IND vs PAK: ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್ – Kannada News | Ishan Kishan’s T20 WC Heroics vs Pakistan: Smashes Records with 77 Runs Knock

ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್, ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು.

ವಾಸ್ತವವಾಗಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನದ ವಿರುದ್ಧ ಇಶಾನ್ ಕಿಶನ್ ಇಂದು ಮೊದಲ ಪಂದ್ಯವನ್ನಾಡಿದರು. ಆಡಿದ ಮೊದಲ ಪಂದ್ಯದಲ್ಲೇ ಪಾಕ್ ಬೌಲರ್​ಗಳ ಬೆವರಿಳಿಸಿದ ಕಿಶನ್ ಸ್ಫೋಟಕ ಅರ್ಧಶತಕ ಬಾರಿಸಿದರು. ಮಾತ್ರವಲ್ಲದೆ ಪಾಕಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ 42 ರನ್ ಬಾರಿಸುವ ಮೂಲಕ ಪಾಕಿಸ್ತಾನ ವಿರುದ್ಧದ ಟಿ20ಪಂದ್ಯದ ಪವರ್‌ಪ್ಲೇನಲ್ಲಿಯೇ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಈ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಬಾರಿಸಿದ ಇಶಾನ್ ಕಿಶನ್, ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 192.50 ಸ್ಟ್ರೈಕ್ ರೇಟ್‌ನಲ್ಲಿ 77 ರನ್ ಕಲೆಹಾಕಿದರು. ಈ ಮೂಲಕ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್​ನಲ್ಲಿ ಅರ್ಧಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಿಶನ್​ಗೂ ಮೊದಲು ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.

ರಾಬಿನ್ ಉತ್ತಪ್ಪ 2007 ರ ಟಿ20 ವಿಶ್ವಕಪ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಆ ನಂತರ ಗೌತಮ್ ಗಂಭೀರ್ ಕೂಡ 2007 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ಅರ್ಧಶತಕ ಸಿಡಿಸಿದ್ದರು. ಅದಾದ ಬಳಿಕ ವಿರಾಟ್ ಕೊಹ್ಲಿ 2012, 2016, 2021 ಮತ್ತು 2022 ರ ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ್ದರು. ಈಗ, ಇಶಾನ್ ಕಿಶನ್ ಈ ಸಾಧನೆ ಮಾಡಿದ್ದಾರೆ.

ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಗಳಿಸಿದ ಮೂರನೇ ವೇಗದ ಅರ್ಧಶತಕವಾಗಿದೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2012 ರಲ್ಲಿ ಭಾರತದ ವಿರುದ್ಧ ಅವರು 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅದಾದ ನಂತರ, ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರೆ, ಈಗ ಇಶಾನ್ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಶಾನ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನಾ 79 ರನ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ವಿರಾಟ್ ಕೊಹ್ಲಿ ಅಜೇಯ 78 ರನ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಇಶಾನ್ ಕಿಶನ್ 77 ರನ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Published On – 9:28 pm, Sun, 15 February 26

Source link

‘ಬಿಗ್​​ಬಾಸ್ ಬಳಿಕ ಹೇಗಿದೆ ಜೀವನ?’ ಕಾರ್ತಿಕ್ ಮಹೇಶ್ ಮಾತು: ವಿಡಿಯೋ ನೋಡಿ – Kannada News | Karthik Mahesh talks about what changes happen after winning Bigg Boss

ಬಿಗ್​​ಬಾಸ್ ಕನ್ನಡಕ್ಕೆ (Bigg Boss Kannada) ಹೋಗಿ ಬಂದರೆ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಹಲವರಿಗಿದೆ. ಅದರಂತೆ ಬಿಗ್​​ಬಾಸ್​​ನಿಂದಾಗಿ ಕೆಲವರ ಜೀವನ ಬದಲಾಗಿದ್ದೂ ಸಹ ಇದೆ. ಈ ಸೀಸನ್​​ನಲ್ಲಿ ವಿನ್ನರ್ ಆಗಿರುವ ಗಿಲ್ಲಿಯನ್ನೇ ನೋಡಿ, ಬಿಗ್​​ಬಾಸ್ ಬಳಿಕ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ ಗಿಲ್ಲಿ. ಈ ಹಿಂದಿನ ಸೀಸನ್​​​ನಲ್ಲಿ ಹನುಮಂತು ವಿನ್ನರ್ ಆಗಿದ್ದರು. ಅದಕ್ಕೂ ಹಿಂದಿನ ಅಂದರೆ 10ನೇ ಸೀಸನ್​​ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು. ಬಿಗ್​​ಬಾಸ್ ಸೀಸನ್ 10 ಹಲವು ಕೋನಗಳಿಂದ ಅತ್ಯುತ್ತಮ ಬಿಗ್​​ಬಾಸ್ ಸೀಸನ್​​ಗಳಲ್ಲಿ ಒಂದಾಗಿತ್ತು. ಇದೀಗ ಕಾರ್ತಿಕ್ ಅವರು ‘ಅಲ್ಫಾ’ ಸಿನಿಮಾನಲ್ಲಿ ನಟಿಸಿದ್ದು, ಟಿವಿ9ಗೆ ನೀಡಿರುವ ವಿಶೇಷ ಸಂದರ್ಭದಲ್ಲಿ ಬಿಗ್​​ಬಾಸ್​​ ಇಂದಾಗಿ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ? – Kannada News | Once Rajpal Yadav use to feed 20 25 struggling actors in his house

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ (Rajpal Yadav) ಕೆಲವು ದಶಕಗಳಿಂದಲೂ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ರಾಜ್​ಪಾಲ್ ಅವರು ಸ್ಟಾರ್ ನಟರುಗಳಿಗಿಂತಲೂ ಬ್ಯುಸಿ ಆಗಿದ್ದ ಬೇಡಿಕೆ ಹೊಂದಿದ್ದ ಸಮಯ ಒಂದಿತ್ತು. ಆದರೆ, ಈಗ ಅವರು ಜೈಲಿನಲ್ಲಿದ್ದಾರೆ. ದಶಕದ ಹಿಂದೆ ಸಿನಿಮಾ ನಿರ್ಮಿಸಲು ಹೋಗಿ ಕೈ ಸುಟ್ಟುಕೊಂಡು ಮಾಡಿದ ಸಾಲಗಳಿಂದಾಗಿ ಈಗ ಅವರು ಜೈಲು ಸೇರಿದ್ದಾರೆ. 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. ಅಲ್ಲಲ್ಲಿ ಕೆಲವರು ರಾಜ್​​ಪಾಲ್ ನೆರವಿಗೆ ಧಾವಿಸಿದ್ದಾರಾದರೂ ಅವರಿಂದ ನಿಜಕ್ಕೂ ನೆರವು ಪಡೆದ ಹಲವರು ಮೌನವಾಗಿಯೇ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಹೌದು, ರಾಜ್​​ಪಾಲ್ ಯಾದವ್ ಹಾಸ್ಯ ನಟರಾದರೂ ಸಹ ವಿಶಾಲ ಹೃದಯವುಳ್ಳವರಾಗಿದ್ದರು, ಒಂದು ಕಾಲದಲ್ಲಿ ತಮ್ಮ ಮನೆಯಲ್ಲಿ ಸುಮಾರು 20-25 ಜನ ನಟರಿಗೆ ಪ್ರತಿದಿನ ಊಟ ಹಾಕುತ್ತಿದ್ದರು. ಅವರೇ ಕಷ್ಟದಲ್ಲಿದ್ದರೂ ಸಹ ಕೆಲಸಕ್ಕಾಗಿ ಹುಡುಕುತ್ತಿದ್ದ ಪ್ರತಿಭಾವಂತರಿಗೆ ಆಸರೆ ಆಗಿದ್ದರು. ಸಿನಿಮಾ ಮಾಡಲು ಬಂದು ಅವಕಾಶ ಸಿಗದೆ ಅಲೆದಾಡುತ್ತಿದ್ದ ಹಲವರು ರಾಜ್​ಪಾಲ್ ಯಾದವ್ ಮನೆಯಲ್ಲಿ ಉಚಿತವಾಗಿ ತಂಗಿ ಅಲ್ಲಿಯೇ ಉಚಿತವಾಗಿ ಊಟ ಮಾಡುತ್ತಿದ್ದರು. ಹಾಗೆ ರಾಜ್​ಪಾಲ್ ಮನೆಯಲ್ಲಿ ಊಟ ಮಾಡಿದ ಹಲವರು ಇಂದು ಸ್ಟಾರ್ ನಟರಾಗಿದ್ದಾರೆ.

ಹಳೆಯ ಸಂದರ್ಶನದಲ್ಲಿ ಮಾತನಾಡಿದ್ದ ರಾಜ್​ಪಾಲ್ ಯಾದವ್ ತಮ್ಮ , ‘ನಾನು ಮುಂಬೈಗೆ ಬಂದ ಹೊಸತರಲ್ಲಿ ಒಂದು ಸಣ್ಣ ಕೋಣೆಯಲ್ಲಿ ವಾಸವಾಗಿದ್ದೆ. ನನ್ನ ಜೊತೆಗೆ ನನ್ನ ಹಳ್ಳಿಯಿಂದ ಬಂದವರು ಹಾಗೂ ಎನ್‌ಎಸ್‌ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ಗೆಳೆಯರು ಸೇರಿದಂತೆ ಸುಮಾರು 20 ರಿಂದ 22 ಹುಡುಗರು ಇರುತ್ತಿದ್ದರು. ನಾವೆಲ್ಲರೂ ಸೇರಿ ಅಡುಗೆ ಮಾಡುತ್ತಿದ್ದೆವು. ಅಂದು ನನ್ನ ಬಳಿ ಹಣ ಇರಲಿ, ಇಲ್ಲದಿರಲಿ, ಬಂದವರೆಲ್ಲರಿಗೂ ಹೊಟ್ಟೆತುಂಬಾ ಊಟ ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನವಾಜುದ್ದೀನ್ ಸಿದ್ದಿಕಿ ಕೂಡ ಆಗಾಗ ನನ್ನ ಮನೆಗೆ ಬರುತ್ತಿದ್ದರು. ನಾವೆಲ್ಲರೂ ಸೇರಿ ಊಟ ಮಾಡುತ್ತಾ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರೆಲ್ಲರಿಗೂ ತಿನ್ನಲು ಅನ್ನ ನೀಡುವ ಶಕ್ತಿಯನ್ನು ದೇವರು ನನಗೆ ನೀಡಿದ್ದಕ್ಕೆ ನಾನು ಸದಾ ಚಿರಋಣಿ’ ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ:ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಅಸಲಿಗೆ ನಟ ನವಾಜುದ್ದೀನ್ ಸಿದ್ಧಿಕಿ ಸಹ ಕಪಿಲ್ ಶರ್ಮಾ ಶೋನಲ್ಲಿ ಈ ವಿಷಯ ಹೇಳಿಕೊಂಡಿದ್ದರು. ತಾವು ಮಾತ್ರವೇ ಅಲ್ಲದೆ ಇಂದು ಒಳ್ಳೆಯ ಸ್ಥಾನದಲ್ಲಿರುವ ಹಲವಾರು ಮಂದಿ ಅಂದು ರಾಜ್​​ಪಾಲ್ ಯಾದವ್ ಮನೆಯಲ್ಲಿ ಊಟ ಮಾಡಿದ್ದಾರೆ ಎಂದು ಅವರು ಹೇಳಿದ್ದರು. ಬಾಲಿವುಡ್​​ನಲ್ಲಿ ಅವಕಾಶ ಸಿಗದೆ ರಾಜ್​ಪಾಲ್ ಯಾದವ್ ಮುಂಬೈ ಬಿಟ್ಟು ಹೋಗುವ ಮನಸ್ಸು ಮಾಡಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ಅವರೊಟ್ಟಿಗೆ ನವಾಜುದ್ದೀನ್ ಸಿದ್ಧಿಖಿ ಸಹ ಇದ್ದರಂತೆ. ಆದರೆ ರಾಜ್​ಪಾಲ್ ಯಾದವ್ ಮುಂಬೈ ಬಿಡುತ್ತಿರುವ ವಿಷಯ ತಿಳಿದು ನಿರ್ದೇಶಕ ಅನುರಾಗ್ ಕಶ್ಯಪ್ ರೈಲ್ವೆ ನಿಲ್ದಾಣಕ್ಕೆ ಹೋಗಿ ಅವರನ್ನು ತಡೆದಿದ್ದಲ್ಲದೆ, ತಾವು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿನಿಮಾನಲ್ಲಿ ಪಾತ್ರವನ್ನೂ ಸಹ ಕೊಡಿಸಿದ್ದರು. ಅದೇ ಸಿನಿಮಾನಲ್ಲಿ ನವಾಜುದ್ದೀನ್​​ಗೆ ಹೋಟೆಲ್ ವೇಟರ್ ಪಾತ್ರ ಸಹ ಕೊಡಿಸಿದ್ದರು.

ರಾಜಪಾಲ್ ಯಾದವ್ ಅವರು 1999ರಲ್ಲಿ ‘ದಿಲ್ ಕ್ಯಾ ಕರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ‘ಹಂಗಾಮಾ’, ‘ವಕ್ತ್’, ‘ಭೂಲ್ ಭುಲೈಯಾ’ ಮತ್ತು ‘ಚುಪ್ ಚುಪ್ ಕೆ’ ನಂತಹ ಚಿತ್ರಗಳ ಮೂಲಕ ಭಾರತದ ಶ್ರೇಷ್ಠ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಇತ್ತೀಚೆಗೆ ಬಿಡುಗಡೆಯಾದ ‘ಭೂಲ್ ಭುಲೈಯಾ 3’ ಮತ್ತು ‘ಧುರಂಧರ್’ ಚಿತ್ರಗಳಲ್ಲಿಯೂ ಅವರ ನಟನೆಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:38 pm, Sun, 15 February 26

Source link

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಈಶಾ ಫೌಂಡೇಷನ್ ಬಳಿ ಬೆಂಕಿ – Kannada News | Chikkaballapur: Fire broke out near Isha Foundation amid Mahashivratri celebrations

ಈಶಾ ಫೌಂಡೇಷನ್, ಬೆಟ್ಟದಲ್ಲಿ ಬೆಂಕಿImage Credit source: tv9 kannada

ಚಿಕ್ಕಬಳ್ಳಾಪುರ, ಫೆಬ್ರವರಿ 15: ಕರ್ನಾಟದಲ್ಲಿ ಮಹಾಶಿವರಾತ್ರಿಯ (Maha Shivratri) ಸಡಗರ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಇತ್ತ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್​​ನಲ್ಲೂ ಸಡಗರ ಜೋರಾಗಿದೆ. ಲಕ್ಷಾಂತರ ಭಕ್ತರು 112 ಅಡಿಯ​​ ಆದಿಯೋಗಿ ದರ್ಶನಕ್ಕೆ ಮುಗಿಬಿದ್ದರು. ಇದೇ ವೇಳೆ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.

ಮಹಾಶಿವರಾತ್ರಿ ಸಂಭ್ರಮ ಮಧ್ಯೆ ಇಶಾ ಫೌಂಡೇಷನ್ ಬಳಿಯ ನಾಗಮಂಟಪದ ಎದುರುಗಡೆ ಇರುವ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮೊದಲೇ ಜನ ಹಾಗೂ ವಾಹನ ಸಂದಣಿಯಿಂದ ತುಂಬಿ ತುಳುಕುತ್ತಿರುವ ಈಶಾ ಫೌಂಡೇಷನ್​​ನಲ್ಲಿ ಸ್ಥಳಕ್ಕೆ ಬರುವಂತೆ ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

ಈಶಾ ಫೌಂಡೇಷನ್​ಗೆ ಹೋಗಲು ಜನರು ಪರದಾಟ

ಈಶಾ ಫೌಂಡೇಷನ್​ಗೆ ಹೋಗಲು ಜನರು ಪರದಾಡಿದ ಘಟನೆ ನಡೆದಿದೆ. ನೂರಕ್ಕೂ ಹೆಚ್ಚು ಬಸ್​ಗಳನ್ನು ಬಿಟ್ಟರೂ ಚಿಕ್ಕಬಳ್ಳಾಪುರ ksrtc ಬಸ್​ ನಿಲ್ದಾಣದಲ್ಲಿ ಬಸ್​ಗಳು ಸಿಗದೆ ಪರದಾಡಿದ್ದಾರೆ. ಬಸ್ ಹತ್ತಲು‌ ಕಿಲೋ ಮೀಟರ್​​ಗಟ್ಟಲೇ ಕ್ಯೂ ಇತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ ಹಿನ್ನಲೆ ಎಷ್ಟು ಬಸ್​​ಗಳನ್ನು ಬಿಟ್ಟರೂ ಸಾಲದಂತಾಗಿದೆ.

ಎಲ್ಲೆಡೆ ಟ್ರಾಫಿಕ್ ಜಾಮ್

ಈಶಾದ ಆದಿಯೋಗಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಈಶಾ ಫೌಂಡೇಷನ್ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಈಶಾ ಫೌಂಡೇಷನ್ ಕಡೆಗೆ ಬಾರದಂತೆ ಸೂಚನೆ ನೀಡಿದ್ದರೂ, ಜನರು ಲೆಕ್ಕಿಸದೆ ಅಲ್ಲಿಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬಲವಂತವಾಗಿ ಒಳನುಗ್ಗಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ

ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ವಾಹನ ಪಾರ್ಕಿಂಗ್​​ ಪುಲ್ ಆಗಿದೆ. ಪೊಲೀಸರೊಂದಿಗೆ ಕೆಲವರು ವಾಗ್ವಾದಕ್ಕೂ ಇಳಿದಿದ್ದಾರೆ. ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ಹಾಗೂ ಈಶಾ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:44 pm, Sun, 15 February 26

Source link

IND vs PAK: 7 ಪಂದ್ಯ, ನಾಲ್ಕು ಸೊನ್ನೆ; ಏನಾಯ್ತು ಅಭಿಷೇಕ್ ಶರ್ಮಾ?

Source link

ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ – Kannada News | Maha shivratri Special, 1050 ft shiva drawing In Rangoli at Mysuru

ಮೈಸೂರು, (ಫೆಬ್ರವರಿ 15): ಮಹಾಶಿವರಾತ್ರಿ ಹಿನ್ನೆಲೆ ರಂಗೋಲಿಯಲ್ಲಿ ಕಲಾವಿದನ ಕೈಚಳಕದಿಂದ ಶಿವ ಅರಳಿದೆ. ಮೈಸೂರಿನ ನಜರ್ ಬಾದ್ ನಲ್ಲಿ ಚಿತ್ರ ಕಲಾವಿದರಾದ ಪುನೀತ್,‌ ಲಕ್ಷ್ಮೀ‌ ಸಿ, ಸಂಪ್ರೀತ್ ಸಿ,‌ರವಿಚಂದ್ರನ್ ಅವರ ರಂಗೋಲಿಯಲ್ಲಿ 1050 ಅಡಿ ಶಿವ ಅರಳಿದ್ದು, ಅದ್ಭುತ ದೃಶ್ಯ ಡ್ರೋಣ್​​​ನಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಂಗೋಲಿ ಹಾಕ್ತಿದ್ದ ಮಹಿಳೆಯರ ಸರ ಎಗರಿಸಿದ ಖದೀಮರು: ಕದ್ದ ಬೈಕ್​​ನಲ್ಲೇ ಬಂದು ಕೃತ್ಯ – Kannada News | Doddaballapur: Chain Snatchers Target Women Drawing Rangoli

ದೇವನಹಳ್ಳಿ, ಫೆಬ್ರವರಿ 15: ಇಂದು ಶಿವರಾತ್ರಿ ಹಬ್ಬ. ಹೀಗಾಗಿ ಮಹಿಳೆಯರು ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕುವುದರಲ್ಲಿ ನಿರತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳಲು ಬಂದ ಇಬ್ಬರು ಖದೀಮರು ಖತರ್ನಾಕ್ ಪ್ಲಾನ್ ಮಾಡಿ ಖದ್ದ ಬೈಕ್​​ನಲ್ಲಿ ಬಂದು ಚಿನ್ನದ ಸರ ಎಗರಿಸಿ ಎಸ್ಕೇಪ್ (chain snatching) ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯಲ್ಲಿ ಘಟನೆ ನಡೆದಿದೆ.

ಸರಗಳ್ಳತನ ಮಾಡಿ ಪರಾರಿ

ಸಮಯ ರಾತ್ರಿ 09:30. ಮನೆಯಲ್ಲಿ ಕುಟುಂಬಸ್ಥರು ಟಿವಿ ಮುಂದೆ ಕುಳಿತಿರುವಾಗಲೇ ಏರಿಯಾಗೆ ಬೈಕ್​​ನಲ್ಲಿ ಇಬ್ಬರು ಎಂಟ್ರಿಕೊಟ್ಟಿದ್ದಾರೆ. ಫುಲ್​​ ಹೆಲ್ಮೆಟ್ ಹಾಕಿಕೊಂಡು ಬಂದವರು ಏರಿಯಾದಲ್ಲಿ ಒಂದೆರೆಡು ರೌಂಡ್ಸ್ ಹಾಕಿದ್ದಾರೆ. ಬೈಕಿನಿಂದ ಇಳಿದು ಹೋದ ಓರ್ವ ಸ್ವಲ್ಪ ಸಮಯದಲ್ಲೇ ವಾಪಸ್ ಬಂದು ಎಸ್ಕೇಪ್ ಆಗಿದ್ದಾರೆ. ಈ ರೀತಿ ರಾತ್ರಿ ಬಂದ ಈ ಇಬ್ಬರು ಮಾಡಿದ್ದೇನು ಅಂದರೆ ಸರಗಳ್ಳತನ.

ಇದನ್ನೂ ಓದಿ: ಕಾಫಿ ಬಿಲ್​ ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮೂವರು ಕಾನ್ಸ್​ಟೇಬಲ್ಸ್

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯ ಗಿರಿಜಮ್ಮ ಎಂಬುವವರು ಇಂದು ಶಿವರಾತ್ರಿ ಹಬ್ಬ ಅಂತ ನಿನ್ನೆ ರಾತ್ರಿ ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕ್ತಿದ್ದರು. ಈ ವೇಳೆ ಒಂಟಿಯಾಗಿದ್ದ ಮಹಿಳೆಯನ್ನ ಕಂಡ ಪಲ್ಸರ್ ಬೈಕ್​​ನಲ್ಲಿ ಬಂದ ಇಬ್ಬರು ಕಿರಾತಕರು ಮಹಿಳೆ ಬಳಿ ರಸ್ತೆ ಮುಂದಕ್ಕೆ ದಾರಿ ಇದಿಯಾ ಅಂತ ಕೇಳಿದ್ದು ಮಹಿಳೆ ಇಲ್ಲ ಅಂತ ಹೇಳಿ ಮನೆ ಒಳಗಡೆ ಹೋಗಲು ಯತ್ನಿಸಿದ್ದಾರೆ.

ಈ ವೇಳೆ ಹಿಂದಿನಿಂದ ಮಹಿಳೆಯ ಕುತ್ತಿಗೆಗೆ ಕೈಹಾಕಿದ ಸರಗಳ್ಳರು ಮಹಿಳೆಯರ ಕುತ್ತಿಗೆಯಲ್ಲಿದ್ದ 40 ರಿಂದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನ ಕಿತ್ತುಕೊಂಡಿದ್ದಾರೆ. ಮಹಿಳೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಬೈಕ್ ಕಾಣೆಯಾಗಿದೆ ಅಂತ ದೂರು ನೀಡಿದ ಯುವಕ

ಸರಗಳ್ಳತನ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸಹ ಅಲರ್ಟ್ ಆಗಿದ್ದು, ಆರೋಪಿಗಳ ಜಾಡು ಹಿಡಿದು ಹೊರಟಾಗ ಇದೇ ಕಳ್ಳರು ದೊಡ್ಡಬಳ್ಳಾಫುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲೂ ಲಕ್ಷ್ಮಮ್ಮ ಎಂಬುವವರ ಕುತ್ತಿಗೆಯಲ್ಲಿದ್ದ 60 ಗ್ರಾಂ ಚಿನ್ನದ ಸರ ಕದ್ದಿರುವುದು ಗೊತ್ತಾಗಿದೆ. ಹೀಗಾಗಿ ಸರಗಳ್ಳರ ಪತ್ತೆ ಹಚ್ಚಲು ಪೊಲೀಸರು ಮುಂದಾಗ್ತಿದ್ದಂತೆ ನನ್ನ ಪಲ್ಸರ್ ಬೈಕ್ ಕಾಣೆಯಾಗಿದೆ ಅಂತ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ದೊಡ್ಡಬಳ್ಳಾಪುರ ಕೈಗಾರಕಾ ಪ್ರದೇಶದಲ್ಲಿ ನಿಲ್ಲಿಸಿ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ವೇಳೆ ಬೈಕ್​ ಕದ್ದಿರುವುದಾಗಿ ಯುವಕ ಠಾಣೆಗೆ ಆಗಮಿಸಿದ್ದು, ಸರಗಳ್ಳರು ಯುವಕನ ಬೈಕ್ ಕದ್ದು ಎರಡು ಕಡೆ ಸರಗಳ್ಳತನ ಮಾಡಿರುವುದು ಗೊತ್ತಾಗಿದೆ. ಇನ್ನು ಹಬ್ಬದ ಸಂಭ್ರಮದಲ್ಲಿದ್ದ ಏರಿಯಾದ ಜನರಿಗೆ ಖದೀಮರು ಎರೆಡೆರಡು ಕಡೆ ಸರಗಳ್ಳತನ ಮಾಡಿರುವುದು ಆತಂಕ ಮೂಡಿಸಿದ್ದು, ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಸರಗಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಖದೀಮರು ದೊಡ್ಡಬಳ್ಳಾಪುರದಲ್ಲೇ ಬೈಕ್ ಕದ್ದು ಅಲ್ಲಿಯೇ ಸರಗಳ್ಳತನ ಮಾಡಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಮತ್ತು ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ – Kannada News | Co Actor said 42 conditions of Allu Arjun is total myth

ಅಲ್ಲು ಅರ್ಜುನ್ (Allu Arjun) ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಬಳಿಕ ಅವರ ಜನಪ್ರಿಯತೆ ವಿಶ್ವಮಟ್ಟದಲ್ಲಿ ಹರಡಿದೆ. ಇದೀಗ ಅಟ್ಲಿ ಜೊತೆಗೆ ಭಿನ್ನ ರೀತಿಯ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾ ಅಲ್ಲು ಅರ್ಜುನ್ ಅನ್ನು ಹಾಲಿವುಡ್ ಲೆವೆಲ್ ಸ್ಟಾರ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲು ಅರ್ಜುನ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿರುವ ಹೊತ್ತಿನಲ್ಲಿಯೇ ಅವರನ್ನು ತುಳಿಯುವ ಪ್ರಯತ್ನಗಳು ಸಹ ತೆರೆ ಮರೆಯಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು.

ಅಲ್ಲು ಅರ್ಜುನ್ ಅವರನ್ನು ಯಾರೇ ಭೇಟಿ ಆಗಬೇಕೆಂದರೂ ಅವರು 42 ನಿಯಮಗಳನ್ನು ಪಾಲಿಸಬೇಕು, ಅವರಿಂದ ದೂರ ನಿಂತೇ ಮಾತನಾಡಬೇಕು, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು, ಅವರೊಟ್ಟಿಗೆ ಸೆಲ್ಫಿ ಕೇಳಬಾರದು, ಅವರೊಟ್ಟಿಗೆ ಮಾತನಾಡಬಾರದು ಇನ್ನೂ ಏನೇನೋ ನಿಯಮಗಳನ್ನು ಎಲ್ಲರೂ ಪಾಲಿಸಬೇಕು, ಅಲ್ಲು ಅರ್ಜುನ್ ಅವರೇ ಸ್ವತಃ ಈ ನಿಯಮಗಳನ್ನು ಹೇರಿದ್ದಾರೆ ಎಂದೆಲ್ಲ ಸುದ್ದಿಗಳನ್ನು ಹರಿಬಿಡಲಾಗಿತ್ತು. ಆದರೆ ಅಲ್ಲು ಅರ್ಜುನ್ ತಂಡ ಇದನ್ನು ಅಪ್ಪಟ ಸುಳ್ಳೆಂದು ಸ್ಪಷ್ಟನೆ ನೀಡಿದ್ದು ಮಾತ್ರವಲ್ಲದೆ, ಈ ರೀತಿಯ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿತ್ತು.

ಇದೀಗ ಅಲ್ಲು ಅರ್ಜುನ್ ಜೊತೆಗೆ ನಟನೆ ಮಾಡಿರುವ ನಟರೊಬ್ಬರು ಅಲ್ಲು ಅರ್ಜುನ್ ನಿಜಕ್ಕೂ ಸೆಟ್​​ನಲ್ಲಿ ಅಂಥಹಾ ನಿಯಮ ಹೇರಿದ್ದಾರೆಯೇ ಅಲ್ಲು ಅರ್ಜುನ್ ಸೆಟ್​​ನಲ್ಲಿ ಯಾರೊಟ್ಟಿಗೂ ಬೆರೆಯುವುದಿಲ್ಲವೇ ಇತರೆ ವಿಷಯಗಳ ಬಗ್ಗೆ ತಾವು ಕಂಡಿದ್ದನ್ನು ಹೇಳಿದ್ದಾರೆ. ಮಲಯಾಳಂ ಮೂಲದ ನಟ ಶಿವ ಹರಿಹರನ್ ಇತ್ತೀಚೆಗೆ ಜಾಹೀರಾತೊಂದಕ್ಕಾಗಿ ಅಲ್ಲು ಅರ್ಜುನ್ ಅವರೊಟ್ಟಿಗೆ ನಟನೆ ಮಾಡಿದ್ದರಂತೆ. ಅವರು ಅಲ್ಲು ಅರ್ಜುನ್ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಬಗ್ಗೆ ಹರಿದಾಡುತ್ತಿರುವ 42 ನಿಯಮಗಳ ಸುದ್ದಿ ಅಪ್ಪಟ ಸುಳ್ಳು ಎಂದಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಅರ್ಜುನ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ನಟ ಶಿವ ಹರಿಹರನ್, ಅಲ್ಲು ಅರ್ಜುನ್ ಬಹಳ ಮಾನವೀಯ ಮತ್ತು ಬಹಳ ಸ್ನೇಹಮಯ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂದಿದ್ದಾರೆ. ‘ನಾನು ಕೆಲಸ ಮಾಡಿರುವ ಅತ್ಯಂತ ಕೂಲ್ ಮತ್ತು ಮಾನವೀಯ ನಟರಲ್ಲಿ ಅಲ್ಲು ಅರ್ಜುನ್ ಒಬ್ಬರು. ಅವರು ನಿಜವಾಗಿಯೂ ಮಾನವೀಯತೆ ಉಳ್ಳ ವ್ಯಕ್ತಿ, ಶೂಟಿಂಗ್ ಸಮಯದಲ್ಲಿ ನಾವು ಅವರೊಂದಿಗೆ ಫೋಟೋ ಕೇಳಲು ಹಿಂಜರಿಯುತ್ತೇವೆ ಎಂದು ಅರ್ಥಮಾಡಿಕೊಂಡು, ಸ್ವತಃ ನಿಮಗೆ ಫೋಟೋ ಬೇಕಾ ಎಂದು ಕೇಳಿದರು, ಚಿತ್ರೀಕರಣದ ನಂತರ ಕಾದಿದ್ದು ನಮಗೆ ಫೋಟೋ ನೀಡಿದರು ಮಾತ್ರವಲ್ಲದೆ ನಮಗೆ ಫೋಟೊಗಳು ಸಿಕ್ಕವೆ ಎಂದು ಮ್ಯಾನೇಜರ್ ಮೂಲಕ ಖಚಿತಪಡಿಸಿಕೊಂಡರು. ‘ಹ್ಯಾಪಿ’ ಸಿನಿಮಾದ ಬಳಿಕ ಅವರ ಎಲ್ಲಾ ಇತರ ಮಲಯಾಳಿ ಅಭಿಮಾನಿಗಳಂತೆ ಈಗ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ’ ಎಂದಿದ್ದಾರೆ ನಟ ಶಿವ ಹರಿಹರನ್.

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಅಟ್ಲಿ ನಿರ್ದೇಶಕ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಅದೇ ಸಿನಿಮಾನಲ್ಲಿ ರಶ್ಮಿಕಾ ಸಹ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕತೆ ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಮನೆ ಕೆಲಸ, ಮಕ್ಕಳ ಆರೈಕೆಗಾಗಿ ತಿಂಗಳಿಗೆ 46 ಸಾವಿರ ರೂ ಖರ್ಚು ಮಾಡುವ ಬೆಂಗಳೂರಿನ ಮಹಿಳೆ – Kannada News | Bengaluru: Salary for nannies who take care of children in Bengaluru is Rs 46 thousand

ಬೆಂಗಳೂರು, ಫೆಬ್ರವರಿ 15: ಕೆಲವು ವರ್ಷಗಳ ಹಿಂದೆ ಪುರುಷರು ಕೆಲಸಕ್ಕೆ ಹೋದರೆ, ಮಹಿಳೆಯರು ಮನೆ ಮಕ್ಕಳು ಸಂಸಾರವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಗಂಡ ಹೆಂಡ್ತಿ ಇಬ್ಬರೂ ದುಡಿದ್ರೂ ಖರ್ಚು ವೆಚ್ಚಗಳನ್ನು ಭರಿಸೋಕೆ ಆಗಲ್ಲ. ಇದೀಗ ಬೆಂಗಳೂರಿನ (Bengaluru) ಮಹಿಳೆಯೊಬ್ಬರು ತನ್ನ ಮಕ್ಕಳನ್ನು ಆರೈಕೆ ಮಾಡುವ ದಾದಿಯರಿಗೆ (caretaker) ಸಂಬಳ ಎಷ್ಟು ನೀಡುತ್ತಾರೆ ಎಂದು ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ದಾದಿಯರು ಇದೀಗ ನಮ್ಮ ಕುಟುಂಬದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ಮಾತನ್ನು ಮೆಚ್ಚಿಕೊಂಡಿದ್ದಾರೆ.

ಪರ್ವೀನ್ ಚೌಧರಿ (parveen.cyclebreaker) ಮಹಿಳೆಯು ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ತನ್ನ ಮಕ್ಕಳ ಆರೈಕೆಗೆ ಇಬ್ಬರೂ ಸಹಾಯಕಿಯರನ್ನು ನೇಮಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಒಬ್ಬರು ಪ್ರಾಥಮಿಕ ಆರೈಕೆದಾರರಿಗೆ ತಿಂಗಳಿಗೆ 32,000 ರೂಪಾಯಿ ಸಂಬಳ ಕೊಡುತ್ತೇನೆ.

ವೈರಲ್ ವಿಡಿಯೋ ಇಲ್ಲಿದೆ

ಪ್ರತಿದಿನ 11 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಹಾಗೂ ದ್ವಿತೀಯ ಸಹಾಯಕರೊಬ್ಬರಿಗೆ ತಿಂಗಳಿಗೆ 14,000 ರೂಪಾಯಿ ಕೊಡುತ್ತೇನೆ. ಇಬ್ಬರೂ ಸಹ ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ನನಗೆ ಕೆಲಸಕ್ಕೆ ಹೋಗಲು, ಪ್ರಯಾಣಿಸಲು ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸಹಾಯಕ ಸಿಬ್ಬಂದಿಗೆ ತಿಂಗಳಿಗೆ 46,000 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: 3 ಬಿಹೆಚ್‌ಕೆ ಮನೆಗೆ 16,883 ರೂ ವಿದ್ಯುತ್ ಬಿಲ್, ಮನೆಮಾಲೀಕ ಫುಲ್ ಶಾಕ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದುಡ್ಡು ಇದ್ದವರಿಗೆ ಮನೆ ಕೆಲಸ ಹಾಗೂ ಮಕ್ಕಳ ಆರೈಕೆಗಾಗಿ ದಾದಿಯರನ್ನು ನೇಮಿಸಿಕೊಳ್ಳುವುದು ಕಷ್ಟವೇನಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಕ್ಕಳ ಯಾರ ಜತೆಗೂ ಇರಲಿ, ತಾಯಿ ಇದ್ದಂತೆ ಆಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೇರೆಯವರ ಮಕ್ಕಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುವ ದಾದಿಯರು ಸಿಗುವುದು ತುಂಬಾನೇ ಕಡಿಮೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ – Kannada News | India vs Pakistan T20 World Cup 2026: No Handshake Drama Continues

2026 ರ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂತಿಮವಾಗಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೂಪರ್ 8 ಸುತ್ತಿಗೆ ಟಿಕೆಟ್ ಸಿಗಲಿದೆ. ಆದ್ದರಿಂದ, ಎರಡೂ ತಂಡಗಳು ಗೆಲುವಿಗಾಗಿ ನಾನಾ ತಂತ್ರಗಳೊಂದಿಗೆ ಅಖಾಡಕ್ಕಿಳಿದಿವೆ. ಆದಾಗ್ಯೂ ಇಷ್ಟು ದಿನ ಕಾಡುತ್ತಿದ್ದ ಪ್ರಶ್ನೆಗೆ ಈ ಪಂದ್ಯದ ಆರಂಭದೊಂದಿಗೆ ಉತ್ತರ ಸಿಕ್ಕಿದೆ. ವಾಸ್ತವವಾಗಿ ಇಂದಿನ ಪಂದ್ಯದಲ್ಲಾದರೂ ಉಭಯ ತಂಡಗಳ ನಾಯಕರು ಹ್ಯಾಂಡ್‌ಶೇಕ್ ಮಾಡುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅದು ನಡೆಯಲಿಲ್ಲ. ಅಂದರೆ ಉಭಯ ನಾಯಕರು ಹ್ಯಾಂಡ್‌ಶೇಕ್ ಮಾಡಲಿಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಇದರಿಂದ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಟಾಸ್ ನಂತರ ಉಭಯ ನಾಯಕರು ಕೈಕುಲುಕುತ್ತಾರೆಯೇ? ಇಲ್ಲವೇ ಎಂಬುದರ ಮೇಲೆ ಎಲ್ಲರ ಗಮನವಿತ್ತು. ಆದರೆ ಟಾಸ್ ನಂತರ, ನಾಯಕ ಸಲ್ಮಾನ್ ಆಘಾ ತಮ್ಮ ನಿರ್ಧಾರ ತಿಳಿಸಿ ಹಾಗೆಯೇ ಹೊರಟು ಹೋದರೆ, ಇತ್ತ ನಾಯಕ ಸೂರ್ಯ ಕೂಡ ಪಾಕ್ ನಾಯಕನ ಕಡೆ ಕಣ್ಣೇತ್ತಿಯೂ ನೋಡಲಿಲ್ಲ.

ವಾಸ್ತವವಾಗಿ ಕಳೆದ ಬಾರಿಯ ಏಷ್ಯಾಕಪ್​ನಿಂದ ಭಾರತ ತಂಡ, ಪಾಕ್ ತಂಡದೊಂದಿಗೆ ಕೈಕುಲುಕುವುದನ್ನು ನಿಲ್ಲಿಸಿದೆ. ಅದರಂತೆ ಈ ಪಂದ್ಯದಲ್ಲೂ ನಾಯಕ ಸೂರ್ಯ, ಪಾಕ್ ನಾಯಕನೊಂದಿಗೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಏಷ್ಯಾಕಪ್‌ನ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಘಟನೆ ಪುನರಾವರ್ತನೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Source link

Exit mobile version