Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ – Kannada News

ಸಿಂಗಾಪುರ, ಜೂನ್ 04: ಸಂಚಾರಿ ನಿಯಮಗಳನ್ನು (Traffic Rules) ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರು ಹೈಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಧರಿಸುವುದಿಲ್ಲ, ಗ್ರೀನ್ ಸಿಗ್ನಲ್ ಬರುವವರೆಗೂ ಕಾಯುವುದೇ ಇಲ್ಲ ವಾಹನ ಚಲಾಯಿಸಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡ್ತಾರೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ದೃಶ್ಯ. ಸಿಂಗಾಪುರದ (Singapore) ಖಾಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಟ್ರಾಫಿಕ್ ನಿಮಯ ಪಾಲಿಸಿದ್ದಾರೆ. ತಡರಾತ್ರಿ 1 ಗಂಟೆಯ ವೇಳೆ ವಾಹನಗಳಿಲ್ಲದ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು, ಆ ಬಳಿಕ ರಸ್ತೆ ದಾಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರಾಫಿಕ್ ರೂಲ್ಸ್ ಪಾಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃತಿಕಾ ಜೈನ್ (Kritika Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಅಭ್ಯಾಸವೋ, ಶಿಸ್ತೋ ತಿಳಿಯದು ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರಸ್ತೆಯಲ್ಲಿ ವಾಹನಗಳು ಓಡಾಡದೇ ಖಾಲಿ ಇರುವುದನ್ನು ಗಮನಿಸಬಹುದು. ಹೀಗಿರುವಾಗ ವ್ಯಕ್ತಿಯೊಬ್ಬರು ರೆಡ್ ಸಿಗ್ನಲ್ ಇರುವುದನ್ನು ಗಮನಿಸಿದ್ದಾರೆ. ಆ ಬಳಿಕ ಗ್ರೀನ್ ಸಿಗ್ನಲ್ ಬರುವವರೆಗೆ ಕಾದು ನಿಂತು ಆ ಬಳಿಕ ರಸ್ತೆ ದಾಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್​​ ವೈರಲ್​​

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಇವರೇ ನಿಜವಾದ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ಸಿಂಗಾಪುರದ ಕಠಿಣ ನಿಯಮಗಳೇ ಇಂತಹ ನಡವಳಿಕೆಗೆ ಕಾರಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ತಾವೇನೋ ಸಾಧನೆ ಮಾಡಿದ್ದಂತೆ ಅಂದುಕೊಂಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:13 am, Thu, 4 June 26

Source link

ಚತುರ ರಾಜತಾಂತ್ರಿಕ ನಡೆ: ಸವಾಲುಗಳ ನಡುವೆಯೇ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ ಶಾಸಕ ರಿತಬ್ರತ ಬ್ಯಾನರ್ಜಿ – Kannada News

ಕೋಲ್ಕತಾ, ಜೂನ್ 04: ಪಶ್ಚಿಮ ಬಂಗಾಳ(West Bengal)ದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ, ಸುಶಿಕ್ಷಿತ ಹಾಗೂ ತೀಕ್ಷ್ಣ ಸಂಭಾಷಣಾ ಚತುರ ನಾಯಕರೆಂದೇ ಗುರುತಿಸಲ್ಪಟ್ಟಿರುವ ರಿತಬ್ರತ ಬ್ಯಾನರ್ಜಿ ಪ್ರಸ್ತುತ ತಮಗಿರುವ ರಾಜಕೀಯ ಕೌಶಲ್ಯ ಮತ್ತು ಬೌದ್ಧಿಕ ಮೌಲ್ಯದ ಮೂಲಕ ಬಂಗಾಳದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ಆರಂಭಗೊಂಡು, ರಾಜ್ಯಸಭಾ ಸಂಸದರಾಗಿ ದೇಶದ ಗಮನ ಸೆಳೆದಿದ್ದ ಇವರು, ಇತ್ತೀಚೆಗೆ ಅಂದರೆ 2026 ರ ಚುನಾವಣೆಯಲ್ಲಿ ಉಲ್ಲುಬೇರಿಯಾ ಪುರ್ಬಾ ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ (MLA) ಆಯ್ಕೆಯಾಗುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ.

ವಿವಿಧ ಸೈದ್ಧಾಂತಿಕ ಏರುಪೇರುಗಳು ಮತ್ತು ರಾಜಕೀಯ ಬದಲಾವಣೆಗಳ ನಡುವೆಯೂ ಮುನ್ನಡೆದಿರುವ ರಿತಬ್ರತ ಬ್ಯಾನರ್ಜಿ ಅವರ ಈ ನಡೆ, ಬಂಗಾಳದ ರಾಜಕೀಯ ಭವಿಷ್ಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ಆಶಾದಾಯಕ ಮುನ್ನುಡಿಯಾಗಿದೆ.

ಭರವಸೆಯ ಯುವ ನಾಯಕತ್ವದಿಂದ ಶಾಸಕರಾಗುವವರೆಗಿನ ಯಶಸ್ವಿ ಪಯಣ
ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಿತಬ್ರತ ಬ್ಯಾನರ್ಜಿ ಅವರು ಆರಂಭದಿಂದಲೂ ತಮ್ಮ ಸ್ಪಷ್ಟ ಹಾಗೂ ಆಳವಾದ ಸಂಶೋಧನಾತ್ಮಕ ಭಾಷಣಗಳಿಗೆ ಹೆಸರುವಾಸಿಯಾದವರು.

ಎಸ್‌ಎಫ್‌ಐ ನಾಯಕತ್ವ: ಆರಂಭದಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐ (SFI)ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಯುವ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ನೆಚ್ಚಿನ ನಾಯಕರಾಗಿದ್ದ ಇವರು, ಕೇವಲ 35 ನೇ ವಯಸ್ಸಿಗೆ (2014 ರಲ್ಲಿ) ರಾಜ್ಯಸಭಾ ಸಂಸದರಾಗಿ ಸಂಸತ್ ಪ್ರವೇಶಿಸಿದರು.

ಟಿಎಂಸಿ ಮತ್ತು ಕಾರ್ಮಿಕ ಸಂಘಟನೆಗಳ ಸಾರಥ್ಯ: 2017 ರಲ್ಲಿ ಸಿಪಿಐ(ಎಂ)ನಿಂದ ಹೊರಬಂದ ನಂತರ, ಮಮತಾ ಬ್ಯಾನರ್ಜಿ ಅವರ ಕಲ್ಯಾಣ ರಾಜಕಾರಣವನ್ನು ಕಮ್ಯುನಿಸ್ಟ್ ಆದರ್ಶಗಳಿಗೆ ಹೋಲಿಸಿ ಮುಕ್ತವಾಗಿ ಶ್ಲಾಘಿಸಿದರು. ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ನಂಬಿಕೆ ಗಳಿಸಿ 2020 ರಲ್ಲಿ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ (TMC) ಸೇರಿದ ಇವರಿಗೆ ಪಕ್ಷದ ಪ್ರಮುಖ ಟ್ರೇಡ್ ಯೂನಿಯನ್ ಜವಾಬ್ದಾರಿಯನ್ನು ನೀಡಿ ಗೌರವಿಸಲಾಯಿತು.

ಮತ್ತಷ್ಟು ಓದಿ:
ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ರಾಜತಾಂತ್ರಿಕ ಜಾಣ್ಮೆ ಮತ್ತು ಭವಿಷ್ಯದ ಮುನ್ನೋಟ
ರಾಜ್ಯಸಭಾ ಅವಧಿ ಮುಗಿದ ನಂತರ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಿತಬ್ರತ ಬ್ಯಾನರ್ಜಿ ಅವರು, ಸದ್ಯ ಬಂಗಾಳ ವಿಧಾನಸಭೆಯಲ್ಲಿ ಜನಹಿತಕ್ಕಾಗಿ ಮತ್ತಷ್ಟು ದೃಢ ಹೆಜ್ಜೆಗಳನ್ನು ಇಡಲು ಮುಂದಾಗಿದ್ದಾರೆ.

ವ್ಯವಸ್ಥಿತ ಬದಲಾವಣೆಯ ಹಾದಿ: ವಿಧಾನಸಭೆಯಲ್ಲಿ ಸುವೇಂದು ಅಧಿಕಾರಿಯವರೊಂದಿಗಿನ ರಾಜಕೀಯ ಒಡಕು ಹಾಗೂ ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಬೆಂಬಲದೊಂದಿಗೆ ವಿರೋಧ ಪಕ್ಷದ ನಾಯಕರಾಗುವ ನಿಟ್ಟಿನಲ್ಲಿ ಕಂಡುಬರುತ್ತಿರುವ ರಾಜಕೀಯ ಚಟುವಟಿಕೆಗಳು ಅವರ ಚಾಣಾಕ್ಷ ತಂತ್ರಗಾರಿಕೆಯನ್ನು ಎತ್ತಿ ತೋರಿಸುತ್ತವೆ. ಪಕ್ಷದ ಆಂತರಿಕ ಬಿಕ್ಕಟ್ಟುಗಳನ್ನು ಮೀರಿ, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಹೊಸ ಬಲ ತರಲು ಅವರು ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯವಾಗಿವೆ.

ಹಿಂದೆ ವಿದ್ಯಾರ್ಥಿ ಚಳವಳಿಗಳ ಸಮಯದಲ್ಲಿ ಮತ್ತು ಸಂಸತ್ತಿನಲ್ಲಿ ಸಾರ್ವಜನಿಕರ ಧ್ವನಿಯಾಗಿ ಹೋರಾಡಿದ್ದ ರಿತಬ್ರತ ಬ್ಯಾನರ್ಜಿ ಅವರು, ಈಗಲೂ ಜನರ ಕಡೆಗಿನ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಬಂಗಾಳದ ರಾಜಕೀಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಹೊರಟಿರುವ ಇವರ ಈ ‘ರಾಜಕೀಯ ಸಾಹಸ’ವು ಯುವ ಪೀಳಿಗೆಗೆ ಹೊಸ ಆಶಾಕಿರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ? – Kannada News

ಉಚ್ಚಸ್ಥಾನದಲ್ಲಿ ಗುರುImage Credit source: Pinterest

ಕಾಲವನ್ನು ತಿಳಿಯುವ ಶಾಸ್ತ್ರದ ಪ್ರಕಾರ ಗುರುವು ಅತ್ಯಂತ ಶುಭ ಗ್ರಹ. ಗುರುವು ತನ್ನ ಉಚ್ಛ ರಾಶಿಯಾದ ಕರ್ಕಾಟಕದಲ್ಲಿದ್ದಾನೆ. ಇದು ಅತ್ಯಂತ ಬಲವಾದ ಸ್ಥಿತಿ. ಜೊತೆಗೆ ಚಂದ್ರನ ದ್ರೇಕ್ಕಾಣ ಮತ್ತು ಹೋರೆಯಲ್ಲಿ ಸ್ನೇಹಿತನ ವರ್ಗ, ರವಿಯ ನವಾಂಶಯಲ್ಲಿ ಮಿತ್ರನ ವರ್ಗದಲ್ಲಿದ್ದಾನೆ. ಆದರೆ ಬುಧನ ತ್ರಿಂಶಾಂಶ ಮತ್ತು ದ್ವಾದಶಾಂಶದಲ್ಲಿದ್ದಾನೆ. ಬುಧನು ಗುರುವಿಗೆ ಶತ್ರು/ಸಮ ಭಾವ ಹೊಂದಿದ್ದಾನೆ. ಒಟ್ಟಾರೆಯಾಗಿ ಹೇಳುವುದಾದರೆ, ಗುರುವು ಉಚ್ಛ ಸ್ಥಾನದಲ್ಲಿದ್ದರೂ ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದಾನೆ. ಈ ವಿಶಿಷ್ಟ ಸ್ಥಿತಿಯ 12 ರಾಶಿಗಳ ಫಲ ಇದು.

ಮೇಷ ರಾಶಿ:

​ನಿಮ್ಮ ರಾಶಿಗೆ ಗುರುವು ೪ನೇ ಮನೆಯಲ್ಲಿ ಸಂಚರಿಸುತ್ತಾನೆ. ಭೂಮಿ, ವಾಹನ ಮತ್ತು ಆಸ್ತಿ ಖರೀದಿ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆದರೆ ಬುಧನ ತ್ರಿಂಶಾಂಶದ ಪ್ರಭಾವದಿಂದ ಅನಾವಶ್ಯಕ ಕೌಟುಂಬಿಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಜಾಗ್ರತೆ ವಹಿಸಿ.

​ವೃಷಭ ರಾಶಿ:

​ನಿಮ್ಮ ರಾಶಿಗೆ ಗುರುವು ಮೂರನೇ ರಾಶಿಯಲ್ಲಿದ್ದರೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರುತ್ತವೆ. ಸಹೋದರ-ಸಹೋದರಿಯರಿಂದ ಸಹಕಾರ ಸಿಗಲಿದೆ. ರವಿಯ ನವಾಂಶದ ಪ್ರಭಾವದಿಂದ ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.

ಮಿಥುನ ರಾಶಿ:

​ನಿಮ್ಮ ರಾಶಿಗೆ ಗುರುವು ದ್ವಿತೀಯದಲ್ಲಿದ್ದರೆ, ಧನ ಲಾಭ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವದಿಂದ ನೆನೆಗುದಿಗೆ ಬಿದ್ದ ಕೆಲಸಗಳು ಯಶಸ್ವಿಯಾಗುತ್ತವೆ. ಬುಧನ ದ್ವಾದಶಾಂಶವಿರುವುದರಿಂದ ವ್ಯಾಪಾರದಲ್ಲಿ ಹೂಡಿಕೆ ಮಾಡುವಾಗ ಕೊಂಚ ಯೋಚಿಸಿ ನಿರ್ಧಾರ ತಗೊಳ್ಳಿ.

ಕರ್ಕಾಟಕ ರಾಶಿ:

​ಗುರುವು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಾನೆ ಮತ್ತು ಉಚ್ಛನಾಗಿರುತ್ತಾನೆ. ಅತ್ಯಂತ ಶುಭ ಕಾಲ. ಬುದ್ಧಿಶಕ್ತಿ, ಗೌರವ, ಕೀರ್ತಿ ಹೆಚ್ಚಾಗಲಿದೆ. ಆರೋಗ್ಯ ಸುಧಾರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಚಂದ್ರನ ಹೋರೆಯ ಪ್ರಭಾವದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಸಿಂಹ ರಾಶಿ:

ನಿಮ್ಮ ರಾಶಿಗೆ ಗುರುವು ದ್ವಾದಶದಲ್ಲಿ ಶುಭ ಕಾರ್ಯಗಳಿಗಾಗಿ ವೆಚ್ಚಗಳು ಹೆಚ್ಚಾಗಿಸುವನು. ವಿದೇಶ ಪ್ರಯಾಣದ ಯೋಗವಿದೆ. ರವಿಯ ನವಾಂಶವಿರುವುದರಿಂದ ಆಧ್ಯಾತ್ಮಿಕವಾಗಿ ದೊಡ್ಡ ಪ್ರಗತಿ ಕಾಣುವಿರಿ. ಆದರೆ ಕೋರ್ಟ್ ಕಚೇರಿ ವಿಚಾರಗಳಲ್ಲಿ ಜಾಗರೂಕರಾಗಿರಿ.

ಕನ್ಯಾ ರಾಶಿ:

ಈ ತಿಂಗಳಲ್ಲಿ ರಾಶಿಗೆ ಗುರುವು ಹನ್ನೊಂದನೇ ಮನೆಯಲ್ಲಿದ್ದು, ಲಾಭ ಸ್ಥಾನದಲ್ಲಿ ಗುರುವಿರುವುದರಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಹಿರಿಯ ಅಧಿಕಾರಿಗಳು ಮತ್ತು ಸ್ನೇಹಿತರಿಂದ ಬೆಂಬಲ ಸಿಗಲಿದೆ. ಬುಧನ ತ್ರಿಂಶಾಂಶದ ಪ್ರಭಾವದಿಂದ ಹಳೆಯ ಬಾಕಿ ವಸೂಲಾಗಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ.

​ತುಲಾ ರಾಶಿ:

​ಈ ರಾಶಿಗೆ ಗುರುವು ಹತ್ತನೇ ಮನೆಯಲ್ಲಿ ಇರಲಿದ್ದಾನೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಆದರೆ ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟ ಇರಬಹುದು. ಚಂದ್ರನ ದ್ರೇಕ್ಕಾಣದ ಪ್ರಭಾವದಿಂದ ಕಲಾ ಮತ್ತು ಕ್ರಿಯೇಟಿವ್ ರಂಗದಲ್ಲಿರುವವರಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ:

ಈ ರಾಶಿಗೆ ಗುರುವು ನವಮ ಸ್ಥಾನದಲದಲಿರುವ ಕಾರಣ ಭಾಗ್ಯೋದಯವಾಗುವ ಸಮಯ. ಅದೃಷ್ಟ ನಿಮ್ಮ ಕೈಹಿಡಿಯಲಿದೆ. ತಂದೆಯ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರಿಂದ ಲಾಭವಾಗಲಿದೆ. ದೀರ್ಘಾವಧಿ ಪ್ರಯಾಣಗಳು ಯಶಸ್ವಿಯಾಗುತ್ತವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

​ಧನು ರಾಶಿ:

​ನಿಮ್ಮ ರಾಶಿಗೆ ಗುರುವಿರುವುದು ಎಂಟನೇ ರಾಶಿಯಲ್ಲಿ. ಮಿಶ್ರ ಫಲಗಳು ಕಂಡುಬರುತ್ತವೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಅನಿರೀಕ್ಷಿತ ಧನಲಾಭ ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಆಗುವ ಸಂಭವವಿದೆ. ಬುಧನ ನಕಾರಾತ್ಮಕ ತ್ರಿಂಶಾಂಶ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಗಳಗಳಾಗಬಹುದು, ತಾಳ್ಮೆ ಇರಲಿ.

ಮಕರ ರಾಶಿ:

​ನಿಮ್ಮ ರಾಶಿಗೆ ಗುರುವು ಏಳನೇ ರಾಶಿಯಲ್ಲಿರುವುದು. ವಿವಾಹ ಆಕಾಂಕ್ಷಿಗಳಿಗೆ ಕಲ್ಯಾಣ ಯೋಗ ಕೂಡಿಬರಲಿದೆ. ಜಂಟಿ ಉದ್ಯೋಗ ಮಾಡುವವರಿಗೆ ಭರಪೂರ ಲಾಭ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಎಲ್ಲ ಕಡೆಯಿಂದ ಪೂರ್ಣ ಸಹಕಾರ ಸಿಗಲಿದೆ.

ಕುಂಭ ರಾಶಿ:

​ನಿಮ್ಮ ರಾಶಿಗೆ ಗುರುವು ಆರನೇ ರಾಶಿಯಲ್ಲಿ ಇದ್ದ ಕಾರಣ ಸಾಲ ಮತ್ತು ರೋಗಗಳಿಂದ ಮುಕ್ತಿ ಸಿಗುವ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ಆದರೆ ರವಿ ಮತ್ತು ಬುಧನ ಸೂಕ್ಷ್ಮ ದೃಷ್ಟಿಯಿಂದಾಗಿ ಗುಪ್ತ ಶತ್ರುಗಳ ಭಯವಿರಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ ಮತ್ತು ಕಾನೂನು ಬಾಹಿರ ಕೆಲಸಗಳಿಂದ ದೂರವಿರಿ.

ಮೀನ ರಾಶಿ:

ನಿಮ್ಮ ರಾಶಿಗೆ ಗುರುವು ಐದನೇ ಮನೆಯಲ್ಲಿರುತ್ತಾನೆ. ಸಂತಾನ ಯೋಗವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮತ್ತು ಯಶಸ್ಸು ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ. ನಿಮ್ಮ ಕ್ರಿಯೇಟಿವಿಟಿಗೆ ತಕ್ಕ ಮನ್ನಣೆ ಸಿಗಲಿದೆ.

-ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ? – Kannada News

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ (Shiva Rajkumar), ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲು ಕಂಡಿರುವ ರಾಮ್ ಚರಣ್​​ ಪಾಲಿಗೆ ಇದು ಬಲು ಮಹತ್ವದ ಸಿನಿಮಾ ಆಗಿದೆ. ಬುಚ್ಚಿಬಾಬು ಸನಾ ನಿರ್ದೇಶಿಸಿರುವ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಕ್ರೀಡಾಪಟು ಯುವಕನೊಬ್ಬನ ಸುತ್ತ ಕತೆ ಸುತ್ತುತ್ತದೆ.

‘ಪೆದ್ದಿ’ ಸಿನಿಮಾದ ಮೊದಲಾರ್ಧ ಏನಿದೆ? ಏನಿಲ್ಲ?

  1. ‘ಪೆದ್ದಿ’ ಆಟದ ಕತೆಯ ಜೊತೆಗೆ ಐಡೆಂಟಿಟಿಯ ಕತೆ
  2. ಮೊದಲಾರ್ಧ ನಾಯಕನ ಎಂಟ್ರಿ, ನಾಯಕಿಯ ಗ್ಲಾಮರ್, ಇತರೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲು.
  3. ಗುರುತೂ, ಇಲ್ಲದ ರಸ್ತೆಯೂ ಇಲ್ಲದ ಬೆಟ್ಟದ ಬುಡದ ಊರಿನ ಯುವಕ ಪೆದ್ದಿಯ ಕತೆ ಆರಂಭವಾಗುವುದು ಕ್ರಿಕೆಟ್ ಆಟದ ಜೊತೆ
  4. ಜಾನ್ಹವಿಯ ಎಂಟ್ರಿ ಸೂಪರ್, ಮೊದಲಾರ್ಧದಲ್ಲಿ ನಾಯಕಿ ಕೇವಲ ಗ್ಲಾಮರ್ ಗಷ್ಟೆ ಸೀಮಿತ.
  5. ಶಿವಣ್ಣನಿಗೆ ಮೊದಲಾರ್ಧದಲ್ಲಿ ಹೆಚ್ಚು ದೃಶ್ಯಗಳಿಲ್ಲ ಆದರೆ ಕತೆಗೆ ತಿರುವು ನೀಡುವುದು ಶಿವಣ್ಣನ ಪಾತ್ರ
    ಮೊದಲಾರ್ಧದ ಅಂತ್ಯಕ್ಕೆ ನಾಯಕನಿಗೆ ತನ್ನ ಗುರಿ ಏನೆಂಬುದು ತಿಳಿಯುತ್ತದೆ, ದ್ವಿತೀಯಾರ್ಧ ನಿಜವಾದ ಕತೆ ತೆರೆದುಕೊಳ್ಳಲಿದೆ
  6. ಮೊದಲಾರ್ಧದಲ್ಲಿ ಎರಡು ಹಾಡುಗಳಿದ್ದು ಎರಡೂ ಚೆನ್ನಾಗಿವೆ, ಅಲ್ಲಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
  7. ರಾಮ್ ಚರಣ್ ಆಕ್ಷನ್, ಡ್ಯಾನ್ಸ್ ಹಾಗೂ ಎಮೋಷನಲ್ ದೃಶ್ಯದಲ್ಲಿ ಗಮನ ಸೆಳೆಯುತ್ತಾರೆ
  8. ಮೊದಲಾರ್ಧ ಕೂಲಿಗಾಗಿ ಕ್ರಿಕೆಟ್ ಆಡುವ ನಾಯಕ, ಇಂಟರ್ವೆಲ್ ವೇಳೆಗೆ ಕುಸ್ತಿ ಅಖಾಡಕ್ಕೆ ಕಾಲಿಟ್ಟಿದ್ದಾನೆ.
  9. ಮೊದಲಾರ್ಧದಲ್ಲಿ ವಿಲನ್ ದಿವ್ಯೇಂದು ಗಮನ ಸೆಳೆಯುತ್ತಾರೆ. ಜಗಪತಿ ಬಾಬು ಪೋಷಕ ಪಾತ್ರ ಭಾವುಕವಾಗಿದೆ. ಬೊಮನ್ ಇರಾನಿಗೆ ಹೆಚ್ಚು ಕೆಲಸವಿಲ್ಲ.
  10. ಮೊದಲಾರ್ಧದಲ್ಲಿ ನಾಯಕಿ, ನಾಯಕನ ಭೇಟಿಯೇ ಆಗಿಲ್ಲ, ಪೆದ್ದಿ ಎಂಬ ವ್ಯಕ್ತಿ ಇದ್ದಾನೆಂಬುದು ಸಹ ನಾಯಕಿಗೆ ತಿಳಿಯದು

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿಯ ಹೊರತಾಗಿ ಬಾಲಿವುಡ್ ನಟ ದಿವ್ಯೇಂದು, ಬೊಮನ್ ಇರಾನಿ ಸಹ ನಟಿಸಿದ್ದಾರೆ. ಜಗಪತಿ ಬಾಬು ಸೇರಿದಂತೆ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಶಿವಣ್ಣನ ಪಾತ್ರ ಸಹ ಸಿನಿಮಾನಲ್ಲಿ ಹೈಲೆಟ್, ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:42 am, Thu, 4 June 26

Source link

ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ ಈ ಮಾರ್ಗದಲ್ಲಿ 2 ರೈಲುಗಳು ರದ್ದು, 6 ರೈಲುಗಳ ಸಂಚಾರ ಭಾಗಶಃ ರದ್ದು – Kannada News

ಬೆಂಗಳೂರು, ಜೂನ್ 4: ಬೆಂಗಳೂರಿನ (Bengaluru) ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವೆ ಹಳಿಗಳ ಇಂಜಿನಿಯರಿಂಗ್ ಕಾಮಗಾರಿ (ಲೈನ್ ಬ್ಲಾಕ್) ಹಮ್ಮಿಕೊಳ್ಳಲಾಗಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ. ಜೂನ್ 7 ಮತ್ತು ಜೂನ್ 8 ರಂದು ಎರಡು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, 6 ಮೆಮು (MEMU) ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಕಚೇರಿ ಹಾಗೂ ಇತರೆ ಕೆಲಸಗಳಿಗೆ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೋರಲಾಗಿದೆ.

ಸಂಚಾರ ರದ್ದಾಗಿರುವ ರೈಲುಗಳ ವಿವರ

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಜೂನ್ 8 ರಂದು ಸಂಚರಿಸಬೇಕಿದ್ದ ರೈಲು ಸಂಖ್ಯೆ 20623 ಅಶೋಕಪುರಂ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 20624 ಕೆಎಸ್ಆರ್ ಬೆಂಗಳೂರು – ಅಶೋಕಪುರಂ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಜೂನ್ 7 ರಂದು ಭಾಗಶಃ ರದ್ದಾಗುವ ರೈಲುಗಳು

  • ರೈಲು ಸಂಖ್ಯೆ 66533 (ಮರಿಕುಪ್ಪಂ – ಕೆ.ಆರ್. ಪುರಂ ಮೆಮು): ಈ ರೈಲು ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರಂ ನಡುವೆ ಭಾಗಶಃ ರದ್ದಾಗಲಿದ್ದು, ವೈಟ್‌ಫೀಲ್ಡ್ ನಿಲ್ದಾಣದಲ್ಲೇ ಪ್ರಯಾಣ ಕೊನೆಗೊಳಿಸಲಿದೆ (Short-terminate).
  • ರೈಲು ಸಂಖ್ಯೆ 66534 (ಕೆ.ಆರ್. ಪುರಂ – ಕುಪ್ಪಂ ಮೆಮು): ಈ ರೈಲು ಕೆ.ಆರ್. ಪುರಂ ಬದಲಿಗೆ ವೈಟ್‌ಫೀಲ್ಡ್ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
  • ರೈಲು ಸಂಖ್ಯೆ 66560 (ಅನಂತಪುರ – ಕೆಎಸ್ಆರ್ ಬೆಂಗಳೂರು ಮೆಮು): ಚನ್ನಸಂದ್ರ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಈ ರೈಲಿನ ಸಂಚಾರ ಕಡಿತಗೊಳಿಸಲಾಗಿದೆ.
  • ರೈಲು ಸಂಖ್ಯೆ 66520 (ಕೆಎಸ್ಆರ್ ಬೆಂಗಳೂರು – ಮರಿಕುಪ್ಪಂ ಮೆಮು): ಕೆಎಸ್ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದ್ದು, ಬೆಂಗಳೂರು ಬದಲಿಗೆ ವೈಟ್‌ಫೀಲ್ಡ್‌ನಿಂದಲೇ ಸಂಚಾರ ಆರಂಭಿಸಲಿದೆ.

ಜೂನ್ 8 ರಂದು ಭಾಗಶಃ ರದ್ದಾಗುವ ರೈಲುಗಳು

  • ರೈಲು ಸಂಖ್ಯೆ 66519 (ಮರಿಕುಪ್ಪಂ – ಕೆಎಸ್ಆರ್ ಬೆಂಗಳೂರು ಮೆಮು): ಈ ರೈಲು ವೈಟ್‌ಫೀಲ್ಡ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ವೈಟ್‌ಫೀಲ್ಡ್ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದೆ.
  • ರೈಲು ಸಂಖ್ಯೆ 66546 (ಕೆಎಸ್ಆರ್ ಬೆಂಗಳೂರು – ಮರಿಕುಪ್ಪಂ ಮೆಮು): ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದ ಬದಲಿಗೆ ವೈಟ್‌ಫೀಲ್ಡ್‌ನಿಂದಲೇ ನಿಗದಿತ ಸಮಯಕ್ಕೆ ಮರಿಕುಪ್ಪಂ ಕಡೆಗೆ ಸಂಚರಿಸಲಿದೆ.

ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ತಾತ್ಕಾಲಿಕ ಬದಲಾವಣೆ ಅನಿವಾರ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ನೈಋತ್ಯ ರೈಲ್ವೆ ವಿನಂತಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:20 pm, Thu, 4 June 26

Source link

ಸಚಿವ ಸ್ಥಾನ ಸಿಕ್ಕವರಿಗೂ, ಸಿಗದವರಿಗೂ ತಪ್ಪದ ಚಿಂತೆ: ‘ಕೈ’ ಪಾಳಯದಲ್ಲಿ ಮುಂದುವರಿದ ಅಂತೆಕಂತೆ – Kannada News

ಸಚಿವ ಸ್ಥಾನ ಸಿಕ್ಕವರಿಗೂ, ಸಿಗದವರಿಗೂ ತಪ್ಪದ ಚಿಂತೆImage Credit source: Tv9 Kannada

ಬೆಂಗಳೂರು, ಜೂನ್​​ 04: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar)​​ ನೇತೃತ್ವದ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಕಾಂಗ್ರೆಸ್​​ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಸಿಎಂ ಡಿಕೆಶಿ ಜೊತೆ ನಿನ್ನೆ (ಜೂನ್​ 03) ಡಿಸಿಎಂ ಆಗಿ ಡಾ.ಜಿ. ಪರಮೇಶ್ವರ್​​ ಮತ್ತು 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಹಂತದಲ್ಲಿ ಕೆಲ ನಾಯಕರಷ್ಟೇ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಸಾಕಷ್ಟು ಚರ್ಚೆ ಬಳಿಕ ಈ ನಿರ್ಧಾರಕ್ಕೆ ಕಾಂಗ್ರೆಸ್​​ ಹೈಕಮಾಂಡ್​​ ಬಂದಿತ್ತು. ಹೀಗಾಗಿ ರಾಜ್ಯ ಕಾಂಗ್ರೆಸ್​​ ನಾಯಕರ ನಡುವೆಯೇ ಹತ್ತು ಹಲವು ಲೆಕ್ಕಾಚಾರಗಳು ಶುರುವಾಗಿವೆ.

ನೂತನ ಸಚಿವರಿಗೆ ಯಾವ ಖಾತೆ?

ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರುಗಳಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಂಭವನೀಯ ಖಾತೆಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರು ಸಚಿವ ಎಂ.ಬಿ.ಪಾಟೀಲ್, ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಹೇಳಿದ್ದನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ ಎಂದಿದ್ದಾರೆ. ಯಾವುದೇ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸುತ್ತೇನೆ. ಖಾತೆ ಯಾವುದು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯ ಆಗುತ್ತೆ ಎಂದು ಮತ್ತೋರ್ವ ಸಚಿವ ಯು.ಟಿ. ಖಾದರ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ; ಬಿಕೆ ಹರಿಪ್ರಾಸದ್​​​ ಒಂದೇ ದಿನ ಡಬಲ್ ಧಮಾಕ

ಎರಡನೇ ಪಟ್ಟಿಯ ಬಗ್ಗೆ ಹೆಚ್ಚಿದ ಚಿಂತೆ

ಇನ್ನು ಡಿಕೆಶಿ ಸಂಪುಟಲ್ಲಿ ಸಚಿವರಾಗಲಿರುವ ಶಾಸಕರ ಎರಡನೇ ಪಟ್ಟಿಯನ್ನು ಹೈಕಮಾಂಡ್​​ ರಿಲೀಸ್​​ ಮಾಡಬೇಕಿದ್ದು, ಅದರಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎಂಬುದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಂತೋಷ್​​ ಲಾಡ್​​ ಸೇರಿದಂತೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದ ಅನೇಕರು ಮತ್ತೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರೆ, ಮೊದಲ ಬಾರಿ ಶಾಸಕರಾದವರು ಮತ್ತು ಹಿರಿಯ ನಾಯಕರಾಗಿಯೂ ಈವರೆಗೆ ಸಚಿವ ಸ್ಥಾನ ಸಿಗದವರು ಕೂಡ ರೇಸ್​​ನಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್​​ ಲಾಡ್​​, ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿದೆ ಎಂಬ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ‘ಕಾಕ್ರೋಚ್ ಜನತಾ ಪಕ್ಷ’ದ ಶಾಂತಿಯುತ ಹೆಜ್ಜೆ: ಹೊಸ ವಕ್ತಾರರ ನೇಮಕ, ಜೂನ್ 6 ರಂದು ಬೃಹತ್ ಜಾಗೃತಿ ರ‍್ಯಾಲಿ – Kannada News

ನವದೆಹಲಿ, ಜೂನ್ 04: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ದೇಶದ ಯುವಕರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಯುವ ರಾಜಕೀಯ ಚಳವಳಿಯಾದ ‘ಕಾಕ್ರೋಚ್ ಜನತಾ ಪಕ್ಷ’ (CJP) ಮಹತ್ವದ ಸಕಾರಾತ್ಮಕ ನಿರ್ಧಾರಗಳನ್ನು ಪ್ರಕಟಿಸಿದೆ.  ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ತನ್ನ ಹೊಸ ಸಂವಹನ ಸಮಿತಿಯನ್ನು ರಚಿಸಿದ್ದು, ಪ್ರತಿಭಾವಂತ ಯುವ ನಾಯಕರಿಗೆ ಜವಾಬ್ದಾರಿ ನೀಡಿದೆ.

ಪ್ರಮುಖ ವಕ್ತಾರರ ನೇಮಕ
ಪಕ್ಷದ ಧ್ವನಿಯಾಗಿ ಮಾಧ್ಯಮಗಳನ್ನು ಮುನ್ನಡೆಸಲು ಮೂವರು ಪ್ರಮುಖ ಗಣ್ಯರನ್ನು ಅಧಿಕೃತ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ: ಸೌರವ್ ದಾಸ್: ತನಿಖಾ ಪತ್ರಕರ್ತರಾದ ಇವರು ರಾಷ್ಟ್ರೀಯ ವಕ್ತಾರರಾಗಿ ನೇತೃತ್ವ ವಹಿಸಲಿದ್ದಾರೆ. ವಿಜೇತಾ ದಹಿಯಾ: ಪ್ರಸಿದ್ಧ ರಾಜಕೀಯ ವಿದ್ವಾಂಸೆ ಹಾಗೂ ಚಲನಚಿತ್ರ ನಿರ್ಮಾಪಕಿ. ಅಶುತೋಷ್ ರಂಕಾ: ಕಾರ್ಪೊರೇಟ್ ವಲಯದ ಮಾಜಿ ನಿರ್ವಹಣಾ ತಜ್ಞ.

ಪ್ರಮುಖ ಬೇಡಿಕೆಗಳು ಮತ್ತು ಸಾರ್ವಜನಿಕ ಬೆಂಬಲ
NEET, SSC GD ಮತ್ತು CBSE ಪರೀಕ್ಷೆಗಳಲ್ಲಿ ವರದಿಯಾಗಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಸಾಂಸ್ಥಿಕ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಪಕ್ಷವು ಒತ್ತಾಯಿಸಿದೆ.

8 ಲಕ್ಷಕ್ಕೂ ಹೆಚ್ಚು ಸಹಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಹಮ್ಮಿಕೊಂಡಿದ್ದ ಆನ್‌ಲೈನ್ ಅರ್ಜಿಗೆ ಈಗಾಗಲೇ 800,000 ಕ್ಕೂ ಹೆಚ್ಚು ನಾಗರಿಕರು ಬೆಂಬಲ ಸೂಚಿಸಿದ್ದಾರೆ. ಇಬ್ಬರು ಅಧಿಕಾರಿಗಳ ವರ್ಗಾವಣೆಗಿಂತಲೂ, ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಿಜೆಪಿ ವಕ್ತಾರರು ಪ್ರಬುದ್ಧವಾಗಿ ಪ್ರತಿಪಾದಿಸಿದ್ದಾರೆ.

ಮತ್ತಷ್ಟು ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನ ಬಾಂಗ್ಲಾದೇಶದಲ್ಲೇ ಹೆಚ್ಚು ಫಾಲೋವರ್ಸ್‌: ಇದು ದೊಡ್ಡ ಸಂಚು ಎಂದ ನೆಟ್ಟಿಗರು

ಜೂನ್ 6 ರ ಶಾಂತಿಯುತ ಪ್ರತಿಭಟನೆ
ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಜೂನ್ 6 ರ ಶನಿವಾರದಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಈ ಆಂದೋಲನಕ್ಕೆ ದೇಶದ ಹೆಮ್ಮೆಯ ಪರಿಸರ ಹೋರಾಟಗಾರ್ತಿ ಸೋನಮ್ ವಾಂಗ್‌ಚುಕ್ ಅವರು ಕೂಡ ತಮ್ಮ ಬೆಂಬಲ ಪ್ರಕಟಿಸಿದ್ದಾರೆ.

ಜೂನ್ 6 ರಂದು ಬೆಳಗ್ಗೆ 8 ಗಂಟೆಗೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ದೆಹಲಿ ತಲುಪಲಿದ್ದಾರೆ. ಅಲ್ಲಿಂದ ಇಡೀ ತಂಡವು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಪ್ರತಿಭಟನೆಗೆ ಗೊತ್ತುಪಡಿಸಲಾದ ಅಧಿಕೃತ ಸ್ಥಳವಾದ ‘ಜಂತರ್ ಮಂತರ್’ನಲ್ಲಿ ಶಾಂತಿಯುತ ಪ್ರದರ್ಶನ ನಡೆಸಲು ಕಾನೂನುಬದ್ಧವಾಗಿ ಅನುಮತಿ ಕೋರಲಿದೆ.

ಇದು ಯಾವುದೇ ಒಂದು ಪಕ್ಷದ ವಿರುದ್ಧದ ಹೋರಾಟವಲ್ಲ, ಬದಲಿಗೆ ದೇಶದ ಯುವಕರ ನಂಬಿಕೆಯನ್ನು ಪುನಃಸ್ಥಾಪಿಸುವ ಪ್ರಯತ್ನವಾಗಿದೆ. ಆದ್ದರಿಂದ ಯಾವುದೇ ನಿರ್ದಿಷ್ಟ ರಾಜಕೀಯ ಬ್ಯಾನರ್ ಇಲ್ಲದೆ, ದೇಶದ ಯುವಜನತೆ ಮತ್ತು ಎಲ್ಲಾ ಸಂಘಟನೆಗಳು ಕಟ್ಟುನಿಟ್ಟಾಗಿ ಕಾನೂನಿನ ಮಿತಿಯೊಳಗೆ ಈ ಶಾಂತಿಯುತ ಜಾಗೃತಿಯಲ್ಲಿ ಭಾಗವಹಿಸಬೇಕಾಗಿ ಸಿಜೆಪಿ ಮುಕ್ತ ಆಹ್ವಾನ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:08 pm, Thu, 4 June 26

Source link

SBI Recruitment 2026: SBI ನಲ್ಲಿ 7,150 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣಾವಕಾಶ – Kannada News

SBI ನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿImage Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಅವಕಾಶ ನೀಡಿದೆ. SBI ತನ್ನ ಅಪ್ರೆಂಟಿಸ್ ನೇಮಕಾತಿ 2026ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ದೇಶಾದ್ಯಂತ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಮೇ 19 ರಿಂದ ಜೂನ್ 8, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಉತ್ತಮ ಅವಕಾಶವೆಂದು ಪರಿಗಣಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯವಾಗಿ 20 ರಿಂದ 28 ವರ್ಷ ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅಭ್ಯರ್ಥಿಗಳ ಆಯ್ಕೆಗಾಗಿ ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಸ್ಥಳೀಯ ಭಾಷಾ ಪರೀಕ್ಷೆ (Local Language Test) ಹಾಗೂ ಅಗತ್ಯವಿರುವ ಇತರೆ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಇದನ್ನೂ ಓದಿ: Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಸ್ಟೈಪೆಂಡ್ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ಅವಧಿಯಲ್ಲಿ ತಿಂಗಳಿಗೆ 15,000ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಆದರೆ ಇದು ಶಾಶ್ವತ ಉದ್ಯೋಗವಲ್ಲ; ತರಬೇತಿ ಕಾರ್ಯಕ್ರಮ ಮಾತ್ರವಾಗಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಗಳಿಸಲು ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬಯಸುವ ಪದವೀಧರರಿಗೆ SBI ಅಪ್ರೆಂಟಿಸ್ ಯೋಜನೆ ಉತ್ತಮ ಅವಕಾಶವಾಗಿದೆ.

ವಿವರವಾದ SBI ಅಪ್ರೆಂಟಿಸ್ ನೇಮಕಾತಿ 2026 ಅಧಿಸೂಚನೆಯನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ನೇರ ಲಿಂಕ್​ಗೆ ಇಲ್ಲಿ ಕ್ಲಿಕ್​ ಮಾಡಿ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗಾಯಗೊಂಡ ವಿರಾಟ್ ಕೊಹ್ಲಿ; ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಿಂದ ಔಟ್ – Kannada News

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್ ಹೊರತುಪಡಿಸಿ ಅವರ ಆಟ ನೋಡ ಸಿಗೋದು ಏಕದಿನ ಪಂದ್ಯಗಳಲ್ಲಿ ಮಾತ್ರ. ಅವರು ಅಪ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಬೇಕಿತ್ತು. ಆದರೆ, ಸ್ನಾಯು ಸೆಳೆತದ ಕಾರಣದಿಂದ ಈ ಸರಣಿಯಿಂದ ಹೊರ ನಡೆದಿದ್ದು, ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಅಪ್ಘಾನಿಸ್ತಾನ ತಂಡ ಭಾರತಕ್ಕೆ ಆಗಮಿಸುತ್ತಿದ್ದು, ಜೂನ್ 6-10ರವರೆಗೆ ಒಂದು ಟೆಸ್ಟ್ ಪಂದ್ಯ ಆಡಲಿದೆ. ಜೂನ್ 13ರಿಂದ ಮೂರು ಏಕದಿನ ಸರಣಿಗಳು ನಡೆಯಲಿವೆ. ಆದರೆ, ಇಂಜೂರಿ ಕಾರಣದಿಂದ ಕೊಹ್ಲಿ ಅವರು ಈ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಇದೆ. ಇನ್ನು, ಹಿರಿಯ ಆಟಗಾರ ರೋಹಿತ್ ಶರ್ಮಾ ಅವರ ಇರುವಿಕೆ ಕೂಡ ಖಾತ್ರಿ ಆಗಿಲ್ಲ. ಐಪಿಎಲ್ ಸಂದರ್ಭದಲ್ಲಿ ಅವರೂ ಗಾಯಕ್ಕೆ ಒಳಗಾಗಿ, ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು. ಇಬ್ಬರು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಅಪ್ಘಾನಿಸ್ತಾನದ ವಿರುದ್ಧ ಕಣಕ್ಕೆ ಇಳಿಯಬೇಕಿದೆ.

ವಿರಾಟ್ ಕೊಹ್ಲಿ ಅವರು ಗಾಯದ ಕಾರಣ ನೀಡಿ ಪಂದ್ಯಗಳಿಂದ ಹೊರಗೆ ಉಳಿದಿದ್ದು ತುಂಬಾನೇ ಕಡಿಮೆ. ಈ ಬಾರಿಯ ಐಪಿಎಲ್ ಫೈನಲ್ ವೇಳೆ ಅವರ ಬ್ಯಾಟ್​ನಿಂದ 75 ರನ್​​ಗಳು ಬಂದಿದ್ದವು. ಕಾಲಿನಲ್ಲಿ ಉಂಟಾದ ಸಮಸ್ಯೆ ಅವರ ಆಟದ ಮೇಲೆ ನೇರ ಪರಿಣಾಮ ಬೀಳುತ್ತಾ ಇತ್ತು. ಅವರು ಗಾಯದ ಮಧ್ಯೆಯೂ ಆಟ ಮುಂದುವರಿಸಿದ್ದರು. ಈಗ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರು ಈ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ

ಆರ್​​ಸಿಬಿ ಸತತ ಎರಡನೇ ಬಾರಿ ಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಸೇರಿ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ದೀರ್ಘ ಹಾಗೂ ಒತ್ತಡದ ಕ್ರಿಕೆಟ್ ಸೀಸನ್ ಮುಗಿದ ನಂತರ, ಮನಸ್ಸಿನ ಶಾಂತಿ ಮತ್ತು ಧನ್ಯತಾ ಭಾವದೊಂದಿಗೆ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಪ್ರಸಿದ್ಧ ಆಶ್ರಮಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಾರೋ ದ್ವೀಪಗಳಲ್ಲಿ700ಕ್ಕೂ ಅಧಿಕ ತಿಮಿಂಗಿಲ ಹಾಗೂ ಡಾಲ್ಫಿನ್​ಗಳ ಹತ್ಯಾಕಾಂಡ – Kannada News

ಡಾಲ್ಫಿನ್​ಗಳು Image Credit source: The Whales and Dolphins conservation

ಟೋರ್ಶಾವ್ನ್, ಜೂನ್ 04: ಉತ್ತರ ಅಟ್ಲಾಂಟಿಂಕ್ ಮಹಾಸಾಗರದಲ್ಲಿರುವ ಡೆನ್ಮಾರ್ಕ್​ನ ಫಾರೋ ದ್ವೀಪಗಳಲ್ಲಿ ಇತ್ತೀಚಿಗೆ 700ಕ್ಕೂ ಹೆಚ್ಚು ತಿಮಿಂಗಿಲ(Whales) ಗಳು ಹಾಗೂ ಡಾಲ್ಫಿನ್​ಗಳನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರತಿ ವರ್ಷವೂ ಕೂಡ ಜನರು ಇವುಗಳನ್ನು ಬೇಟೆಯಾಡುತ್ತಾರೆ ಅದಕ್ಕೆ ಗ್ರೈಂಡ್ ಡ್ರಾಪ್ ಎಂದು ಹೆಸರು. ಜಾಗತಿಕ ಪರಿಸರ ಸಂರಕ್ಷಣಾ ಸಂಸ್ಥೆಯಾದ ‘ಸೀ ಶೆಫರ್ಡ್’ (Sea Shepherd) ಮತ್ತು ‘ಓಷನ್ ಕೇರ್’ (OceanCare) ವರದಿಗಳ ಪ್ರಕಾರ, ಇತ್ತೀಚಿನ ಮೂರು ಪ್ರತ್ಯೇಕ ಬೇಟೆಗಳಲ್ಲಿ ಒಟ್ಟು 706 ಪೈಲಟ್ ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳನ್ನು ಕರಾವಳಿಗೆ ತಂದು ಹಿಡಿಯಲಾಗಿದೆ.

ಈ ಘಟನೆಯು ಜಾಗತಿಕ ಮಟ್ಟದಲ್ಲಿ ಪ್ರಾಣಿ ಹಿಂಸೆ ತಡೆಗಟ್ಟುವಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವಿನ ಸಮತೋಲನದ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವ್ಯಾಪಕ ಸಕಾರಾತ್ಮಕ ಒತ್ತಡವನ್ನು ಸೃಷ್ಟಿಸಿದೆ.

ಜಾಗತಿಕ ಎನ್‌ಜಿಒಗಳ ಜಾಗೃತಿ ಮತ್ತು ನಿಗಾ
ಮೇ ಕೊನೆಯ ವಾರದಲ್ಲಿ ದ್ವೀಪದ ರಾಜಧಾನಿ ಟೋರ್ಶಾವ್ನ್ ಸೇರಿದಂತೆ ಮೂರು ಪ್ರಮುಖ ಕೊಲ್ಲಿಗಳಲ್ಲಿ ಈ ಬೇಟೆಗಳು ನಡೆದಿವೆ.
ಈ ಬಾರಿಯ ಬೇಟೆಯಲ್ಲಿ ಪ್ರಾಣಿಗಳನ್ನು ಬೇಗನೆ ನಿಷ್ಕ್ರಿಯಗೊಳಿಸುವ ಕಡ್ಡಾಯ ಆಧುನಿಕ ಉಪಕರಣಗಳ ಕೊರತೆಯಿದ್ದ ಕಾರಣ, ಪ್ರಕ್ರಿಯೆಯು ವಿಳಂಬವಾಯಿತು ಮತ್ತು ಪ್ರಾಣಿಗಳು ದೀರ್ಘಕಾಲದವರೆಗೆ ಒತ್ತಡವನ್ನು ಅನುಭವಿಸಿದವು ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: ಉತ್ತರ ಕನ್ನಡ: 35 ಮೀ. ಉದ್ದದ ನೀಲಿ ತಿಮಿಂಗಿಲದ ಮೃತದೇಹ ಪತ್ತೆ; ಇಲ್ಲಿದೆ ಫೋಟೋಸ್

ವೈಕಿಂಗ್ ಸಂಪ್ರದಾಯ
ಸುಮಾರು 1,000 ವರ್ಷಗಳಷ್ಟು ಹಳೆಯದಾದ ವೈಕಿಂಗ್ ಸಂಪ್ರದಾಯವನ್ನು ಸ್ಥಳೀಯ ಸರ್ಕಾರ ಮತ್ತು ಅದರ ಬೆಂಬಲಿಗರು ದ್ವೀಪದ ಪ್ರಮುಖ ‘ಸಾಂಸ್ಕೃತಿಕ ಗುರುತು’ ಮತ್ತು ಸಮುದಾಯಕ್ಕೆ ನೈಸರ್ಗಿಕ ಆಹಾರ ಒದಗಿಸುವ ಮೂಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಪ್ರಸ್ತುತ ಫಾರೋ ದ್ವೀಪಗಳು ಆಧುನಿಕ ಮತ್ತು ಉನ್ನತ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿರುವುದರಿಂದ, ಇಂತಹ ಹಳೆಯ ಅಭ್ಯಾಸಗಳ ಬದಲಾಗಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ವ್ಯಾಪಾರ ಒಪ್ಪಂದಗಳ ಪರಿಶೀಲನೆ: ಯುನೈಟೆಡ್ ಕಿಂಗ್‌ಡಮ್ (UK) ಸಂಸತ್ತಿನ 72 ಕ್ಕೂ ಹೆಚ್ಚು ಸಂಸದರು ಈ ಸಾಂಪ್ರದಾಯಿಕ ವಧೆಯನ್ನು ಖಂಡಿಸಿದ್ದು, 2026 ರ ಕೊನೆಯಲ್ಲಿ ನಡೆಯಲಿರುವ ಫಾರೋ ದ್ವೀಪಗಳೊಂದಿಗಿನ ಜಾಗತಿಕ ವ್ಯಾಪಾರ ಒಪ್ಪಂದಗಳ ಮರುಪರಿಶೀಲನೆಯಲ್ಲಿ ಪ್ರಾಣಿ ಕಲ್ಯಾಣದ ಮಾನದಂಡಗಳನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version