Bengaluru 1 day Tour: 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು – Kannada News | Bengaluru’s Best: History, Nature and Modern Attractions – Your Ultimate Travel Guide

ಬೆಂಗಳೂರು, ಜ.27: ಬೆಂಗಳೂರು (Bengaluru Tourist Attractions) ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ತನ್ನ ಅದ್ಭುತ ಉದ್ಯಾನವನಗಳು, ಐತಿಹಾಸಿಕ ಕಟ್ಟಡಗಳು ಮತ್ತು ವರ್ಣರಂಜಿತ ನೈಟ್‌ಲೈಫ್‌ಗೆ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧದಂತಹ ಸ್ಥಳಗಳು ನವ-ದ್ರಾವಿಡ ಶಾಸಕಾಂಗ ಕಟ್ಟಡವಾಗಿದೆ. ಹಿಂದಿನ ರಾಜಮನೆತನದ ನಿವಾಸಗಳಲ್ಲಿ ಇಂಗ್ಲೆಂಡ್‌ನ ವಿಂಡ್ಸರ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾದ 19 ನೇ ಶತಮಾನದ ಬೆಂಗಳೂರು ಅರಮನೆ ಮತ್ತು 18 ನೇ ಶತಮಾನದ ತೇಗದ ರಚನೆಯಾದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಸೇರಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಭೇಟಿ ನೀಡುವ ಸ್ಥಳಗಳು : ಇಸ್ಕಾನ್, ರಾಜರಾಜೇಶ್ವರಿ ದೇವಸ್ಥಾನ, ಬನ್ನೇರುಘಟ್ಟ ಪ್ರಾಣಿಶಾಸ್ತ್ರೀಯ ಉದ್ಯಾನವನ, ವಿಜ್ಞಾನ ವಸ್ತು ಸಂಗ್ರಹಾಲಯ ಮತ್ತು ತಾರಾಲಯ.

ಕಬ್ಬನ್ ಪಾರ್ಕ್ : ನಗರದ ಹಸಿರು ಶ್ವಾಸಕೋಶ ಬೆಂಗಳೂರಿನ ಹೃದಯಭಾಗದಲ್ಲಿರುವ ಇದು ಕೇವಲ ಉದ್ಯಾನವನವಲ್ಲ, ಒಂದು ಜೀವವೈವಿಧ್ಯದ ಕೇಂದ್ರ. ಇಲ್ಲಿನ ಬಿದಿರಿನ ಮೆದೆಗಳು, ಬೃಹತ್ ಮರಗಳು ಮತ್ತು ಪ್ರತಿಮೆಯು ನಗರದ ಗದ್ದಲದಿಂದ ಮುಕ್ತಿ ನೀಡುತ್ತವೆ. ಇಲ್ಲಿ ವಾಹನ ಸಂಚಾರದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ವಾರಾಂತ್ಯದಲ್ಲಿ ಸಂಪೂರ್ಣ ‘ನೋ ಟ್ರಾಫಿಕ್’ ವಲಯವಾಗಿ ಪ್ರವಾಸಿಗರಿಗೆ ಮುಕ್ತವಾಗಿದೆ.

ವಿಧಾನಸೌಧ: ದಕ್ಷಿಣ ಭಾರತದ ತಾಜ್‌ಮಹಲ್ ಎಂದು ಕರೆಯುತ್ತಾರೆ. ಗ್ರಾನೈಟ್‌ನಿಂದ ನಿರ್ಮಿತವಾದ ಈ ಕಟ್ಟಡವು ದ್ರಾವಿಡ ಮತ್ತು ಇಂಡೋ-ಸಾರ್ಸೆನಿಕ್ ಶೈಲಿಗಳ ಸುಂದರ ಮಿಶ್ರಣವಾಗಿದೆ. ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಂಜೆ ಹೊತ್ತು ಈ ಕಟ್ಟಡವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. 2026ರಲ್ಲಿ ಬಿಡುಗಡೆಯಾದ ಹೊಸ ‘ಡಬಲ್ ಡೆಕ್ಕರ್ ಅಂಬಾರಿ’ ಬಸ್ ಮೂಲಕ ಪ್ರವಾಸಿಗರು ಇದರ ಸೌಂದರ್ಯವನ್ನು ಸವಿಯಬಹುದು.

ಬೆಂಗಳೂರು ಅರಮನೆ: 19ನೇ ಶತಮಾನದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿದೆ. ಅರಮನೆಯ ಒಳಗಿರುವ ಸುಂದರವಾದ ಕೆತ್ತನೆಗಳು, ಸುರುಳಿಯಾಕಾರದ ಮೆಟ್ಟಿಲುಗಳು ಮತ್ತು ಹಳೆಯ ಕಾಲದ ಫೋಟೋಗಳು ನಿಮ್ಮನ್ನು ರಾಜಮನೆತನದ ಕಾಲಕ್ಕೆ ಕರೆದೊಯ್ಯುತ್ತವೆ.

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ: ಇದು 18ನೇ ಶತಮಾನದ ಈ ಕಟ್ಟಡವು ಸಂಪೂರ್ಣವಾಗಿ ತೇಗದ ಮರದಿಂದ ನಿರ್ಮಿತವಾಗಿದೆ.ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಈ ಅರಮನೆಯನ್ನು ‘ಸುಖದ ನಿವಾಸ’ ಎಂದು ಕರೆಯಲಾಗುತ್ತಿತ್ತು.ಇಲ್ಲಿನ ಕೆತ್ತಿದ ಕಮಾನುಗಳು ಮತ್ತು ಕಂಬಗಳು ಇಂದಿಗೂ ಸುಸ್ಥಿತಿಯಲ್ಲಿವೆ.

ನೈಟ್‌ಲೈಫ್ : ಇದು ಭಾರತದ ಪಬ್ ಕ್ಯಾಪಿಟಲ್, ಬೆಂಗಳೂರಿನ ನೈಟ್‌ಲೈಫ್ ಈಗಲೂ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ.ಎಂ.ಜಿ. ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ವಿಶ್ವದರ್ಜೆಯ ಮೈಕ್ರೋಬ್ರೆವರಿಗಳು ಇವೆ.

2026ರಲ್ಲಿ ಸೈಬರ್-ಪಂಕ್ ಶೈಲಿಯ ಪಬ್‌ಗಳು ಮತ್ತು ಲೈವ್ ಮ್ಯೂಸಿಕ್ ಬ್ಯಾಂಡ್‌ಗಳ ಪ್ರದರ್ಶನಗಳು ನಗರದ ರಾತ್ರಿಯನ್ನು ಮತ್ತಷ್ಟು ರಂಗೇರಿಸಿವೆ.

ಇದನ್ನೂ ಓದಿ: ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್

ಪ್ರಯಾಣದ ವಿವರ:

ಬೆಳಿಗ್ಗೆ 07.30 ಕ್ಕೆ ಇಲಾಖೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರ

ಬೆಳಿಗ್ಗೆ 07.45 ಕ್ಕೆ ಇಸ್ಕಾನ್ ದೇವಾಲಯ

ಬೆಳಿಗ್ಗೆ 07.45 ರಿಂದ 08.45 ರವರೆಗೆ ಇಸ್ಕಾನ್ ಭಗವಾನ್ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.45 ರಿಂದ 9.15 ರವರೆಗೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 9.15 ಇಲಾಖೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 10.30 ಕ್ಕೆ ಬನ್ನೇರುಘಟ್ಟ

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ರವರೆಗೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿ ನೀಡಿ

ಮಧ್ಯಾಹ್ನ 1.00 ರಿಂದ 1.30 ರವರೆಗೆ ಬನ್ನೇರುಘಟ್ಟದ ​​ಹೋಟೆಲ್ ಮಯೂರ ವನಶ್ರೀಯಲ್ಲಿ ಊಟ

ಮಧ್ಯಾಹ್ನ 1.30 ಕ್ಕೆ ಇಲಾಖೆ ಬನ್ನೇರುಘಟ್ಟ

ಸಂಜೆ 4.30 ರಿಂದ 5.15 ರವರೆಗೆ ತಾರಾಲಯ

ಸಂಜೆ 6.30 ಪ್ರವಾಸವು ಕೆಎಸ್‌ಟಿಡಿಸಿ ಪ್ರಧಾನ ಕಚೇರಿ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು – Kannada News | Another Congress Leader’s High Handedness After Rajeev Gowda Row: Threats and Assault in CM Siddaramaiah’s Name

ಹಲ್ಲೆಗೊಳಗಾದ ದಂಪತಿ (ಎಡಚಿತ್ರ) ಮತ್ತು ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜು ಸಿಎಂ ಪುತರ ಯತೀಂದ್ರ ಜತೆ

ಮೈಸೂರು, ಜನವರಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ (Varuna) ನಡೆದ ಕಾಂಗ್ರೆಸ್ (Congress) ಮುಖಂಡನ ಗಲಾಟೆ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ತಲುಪಿದೆ. ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ನಿರಂತರ ಬೆದರಿಕೆಗಳ ವಿರುದ್ಧ ನ್ಯಾಯ ಕೋರಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ದಂಪತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಲಿಖಿತ ದೂರು ನೀಡಲು ಮುಂದಾಗಿದ್ದಾರೆ. ಆರೋಪಿ ರಾಜು ಎಂಬಾತ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡ. ಕೆಲ ದಿನಗಳ ಹಿಂದೆ ಹೆಬ್ಯಾ ಗ್ರಾಮದಲ್ಲಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ಮೇಲೆ ರಾಜು ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಅಮಿತಾಬ್ ಜಾಗವನ್ನು ತಮ್ಮ ಹೆಸರಿಗೆ ಬರೆಯುವಂತೆ ರಾಜು ಒತ್ತಡ ಹಾಕುತ್ತಿದ್ದ ಎಂಬ ಆರೋಪವಿದೆ. ಇದಕ್ಕೆ ಅಮಿತಾಬ್ ಒಪ್ಪದ ಹಿನ್ನೆಲೆಯಲ್ಲಿ, ರಾಜು ಹಾಗೂ ಆತನ ಬೆಂಬಲಿಗರು ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕಲ್ಲುಗಳಿಂದ ತಲೆಗೆ ಹೊಡೆದು ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ‘‘ನನಗೆ ಸಿದ್ದರಾಮಯ್ಯ ಗೊತ್ತು, ಯತೀಂದ್ರ ಗೊತ್ತು’’ ಎಂದು ರಾಜು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದ್ದು, ಆ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದರೂ ನಿಂತಿಲ್ಲ ಬೆದರಿಕೆ, ಧಮ್ಕಿ

ಈ ಸಂಬಂಧ ಅಮಿತಾಬ್ ಅವರ ಪತ್ನಿ ಸುಷ್ಮಾ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಎಫ್‌ಐಆರ್ ಆಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳಿಂದ ನಿರಂತರ ಬೆದರಿಕೆಗಳು ಮುಂದುವರಿದಿವೆ ಎಂದು ದಂಪತಿ ಆರೋಪಿಸಿದ್ದಾರೆ.

ಮೋದಿ, ಮುರ್ಮುಗೆ ಸಂತ್ರಸ್ತ ದಂಪತಿ ಪತ್ರ

ಸ್ಥಳೀಯ ಮಟ್ಟದಲ್ಲಿ ನ್ಯಾಯ ಸಿಗದ ಕಾರಣ, ದಂಪತಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಳ್ಳಲು ನಿರ್ಧರಿಸಿದ್ದಾರೆ. ಲಿಖಿತ ದೂರು ಸಲ್ಲಿಸುವ ಮೂಲಕ ನ್ಯಾಯಕ್ಕಾಗಿ ಅಂತಿಮವಾಗಿ ರಾಷ್ಟ್ರಪತಿ ಮತ್ತು ಪ್ರಧಾನಿಯ ಅಂಗಳ ತಲುಪಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?

ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜು ಗೌಡ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ವರುಣಾ ಕ್ಷೇತ್ರದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಪೊಲೀಸರು ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:15 pm, Tue, 27 January 26

Source link

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್​​ – Kannada News | Young Woman Elopes With Lover Just 45 Days After Marriage; Husband and Uncle Die by Suicide

ದಾವಣಗೆರೆ, ಜನವರಿ 27: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ ಪತ್ನಿಯ ವರ್ತನೆಯ ಕಾರಣ ಎಂದು 2 ಪುಟಗಳ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ದುರ್ದೈವ ಅಂದರೆ ಹರೀಶ್​ ಸಾವಿನ ಬೆನ್ನಲ್ಲೇ ಮುಂದೆ ನಿಂತು ಮದುವೆ ಮಾಡಿಸಿದ ತಪ್ಪಿಗೆ ಯುವತಿಯ ಸೋದರ ಮಾವ ರುದ್ರೇಶ್ ಸಹ ಅತ್ಮಹತ್ಯೆಗೆ ಶರಣಾಗಿದ್ದಾರೆ.

ಹರೀಶ್​​ ಡೆತ್​​ನೋಟ್​​ನಲ್ಲಿ ಏನಿದೆ?

ಪತ್ನಿ ಅನಗತ್ಯ ಕಿರುಕುಳ ನೀಡುತ್ತಿದ್ದಾಳೆ. ಬೇರೆ ಯುವಕನೊಂದಿಗೆ  ಓಡಿ ಹೋಗಿ ನಾನು ಹಿಂಸೆ ನೀಡುತ್ತಿರುವೆ ಎಂದು ಆರೋಪಿಸಿದ್ದಾಳೆ. ಪತ್ನಿ ಹಾಗೂ ಸಂಬಂಧಿಕರಿಂದ ತನಗೆ ಜೀವ ಬೆದರಿಕೆ ಇತ್ತು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್​​ನಲ್ಲಿ ಹರೀಶ್​​ ಉಲ್ಲೇಖಿಸಿದ್ದಾರೆ. ಪತ್ನಿ ಹಾಗೂ ಆಕೆ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು. ಆಸ್ತಿಗಿಂತ ಮಾನ ಮುಖ್ಯವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ತನ್ನನ್ನು ಕ್ಷಮಿಸಿ ಎಂದು ಕುಟುಂಬ ಸದಸ್ಯರಿಗೆ ಹರೀಶ್​​ ಕ್ಷಮೆಯನ್ನೂ ಕೇಳಿದ್ದು, ಪತ್ನಿಯ ಕಡೆಯವರು ನೀಡಿದ ಹಿಂಸೆಗೆ ತನ್ನ ತಂದೆ ತಾಯಿ ಮನೆ ಬಿಡುವ ಯೋಚನೆ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು

ಇನ್ನು ಇತ್ತ ಹರೀಶ್​​ ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿಯುತ್ತಿದ್ದಂತೆ ಮುಂದೆ ನಿಂತು ಇವರ ಮದುವೆ ಮಾಡಿಸಿದ್ದ ಯುವತಿಯ ಸಹೋದರ ಮಾವ ರುದ್ರೇಶ್ ಕೂಡ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರುದ್ರೇಶ್​​ ದಾವಣಗೆರೆಯ ಅನೆಕೊಂಡದ ನಿವಾಸಿಯಾಗಿದ್ದು, 4 ದಿನದ ಹಿಂದೆ ಕುಮಾರ್​ ಎಂಬಾತನ ಜತೆ ಹರೀಶ್ ಪತ್ನಿ ಓಡಿಹೋಗಿದ್ದಳು. ಇದರಿಂದ ಅವಮಾನ ತಾಳಲಾರದೆ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಯುವತಿಯ ಹುಚ್ಚಾಟಕ್ಕೆ ಇಬ್ಬರ ಪ್ರಾಣ ಹೋಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ನನ್ನ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ ಬೇಸರ – Kannada News | Mallamma Says Dhruvanth Not Contact her After Bigg Boss Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಧ್ರುವಂತ್ ಹಾಗೂ ಮಲ್ಲಮ್ಮ ಇದ್ದರು. ಮಲ್ಲಮ್ಮ ಅವರನ್ನು ಧ್ರುವಂತ್ ತಾಯಿ ಎಂದೇ ಕರೆಯುತ್ತಿದ್ದರು. ಮಲ್ಲಮ್ಮ ಎಲಿಮಿನೇಟ್ ಆಗಿ ನಂತರ ಅತಿಥಿಯಾಗಿ ಒಳಬಂದಾಗ ಧ್ರುವಂತ್​​ಗೆ ಮೊದಲಿನ ಆಪ್ತತತೆ ಕಾಣಿಸಲೇ ಇಲ್ಲ. ಬಿಗ್ ಬಾಸ್​​ ಪೂರ್ಣಗೊಂಡು ಇಷ್ಟ ದಿನ ಆದರೂ ಮಲ್ಲಮ್ಮ ಅವರನ್ನು ಧ್ರುವಂತ್ ಸಂಪರ್ಕಿಸಿಲ್ಲವಂತೆ. ಈ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ.  ಆ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಓರ್ವ ಆಟಗಾರ ಡೌಟ್: ಇಬ್ಬರ ನಡುವೆ ಪೈಪೋಟಿ – Kannada News | Team India’s Washington Sundar Could Miss T20 World Cup 2026

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ (ಅನುಮಾನ).

Source link

ಕೆಫೆಯಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ: ಪ್ರತಿ ಹೆಚ್ಚುವರಿ ಗಂಟೆಗೆ 1,000 ರೂ. ದಂಡ – Kannada News | Viral Bangalore Cafe Rule: 1000 Fee for Laptop Use and Long Meetings Sparks Debate

ಬೆಂಗಳೂರು, ಜ.27: ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದರಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಶಾಕ್ ನೀಡಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ತನ್ನ ಕೆಫೆಯ ಮುಂದೆ ಅಂಟಿಸಿರುವ ನೋಟಿಸ್​​ ನೋಡಿ ಎಲ್ಲರಿಗೂ ಅಚ್ಚರಿಯನ್ನು ತಂದಿದೆ. ಬೆಂಗಳೂರಿನ ಪ್ರಸಿದ್ಧ ಈಟರಿಯೊಂದು (Eatery/Cafe) ತನ್ನ ಆವರಣದಲ್ಲಿ “ದೀರ್ಘಾವಧಿಯ ಸಭೆಗಳನ್ನು” (Long Meetings) ನಿಷೇಧಿಸಿ ಅಧಿಕೃತ ನೋಟಿಸ್ ಅಂಟಿಸಿದೆ. ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಕಾಲ ಸಭೆ ಅಥವಾ ಲ್ಯಾಪ್‌ಟಾಪ್ ಕೆಲಸವನ್ನು ಮುಂದುವರಿಸಿದರೆ, ಪ್ರತಿ ಹೆಚ್ಚುವರಿ ಗಂಟೆಗೆ ₹1,000 ದಂಡ ಅಥವಾ ‘ಸೇವಾ ಶುಲ್ಕ’ ಪಾವತಿಸಬೇಕಾಗುತ್ತದೆ ಎಂದು ನೋಟಿಸ್​ ಹಾಕಿದೆ. ಸಣ್ಣ ಕೆಫೆಗಳಲ್ಲಿ ಜನರು ಕೇವಲ ಒಂದು ಕಪ್ ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೆ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವುದರಿಂದ, ಹೊಸದಾಗಿ ಬರುವ ಗ್ರಾಹಕರಿಗೆ ಸೀಟು ಸಿಗುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಕೆಫೆಗಳು ವ್ಯಾಪಾರ ಮಾಡಲು ಇರುವ ಜಾಗವೇ ಹೊರತು ಉಚಿತ ಕೋ-ವರ್ಕಿಂಗ್ ಸ್ಪೇಸ್ (Co-working space) ಅಲ್ಲ. ಮಾಲೀಕರ ನಿರ್ಧಾರ ಸರಿ ಇದೆ ಅನೇಕರ ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆಗಳು ಚಿಕ್ಕದಾಗಿರುತ್ತವೆ ಮತ್ತು ಆಫೀಸ್ ದೂರವಿರುತ್ತದೆ, ಹೀಗಾಗಿ ಕೆಫೆಗಳೇ ನಮಗೆ ಆಸರೆ. ಇಷ್ಟು ದುಬಾರಿ ಶುಲ್ಕ ವಿಧಿಸುವುದು ಸರಿಯಲ್ಲ ಇನ್ನು ಕೆಲವರು ಕಮೆಂಟ್​​ ಮಾಡಿದ್ದಾರೆ. ಬೆಂಗಳೂರನ್ನು ‘ಸ್ಟಾರ್ಟ್‌ಅಪ್ ಕ್ಯಾಪಿಟಲ್’ ಎಂದು ಕರೆಯಲಾಗುತ್ತದೆ. ಇಲ್ಲಿನ ಅನೇಕ ಐಡಿಯಾಗಳು ಕೆಫೆಗಳಲ್ಲಿ ಹುಟ್ಟಿಕೊಂಡಿವೆ. ಆದರೆ, ಇತ್ತೀಚೆಗೆ ಹೆಚ್ಚುತ್ತಿರುವ ಬಾಡಿಗೆ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಮಾಲೀಕರು ಅನಿವಾರ್ಯವಾಗಿ ಇಂತಹ ಕಠಿಣ ಕ್ರಮಗಳಿಗೆ ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!

ವೈರಲ್​​ ಪೋಸ್ಟ್​​  ಇಲ್ಲಿದೆ ನೋಡಿ

ಪೋಸ್ಟ್​​ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಆಕರ್ಷಿಸಿತು. ಈ ಪೋಸ್ಟ್ ಅಲ್ಪಾವಧಿಯಲ್ಲಿಯೇ 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ವ್ಯಾಪಕ ಪ್ರತಿಕ್ರಿಯೆಗಳನ್ನು ಗಳಿಸಿದೆ.ಒಂದು ಹೋಟೆಲ್ ಅಥವಾ ಕೆಫೆ ‘ಖಾಸಗಿ ಆಸ್ತಿ’ಯಾಗಿರುತ್ತದೆ. ಅಲ್ಲಿಗೆ ಪ್ರವೇಶ ನೀಡುವ ಅಥವಾ ಅಲ್ಲಿನ ನಿಯಮಗಳನ್ನು ರೂಪಿಸುವ ಹಕ್ಕು ಮಾಲೀಕರಿಗೆ ಇರುತ್ತದೆ. ಹಾಗಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಮಾಲೀಕರು ತಮ್ಮ ಆವರಣದಲ್ಲಿ ಗ್ರಾಹಕರು ಎಷ್ಟು ಸಮಯ ಇರಬೇಕು ಎಂಬ ನಿಯಮವನ್ನು ರೂಪಿಸಬಹುದು. ಎಂಬು ಕಾನೂನು ಕೂಡ ಇದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ: ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ! – Kannada News | Physically Disabled Youth from Mangaluru Builds Online Business Empire

ಮಂಗಳೂರು, ಜನವರಿ 27: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಬೀರ್ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಅಬ್ಬಾಸ್ ಮತ್ತು ಅಮೀನಾ ದಂಪತಿಯ ಪುತ್ರರಾದ ಕಬೀರ್, ಒಂಭತ್ತು ತಿಂಗಳ ವಯಸ್ಸಿನಲ್ಲಿ ಜ್ವರದಿಂದ ದೇಹದ ಸ್ವಾಧೀನ ಕಳೆದುಕೊಂಡರು. ಪ್ರಸ್ತುತ 25 ವರ್ಷ ವಯಸ್ಸಿನ ಕಬೀರ್, ಕುತ್ತಿಗೆ ಮೇಲ್ಭಾಗದಲ್ಲಿ ಮತ್ತು ಹೆಬ್ಬೆರಳಿನಲ್ಲಿ ಮಾತ್ರ ಚಲನೆಯನ್ನು ಹೊಂದಿದ್ದಾರೆ. ಕೇವಲ ತಮ್ಮ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಕಲಿತ ಇವರು, ಆನ್‌ಲೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಆನ್‌ಲೈನ್ ಶಾಪ್, ಟ್ರಾವೆಲ್ಸ್, ಫೋಟೋಶೂಟ್, ಈವೆಂಟ್ ಡೆಕೋರ್, ವೆಡ್ಡಿಂಗ್ ಪ್ಲಾನರ್ ಮತ್ತು ಕ್ರಾಫ್ಟ್ ಐಟಂಗಳಂತಹ ಬಹು ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯೂಟ್ಯೂಬ್ ನೋಡಿ ಕಲಿತ ಇವರು, ಆಸಕ್ತಿ ಇದ್ದರೆ ಯಾವುದನ್ನೂ ಕಲಿಯಬಹುದು ಎಂದು ಹೇಳುತ್ತಾರೆ. ಸ್ವಯಂ ದುಡಿಮೆಯಿಂದ ಹೊಸ ಕಾರು ಖರೀದಿಸಿರುವ ಇವರು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಶಾಪ್ ತೆರೆಯುವ ಗುರಿಯನ್ನೂ ಹೊಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

‘ಜನ ನಾಯಗನ್’ಗೆ ಮತ್ತೆ ಹಿನ್ನಡೆ: ಸಿನಿಮಾ ಬಿಡುಗಡೆ ಇನ್ನಷ್ಟು ವಿಳಂಬ – Kannada News | Jana Nayagan CBFC case again sent to single judge bench

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ಗೆ ಹಿನ್ನಡೆಯ ಮೇಲೆ ಹಿನ್ನಡೆ ಆಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿರುವ ‘ಜನ ನಾಯಗನ್’ ಜನವರಿ 10 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿಬಿಎಫ್​​ಸಿ ವಿರುದ್ಧ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್​​ ಮೊದಲಿಗೆ ಪ್ರಮಾಣ ಪತ್ರ ನೀಡುವಂತೆ ಹೇಳಿತ್ತಾದರೂ ಬಳಿಕ ತನ್ನದೇ ಆದೇಶಕ್ಕೆ ತಾನೇ ತಡೆ ನೀಡಿತು. ಇಂದು ಮತ್ತೆ ಇದೇ ವಿಚಾರವಾಗಿ ಆದೇಶ ಹೊರಡಿಸಿರುವ ಮದ್ರಾಸ್ ಹೈಕೋರ್ಟ್, ಪ್ರಕರಣವನ್ನು ಸಿಂಗಲ್ ಬೆಂಚ್​​ಗೆ ವರ್ಗಾವಣೆ ಮಾಡಿದೆ.

ಇಂದು ಆದೇಶ ಪ್ರಕಟಿಸಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿದೆ. ಎರಡೂ ಪಕ್ಷದವರಿಗೆ (ಸಿಬಿಎಫ್​​ಸಿ ಮತ್ತು ಸಿನಿಮಾ ನಿರ್ಮಾಪಕ) ಇಬ್ಬರಿಗೂ ವಾದಕ್ಕೆ ಸೂಕ್ತ ಅವಕಾಶ ನೀಡಿದ ನಂತರ ವಿಷಯವನ್ನು ತ್ವರಿತವಾಗಿ ನಿರ್ಧರಿಸಲು ಏಕ ನ್ಯಾಯಾಧೀಶರಿಗೆ ಸೂಚಿಸಲಾಗಿದೆ. ಅಲ್ಲದೆ, ಸಿನಿಮಾ ನಿರ್ಮಾಪಕರು, ಸಿಬಿಎಫ್​​ಸಿ ಚೇರ್​​ಮನ್​​ ಅವರ ನಿರ್ಧಾರಕ್ಕೆ ಸವಾಲಾಗಿ ಮತ್ತೊಂದು ಅರ್ಜಿಯನ್ನು ಸಲ್ಲಿಸುವಂತೆಯೂ ಸೂಚಿಸಿದೆ.

ಆದೇಶ ಪ್ರಕಟಣಗೂ ಮುನ್ನ, ಈ ಹಿಂದೆ ಸಿಂಗಲ್ ಜಡ್ಜ್ ಬೆಂಚ್ ನೀಡಿದ್ದ ಆದೇಶವನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಸಹ ಹೈಕೋರ್ಟ್​ ಹೇಳಿದೆ ಹಾಗೂ ಆ ಆದೇಶದಲ್ಲಿ ಸಿಬಿಎಫ್​​ಸಿಗೆ ವಾದ ಮಂಡನೆಗೆ ಸೂಕ್ತ ಅವಕಾಶ ನೀಡಲಾಗಿರಲಿಲ್ಲ ಎಂದು ಗುರುತಿಸಿದೆ. ಇದೀಗ ಪ್ರಕರಣ ಮತ್ತೆ ಹೈಕೋರ್ಟ್​​ನ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದ್ದು, ಮೊದಲಿನಿಂದ ಮತ್ತೆ ವಾದ-ಪ್ರತಿವಾದಗಳು ನಡೆಯಲಿದೆ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

‘ಜನ ನಾಯಗನ್’ ಸಿನಿಮಾಕ್ಕೆ ಸುಮಾರು 13 ಕಟ್​ಗಳನ್ನು ಸಿಬಿಎಫ್​​ಸಿ ಸೂಚಿಸಿತ್ತು. ಎಲ್ಲದಕ್ಕೂ ನಿರ್ಮಾಪಕರು ಒಪ್ಪಿಕೊಂಡಿದ್ದರು. ಆದರೂ ಸಹ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ಸಿಬಿಎಫ್​​ಸಿ ಚೇರ್​​ಮನ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರು. ಸಿನಿಮಾ ರಿವ್ಯೂ ಕಮಿಟಿಗೆ ಹೋದರೆ ಬಿಡುಗಡೆ ತಡವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆಗುತ್ತಿದೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಮಮಿತಾ ಬಿಜು, ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾದ ವಿಲನ್ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾವ್ಯಾಗೆ ಅಭಿಮಾನಿಯ ಪತ್ರ: ಚಂದನ್-ನಿವೇದಿತಾ, ರಕ್ಷಿತ್-ರಶ್ಮಿಕಾ ಉದಾಹರಣೆ – Kannada News | Bigg Boss Kannada fame Kavya Shaiva shared fan’s letter

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಗಿಲ್ಲಿ ನಟನಿಗೆ ಭಾರಿ ಜನಪ್ರಿಯತೆ ಶೋನಿಂದಾಗಿ ದೊರೆತಿದೆ. ಗಿಲ್ಲಿಗೆ ಮಾತ್ರವೇ ಅಲ್ಲದೆ ಫೈನಲಿಸ್ಟ್​​ಗಳಾಗಿದ್ದ ಕಾವ್ಯಾ, ರಘು, ಅಶ್ವಿನಿ ಇನ್ನೂ ಹಲವರಿಗೆ ಈ ಶೋನಿಂದ ಭಾರಿ ಜನಪ್ರಿಯತೆ ದೊರೆತಿದೆ. ಕಾವ್ಯಾ ಸಹ ಈಗ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿದ್ದಾಗ ಗಿಲ್ಲಿಯ ನೆರಳು, ಗಿಲ್ಲಿಯಿಂದ ಮಿಂಚುತ್ತಿರುವ ಸ್ಪರ್ಧಿ ಎಂದೆಲ್ಲ ಟೀಕೆಗೆ ಒಳಗಾಗಿದ್ದ ಕಾವ್ಯಾಗೆ, ಈಗ ಹೊರ ಬಂದ ಮೇಲೆ ತಮ್ಮ ವ್ಯಕ್ತಿತ್ವಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದೆ ಎಂಬುದು ಗೊತ್ತಾಗಿದೆ. ಇದೀಗ ನಟಿ ಕಾವ್ಯಾ, ಅಭಿಮಾನಿಯೊಬ್ಬ ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಯೊಬ್ಬ, ಕಾವ್ಯಾರ ಬಿಗ್​​ಬಾಸ್ ಆಟವನ್ನು ವಿಶ್ಲೇಷಿಸುವ ಜೊತೆಗೆ, ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಜೊತೆಗೆ ಪತ್ರದ ಕೊನೆಯಲ್ಲಿ ಕೆಲವು ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ. ವಿಶೇಷವಾಗಿ ಕಾವ್ಯಾ ಅವರಿಗೆ ಚಂದನ್ ನಿವೇದಿತಾ ಮತ್ತು ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ಉದಾಹರಣೆಗಳನ್ನು ನೀಡುತ್ತಾ ಎಚ್ಚರದಿಂದ ಮುಂದಿನ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.

ಕಾವ್ಯಾ ಮತ್ತು ಗಿಲ್ಲಿ ಪರಸ್ಪರ ವಿವಾಹ ಆಗಬೇಕು ಎಂದು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ಕಾವ್ಯಾ ಮತ್ತು ಗಿಲ್ಲಿ ಇಬ್ಬರೂ ಇದನ್ನು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಅಭಿಮಾನಿ ನೀಡಿದ ಎಚ್ಚರಿಕೆಯನ್ನು ವಿಶೇಷವಾಗಿ ನಟಿ ಕಾವ್ಯಾ ಹಂಚಿಕೊಂಡಿದ್ದಾರೆ ಅನಿಸುತ್ತದೆ.

ಇದನ್ನೂ ಓದಿ:ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

‘ಅಭಿಪ್ರಾಯ ಜನಗಳದ್ದೇ ಆಗಿರಬಹುದು ಆದರೆ ನಿರ್ಧಾರ ನಿಮ್ಮದಾಗಿರಲಿ, ಜೊತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾದವರನ್ನು ನೋಡಿದ್ದೇವೆ, ಹಾಗೆಯೇ ಅರಮನೆಯ ಸಂಭ್ರಮದಲ್ಲಿ ಮದುವೆ ಆದವರು ಬಳಿಕ ಕೋರ್ಟ್​​ನಲ್ಲಿ ದೂರಾಗಿದ್ದನ್ನು ನೋಡಿದ್ದೇವೆ. ಜೊತೆಯಾಗಿ, ದೂರಾಗಿ ಬಳಿಕ ನ್ಯಾಷನಲ್ ಕ್ರಶ್ ಆದವರನ್ನು ನೋಡಿದ್ದೇವೆ. ನೀವು ಮನರಂಜನೆ ನೀಡುತ್ತಿರುವವರೆಗೆ ಮಾತ್ರ ಜನ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ. ಸಮಯ ಸರಿದಂತೆ ಸಾಧನೆ ನಿಲ್ಲದಂತೆ ಬೆಳೆಯುತ್ತಿರಿ’ ಎಂದಿದ್ದಾರೆ ಆ ಅನಾಮಿಕ ಅಭಿಮಾನಿ.

ಆ ಮೂಲಕ ಕಾವ್ಯಾ ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಂಡು ವೈಯಕ್ತಿಕ ಬೆಳವಣಿಗೆ ಮೇಲೆ ಗಮನ ಹರಿಸಬೇಕು ಎಂಬ ಮೌಲಿಕ ಸಲಹೆಯನ್ನು ಅಭಿಮಾನಿ ನೀಡಿದ್ದಾರೆ. ಕಾವ್ಯಾ ಸಹ ಬಿಗ್​​ಬಾಸ್ ಬಳಿಕ ನೀಡಿದ ಸಂದರ್ಶನಗಳಲ್ಲಿ ಗಿಲ್ಲಿ ಜೊತೆಗೆ ಗೆಳೆತನಕ್ಕೆ ಮಿಗಲಾದುದು ಏನೂ ಇಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೃತಿಕ್ ರೋಷನ್​​ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು – Kannada News | Hrithik Roshan’s Rare Disorder: Legs Randomly ‘Switch Off’ Explained

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಇತ್ತೀಚೆಗೆ ನಟಿ ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬಹ್ಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಹೃತಿಕ್ ಗೂನು ಬೆನ್ನು ಹಾಕಿ ನಡೆಯುತ್ತಿರುವುದು ಕಂಡುಬಂದಿತು . ಇದನ್ನು ನೋಡಿ ಫ್ಯಾನ್ಸ್ ಆತಂಕಗೊಂಡರು. ಹೃತಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅನೇಕ ಜನರು ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈಗ ಹೃತಿಕ್ ಸ್ವತಃ ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಪೋಸ್ಟ್ ಬರೆದಿದ್ದಾರೆ. ತಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹುಟ್ಟಿನಿಂದಲೇ ಕೆಲವು ಸಮಸ್ಯೆಗಳು ಅವರೊಂದಿಗಿವೆ.

ಜನವರಿ 25 ರಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹೃತಿಕ್ ಪೋಸ್ಟ್ ಮಾಡಿ, ‘ನಿನ್ನೆ ನನ್ನ ಎಡ ಮೊಣಕಾಲು ಇದ್ದಕ್ಕಿದ್ದಂತೆ ಆಫ್ ಆದವು. ನಿನ್ನೆಯಿಂದ ನಾನು ಇಡೀ ದಿನ ಕಿರಿಕಿರಿ ಅನುಭವಿಸುತ್ತಿದ್ದೆ. ಇದು ನನ್ನ ದೈನಂದಿನ ಜೀವನ. ನಾವೆಲ್ಲರೂ ನಮ್ಮ ದೇಹದ ಕಾರ್ಯ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ವಾಸಿಸುತ್ತೇವೆ. ಆದರೆ ನನ್ನ ದೇಹವು ತುಂಬಾ ವಿಶಿಷ್ಟ ಮತ್ತು ಆಸಕ್ತಿದಾಯಕವಾಗಿದೆ. ದೇಹದ ಪ್ರತಿಯೊಂದು ಭಾಗವು ಆನ್ ಮತ್ತು ಆಫ್ ಬಟನ್ ಅನ್ನು ಹೊಂದಿರುತ್ತದೆ’ ಎಂದಿದ್ದಾರೆ ಅವರು.

‘ನನ್ನ ಎಡಗಾಲು ಹುಟ್ಟಿನಿಂದಲೇ ಈ ವೈಶಿಷ್ಟ್ಯವನ್ನು ಹೊಂದಿದೆ. ನನ್ನ ಎಡ ಭುಜ ಮತ್ತು ಬಲ ಮೊಣಕಾಲು ಕೂಡ ಈ ವರ್ಗಕ್ಕೆ ಸೇರುತ್ತವೆ. ಅವು ತಕ್ಷಣವೇ ಆಫ್ ಆಗುತ್ತವೆ. ಈ ಸಣ್ಣ ಸೌಲಭ್ಯವು ಹೆಚ್ಚಿನ ಜನರು ಪಡೆಯದ ಅನುಭವಗಳನ್ನು ನನಗೆ ನೀಡಿದೆ. ನನಗೆ ಒಂದು ವಿಶಿಷ್ಟವಾದ ಸಿನಾಪ್ಸ್ ವ್ಯವಸ್ಥೆ ಇದೆ’ ಎಂದಿದ್ದಾರೆ ಅವರು.

‘ನನ್ನ ನಾಲಿಗೆ ಭೋಜನ ಎಂಬ ಪದವನ್ನು ಉಚ್ಚರಿಸಲು ನಿರಾಕರಿಸುತ್ತಿದೆ. ಊಹಿಸಿ.. ನಾನು ಒಂದು ಚಿತ್ರದ ಸೆಟ್‌ನಲ್ಲಿದ್ದೇನೆ. ನ್ಯಾಯಾಲಯದ ಕೋಣೆಯಲ್ಲಿ ಒಂದು ಗಂಭೀರ ದೃಶ್ಯ ನಡೆಯುತ್ತಿದೆ. ನೀವು ಮನೆಗೆ ಭೋಜನಕ್ಕೆ ಬರುತ್ತೀರಾ ಎಂಬಂತಹ ಸಂಭಾಷಣೆ ಇದೆ? ಆದರೆ ನನ್ನ ನಾಲಿಗೆ ‘ಭೋಜನ’ ಎಂಬ ಪದವನ್ನು ಆಫ್ ಮಾಡಿದೆ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಚಿತ್ರರಂಗಕ್ಕೆ ಹೊಸ ಡಾನ್ ಆಗ್ತಾರಾ ಹೃತಿಕ್ ರೋಷನ್?

ಅವರು ಈ ವಿಚಿತ್ರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಬಿಟ್ಟಿದ್ದಾರೆ. ಇದು ಒಂದು ರೀತಿಯ ವಿಚಿತ್ರ ಅದೃಷ್ಟ ಎಂದು ಭಾವಿಸಿ ಮುಂದುವರಿಯುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:34 am, Tue, 27 January 26

Source link

Exit mobile version