ಒಂದೆಡೆ, ಮಮತಾ ಬ್ಯಾನರ್ಜಿ ಇಂಡಿಯ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ಬಂಡಾಯ ಸಂಸದರು ಪ್ರತ್ಯೇಕ ಬಣವನ್ನು ರಚಿಸುವ ಉದ್ದೇಶವನ್ನು ಘೋಷಿಸಿ ಸ್ಪೀಕರ್‌ಗೆ ಪತ್ರಗಳನ್ನು ಸಲ್ಲಿಸಿದರು. ಅವರು ಟಿಎಂಸಿ ಸಂಸದೀಯ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.53ಕ್ಕೆ ಪತ್ರವನ್ನು ಸಲ್ಲಿಸಲಾಯಿತು.

ಲೋಕಸಭೆಯಲ್ಲಿ ಟಿಎಂಸಿ ಒಟ್ಟು 28 ಸಂಸದರನ್ನು ಹೊಂದಿದೆ. ಅವರಲ್ಲಿ 20 ಮಂದಿ ಸಹಿ ಹಾಕಿದ್ದಾರೆ ಎಂದು ಕಾಕೋಲಿ ಹೇಳಿದ್ದಾರೆ. ಆದರೂ, ಯಾರು ಯಾವುದಕ್ಕೆ ಸಹಿ ಹಾಕಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಈ ಪಟ್ಟಿಯಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಪಾರ್ಥ ಭೌಮಿಕ್, ಶರ್ಮಿಳಾ ಸರ್ಕಾರ್, ಅಸಿತ್ ಮಾಲ್, ಜಗದೀಶ್ ಬಸುನಿಯಾ, ಕಾಲಿಪಾದ ಸೊರೆನ್, ಅರೂಪ್ ಚಕ್ರವರ್ತಿ, ರಚನಾ ಬ್ಯಾನರ್ಜಿ ಮತ್ತು ದೇವ್ ಸೇರಿದ್ದಾರೆ. ಇದಕ್ಕೂ ಮೊದಲು ಟಿಎಂಸಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ಕಾಕೋಲಿ ಘೋಷ್ ಸಲ್ಲಿಸಿದ ಪತ್ರದಲ್ಲಿ ಅವರು ಬಿಜೆಪಿಗೆ ಸೇರುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಅವರು ಎನ್‌ಡಿಎಗೆ ಸೇರಲಿದ್ದಾರೆ. ಇದರರ್ಥ ಅವರು ತೃಣಮೂಲ ಕಾಂಗ್ರೆಸ್‌ನಿಂದ ಪ್ರತ್ಯೇಕ ಗುಂಪಾಗಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಲು ಬಯಸುತ್ತಾರೆ. ಇದರರ್ಥ ಈ ಪತ್ರವನ್ನು ಅಂಗೀಕರಿಸಿದರೆ, ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷವು ವಿಭಜನೆಯಾಗುತ್ತದೆ. ಆದರೆ, ಓಂ ಬಿರ್ಲಾ ಇಂದು ಲೋಕಸಭೆಯಲ್ಲಿ ಇಲ್ಲ. ಅವರು ಬೇರೆ ರಾಜ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದಾರೆ. ಆದ್ದರಿಂದ, ಟಿಎಂಸಿ ಸಂಸದರು ಪತ್ರವನ್ನು ಅವರ ಕಚೇರಿಗೆ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆಯ ನಂತರ, ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷವು ವಿಭಜನೆಯಾಗಿದೆ. ರಿತಬ್ರತಾ ಬ್ಯಾನರ್ಜಿ ನೇತೃತ್ವದ 58 ಶಾಸಕರು, ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡು ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅದನ್ನು ಅನುಮೋದಿಸಿದ್ದಾರೆ. ಶಾಸಕರ ನಡುವಿನ ವಿಭಜನೆಯ ನಂತರ ಈಗ ಟಿಎಂಸಿ ಸಂಸದರ ನಡುವಿನ ವಿಭಜನೆ ಬಹುತೇಕ ಖಚಿತವಾಗಿದೆ. ಇದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version