ಪ್ರಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

ಪ್ರಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

ಕೆಲವೇ ವರ್ಷಗಳಿಗೆ ಹಣವನ್ನು ಇರಿಸಬೇಕೆನ್ನುವವರಿಗೆ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Fixed Deposit) ಉತ್ತಮ ಎನಿಸುತ್ತವೆ. ಆರ್​ಬಿಐನ ರಿಪೋ ದರ ಬದಲಾವಣೆಗೆ ಅನುಗುಣವಾಗಿ ಎಫ್​ಡಿ ದರಗಳೂ ಬದಲಾಗಬಹುದು. ಸಾಮಾನ್ಯವಾಗಿ 1 ವರ್ಷ ಮೇಲ್ಪಟ್ಟ ಅವಧಿಗಳ ಠೇವಣಿಗಳಿಗೆ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಕೆಲ ಅವಧಿಗಳ ಠೇವಣಿಗಳಿಗೆ ಗರಿಷ್ಠ ಬಡ್ಡಿ ಆಫರ್ ಮಾಡುತ್ತವೆ. ಕಮರ್ಷಿಯಲ್ ಬ್ಯಾಂಕುಗಳು ಇಂದು ಶೇ. 7.75ರವರೆಗೆ ಎಫ್​ಡಿ ದರಗಳನ್ನು ಹೊಂದಿವೆ. ಕೆಲ ಪ್ರಮುಖ ಬ್ಯಾಂಕುಗಳಲ್ಲಿನ ಡೆಪಾಸಿಟ್ ರೇಟ್​ಗಳ ವಿವರ ಈ ಕೆಳಕಂಡಂತಿದೆ:

ಎಸ್​ಬಿಐನಲ್ಲಿ ಎಫ್​ಡಿ ದರಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಮಾನ್ಯ ಗ್ರಾಹಕರ 2-3 ವರ್ಷದ ಠೇವಣಿಗಳಿಗೆ ಶೇ. 6.45 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 6.95 ಬಡ್ಡಿ ಇರುತ್ತದೆ. 1 ವರ್ಷದ ಮೇಲ್ಪಟ್ಟ ಎಲ್ಲಾ ಅವಧಿ ಠೇವಣಿಗಳಿಗೂ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಎಸ್​ಬಿಐ ನೀಡುತ್ತದೆ. ಹಿರಿಯ ನಾಗರಿಕರಿಗೆ 5ರಿಂದ 10 ವರ್ಷದ ಠೇವಣಿಗೆ ಶೇ. 7.05ರಷ್ಟು ಬಡ್ಡಿ ಸಿಗುತ್ತದೆ. ಇದು ವೃದ್ಧರಿಗೆ ಎಸ್​ಬಿಐ ನೀಡುತ್ತಿರುವ ದೊಡ್ಡ ಗಿಫ್ಟ್.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಕೋಟಕ್ ಮಹೀಂದ್ರ ಬ್ಯಾಂಕ್ ಎಫ್​ಡಿ ದರಗಳು

ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಎಫ್​ಡಿಗಳು 7 ದಿನದಿಂದ ಹಿಡಿದು 10 ವರ್ಷದವರೆಗೆ ಇವೆ. ಸಾಮಾನ್ಯ ಗ್ರಾಹಕರಿಗೆ 15 ತಿಂಗಳಿಂದ 3 ವರ್ಷದವರೆಗಿನ ಠೇವಣಿಗಳಿಗೆ ಶೇ 6.70 ಬಡ್ಡಿ ಸಿಗುತ್ತದೆ. ಇದು ಇವರಿಗೆ ಈ ಬ್ಯಾಂಕ್ ನೀಡುವ ಬೆಸ್ಟ್ ಪ್ರೈಸ್. ಹಿರಿಯ ನಾಗರಿಕರಿಗೆ ಶೇ. 7.20ರವರೆಗೂ ಬಡ್ಡಿ ಇದೆ.

ಎಚ್​ಡಿಎಫ್​ಸಿ ಬ್ಯಾಂಕ್ ಎಫ್​ಡಿ ದರಗಳು

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು ಸಾಮಾನ್ಯ ಗ್ರಾಹಕರಿಗೆ ಶೇ. 2.75ರಿಂದ ಶೇ. 6.50ರವರೆಗೆ ಇವೆ. 1 ವರ್ಷ ಮೇಲ್ಪಟ್ಟ ಠೇವಣಿಗಳೆಲ್ಲವಕ್ಕೂ ಬಡ್ಡಿದರ ಶೇ. 6 ಹಾಗೂ ಹೆಚ್ಚು ಇದೆ. 3 ವರ್ಷದಿಂದ 4 ವರ್ಷ 7 ತಿಂಗಳವರೆಗಿನ ಠೇವಣಿಗೆ ಗರಿಷ್ಠ ಶೇ. 6.50 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಎಲ್ಲಾ ಠೇವಣಿಗಳಿಗೆ ರೆಗ್ಯುಲರ್ ಕಸ್ಟಮರ್​ಗಳಿಗಿಂತ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಯೆಸ್ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು

ಕಮರ್ಷಿಯಲ್ ಬ್ಯಾಂಕುಗಳ ಪೈಕಿ ಯೆಸ್ ಬ್ಯಾಂಕ್ ಅತಿಹೆಚ್ಚು ಎಫ್​ಡಿ ದರಗಳನ್ನು ಆಫರ್ ಮಾಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7ರವರೆಗೆ ಬಡ್ಡಿ ಇದ್ದರೆ, ಹಿರಿಯ ನಾಗರಿಕರಿಗೆ ಬರೋಬ್ಬರಿ ಶೇ. 7.75 ಬಡ್ಡಿ ಆಫರ್ ಮಾಡಲಾಗಿದೆ. 36 ತಿಂಗಳಿಂದ 60 ತಿಂಗಳ (3-5 ವರ್ಷ) ಠೇವಣಿಗಳಿಗೆ ಹಿರಿಯ ನಾಗರಿಕರು ಶೇ. 7.75 ಬಡ್ಡಿ ಪಡೆಯುತ್ತಾರೆ. 12 ತಿಂಗಳ ಮೇಲ್ಪಟ್ಟ ಎಲ್ಲಾ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರೂ ಕೂಡ ಶೇ. 6.75ಕ್ಕಿಂತ ಹೆಚ್ಚು ಬಡ್ಡಿ ಪಡೆಯಲು ಅವಕಾಶ ಇದೆ.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಐಸಿಐಸಿಐ ಬ್ಯಾಂಕ್ ಎಫ್​ಡಿ ದರಗಳು

ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಐಸಿಐಸಿಐ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರು ಎಫ್​ಡಿಗಳಲ್ಲಿ ಶೇ. 6.50ರವರೆಗೆ ಬಡ್ಡಿ ಪಡೆಯಬಹುದು. 3 ವರ್ಷ ಮೇಲ್ಪಟ್ಟ ಠೇವಣಿಗಳಿಗೆ ಗರಿಷ್ಠ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ 3-5 ವರ್ಷದ ಠೇವಣಿಗೆ ಶೇ. 7.10ರಷ್ಟು ಬಡ್ಡಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಾಚೀನ ನಾಗರಿಕತೆಯಿಂದ ನಿಮಗೆ ಮರೆಯಲಾಗದ ಹೊಡೆತ ಕಾದಿದೆ; ಅಮೆರಿಕಕ್ಕೆ ಇರಾನ್ ತಿರುಗೇಟು

ಟೆಹ್ರಾನ್, ಏಪ್ರಿಲ್ 7: ಇಂದು ರಾತ್ರಿ ಇರಾನ್​ನ ನಾಗರಿಕತೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಸ್ವಲ್ಪ ಸಮಯದ ನಂತರ ಅದಕ್ಕೆ ಇರಾನ್ ಪ್ರತ್ಯುತ್ತರ ನೀಡಿದೆ. ನಾವು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ, ನಮ್ಮ ದಾಳಿಗಳನ್ನು ದ್ವಿಗುಣಗೊಳಿಸುತ್ತೇವೆ, ನಾವೆಂದೂ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳ ನಂತರ ಎಲ್ಲಾ ರಾಜತಾಂತ್ರಿಕ ಮಾರ್ಗಗಳು ಮತ್ತು ಪರೋಕ್ಷ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ

“ಅಮೆರಿಕದ ವಿರುದ್ಧ ಫತಾಹ್ ಮತ್ತು ಖೈಬರ್ ಶೇಕನ್ ಕ್ಷಿಪಣಿಗಳಿಗಾಗಿ ಹೊಸ ಉಡಾವಣಾ ವೇದಿಕೆಗಳೊಂದಿಗೆ ನಾವು ನಮ್ಮ ದಾಳಿಗಳನ್ನು ದ್ವಿಗುಣಗೊಳಿಸುತ್ತೇವೆ” ಎಂದು ಐಆರ್‌ಜಿಸಿ ಏರೋಸ್ಪೇಸ್ ಫೋರ್ಸ್ ಕಮಾಂಡರ್ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ರಾತ್ರಿ ಇಡೀ ದೇಶವೇ ನಾಶವಾಗುತ್ತದೆ; ಗಡುವು ಸಮೀಪಿಸುತ್ತಿದ್ದಂತೆ ಇರಾನ್​ಗೆ ಟ್ರಂಪ್ ಬೆದರಿಕೆ

ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಎಕ್ಸ್​ನಲ್ಲಿ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುವಿರಿ” ಎಂದು ಹೇಳಿದೆ. ಫೆಬ್ರವರಿಯಲ್ಲಿ ಯುಎಸ್-ಇಸ್ರೇಲಿ ದಾಳಿಯ ಸಮಯದಲ್ಲಿ ಮಿನಾಬ್‌ನಲ್ಲಿ ಕೊಲ್ಲಲ್ಪಟ್ಟ ಮಗುವಿನ ದುಃಖಿತ ತಾಯಿಯ ಚಿತ್ರವನ್ನು ಸಹ ರಾಯಭಾರ ಕಚೇರಿ ಹಂಚಿಕೊಂಡಿದೆ. ಇದು ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಮತ್ತು ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿಗಳನ್ನು ಗುರಿಯಾಗಿಸಿಕೊಂಡ ದಾಳಿಯಾಗಿತ್ತು. ಈ ದಾಳಿಯಲ್ಲಿ ಸುಮಾರು 170 ಶಾಲಾ ಹುಡುಗಿಯರು ಸಾವನ್ನಪ್ಪಿದ್ದರು. “ಈ ದುಃಖ, ಈ ಕೋಪ, ಈ ಮುಖವನ್ನು ನೆನಪಿಟ್ಟುಕೊಳ್ಳಿ. ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ರಾಯಭಾರ ಕಚೇರಿಯು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಕದನವಿರಾಮಕ್ಕೆ ನೀಡಿದ್ದ ಗಡುವು ಮುಗಿವ ಮೊದಲೇ ಇರಾನ್​ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ

“ಅಮೆರಿಕನ್ ಭಯೋತ್ಪಾದಕ ಸೇನೆಯು ಕೆಂಪು ರೇಖೆಗಳನ್ನು ದಾಟಿದರೆ ನಮ್ಮ ಪ್ರತಿಕ್ರಿಯೆಯು ಬೇರೆಯದೇ ರೀತಿ ಇರುತ್ತದೆ. ನಾವು ನಾಗರಿಕ ಸೌಲಭ್ಯಗಳ ಮೇಲಿನ ಹೇಯ ಆಕ್ರಮಣಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ” ಎಂದು IRGC ತಿಳಿಸಿದೆ.

ಇಸ್ಲಾಮಿಕ್ ಗಣರಾಜ್ಯವು ನಿರ್ಣಾಯಕ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದನ್ನು ಒಳಗೊಂಡ ಒಪ್ಪಂದಕ್ಕೆ ಇರಾನ್ ಒಪ್ಪಿಕೊಳ್ಳಲು ನೀಡಿದ ಇತ್ತೀಚಿನ ಗಡುವನ್ನು ಇರಾನ್ ಪೂರೈಸದಿದ್ದರೆ “ಇಡೀ ನಾಗರಿಕತೆ ಇಂದು ರಾತ್ರಿ ನಾಶವಾಗುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

ಇರಾನ್‌ನಲ್ಲಿ ಎರಡು ಸೇತುವೆಗಳು ಮತ್ತು ರೈಲು ನಿಲ್ದಾಣದ ಮೇಲೆ ಅಮೆರಿಕದ ವಾಯುದಾಳಿಗಳು ನಡೆದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್‌ ನಟ ಅಕ್ಷಯ್ ಕುಮಾರ್ (Akshay Kumar) ಅವರು ಯಾವಾಗಲೂ ತಮ್ಮ ಶಿಸ್ತು ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಗುರುತಿಸಿಕೊಳ್ಳುವವರು. ಆದರೆ, ಇದೇ ಮೊದಲ ಬಾರಿಗೆ ಅವರ ಫ್ಯಾಷನ್ ಆಯ್ಕೆ ತಪ್ಪಾಗಿದೆ. ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಏಪ್ರಿಲ್ 6ರಂದು ‘ಭೂತ್ ಬಂಗ್ಲ’ (Bhoot Bangla) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಸಂಪೂರ್ಣವಾಗಿ ಹರಿದ ನೀಲಿ ಶರ್ಟ್ ಧರಿಸಿದ್ದರು. ಅದರ ಮೇಲೆ ಹರಿದ ಬ್ಲೇಜರ್ ಮತ್ತು ಕುತ್ತಿಗೆಗೆ ಎರಡು ಟೈಗಳನ್ನು ಧರಿಸಿ ವೇದಿಕೆ ಏರಿದ್ದರು. ಅವರ ಈ ಲುಕ್ ನೋಡಿ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ಅವರ ಈ ಅವತಾರದ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ತಮ್ಮ ಈ ವಿಚಿತ್ರ ಅವತಾರದ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಅವರೇ ಆ ವೇದಿಕೆಯ ಮೇಲೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಹಾರರ್-ಕಾಮಿಡಿ ಥೀಮ್‌ಗೆ ತಕ್ಕಂತೆ ಈ ಲುಕ್ ಮಾಡಲಾಗಿದ್ದು, ‘ಈ ಬಟ್ಟೆಯನ್ನು ದೆವ್ವಗಳು ಈ ರೀತಿ ಹರಿದಿವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ, ನೆಟ್ಟಿಗರು ಮಾತ್ರ ಇವರನ್ನು ಸುಮ್ಮನೆ ಬಿಟ್ಟಿಲ್ಲ. ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಈ ಹೊಸ ಫ್ಯಾಷನ್ ಪ್ರಯೋಗ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ‘ಅತಿಯಾದ ಹಣ ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತದೆ’ ಎಂದು ಒಬ್ಬರು ಟೀಕಿಸಿದ್ದಾರೆ. ‘ಇವರು ಒಬ್ಬ ಜೋಕರ್‌ ರೀತಿ ಕಾಣುತ್ತಿದ್ದಾರೆ’ ಎಂಬ ಕಮೆಂಟ್ ಕೂಡ ಬಂದಿದೆ. ‘ಬಡವರು ಹೀಗೆ ಮಾಡಿದರೆ ಚಪ್ರಿ ಅಂತಾರೆ. ಅದೇ ಶ್ರೀಮಂತರು ಹಾಕಿದರೆ ಅದು ಫ್ಯಾಷನ್’ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

‘ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅವರ ಬಟ್ಟೆಯನ್ನು ಪತ್ನಿ ಟ್ವಿಂಕಲ್ ಖನ್ನಾ ಆಯ್ಕೆ ಮಾಡುತ್ತಾರೆ. ಬಹುಶಃ ಹಿಂದಿನ ರಾತ್ರಿ ಇಬ್ಬರ ನಡುವೆ ಜಗಳವಾಗಿರಬೇಕು. ಅದಕ್ಕೆ ಟ್ವಿಂಕಲ್ ಹೀಗೆ ಸೇಡು ತೀರಿಸಿಕೊಂಡಿದ್ದಾರೆ ಅನ್ನಿಸುತ್ತದೆ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ‘ಭೂತ್ ಬಂಗ್ಲ’ ಸಿನಿಮಾದ ಪ್ರಚಾರವನ್ನು ಡಿಫರೆಂಟ್ ಆಗಿ ಮಾಡಲು ಪ್ರಯತ್ನಿಸಿದ ಅಕ್ಷಯ್ ಕುಮಾರ್ ಅವರು ಈ ರೀತಿ ಟ್ರೋಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಾ ಎಡವಟ್ಟು… ಅವೇಶ್ ಖಾನ್​ಗೆ ಬ್ಯಾನ್ ಭೀತಿ..!

IPL 2026: ಲಕ್ನೋ ಸೂಪರ್ ಜೈಂಟ್ಸ್ (LSG) ವೇಗಿ ಅವೇಶ್ ಖಾನ್ ಮತ್ತೊಮ್ಮೆ ತಮ್ಮ ವಿಲಕ್ಷಣ ಸಂಭ್ರಮಾಚರಣೆಯ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ರೋಚಕ ಪಂದ್ಯದಲ್ಲಿ ರಿಷಭ್ ಪಂತ್ ಬಾರಿಸಿದ ವಿನ್ನಿಂಗ್ ಶಾಟ್ ಬೌಂಡರಿ ಗೆರೆ ದಾಟುವ ಮೊದಲೇ, ಹೊರಗಡೆ ನಿಂತಿದ್ದ ಅವೇಶ್ ಖಾನ್ ಬ್ಯಾಟ್‌ನಿಂದ ಚೆಂಡನ್ನು ತಡೆದು ಸಂಭ್ರಮಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 10ನೇ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 1 ರನ್ ಬೇಕಿದ್ದಾಗ, ಪಂತ್ ಅವರು ಲಾಂಗ್-ಆನ್ ಕಡೆಗೆ ಚೆಂಡನ್ನು ಬಾರಿಸಿದರು. ಮುಂದಿನ ಬ್ಯಾಟರ್ ಆಗಿ ಕ್ರೀಸ್‌ಗೆ ಬರಲು ಪ್ಯಾಡ್ ಧರಿಸಿ ಸಜ್ಜಾಗಿದ್ದ ಅವೇಶ್ ಖಾನ್, ಬೌಂಡರಿ ಗೆರೆಯ ಹೊರಭಾಗದಲ್ಲಿ ನಿಂತಿದ್ದರು.

ಇತ್ತ ರಿಷಭ್ ಪಂತ್ ಬಾರಿಸಿದ ಚೆಂಡು ಬೌಂಡರಿ ಗೆರೆ ದಾಟುವ ಮೊದಲೇ ಉತ್ಸಾಹದಲ್ಲಿ ಓಡಿ ಬಂದ ಅವೇಶ್ ಖಾನ್, ತಮ್ಮ ಬ್ಯಾಟ್‌ನಿಂದ ಚೆಂಡನ್ನು ಮತ್ತೆ ಮೈದಾನದ ಒಳಕ್ಕೆ ಹೊಡೆದು ಸಂಭ್ರಮಿಸಿದರು.

ನಿಯಮ ಏನು ಹೇಳುತ್ತದೆ?

ಕ್ರಿಕೆಟ್‌ನ ನಿಯಮ 41 (ಅನ್ ಫೇರ್ ಪ್ಲೇ) ಮತ್ತು ನಿಯಮ 20.1 (ಡೆಡ್ ಬಾಲ್) ಪ್ರಕಾರ, ಮೈದಾನದ ಹೊರಗಿರುವ ಆಟಗಾರ ಪಂದ್ಯದ ಅವಧಿಯಲ್ಲಿ ಚೆಂಡನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿದರೆ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಬಹುದು. ಅಲ್ಲದೆ, ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡುವ ಅವಕಾಶವೂ ಇರುತ್ತದೆ.

ಸನ್ ರೈಸರ್ಸ್ ಹೈದರಾಬಾದ್ ತಂಡವು ಈ ಘಟನೆ ಸೇರಿದಂತೆ ಅಂಪೈರಿಂಗ್ ಕುರಿತಾದ ಇತರ ದೂರುಗಳ ಬಗ್ಗೆ ಬಿಸಿಸಿಐಗೆ ಅಧಿಕೃತವಾಗಿ ಪತ್ರ ಬರೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಒಂದು ವೇಳೆ ಈ ಘಟನೆಯನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದರೆ, ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಬಹುದು ಎಂದು ಕೆಲವು ವರದಿಗಳು ಸೂಚಿಸಿವೆ.

ಬಿಸಿಸಿಐ ಇದನ್ನು “ನಡವಳಿಕೆ ಸಂಹಿತೆ” (Code of Conduct) ಉಲ್ಲಂಘನೆ ಎಂದು ಪರಿಗಣಿಸಿದರೆ ಮಾತ್ರ ಈ ಕ್ರಮ ಕೈಗೊಳ್ಳಬಹುದು. ಹೀಗಾಗಿ ಇಲ್ಲಿ ಮ್ಯಾಚ್ ರೆಫರಿಯ ಪರಿಗಣನೆಯೊಂದಿಗೆ, ಬಿಸಿಸಿಐ ತೆಗೆದುಕೊಳ್ಳುವ ಕ್ರಮ ಕೂಡ ಮುಖ್ಯವಾಗುತ್ತದೆ.

ಆದರೆ ಈ ಬಗ್ಗೆ ಸನ್​ರೈಸರ್ಸ್ ಹೈದರಾಬಾದ್ ಆಟಗಾರರು ಯಾವುದೇ ಅಪೀಲ್ ಮಾಡಿರಲಿಲ್ಲ. ಇದಾಗ್ಯೂ ಇದೀಗ ಅವೇಶ್ ಖಾನ್ ಅವರ ಮಹಾ ಎಡವಟ್ಟಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

ಹಳೆಯ ನೆನಪು:

ಈ ಹಿಂದೆ 2023ರಲ್ಲಿ ಆರ್ ಸಿಬಿ ವಿರುದ್ಧ ಗೆದ್ದಾಗ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಅಪ್ಪಳಿಸಿ ಸಂಭ್ರಮಿಸಿದ್ದರು. ಆಗ ಅವರಿಗೆ ಪಂದ್ಯದ ಶುಲ್ಕದಲ್ಲಿ ದಂಡ ವಿಧಿಸಲಾಗಿತ್ತು. ಈಗ ಮತ್ತೆ ಇಂತಹದ್ದೇ ಒಂದು ‘ಅನಗತ್ಯ’ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: PSL 2026: ಡೇವಿಡ್ ವಾರ್ನರ್​ ಬಂಧನ

ಒಟ್ಟಾರೆಯಾಗಿ, ಈ ಘಟನೆಯನ್ನು “ಅನ್ ಫೇರ್ ಪ್ಲೇ” (Unfair Play) ಎಂದು ಪರಿಗಣಿಸಿ ಬಿಸಿಸಿಐ ಕ್ರಮ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ. ಒಂದು ವೇಳೆ ನಿಷೇಧ ಹೇರಲ್ಪಟ್ಟರೆ, ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿನ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.

 

 

Source link

ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ನವದೆಹಲಿ, ಏಪ್ರಿಲ್ 7: ಪರಮಾಣು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಭಾರತ ಪ್ರಮುಖ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲು ಮುಟ್ಟಿದೆ. ಏಪ್ರಿಲ್ 6, ಸೋಮವಾರ ಭಾರತಕ್ಕೆ ಅವಿಸ್ಮರಣೀಯ ದಿನಗಳಲ್ಲಿ ಒಂದೆನಿಸಬಹುದು. ತಮಿಳುನಾಡಿನ ಕಲ್ಪಕ್ಕಮ್​ನಲ್ಲಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಪ್ರಮುಖವಾದ ಸ್ವಾವಲಂಬನೆ (Criticality stage) ಹಂತ ಸಾಧಿಸಿದೆ. ಇನ್ನೊಂದು ಹಂತ ದಾಟಿಬಿಟ್ಟರೆ ಭಾರತಕ್ಕೆ ಮುಂದಿನ ನೂರಾರು ವರ್ಷ ಕಾಲ ವಿದ್ಯುತ್ ಸಮಸ್ಯೆ ಇಲ್ಲದಂತಾಗಬಹುದು.

ಭಾರತದಲ್ಲಿ ಯುರೇನಿಯಂ ಕೊರತೆ, ಆದರೆ, ಥೋರಿಯಂ ಸಮೃದ್ಧ…

ಸಾಂಪ್ರದಾಯಿಕ ಪರಮಾಣು ವಿದ್ಯುತ್ ಉತ್ಪಾದನೆಗೆ ಯುರೇನಿಯಂ ಅಗತ್ಯ. ಭಾರತದಲ್ಲಿ ಯುರೇನಿಯಂ ಕೊರತೆ ಇದೆ. ವಿಶ್ವದ ಶೇ. 1-2ರಷ್ಟು ಯುರೇನಿಯಂ ಮಾತ್ರವೇ ಭಾರತದಲ್ಲಿ ಇರುವುದು. ಇಷ್ಟರಿಂದ ಪರಮಾಣು ವಿದ್ಯುತ್ ಉತ್ಪಾದನೆ ದೀರ್ಘಕಾಲ ಸಾಧ್ಯವಿಲ್ಲ. ಬೇರೆ ದೇಶಗಳ ಯುರೇನಿಯಂ ಮೇಲೆ ಅವಲಂಬಿತವಾಗಬೇಕಾಗುತ್ತದೆ.

ಆದರೆ, ಭಾರತದಲ್ಲಿ ಥೋರಿಯಂ ಯಥೇಚ್ಛವಾಗಿದೆ. ವಿಶ್ವದ ಶೇ. 25ರಷ್ಟು ಥೋರಿಯಂ ಸಂಗ್ರಹ ಭಾರತದಲ್ಲಿ ಇದೆ. ಭಾರತಕ್ಕೆ 700 ವರ್ಷಗಳಿಗೆ ಆಗುವಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಈ ಥೋರಿಯಂ ಸಾಕಾಗುತ್ತದೆ. ಆದರೆ, ಥೋರಿಯಂ ಮಾತ್ರದಿಂದಲೇ ಪರಮಾಣು ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ. ಅದಕ್ಕೆ ಯುರೇನಿಯಂ ಬೇಕೇಬೇಕು. ಇದಕ್ಕೆ ಏನು ಪರಿಹಾರ? ಭಾರತೀಯ ವಿಜ್ಞಾನಿಗಳ ಕ್ಷಮತೆ, ಆವಿಷ್ಕಾರ, ತಂತ್ರಜ್ಞಾನ ಸಾಧನೆ ಕೆಲಸ ಮಾಡಿ ತೋರಿಸಿದೆ. ಅದುವೇ ಈಗ ಸುದ್ದಿಯಲ್ಲಿರುವ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್. ಇದು ಒಂದು ರೀತಿಯಲ್ಲಿ ಇಂಧನ ಬಳಸಿ, ಅದರಿಂದ ಹೆಚ್ಚು ಇಂಧನ ಉತ್ಪಾದಿಸುತ್ತದೆ. ಈ ಹಂತವನ್ನೇ ಕ್ರಿಟಿಕಾಲಿಟಿ ಸ್ಟೇಜ್ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ಅಮೆರಿಕ, ಜಪಾನ್, ಜರ್ಮನಿ ಮೊದಲಾದ ದೇಶಗಳಿಂದ ಸಾಧ್ಯವಾಗದ ಯೋಜನೆ

ಭಾರತ ಸಾಧಿಸಿರುವ ರೀತಿಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ನಿರ್ಮಿಸಲು ಹೋಗಿ ಕೈಸುಟ್ಟುಕೊಂಡ ದೇಶಗಳು ಅನೇಕ. ಅಮೆರಿಕ, ಜಪಾನ್, ಫ್ರಾನ್ಸ್, ಜರ್ಮನಿ, ಬ್ರಿಟನ್ ಮೊದಲಾದ ದೇಶಗಳು ತಮ್ಮ ಪ್ರಯತ್ನ ನಿಲ್ಲಿಸಿವೆ. ಆದರೆ, ಭಾರತ ಹಲವು ದಶಕಗಳಿಂದ ಮಾಡಿದ ಪ್ರಯತ್ನದ ಫಲ ಇವತ್ತು ಸಿಕ್ಕಿದೆ. ಭಾರತ ಈ ಪ್ರೋಟೋಟೈಪ್ ರಿಯಾಕ್ಟರ್​ಗಾಗಿ ಮಾಡಿದ 8,370 ಕೋಟಿ ರೂ ವೆಚ್ಚ ನೀರಲ್ಲಿ ಹೋಮ ಮಾಡಿದಂತಾಗಲಿಲ್ಲ.

ಭಾರತದ ಈ ಪರಮಾಣ ವಿದ್ಯುತ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?

ಅಲ್ಪ ಯುರೇನಿಯಂ ಮತ್ತು ಸಮೃದ್ಧ ಥೋರಿಯಂ ಬಳಸಿ ಪರಮಾಣು ವಿದ್ಯುತ್ ತಯಾರಿಸಲು ಭಾರತ ಹಾಕಿರುವ ಯೋಜನೆಯಲ್ಲಿ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಸಾಂಪ್ರದಾಯಿಕ ಪಿಎಚ್​ಡಬ್ಲ್ಯುಆರ್ ಅಥವಾ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್​ಗಳು ಯುರೇನಿಯಂನಿಂದ ಪ್ಲುಟೋನಿಯಂ ಅನ್ನು ತಯಾರಿಸುತ್ತವೆ. ನ್ಯೂಟ್ರಾನ್​ಗಳು ಇಲ್ಲಿ ಕರಾಮತ್ತು ಮಾಡುತ್ತವೆ. ಈ ಹಂತದಲ್ಲಿ ವಿದ್ಯುತ್ ಉತ್ಪಾದನೆ ಆಗುವುದರ ಜೊತೆಗೆ ಪ್ಲುಟೋನಿಯಂ ಕೂಡ ಸಂಗ್ರಹ ಆಗುತ್ತಾ ಹೋಗುತ್ತದೆ. ಈ ಹಂತದಲ್ಲಿ ಯುರೇನಿಯಂ ಅವಶ್ಯಕತೆ ಇರುತ್ತದೆ.

ಎರಡನೇ ಹಂತದಲ್ಲಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಬರುತ್ತದೆ. ಇಲ್ಲಿ ಪ್ಲುಟೋನಿಯಂ ಮತ್ತು ಥೋರಿಯಂ ಬಳಸಿ ಯುರೇನಿಯಂ-233 ಅನ್ನು ಉತ್ಪಾದಿಸಲಾಗುತ್ತದೆ. ಇದೇ ಈ ಹಂತದ ವೈಶಿಷ್ಟ್ಯತೆ. ಇಲ್ಲಿ ಇಂಧನ ಬಳಸಿ, ಅದಕ್ಕಿಂತ ಹೆಚ್ಚಿನ ಇಂಧನವನ್ನು ತಯಾರಿಸುತ್ತದೆ. ಬಹಳ ಪ್ರಮುಖವಾದ ಮೂರನೇ ಹಂತಕ್ಕೆ ಇದು ಬುನಾದಿ.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಮೂರನೇ ಹಂತದಲ್ಲಿ ಅಡ್ವಾನ್ಸ್ಡ್ ಹೆವಿ ವಾಟರ್ ರಿಯಾಕ್ಟರ್ಸ್ ಬರುತ್ತವೆ. ಇಲ್ಲಿ ಥೋರಿಯಂ-232 ಮತ್ತು ಯುರೇನಿಯಂ-233 ಮಿಶ್ರಣವನ್ನು ಇಂಧನವನ್ನಾಗಿ ಬಳಸುತ್ತದೆ. ಥೋರಿಯಂ ಮತ್ತು ನ್ಯೂಟ್ರಾನ್​ಗಳು ಸೇರಿ ಹೆಚ್ಚೆಚ್ಚು ಯುರೇನಿಯಂ-233 ಅನ್ನು ತಯಾರಿಸುತ್ತಾ ಹೋಗಲಾಗುತ್ತದೆ. ಹೀಗೆ, ಯುರೇನಿಯಂ ಅನ್​ಲಿಮಿಟೆಡ್ ಆಗಿ ಲಭ್ಯ ಇರುತ್ತದೆ. ಒಂದು ರೀತಿಯ ಇಂಧನ ಅಕ್ಷಯಪಾತ್ರೆ ಅದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರಿಬೇವಿನ ಎಲೆ ಇಲ್ಲದೆಯೇ ಅಡುಗೆ ಆಗಲ್ವಾ? ಆದ್ರೆ ಈ ಸಮಸ್ಯೆ ಇದ್ದಲ್ಲಿ ಇದನ್ನು ಬಳಸದಿರುವುದೇ ಒಳ್ಳೆಯದು

ನಾವು ಮಾಡುವ ಬಹುತೇಕ ಪ್ರತಿಯೊಂದು ಅಡುಗೆಯಲ್ಲೂ ಕರಿಬೇವಿನ ಎಲೆ (Curry Leaves) ಅಥವಾ ಒಗ್ಗರಣೆ ಸೊಪ್ಪು ಹಾಕಿಯೇ ಹಾಕುತ್ತೇವೆ. ಅದಿಲ್ಲದಿದ್ದರೆ ಅಡುಗೆ ಆಗುವುದೇ ಇಲ್ಲ. ಇದನ್ನು ಕೇವಲ ರುಚಿಗಾಗಿ ಮಾತ್ರವಲ್ಲದೆ, ಅದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಲೂ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ದರೂ ಕೂಡ ಎಲೆ ಎಲ್ಲರಿಗೂ ಸೂಕ್ತವಲ್ಲ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವಾಗ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಕರಿಬೇವಿನ ಎಲೆ ಯಾರಿಗೆ ಒಳ್ಳೆಯದಲ್ಲ, ಯಾಕೆ ಸೇವನೆ ಮಾಡಬಾರದು, ಇದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಕಡಿಮೆ ಶುಗರ್ ಸಮಸ್ಯೆಯಿರುವವರಿಗೆ ಒಳ್ಳೆಯದಲ್ಲ:

ಕರಿಬೇವಿನ ಸೊಪ್ಪು ಸ್ವಾಭಾವಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಲಾಭಕರವಾದರೂ, ಈಗಾಗಲೇ ಶುಗರ್ ಮಟ್ಟ ಕಡಿಮೆ ಇರುವವರು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೈಪೋಗ್ಲೈಸೀಮಿಯಾ ಅಪಾಯ ಹೆಚ್ಚುತ್ತದೆ. ಇದರಿಂದ ತಲೆ ಸುತ್ತುವುದು, ದೌರ್ಬಲ್ಯ ಕಾಣಿಸಿಕೊಳ್ಳಬಹುದು.

ಅಲರ್ಜಿ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು:

ಕೆಲವರಿಗೆ ಕೆಲವು ರೀತಿಯ ಸೊಪ್ಪು ಅಥವಾ ಮಸಾಲೆ ಸೇವನೆ ಮಾಡಿದಾಗ ಅಲರ್ಜಿ ಉಂಟಾಗುತ್ತದೆ. ಹಾಗೆಯೇ ಕರಿಬೇವಿನ ಎಲೆ ಕೆಲವರಿಗೆ ಆಗಿಬರುವುದಿಲ್ಲ. ಇದನ್ನು ತಿಂದ ನಂತರ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟ ಸಂಬಂಧಿ ತೊಂದರೆ ಕಂಡುಬರಬಹುದು. ಹಾಗಾದರೆ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು.

ಇದನ್ನೂ ಓದಿ: ಪ್ರತಿನಿತ್ಯ ಈ ಎಲೆ ತಿನ್ನಿ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ, ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತೆ

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ:

ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ದೇಹ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಕರಿಬೇವಿನ ಎಲೆಯ ರಸ ಅಥವಾ ಹೆಚ್ಚು ಪ್ರಮಾಣದಲ್ಲಿ ಕರಿಬೇವಿನ ಸೊಪ್ಪಿನ ಪುಡಿಯನ್ನು ಸೇವಿಸುವುದರಿಂದ ಕೆಲವರಿಗೆ ವಾಂತಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಉತ್ತಮ.

ಜೀರ್ಣಕ್ರಿಯೆ ಸಮಸ್ಯೆಯಿರುವವರು:

ಕರಿಬೇವಿನ ಸೊಪ್ಪು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಾಯಕವಾದರೂ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿರುವವರು ಹಸಿ ಎಲೆಯನ್ನು ನೇರವಾಗಿ ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು.

ಕಿಡ್ನಿ ಸಮಸ್ಯೆಯಿರುವವರು

ಕೆಲವು ಅಧ್ಯಯನಗಳ ಪ್ರಕಾರ, ಕಿಡ್ನಿ ಸೋಂಕು ಅಥವಾ ಡಯಾಲಿಸಿಸ್‌ನಲ್ಲಿರುವವರು ಯಾವುದೇ ಔಷಧೀಯ ಸಸ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. ಕರಿಬೇವಿನ ಎಲೆಯಲ್ಲಿರುವ ಕೆಲವು ಅಂಶಗಳು ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಬ್ಬರು ಮಕ್ಕಳು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ; ಬಾಲಕಿಯ ಮುಖಕ್ಕೇ ಐದಾರು ಬಾರಿ ಕಚ್ಚಿದ ಶ್ವಾನ

ಬೀದರ್, ಏ.7: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೆಚ್ಚಾಗಿ ಮಕ್ಕಳ ಮೇಲೆ ಈ ದಾಳಿಗಳು ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಇದೀಗ ಬೀದರ್ ಜಿಲ್ಲೆಯ ಲಾಲವಾಡಿ ಬಡಾವಣೆಯಲ್ಲಿ ಕಳೆದ 48 ಗಂಟೆಗಳಿಂದ ಬೀದಿನಾಯಿಗಳ ಹಾವಳಿ ಮಿತಿಮೀರಿದೆ. ರಸ್ತೆಯಲ್ಲಿ ಸಂಚರಿಸುವವರ ಮೇಲೆ ಮನಸೋಇಚ್ಛೆ ದಾಳಿ ನಡೆಸುತ್ತಿರುವ ನಾಯಿಗಳು, ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಗಾಯಗೊಳಿಸಿವೆ. ಈ ಘಟನೆಯಿಂದಾಗಿ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ.

ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ನಗರಸಭೆ ಅಥವಾ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ (ABC) ಸರಿಯಾಗಿ ನಡೆಯುತ್ತಿಲ್ಲ, ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ನಿವಾಸಿಗಳು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಾಕಿ ವೇತನ ಕೇಳಿದ್ದಕ್ಕೆ ‘ಸಿದ್ಧಗಂಗಾ ಟೂರ್ಸ್’ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?

ನಾಯಿ ಕಚ್ಚಿದ ನಂತರ ಬಡಾವಣೆಯ ಜನರು ಕೈಯಲ್ಲಿ ಕೋಲು ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ನಾಯಿಗಳನ್ನು ಸೆರೆಹಿಡಿಯಬೇಕು ಮತ್ತು ಮಕ್ಕಳ ಮೇಲೆ ದಾಳಿಯಾಗುವುದನ್ನು ತಪ್ಪಿಸಬೇಕು ಎಂದು ಲಾಲವಾಡಿ ಬಡಾವಣೆಯ ಜನರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನರ್ಸ್​​​​ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್: ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು

ತುಮಕೂರು, (ಏಪ್ರಿಲ್ 07): ವಿಚ್ಛೇದನ (divorce) ಬಯಸಿದ ಪತ್ನಿಗೆ (Wife) ಪತಿ (Husband) ಮಚ್ಚಿನೇಟು ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ. ದಂಪತಿ ನಡುವೆ ನಿನ್ನೆ (ಏಪ್ರಿಲ್ 06) ಗಲಾಟೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ಮಚ್ಚಿನೇಟಿನಿಂದ ಗಾಯಗೊಂಡಿರುವ ಪತ್ನಿ ನಾಗಮಣಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪತಿ ಮಾರುತಿ, ಇಂದು (ಏಪ್ರಿಲ್ 07) ಬೆಳಗ್ಗೆ ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನ ಸರ್ಕಾರಿ ಆಸ್ಪತ್ರೆಯ ನರ್ಸ್ ಆಗಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಎರಡು ಮಕ್ಕಳು ಸಹ ಇವೆ. ಮಾರುತಿ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರೆ, ನಾಗಮಣಿಗೆ ಮದುವೆ ನಂತರ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಆದ್ರೆ, ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದುಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ ಪತಿ ಮಾರುತಿಯಿಂದ ನಾಗಮಣಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಚಿಂತನೆ ನಡೆಸಿದ್ದಳು.

ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರವಾಗಿ ಕೊಂದ ಸಹೋದರ; ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು

ಇನ್ನೊಂದೆಡೆ ನಾಗಮಣಿಗೆ ಮತ್ತೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಮಾರುತಿಗೆ ಅನುಮಾನ ಬಂದಿದ್ದು, ಇದೇ ವಿಚಾರವಾಗಿ ಗಲಾಟೆ ಮಾಡಿದ್ದ. ಅಲ್ಲದೇ ಈ ಗಂಡ ಹೆಂಡತಿ ಜಗಳ ಮೈಸೂರಿನ ಸ್ಥಳೀಯ ಠಾಣೆ ಮೆಟ್ಟಿಲೇರಿತ್ತು. ಇದಾದ ಬಳಿಕ ಮೊನ್ನೆ ಗಂಡನ ಜೊತೆ ಕೋಟೆಯಲ್ಲಿ ವಾಸವಾಗಿದ್ದ ಮಕ್ಕಳ ನೋಡಲು ನಾಗಮಣಿ ಬಂದಿದ್ದಳು. ಈ ವೇಳೆ ದಂಪತಿ ನಡುವೆ ಮತ್ತೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಮಾರುತಿ, ಮಚ್ಚಿನಿಂದ ನಾಗಮಣಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳು ನಾಗಮಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು,  ಸದ್ಯ ನಾಗಮಣಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಇನ್ನೊಂದೆಡೆ ಪತಿ ಮಾರುತಿ ಇಂದು (ಏಪ್ರಿಲ್ 07) ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮೂರು ಪಂದ್ಯಗಳಿಗೆ ಆಸ್ಟ್ರೆಲಿಯನ್ ವೇಗಿ ಅಲಭ್ಯ

Source link

ಅಪ್ಪ-ಮಗಳಿಗೆ ಯಮನಾಗಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್: ಕಲಬುರಗಿ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ

ಕಲಬುರಗಿ, ಏ.7: ಕಲಬುರಗಿ ನಗರದ ರಿಂಗ್ ರಸ್ತೆಯ ಸೈಯದ್ ಚಿಂಚೋಳಿ ಕ್ರಾಸ್ (Sayyid Chincholi Cross) ಬಳಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ತಂದೆ ಮತ್ತು ಮಗಳಿಗೆ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್ (Cement Mixer Tanker) ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಟ್ಯಾಂಕರ್‌ನ ಚಕ್ರಗಳ ಅಡಿ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕಲಬುರಗಿಯ ರಾಣೇಶಪೀರ್ ದರ್ಗಾ ಪ್ರದೇಶದ ನಿವಾಸಿಗಳಾದ ರಾಜುಕುಮಾರ್ (45) ಮತ್ತು ಅವರ 14 ವರ್ಷದ ಮಗಳು ಸುಮಾ ಎಂದು ಗುರುತಿಸಲಾಗಿದೆ. ರಾಜುಕುಮಾರ್ ಅವರು ಮಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಒಂದೇ ಕುಟುಂಬದ ಇಬ್ಬರು ಸದಸ್ಯರು ಏಕಾಏಕಿ ಸಾವನ್ನಪ್ಪಿರುವುದು ದರ್ಗಾ ಪ್ರದೇಶದಲ್ಲಿ ಶೋಕದ ಛಾಯೆ ಮೂಡಿಸಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಅಪಘಾತದ ಮಾಹಿತಿ ದೊರೆತ ತಕ್ಷಣ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಸಿಮೆಂಟ್ ಮಿಕ್ಸರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version