ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ಮೊರಾದಾಬಾದ್, ಏಪ್ರಿಲ್ 06: ಅಂದು ಮನೆಯಲ್ಲಿ ಎರಡೆರಡು ಮದುವೆ(Marriage), ಮನೆಯ ತುಂಬಾ ನೆಂಟರಿಷ್ಟರು ತುಂಬಿದ್ದರು. ಎಲ್ಲಾ ವಿಧಿ ವಿಧಾನಗಳು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಮದುವೆಯಲ್ಲಾ ಮುಗಿದ ಬಳಿಕ ತಂದೆ ಮಗಳನ್ನು ವರನ ಜತೆ ಕಳುಹಿಸಲು ನಿರಾಕರಿಸಿದ್ದಷ್ಟೇ ಅಲ್ಲದೆ ಈ ಮದುವೆ ಮುರಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಅಂದು ಎರಡು ವಿವಾಹಗಳು ನೆರವೇರಿದ್ದವು. ಮದುವೆಯ ವಿಧಿ ವಿಧಾನಗಳು ಮುಗಿದಿದ್ದವು. ಆದರೆ ತಂದೆ ವಧುವನ್ನು ಬೀಳ್ಕೊಡಲು ನಿರಾಕರಿಸಿದ್ದಾರೆ. ವರನ ತಪ್ಪಿನಿಂದಾಗಿ ಮದುವೆ ಮೆರವಣಿಗೆ ವಧು ಇಲ್ಲದೆ ಹಿಂದಿರುಗಬೇಕಾಯಿತು.

ಮೊರಾದಾಬಾದ್‌ನ ಸುರ್ಜನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ, ಶನಿವಾರ ಒಂದೇ ಮನೆಯಿಂದ ಎರಡು ವಿವಾಹ ಮೆರವಣಿಗೆಗಳು ಹೊರಡಬೇಕಿತ್ತು. ಒಬ್ಬ ಮಗಳನ್ನು ಸಂತಸದಿಂದ ಬೀಳ್ಕೊಟ್ಟರು ಆದರೆ ಮತ್ತೊಬ್ಬ ಮಗಳ ಸರದಿ ಬಂದಾಗ, ತಂದೆ ಮಗಳನ್ನು ಕಳುಹಿಸುವುದಿಲ್ಲ ಎಂದಾಗ ಗೊಂದಲ ಸೃಷ್ಟಿಯಾಗಿತ್ತು.

ಎಷ್ಟು ಮನವೊಲಿಸಿದರೂ ಕೂಡ, ತಂದೆಯ ನಿರ್ಧಾರ ಬದಲಾಗಲಿಲ್ಲ.ಈ ವಿಚಾರ ಪಂಚಾಯಿತಿವರೆಗೂ ಹೋಯಿತು. ವಧುವಿನ ಕುಟುಂಬವು ವರ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹ ಸ್ಥಳದಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿದ್ದರು. ಯುವತಿಯ ಬಗ್ಗೆ ವರನನ್ನು ಪ್ರಶ್ನಿಸಿದಾಗ, ಆತ ತೃಪ್ತಿದಾಯಕ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ಪರಿಸ್ಥಿತಿ ಬೇಗನೆ ಉಲ್ಬಣಗೊಂಡಿತು ಮತ್ತು ವಧುವಿನ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು. ಈ ಘಟನೆ ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ. ತಂದೆಯ ನಿರ್ಧಾರವು ಕೆಲವರನ್ನು ಆಘಾತಗೊಳಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು

ಈಗಿನ ಮಕ್ಕಳಿಗೆ (children) ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವಂತಾಗಿದೆ. ಆದರೆ ನಾವು ಸಣ್ಣವರು ಇದ್ದಾಗ ಆಡುತ್ತಿದ್ದ ಅದೆಷ್ಟೋ ಆಟಗಳ ಬಗ್ಗೆ ಈಗಿನ ಮಕ್ಕಳಿಗೆ ತಿಳಿದೇ ಇಲ್ಲ. ಅಂದು ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಟವನ್ನು ಆಡುತ್ತಿದ್ದ ಕಾಲವೊಂದಿತ್ತು. ಸೊಪ್ಪಾಟ, ಚೊಂಕಾಟ, ಕೆರೆದಡ, ಹುಲಿದನ ಹಾಗೂ ಅಡುಗೆಯಾಟ ಹೀಗೆ ನಾನಾ ರೀತಿಯ ಆಟವಾಡಿ ಖುಷಿ ಪಡುತ್ತಿದ್ದೆವು. ಹೆಣ್ಣು ಮಕ್ಕಳಿಗೆ ಅಡುಗೆಯಾಟವೇ ಮೆಚ್ಚಿನ ಆಟವಾಗಿತ್ತು. ಎಲೆ, ಸೊಪ್ಪು, ಮಣ್ಣು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಅಡುಗೆ ಮನೆ ಮನೆ ಮಂದಿಯಂತೆ ಕುಳಿತು ಊಟ ಸವಿದು ಸಂಭ್ರಮಿಸುತ್ತಿದ್ದ ಆಟವದು. ಇದೀಗ ಈ ವಿಡಿಯೋ ನೋಡಿದ್ರೆ ನಿಮಗೆ ಖಂಡಿತ ನಿಮ್ಮ ಬಾಲ್ಯ ನೆನಪಾಗುತ್ತದೆ. ಪುಟಾಣಿಗಳೆಲ್ಲಾ ಜತೆ ಸೇರಿ ಅಡುಗೆ ಆಟ ಆಡುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

deepasakshi8217 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಗಳು ರಸ್ತೆ ಪಕ್ಕದಲ್ಲಿರುವ ಸಣ್ಣದಾದ ಜಾಗದಲ್ಲಿ ಕುಳಿತು ಅಡುಗೆಯಾಟ ಆಡುತ್ತಿದ್ದಾರೆ. ಸಾಲಾಗಿ ಕುಳಿತು ತಾವೇ ಮಾಡಿದ ಅಡುಗೆಯನ್ನು ಸವಿಯುತ್ತಿದ್ದರೆ, ಮನೆಯ ಮುಖ್ಯ ಗೃಹಿಣಿಯಂತಿರುವ ಪುಟ್ಟ ಹುಡುಗಿಯೂ ಎಲ್ಲರಿಗೂ ಊಟ ಬಡಿಸುವುದರಲ್ಲಿ  ಬ್ಯುಸಿಯಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹಳೆ ದಿನಗಳು ಮತ್ತೆ ಮರಳಿ ಬಾರದು ಎಂದು ಹೇಳಿದರೆ, ಇನ್ನೊಬ್ಬರು ಆ ಬಾಲ್ಯದ ದಿನಗಳೇ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿಂತೆಗಳಿಲ್ಲದೇ ಆಟವನ್ನು ಸಂಭ್ರಮಿಸುತ್ತಿದ್ದ ಬಾಲ್ಯದ ದಿನಗಳು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Karnataka 2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆಗೆ ಮುಹೂರ್ತ ಫಿಕ್ಸ್? ಇಲ್ಲಿದೆ ಫಲಿತಾಂಶ ನೋಡುವ ಸುಲಭ ವಿಧಾನ

ಬೆಂಗಳೂರು, ಏ.6: ಭಾರೀ ಕಾತುರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ದಿನ ಬಂದಿದೆ, ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಏಪ್ರಿಲ್ 7, 2026 ರಂದು ಅಂದರೆ ನಾಳೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.

ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ ಗೊಂದಲಗಳು ವಿದ್ಯಾರ್ಥಿಗಳಿಗೆ ಇರಬಹುದು. ಅದಕ್ಕೆ ಭಯಬೇಡ, ಇಲ್ಲಿ ನೀಡಿರುವ ಲಿಂಕ್​​​ಗಳನ್ನು ಓಪನ್​ ಮಾಡಿ ನೋಡಿದ್ರೆ ಸಾಕು. karresults.nic.in ಮತ್ತು kseab.karnataka.gov.in ಅನ್ನು ಶಿಕ್ಷಣ ಇಲಾಖೆ ನೀಡಿದೆ. ಒಂದು ವೇಳೆ ಈ ಲಿಂಕ್​​ಗಳಲ್ಲಿ ದೋಷ ಬಂದರೆ, ಇನ್ನು ಆಯ್ಕೆಯನ್ನು ಕೂಡ ನೀಡಲಾಗಿದೆ. PUC ಫಲಿತಾಂಶಗಳನ್ನು ಡಿಜಿಲಾಕರ್ ವೆಬ್‌ಸೈಟ್ – digilocker.gov.in ನಲ್ಲಿಯೂ ಪರಿಶೀಲಿಸಲು ಅವಕಾಶವನ್ನು ನೀಡಲಾಗಿದೆ.

ಕಳೆದ ವರ್ಷ ಏಪ್ರಿಲ್ 8 ರಂದು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಘೋಷಿಸಲಾಯಿತು, ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿತ್ತು. ಈ ಬಾರಿಯೂ ಅದೇ ಸಮಯದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಿಯುಸಿ ಫಲಿತಾಂಶ 2026: ಪರಿಶೀಲಿಸುವುದು ಹೇಗೆ?

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಅನ್ನು ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಬಹುದು :

ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ

ಸಲ್ಲಿಸು ಮೇಲೆ ಕ್ಲಿಕ್ ಮಾಡಿ

ಒಂದು ವೇಳೆ ನಿಮಗೆ ಫಲಿತಾಂಶ ಕಾಪಿ ಬೇಕಂದರೆ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ: SSLC ತೃತೀಯ ಭಾಷೆ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರದ ‘ಗ್ರೇಡಿಂಗ್’ ನಿರ್ಧಾರ

ಡಿಜಿಲಾಕರ್‌ನಲ್ಲಿಯೂ ಪಿಯುಸಿ ಫಲಿತಾಂಶ ನೋಡಬಹುದು:

ಡಿಜಿಲಾಕರ್ ವೆಬ್‌ಸೈಟ್ – digilocker.gov.in ನಲ್ಲಿ 12 ನೇ ತರಗತಿ ಕರ್ನಾಟಕ ಪಿಯುಸಿ ಫಲಿತಾಂಶಗಳು ಲಭ್ಯವಾಗಲಿದೆ.

ಏಪ್ರಿಲ್ 3 ರಂದು ಡಿಜಿಲಾಕರ್ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, 2026ನೇ ತರಗತಿಯ ದ್ವಿತೀಯ ಪಿಯುಸಿ ಫಲಿತಾಂಶಗಳು ಶೀಘ್ರದಲ್ಲೇ ಡಿಜಿಲಾಕರ್‌ನಲ್ಲಿ ಲಭ್ಯವಿರುತ್ತವೆ.

ಇಲ್ಲಿ ಯಾವುದಕ್ಕೂ ಕಾಯುವುದು ಬೇಡ ಹಾಗೂ ಇದಕ್ಕೆ ಹೆಚ್ಚಿನ ದಾಖಲೆಗಳು ಕೂಡ ಬೇಡ. ಸುಲಭವಾಗಿ ಹಾಗೂ ಸುರಕ್ಷಿತವಾಗಿ ಫಲಿತಾಂಶವನ್ನು ನೀಡಬಹುದು. ನಿಮ್ಮ ಫಲಿತಾಂಶಗಳನ್ನು digilocker.gov.in ನಲ್ಲಿ ತಕ್ಷಣವೇ ಪರಿಶೀಲಿಸಲು ಸಿದ್ಧರಾಗಿರಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಹೇಳಿದೆ.

ಇದರಲ್ಲಿ ಬರುವ ಫಲಿತಾಂಶವು ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ, ವಿಷಯಗಳ ಹೆಸರುಗಳು ಮತ್ತು ಪ್ರತಿ ವಿಷಯದಲ್ಲಿ ಪಡೆದ ಅಂಕಗಳಂತಹ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ. ಇದು ಒಟ್ಟು ಅಂಕಗಳು ಮತ್ತು ಒಟ್ಟಾರೆ ಫಲಿತಾಂಶದ ಸ್ಥಿತಿಯನ್ನು ಸಹ ತೋರಿಸುತ್ತದೆ, ಪರೀಕ್ಷೆಯಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆಯ ಸಂಪೂರ್ಣ ಅವಲೋಕನವನ್ನು ಒದಗಿಸುತ್ತದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎನ್ನುತ್ತಾ ಕಾಂಗ್ರೆಸ್ ಬಂಡವಾಳ ಬಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ ಶರ್ಮಾ

ಗುವಾಹಟಿ, ಏಪ್ರಿಲ್ 06: ತಮ್ಮ ಪತ್ನಿ ಮೇಲೆ ಕಾಂಗ್ರೆಸ್ ಹೊರಿಸಿರುವ ಆರೋಪಗಳ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಪ್ರತಿಕ್ರಿಯಿಸಿದ್ದಾರೆ. ಸಿಎಂ ಪತ್ನಿ ರಿನಿಕಿ ಭೂನ್ಯಾ ಶರ್ಮಾ ಮೂರು ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಿಎಂ  ಕಾಂಗ್ರೆಸ್ ಪಾಕ್​ನಿಂದ ಸಹಾಯ ಪಡೆಯುತ್ತಿದೆ, ತನ್ನ ಪತ್ನಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನಿ ಚಾನೆಲ್‌ಗಳು ಅಸ್ಸಾಂ ಚುನಾವಣೆಯ ಬಗ್ಗೆ ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ, ಪ್ರತಿಯೊಂದೂ ಕಾಂಗ್ರೆಸ್  ಗೆಲ್ಲುವುದಾಗಿಯೇ ಪ್ರತಿಪಾದಿಸಿವೆ ಇದರರ್ಥ ಕಾಂಗ್ರೆಸ್ ಪಾಕಿಸ್ತಾನದ ಜತೆ ಸಂಬಂಧ ಹೊಂದಿದೆ ಎಂದು  ದೂರಿದ್ದಾರೆ.

ಚುನಾವಣಾ ಪ್ರಚಾರ ಮಂಗಳವಾರ ಕೊನೆಗೊಳ್ಳಲಿದೆ, ಪಾಸ್‌ಪೋರ್ಟ್ ವಿವಾದದ ಬಗ್ಗೆ ರಾಜಕೀಯ ಬಿಸಿ ಏರಿದೆ. ಅಸ್ಸಾಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಆರೋಪ ಪ್ರತ್ಯಾರೋಪಗಳ ಅಲೆಯೇ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಗೌರವ್ ಗೊಗೊಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಯುಎಇ, ಆಂಟಿಗುವಾ-ಬಾರ್ಬುಡಾ ಮತ್ತು ಈಜಿಪ್ಟ್‌ನ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷವು ನಕಲಿ ದಾಖಲೆಗಳ ಮೂಲಕ ಗೊಂದಲವನ್ನು ಹರಡಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಅಸ್ಸಾಂ ನಿರ್ಮಿಸಲು ಈ ಚುನಾವಣೆ: ಪ್ರಧಾನಿ ಮೋದಿ

ಪವನ್ ಖೇರಾ ಅವರ ಪತ್ರಿಕಾಗೋಷ್ಠಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಗುಂಪು ಒದಗಿಸಿದೆ ಎಂಬುದು ನಮಗೆ ತಿಳಿದುಬಂದಿದೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನಿ ಚಾನೆಲ್‌ಗಳು ಅಸ್ಸಾಂ ಚುನಾವಣೆಯ ಬಗ್ಗೆ ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ , ಇದು ಹಿಂದೆಂದೂ ಕಂಡಿರದ ಸಾಧನೆಯಾಗಿದೆ. ಪ್ರತಿಯೊಂದು ಟಾಕ್ ಶೋನಲ್ಲಿಯೂ, ಕಾಂಗ್ರೆಸ್ ಗೆಲ್ಲಬೇಕು ಎಂಬ ತೀರ್ಮಾನವಿತ್ತು. ನಿನ್ನೆಯ ಪತ್ರಿಕಾಗೋಷ್ಠಿಗೂ ಪಾಕಿಸ್ತಾನಿ ಸಂಪರ್ಕ ಈಗ ಸ್ಪಷ್ಟವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಇದನ್ನು ಪರಿಶೀಲಿಸುತ್ತವೆ ಎಂಬ ವಿಶ್ವಾಸ ನನಗಿದೆ ಎಂದರು.

ತಮ್ಮ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ಕಂಪನಿಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಯಾರಾದರೂ 199 ಅಮೆರಿಕನ್ ಡಾಲರ್ ಪಾವತಿಸುವ ಮೂಲಕ ಕಂಪನಿಯನ್ನು ನೋಂದಾಯಿಸಬಹುದು ಎಂದು ಹೇಳಿದರು . ಎಲ್ಲರ ಕಣ್ಣೆದುರೇ ಮತ್ತೊಂದು ಕಂಪನಿಯನ್ನು ನೋಂದಾಯಿಸಿ ತೋರಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನದ ಬೆಲೆ ಗ್ರಾಮ್​ಗೆ 165 ರೂ ಕುಸಿತ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 6: ಚಿನ್ನದ ಬೆಲೆಯ ಏರಿಳಿತದ ಆಟ ಮುಂದುವರಿದಿದೆ. ಕಳೆದ ವಾರ 260 ರೂಗಳಷ್ಟು ಏರಿದ್ದ ಚಿನ್ನದ ಬೆಲೆ ಇವತ್ತು ಸೋಮವಾರ ಒಂದೇ ದಿನ 165 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿಯೊಳಗೆ ಬಂದಿದೆ. ವಿದೇಶಗಳಲ್ಲಿ ಕೆಲವೆಡೆ ಏರಿಳಿತಗಳಾಗಿವೆ. ಹಲವು ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಸೋಮವಾರ ಇದರ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,913 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,670 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,185 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,913 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,670 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,670 ರೂ
  • ಚೆನ್ನೈ: 13,810 ರೂ
  • ಮುಂಬೈ: 13,670 ರೂ
  • ದೆಹಲಿ: 13,685 ರೂ
  • ಕೋಲ್ಕತಾ: 13,670 ರೂ
  • ಕೇರಳ: 13,670 ರೂ
  • ಅಹ್ಮದಾಬಾದ್: 13,675 ರೂ
  • ಜೈಪುರ್: 13,685 ರೂ
  • ಲಕ್ನೋ: 13,685 ರೂ
  • ಭುವನೇಶ್ವರ್: 13,670 ರೂ

ಇದನ್ನೂ ಓದಿ: ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 575 ರಿಂಗಿಟ್ (13,242 ರುಪಾಯಿ)
  • ದುಬೈ: 521.75 ಡಿರಾಮ್ (13,197 ರುಪಾಯಿ)
  • ಅಮೆರಿಕ: 146 ಡಾಲರ್ (13,560 ರುಪಾಯಿ)
  • ಸಿಂಗಾಪುರ: 186.50 ಸಿಂಗಾಪುರ್ ಡಾಲರ್ (13,467 ರುಪಾಯಿ)
  • ಕತಾರ್: 518.50 ಕತಾರಿ ರಿಯಾಲ್ (13,207 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,135 ರುಪಾಯಿ)
  • ಓಮನ್: 55.35 ಒಮಾನಿ ರಿಯಾಲ್ (13,354 ರುಪಾಯಿ)
  • ಕುವೇತ್: 42.91 ಕುವೇತಿ ದಿನಾರ್ (12,984 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಆಟೋ ಎಲ್​ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯ್ಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ

ಬೆಂಗಳೂರು, ಏಪ್ರಿಲ್ 06: ಕರ್ನಾಟಕದಲ್ಲಿ ಆಟೋ ಎಲ್​ಪಿಜಿ (LPG) ಕೊರತೆ ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿದ್ದು, ಇದರ ಪರಿಣಾಮವಾಗಿ ಆಟೋ ಚಾಲಕರ ಜೀವನಸಂಕಷ್ಟಕ್ಕೆ ಸಿಲುಕಿದೆ. ಇಂಡಿಯನ್ ಆಯ್ಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ಸಂಸ್ಥೆ ಕರ್ನಾಟಕದಾದ್ಯಂತ ಆಟೋ ಎಲ್​ಪಿಜಿ ಪೂರೈಕೆಯನ್ನು ಹೆಚ್ಚಿಸಿರುವುದಾಗಿ ಭಾನುವಾರ ತಿಳಿಸಿದೆ.

ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಸಲಹೆ

ರಾಜ್ಯದಲ್ಲಿ ಒಟ್ಟು 72 ಆಟೋ ಎಲ್​ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 55 ಅನ್ನು ಐಒಸಿಎಲ್ ನಿರ್ವಹಿಸುತ್ತದೆ. 300ಕ್ಕೂ ಹೆಚ್ಚು ಖಾಸಗಿ ಡಿಸ್ಪೆನ್ಸಿಂಗ್ ಕೇಂದ್ರಗಳಿದ್ದರೂ, ಸುಮಾರು 80 ಪ್ರತಿಶತ ಸ್ಥಗಿತಗೊಂಡಿರುವುದರಿಂದ ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಮೂಲಸೌಕರ್ಯ ಕೊರತೆ ಮತ್ತು ಪೂರೈಕೆ ಸಾಮರ್ಥ್ಯದ ಅಭಾವದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಬೆಂಗಳೂರಿನಲ್ಲಿ ಸರ್ಕಾರಿ ಪಂಪ್‌ಗಳಲ್ಲಿ ಲೀಟರ್‌ಗೆ 89.52 ರೂ. ದರದಲ್ಲಿ LPG ಲಭ್ಯವಿದ್ದರೆ, ಖಾಸಗಿ ಪಂಪ್‌ಗಳಲ್ಲಿ ಬೆಲೆ 99ರಿಂದ 105 ರೂಪಾಯಿವರೆಗೆ ಇರುವುದರಿಂದ ಜನರು ಹೆಚ್ಚಾಗಿ ಸರ್ಕಾರಿ ಪಂಪ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಪಂಪ್​ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿನ ಸುಮಾರು 70 ಪ್ರತಿಶತ ಆಟೋಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಐಒಸಿಎಲ್ ಸಲಹೆ ನೀಡಿದೆ.

ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಇದರ ನಡುವೆ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ಹಲವು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ. ಸಂಘಟನೆಯ ಅಧ್ಯಕ್ಷ ಎಂ. ಮಂಜುನಾಥ್ ಹೇಳುವಂತೆ, ಆದಾಯ ಕುಸಿತ ಮತ್ತು ಇಂಧನ ಕೊರತೆಯಿಂದ ಚಾಲಕರು ಇಎಮ್ಐ, ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?

ಪ್ರತಿ ಆಟೋಗೆ ದಿನಕ್ಕೆ ಕನಿಷ್ಠ 6 ಲೀಟರ್ ಎಲ್​ಪಿಜಿ ಪೂರೈಕೆ ಖಚಿತಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ದಿನನಿತ್ಯ ಸುಮಾರು 300 ಟನ್ ಎಲ್​ಪಿಜಿ ಅವಶ್ಯಕವಿದ್ದು, ಈ ಸಮಸ್ಯೆ ತಕ್ಷಣ ಪರಿಹಾರವಾಗಬೇಕೆಂದು ಒತ್ತಾಯಿಸಲಾಗಿದೆ. ಜೊತೆಗೆ, ಸಿಎನ್​ಜಿ ಪರಿವರ್ತನೆಗೆ ಸರ್ಕಾರ ನೆರವು ನೀಡಬೇಕೆಂದು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

“ನೀವು ವೇಶ್ಯಾವಾಟಿಕೆ ನಡೆಸುತ್ತೀರಾ?”: ಮನೆಯಿಂದ ಹೊರಗೆ ಎಳೆದು ತಂದು ಮಹಿಳೆ ಮೇಲೆ ಅಮಾನವೀಯ ಹಲ್ಲೆ!

ಬೆಂಗಳೂರು, ಏ. 6: ಸಿಲಿಕಾನ್ ಸಿಟಿಯ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಮನೆಯಲ್ಲಿ ಯುವಕನ ಜೊತೆಗಿದ್ದಾಳೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆ ಎಳೆದು ತಂದು ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಏಪ್ರಿಲ್ 4ರಂದು ಶನಿವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳ ಮೂಲದ ಮಹಿಳೆಯು ವರ್ತೂರು ವ್ಯಾಪ್ತಿಯಲ್ಲಿ ವಾಸವಿದ್ದರು. ಏಪ್ರಿಲ್ 4ರಂದು ಆಕೆ ತನ್ನ ಮನೆಯಲ್ಲಿ ಯುವಕನೋರ್ವನ ಜೊತೆ ಇದ್ದಾಗ, ಕೆಲವು ವ್ಯಕ್ತಿಗಳು “ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ?” ಎಂದು ಕಿರುಚುತ್ತಾ ದಾಳಿ ಮಾಡಿದ್ದಾರೆ. ಯುವತಿಯನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಮನಬಂದಂತೆ ಥಳಿಸಿದ್ದಾರೆ. ಗಲಾಟೆ ಆರಂಭವಾಗುತ್ತಿದ್ದಂತೆಯೇ ಆಕೆಯ ಜೊತೆಗಿದ್ದ ಯುವಕ ಸ್ಥಳದಿಂದ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಸ್ನೇಹಿತನ ಮದುವೆಗೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಭದ್ರಾ ನದಿಪಾಲು!

ಹಲ್ಲೆಗೊಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಖಾಸಗಿತನಕ್ಕೆ ಧಕ್ಕೆ ತಂದಿರುವ ಮತ್ತು ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tech Tips: ವಾಟ್ಸ್ಆ್ಯಪ್​ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಈಗ ಸುಲಭವಾಗಿ ಕಂಡುಹಿಡಿಯಿರಿ

ಬೆಣಗಳೂರು (ಏ. 06): ನಿಮಗೆ ತಿಳಿದಿರುವ ಯಾರಾದರೂ ನಿಮ್ಮನ್ನು ವಾಟ್ಸ್​​ಆ್ಯಪ್​​​ನಲ್ಲಿ (WhatsApp) ಬ್ಲಾಕ್ ಮಾಡಿದ್ದಾರಾ ಮತ್ತು ನಿಮಗೆ ಅದನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ?. ವಾಟ್ಸ್​​ಆ್ಯಪ್​​​ನಲ್ಲಿ ನಿರ್ಬಂಧಿಸಿದ ನಂತರ, ಅವರು ತಮ್ಮ ಮೆಸೇಜ್ ಪಕ್ಕದಲ್ಲಿ ಒಂದೇ ಒಂದು ಟಿಕ್ ಅನ್ನು ಮಾತ್ರ ನೋಡುತ್ತಾರೆ. ನೀವು ಸಂದೇಶವನ್ನು ಕಳುಹಿಸಿದ ವ್ಯಕ್ತಿಗೆ ಇಂಟರ್ನೆಟ್ ಸಂಪರ್ಕವಿಲ್ಲದಿದ್ದಾಗ ಅಥವಾ ಡೌನ್ ಆಗಿರುವಾಗಲೂ ಇದೇ ರೀತಿ ಸಂಭವಿಸುತ್ತದೆ. ನೀವು ಸಂದೇಶವನ್ನು ಕಳುಹಿಸಿದಾಗ ಒಂದೇ ಒಂದು ಟಿಕ್ ಅನ್ನು ನೋಡಿದರೆ, ಸ್ವೀಕರಿಸುವವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ ಅಥವಾ ಅವರ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆಯೇ ಎಂಬ ಬಗ್ಗೆ ಗೊಂದಲಕ್ಕೊಳಗಾಗಬಹುದು. ಆದ್ದರಿಂದ, ಆ ವ್ಯಕ್ತಿಯು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಹೊಸದಾದ ಸುಲಭ ವಿಧಾನ ನಾವು ಹೇಳುತ್ತೇವೆ.

ಯಾರಾದರೂ ನಿಮ್ಮನ್ನು ವಾಟ್ಸ್​​ಆ್ಯಪ್​​​ನಲ್ಲಿ ನಿರ್ಬಂಧಿಸಿದ್ದರೆ, ನೀವು ಮಾಡಬೇಕಾಗಿರುವುದು ಅವರ ಚಾಟ್ ಬಾಕ್ಸ್‌ಗೆ ಹೋಗಿ, Meta AI ಅನ್ನು ಟ್ಯಾಗ್ ಮಾಡಿ ಮತ್ತು “Hi” ಸಂದೇಶವನ್ನು ಕಳುಹಿಸಿ. ಇದನ್ನು ಮಾಡಲು, ಸ್ವೀಕರಿಸುವವರ ಚಾಟ್ ಬಾಕ್ಸ್ ಅನ್ನು ತೆರೆಯಿರಿ, @Meta AI ಎಂದು ಟೈಪ್ ಮಾಡಿ ಮತ್ತು Meta ಅನ್ನು ಟ್ಯಾಗ್ ಮಾಡಿ, ನಂತರ “Hi” ಎಂಬ ಸಂದೇಶವನ್ನು ಕಳುಹಿಸಿ.

ಆ ವ್ಯಕ್ತಿಯು ನಿಮ್ಮನ್ನು ಬ್ಲಾಕ್ ಮಾಡಿದ್ದರೆ, ಸಂದೇಶದಲ್ಲಿ ಟ್ಯಾಗ್ ಮಾಡಲಾದ ಯಾವುದೇ ಪ್ರತ್ಯುತ್ತರ ಸಂದೇಶಗಳನ್ನು ನಿಮ್ಮ ಮೆಟಾ AI ಸ್ವೀಕರಿಸುವುದಿಲ್ಲ. ಈ ಸಂದರ್ಭದಲ್ಲಿ, ಸ್ವೀಕರಿಸುವವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮನ್ನು ಬ್ಲಾಕ್ ಮಾಡಿಲ್ಲದಿದ್ದರೆ ಏನು?

ಸಂದೇಶ ಸ್ವೀಕರಿಸುವವರು ನಿಮ್ಮನ್ನು ನಿರ್ಬಂಧಿಸದಿದ್ದರೆ, ನಿಮ್ಮ ಸಂದೇಶಕ್ಕೆ ಮೆಟಾ AI ನಿಂದ ನೀವು ಪ್ರತ್ಯುತ್ತರವನ್ನು ಸ್ವೀಕರಿಸುತ್ತೀರಿ. ಮತ್ತೊಂದು ವಿಚಾರ ಎಂದರೆ, ಆ ವ್ಯಕ್ತಿಯು ಇಂಟರ್ನೆಟ್ ಅನ್ನು ಆಫ್ ಮಾಡಿದ್ದರೂ ಸಹ ಈ ಸಂದೇಶ ಅಥವಾ ಪ್ರತ್ಯುತ್ತರವು ಬರುತ್ತದೆ. ಮೆಟಾ AI ಗೆ ನಿಮ್ಮ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ನೀವು ಸಂದೇಶವನ್ನು ಸ್ವೀಕರಿಸಿದರೆ, ನಿಮ್ಮನ್ನು ನಿರ್ಬಂಧಿಸಲಾಗಿಲ್ಲ ಎಂದರ್ಥ.

Tech Tips: ಬ್ಲೂಟೂತ್, ವೈ-ಫೈ ಆನ್ ಇದ್ದರೆ ಫೋನಿನ ಬ್ಯಾಟರಿ ಬೇಗನೆ ಖಾಲಿಯಾಗುತ್ತಾ?: ನೀವು ಅಂದುಕೊಂಡಿದ್ದು ಸುಳ್ಳು

ಕೆಲವೊಮ್ಮೆ, ಆ ವ್ಯಕ್ತಿಯ ವಾಟ್ಸ್​​ಆ್ಯಪ್ DP ಸಹ ಹೊಂದಿರುವುದಿಲ್ಲ, ಆದ್ದರಿಂದ ಕಳುಹಿಸುವವರಿಗೆ ಅವರನ್ನು ನಿರ್ಬಂಧಿಸಲಾಗಿದೆ ಅಥವಾ ಅವರ ಇಂಟರ್ನೆಟ್ ಸಂಪರ್ಕವು ಕಡಿತಗೊಂಡಿದೆ ಎಂದು ತಿಳಿದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಸಹ, ಈ ಮೆಟಾ AI ವೈಶಿಷ್ಟ್ಯವು ಅತ್ಯಂತ ಉಪಯುಕ್ತವಾಗಿದೆ, ಕಳುಹಿಸುವವರಿಗೆ ಅವರನ್ನು ನಿರ್ಬಂಧಿಸಲಾಗಿದೆಯೇ ಎಂದು ನಿರ್ಧರಿಸಲು ಸಹಾಯ ಮಾಡಿಕೊಡುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tech Tips: ಬ್ಲೂಟೂತ್, ವೈ-ಫೈ ಆನ್ ಇದ್ದರೆ ಫೋನಿನ ಬ್ಯಾಟರಿ ಬೇಗನೆ ಖಾಲಿಯಾಗುತ್ತಾ?: ನೀವು ಅಂದುಕೊಂಡಿದ್ದು ಸುಳ್ಳು

ಬೆಂಗಳೂರು (ಏ. 06): ನೀವು ಸ್ಮಾರ್ಟ್‌ಫೋನ್ (Smartphone) ಬಳಸುತ್ತಿದ್ದರೆ, ನಿಮ್ಮ ಫೋನ್‌ನ ಬ್ಲೂಟೂತ್ ಮತ್ತು ವೈ-ಫೈ ಅನ್ನು ಆಫ್ ಮಾಡಬೇಕು ಎಂದು ನೀವು ಬಹುಶಃ ಕೇಳಿರಬಹುದು. ಇದರ ಹಿಂದಿನ ತಾರ್ಕಿಕತೆಯೆಂದರೆ ಇದು ನಿಮ್ಮ ಫೋನ್‌ನ ಬ್ಯಾಟರಿಯನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಆಗಾಗ್ಗೆ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಆದಾಗ್ಯೂ, ಇದು ಕಾಲಾನಂತರದಲ್ಲಿ ಬದಲಾಗಿದೆ. ಈಗ ತಂತ್ರಜ್ಞಾನದಲ್ಲಿನ ಪ್ರಗತಿಯಿಂದ, ಇವು ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿನ ಬ್ಯಾಟರಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?.

ಇಂದು ಬ್ಲೂಟೂತ್ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ

ಬ್ಲೂಟೂತ್ ಮತ್ತು ವೈಫೈ ಅನ್ನು ಆಫ್ ಮಾಡಿಡಬೇಕು ಇಲ್ಲದಿದ್ದರೆ ಚಾರ್ಜ್ ಖಾಲಿ ಆಗುತ್ತದೆ ಎಂಬ ಹಳೆಯ ಕಾರಣಗಳು ಈಗಿಲ್ಲ. ಇಂದಿನ ಸ್ಮಾರ್ಟ್‌ಫೋನ್‌ಗಳು ಬ್ಲೂಟೂತ್ ಕಡಿಮೆ ಶಕ್ತಿಯ ವ್ಯವಸ್ಥೆಗಳನ್ನು ಹೊಂದಿದ್ದು, ಅವು ಸಕ್ರಿಯವಾಗಿದ್ದರೂ ಸಹ ಬ್ಯಾಟರಿಯನ್ನು ಬಳಸುವುದಿಲ್ಲ. ಇಂದಿನ ಬ್ಲೂಟೂತ್ ಕೇವಲ 2.5 ಮೆಗಾವ್ಯಾಟ್ ಶಕ್ತಿಯನ್ನು ಮಾತ್ರ ಬಳಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದ್ದರಿಂದ ನೀವು ಎಲ್ಲಾ ಸಮಯದಲ್ಲೂ ಬ್ಲೂಟೂತ್ ಅನ್ನು ಆನ್ ಮಾಡಿದ್ದರೂ ಸಹ, ಬ್ಲೂಟೂತ್‌ನಿಂದಾಗಿ ಬ್ಯಾಟರಿ ಡಿಸ್ಚಾರ್ಜ್ ಆಗಲು ಸುಮಾರು 3 ತಿಂಗಳುಗಳು ತೆಗೆದುಕೊಳ್ಳಬಹುದು.

ಬ್ಲೂಟೂತ್ ಕೆಲವು ಮೀಟರ್‌ಗಳವರೆಗೆ ಮಾತ್ರ ಸಂಕೇತಗಳನ್ನು ಕಳುಹಿಸಬೇಕಾಗುತ್ತದೆ (ಉದಾ: ನಿಮ್ಮ ಫೋನ್‌ನಿಂದ ನಿಮ್ಮ ಹೆಡ್‌ಫೋನ್‌ಗಳಿಗೆ ಈರೀತಿ), ಆದ್ದರಿಂದ ಇದಕ್ಕೆ ಕಡಿಮೆ ಶಕ್ತಿಯ ಅಗತ್ಯವಿರುತ್ತದೆ.

ಆಧುನಿಕ ಸ್ಮಾರ್ಟ್‌ಫೋನ್‌ಗಳು ಬ್ಲೂಟೂತ್ ಲೋ ಎನರ್ಜಿ (BLE) ತಂತ್ರಜ್ಞಾನವನ್ನು ಬಳಸುತ್ತವೆ. ನೀವು ಡೇಟಾವನ್ನು ಸಕ್ರಿಯವಾಗಿ ವರ್ಗಾಯಿಸದಿದ್ದಾಗ (ಉದಾಹರಣೆಗೆ ನಿಮ್ಮ ಸ್ಮಾರ್ಟ್‌ವಾಚ್ ಸಂಪರ್ಕಗೊಂಡಿದ್ದರೂ ಯಾವುದೇ ಅಧಿಸೂಚನೆಗಳನ್ನು ಸ್ವೀಕರಿಸದಿದ್ದಾಗ), ಅದು ಸ್ಲೀಪ್ ಮೋಡ್​​ಗೆ ಹೋಗುತ್ತದೆ ಮತ್ತು ಬ್ಯಾಟರಿಯನ್ನು ಕಡಿಮೆ ಅಥವಾ ಸಂಪೂರ್ಣವಾಗಿ ಬಳಸುವುದಿಲ್ಲ.

ಮೊಬೈಲ್ ಸಂಪರ್ಕಕ್ಕಿಂತ ವೈಫೈ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ

ನಿಮ್ಮ ಮೊಬೈಲ್ ಸಂಪರ್ಕಕ್ಕಿಂತ ವೈಫೈ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ನೀವು ವೈಫೈ ಮತ್ತು ಮೊಬೈಲ್ ನೆಟ್‌ವರ್ಕ್ ಎರಡನ್ನೂ ಹೊಂದಿದ್ದರೆ ಮತ್ತು ನೀವು ವೈಫೈ ಬಳಸುತ್ತಿದ್ದರೆ, ನಿಮ್ಮ ಫೋನ್‌ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದ್ದರಿಂದ, ಲಭ್ಯವಿದ್ದರೆ ವೈಫೈ ಬಳಸಲು ಶಿಫಾರಸು ಮಾಡಲಾಗಿದೆ.

iPhone 18 Pro Max: ಡಿಎಸ್ಎಲ್ಆರ್ ತರಹದ ಕ್ಯಾಮೆರಾ: ಐಫೋನ್ 18 ಬಗ್ಗೆ ಹೊರಬಿತ್ತು ಶಾಕಿಂಗ್ ಮಾಹಿತಿ

ವೈ-ಫೈ ಆನ್ ಆಗಿರುವಾಗ ಬ್ಯಾಟರಿ ಬಳಕೆ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ:

ಫೋನ್ ಕನೆಕ್ಟ್ ಆದಾಗ

ನಿಮ್ಮ ಫೋನ್ ಮನೆ ಅಥವಾ ಕಚೇರಿಯ ವೈ-ಫೈಗೆ ಸಂಪರ್ಕಗೊಂಡಿದ್ದರೆ ಮತ್ತು ನೀವು ಅದನ್ನು ಬಳಸುತ್ತಿಲ್ಲದಿದ್ದರೆ, ಬ್ಯಾಟರಿ ಬಳಕೆ ಅತ್ಯಲ್ಪವಾಗಿರುತ್ತದೆ.

ಫೋನ್ ಸಂಪರ್ಕಗೊಂಡಿಲ್ಲದಿದ್ದಾಗ

ಉದಾಹರಣೆಗೆ, ನೀವು ಪ್ರಯಾಣಿಸುತ್ತಿದ್ದರೆ ಮತ್ತು ವೈ-ಫೈ ಆನ್ ಆಗಿದ್ದರೆ, ನಿಮ್ಮ ಫೋನ್ ನಿರಂತರವಾಗಿ ಹೊಸ ನೆಟ್‌ವರ್ಕ್‌ಗಳಿಗಾಗಿ ಹುಡುಕುತ್ತಿರುತ್ತದೆ. ಈ ಪ್ರಕ್ರಿಯೆಯು ಸ್ವಲ್ಪ ಬ್ಯಾಟರಿಯನ್ನು ಬಳಸುತ್ತದೆ, ಆದರೆ ಇದು ತುಂಬಾ ಕಡಿಮೆಯಾಗಿದ್ದು, ಒಂದು ದಿನದ ಅವಧಿಯಲ್ಲಿ ನೀವು ಬಹುಶಃ ಶೇಕಡಾ 1-2 ರಷ್ಟು ವ್ಯತ್ಯಾಸವನ್ನು ಮಾತ್ರ ಗಮನಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 

ಪ್ರಭುದೇವ ಅವರು ನೂರಾರು ಕೋಟಿ ಒಡೆಯರು. ಅವರು ಕೊರಿಯೋಗ್ರಾಫರ್, ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ಶ್ರೀಮಂತಿಕೆ ಇದ್ದರೂ ಅವರಿಗೆ ಬರಿ ನೆಲದ ಮೇಲೆ ಮಲಗೋದು ಹೆಚ್ಚು ಖುಷಿ ಕೊಟ್ಟಿದೆ. ಈ ಸಂದರ್ಭದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ತೋಟ ಒಂದರಲ್ಲಿ ಎಳನೀರು ಕುಡಿದು ಅಲ್ಲಿಯೇ ನೆಲದ ಮೇಲೆ ಮಲಗಿದ್ದಾರೆ. ಪ್ರಭುದೇವ ಅವರ ವಿಡಿಯೋಗೆ ಫ್ಯಾನ್ಸ್ ಪ್ರತಿಕ್ರಿಯಿಸಿದ್ದು, ಸರಳತೆ ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version