ಜಮ್ಮು ಕಾಶ್ಮೀರದಲ್ಲಿ ಪ್ರವಾಹ, ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು – Kannada News | Raging Floods in Budgam: Over 12 Shops Swept Away in Jammu and Kashmir Deluge

ಶ್ರೀನಗರ, ಜುಲೈ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ರುದ್ರತಾಂಡವ ಮುಂದುವರೆದಿದೆ. ಪ್ರವಾಹ ಸೃಷ್ಟಿಸಿರುವ ಈ ಮಳೆಯ ಅಬ್ಬರಕ್ಕೆ ಬುಡ್ಗಾಮ್ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಬುಡ್ಗಾಮ್​ನಲ್ಲಿ 12ಕ್ಕೂ ಹೆಚ್ಚು ಅಂಗಡಿಗಳು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿವೆ. ನದಿಗಳಂತೆ ಭೋರ್ಗರೆಯುವ ನೀರಿನ ಪ್ರವಾಹಕ್ಕೆ ಸಿಲುಕಿ, ಅಂಗಡಿಗಳು ಸಂಪೂರ್ಣವಾಗಿ ಕುಸಿದು ನದಿಪಾಲಾಗಿವೆ.

ಮಾಲೀಕರು ನೋಡ ನೋಡುತ್ತಿದ್ದಂತೆಯೇ ತಮ್ಮ ವ್ಯಾಪಾರದ ತಾಣಗಳು ಪ್ರವಾಹಕ್ಕೆ ಸಿಲುಕಿ ನಾಶವಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಂಗಡಿಗಳು ಕೊಚ್ಚಿ ಹೋಗುತ್ತಿರುವ ಹೃದಯವಿದ್ರಾವಕ ಮತ್ತು ಭೀಕರ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ, ಈ ಅಂಗಡಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಅಲ್ಲಿನ ಜನರ ಬದುಕಿನ ಮೇಲೆ ಮಳೆ ಗಂಭೀರ ಪರಿಣಾಮ ಬೀರಿದೆ. ಜಮ್ಮು ಕಾಶ್ಮೀರದಾದ್ಯಂತ ಸತತ ಮಳೆಯು ಹಲವು ಪ್ರದೇಶಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಿಂದೂ ವಿವಾಹ ಒಪ್ಪಂದವಲ್ಲ, ಪವಿತ್ರ ಸಂಸ್ಕಾರ; ಆಸಕ್ತಿ ಇಲ್ಲ ಎಂದು ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ – Kannada News | Hindu Marriage is a Sacred Sacrament, Not a Contract: Karnataka HC Rejects Husband’s Divorce Plea Over ‘Loss of Interest’

ಕರ್ನಾಟಕ ಹೈಕೋರ್ಟ್​​Image Credit source: Getty Images

ಬೆಂಗಳೂರು, ಜುಲೈ 23: ಹಿಂದೂ ವಿವಾಹವು ಕೇವಲ ಒಪ್ಪಂದವಲ್ಲ, ಅದು ಜೀವಿತಾವಧಿಯ ಪವಿತ್ರ ಸಂಸ್ಕಾರವಾಗಿದೆ. ದಾಂಪತ್ಯ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠವು, ಮೈಸೂರು ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಪ್ರಕರಣ ಏನು?

2003ರ ಡಿಸೆಂಬರ್ 15ರಂದು ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿ ಸಂಬಂಧದಲ್ಲಿ ಬಿರುಕುಂಟಾದ ಕಾರಣ ಮದುವೆಯಾಗಿ ಸುಮಾರು 21 ವರ್ಷಗಳ ಬಳಿಕ ವಿಚಾರ ಕೋರ್ಟ್​​ ಮೆಟ್ಟಿಲೇರಿತ್ತು. ಈ ದಂಪತಿಗೆ ಬಹುತೇಕ ಪ್ರಾಪ್ತವಯಸ್ಕಳಾಗಿರುವ ಮಗಳೂ ಇದ್ದು, ಈ ಹಿಂದೆ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಪತ್ನಿ ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 9 ಅಡಿಯಲ್ಲಿ ದಾಂಪತ್ಯ ಜೀವನ ಮರುಸ್ಥಾಪನೆಗೆ (Restitution of Conjugal Rights) ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಯ ಅರ್ಜಿಯನ್ನು ಅಂಗೀಕರಿಸಿತ್ತು.

ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್

ಪತಿ ಪರ ವಕೀಲರ ವಾದವೇನು?

ನಂತರ, ಸೆಕ್ಷನ್ 13(1A) ಅಡಿಯಲ್ಲಿ, ದಾಂಪತ್ಯ ಜೀವನ ಮರುಸ್ಥಾಪನೆಗೆ ಆದೇಶ ಬಂದರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಸಹಜೀವನ ಪುನರಾರಂಭವಾಗಿಲ್ಲ ಎಂಬ ಆಧಾರದ ಮೇಲೆ ಪತಿ ಮತ್ತೊಮ್ಮೆ ವಿಚ್ಛೇದನ ಕೋರಿ ಹೊಸ ಅರ್ಜಿ ಸಲ್ಲಿಸಿದ್ದರು. ಹಿಂದಿನ ತೀರ್ಪಿನ ಬಳಿಕ ಪತ್ನಿ ತನ್ನೊಂದಿಗೆ ವಾಸಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ತಾನು ಹಲವು ಬಾರಿ ಮನವಿ ಮಾಡಿದರೂ ಪತ್ನಿ ಸ್ಪಂದಿಸಲಿಲ್ಲ. ಹೀಗಾಗಿ ಈ ವಿವಾಹ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಪತಿ ಪರ ವಕೀಲರು ವಾದಿಸಿದ್ದರು.

ತಾನು ಪತಿ ಹಾಗೂ ಅತ್ತೆ-ಮಾವರನ್ನು ಪ್ರೀತಿ, ಗೌರವದಿಂದ ನೋಡಿಕೊಂಡಿದ್ದೇನೆ. ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರಣ ಮನೆಯ ಮೊದಲ ಮಹಡಿಯಲ್ಲಿ ಪೂಜೆ ಹಾಗೂ ಅಡುಗೆ ಮಾಡಲು ಪತಿಯ ಪೋಷಕರು ಸೂಚಿಸಿದಂತೆ ನಡೆದುಕೊಂಡಿದ್ದೇನೆ. ಪ್ರತ್ಯೇಕ ಮನೆಗಾಗಿ ಎಂದಿಗೂ ಒತ್ತಾಯಿಸಿಲ್ಲ. ಪತಿ ಅಥವಾ ಅವರ ಕುಟುಂಬದವರೊಂದಿಗೆ ಜಗಳವಾಡಿಲ್ಲ ಎಂದು ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ನ್ಯಾಯಪೀಠ ಹೇಳಿದ್ದೇನು?

ಕುಟುಂಬ ನ್ಯಾಯಾಲಯದಲ್ಲಿ ಪತ್ನಿಯ ವಿರುದ್ಧ ಪತಿ ಮಾಡಿದ್ದ ಕ್ರೌರ್ಯದ ಆರೋಪಗಳು ಸಾಬೀತಾಗಿರಲಿಲ್ಲ. ಅಲ್ಲದೆ ವಿಚಾರಣೆ ವೇಳೆ ಪತಿಯೇ, ನನಗೆ ದಾಂಪತ್ಯ ಜೀವನ ಮುಂದುವರಿಸುವ ಆಸಕ್ತಿ ಇಲ್ಲದ ಕಾರಣ ಸಹಜೀವನ ಪುನರಾರಂಭ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದರು. ಈ ವಿಚಾರವನ್ನು ಉಲ್ಲೇಖಿಸಿದ ಹೈಕೋರ್ಟ್, ಹಿಂದೂ ವಿವಾಹವು ಒಪ್ಪಂದವಲ್ಲ; ಅದು ಪವಿತ್ರ ಸಂಸ್ಕಾರ. ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂಬ ಕಾರಣವೊಂದನ್ನೇ ಆಧಾರ ಮಾಡಿಕೊಂಡು ವಿವಾಹ ಬಂಧನದಿಂದ ಹೊರಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿರೋದಾಗಿ ಲೈವ್​​ ಲಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:57 pm, Thu, 23 July 26

Source link

Zimbabwe vs India T20, Live Score: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ – Kannada News | Zimbabwe vs India 1st T20, Live Cricket Score IND vs ZIM Full Scorecard Match Updates from Harare in Kannada

LIVE NEWS & UPDATES

  • 23 Jul 2026 04:06 PM (IST)

    IND vs ZIM 1st T20 Live: ಟಾಸ್ ಗೆದ್ದ ಟೀಂ ಇಂಡಿಯಾ

    ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಅಂದರೆ ಜುಲೈ 23 ರಿಂದ ಪ್ರಾರಂಭವಾಗಿದೆ. ಸರಣಿಯ ಮೂರೂ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಶ್ರೇಯಸ್ ಅಯ್ಯರ್ ನಾಯಕನಾಗಿ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದ್ದಾರೆ. ಇತ್ತ ಟೀಂ ಇಂಡಿಯಾ ಕೂಡ ಸತತ 6 ಪಂದ್ಯಗಳ ಸೋಲಿನ ನಂತರ ಗೆಲುವಿನ ಸವಿಸವಿಯುವ ಗುರಿ ಹೊಂದಿದೆ.

Published On – Jul 23,2026 4:05 PM

Source link

ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಮೋದಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ:ಪ್ರಲ್ಹಾದ್ ಜೋಶಿ – Kannada News | Pralhad Joshi Backs PM Modi’s Fast Track Court Proposal on Neet Exam Paper Leaks

ನವದೆಹಲಿ, ಜುಲೈ 23: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಕಠಿಣ ಹಾಗೂ ತ್ವರಿತ ಶಿಕ್ಷೆ ಖಚಿತಪಡಿಸಲು ‘ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಪರೀಕ್ಷಾ ಅಕ್ರಮಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಿರೋಧ ಪಕ್ಷಗಳ ಪ್ರಚಾರ ಶೈಲಿ ಮತ್ತು ಸರ್ಕಾರದ ಬದ್ಧತೆಯ ಕುರಿತು ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ.

ನಾವು ಸಂಸತ್ತಿನಲ್ಲಿ ಚರ್ಚೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ. ಆರಂಭದಲ್ಲಿ ಚರ್ಚೆ ಬೇಕು ಎಂದು ಕೇಳುತ್ತಿದ್ದ ವಿರೋಧ ಪಕ್ಷದ ನಾಯಕರು, ಈಗ ಚರ್ಚೆಗೆ ಬರದಂತೆ ನಾನಾ ಷರತ್ತುಗಳನ್ನು ವಿಧಿಸಲು ಪ್ರಾರಂಭಿಸಿದ್ದಾರೆ ಎಂದು ಸಚಿವರು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅತ್ಯಂತ ಕಾಳಜಿ ಮತ್ತು ಸಂವೇದನಾಶೀಲತೆ ಹೊಂದಿದೆ. ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಹಾಗೂ ದೇಶದ ಯುವಜನತೆಯ ಭವಿಷ್ಯ ‘ವಿಕಸಿತ ಭಾರತ 2047’ಕನಸಿನ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

ಈಗಾಗಲೇ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದ 14 ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಅಕ್ರಮಗಳನ್ನು ಒಟ್ಟಾಗಿ ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಎಲ್ಲರ ಸಲಹೆ-ಸಹಕಾರದೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ: ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು? – Kannada News | Siddarameshwara Colony Land Dispute: Residents Protest Court Ordered Eviction

ಆತಂಕದಲ್ಲಿ ನಿವಾಸಿಗಳುImage Credit source: tv9 kannada

ಕಲಬುರಗಿ, ಜುಲೈ 23: ಕಲಬುರಗಿ (kalaburagi) ನಗರದ ಆಳಂದ ಚೆಕ್ ಪೋಸ್ಟ್ ಬಳಿಕಯ ಸಿದ್ದರಾಮೇಶ್ವರ ಕಾಲೋನಿ ನಿವಾಸಿಗಳು (Residents) ಸದ್ಯ ಆತಂಕದಲ್ಲಿ ಇದ್ದಾರೆ. ಏಕೆಂದರೆ ಸಿಜೆಎಂ ಕೋರ್ಟ್ ಆದೇಶ ಹಿನ್ನೆಲೆ ಸರ್ವೆ ನಂಬರ್ 36 ಮತ್ತು 95ರಲ್ಲಿನ ಮನೆ ಮತ್ತು ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಇದು ಕಾಲೋನಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ನಡೆದಿದ್ದೇನು?

ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಿವಾಸಿಗಳು ನೋಟರಿ ಮೇಲೆ ಸೈಟ್ ಖರೀದಿ ಮಾಡಿ ಮನೆ ಕಟ್ಟಿಕೊಂಡು ಸುಮಾರು 30ರಿಂದ 40 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಮೂಲ ಜಮೀನುದಾರರ ಬಳಿ ನೋಟರಿ ಅಗ್ರಿಮೆಂಟ್ ಮೇಲೆ ನಿವಾಸಿಗಳು ಸೈಟ್ ಖರೀದಿ ಮಾಡಿದ್ದಾರೆ.

ಕೋರ್ಟ್ ಮೊರೆ ಹೋಗಿದ್ದ ಜಮೀನು ಮಾಲೀಕ 

ಇದೇ ಜಮೀನಿನಲ್ಲಿ ಸದ್ಯ 300ಕ್ಕೂ ಅಧಿಕ ಮನೆಗಳು ಮತ್ತು ಕಟ್ಟಡಗಳು ನಿರ್ಮಾಣ ಆಗಿವೆ. ಆದರೆ ಇದೀಗ ಪಹಣಿ ಆಧಾರದ ಮೇಲೆ ಒಟ್ಟು 13 ಎಕರೆ ಜಮೀನು ತನ್ನದೆಂದು ಜಮೀನು ಮಾಲೀಕ ಮಹ್ಮದ್ ಸಲೀಮುದ್ದಿನ್​ ಜಮೀನು ಕಬ್ಜಾಗಾಗಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಕಟ್ಟಡಗಳ ತೆರವಿಗೆ ಆದೇಶ ನೀಡಿದೆ.

ಪ್ರಾಣ ಹೋದರೂ ಮನೆ, ಕಟ್ಟಡಗಳ ತೆರವು ಮಾಡಲು ಬಿಡಲ್ಲ ಎಂದ ನಿವಾಸಿಗಳು

ಇದೀಗ ಕೋರ್ಟ್ ಆದೇಶದಂತೆ ಪೊಲೀಸ್ ಬಂದೋಬಸ್ತ್​ನೊಂದಿಗೆ ಅಧಿಕಾರಿಗಳು ಮನೆ ಮತ್ತು ಕಟ್ಟಡಗಳ ತೆರವಿಗೆ ಮುಂದಾಗಿದ್ದರು. ಈ ವೇಳೆ ಮುಖ್ಯ ರಸ್ತೆ ಬಂದ್ ಮಾಡಿದ ನೂರಾರು ನಿವಾಸಿಗಳು ಮನೆ, ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಾಣ ಹೋದರೂ ಮನೆಗಳ, ಕಟ್ಟಡಗಳ ತೆರವು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್

ಈ ವೇಳೆ ಸರ್ವೆ ಅಧಿಕಾರಿಗಳ ಜೊತೆ ನಿವಾಸಿಗಳ ಮಾತಿನ ಚಕಮಕಿ ಉಂಟಾಗಿದೆ. ತೀವ್ರ ವಿರೋಧ ಹಿನ್ನಲೆ ಮನೆ ಮತ್ತು ಕಟ್ಟಡಗಳ ತೆರವು ಮಾಡದೇ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆಗೆ ಕೇಂದ್ರ ಗ್ರೀನ್ ಸಿಗ್ನಲ್: ತಿರುಪತಿ-ಚೆನ್ನೈ ಪ್ರಯಾಣಕ್ಕೆ ಇನ್ನಷ್ಟು ಅನುಕೂಲ – Kannada News | Central Government approves Sira Badavanahalli four laning project Says Minister V Somanna

ಬೆಂಗಳೂರು/ತುಮಕೂರು, (ಜುಲೈ 23): ಈ ಭಾಗದ ಬಹುದಿನ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ  (Sira Badavanahalli four-laning project)  ಭಾಗದ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾಟ ಅನುಮೋದನೆ ನೀಡಿದೆ. 584.98 ಕೋಟಿ ರೂಪಾಯಿ ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು, ಈ ಬಗ್ಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ  (V Somanna) ಮಾಹಿತಿ ನೀಡಿದ್ದಾರೆ.

ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವಂತೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿ ಅನುಮೋದನೆ ಭರವಸೆ ನೀಡಿದ್ದರು.ಅದರಂತೆ ಇದೀಗ 584.98 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಕಾಮಗಾರಿಗೆ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆ 15ಕ್ಕೆ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಆಗೋದು ಡೌಟ್! ಇಲ್ಲಿದೆ ಅಸಲಿ ಕಾರಣ

ತುಮಕೂರು ಜಿಲ್ಲೆಯ ಸರ್ವತೋಮುಖ ಪ್ರಗತಿಯ ಭಾಗವಾಗಿ ನನ್ನ ಮನವಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ ಭಾಗದ 20.2 ಕಿ.ಮಿ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 2025ರ ಮಾರ್ಚ್‌ 07ರಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅನುಮೋದನೆ ನೀಡಿದ್ದರು. ಇದೀಗ, ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಗುತ್ತಿಗೆ ಆದೇಶ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ ಭಾಗದ 20.2 ಕಿ.ಮಿ. ಉದ್ದದ ರೂ. 584.98 ಕೋಟಿ ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 69ರ ಶಿರಾ – ಬಡವನಹಳ್ಳಿ – ಬೈರೆನಹಳ್ಳಿ ಒಟ್ಟು 52 ಕಿ.ಮಿ. ಅಂದಾಜು 1,585 ಕೋಟಿ ವೆಚ್ಚದ ಚತುಷ್ಪಥ ಹೆದ್ದಾರಿ ನಿರ್ಮಾಣವಾಗುವುದರಿಂದ ಮದ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿ ಮತ್ತು ಚೆನ್ನೈ ನಡುವಿನ ಪ್ರಯಾಣಕ್ಕೆ ಇನ್ನಷ್ಟು ಅನುಕೂಲವಾಗಲಿದೆ.

ಬಡವನಹಳ್ಳಿಯಿಂದ ಬೈರೆನಹಳ್ಳಿ ಭಾಗದ 32ಕಿ.ಮಿ. ಚತುಷ್ಪಥ ರಸ್ತೆಗೆ 1000 ಕೋಟಿ ರೂ.ಕೋಟಿ ಅನುಮೋದನೆ ಪಡೆಯುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿವಸಗಳಲ್ಲಿ ಕೇಂದ್ರ ರ್‍ಕಾರದಿಂದ ಮಂಜೂರಾತಿ ಪಡೆಯಲಾಗುವುದು ಎಂದು ಸೋಮಣ್ಣ ತಿಳಿಸಿದ್ದಾರೆ.

 ಕೇವಲ 4 ಗಂಟೆಯಲ್ಲೇ ತಿರುಪತಿಗೆ ತಲುಪಬಹುದು

ಪ್ರಸ್ತುತ ಶಿರಾದಿಂದ- ತುಮಕೂರು ದಾಬಸಪೇಟೆ ಕೋಲಾರ ಮಾರ್ಗವಾಗಿ ತಿರುಪತಿಗೆ ತಲುಪಲು ಸುಮಾರು 6 ರಿಂದ 7 ಗಂಟೆಗಳ ಪ್ರಯಾಣದ ಅವಧಿ ಇದ್ದು,ಈ ಹೆದ್ದಾರಿ ನಿರ್ಮಾಣದಿಂದ ಶಿರಾದಿಂದ ಮಧುಗಿರಿ, ಚಿಕ್ಕಬಳ್ಳಾಪುರ ಚಿಂತಾಮಣಿ ಮಾರ್ಗವಾಗಿ ತಿರುಪತಿಗೆ ಕೇವಲ 4 ಗಂಟೆಯ ಅವಧಿಯಲ್ಲಿ ತಲುಪಲು ಅನೂಕೂಲವಾಗಲಿದೆ.ಜೊತೆಗೆ ಶಿರಾದಿಂದ ತಿರುಪತಿಗೆ ಸುಮಾರು 60 ಕಿ.ಮಿ. ರಸ್ತೆ ಪ್ರಯಾಣ ಕಡಿಮೆಯಾಗಲಿದೆ. ಇದಲ್ಲದೆ ವಸಂತನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶಗಳಿಗೆ ಚೆನೈ ಬಂದರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಿದೆ.ಈ ಹೆದ್ದಾರಿ ಶಿರಾ-ಬೆಂಗಳೂರಿನ ನಡುವಿನ ಪರ್ಯಾಯ ರಸ್ತೆ ಸಂಪರ್ಕವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ: ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು? – Kannada News | Siddarameshwara colony land dispute residents protest court ordered eviction

ಆತಂಕದಲ್ಲಿ ನಿವಾಸಿಗಳುImage Credit source: tv9 kannada

ಕಲಬುರಗಿ, ಜುಲೈ 23: ಕಲಬುರಗಿ (kalaburagi) ನಗರದ ಆಳಂದ ಚೆಕ್ ಪೋಸ್ಟ್ ಬಳಿಕಯ ಸಿದ್ದರಾಮೇಶ್ವರ ಕಾಲೋನಿ ನಿವಾಸಿಗಳು (Residents) ಸದ್ಯ ಆತಂಕದಲ್ಲಿ ಇದ್ದಾರೆ. ಏಕೆಂದರೆ ಸಿಜೆಎಂ ಕೋರ್ಟ್ ಆದೇಶ ಹಿನ್ನೆಲೆ ಸರ್ವೆ ನಂಬರ್ 36 ಮತ್ತು 95ರಲ್ಲಿನ ಮನೆ ಮತ್ತು ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಇದು ಕಾಲೋನಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ನಡೆದಿದ್ದೇನು?

ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಿವಾಸಿಗಳು ನೋಟರಿ ಮೇಲೆ ಸೈಟ್ ಖರೀದಿ ಮಾಡಿ ಮನೆ ಕಟ್ಟಿಕೊಂಡು ಸುಮಾರು 30ರಿಂದ 40 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಮೂಲ ಜಮೀನುದಾರರ ಬಳಿ ನೋಟರಿ ಅಗ್ರಿಮೆಂಟ್ ಮೇಲೆ ನಿವಾಸಿಗಳು ಸೈಟ್ ಖರೀದಿ ಮಾಡಿದ್ದಾರೆ.

ಕೋರ್ಟ್ ಮೊರೆ ಹೋಗಿದ್ದ ಜಮೀನು ಮಾಲೀಕ 

ಇದೇ ಜಮೀನಿನಲ್ಲಿ ಸದ್ಯ 300ಕ್ಕೂ ಅಧಿಕ ಮನೆಗಳು ಮತ್ತು ಕಟ್ಟಡಗಳು ನಿರ್ಮಾಣ ಆಗಿವೆ. ಆದರೆ ಇದೀಗ ಪಹಣಿ ಆಧಾರದ ಮೇಲೆ ಒಟ್ಟು 13 ಎಕರೆ ಜಮೀನು ತನ್ನದೆಂದು ಜಮೀನು ಮಾಲೀಕ ಮಹ್ಮದ್ ಸಲೀಮುದ್ದಿನ್​ ಜಮೀನು ಕಬ್ಜಾಗಾಗಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಕಟ್ಟಡಗಳ ತೆರವಿಗೆ ಆದೇಶ ನೀಡಿದೆ.

ಪ್ರಾಣ ಹೋದರೂ ಮನೆ, ಕಟ್ಟಡಗಳ ತೆರವು ಮಾಡಲು ಬಿಡಲ್ಲ ಎಂದ ನಿವಾಸಿಗಳು

ಇದೀಗ ಕೋರ್ಟ್ ಆದೇಶದಂತೆ ಪೊಲೀಸ್ ಬಂದೋಬಸ್ತ್​ನೊಂದಿಗೆ ಅಧಿಕಾರಿಗಳು ಮನೆ ಮತ್ತು ಕಟ್ಟಡಗಳ ತೆರವಿಗೆ ಮುಂದಾಗಿದ್ದರು. ಈ ವೇಳೆ ಮುಖ್ಯ ರಸ್ತೆ ಬಂದ್ ಮಾಡಿದ ನೂರಾರು ನಿವಾಸಿಗಳು ಮನೆ, ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಾಣ ಹೋದರೂ ಮನೆಗಳ, ಕಟ್ಟಡಗಳ ತೆರವು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್

ಈ ವೇಳೆ ಸರ್ವೆ ಅಧಿಕಾರಿಗಳ ಜೊತೆ ನಿವಾಸಿಗಳ ಮಾತಿನ ಚಕಮಕಿ ಉಂಟಾಗಿದೆ. ತೀವ್ರ ವಿರೋಧ ಹಿನ್ನಲೆ ಮನೆ ಮತ್ತು ಕಟ್ಟಡಗಳ ತೆರವು ಮಾಡದೇ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಡ್ರಗ್ಸ್ ಪ್ರಕರಣದಲ್ಲಿ ನಿನ್ನನ್ನು ಸಿಲುಕಿಸುತ್ತೇನೆ’; ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ ಮುಂಬೈ ಪೊಲೀಸ್ ಅಮಾನತು – Kannada News | Will Frame You In Drugs Case Mumbai Police Suspended For Threatening student Protesters

ಮುಂಬೈ, ಜುಲೈ 23: ಜಂತರ್​ ಮಂತರ್​​ನಲ್ಲಿ (Delhi Protest) ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರೊಬ್ಬರಿಗೆ ‘ನಿನ್ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುತ್ತೇನೆ’ ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ, ಕಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾನಿರತ ಯುವಕನ ವಿರುದ್ಧ ನಕಲಿ ಮಾದಕ ದ್ರವ್ಯ (ಡ್ರಗ್ಸ್) ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ವಿಡಿಯೋದಲ್ಲಿ ಅಧಿಕಾರಿಯು ಪ್ರತಿಭಟನಾಕಾರರನ್ನು ಬೆದರಿಸುವುದು ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಸಾರ್ವಜನಿಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರಿಂದ ಮುಂಬೈ ಪೊಲೀಸ್ ಇಲಾಖೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು.

ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಮತ್ತೆ ಭುಗಿಲೆದ್ದ ಗಲಭೆ; ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಎಸಿಪಿಗಳಿಗೆ ಗಾಯ

“ನಾನು ನಿಮ್ಮನ್ನು ಮತ್ತೆ ಪ್ರತಿಭಟನೆಯಲ್ಲಿ ನೋಡಿದರೆ, ನಿಮ್ಮ ಜೇಬಿನಲ್ಲಿ 50 ಗ್ರಾಂ ಡ್ರಗ್ಸ್ ಇಡುತ್ತೇನೆ. ನಂತರ ನಿಮ್ಮ ಜೀವನವೇ ಹಾಳಾಗುತ್ತದೆ. ನಿಮಗೆ ಜಾಮೀನು ಕೂಡ ಸಿಗುವುದಿಲ್ಲ, ಜೈಲಿನಲ್ಲೇ ಕೊಳೆಯಬೇಕಾಗುತ್ತದೆ” ಎಂದು ಪೊಲೀಸ್ ಸಿಬ್ಬಂದಿ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವೇಳೆ ವಾಹನದ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ನಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಆಂತರಿಕ ಇಲಾಖಾ ತನಿಖೆಗೆ ಆದೇಶಿಸಿದ್ದರು.

ಅಧಿಕಾರಿಯ ಅಮಾನತು:

ಪ್ರಾಥಮಿಕ ತನಿಖೆಯಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ನಡವಳಿಕೆಯು ಶಿಸ್ತುಬಾಹಿರ, ಗಂಭೀರ ಸ್ವರೂಪದ ನಿಯಮ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಮುಂಬೈ ಪೊಲೀಸ್ ಆಯುಕ್ತರ ಸೂಚನೆಯಂತೆ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ಕಾನೂನು ಸುವ್ಯವಸ್ಥೆ ಕಾಪಾಡುವವರು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದನ್ನು ಅಥವಾ ಸುಳ್ಳು ಪ್ರಕರಣಗಳ ಬೆದರಿಕೆ ಹಾಕುವುದನ್ನು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ, ಶಿಕ್ಷಣ ವಲಯದ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ವಿಡಿಯೋ ಬಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಆರ್ಭಟ: ಮತ್ತೆ ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು – Kannada News | Heavy Rains in Maharashtra’s Western Ghats Boost Krishna, Ghataprabha Inflows; Siddeshwara Barrage Submerged in Mudhol

ಬೆಳಗಾವಿ/ಬಾಗಲಕೋಟೆ, ಜುಲೈ 23: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇದರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ ಒಂದೇ ದಿನದಲ್ಲಿ 10,000 ಕ್ಯೂಸೆಕ್ ನೀರು ಒಳಹರಿವು ಹೆಚ್ಚಳವಾಗಿದ್ದು, ವೇದಗಂಗಾ, ದೂಧಗಂಗಾ ನದಿಗಳಲ್ಲೂ ನೀರಿನ ಮಟ್ಟ ಏರಿದೆ. ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಹಲವು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಬಳಿಯ ಘಟಪ್ರಭಾ ನದಿಯ ಸಿದ್ದೇಶ್ವರ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದ್ದು, ಅದರ ಮೇಲೆ ಸುಮಾರು 2 ಅಡಿ ನೀರು ಹರಿಯುತ್ತಿದೆ. ಕೆಲ ದಿನಗಳ ಹಿಂದೆ 250 ಕ್ಯೂಸೆಕ್​ಗೆ ಇಳಿದಿದ್ದ ನದಿಯ ಹರಿವು ಈಗ ಮತ್ತೆ ಜೀವಕಳೆ ಪಡೆದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಮುಧೋಳ ನಗರದ ಚರಂಡಿ ನೀರು ನದಿಗೆ ಸೇರಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಿಳಿವಳಿಕಸ್ಥರಿಗೆ ಪಿಎಫ್ ಸಾಕು ಎನ್ನುತ್ತಿದೆ ಇಪಿಎಫ್​ಒ; ಇಪಿಎಫ್ ಮತ್ತು ವಿಪಿಎಫ್ ಸಂಯೋಜನೆಯಿಂದ ಕೋಟಿ ಗಳಿಕೆ ಹೇಗೆ ಸಾಧ್ಯ? – Kannada News | EPF vs Mutual Funds, which is better for retirement plan, EPFO explains, Rs 1 crore corpus using VPF

ನವದೆಹಲಿ, ಜುಲೈ 23: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ವೇತನದಾರರಿಗೆ (Salaried Employees) ಒಂದು ಪ್ರಮುಖ ಜಾಗೃತಿ ಸಂದೇಶ ರವಾನಿಸಿದೆ. ಮ್ಯೂಚುಯಲ್ ಫಂಡ್‌ಗಳಲ್ಲಿ (Mutual Funds) ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಇಪಿಎಫ್ (EPF) ಖಾತೆಯಲ್ಲಿರುವ ಹಣವನ್ನು ಅವಧಿಗೂ ಮುನ್ನ ಹಿಂಪಡೆಯದಂತೆ ಇಪಿಎಫ್‌ಒ ತನ್ನ ಚಂದಾದಾರರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಸಾಮಾಜಿಕ ಜಾಲತಾಣ X ನಲ್ಲಿ “ಸಮಜ್ದಾರ್ ಕೋ EPF ಕಾಫಿ ಹೈ” (ಬುದ್ಧಿವಂತರಿಗೆ ಇಪಿಎಫ್ ಸಾಕು) ಎಂಬ ಸಾಲಿನೊಂದಿಗೆ ವಿಡಿಯೋ ಹಂಚಿಕೊಂಡಿರುವ ಇಪಿಎಫ್‌ಒ, ಇಪಿಎಫ್ ಮತ್ತು ಮ್ಯೂಚುಯಲ್ ಫಂಡ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸಿದೆ.

ಇಪಿಎಫ್ ಮತ್ತು ಮ್ಯೂಚುಯಲ್ ಫಂಡ್: ವ್ಯತ್ಯಾಸವೇನು?

ಇಪಿಎಫ್‌ಒ ಪ್ರಕಾರ, ಇವೆರಡೂ ಆರ್ಥಿಕ ಉತ್ಪನ್ನಗಳ ಉದ್ದೇಶ ಸಂಪೂರ್ಣವಾಗಿ ಭಿನ್ನವಾಗಿದೆ. ಇಪಿಎಫ್ ಎಂಬುದು ನಿವೃತ್ತಿಯ ನಂತರದ ಜೀವನಕ್ಕೆ ಕಡ್ಡಾಯ ಹಾಗೂ ಸುಸ್ಥಿರ ಆರ್ಥಿಕ ಭದ್ರತೆ ನೀಡುವ ಸರ್ಕಾರಿ ಯೋಜನೆಯಾಗಿದೆ. ಮ್ಯೂಚುಯಲ್ ಫಂಡ್‌ಗಳು ಕೇವಲ ಹಣ/ಸಂಪತ್ತನ್ನು ಬೆಳೆಸಲು ಬಳಸುವ ಮಾರುಕಟ್ಟೆ ಆಧಾರಿತ (Market-linked) ಐಚ್ಛಿಕ ಹೂಡಿಕೆ ಸಾಧನಗಳಾಗಿವೆ.

ಇಪಿಎಫ್‌ನ 5 ಪ್ರಮುಖ ಅನುಕೂಲಗಳು

  • ಡಬಲ್ ಧಮಾಕ: ಇಪಿಎಫ್‌ನಲ್ಲಿ ನೌಕರ ಮಾತ್ರವಲ್ಲದೆ, ಆತನ ಸಂಸ್ಥೆ/ಮಾಲೀಕರು ಸಹ ಸಮಾನ ವಂತಿಕೆ ನೀಡುತ್ತಾರೆ. ಆದರೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆದಾರರೇ ಸಂಪೂರ್ಣ ಹಣ ಹಾಕಬೇಕಾಗುತ್ತದೆ.
  • ಖಚಿತ ಮತ್ತು ಸುರಕ್ಷಿತ ರಿಟರ್ನ್ಸ್: ಸರ್ಕಾರವು ಪ್ರತಿ ವರ್ಷ ಇಪಿಎಫ್‌ಗೆ ನಿಗದಿತ ಬಡ್ಡಿದರವನ್ನು (ಆಕರ್ಷಕ ಬಡ್ಡಿ) ನೀಡುತ್ತದೆ. ಇದರಿಂದ ನಿವೃತ್ತಿ ನಿಧಿ ಸುರಕ್ಷಿತವಾಗಿ ಬೆಳೆಯುತ್ತದೆ.
  • ಮಾರುಕಟ್ಟೆ ಏರಿಳಿತದಿಂದ ರಕ್ಷಣೆ: ಮ್ಯೂಚುಯಲ್ ಫಂಡ್‌ಗಳು ಶೇರ್‌ ಮಾರ್ಕೆಟ್‌ಗೆ ಒಳಪಟ್ಟಿರುವುದರಿಂದ ಅದರಲ್ಲಿ ನಷ್ಟದ ಅಪಾಯವಿರುತ್ತದೆ. ಆದರೆ ಇಪಿಎಫ್‌ನಲ್ಲಿ ಹೂಡಿಕೆ ಮಾಡಿದ ಹಣ ಸಂಪೂರ್ಣ ಸುರಕ್ಷಿತ.
  • ಪಿಂಚಣಿ ಮತ್ತು ಉಚಿತ ಇನ್ಶೂರೆನ್ಸ್: ಇಪಿಎಫ್ ಸದಸ್ಯರಿಗೆ ನಿವೃತ್ತಿಯ ನಂತರ ‘ಇಪಿಎಸ್’ (EPS) ಮೂಲಕ ಆಜೀವ ಪಿಂಚಣಿ ಸಿಗುತ್ತದೆ. ಅಲ್ಲದೆ, ಅಕಸ್ಮಾತ್ ನೌಕರ ಮೃತಪಟ್ಟರೆ ‘ಇಡಿಎಲ್‌ಐ’ (EDLI) ಯೋಜನೆ ಅಡಿಯಲ್ಲಿ ಕುಟುಂಬಕ್ಕೆ ₹7 ಲಕ್ಷದವರೆಗೆ ವಿಮೆ ಪರಿಹಾರ ಲಭ್ಯವಿರುತ್ತದೆ.
  • ಶಿಸ್ತುಬದ್ಧ ಉಳಿತಾಯ: ಪ್ರತಿ ತಿಂಗಳು ಸಂಬಳದಿಂದ ಹಣ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುವುದರಿಂದ, ನೌಕರರಿಗೆ ಅರಿಯದಂತೆ ದೊಡ್ಡ ನಿವೃತ್ತಿ ನಿಧಿ (Retirement Corpus) ರೂಪುಗೊಳ್ಳುತ್ತದೆ.

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

ಮ್ಯೂಚುಯಲ್ ಫಂಡ್‌ಗಳು ನಿಮ್ಮ ಒಟ್ಟಾರೆ ಹೂಡಿಕೆಯ ಭಾಗವಾಗಿರಲಿ (Diversified Portfolio). ಅಪಾಯ ತಡೆಯಬಲ್ಲ ಸಾಮರ್ಥ್ಯ (Risk Appetite) ಇದ್ದರೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹೆಚ್ಚುವರಿ ಹಣ ಹೂಡಿಕೆ ಮಾಡಿ. ಆದರೆ, ನಿಮ್ಮ ನಿವೃತ್ತಿ ಜೀವನದ ಮೂಲ ಅಡಿಪಾಯವಾಗಿ ಇಪಿಎಫ್ ಅನ್ನು ಎಂದಿಗೂ ಮುರಿಯಬೇಡಿ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಇಪಿಎಫ್​ಗೆ ವಿಪಿಎಫ್ ಸೇರಿಸಿದರೆ ಕೋಟಿ ಸಾಧ್ಯ

ಇಪಿಎಫ್ ಸ್ಕೀಮ್​ನಲ್ಲಿರುವ ಪ್ರಮುಖ ಫೀಚರ್ ಎಂದರೆ ಅದು ವಿಪಿಎಫ್. ಇದು ಉದ್ಯೋಗಿಗಳು ತಮ್ಮ ಕೊಡುಗೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇಪಿಎಫ್​ನಂತೆಯೇ ವಿಪಿಎಫ್ ಕೊಡುಗೆಯೂ ಸಂಬಳದಲ್ಲೇ ಮುರಿದುಕೊಳ್ಳುತ್ತದೆ. ಆದರೆ, ಉದ್ಯೋಗದಾತರಾದ ಕಂಪನಿಯ ಕೊಡುಗೆಯು ಇಪಿಎಫ್ ಅಕೌಂಟ್​ಗೆ ಸೀಮಿತವಾಗಿರುತ್ತದೆ. ವಿಪಿಎಫ್​ಗೆ ಇರುವುದಿಲ್ಲ.

ಈ ವಿಪಿಎಫ್ ಅನ್ನು ಬಳಸಿಕೊಂಡು ಉದ್ಯೋಗಿಗಳು ತಮ್ಮ ನಿವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಬಹುದು. ಒಂದು ಕೋಟಿ ರೂ ಕಾರ್ಪಸ್ ನಿರ್ಮಿಸಲು ಸಾಧ್ಯ.

ಇದನ್ನೂ ಓದಿ: ಪಿಎಲ್​ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ

ಉದಾಹರಣೆಗೆ, ನೀವು 10 ವರ್ಷದಿಂದ ಕೆಲಸ ಮಾಡುತ್ತಿದ್ದು ನಿಮ್ಮ ಇಪಿಎಫ್ ಅಕೌಂಟ್​ನಲ್ಲಿರುವ ಹಣ 6 ಲಕ್ಷ ರೂ ಇದೆ. ನೀವು ಇನ್ನೂ 20 ವರ್ಷ ಸೇವೆಯಲ್ಲಿರುತ್ತೀರಿ ಎಂದು ಭಾವಿಸೋಣ. ಹಾಗೆಯೇ, ಈಗಿರುವ ಶೇ. 8.25 ಬಡ್ಡಿದರವೇ ಮುಂದುವರಿಯುತ್ತದೆ ಎಂದುಕೊಳ್ಳೋಣ. ಈ 20 ವರ್ಷ ನಿಮ್ಮ ಇಪಿಎಫ್+ವಿಪಿಎಫ್ ಕೊಡುಗೆ ಒಟ್ಟು 11,000-12,000 ರೂ ಆಗಿದ್ದರೆ ಆಗ ನಿಮ್ಮ ಸಂಪತ್ತಿನ ಮೌಲ್ಯ 1 ಕೋಟಿ ರೂ ಮುಟ್ಟಬಲ್ಲುದು.

ನಿಮ್ಮ ಸೇವಾವಧಿ ಕಡಿಮೆ ಇದ್ದಾಗ ವಿಪಿಎಫ್​ಗೆ ಕೊಡುಗೆ ಹೆಚ್ಚಿಸಬಹುದು. ಈ ರೀತಿ ಒಬ್ಬ ಉದ್ಯೋಗಿಯು ರಿಟೈರ್ಮೆಂಟ್ ಪ್ಲಾನ್ ಮಾಡಿಕೊಳ್ಳಬಹುದು. ಇಪಿಎಫ್​ಗೆ ಮಾಡುವ ಹೂಡಿಕೆಯು ಸುಭದ್ರವಾಗಿರುತ್ತದೆ. ಹೆಚ್ಚುವರಿ ಸಂಪಾದನೆ ಇದ್ದು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸಿದರೆ, ಒಂದಷ್ಟು ಹಣವನ್ನು ರಿಟೈರ್ಮೆಂಟ್​ಗೆಂದು ಮ್ಯೂಚುವಲ್ ಫಂಡ್​ನಲ್ಲೂ ಹೂಡಿಕೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:17 pm, Thu, 23 July 26

Source link

Exit mobile version