Headlines

ಸೆನ್ಸಾರ್ ಕುರಿತ ಸಂವಾದದಲ್ಲಿ ‘ಕೆಜಿಎಫ್’, ‘ಅನಿಮಲ್’ ಬಗ್ಗೆ ಟೀಕೆ – Kannada News | KGF Movie criticized for its elevation scenes

‘ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಸಿನಿಮಾಗಳಿಗೆ ಗ್ಲೋಬಲ್ ಲೆವೆಲ್​​ನಲ್ಲಿ ಅಭಿಮಾನಿಗಳಿದ್ದಾರೆ. ಈ ಸಿನಿಮಾಗಳ ತಾಂತ್ರಿಕ ನಿಪುಣತೆ, ನಿರೂಪಣೆ ಶೈಲಿ ಹೊಸದಾಗಿಯೂ, ಭಿನ್ನವಾಗಿಯೂ ಇತ್ತು. ಈಗ ಹಲವು ಕಮರ್ಶಿಯಲ್ ಸಿನಿಮಾಗಳು ‘ಕೆಜಿಎಫ್’ ಸಿನಿಮಾಗಳ ನಿರೂಪಣಾ ಮಾದರಿಯನ್ನು ಬಳಸುತ್ತಿವೆ. ಆದರೆ ಈ ಸಿನಿಮಾ ಬಿಡುಗಡೆ ಆದಾಗಿಂದಲೂ ಒಂದು ವರ್ಗದ ಜನರಿಂದ ಸಿನಿಮಾದ ಬಗ್ಗೆ ವಿಮರ್ಶೆ, ಟೀಕೆಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಆನ್​​ಲೈನ್​​ನಲ್ಲಿ ಆಯೋಜಿಸಿದ್ದ ಸೆನ್ಸಾರ್ ಕುರಿತ…

Read More

World Youth Skills Day 2026: ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ – Kannada News | World Youth Skills Day 2026: What are the history and significance of World Youth Skills Day

ಇಂದಿನ ಯುವಜನತೆ ತಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಸೇವಿಸುವ ಆಹಾರ, ಉಡುಗೆ ತೊಡುಗೆ ಸೇರಿದಂತೆ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗ ಅನುಭವದ ಜತೆಗೆ ಕೌಶಲ್ಯಗಳು ಬಹಳ ಮುಖ್ಯ. ಹೀಗಾಗಿ ಯುವ ಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶ್ವ ಯುವ ಕೌಶಲ್ಯ ದಿನ (World Youth Skills Day) ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆ ಚಾಲ್ತಿಯಲ್ಲಿದೆ….

Read More

ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮಾತ್ರವಲ್ಲ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ – Kannada News | Why Drinking Turmeric Water on an Empty Stomach Is Trending

ಅರಿಶಿನ ಅಡುಗೆಮನೆಯ ಅವಿಭಾಜ್ಯ ಅಂಗ. ಶತಮಾನಗಳಿಂದಲೂ ಇದನ್ನು ಕೇವಲ ಮಸಾಲೆಯಾಗಿ ಮಾತ್ರವಲ್ಲ, ಸಾಂಪ್ರದಾಯಿಕ ಔಷಧೀಯ ಪದಾರ್ಥವಾಗಿಯೂ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವ ಅಭ್ಯಾಸವೂ ಹೆಚ್ಚುತ್ತಿದೆ. ಇದರಲ್ಲಿ ಇರುವ ಕರ್ಕ್ಯೂಮಿನ್ (Curcumin) ಎಂಬ ನೈಸರ್ಗಿಕ ಸಂಯುಕ್ತವು ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಇದನ್ನು ಮಿತ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅರಿಶಿನ…

Read More

ಫುಟ್​ಪಾತ್ ಒತ್ತುವರಿ, ಅನಾಥ ವಾಹನಗಳ ತೆರವು ಬೆನ್ನಲ್ಲೇ ಮತ್ತೊಂದು ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್ – Kannada News | Bengaluru Cleaning Drive from August 1: Vacant Site Owners Face Property Tax Penalty for Garbage

ಬೆಂಗಳೂರು, ಜುಲೈ 15: ಫುಟ್​ಪಾತ್ ಒತ್ತುವರಿ ತೆರವು, ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಬೆಂಗಳೂರು ಸಿದ್ಧವಾಗುತ್ತಿದೆ. ಬೆಂಗಳೂರಿನಲ್ಲಿ ಆಗಸ್ಟ್ 1ರಿಂದ ಮಹತ್ವದ ಸ್ವಚ್ಛತಾ ಅಭಿಯಾನ ಆರಂಭಗೊಳ್ಳಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ನಗರದಾದ್ಯಂತ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ, ಕಸದಿಂದ ಕೂಡಿದ ಖಾಲಿ ನಿವೇಶನಗಳ ಮಾಲೀಕರಿಗೆ ಈ ಅಭಿಯಾನವು ನೇರವಾಗಿ ಅನ್ವಯಿಸುತ್ತದೆ. ಆಗಸ್ಟ್ 15ರೊಳಗೆ ತಮ್ಮ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸಲು…

Read More

Traditional Beliefs: ಕೈಯಿಂದ ಕೈಗೆ ಮೆಣಸಿನಕಾಯಿ ನೀಡಬಾರದು ಏಕೆ? ಅಸಲಿ ಸತ್ಯ ಇಲ್ಲಿದೆ! – Kannada News | Chilli Handover: Why Never Hand Chilies Directly? Tradition and Science Explained

ಕೈಯಿಂದ ಕೈಗೆ ಮೆಣಸಿನಕಾಯಿ ನೀಡಬಾರದು ಏಕೆ?Image Credit source: vecteezy.com ಭಾರತೀಯ ಸಂಸ್ಕೃತಿಯಲ್ಲಿ ಇಂದಿಗೂ ಅನೇಕ ಸಾಂಪ್ರದಾಯಿಕ ನಂಬಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂತಹ ನಂಬಿಕೆಗಳಲ್ಲಿ “ಯಾರ ಕೈಗೂ ನೇರವಾಗಿ ಮೆಣಸಿನಕಾಯಿಯನ್ನು ಕೊಡಬಾರದು” ಎಂಬುದು ಕೂಡ ಒಂದು. ಇಂದಿಗೂ ಅನೇಕ ಮನೆಗಳಲ್ಲಿ ಮೆಣಸಿನಕಾಯಿ ನೀಡುವಾಗ ಅದನ್ನು ನೇರವಾಗಿ ಕೈಗೆ ಕೊಡದೆ, ತಟ್ಟೆಯಲ್ಲೋ ಅಥವಾ ನೆಲದ ಮೇಲೋ ಇಟ್ಟು ಕೊಡುತ್ತಾರೆ. ಹೀಗೆ ನೇರವಾಗಿ ಕೈಗೆ ನೀಡಿದರೆ ಇಬ್ಬರ ನಡುವೆ ಜಗಳವಾಗುತ್ತದೆ ಎಂಬ ಬಲವಾದ ನಂಬಿಕೆ ಜನ ಜನಿತವಾಗಿದೆ. ಆದರೆ,…

Read More

ಹೈಕೋರ್ಟ್ ಮಹತ್ವದ ತೀರ್ಪು: ಪತ್ನಿಗೆ ಪತಿಯ ಒಟ್ಟು ಸಂಬಳದ ಶೇ. 25 ರಷ್ಟು ಜೀವನಾಂಶ ನೀಡುವುದು ಕಡ್ಡಾಯವಲ್ಲ – Kannada News | Alimony: Allahabad HC Says 25 percent Not Mandatory, Net Income for Divorce Maintenance

ಪ್ರಯಾಗ್‌ರಾಜ್, ಜುಲೈ 15: ವಿಚ್ಛೇದನ(Divorce) ಪಡೆದ ಪತ್ನಿಯ ಜೀವನ ನಿರ್ವಹಣೆಗೆ ಪತಿಯ ಆದಾಯದ ಶೇಕಡಾ 25 ರಷ್ಟು ಹಣವನ್ನು ಜೀವನಾಂಶವಾಗಿ ನೀಡಬೇಕು ಎಂಬ ರೂಢಿ ಕೇವಲ ಒಂದು ಸಾಮಾನ್ಯ ಮಾರ್ಗಸೂಚಿಯಷ್ಟೇ ಹೊರತು, ಅದು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಪ್ರತಿ ಪ್ರಕರಣದ ಸನ್ನಿವೇಶ, ಸಾಕ್ಷ್ಯಗಳನ್ನು ಆಧರಿಸಿ ಜೀವನಾಂಶದ ಮೊತ್ತವನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಸಂಪೂರ್ಣ ವಿವೇಚನಾ ಅಧಿಕಾರ ನ್ಯಾಯಾಲಯಗಳಿಗಿದೆ ಎಂದು ಹೈಕೋರ್ಟ್ ಹೇಳಿದೆ. ಕಾನ್ಪುರ ದೇಹತ್‌ನ ಕೌಟುಂಬಿಕ ನ್ಯಾಯಾಲಯವು…

Read More

ಸರ್ವೈಕಲ್ ಕ್ಯಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ: 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಪ್ರಾರಂಭ – Kannada News | Karnataka Government Launches Free HPV Cervical Cancer Vaccine Drive for 14 Year Old Girls

ಬೆಂಗಳೂರು, ಜುಲೈ 15: ಕೊರೊನಾ ಜಾಗತಿಕ ಹಾವಳಿಯ ನಡುವೆ ಕೊಂಚ ಮರೆಯಾಗಿದ್ದ ಮಹಾಮಾರಿ ಕ್ಯಾನ್ಸರ್, ಈಗ ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವತಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರವರೆಗೆ ತೀವ್ರವಾಗಿ ಕಾಡುತ್ತಿರುವ ‘ಗರ್ಭಕಂಠ ಕ್ಯಾನ್ಸರ್’ (Cervical Cancer) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಈಗ ಮಹತ್ವದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (HPV) ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ….

Read More

ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ – Kannada News | Prithviraj Sukumaran says his all time favourite movie is Kannada’s OM

ಕಳೆದ ಕೆಲ ವರ್ಷಗಳಿಂದ ಮಲಯಾಳಂ ಸಿನಿಮಾಗಳು (Cinema) ತಮ್ಮ ಕಂಟೆಂಟ್ ಇಂದ ದೇಶದಾದ್ಯಂತ ಮಾತ್ರವಲ್ಲ ವಿಶ್ವ ಮಟ್ಟದಲ್ಲಿ ಸಿನಿಮಾ ಪ್ರೇಮಿಗಳನ್ನು ತನ್ನತ್ತೆ ಸೆಳೆದಿದೆ. ಯಾವ ಸಿನಿಮಾ ವಿಮರ್ಶಕರು, ಸಿನಿಮಾ ಪ್ರೇಮಿಗಳ ಬಾಯಲ್ಲೂ ಮಲಯಾಳಂ ಸಿನಿಮಾಗಳ ಗುಣಗಾನ ಕೇಳಿ ಬರುತ್ತಿದೆ. ಆದರೆ ಇದೀಗ ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ ಒಬ್ಬರು ಕನ್ನಡ ಸಿನಿಮಾ ಒಂದು ತಮ್ಮ ಆಲ್​​ಟೈಮ್ ಫೇವರೇಟ್ ಎಂದಿದ್ದಾರೆ. ಪೃಥ್ವಿರಾಜ್ ಸುಕುಮಾರ್, ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ. ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ…

Read More

ಕರ್ನಾಟಕದಲ್ಲಿ ಮಳೆ ಕೊರತೆ ಪರಿಣಾಮ: ದಿನಸಿ ಬೆಲೆ ಗಗನಕ್ಕೇರಿಕೆ, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ – Kannada News | Karnataka Monsoon Deficit Pushes Grocery Prices Higher: Rice, Pulses and Essentials Turn Costlier

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ. ಮಳೆ ಅಭಾವದಿಂದ ಭತ್ತ, ಕಬ್ಬು, ಉದ್ದು ಸೇರಿದಂತೆ ಹಲವು ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ. ಬೆಳೆ ಪ್ರಮಾಣ ಕಡಿಮೆಯಾದಂತೆ ಮಾರುಕಟ್ಟೆಯಲ್ಲಿ ಪೂರೈಕೆಯ ಮೇಲೂ ಪರಿಣಾಮ ಬೀಳುತ್ತಿದ್ದು, ದಿನಸಿ ವಸ್ತುಗಳ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ವ್ಯಾಪಾರಿಗಳ ಪ್ರಕಾರ, ಈಗಾಗಲೇ ಹಲವಾರು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದೆ….

Read More

ಸೆಮಿಫೈನಲ್​ನಲ್ಲಿ ಸೋತ ಫ್ರಾನ್ಸ್ ತಂಡಕ್ಕಿದೆ ಮತ್ತೊಂದು ಪಂದ್ಯ..! – Kannada News | France Eyes Bronze in WC 3rd Place Playoff

ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ವಿರುದ್ಧ 2-0 ಗೋಲುಗಳ ಅಂತರದಿಂದ ಸೋತಿರುವ ಫ್ರಾನ್ಸ್ ತಂಡದ ವಿಶ್ವಕಪ್ ಕಮರಿದೆ. ಇದಾಗ್ಯೂ ಫ್ರಾನ್ಸ್​ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯವಾಗಿಲ್ಲ. ಬದಲಿಗೆ ಕಿಲಿಯನ್ ಎಂಬಾಪೆ ಪಡೆ ಮೂರನೇ ಸ್ಥಾನಕ್ಕಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಅಂದರೆ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲುವ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಕಂಚಿನ ಪದಕದೊಂದಿಗೆ 3ನೇ ಸ್ಥಾನ ಪಡೆದರೆ, ಸೋಲುವ ತಂಡವು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ತನ್ನ…

Read More