‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ.

ಆಮಿರ್ ಖಾನ್, ನಿರ್ದೇಶಕ ಅಶುತೋಷ್ ಗೋವಾರಿಕರ್, ಹಿರಿಯ ನಟಿ ಸುಹಾಸಿನಿ ಮುಳೆ, ನಟರಾದ ಅಖಿಲೇಂದ್ರ ಮಿಶ್ರಾ, ಯಶ್‌ಪಾಲ್ ಶರ್ಮಾ, ರಾಜ್ ಝುತ್ಶಿ, ಹಾಗೂ ಆಮಿರ್ ಅವರ ಮಾಜಿ ಪತ್ನಿ ಮತ್ತು ಸಿನಿಮಾದ ಕಾರ್ಯಕಾರಿ ನಿರ್ಮಾಪಕಿ ಆಗಿದ್ದ ರೀನಾ ದತ್ತಾ. ಚಿತ್ರತಂಡದ ಸದಸ್ಯರು ಫೋಟೋಗ್ರಾಫರ್‌ಗಳೊಂದಿಗೆ ಸಂವಾದ ನಡೆಸುತ್ತಾ, ಚಿತ್ರೀಕರಣದ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊಂಡರು. ವಿಶೇಷವೆಂದರೆ ಸಿನಿಮಾನಲ್ಲಿ ನಟಿಸಿರುವ ಕೆಲ ಬ್ರಿಟಿಷ್ ನಟರು ಸಹ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ:‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

2001ರಲ್ಲಿ ಬಿಡುಗಡೆಯಾದ ‘ಲಗಾನ್’, 1893ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿದೆ. ಬರಗಾಲದಿಂದ ನಲುಗಿದ ಹಳ್ಳಿಯ ಜನರು ಬ್ರಿಟಿಷ್ ಅಧಿಕಾರಿ ವಿಧಿಸಿದ ಅತಿಯಾದ ತೆರಿಗೆಯ ವಿರುದ್ಧ ಹೋರಾಡಲು ಕ್ರಿಕೆಟ್ ಪಂದ್ಯವನ್ನೇ ಆಯುಧವನ್ನಾಗಿ ಮಾಡಿಕೊಳ್ಳುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಧೈರ್ಯ, ಏಕತೆ ಮತ್ತು ಹೋರಾಟದ ಕಥೆಯನ್ನು ಒಳಗೊಂಡಿರುವ ಈ ಚಿತ್ರವು ಹಿಂದಿ ಚಿತ್ರರಂಗದ ಅತ್ಯಂತ ಪ್ರೀತಿಯ ಸಿನಿಮಾಗಳಲ್ಲಿ ಒಂದಾಗಿದೆ.

ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದು, 2002ರಲ್ಲಿ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. 1957ರ ‘ಮದರ್ ಇಂಡಿಯಾ’ ಮತ್ತು 1988ರ ‘ಸಲಾಮ್ ಬಾಂಬೆ!’ ನಂತರ ಈ ಗೌರವ ಪಡೆದ ಮೂರನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ‘ಲಗಾನ್’ ಪಾತ್ರವಾಗಿತ್ತು. ಸಿನಿಮಾಕ್ಕೆ ಆಸ್ಕರ್ ಸಿಗಲಿಲ್ಲವಾದರೂ ಭಾರಿ ಜನಪ್ರೀತಿ ಈ ಸಿನಿಮಾಕ್ಕೆ ಧಕ್ಕಿತ್ತು.

‘ಲಗಾನ್’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದು, ಸಿನಿಮಾದ ವಿಡಿಯೋ ತುಣುಕುಗಳು, ಹಾಡುಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

W,W,W..ಆಂಗ್ಲರ ನೆಲದಲ್ಲೂ ಮಿಂಚಿದ ಮಾನವ್ ಸುತಾರ್

Source link

ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ಬೆಂಗಳೂರು, ಜೂನ್​ 13: ಸಿಎಂ ಡಿಕೆ ಶಿವಕುಮಾರ್​​ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಡಿಸಿ, ಎಸ್​​ಪಿ ಮತ್ತು ಸಿಇಒಗಳ ಜೊತೆ ಮಹತ್ವದ ಸಭೆ ಮಾಡಿದರು. ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ನಮ್ಮದು ಒಂದೇ ತಂಡ. ಕರ್ನಾಟಕಕ್ಕಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ

ನವದೆಹಲಿ, ಜೂನ್ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಶನಿವಾರ) ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳಿಗೆ ಒಂದು ವಾರದ ಸುದೀರ್ಘ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ವಿಶ್ವ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಮ್ಮ ವಿದೇಶಿ ಪ್ರವಾಸಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ಮೋದಿ (PM Modi) ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದ್ದಾರೆ. ಹಾಗೆಯೇ, 1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಆ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇದು ಉಭಯ ದೇಶಗಳ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Video Source: BJP)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸ ಎಷ್ಟು ಡೇಂಜರಸ್‌ ಗೊತ್ತಾ? – Kannada News | What happens if you sleep on an empty stomach at night?

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿದಾಯಕ ಆಹಾರವನ್ನು ಸೇವಿಸುವಂತೆ ರಾತ್ರಿ ಹಗುರವಾದ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೆಲಸದ ಒತ್ತಡ, ಆಯಾಸ ಮತ್ತು ಕೆಲವೊಮ್ಮೆ ಕೋಪದಿಂದಾಗಿ ಅನೇಕ ಜನರು ರಾತ್ರಿ (night) ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ರಾತ್ರಿ ಊಟವನ್ನು ಸ್ಕಿಪ್‌ ಮಾಡುತ್ತಾರೆ. ರಾತ್ರಿ ಊಟ ಮಾಡದೆ  ಖಾಲಿ ಹೊಟ್ಟೆಯಲ್ಲಿ ಮಲಗುವ ಈ ಅಭ್ಯಾಸವು ದೇಹಕ್ಕೆ ತುಂಬಾ ಹಾನಿಕಾರಕವಂತೆ. ಹಾಗಿದ್ದರೆ ಊಟ ಮಾಡದೆ ಮಲಗುವುದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಊಟ ಮಾಡದೆ ಮಲಗುವುದರಿಂದ ಏನಾಗುತ್ತದೆ?

ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆ ಅಪಾಯ ಹೆಚ್ಚಾಗುತ್ತದೆ: ದೀರ್ಘಕಾಲ ಖಾಲಿ ಹೊಟ್ಟೆಯಲ್ಲಿ ಇದ್ದರೆ ಇದು ಜಠರದುರಿತ, ಆಮ್ಲೀಯತೆ, ಎದೆಯುರಿ ಮತ್ತು ಹೊಟ್ಟೆಯ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ ರಾತ್ರಿ ಊಟ ಮಾಡದೆ ಮಲಗಿದೆ ವಿಶೇಷವಾಗಿ ಬೆಳಿಗ್ಗೆ ಎದ್ದ ನಂತರ ತಲೆನೋವು, ವಾಕರಿಕೆ ಮತ್ತು ಆಯಾಸದಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.

ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಹಸಿವಿನಿಂದ ಕೆಲವರಿಗೆ ಗಾಢ ನಿದ್ರೆ ಬರದಿರಬಹುದು. ಇದರಿಂದಾಗಿ ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಳ್ಳುವುದು, ಮಧ್ಯರಾತ್ರಿ ಹಸಿವಾಗುವುದು, ಬೆಳಿಗ್ಗೆ ಉತ್ಸಾಹವಿಲ್ಲದೆ ಎಚ್ಚರಗೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಲಘು ಭೋಜನವು ಉತ್ತಮ ನಿದ್ರೆ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪೌಷ್ಟಿಕಾಂಶದ ಕೊರತೆಯ ಸಾಧ್ಯತೆ: ರಾತ್ರಿ ಊಟ ಮಾಡದೆ ಮಲಗುವ ಅಬ್ಯಾಸದಿಂದ   ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗಬಹುದು, ಇದು ಸ್ನಾಯು ದೌರ್ಬಲ್ಯ, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ತೀವ್ರ ಆಯಾಸಕ್ಕೆ ಕಾರಣವಾಗಬಹುದು.

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಆಗಾಗ್ಗೆ ಭೋಜನವನ್ನು ಬಿಟ್ಟುಬಿಡುವುದು ಅಥವಾ ಸರಿಯಾಗಿ ತಿನ್ನದಿದ್ದರೆ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಅಡ್ಡಿಪಡಿಸಬಹುದು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸದಿರುವುದು ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ:  ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಗಿಡಗಳನ್ನಿಡಿ

ರಾತ್ರಿಯಲ್ಲಿ  ಏನು ತಿನ್ನಬೇಕು?

ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು, ಹಗುರವಾದ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ ಮೀಲ್, ಹಣ್ಣುಗಳು, ಮೊಸರು, ಸಣ್ಣ ಪ್ರಮಾಣದಲ್ಲಿ ಚಪಾತಿ ಮತ್ತು ಹೆಸರುಕಾಳಿನ ಗಂಜಿ ಮುಂತಾದ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರುವುದಿಲ್ಲ.

ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಕ್ಕಿಂತ ಮಲಗುವ  ಎರಡು ಅಥವಾ ಮೂರು ಗಂಟೆಗಳ ಮೊದಲು ಮಧ್ಯಮ ಮತ್ತು ಆರೋಗ್ಯಕರ ಊಟವನ್ನು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಊಟವನ್ನು ಬಿಟ್ಟುಬಿಡುವ ಬದಲು, ಸಮತೋಲಿತ ಆಹಾರ, ವ್ಯಾಯಾಮ ಮತ್ತು ನಿಯಮಿತ ಜೀವನಶೈಲಿಯನ್ನು ಅನುಸರಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ – Kannada News | Samyuktha Hegde slams Pranit More’s apology over 370 biryani row, calling it shameful

ಕಮಿಡಿಯನ್​ಗಳು ಕೆಲವರು ಪದೇ ಪದೇ ಋಣಾತ್ಮಕ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಕೆಲ ಕಮಿಡಿಯನ್​​ಗಳು ಹಾಸ್ಯದ ಹೆಸರಲ್ಲಿ ತೀರ ಅಶ್ಲೀಲ, ನೈತಿಕವಲ್ಲದ ವಿಷಯಗಳನ್ನು ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಮತ್ತು ಕಾನೂನಿನಂದ ಹಾಗೂ ಸಮಾಜದಿಂದ ತೀವ್ರ ಟೀಕೆ ಮತ್ತು ವಿಮರ್ಶೆಗೆ ಒಳಗಾಗುತ್ತಿದ್ದಾರೆ. ಕಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ಇಂಥಹದ್ದೇ ಒಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಗ್​​ಬಾಸ್​​ಗೆ ಸಹ ಹೋಗಿ ಬಂದಿರುವ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ ತಾನು ‘ಬಳಸಿಕೊಂಡೆ’ ಎಂದು ವಿವರಿಸಿದ್ದ, ಪ್ರಣಿತ್ ಮೋರೆ ಸಹ ಅದನ್ನು ಎಂಜಾಯ್ ಮಾಡಿ ನಕ್ಕಿದ್ದರು, ಆ ಘಟನೆ ವಿವಾದವಾಗಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೋರೆ ಹಾಗೂ ಇನ್ನೂ ಇಬ್ಬರ ವಿರುದ್ಧ ದೂರು ಸಹ ದಾಖಲಾಗಿದೆ.

ಇದೀಗ ಪ್ರಣಿತ್ ಮೋರೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಕ್ಷಮೆ ಕೇಳಿದ್ದಾನೆ. ನಾನು ಆ ಕ್ಷಣದೊಂದಿಗೆ ಸನ್ನಿವೇಶದೊಂದಿಗೆ ಬೆರೆತು ಹೋಗಿ ನನ್ನತನ ಮರೆತೆ ಎಂದೆಲ್ಲ ಹೇಳಿದ್ದಾರೆ. ಆದರೆ ಈ ಕ್ಷಮೆಯನ್ನು ಹಲವರು ತಿರಸ್ಕರಿಸಿದ್ದಾರೆ. ಕನ್ನಡದ ನಟಿ, ‘ಕಿರಿಕ್ ಪಾರ್ಟಿ’ ಮೂಲಕ ಕಿರಿಕ್ ಹುಡುಗಿ ಎಂದೇ ಖ್ಯಾತವಾಗಿರುವ ಸಂಯುಕ್ತ ಹೆಗ್ಡೆ ಸಹ ಪ್ರಣಿತ್ ಮೋರೆ ಪೋಸ್ಟ್​​ಗೆ ಕಮೆಂಟ್ ಹಾಕಿದ್ದು, ಸರಿಯಾಗಿ ಝಾಡಿಸಿದ್ದಾರೆ.

‘ಪ್ರಣೀತ್, ಟೆಲಿಪ್ರಾಂಪ್ಟರ್ ಓದುವುದನ್ನು ನಿಲ್ಲಿಸು. ನೀನು ಆಕಸ್ಮಿಕವಾಗಿ ಏನನ್ನೂ ಹೇಳಿಲ್ಲ ಅಥವಾ ಯಾರೂ ನಿಮ್ಮನ್ನು ಪ್ರಚೋದಿಸಿಲ್ಲ, ನಿಮ್ಮ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ವರ್ತಿಸಿದ್ದೀರಿ. ಆ ವ್ಯಕ್ತಿ 370 ರೂ ಬಿರಿಯಾನಿ ಕತೆ ಹೇಳಿದಾಗ ನೀವು ವೇದಿಕೆ ಮೇಲೆ ಎಂಜಾಯ್ ಮಾಡಿ ನಕ್ಕ ರೀತಿ ನೋಡಿದ್ದೇವೆ. ನೀವು ಕೇಳಿದ ಅತ್ಯುತ್ತಮ ವಿಷಯ ಎಂಬಂತೆ ನೀವು ಅಂದು ವರ್ತಿಸಿದ್ದಿರಿ. ಇದು ನಾಚಿಕೆಗೇಡು, ಇದು ಅತ್ಯಾಚಾರ ಸಂಸ್ಕೃತಿ. ನಮ್ಮ ದೇಶದ ಹೆಚ್ಚಿನ ಮನಸ್ಸುಗಳು ಇದು ಸರಿ ಎಂದು ನಂಬುವಂತೆ ಕಂಡೀಷನಿಂಗ್ ಆಗಿವೆ, ಆದರೆ ಇದು ಸರಿಯಲ್ಲ. ನಿಮ್ಮ ಕ್ಷಮೆಯಾಚನೆಗೆ ಯಾವುದೇ ಅರ್ಥವಿಲ್ಲ. ನೀವು ಎಷ್ಟು ಅಸಹ್ಯಕರ ವ್ಯಕ್ತಿ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೇವಲ ನೀವು ಮತ್ತು ಆ ವ್ಯಕ್ತಿ ಮಾತ್ರವಲ್ಲ, ಆ ಕೋಣೆಯಲ್ಲಿದ್ದ ಪ್ರತಿಯೊಬ್ಬರೂ ಈ ಸಮಸ್ಯೆಗೆ ಕಾರಣರು. ಅತ್ಯಾಚಾರವನ್ನು ಸಾಮಾನ್ಯೀಕರಿಸದಿದ್ದಾಗ ಮಾತ್ರ ಹಾಸ್ಯವು ಹಾಸ್ಯವಾಗಿರುತ್ತದೆ. ಯಾವುದನ್ನಾದರೂ ಹಾಸ್ಯ ಎಂದು ಮಾರಾಟ ಮಾಡಿ, ಜನರು ಅದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಬೇಕೆಂದು ನಿರೀಕ್ಷಿಸಬೇಡಿ. ಪ್ರತಿ ಗಂಟೆಗೆ 4 ಅತ್ಯಾಚಾರಗಳು ವರದಿಯಾಗುವ ದೇಶದಲ್ಲಿ, ಇದು ಹಾಸ್ಯವಲ್ಲ’ ಎಂದು ಸಂಯುಕ್ತಾ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ:ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ

ಪ್ರಣಿತ್ ಮೋರೆ ಶೋಗೆ ಹೋಗಿದ್ದ ಹಿಮಾಂಶು ಹೆಸರಿನ ವ್ಯಕ್ತಿ, ತಾವು ಯುವತಿಯೊಬ್ಬಾಕೆಗೆ 370 ರೂಪಾಯಿಯ ಬಿರಿಯಾನಿ ಕೊಡಿಸಿ ಆ ಬಳಿಕ ಆಕೆಯನ್ನು ರೂಂಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡೆ ಎಂದಿದ್ದ. ಅವನ ಮಾತಿಗೆ ಪ್ರಣಿತ್ ಸೇರಿದಂತೆ ಅಲ್ಲಿದ್ದವರೆಲ್ಲ ನಕ್ಕಿದ್ದರು. ಆ ಬಳಿಕ ಅದೇ ಶೋನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು, ‘ತಾವು ಮತ್ತು ತಮ್ಮ ಸಹಪಾಠಿಗಳು ಆಸ್ಪತ್ರೆಗೆ ಬರುವ ಶವಗಳನ್ನ ಜನನಾಂಗವನ್ನು ನೋಡಿ ಅವುಗಳ ಆಕಾರವನ್ನು ನೋಡಿ ತಮಾಷೆ ಮಾಡಿಕೊಂಡು ನಗುವುದಾಗಿ ಹೇಳಿದ್ದರು. ಈ ಮೂವರ ಮೇಲೂ ಇದೀಗ ಎಫ್​​ಐಆರ್ ಆಗಿದೆ. ಮಹಾರಾಷ್ಟ್ರ ಸಿಎಂ ಸೇರಿದಂತೆ ಹಲವರು ಪ್ರಣಿತ್ ಮೋರೆ ಶೋನಲ್ಲಿ ನಡೆದಿರುವ ಈ ಅಶ್ಲೀಲ ಹಾಸ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾವೆಲ್ ಮಾಡುವಾಗ ವಾಂತಿಯಾಗುತ್ತಾ? ಹಾಗಿದ್ರೆ ಈ ಸಮಸ್ಯೆ ತಡೆಗಟ್ಟಲು ಈ ರೀತಿ ಮಾಡಿ – Kannada News | Motion Sickness Symptoms And Prevention Tips By Health Expert

ಪ್ರಯಾಣ (Travel) ಎಂದರೆ ಬಹುತೇಕರಿಗೆ ಸಂತೋಷ. ಆದರೆ ಕೆಲವರಿಗೆ ಬಸ್‌, ಕಾರು ಅಥವಾ ಘಾಟ್‌ ರಸ್ತೆ ಪ್ರಯಾಣ ಎಂದರೆ ವಾಂತಿ, ತಲೆಸುತ್ತು, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟ ಆರಂಭವಾಗುತ್ತದೆ. ಈ ಸ್ಥಿತಿಯನ್ನು ‘ಮೋಶನ್ ಸಿಕ್ನೆಸ್’ (Motion Sickness) ಎಂದು ಕರೆಯಲಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಪ್ರಯಾಣದ ಉತ್ಸಾಹವೇ ಕಡಿಮೆಯಾಗಬಹುದು. ಜೊತೆಗೆ ಸುಸ್ತು ಸೇರಿದಂತೆ ಮತ್ತಿತರ ಸಮಸ್ಯೆ ಕಂಡುಬರಬಹುದು. ಹಾಗಾಗಿ ಈ ರೀತಿ ಸಮಸ್ಯೆಗೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ವಾಂತಿಯಾಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೋಶನ್ ಸಿಕ್ನೆಸ್ ಗೆ ಕಾರಣವೇನು?

ನಮ್ಮ ದೇಹದಲ್ಲಿ ಕಣ್ಣು, ಒಳಕಿವಿ ಮತ್ತು ಮೆದುಳು ಪರಸ್ಪರ ಸಂಪರ್ಕ ಹೊಂದಿದ್ದು ದೇಹದ ಸಮತೋಲನವನ್ನು ಕಾಪಾಡುತ್ತವೆ. ಪ್ರಯಾಣದ ವೇಳೆ ಒಳಕಿವಿ ವಾಹನದ ಚಲನೆಯನ್ನು ಗುರುತಿಸುತ್ತದೆ. ಆದರೆ ಕಣ್ಣುಗಳು ಫೋನ್‌, ಪುಸ್ತಕ ಅಥವಾ ವಾಹನದ ಒಳಭಾಗದ ಸ್ಥಿರ ವಸ್ತುಗಳನ್ನು ನೋಡುತ್ತಿರುವಾಗ ಮೆದುಳಿಗೆ ಗೊಂದಲ ಉಂಟಾಗುತ್ತದೆ. ಇದರಿಂದ ವಾಂತಿ, ತಲೆಸುತ್ತು, ಬೆವರುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯ ಲಕ್ಷಣಗಳು:

  • ವಾಂತಿ
  • ತಲೆಸುತ್ತು
  • ಬೆವರುವುದು
  • ಮುಖ ಬಿಳಿಯಾಗಿ ಕಾಣುವುದು
  • ದೌರ್ಬಲ್ಯ
  • ಹೊಟ್ಟೆಯಲ್ಲಿ ಸಂಕಟ
    ಮೈಗ್ರೇನ್ ಸಮಸ್ಯೆ ಇರುವವರು ಹಾಗೂ ಮಕ್ಕಳಲ್ಲಿ ಈ ತೊಂದರೆ ಹೆಚ್ಚು ಕಾಣಿಸಬಹುದು.

ಇದನ್ನೂ ಓದಿ: ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು!

ವಾಂತಿಯಾಗದಂತೆ ತಡೆಯಲು ಏನು ಮಾಡಬೇಕು?

ಪ್ರಯಾಣಕ್ಕೂ ಮೊದಲು ತುಂಬಾ ಎಣ್ಣೆ ಅಥವಾ ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡಬಾರದು. ಹಗುರವಾದ ಆಹಾರ ಸೇವಿಸಬೇಕು. ಪ್ರಯಾಣದ ವೇಳೆ ಸಾಕಷ್ಟು ನೀರು ಕುಡಿಯಬೇಕು. ವಾಹನದಲ್ಲಿ ಸಾಧ್ಯವಾದರೆ ಕಿಟಕಿಯ ಪಕ್ಕ ಕುಳಿತು ಹೊರಗಿನ ದೂರದ ದೃಶ್ಯಗಳನ್ನು ನೋಡುತ್ತಿರಬೇಕು. ಜೊತೆಗೆ ಪ್ರಯಾಣದ ವೇಳೆ ಮೊಬೈಲ್ ಬಳಸುವುದು ಅಥವಾ ಪುಸ್ತಕ ಓದುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಹಾಗಾಗಿ ಕಣ್ಣು ಮತ್ತು ಒಳಕಿವಿ ನೀಡುವ ಸಂದೇಶಗಳಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಪುದೀನಾ ಮತ್ತು ನಿಂಬೆಹಣ್ಣು ಪ್ರಯಾಣ ಮಾಡುವಾಗ ಆಗುವ ವಾಂತಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ರಯಾಣಕ್ಕೂ ಮೊದಲು ಸ್ವಲ್ಪ ನಿಂಬೆ ರಸ ಸೇವಿಸುವುದು ಒಳ್ಳೆಯದು. ಪುದೀನಾ ಚಹಾ ಕೂಡ ಸಮಸ್ಯೆ ತಡೆಗಟ್ಟಲು ಸಹಾಯ ಮಾಡಬಹುದು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪ್ರತಿ ಪ್ರಯಾಣದಲ್ಲೂ ತೀವ್ರ ವಾಂತಿ, ತಲೆಸುತ್ತು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಬೇಕು. ಕೆಲ ಸಂದರ್ಭಗಳಲ್ಲಿ ವೈದ್ಯರು ಆಂಟಿ- ಮೋಶನ್ ಸಿಕ್ನೆಸ್ ಮಾತ್ರೆಗಳನ್ನು ಸೂಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಕಿಲೋಮೀಟರ್​​ಗಟ್ಟಲೆ ಟ್ರಾಫಿಕ್ ಜಾಮ್ – Kannada News | Long queue of cars on Mandi Kullu road as tourists crowd head towards Manali

ಮಂಡಿ, ಜೂನ್ 13: ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮನಾಲಿಯ (Manali) ಕಡೆಗೆ ಹೋಗುತ್ತಿರುವುದರಿಂದ ಮಂಡಿ-ಕುಲು ರಸ್ತೆಯಲ್ಲಿ ಕಾರುಗಳ ಉದ್ದನೆಯ ಸರತಿ ಸಾಲು ಉಂಟಾಗಿದೆ. ಪೊಲೀಸ್ ಸಿಬ್ಬಂದಿಯನ್ನು ಮೈದಾನದಲ್ಲಿ ನಿಯೋಜಿಸಲಾಗಿದ್ದು, ನಿರ್ಣಾಯಕ ಸ್ಥಳಗಳಲ್ಲಿ ಸಂಚಾರವನ್ನು ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮನಾಲಿ ಕಡೆಗೆ ತೆರಳುತ್ತಿರುವುದರಿಂದ ಮಂಡಿ-ಕುಲು ಹೆದ್ದಾರಿಯಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲಾಗಿ ನಿಲ್ಲುತ್ತಿವೆ. ಮನಾಲಿ ಪಟ್ಟಣದ ಪ್ರವೇಶ ದ್ವಾರ, ಸೋಲಾಂಗ್ ವ್ಯಾಲಿ, ಅಟಲ್ ಟನಲ್ ಮತ್ತು ರೋಹ್ಟಂಗ್ ಪಾಸ್ ಕಡೆಗೆ ಹೋಗುವ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿವೆ. ಅಟಲ್ ಟನಲ್‌ನಿಂದ ಮನಾಲಿಗೆ ಇರುವ ಕೇವಲ 25 ಕಿಮೀ ದೂರವನ್ನು ಕ್ರಮಿಸಲು ಪ್ರವಾಸಿಗರಿಗೆ ಸುಮಾರು 2ರಿಂದ 3 ಗಂಟೆಗಳ ಸಮಯ ಹಿಡಿಯುತ್ತಿದೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಚ್​ಡಿ ಕುಮಾರಸ್ವಾಮಿ ಮಾರ್ಗದರ್ಶನದಂತೆ ಬಿಡದಿ ಟೌನ್​ಶಿಪ್ ನಿರ್ಮಾಣ ಯೋಜನೆ ಮುಂದುವರೆಸುತ್ತಿದ್ದೇವೆ: ಸಿಎಂ ಡಿಕೆ ಶಿವಕುಮಾರ್​​ – Kannada News | Bidadi Township Project Being Continued Under HD Kumaraswamy’s Guidance, Says CM DK Shivakumar

ಸಿಎಂ ಡಿಕೆ ಶಿವಕುಮಾರ್​​ Image Credit source: tv9 kannada

ಬೆಂಗಳೂರು, ಜೂನ್​​ 13: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿಚಾರ ಸದ್ಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಜೂನ್ 22ಕ್ಕೆ ಬೃಹತ್ ಪ್ರತಿಭಟನೆಗೆ ರೈತರು ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar)​ ಪ್ರತಿಕ್ರಿಯಿಸಿದ್ದು, ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಮಾರ್ಗದರ್ಶನದಂತೆ ನಾವು ಈ ಯೋಜನೆ ಮುಂದುವರೆಸುತ್ತಿದ್ದೇವೆ. ದೆಹಲಿ ಭೇಟಿ ವೇಳೆ ಬಿಡದಿ ಟೌನ್​ಶಿಪ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಮೋದಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರೇ ಹೊಗಳಿದ್ದಾರೆ ಎಂದ ಸಿಎಂ 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಿಸಿ, SP, ಸಿಇಒಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್​, ಬೆಂಗಳೂರಿನ ಮೇಲೆ ಒತ್ತಡವಿದೆ, ಟೌನ್​ಶಿಪ್ ಅಗತ್ಯವಿದೆ. ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ. ನಾನು 7ರಿಂದ 8 ಟೌನ್​ಶಿಪ್ ಮಾಡಿದ್ದೇನೆ, ನೀವು ಮಾಡಿ. ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.

10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್​ ಖಡಕ್​ ಸೂಚನೆ 

ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ನಮ್ಮದು ಒಂದೇ ತಂಡ. ಕರ್ನಾಟಕಕ್ಕಾಗಿ ಕೆಲಸ ಮಾಡೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ. ಅಧಿಕಾರಿಗಳ ಮೇಲೆ ಸಚಿವರು, ಶಾಸಕರು ಒತ್ತಡ ಹೇರಬಾರದು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕದಲ್ಲಿ ಓರ್ವ ಹಿರಿಯ ಅಧಿಕಾರಿ ನಂಬರ್ ನಮೂದಿಸಬೇಕು. ಸಿಬ್ಬಂದಿ ಯಾರೇ ಲಂಚ ಕೇಳಿದರೂ ಆ ಸಂಖ್ಯೆ ಸಂಪರ್ಕಿಸಬೇಕು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ಮತ್ತು ಸರ್ಕಾರ ನಮ್ಮದಾಗಬೇಕು ಎಂಬ ಆಶಯವಿದೆ ಎಂದರು.

ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳು ಸಿಗುವುದು ಕಷ್ಟ

ರಾಜ್ಯದಲ್ಲಿ ಎಸ್​ಐಆರ್​ ಪ್ರಾರಂಭ ಆಗುತ್ತಿದೆ. ಅರ್ಜಿ ಫಾರ್ಮ್ ತುಂಬಿದರೆ ಮಾತ್ರ ಮತ ಉಳಿಯುತ್ತದೆ. ಮೂರು ಸಲ ಬಿಎಲ್​ಒಗಳು ಮನೆಗೆ ಬರ್ತಾರೆ. ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ತುಂಬಬೇಕು. ಪ್ರತಿಯೊಬ್ಬ ಮತದಾರರು ತಮ್ಮ ಮತಗಳನ್ನ ಉಳಿಸಿಕೊಳ್ಳಲಿ. ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳು ಸಿಗುವುದು ಕಷ್ಟವಾಗುತ್ತೆ ಎಂದು ಹೇಳಿದ್ದಾರೆ. ಇನ್ನು ಗೃಹಲಕ್ಷ್ಮೀ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಬೇಕು. ಹೀಗಾಗಿ ಯೋಜನೆಯನ್ನು ನಾವು ನಿಲ್ಲಸಲು ಹೋಗಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು. ಅದೇ ರೀತಿ ಗೃಹಜ್ಯೋತಿಗೂ ಕೂಡ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು ಎಂದಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ? – Kannada News | Government Official Assaulted With Slipper by Farmer at Town Development Authority Office

ಬಾಗಲಕೋಟೆ, ಜೂನ್ 13: ಜಿಲ್ಲೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ನೀಲಕಂಠ ಅಂಗಡಿ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಆತಂಕ ಮೂಡಿಸಿದೆ. ಪರಿಹಾರ ಹಣದ ವಿಳಂಬ ಹಾಗೂ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ.

ಘಟನೆ ಕುರಿತು ಟಿವಿ9ಗೆ ಮಾಹಿತಿ ನೀಡಿದ ನೀಲಕಂಠ ಅಂಗಡಿ, ಘಟನೆ ಸುಮಾರು 12 ಗಂಟೆಗೆ ನಡೆದಿದೆ. ಹಕ್ಕುಪತ್ರ ಮತ್ತು ಇ-ಖಾತೆ ವಿತರಣಾ ಕಾರ್ಯಕ್ರಮ ನಡೆಯುತ್ತಿತ್ತು. ಬಸಪ್ಪ ದೊಡ್ಡಮನಿ ತಮ್ಮ ಫೈಲ್ ಬಗ್ಗೆ ವಿಚಾರಿಸಲು ಬಂದರು. ತನ್ನ ಕಡತ ತನ್ನ ಬಳಿ ಇಲ್ಲ, ಆರ್‌ಒ ಕಚೇರಿಯಲ್ಲಿದೆ ಎಂದು ಹೇಳಿದಾಗ ಆವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಡಿದು ಚಪ್ಪಲಿಯಿಂದ ಹೊಡೆದರು ಎಂದು ವಿವರಿಸಿದ್ದಾರೆ. ಅಧ್ಯಕ್ಷರ ಚೇಂಬರ್‌ಗೆ ಹೋಗಿ ವಿಷಯ ತಿಳಿಸಿದಾಗ, ಅಲ್ಲಿಯೂ ಬಸಪ್ಪ ಬಂದು ಅಧ್ಯಕ್ಷರ ಮುಂದೆಯೇ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ನೀಲಕಂಠ ಅಂಗಡಿ ತಿಳಿಸಿದ್ದಾರೆ.

ಈ ಘಟನೆಯಿಂದ ಅಧಿಕಾರಿಗಳ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ತಮ್ಮ ಭದ್ರತೆ ಬಗ್ಗೆ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಹಲ್ಲೆಕೋರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಕರ್ತವ್ಯನಿರತ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ನೀಲಕಂಠ ಅಂಗಡಿ ಮತ್ತು ಇತರೆ ಸಿಬ್ಬಂದಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version