ಐಪಿಎಲ್ 2026 ರ ಒಂಬತ್ತನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಗುಜರಾತ್ ಟೈಟಾನ್ಸ್ ತಂಡವು ತಮ್ಮ ತವರು ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದ್ದು, ಸೀಸನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಇತ್ತ ತನ್ನ ಮೊದಲ ಪಂದ್ಯದಲ್ಲಿನ ಗೆಲುವಿನೊಂದಿಗೆ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಜೇಯ ಓಟವನ್ನು ಮುಂದುವರೆಸಲು ನೋಡಲಿದೆ.
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಸಮಸ್ಯೆಯಲ್ಲಿ ಆಹಾರ ಪದ್ಧತಿ ಬಹಳ ಮಹತ್ವದ್ದಾಗಿದ್ದು, ಕೆಟ್ಟ ಆಹಾರ ಸೇವನೆಯಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ನಿಮಗೆ ತಿಳಿರಿರಬಹುದು ಥೈರಾಯ್ಡ್ ಒಂದು ಗ್ರಂಥಿಯಾಗಿದ್ದು, ಇದು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಮತ್ತು ದೇಹದ ಮೆಟಾಬಾಲಿಸಮ್ನ್ನು ನಿಯಂತ್ರಿಸುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದಣಿವು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಕಂಡುಬರಬಹುದು. ಜೀವನಶೈಲಿ, ಒತ್ತಡ, ಹಾರ್ಮೋನ್ ಬದಲಾವಣೆಗಳು ಮತ್ತು ಪೌಷ್ಟಿಕಾಂಶ ಕೊರತೆ ಇದಕ್ಕೆ ಕಾರಣವಾಗಬಹುದು. ಹಾಗಾಗಿ ಥೈರಾಯ್ಡ್ ಸಮಸ್ಯೆ ಬರಬಾರದು ಎಂದರೆ ಅಥವಾ ಈಗಾಗಲೇ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ಹಾಗಾದರೆ ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು, ಜೀವನಶೈಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಆಹಾರಗಳ ಸೇವನೆ ಮಾಡಬಾರದು?
ಸೋಯಾ ಮತ್ತು ಸೋಯಾ ಉತ್ಪನ್ನಗಳು ಇವು ಥೈರಾಯ್ಡ್ ಹಾರ್ಮೋನ್ ಕಾರ್ಯಕ್ಕೆ ಅಡ್ಡಿಯಾಗಬಹುದು
ಕಚ್ಚಾ ತರಕಾರಿಗಳು (ಗೋಬಿ, ಬ್ರೋಕೊಲಿ) ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು
ಪ್ರೊಸೆಸ್ಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ
ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳು
ಕೆಫೀನ್ ಮತ್ತು ಮದ್ಯಪಾನ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು
ಥೈರಾಯ್ಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
ಐಯೋಡಿನ್ ಇರುವ ಆಹಾರಗಳು (ಉಪ್ಪು, ಹಾಲು ಉತ್ಪನ್ನಗಳು, ಮೀನು)
ಸೆಲೆನಿಯಂ ಮತ್ತು ಜಿಂಕ್ ಇರುವ ಆಹಾರಗಳು (ಡ್ರೈಫ್ರೂಟ್ಸ್, ಬೀಜಗಳು, ಸಂಪೂರ್ಣ ಧಾನ್ಯಗಳು)
ಹಸಿರು ತರಕಾರಿಗಳು ಮತ್ತು ಹಣ್ಣುಗಳು
ಪ್ರೋಟೀನ್ ಆಹಾರಗಳು (ಬೇಳೆ, ಮೊಟ್ಟೆ, ಪನೀರ್)
ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವಿಸುವುದು ಕೂಡ ಮುಖ್ಯವಾಗುತ್ತದೆ.
ಒಟ್ಟಿನಲ್ಲಿ, ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಥೈರಾಯ್ಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅದರ ಜೊತೆಗೆ ತಜ್ಞರ ಸಲಹೆಯನ್ನು ಪಾಲಿಸುವುದು ಕೂಡ ಬಹಳ ಮುಖ್ಯ.
ಹೈದರಾಬಾದ್: ಹೋಟೆಲ್ ಒಂದಕ್ಕೆ ಆಹಾರದ ಆಸೆಯಿಂದ ಬಂದ ಭಿಕ್ಷುಕನ ಮೇಲೆ ಹೋಟೆಲ್ನ ಸಿಬ್ಬಂದಿ ಬಿಸಿನೀರು ಸುರಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ಈ ಕೃತ್ಯವನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ ಬೆನ್ನಲ್ಲೇ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಸಿನೀರಿನಿಂದ ಕಂಗೆಟ್ಟು ನೋವಿನಿಂದ ನರಳುತ್ತಿದ್ದ ಆ ವ್ಯಕ್ತಿಯ ಪರವಾಗಿ ಹೋಟೆಲ್ನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, “ಆತ ಪ್ರತಿದಿನ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ” ಎಂಬ ಬೇಜವಾಬ್ದಾರಿಯ ಸಮರ್ಥನೆ ಕೇಳಿಬಂದಿದೆ. “ಒಂದು ವೇಳೆ ತೊಂದರೆ ನೀಡುತ್ತಿದ್ದರೆ ಆತನನ್ನು ಬೆದರಿಸಿ ಕಳುಹಿಸಬೇಕಿತ್ತು ಅಥವಾ ಪೊಲೀಸರಿಗೆ ದೂರು ನೀಡಬೇಕಿತ್ತು, ಅದನ್ನು ಬಿಟ್ಟು ಇಷ್ಟು ಕ್ರೂರವಾಗಿ ವರ್ತಿಸುವುದು ಸರಿಯೇ?” ಎಂದು ಸಾಮಾಜಿಕ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಾಗ ಹೋಟೆಲ್ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ನವದೆಹಲಿ, ಏಪ್ರಿಲ್ 4: ನಮೆಲ್ಲರಿಗೂ ಗೊತ್ತಿರುವಂತೆ ಇರಾನ್ (Iran War) ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಸಾರಿ ತಿಂಗಳೇ ಕಳೆದಿದೆ. ಆದರೂ ಅಲ್ಲಿನ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದಲ್ಲಿ ಭಾರತ ತಟಸ್ಥ ನೀತಿಯನ್ನು ತಳೆದಿದ್ದು, ಬಹಿರಂಗವಾಗಿ ಯಾವ ದೇಶಕ್ಕೂ ಬೆಂಬಲ ಘೋಷಿಸಿಲ್ಲ. ಆದರೂ ಯುದ್ಧಪೀಡಿತ ದೇಶಗಳಿಗೆ ವೈದ್ಯಕೀಯ ಕಿಟ್ ಕಳುಹಿಸುವ ಮಾನವೀಯ ಕಾರ್ಯವನ್ನು ಮಾಡಿರುವ ಭಾರತ ಶಾಂತಿಯುತ ಮಾತುಕತೆಯ ಮೂಲಕ ಯುದ್ಧ ನಿಲ್ಲಿಸುವುದರ ಅಗತ್ಯವನ್ನು ಒತ್ತಿ ಹೇಳುತ್ತಲೇ ಇದೆ. ಈ ಯುದ್ಧದ ಬಗ್ಗೆ ಭಾರತೀಯರ ಅಭಿಪ್ರಾಯವೇನು? ಭಾರತದ ಜನರು ಯಾವ ದೇಶದ ಪರವಾಗಿ ನಿಲುವು ತಳೆದಿದ್ದಾರೆ ಎಂಬ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಆ ಕುರಿತು ಪೂರ್ತಿ ವಿವರ ಇಲ್ಲಿದೆ.
ಯುದ್ಧ ಆರಂಭವಾದ ಮೊದಲ ವಾರದಿಂದ 4ನೇ ವಾರದ ವೇಳೆಗೆ ಭಾರತೀಯರ ಅಭಿಪ್ರಾಯವೂ ಬದಲಾಗಿರುವುದನ್ನು ಈ ಸಮೀಕ್ಷೆಯಲ್ಲಿ ಗಮನಿಸಬಹುದು. ದೇಶಾದ್ಯಂತ 18 ವರ್ಷದ ಮೇಲಿನವರಲ್ಲಿ ನಡೆಸಿದ ಸಿವೋಟರ್ ಸ್ನ್ಯಾಪ್ ಪೋಲ್ CATI ಸಂದರ್ಶನಗಳು (ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ವ್ಯೂಯಿಂಗ್) ಅನ್ನು ಆಧರಿಸಿವೆ (BARC-ALL INDIA). ದೇಶಾದ್ಯಂತ ಸಿವೋಟರ್ ನಡೆಸಿದ ಈ ಸಮೀಕ್ಷೆಯಲ್ಲಿ ಒಟ್ಟು 10,854 ಜನರು ಭಾಗವಹಿಸಿದ್ದರು. ಮಾರ್ಚ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಫೋನ್ ಮೂಲಕ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಮೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಮುಖ ಪ್ರಶ್ನೆಗಳು ಇಲ್ಲಿವೆ.
1. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಯಾರನ್ನು ನಂಬಬೇಕು?
ಮಾರ್ಚ್ ಎರಡನೇ ವಾರ:
ಅಮೆರಿಕ – 26%
ಇರಾನ್ – 27%
ಹೇಳಲು ಸಾಧ್ಯವಿಲ್ಲ – 47%
ಮಾರ್ಚ್ ಮೂರನೇ ವಾರ:
ಅಮೆರಿಕ – 26%
ಇರಾನ್ – 38%
ಹೇಳಲು ಸಾಧ್ಯವಿಲ್ಲ – 36%
ಮಾರ್ಚ್ ನಾಲ್ಕನೇ ವಾರ:
ಅಮೆರಿಕ – 15%
ಇರಾನ್ – 58%
ಹೇಳಲು ಸಾಧ್ಯವಿಲ್ಲ – 27%
ಸಮೀಕ್ಷೆ ಪ್ರಕಾರ 3 ವಾರಗಳಲ್ಲಿ ಭಾರತೀಯರ ಅಭಿಪ್ರಾಯದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿತು. ಇರಾನ್ ಮೇಲಿನ ನಂಬಿಕೆ ವೇಗವಾಗಿ ಬೆಳೆಯಿತು.
2. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಟಸ್ಥವಾಗಿರಬೇಕೇ?
ಎರಡನೇ ವಾರ – 58% ಹೌದು
ಮೂರನೇ ವಾರ – 61% ಹೌದು
ನಾಲ್ಕನೇ ವಾರ – 60% ಹೌದು
ಭಾರತ ಯುದ್ಧದಿಂದ ದೂರವಿರಬೇಕು ಎಂದು ಭಾರತದ ಬಹುಪಾಲು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
3. ಭಾರತವು ಒಂದು ನಿಲುವು ತೆಗೆದುಕೊಳ್ಳಬೇಕಾದರೆ ಯಾವ ದೇಶದ ಪರವಾಗಿರಬೇಕು?
ಎರಡನೇ ವಾರ – ಇರಾನ್ 56%, ಅಮೆರಿಕ 44%
ಮೂರನೇ ವಾರ – ಇರಾನ್ 62%, ಅಮೆರಿಕ 38%
ನಾಲ್ಕನೇ ವಾರ – ಇರಾನ್ 74%, ಅಮೆರಿಕ 26%
ಪ್ರತಿ ವಾರ ಇರಾನ್ಗೆ ಭಾರತೀಯರ ಬೆಂಬಲ ಹೆಚ್ಚುತ್ತಿರುವುದನ್ನು ನೋಡಬಹುದು.
4. ಅಂತಾರಾಷ್ಟ್ರೀಯವಾಗಿ ಯಾವ ದೇಶವನ್ನು ನಂಬಬೇಕು?
ಎರಡನೇ ವಾರ – ರಷ್ಯಾ 67%, ಅಮೆರಿಕ 10%
ಮೂರನೇ ವಾರ – ರಷ್ಯಾ 73%, ಅಮೆರಿಕ 11%
ನಾಲ್ಕನೇ ವಾರ – ರಷ್ಯಾ 70%, ಅಮೆರಿಕ 14%
ಮೂರು ವಾರಗಳಲ್ಲಿಯೂ ಭಾರತೀಯರಿಗೆ ರಷ್ಯಾದ ಬಗ್ಗೆ ಹೆಚ್ಚು ಅಗಾಧವಾದ ವಿಶ್ವಾಸವಿದೆ.
5. ಭಾರತಕ್ಕೆ ಯಾವ ದೇಶ ಬೆದರಿಕೆಯಾಗಿದೆ?
ಎರಡನೇ ವಾರ – ಚೀನಾ 41%, ಪಾಕಿಸ್ತಾನ 30%
ಮೂರನೇ ವಾರ – ಚೀನಾ 44%, ಪಾಕಿಸ್ತಾನ 31%
ನಾಲ್ಕನೇ ವಾರ – ಚೀನಾ 44%, ಪಾಕಿಸ್ತಾನ 34%
ಜನರು ಪಾಕಿಸ್ತಾನಕ್ಕಿಂತಲೂ ಚೀನಾವನ್ನು ದೇಶಕ್ಕೆ ಪ್ರಮುಖ ಬೆದರಿಕೆಯಾಗಿ ನೋಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
6. ಭಾರತದ ವಿದೇಶಾಂಗ ನೀತಿ ಹೇಗಿದೆ?
ಹೆಚ್ಚಾಗಿ ತೃಪ್ತಿಕರವಾಗಿದೆ – 32%
ಸ್ವಲ್ಪ ಮಟ್ಟಿಗೆ ತೃಪ್ತಿಕರ – 21%
ಅತೃಪ್ತಿ – ಸುಮಾರು 42%
ಒಟ್ಟಾರೆಯಾಗಿ ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಯಿತು.
7. ನಮ್ಮ ದೇಶದ ಯಾವ ವಲಯಗಳು ಯುದ್ಧದಿಂದ ಹೆಚ್ಚು ಪರಿಣಾಮ ಬೀರಿವೆ?
ಆರ್ಥಿಕತೆ – 45% ರಿಂದ 50%
ವಿದೇಶಾಂಗ ನೀತಿ – 13% ರಿಂದ 16%
ರಾಜಕೀಯ – 11% ರಿಂದ 13%
ಜನರ ಕಾಳಜಿ ಹೆಚ್ಚಾಗಿ ಆರ್ಥಿಕತೆಯ ಬಗ್ಗೆ ಇದೆ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.
8. ಗ್ಯಾಸ್ ಸಮಸ್ಯೆ: ಇದು ಇನ್ನೂ ಪರಿಣಾಮ ಬೀರುತ್ತಿದೆಯೇ?
ಎರಡನೇ ವಾರ – 64% ತೊಂದರೆ ನೀಡುತ್ತಿದೆ
ಮೂರನೇ ವಾರ – 65% ತೊಂದರೆ ನೀಡುತ್ತಿದೆ
ನಾಲ್ಕನೇ ವಾರ – 65% ತೊಂದರೆ ನೀಡುತ್ತಿದೆ
ಮೂರು ವಾರಗಳಲ್ಲಿಯೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
9. ಇಂಧನ ಬೆಲೆ ಏರಿಕೆಯ ಬಗ್ಗೆ ನೀವು ಚಿಂತಿತರಾಗಿದ್ದೀರಾ?
82% ಜನರು ಬೆಲೆಗಳು ಹೆಚ್ಚಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು 10%ರಿಂದ 50%ರಷ್ಟು ಹೆಚ್ಚಳವನ್ನು ಊಹಿಸಿದ್ದಾರೆ.
ಇಂಧನ ಕೊರತೆಯ ಸಂದರ್ಭದಲ್ಲಿ 66% ಜನರು ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. 16% ಜನ ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದಾರೆ. 8% ಜನ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದಾರೆ.
10. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯವಸ್ಥೆಯು ಬದಲಾಗುತ್ತದೆಯೇ?
ಸುಮಾರು 52%ರಷ್ಟು ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಸಮೀಕ್ಷೆಯು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಭಾರತದ ಜನರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ದೂರವಿರಲು ಬಯಸುತ್ತಾರೆ. ಆದರೆ ನಿಲುವು ತೆಗೆದುಕೊಳ್ಳುವ ಅನಿವಾರ್ಯತೆ ಬಂದರೆ ಅವರು ಇರಾನ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಸಮೀಕ್ಷೆಯು ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮವು ಈಗಾಗಲೇ ಭಾರತದ ಜನರ ಜೀವನವನ್ನು ತಲುಪಿದೆ ಎಂದು ಸ್ಪಷ್ಟಪಡಿಸುತ್ತದೆ. ಈ ಸಮೀಕ್ಷೆಯನ್ನು ದೂರವಾಣಿ ಮೂಲಕ ನಡೆಸಲಾಗಿತ್ತು. ಈ ಸಮೀಕ್ಷೆ ಜಾಗತಿಕ ಯುದ್ಧವನ್ನು ಭಾರತೀಯರು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂಬುದರ ಪ್ರತಿಬಿಂಬವಾಗಿದೆ ಎನ್ನಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಧುರಂಧರ್’ ನಾಯಕಿ ಸಾರಾ ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಯುಫೋರಿಯಾ’ ಈ ವಾರ ಒಟಿಟಿಗೆ ಬಂದಿದೆ. ವಾಸುದೇವ್ ಮೆನನ್, ಭೂಮಿಕಾ ಚಾವ್ಲಾ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿರುವ ಸಿನಿಮಾ ಇದಾಗಿದೆ. ಸಿನಿಮಾ ಅನ್ನು ಇಟಿವಿ ವಿನ್ ನಲ್ಲಿ ವೀಕ್ಷಿಸಬಹುದಾಗಿದೆ.
ಭಾರತದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಮಾಮ್ಲಾ ಲೀಗಲ್ ಹೈ’ನ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ರವಿಕಿಶನ್ ಸೇರಿದಂತೆ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಈ ವೆಬ್ ಸರಣಿ ಲಾಯರ್ಗಳ ಕುರಿತಾದ ಕತೆ ಒಳಗೊಂಡಿದೆ. ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ.
ಆಮಿರ್ ಖಾನ್ ನಿರ್ಮಾಣ ಮಾಡಿ, ಕಮಿಡಿಯನ್ ವೀರ್ ದಾಸ್ ನಟಿಸಿ, ನಿರ್ದೇಶನ ಮಾಡಿರುವ ಹಾಸ್ಯಮಯ ಥ್ರಿಲ್ಲರ್ ಸಿನಿಮಾ ‘ಹ್ಯಾಪಿ ಪಟೇಲ್’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ತಕ್ಕ ಮಟ್ಟಿಗೆ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.
ಅಮೀರ್ ಖಾನ್ ನಟಿಸಿ ಆರ್ಎಸ್ ಪ್ರಸನ್ನ ನಿರ್ದೇಶನ ಮಾಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಬಳಿಕ ಯುಟ್ಯೂಬ್ನಲ್ಲೂ ಬಿಡುಗಡೆ ಆಯ್ತು. ಇದೀಗ ಈ ಸಿನಿಮಾ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದೆ.
‘ಸಾಂಪ್ರದಾಯಿನಿ ಸುಪ್ಪಿನಿ ಸುದ್ದಪೂಸನಿ’ ಹೆಸರಿನ ತೆಲುಗು ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಶಿವಾಜಿ, ಲಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾಸ್ಯಮಯ ಫ್ಯಾಮಿಲಿ ಕತೆಯನ್ನು ಒಳಗೊಂಡಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಮೊದಲ ಪಂದ್ಯದಂತೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು.
ಲಕ್ನೋ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸಿದ ಗೋಲ್ಡನ್ ಡಕ್ಗೆ ಬಲಿಯಾಗಿದ್ದರು. ಇದರ ಹೊರತಾಗಿಯೂ ಡೆಲ್ಲಿ ತಂಡ ಲಕ್ನೋ ವಿರುದ್ಧ ಗೆದ್ದಿತ್ತು. ಹೀಗಾಗಿ ರಾಹುಲ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿರಲಿಲ್ಲ.
ಆದರೆ ಮುಂಬೈ ತಂಡದ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಿ ಲಯ ಕಂಡುಕೊಳ್ಳುವ ಇರಾದೆಯಲ್ಲಿದ್ದ ರಾಹುಲ್ ಮತ್ತೊಮ್ಮೆ ಬಹುಬೇಗನೇ ವಿಕೆಟ್ ಒಪ್ಪಿಸಿದ್ದಾರೆ. ನಿಸ್ಸಾಂಕ ಜೊತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಈ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಬಾರಿಸಿ ಔಟಾದರು.
ರಾಹುಲ್ ವಿಕೆಟ್ ಪತನದ ಬಳಿಕ ಬಂದ ನಿತೀಶ್ ರಾಣಾ ಕೂಡ ಸತತ ಎರಡನೇ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾದರು. ಈ ಪಂದ್ಯದಲ್ಲಿ ಸಿಂಗಲ್ ಕದಿಯುವ ಯತ್ನದಲ್ಲಿ ರಾಣಾ ರನೌಟ್ಗೆ ಬಲಿಯಾದರು. ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಅದ್ಭುತ ಥ್ರೋ ಮೂಲಕ ರಾಣಾ ವಿಕೆಟ್ ಉರುಳಿಸಿದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 162 ರನ್ ಕಲೆಹಾಕಿತು. ತಂಡದ ಪರ ನಾಯಕ ಸೂರ್ಯಕುಮಾರ್ 51 ರನ್ಗಳ ಇನ್ನಿಂಗ್ಸ್ ಆಡಿದರೆ, ರೋಹಿತ್ 35 ರನ್ ಮತ್ತು ನಮನ್ ಧೀರ್ 28 ರನ್ ಗಳಿಸಿದರು. ದೆಹಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ಎನ್ಗಿಡಿ, ಪಟೇಲ್, ವಿಪ್ರಾಜ್ ಮತ್ತು ನಟರಾಜನ್ ತಲಾ ಒಂದು ವಿಕೆಟ್ ಪಡೆದರು.
ಬೆಂಗಳೂರು, ಏಪ್ರಿಲ್ 04: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. 22 ವರ್ಷದ ವಿಜಯ್ ಕೊಲೆಯಾದ ವ್ಯಕ್ತಿಯಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಜಯ್ಗೆ ಚಾಕು ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಕಿರಣ್ ಮತ್ತು ವಿನೋದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.
ನಿನ್ನೆ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿತ್ತು. ವಿಷಯವನ್ನು ಅಲ್ಲಿಗೆ ಬಿಡದೆ ಇಂದು ಬೆಳಗ್ಗೆ ವಿಜಯ್ ಹುಡುಕಿಕೊಂಡು ಆರೋಪಿಗಳಾದ ಕಿರಣ್ ಮತ್ತು ವಿನೋದ್ ಹೋಗಿದ್ದರು. ಮನೆ ಬಳಿ ತೆರಳಿದ್ದಾಗ ವಿಜಯ್ ಸಿಗದಿದ್ದರಿಂದ ಫೋನ್ ಮಾಡಿ ಆತನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡಿದ್ದರು. ವಿಜಯ್ ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಶುರುಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿಜಯ್ ಹೊಟ್ಟೆಗೆ ಚಾಕು ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಜೆ.ಸಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಬೈಕ್ ಟಚ್ ಆದ ವಿಚಾರ ಕೊಲೆಗೆ ಕೇವಲ ಪ್ರಚೋದನೆ ಮಾತ್ರ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಕಿರಣ್ ಮತ್ತು ವಿಜಯ್ ನಡುವೆ ಹಿಂದಿನಿಂದಲೂ ದ್ವೇಷವಿತ್ತು. ವಿಜಯ್ಗೆ ಅದಾಗಲೇ ಮದುವೆಯಾಗಿದ್ದರೂ ಮಾಜಿ ಪ್ರೇಯಸಿಗೆ ಕಾಟ ನೀಡುತ್ತಿದ್ದ. ಆಕೆ ಈಗ ಕಿರಣ್ ಲವರ್ ಆಗಿದ್ದು, ಇದೇ ಕಾರಣಕ್ಕೆ ವಿಜಯ್ ಮೇಲೆ ಕಿರಣ್ಗೆ ಕೋಪ ಇತ್ತು. ಹೀಗಾಗಿ ನಿನ್ನೆ ರಾತ್ರಿಯ ಗಲಾಟೆ ನೆಪದಲ್ಲಿ ಇಂದು ಅಟ್ಟಾಡಿಸಿ ವಿಜಯ್ನ ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಕ್ರಿಶ್ಚಿಯನ್ ಧರ್ಮದಲ್ಲಿ ಗುಡ್ ಫ್ರೈಡೇ ಮತ್ತು ಈಸ್ಟರ್ ಭಾನುವಾರ ಅತ್ಯಂತ ಪವಿತ್ರವಾದ ದಿನಗಳು. ಈ ವರ್ಷ ಏಪ್ರಿಲ್ 3 ರಂದು ಶುಭ ಶುಕ್ರವಾರವನ್ನು (Good Friday) ಆಚರಿಸಲಾಗಿದ್ದು, ಅದರ ಎರಡು ದಿನಗಳ ನಂತರ ಅಂದರೆ ನಾಳೆ, ಏಪ್ರಿಲ್ 5 ರಂದು ಈಸ್ಟರ್ ಭಾನುವಾರವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನವು ಕೇವಲ ಸಂಪ್ರದಾಯವಲ್ಲ, ಬದಲಿಗೆ ಮನುಕುಲಕ್ಕೆ ಭರವಸೆ ಮತ್ತು ಹೊಸ ಜೀವನದ ಸಂದೇಶವನ್ನು ನೀಡುವ ಪವಾಡದ ದಿನವಾಗಿದೆ.
ಪವಿತ್ರ ಶನಿವಾರದ ಮೌನ:
ಇಂದು ಪವಿತ್ರ ಶನಿವಾರ (Holy Saturday). ಈ ದಿನವನ್ನು ಶೋಕ, ಮೌನ ಮತ್ತು ಕಾಯುವಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ನಂತರದ ಈ ದಿನದಂದು ಕ್ರೈಸ್ತರು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾಳೆಯ ಸಂಭ್ರಮಕ್ಕೆ ಸಿದ್ಧವಾಗುವ ಮುನ್ನ ಅನುಭವಿಸುವ ಶಾಂತಿಯುತ ಕಾಯುವಿಕೆ ಈ ದಿನದ ವಿಶೇಷ.
ಪುನರುತ್ಥಾನದ ವಿಜಯ – ಈಸ್ಟರ್ ಮಹತ್ವ:
ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುಕ್ರಿಸ್ತನನ್ನು ಗುಡ್ ಫ್ರೈಡೇ ದಿನದಂದು ಶಿಲುಬೆಗೇರಿಸಲಾಯಿತು. ಆದರೆ, ಸಾವನ್ನು ಜಯಿಸಿದ ಅವರು ಎರಡು ದಿನಗಳ ನಂತರ, ಅಂದರೆ ಭಾನುವಾರದಂದು ಪುನರುತ್ಥಾನಗೊಂಡರು (ಮರಳಿ ಜೀವಂತವಾಗಿ ಬಂದರು). ಈ ಅದ್ಭುತ ಘಟನೆಯ ನೆನಪಿಗಾಗಿ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ.
ಸಂದೇಶ: ಪ್ರತಿಯೊಂದು ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ ಎಂಬ ಸತ್ಯವನ್ನು ಯೇಸು ತನ್ನ ಪುನರುತ್ಥಾನದ ಮೂಲಕ ಜಗತ್ತಿಗೆ ತೋರಿಸಿಕೊಟ್ಟನು.
ಭೂಮಿಯ ಮೇಲಿನ ವಾಸ: ಬೈಬಲ್ ಪ್ರಕಾರ, ಪುನರುತ್ಥಾನದ ನಂತರ ಯೇಸು ಸುಮಾರು 40 ದಿನಗಳ ಕಾಲ ಭೂಮಿಯ ಮೇಲಿದ್ದು, ತನ್ನ ಅನುಯಾಯಿಗಳಿಗೆ ಪ್ರೀತಿ, ಕ್ಷಮೆ ಮತ್ತು ಕರುಣೆಯ ಮೌಲ್ಯಗಳನ್ನು ಬೋಧಿಸಿದನು.
ಈಸ್ಟರ್ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಈಸ್ಟರ್ ಹಬ್ಬವನ್ನು ಯಾವಾಗಲೂ ಭಾನುವಾರವೇ ಆಚರಿಸಲಾಗುತ್ತದೆ, ಆದರೆ ಅದರ ದಿನಾಂಕ ಪ್ರತಿ ವರ್ಷ ಬದಲಾಗುತ್ತದೆ. ಇದು ಖಗೋಳಶಾಸ್ತ್ರದ ಲೆಕ್ಕಾಚಾರವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ವಸಂತಕಾಲದ (Spring Equinox) ಮೊದಲ ಹುಣ್ಣಿಮೆಯ ನಂತರ ಬರುವ ಮೊದಲ ಭಾನುವಾರವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆನೇಕಲ್, ಏಪ್ರಿಲ್ 04: ಐಪಿಎಲ್ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಎಚ್ಚರದಿಂದ ಇರಬೇಕಾಗಿದೆ. “IPL Dhamaka Sale” ಎಂಬ ಹೆಸರಿನ ನಕಲಿ ಖಾತೆಗಳು ಮತ್ತು ವೆಬ್ಸೈಟ್ಗಳನ್ನು ಸೃಷ್ಟಿಸಿ, ಉಚಿತ ಐಪಿಎಲ್ ಟಿಕೆಟ್ಗಳ ಆಮಿಷವೊಡ್ಡಿ ಹಣ ಕಡಿತಗೊಳಿಸುವ ಜಾಲ ಸಕ್ರಿಯವಾಗಿದೆ. ನಕಲಿ ಲಿಂಕ್ಗಳನ್ನು ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆಗಳಿಂದ ಹಣ ಕಡಿತವಾಗುತ್ತಿದ್ದು, ಹಲವರು ಈಗಾಗಲೇ ಮೋಸ ಹೋಗಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ನಾರಾಯಣ್ ಅವರು ಅಭಿಮಾನಿಗಳಿಗೆ ಇಂತಹ ನಕಲಿ ಲಿಂಕ್ಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 05ರಿಂದ ಏಪ್ರಿಲ್ 11ರವರೆಗಿನ ಶುಕ್ರನ ಸಂಚಾರ ಮೇಷದಲ್ಲಿ ಆಗಲಿದೆ. ಪ್ರೇಮಕ್ಕೆ ಎಷ್ಟೇ ವಿಘ್ನಗಳು ಬಂದರೂ ಅದನ್ನು ಎದುರಿಸಿ ನಿಲ್ಲುವ ಉತ್ಸಾಹವೂ ಇರಲಿದೆ. ಏನನ್ನೂ ಊಹಿಸಿಕೊಂಡು ಹತಾಶರಾಗುವ ಸಂದರ್ಭವೂ ಬರಬಹುದು. ಎಚ್ಚರದಿಂದ ಇರಿ.
ಮೇಷ
ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಳೆಯ ನೆನಪುಗಳು ಕಾಡಿ ದುಃಖ ತರಬಹುದು. ತಾಳ್ಮೆಯಿಂದ ವರ್ತಿಸಿದರೆ ವಾರಾಂತ್ಯದಲ್ಲಿ ಪ್ರೇಮ ಪ್ರಯಾಣಕ್ಕೆ ಶುಭ ಯೋಗವಿದೆ. ಮಾತಿನ ಮೇಲೆ ನಿಗಾ ಇರಲಿ.
ವೃಷಭ
ಹೊಸ ಪ್ರೇಮ ಅಂಕುರಿಸುವ ಸಾಧ್ಯತೆ ದಟ್ಟವಾಗಿದೆ. ಸಂಗಾತಿಯ ಜೊತೆ ಸುಂದರ ಪಯಣ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಗೊಂದಲಗಳು ದೂರವಾಗಿ ಪ್ರೀತಿಯಲ್ಲಿ ಸ್ಪಷ್ಟತೆ ಸಿಗಲಿದೆ. ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆಯುವಿರಿ.
ಮಿಥುನ
ಗ್ರಹಗಳ ಬದಲಾವಣೆಯಿಂದ ಪ್ರೇಮ ಜೀವನದಲ್ಲಿ ತಲ್ಲಣ ಉಂಟಾಗಬಹುದು. ಸಂಗಾತಿಯ ನಡವಳಿಕೆ ಗೊಂದಲ ಮೂಡಿಸಬಹುದು. ಏಕಾಂತ ಬಯಸುವಿರಿ. ವಾರದ ಮಧ್ಯಭಾಗದಲ್ಲಿ ಹಳೆಯ ಮಿತ್ರರಿಂದ ಹೊಸ ಪ್ರೇಮ ಪ್ರಸ್ತಾಪ ಬರುವ ನಿರೀಕ್ಷೆಯಿದೆ.
ಕರ್ಕಾಟಕ
ಭಾವನಾತ್ಮಕವಾಗಿ ಈ ವಾರ ಸ್ವಲ್ಪ ಏರುಪೇರಾಗಲಿದೆ. ಸಣ್ಣ ವಿಷಯಗಳಿಗೂ ದುಃಖ ಪಡುವ ಸಾಧ್ಯತೆಯಿದೆ. ಆದರೆ ಸಂಗಾತಿಯ ಬೆಂಬಲ ನಿಮಗೆ ಸಮಾಧಾನ ನೀಡುತ್ತದೆ. ದೂರದ ಪ್ರಯಾಣದ ಯೋಜನೆ ಕೈಗೂಡಲಿದೆ, ಸಂಬಂಧ ಸುಧಾರಿಸಲಿದೆ.
ಸಿಂಹ
ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರಲಿದೆ. ಸಂಗಾತಿಯ ಜೊತೆ ಪ್ರವಾಸ ಕೈಗೊಳ್ಳುವಿರಿ. ವೃತ್ತಿಜೀವನದ ಒತ್ತಡದಿಂದ ಸಂಗಾತಿಯ ಜೊತೆ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು, ಅದನ್ನು ಪ್ರೀತಿಯಿಂದ ಸರಿಪಡಿಸಿಕೊಳ್ಳಿ. ಹೊಸ ಸಂಬಂಧಗಳಿಗೆ ಇದು ಸಕಾಲ.
ಕನ್ಯಾ
ಸಂಗಾತಿಯ ಬಗ್ಗೆ ಇಲ್ಲದ ಗೊಂದಲಗಳನ್ನು ಬೆಳೆಸಿಕೊಳ್ಳಬೇಡಿ. ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು. ವಾರಾಂತ್ಯದಲ್ಲಿ ಎಲ್ಲವೂ ಸರಿಯಾಗಿ ಹೊಸ ಪ್ರೇಮದ ಹೊಳಪು ಕಾಣಲಿದೆ. ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿ.
ತುಲಾ
ಮನಸ್ಸಿನಲ್ಲಿ ಹೊಸ ಪ್ರೇಮದ ಸಂಚಲನವಾಗಲಿದೆ. ಪ್ರೇಮ ಪಯಣಕ್ಕೆ ಅದೃಷ್ಟದ ಬೆಂಬಲವಿದೆ. ಸಂಗಾತಿಯೊಂದಿಗೆ ಮನಸ್ತಾಪವಿದ್ದರೆ ಈ ವಾರ ಪರಿಹಾರವಾಗಲಿದೆ. ಪ್ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ.
ವೃಶ್ಚಿಕ
ಈ ವಾರ ಅತಿಯಾದ ಆತುರ ಪ್ರೇಮದಲ್ಲಿ ವಿಘ್ನ ತರಬಹುದು. ಸಂಗಾತಿಯಿಂದ ದೂರವಾಗುವ ಭಯ ಅಥವಾ ದುಃಖ ಕಾಡಬಹುದು. ತಾಳ್ಮೆಯಿಂದಿರಬೇಕು. ವಾರಾಂತ್ಯದಲ್ಲಿ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಅಥವಾ ಪ್ರವಾಸದ ಆಹ್ವಾನ ಬರಲಿದೆ.
ಧನುಸ್ಸು
ಹೊಸ ಪ್ರೇಮ ಸಂಬಂಧಗಳು ವಿವಾಹದ ಹಂತಕ್ಕೆ ತಲುಪಬಹುದು. ಸಂಗಾತಿಯ ಜೊತೆಗಿನ ಪಯಣವು ನಿಮಗೆ ನೆಮ್ಮದಿ ನೀಡಲಿದೆ. ಪ್ರೇಮ ಜೀವನದಲ್ಲಿ ಇದ್ದ ಗೊಂದಲಗಳು ಮರೆಯಾಗಿ, ಪರಸ್ಪರ ನಂಬಿಕೆ ಹೆಚ್ಚಾಗುವ ಸಮಯವಿದು.
ಮಕರ
ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದೆ ವ್ಯತ್ಯಾಸಗಳು ಉಂಟಾಗಬಹುದು. ಇದು ಮನಸ್ಸಿಗೆ ಅಸಮಾಧಾನ ತರಬಹುದು. ವಾರದ ಕೊನೆಯಲ್ಲಿ ಸಂಗಾತಿಯನ್ನು ಪ್ರವಾಸಕ್ಕೆ ಕರೆದೊಯ್ಯುವುದು ನಿಮ್ಮ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ.
ಕುಂಭ
ಗ್ರಹಗಳ ಶುಭ ದೃಷ್ಟಿಯಿಂದ ಹೊಸ ಪ್ರೇಮ ಜೀವನ ಆರಂಭವಾಗಲಿದೆ. ಹಳೆಯ ದುಃಖಗಳನ್ನು ಮರೆತು ಮುನ್ನಡೆಯುವಿರಿ. ಸಂಗಾತಿಯ ಜೊತೆಗಿನ ಸುದೀರ್ಘ ಪಯಣವು ನಿಮ್ಮ ಪ್ರೇಮಕ್ಕೆ ಹೊಸ ಅರ್ಥ ನೀಡಲಿದೆ. ಆಕರ್ಷಣೆ ಹೆಚ್ಚಾಗಲಿದೆ.
ಮೀನ
ಈ ವಾರ ನೀವು ಪ್ರೇಮ ಜೀವನದಲ್ಲಿ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಸಣ್ಣ ಗೊಂದಲಗಳೂ ನಿಮ್ಮನ್ನು ಕಾಡಬಹುದು. ಸಂಗಾತಿಯ ಪ್ರೀತಿ ನಿಮ್ಮ ಎಲ್ಲ ದುಃಖಗಳನ್ನು ದೂರ ಮಾಡುತ್ತದೆ. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.