ದಿಗ್ಗಜರೊಂದಿಗೆ ಹೋಲಿಸಿ, ವೈಭವ್​ಗೆ ಕಿವಿಮಾತು ಹೇಳಿದ ಕಪಿಲ್ ದೇವ್! – Kannada News | Kapil Dev believes Vaibhav Sooryavanshi has extraordinary talent

ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರು ಇತ್ತೀಚೆಗೆ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ವೈಭವ್ ಆಟವು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಯುವ ದಾಂಡಿಗನಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ವೈಭವ್ ಸೂರ್ಯವಂಶಿ ಅವರಲ್ಲಿರುವ ಪ್ರತಿಭೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ. ಆತನ ನೈಸರ್ಗಿಕ ಆಟವೇ ಆತನ ಸಾಮರ್ಥ್ಯ ಎಂದು ಕಪಿಲ್ ದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಅವನಿಗೆ ಈಗಲೇ ಅತಿಯಾದ ಪ್ರಚಾರವನ್ನು ನೀಡಬೇಡಿ. ಈ ಮೂಲಕ ಒತ್ತಡವನ್ನು ಹಾಕಬೇಡಿ. ಮುಕ್ತವಾಗಿ ಉಸಿರಾಡಲು ಬಿಡಿ ಎಂದು ಕಪಿಲ್ ಮಾಧ್ಯಮ ಹಾಗೂ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಅತಿಯಾದ ನಿರೀಕ್ಷೆಗಳು ಯುವ ಆಟಗಾರನ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ವೈಭವ್ ಸೂರ್ಯವಂಶಿಗೆ ಈಗಲೇ ಅತಿಯಾದ ಪ್ರಚಾರ ನೀಡಬಾರದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡದಿರುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಪಿಲ್ ದೇವ್, ಅವನು ಸಿದ್ಧನಾಗಿದ್ದರೆ, ತಂಡದಲ್ಲಿ ಅವಕಾಶ ನೀಡಿ. ಆಡಲು ಬಿಡಿ. ವಯಸ್ಸನ್ನು ಪರಿಗಣಿಸದೆ ಪ್ರತಿಭೆಗೆ ತಕ್ಕಂತೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ವೈಭವ್​ಗೆ ಕಿವಿಮಾತು:

ಐಪಿಎಲ್ ಮತ್ತು ಟಿ20 ಮಾದರಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತವಾಗಿ ಆಡಿದ್ದರೂ, ಒಬ್ಬ ಕ್ರಿಕೆಟಿಗನ ನಿಜವಾದ ಯಶಸ್ಸು ಮತ್ತು ಪರಂಪರೆ ನಿರ್ಧಾರವಾಗುವುದು ಟೆಸ್ಟ್ ಕ್ರಿಕೆಟ್‌ನಲ್ಲಿ. ಹೀಗಾಗಿ ವೈಭವ್ ಮುಂದೆ ಟೆಸ್ಟ್ ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 15 ವರ್ಷದ ವೈಭವ್ ಸೂರ್ಯವಂಶಿ ಅವರಲ್ಲಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಕಪಿಲ್ ದೇವ್ ಅವರ ಈ ಮಾರ್ಗದರ್ಶನ ಮತ್ತು ಎಚ್ಚರಿಕೆಯ ಮಾತುಗಳು ಯುವ ಆಟಗಾರನನ್ನು ಅನಗತ್ಯ ಒತ್ತಡದಿಂದ ಕಾಪಾಡಲು ಅತ್ಯಂತ ಅವಶ್ಯಕವಾಗಿವೆ.

ಇದನ್ನೂ ಓದಿ: ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!

ಅತಿಯಾದ ಪ್ರಚಾರದ ಬದಲು ಅವರಿಗೆ ಮುಕ್ತವಾಗಿ ಆಡುವ ವಾತಾವರಣ ನಿರ್ಮಿಸಿಕೊಟ್ಟರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತೆ ವೈಭವ್ ಸೂರ್ಯವಂಶಿ ಕೂಡ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Vaib

Published On – 5:31 pm, Sat, 4 July 26

Source link

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆಯೇ? ಯಾವ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ? – Kannada News | WHO Sugar Guidelines: How Reducing Sugar Can Improve Your Health

ಆರೋಗ್ಯಕರ ಜೀವನಕ್ಕೆ ಸಕ್ಕರೆ ನಿಯಂತ್ರಣImage Credit source: Getty Images

ಇತ್ತೀಚಿನ ದಿನಗಳಲ್ಲಿ ಚಹಾ, ಕಾಫಿ, ಸಿಹಿತಿಂಡಿ, ತಂಪು ಪಾನೀಯಗಳು, ಪ್ಯಾಕೇಜ್ಡ್ ಜ್ಯೂಸ್ ಹಾಗೂ ಪ್ರೊಸೆಸ್ಡ್ ಆಹಾರಗಳ ಮೂಲಕ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಅಧಿಕ ಸಕ್ಕರೆ ಸೇವನೆಯು ದೀರ್ಘಾವಧಿಯಲ್ಲಿ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಸಕ್ಕರೆ ಸೇವನೆ ಮಾಡುವುದಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಬಹುದು ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಯಾವ ರೀತಿಯ ಪ್ರಯೋಜನವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಬ್ಲ್ಯೂಎಚ್ಓ ನೀಡಿರುವ ಸಲಹೆಗಳು;

ಸಾಮಾನ್ಯವಾಗಿ ಡಬ್ಲ್ಯೂಎಚ್ಓ (WHO) ಪ್ರಕಾರ, ದಿನದ ಒಟ್ಟು ಕ್ಯಾಲೊರಿಗಳಲ್ಲಿ 10% ಕ್ಕಿಂತ ಕಡಿಮೆ ಮಾತ್ರ ಹೆಚ್ಚುವರಿ ಸಕ್ಕರೆಯಿಂದ ಬರಬೇಕು. ಉತ್ತಮ ಆರೋಗ್ಯಕ್ಕಾಗಿ ಇದನ್ನು 5% (ಸುಮಾರು 25 ಗ್ರಾಂ ಅಥವಾ 6 ಟೀ ಚಮಚ) ಒಳಗೆ ಮಿತಿಗೊಳಿಸುವುದು ಸೂಕ್ತ. ಈ ಪ್ರಮಾಣವು ಸಿಹಿ ಪಾನೀಯಗಳು, ಸಿಹಿತಿಂಡಿಗಳು ಮತ್ತು ಪ್ರೊಸೆಸ್ಡ್ ಆಹಾರಗಳಲ್ಲಿ ಇರುವ ಹೆಚ್ಚುವರಿ ಸಕ್ಕರೆಗೆ ಅನ್ವಯಿಸುತ್ತದೆ. ಹಣ್ಣು ಮತ್ತು ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆ ಇದಕ್ಕೆ ಅನ್ವಯವಾಗಿಲ್ಲ.

ಇದನ್ನೂ ಓದಿ: ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಏನು ಪ್ರಯೋಜನ?

ಸಾಮಾನ್ಯವಾಗಿ ಸಕ್ಕರೆ ಸೇವನೆ ಕಡಿಮೆ ಮಾಡಿದರೆ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಸಮತೋಲನದಲ್ಲಿದ್ದು, ಮಧುಮೇಹದ ಅಪಾಯ ಕಡಿಮೆಯಾಗಬಹುದು. ಹೃದಯದ ಆರೋಗ್ಯ ಸುಧಾರಿಸುವುದರ ಜೊತೆಗೆ ಹಲ್ಲುಗಳಲ್ಲಿ ಕ್ಯಾವಿಟಿ ಉಂಟಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ದಿನವಿಡೀ ಶಕ್ತಿ ಸ್ಥಿರವಾಗಿದ್ದು, ಚರ್ಮದ ಆರೋಗ್ಯ ಮತ್ತು ನಿದ್ರೆಯ ಗುಣಮಟ್ಟವೂ ಚೆನ್ನಾಗಿರುತ್ತದೆ.

ಯಾವ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಅಡಗಿದೆ?

ಕೋಲ್ಡ್ ಡ್ರಿಂಕ್ಸ್, ಪ್ಯಾಕೇಜ್ಡ್ ಜ್ಯೂಸ್, ಎನರ್ಜಿ ಡ್ರಿಂಕ್ಸ್, ಬಿಸ್ಕತ್, ಕೇಕ್, ಚಾಕೊಲೇಟ್, ಸಿಹಿತಿಂಡಿಗಳು, ಫ್ಲೇವರ್ಡ್ ಮೊಸರು, ಬ್ರೇಕ್‌ಫಾಸ್ಟ್ ಸೀರಿಯಲ್ಸ್, ಕೆಚಪ್, ಸಾಸ್ ಹಾಗೂ ರೆಡಿ-ಟು-ಈಟ್ ಆಹಾರಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಖರೀದಿಸುವಾಗ ಪ್ಯಾಕೆಟ್‌ನ ಲೇಬಲ್ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಕಡಿಮೆ ಸಕ್ಕರೆ ಇರುವ ಆಹಾರಗಳನ್ನು ಆಯ್ಕೆ ಮಾಡಿ ಹಾಗೂ ಸಮತೋಲನ ಆಹಾರ ಪದ್ಧತಿ ಅನುಸರಿಸುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ – Kannada News | Parliament Monsoon Session to begin from July 20 says Union Minister Kiren Rijiju

ನವದೆಹಲಿ, ಜುಲೈ 4: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಪ್ರಕಟಿಸಿರುವಂತೆ, ಸಂಸತ್ತಿನ ಮುಂಗಾರು ಅಧಿವೇಶನವು (Parliament Monsoon Session) ಜುಲೈ 20ರಿಂದ ಪ್ರಾರಂಭವಾಗಿ ಆಗಸ್ಟ್ 13ರವರೆಗೆ ಮುಂದುವರಿಯಲಿದೆ. ದೇಶದ ಪ್ರಮುಖ ವಿಷಯಗಳ ಕುರಿತು ಸಕಾರಾತ್ಮಕ ಚರ್ಚೆಗಳು ನಡೆಯಲಿವೆ ಎಂದು ಅವರು ಆಶಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಂದ್ರ ಸರ್ಕಾರದ ಶಿಫಾರಸ್ಸನ್ನು ಅನುಮೋದಿಸಿದ ನಂತರ ಉಭಯ ಸದನಗಳನ್ನು ಕರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

“ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ಮತ್ತು ನಿರ್ಧಾರಗಳಿಗಾಗಿ ಈ ಅಧಿವೇಶನವು ಜುಲೈ 20ರಿಂದ ಆರಂಭವಾಗಿ ಆಗಸ್ಟ್ 13ರವರೆಗೆ ನಡೆಯಲಿದೆ” ಎಂದು ಅವರು ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಪಕ್ಷಗಳಲ್ಲಿ ಬಿರುಕು ಮೂಡಿದ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಟಿಎಂಸಿಯ 28 ಲೋಕಸಭಾ ಸದಸ್ಯರಲ್ಲಿ 20 ಸಂಸದರು ಬಂಡಾಯವೆದ್ದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅದೇ ರೀತಿ, ಯುಬಿಟಿಯ 9 ಲೋಕಸಭಾ ಸಂಸದರಲ್ಲಿ 6 ಮಂದಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಸೇರಿಕೊಂಡಿದ್ದಾರೆ.

ಈ ಬೆಳವಣಿಗೆಯಿಂದಾಗಿ ಲೋಕಸಭೆಯಲ್ಲಿ ಎನ್‌ಡಿಎ ಬಲ ಹೆಚ್ಚಾಗಿದೆ. ಆದರೆ, ಬಂಡಾಯ ಟಿಎಂಸಿ ಮತ್ತು ಯುಬಿಟಿ ಸದಸ್ಯರನ್ನು ಪ್ರತ್ಯೇಕ ಗುಂಪುಗಳಾಗಿ ಗುರುತಿಸಬೇಕೆಂಬ ಬೇಡಿಕೆಯ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರ ಇನ್ನೂ ಬಾಕಿ ಇದೆ. ಇತ್ತೀಚಿನ ಚುನಾವಣೆಗಳ ನಂತರ ರಾಜ್ಯಸಭೆಯಲ್ಲೂ ಎನ್‌ಡಿಎ ಪರವಾಗಿ ಸಂಖ್ಯಾಬಲ ಹೆಚ್ಚಾಗಿದೆ.

ಸರ್ಕಾರದ ಕಾರ್ಯಸೂಚಿಯಲ್ಲಿರುವ ಪ್ರಮುಖ ಮಸೂದೆಗಳು:

ಸುಮಾರು 4 ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಕಾನೂನುಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ವಿಧೇಯಕಗಳನ್ನು ಮಂಡಿಸುವ ಸಾಧ್ಯತೆಯಿದೆ.

130ನೇ ಸಂವಿಧಾನ ತಿದ್ದುಪಡಿ ಮಸೂದೆ: ಭ್ರಷ್ಟಾಚಾರ ಸೇರಿದಂತೆ ಗಂಭೀರ ಅಪರಾಧಗಳ ಆರೋಪದ ಮೇಲೆ ಪ್ರಧಾನಿ ಅಥವಾ ಮುಖ್ಯಮಂತ್ರಿಗಳು 30 ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆದುಹಾಕಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

ಮಹಿಳಾ ಮೀಸಲಾತಿ ಅನುಷ್ಠಾನ ಮಸೂದೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ಗುರಿ ಹೊಂದಿದೆ.

ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಷನ್) ಮಸೂದೆ.

ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ.

ಪ್ರಸ್ತಾವಿತ ಕಾನೂನುಗಳಲ್ಲಿ 130ನೇ ಸಂವಿಧಾನ ತಿದ್ದುಪಡಿ ಮಸೂದೆ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿದ್ದು ಮತ ಚಲಾಯಿಸುವ ಕನಿಷ್ಠ 3ನೇ 2ರಷ್ಟು (2/3) ಸದಸ್ಯರ ಬೆಂಬಲ ಅಂದರೆ ‘ವಿಶೇಷ ಬಹುಮತ’ದ ಅಗತ್ಯವಿದೆ. ಕಳೆದ ಅಧಿವೇಶನದಲ್ಲಿ ಅಗತ್ಯ ಸಂಖ್ಯಾಬಲದ ಕೊರತೆಯಿಂದಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳು ವಿಫಲವಾಗಿದ್ದವು.

ಸರ್ಕಾರದ ಬಳಿ ಅಗತ್ಯ ಸಂಖ್ಯಾಬಲವಿದೆಯೇ?:

ಸಾಮಾನ್ಯ ಮಸೂದೆಗಳನ್ನು ಅಂಗೀಕರಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಉಭಯ ಸದನಗಳಲ್ಲಿ ಸ್ಪಷ್ಟ ಬಹುಮತವಿದೆ. ಆದರೆ ಸಂವಿಧಾನ ತಿದ್ದುಪಡಿಗಳಿಗೆ ಅಗತ್ಯವಿರುವ ವಿಶೇಷ ಬಹುಮತದ ವಿಷಯದಲ್ಲಿ ಸರ್ಕಾರಕ್ಕೆ ಇನ್ನೂ ಸಣ್ಣ ಕೊರತೆಯಿದೆ. ಲೋಕಸಭೆಯಲ್ಲಿ ಪಶ್ಚಿಮ ಬಂಗಾಳ ಚುನಾವಣೆಯ ನಂತರ 20 ಟಿಎಂಸಿ ಶಾಸಕರು ಎನ್‌ಸಿಪಿಐ (NCPI) ಸೇರಿ ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಲೋಕಸಭೆಯಲ್ಲಿ ಶಿವಸೇನೆಯ ಸಂಸದರ ಸೇರ್ಪಡೆಯೊಂದಿಗೆ ಎನ್‌ಡಿಎ ಬಲ ಸುಮಾರು 330ಕ್ಕೆ ಏರಿದೆ. ಆದರೂ ಇದು ಮೂರನೇ ಎರಡರಷ್ಟು ಬಹುಮತಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ (AAP) 7 ಸಂಸದರು ಬಿಜೆಪಿಗೆ ಸೇರ್ಪಡೆಗೊಂಡ ನಂತರ, 242 ಸದಸ್ಯರ ಬಲದ ಸದನದಲ್ಲಿ ಎನ್‌ಡಿಎ ಬಲ 141ಕ್ಕೆ ಏರಿದೆ. 10 ನಾಮನಿರ್ದೇಶಿತ ಮತ್ತು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಈ ಸಂಖ್ಯೆ 151ಕ್ಕೆ ತಲುಪುತ್ತದೆ. ಇದು ಸಾಮಾನ್ಯ ಬಹುಮತಕ್ಕಿಂತ ಹೆಚ್ಚಿದ್ದರೂ, ಸಂವಿಧಾನ ತಿದ್ದುಪಡಿಗೆ ಬೇಕಾದ ಮೂರನೇ ಎರಡರಷ್ಟು ಬಹುಮತಕ್ಕಿಂತ 11 ಮತಗಳು ಕಡಿಮೆಯಾಗಿದೆ.

ಹೀಗಾಗಿ, ಈ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಬಿಜು ಜನತಾದಳ (BJD) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ನಂತಹ ಪ್ರಾದೇಶಿಕ ಪಕ್ಷಗಳ ಬೆಂಬಲವು ಸರ್ಕಾರಕ್ಕೆ ನಿರ್ಣಾಯಕವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆ ಅಲಂಕಾರಕ್ಕೆ ನಕಲಿ ಗಿಡಗಳನ್ನು ಬಳಸುತ್ತಿದ್ದೀರಾ? ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Artificial Plants and Vastu: Impact on Home Energy and Decor Guide

ಇತ್ತೀಚಿನ ದಿನಗಳಲ್ಲಿ ಮನೆ ಅಲಂಕಾರಕ್ಕಾಗಿ ಕೃತಕ ಸಸ್ಯಗಳನ್ನು (Artificial Plants) ಬಳಸುವುದು ಹೆಚ್ಚಾಗುತ್ತಿದೆ. ನಿಜವಾದ ಗಿಡಗಳಂತೆ ಇವುಗಳಿಗೆ ನಿರಂತರ ನೀರುಣಿಸುವ ಅಥವಾ ವಿಶೇಷ ಆರೈಕೆಯ ಅಗತ್ಯವಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಆದರೆ, ನೋಡಲು ಸುಂದರವಾಗಿ ಕಾಣುವ ಈ ಪ್ಲಾಸ್ಟಿಕ್ ಅಥವಾ ಕೃತಕ ಗಿಡಗಳು ಮನೆಯ ಶಕ್ತಿ ಮತ್ತು ವಾಸ್ತು ಮೇಲೂ ಪ್ರಭಾವ ಬೀರುತ್ತವೆಯೇ? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಜವಾದ ಸಸ್ಯಗಳು ಮತ್ತು ಕೃತಕ ಗಿಡಗಳು:

ಭಾರತೀಯ ಸಂಪ್ರದಾಯದಲ್ಲಿ, ಸಸ್ಯಗಳನ್ನು ಕೇವಲ ಅಲಂಕಾರಿಕ ವಸ್ತುಗಳೆಂದು ಪರಿಗಣಿಸುವುದಿಲ್ಲ. ತುಳಸಿ, ಮನಿ ಪ್ಲಾಂಟ್ ಮತ್ತು ಬಿದಿರಿನಂತಹ (Bamboo) ಸಸ್ಯಗಳನ್ನು ಜೀವಂತಿಕೆ, ಪ್ರಗತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತದೆ. ನಿಜವಾದ ಸಸ್ಯಗಳು ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸಿ, ತಾಜಾತನ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತವೆ. ಆದರೆ, ಕೃತಕ ಸಸ್ಯಗಳು ಕೇವಲ ನೋಡಲು ಸುಂದರವಾಗಿದ್ದು, ಅವುಗಳಲ್ಲಿ ನೈಸರ್ಗಿಕ ಜೀವ ಶಕ್ತಿಯ ಕೊರತೆಯಿರುತ್ತದೆ. ಆದ್ದರಿಂದ ಇವುಗಳ ಬಳಕೆಯ ಬಗ್ಗೆ ವಾಸ್ತು ಶಾಸ್ತ್ರವು ಸಮತೋಲಿತ ನಿಯಮಗಳನ್ನು ಸೂಚಿಸುತ್ತದೆ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ವಾಸ್ತು ತಜ್ಞರು ಹೇಳುವುದೇನು?

ವಾಸ್ತು ನಂಬಿಕೆಗಳ ಪ್ರಕಾರ, ಮನೆಯಲ್ಲಿರುವ ಮುರಿದ, ಒಣಗಿದ ಅಥವಾ ನಿರ್ಜೀವ ವಸ್ತುಗಳನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಕೆಲವು ತಜ್ಞರು ಕೃತಕ ಸಸ್ಯಗಳನ್ನು ಅಶುಭ ಎನ್ನುತ್ತಾರೆ. ಆದರೆ ಆಧುನಿಕ ವಾಸ್ತು ತಜ್ಞರ ಪ್ರಕಾರ, ಪ್ರತಿಯೊಂದು ನಕಲಿ ಗಿಡವೂ ಅಶುಭ ಅಲ್ಲ. ಮನೆ ಸ್ವಚ್ಛವಾಗಿದ್ದು, ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಅವು ಕೇವಲ ಅಲಂಕಾರಿಕ ವಸ್ತುವಾಗಿ ಉಳಿಯುತ್ತವೆ. ಆದರೆ, ಧೂಳು ಹಿಡಿದ, ಮಸುಕಾದ ಅಥವಾ ಮುರಿದ ಕೃತಕ ಹೂವುಗಳನ್ನು ದೀರ್ಘಕಾಲ ಇಟ್ಟುಕೊಂಡರೆ ಅದು ಮನೆಯ ವಾತಾವರಣವನ್ನು ಭಾರವಾಗಿಸಿ, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ಆದ್ದರಿಂದ ಮನೆಯ ಅಂದಕ್ಕಾಗಿ ಕೃತಕ ಅಲಂಕಾರಗಳನ್ನು ಬಳಸಿದರೂ, ಅವುಗಳೊಂದಿಗೆ ನೈಸರ್ಗಿಕ ಗಿಡಗಳನ್ನು ಕೂಡ ಬೆಳೆಸಿ ಮನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ವಾಸ್ತು ಮತ್ತು ಆರೋಗ್ಯ ಎರಡರ ದೃಷ್ಟಿಯಿಂದಲೂ ಅತ್ಯಂತ ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Travel Tips: ಜುಲೈ ತಿಂಗಳಲ್ಲಿ ಭಾರತದ ಈ ಪ್ರಮುಖ ಪ್ರವಾಸಿ ತಾಣಗಳಿಗೆ ತಪ್ಪದೇ ಭೇಟಿ ನೀಡಿ – Kannada News | 7 Best Monsoon Destinations in India: July Travel Guide and Must Visit Places

ಪ್ರಯಾಣ ಎಂಬುದು ಕೇವಲ ಹೊಸ ಜಾಗಗಳನ್ನು ನೋಡುವುದಲ್ಲ, ಅದು ಮನಸ್ಸಿಗೆ ಶಾಂತಿ ಮತ್ತು ಹೊಸ ಚೈತನ್ಯವನ್ನು ನೀಡುವ ಸುಂದರ ಅನುಭವ. ಅದರಲ್ಲೂ ಮಳೆಗಾಲದಲ್ಲಿ ಪ್ರವಾಸ ಮಾಡುವುದೇ ಒಂದು ವಿಭಿನ್ನ ರೋಮಾಂಚನ. ಜುಲೈ ತಿಂಗಳು ಬಂತೆಂದರೆ ಸಾಕು ಪ್ರಕೃತಿ ಹಸಿರು ರೇಷ್ಮೆಯ ಸೀರೆಯನ್ನುಟ್ಟಂತೆ ಕಂಗೊಳಿಸುತ್ತದೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ನೀವು ಈ ಜುಲೈನಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸ್ಮರಣೀಯ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ, ಭಾರತದಲ್ಲಿ ಭೇಟಿ ನೀಡಲೇಬೇಕಾದ 7 ಅದ್ಭುತ ತಾಣಗಳ ಪಟ್ಟಿ ಇಲ್ಲಿದೆ:

ಕೂರ್ಗ್, ಕರ್ನಾಟಕ (ಭಾರತದ ಸ್ಕಾಟ್ಲೆಂಡ್):

ನಮ್ಮ ಕರ್ನಾಟಕದಲ್ಲೇ ಇರುವ ಕರಾವಳಿ ಮತ್ತು ಮಲೆನಾಡಿನ ಹೆಬ್ಬಾಗಿಲು ಕೊಡಗು ಅಥವಾ ಕೂರ್ಗ್. ಮಳೆಗಾಲದಲ್ಲಿ ಇದರ ಸೌಂದರ್ಯ ದುಪ್ಪಟ್ಟಾಗುತ್ತದೆ. ಹಚ್ಚ ಹಸಿರಿನ ಕಾಫಿ ತೋಟಗಳು, ಮಂಜು ಮುಸುಕಿದ ಕಣಿವೆಗಳು ಮತ್ತು ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು ಇಲ್ಲಿನ ಮುಖ್ಯ ಆಕರ್ಷಣೆ. ಮಳೆಯ ಹನಿಗಳ ನಡುವೆ ಬಿಸಿ ಬಿಸಿ ಕಾಫಿ ಹೀರುತ್ತಾ ಪ್ರಕೃತಿಯನ್ನು ಆಸ್ವಾದಿಸಲು ಕೂರ್ಗ್ ಅತ್ಯುತ್ತಮ ಆಯ್ಕೆ.

ಉದಯಪುರ, ರಾಜಸ್ಥಾನ:

ರಾಜಸ್ಥಾನ ಎಂದ ತಕ್ಷಣ ಮರುಭೂಮಿ ನೆನಪಾಗಬಹುದು, ಆದರೆ ಉದಯಪುರ ಮಳೆಗಾಲದಲ್ಲಿ ಸಂಪೂರ್ಣವಾಗಿ ಬದಲಾಗುತ್ತದೆ. ಜುಲೈ ತಿಂಗಳ ಮಳೆಗೆ ಇಲ್ಲಿನ ಅರಾವಳಿ ಬೆಟ್ಟಗಳು ಹಸಿರಾಗಿ ಕಂಗೊಳಿಸುತ್ತವೆ. ಪಿಚೋಲಾ ಮತ್ತು ರಂಗ್ ಸಾಗರ್‌ನಂತಹ ಪ್ರಸಿದ್ಧ ಸರೋವರಗಳು ತುಂಬಿ ಹರಿಯುವಾಗ, ಇಲ್ಲಿನ ಭವ್ಯ ಅರಮನೆಗಳ (City Palace) ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಮೇಘಾಲಯ:

ವಿಶ್ವದಲ್ಲೇ ಅತಿ ಹೆಚ್ಚು ಮಳೆ ಬೀಳುವ ರಮಣೀಯ ತಾಣಗಳಾದ ಚಿರಾಪುಂಜಿ ಮತ್ತು ಮೌಸಿನ್ರಾಮ್ ಇರುವುದು ಇದೇ ಮೇಘಾಲಯದಲ್ಲಿ. ಜುಲೈನಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನೊಕಾಲಿಕೈ, ಎಲೆಫೆಂಟ್ ಫಾಲ್ಸ್ ಮತ್ತು ಡೈನಥ್ಲೆನ್‌ನಂತಹ ಪ್ರಸಿದ್ಧ ಜಲಪಾತಗಳು ಭೋರ್ಗರೆಯುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸಿಗರಿಗೆ ಇದು ಸೂಕ್ತ ಜಾಗ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ

ಗೋವಾ:

ಗೋವಾ ಎಂದರೆ ಕೇವಲ ಬೇಸಿಗೆಯ ಬೀಚ್‌ಗಳಲ್ಲ, ಮಳೆಗಾಲದ ಗೋವಾ ಇನ್ನು ಹೆಚ್ಚು ಪ್ರಶಾಂತ ಮತ್ತು ಸುಂದರವಾಗಿರುತ್ತದೆ. ಕಡಲತೀರಗಳಲ್ಲಿ ತಂಪಾದ ಗಾಳಿಗೆ ಹೆಜ್ಜೆ ಹಾಕುತ್ತಾ ಪ್ರಕೃತಿಯನ್ನು ಆನಂದಿಸಬಹುದು. ಇಷ್ಟೇ ಅಲ್ಲದೆ, ಜುಲೈ ಆಸುಪಾಸಿನಲ್ಲಿ ಇಲ್ಲಿ ನಡೆಯುವ ‘ಸಾವೊ ಜೊವೊ’ (Sao Joao) ನಂತಹ ಸಾಂಸ್ಕೃತಿಕ ಉತ್ಸವಗಳು ನಿಮ್ಮ ಪ್ರವಾಸದ ಮೋಜನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಹೂವುಗಳ ಕಣಿವೆ, ಉತ್ತರಾಖಂಡ:

ಟ್ರೆಕ್ಕಿಂಗ್ ಇಷ್ಟಪಡುವವರಿಗೆ ಉತ್ತರಾಖಂಡದ ‘ವ್ಯಾಲಿ ಆಫ್ ಫ್ಲವರ್ಸ್’ ಜುಲೈ ತಿಂಗಳಲ್ಲಿ ಸ್ವರ್ಗದಂತೆ ಕಾಣುತ್ತದೆ. ಈ ಸಮಯದಲ್ಲಿ ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಜಾತಿಯ ಅಪರೂಪದ ಕಾಡು ಹೂವುಗಳು ಒಟ್ಟಿಗೆ ಅರಳಿ ನಿಲ್ಲುತ್ತವೆ. ಈ ನೈಸರ್ಗಿಕ ವರ್ಣರಂಜಿತ ದೃಶ್ಯವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಜುಲೈನಲ್ಲಿ ಇಲ್ಲಿಗೆ ಲಗ್ಗೆ ಇಡುತ್ತಾರೆ.

ಡಾರ್ಜಿಲಿಂಗ್, ಪಶ್ಚಿಮ ಬಂಗಾಳ:

ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜಿಲಿಂಗ್ ತನ್ನ ಚಹಾ ತೋಟಗಳು ಮತ್ತು ಪಾರಂಪರಿಕ ಶೈಲಿಯ ಬ್ರಿಟಿಷ್ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಜುಲೈ ತಿಂಗಳ ತಂಪಾದ ಹವಾಮಾನ, ಮಂಜಿನ ನಡುವೆ ಸರಿಯುವ ಟಾಯ್ ಟ್ರೈನ್ ಪ್ರಯಾಣ ಮತ್ತು ಶಾಂತಿಯುತ ಬೌದ್ಧ ಮಠಗಳು ನಿಮ್ಮ ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡುತ್ತವೆ.

ಲಡಾಖ್:

ಭಾರತದ ಉಳಿದ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದರೂ, ಲಡಾಖ್‌ನಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಜುಲೈ ತಿಂಗಳಲ್ಲಿ ಇಲ್ಲಿನ ಶೀತ ಗಾಳಿ, ಕಡು ನೀಲಿ ಆಕಾಶ ಮತ್ತು ಪಾರದರ್ಶಕ ಸರೋವರಗಳ ಸೌಂದರ್ಯ ಅಪ್ರತಿಮವಾಗಿರುತ್ತದೆ. ಬೌದ್ಧ ಸಂಸ್ಕೃತಿ ಮತ್ತು ಬೈಕ್ ರೈಡಿಂಗ್ ಇಷ್ಟಪಡುವವರಿಗೆ ಜುಲೈನಲ್ಲಿ ಲಡಾಖ್ ಅತ್ಯಂತ ಸುರಕ್ಷಿತ ಮತ್ತು ಸುಂದರ ತಾಣವಾಗಿದೆ.

ಪ್ರವಾಸಿಗರಿಗೆ ಸಲಹೆ: ಮಳೆಗಾಲದ ಪ್ರವಾಸವು ರೋಮಾಂಚನಕಾರಿಯಾಗಿದ್ದರೂ, ಹೊರಡುವ ಮುನ್ನ ಆಯಾ ಪ್ರದೇಶದ ಹವಾಮಾನ ವರದಿ ಮತ್ತು ರಸ್ತೆಗಳ ಪರಿಸ್ಥಿತಿಯನ್ನು ಪರಿಶೀಲಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’! – Kannada News | Sunil Gavaskar said, 28th June will go down as one of the worst days in Indian cricket

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜೂನ್ 28 ಎಂದಿಗೂ ಮರೆಯಲಾಗದ ಕರಾಳ ದಿನವಾಗಿ ದಾಖಲಾಗಿದೆ. ಈ ದಿನವನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ‘ಅತ್ಯಂತ ಕೆಟ್ಟ ದಿನ’ವಾಗಿ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಭಾರತೀಯ ದಿಗ್ಗಜ ಹೀಗೆ ಹೇಳಲು ಮುಖ್ಯ ಕಾರಣ ಐರ್ಲೆಂಡ್ ವಿರುದ್ಧದ ಹೀನಾಯ ಸೋಲು.

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಸೋಲನುಭವಿಸಿತ್ತು. ಈ ಸೋಲಿನ ಬಗ್ಗೆ ಅಂಕಣ ಬರೆದಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಇದು ” ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ.

“ಕ್ರಿಕೆಟ್ ಪಂದ್ಯವನ್ನು ಸೋಲುವುದು ಒಂದು ಕಡೆ, ಆದರೆ ಯಾರ ವಿರುದ್ಧ ಸೋಲುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಐರ್ಲೆಂಡ್ ವಿರುದ್ಧ ಸರಣಿ ಸೋತಿರುವುದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪ್ರದರ್ಶನ. ತಂಡದಲ್ಲಿದ್ದ ಅತಿಯಾದ ಆತ್ಮವಿಶ್ವಾಸ ಮತ್ತು ಬೇಜವಾಬ್ದಾರಿತನವೇ ಈ ದುಸ್ಥಿತಿಗೆ ಕಾರಣ.” ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಸೋಲನ್ನು ವಿಮರ್ಶಿಸಿರುವ ಸುನಿಲ್ ಗವಾಸ್ಕರ್,  ಐರ್ಲೆಂಡ್​ನಲ್ಲಿನ ಪಿಚ್‌ನ ಪರಿಸ್ಥಿತಿಗೆ ತಕ್ಕಂತೆ ಆಡದೆ ಕೇವಲ ತಮ್ಮ ‘ಹೆಸರು ಮತ್ತು ಕೀರ್ತಿ’ಗೆ ತಕ್ಕಂತೆ ಬ್ಯಾಟ್ ಬೀಸಲು ಹೋಗಿ ಬ್ಯಾಟರ್‌ಗಳು ತಪ್ಪು ಮಾಡಿದರು. 1983ರ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಲಘುವಾಗಿ ಪರಿಗಣಿಸಿ ಸೋತ ವೆಸ್ಟ್ ಇಂಡೀಸ್ ತಂಡದ ಸ್ಥಿತಿಯನ್ನು ಗವಾಸ್ಕರ್ ಇಲ್ಲಿ ನೆನಪಿಸಿದ್ದಾರೆ.

ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ!

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದ ಆಯ್ಕೆಯ ಬಗ್ಗೆ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ಅತ್ಯುತ್ತಮ ಫಾರ್ಮ್​​ನಲ್ಲಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಪಾದಾರ್ಪಣೆ ಮಾಡಲು ಅವಕಾಶ ನೀಡದಿರುವುದು ಅಚ್ಚರಿ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇಂತಹದೊಂದು ನಿರ್ಧಾರವನ್ನು ಏಕೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ.

ಉತ್ತಮ ಫಾರ್ಮ್​ನಲ್ಲಿರುವ ಆಟಗಾರರನ್ನು ಕೂರಿಸುವುದರಲ್ಲಿ ಅರ್ಥವಿಲ್ಲ. ಕಳೆದ ಒಂದು ತಿಂಗಳಿನಿಂದ ನಾನು ವೈಭವ್ ಸೂರ್ಯವಂಶಿ ಅವರನ್ನು ಆಡಿಸಬೇಕು ಎಂದು ಹೇಳುತ್ತಲೇ ಇದ್ದೆ. ಐರ್ಲೆಂಡ್ ವಿರುದ್ಧದ ಈ ಎರಡು ಪಂದ್ಯಗಳು ಯುವ ಆಟಗಾರರನ್ನು ಪರೀಕ್ಷಿಸಲು ಅತ್ಯಂತ ಸೂಕ್ತ ವೇದಿಕೆಯಾಗಿದ್ದವು.

ಇದನ್ನೂ ಓದಿ: Cape Verde: ಬಂದ್ರು… ನಡುಗಿಸಿದ್ರು… ಇತಿಹಾಸ ಬರೆದ್ರು… ಹೋದ್ರು..!

ಫಾರ್ಮ್‌ನಲ್ಲಿಲ್ಲದ ಬ್ಯಾಟರ್‌ಗಳನ್ನು ಬೆಂಚ್​ನಲ್ಲಿರಿಸಿ, ಫಾರ್ಮ್‌ನಲ್ಲಿರುವ ಯುವ ಆಟಗಾರರಿಗೆ ಮ್ಯಾನೇಜ್ಮೆಂಟ್ ಮಣೆ ಹಾಕಬೇಕಿತ್ತು ಎಂದು ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Published On – 4:56 pm, Sat, 4 July 26

Source link

ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್! – Kannada News | Agumbe Ghat: Heavy Vehicles Restricted Amid Landslide Fears Due to Monsoon Rains

ಉಡುಪಿ, ಜುಲೈ 04: ಉಡುಪಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ, ಅಂದರೆ ತೀರ್ಥಹಳ್ಳಿ – ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಮಣ್ಣು ತೇವಗೊಂಡು ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 30ರವರೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳು ವಾಹನಗಳನ್ನು ಪರಿಶೀಲಿಸಿ, ನಿಗದಿತ ಮಾನದಂಡಗಳನ್ನು ಪೂರೈಸಿದ ವಾಹನಗಳಿಗೆ ಮಾತ್ರ ಮುಂದೆ ಸಾಗಲು ಅನುಮತಿ ನೀಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆಯಲ್ಲಿ ಹಳ್ಳ ಹಿಡಿದ ‘ಎಸ್ಐಆರ್’ ಪ್ರಕ್ರಿಯೆ: ಮನೆ ಮನೆಗೆ ಹೋಗದೆ ದೇವಸ್ಥಾನ, ಅಂಗನವಾಡಿಯಲ್ಲೇ ಕುಳಿತ ಬಿಎಲ್‌ಓ – Kannada News | Viral Video: Davangere BLOs Neglect SIR Duties, Forcing Citizens to Anganwadis

ದಾವಣಗೆರೆ, ಜು.4: ಜಿಲ್ಲೆಯಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ನಿಯಮದ ಪ್ರಕಾರ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಹಾಗೂ ಫಾರಂಗಳನ್ನು ಸಂಗ್ರಹಿಸಬೇಕಾದ ಬಿಎಲ್‌ಓಗಳು (BLO – Booth Level Officers), ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಓಗಳು ಮನೆಮನೆಗೆ ತೆರಳದೆ, ಅಂಗನವಾಡಿ ಕೇಂದ್ರ ಹಾಗೂ ದೇವಸ್ಥಾನಗಳಲ್ಲಿ ಕುಳಿತುಕೊಂಡೇ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾಲಿನಗರದ ಬೂತ್ ನಂಬರ್ 49ರಲ್ಲಿ ಈ ಅವಾಂತರ ಬೆಳಕಿಗೆ ಬಂದಿದೆ. ಇಲ್ಲಿನ ಅಂಗನವಾಡಿ ಕೇಂದ್ರ ಮತ್ತು ಸ್ಥಳೀಯ ಕಾಲಭೈರವ ದೇವಸ್ಥಾನದಲ್ಲಿ ಬಿಎಲ್‌ಓಗಳು ಆರಾಮಾಗಿ ಕುಳಿತುಕೊಂಡಿದ್ದಾರೆ. ಸಾರ್ವಜನಿಕರು ತಾವೇ ಖುದ್ದಾಗಿ ದೇವಸ್ಥಾನ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಲೆದಾಡಿ ಫಾರಂಗಳನ್ನು ಪಡೆದುಕೊಂಡು ಬರುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷೇತ್ರದ ಸಾರ್ವಜನಿಕರು ಬಿಎಲ್‌ಓಗಳಿಗೆ ಫೋನ್ ಮಾಡಿ ನಿಯಮದಂತೆ ಮನೆಗೆ ಬರುವಂತೆ ವಿನಂತಿಸಿದರೆ, ಅದಕ್ಕೆ ಉದ್ಧಟತನದ ಉತ್ತರ ಸಿಗುತ್ತಿದೆ ಎನ್ನಲಾಗಿದೆ. “ನಾವು ಇರುವ ಜಾಗಕ್ಕೇ ಬಂದು ಫಾರಂ ಪಡೆದುಕೊಳ್ಳಿ ಮತ್ತು ಸಬ್ಮಿಟ್ ಮಾಡಿ” ಎಂದು ಬಿಎಲ್‌ಓಗಳು ಸಾರ್ವಜನಿಕರಿಗೆ ಸೂಚಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಇದರಿಂದಾಗಿ ವಯೋವೃದ್ಧರು ಮತ್ತು ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಮಂದಿರ ದೇಣಿಗೆ ಕಳ್ಳತನ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು? – Kannada News | Ram Ram RSS chief Mohan Bhagwat first reaction on Ayodhya Ram temple donation row

ನವದೆಹಲಿ, ಜುಲೈ 4: ಅಯೋಧ್ಯೆಯ ರಾಮಮಂದಿರಕ್ಕೆ ಬಂದ ದೇಣಿಗೆಯಲ್ಲಿ ದುರುಪಯೋಗ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ, ಶ್ರೀರಾಮನ ಮೇಲಿನ ಭಕ್ತಿಯನ್ನು ಕುಗ್ಗಿಸಲು ಕೆಲವು ಶಕ್ತಿಗಳು ಯತ್ನಿಸುತ್ತಿವೆಯೇ? ಎಂಬ ಪ್ರಶ್ನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅತ್ಯಂತ ಚುಟುಕಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾಗ್ಪುರದಲ್ಲಿ ಸುದ್ದಿಗಾರರು ಈ ವಿವಾದದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಮೋಹನ್ ಭಾಗವತ್ ಅವರು ಕೇವಲ “ರಾಮ್-ರಾಮ್” ಎಂದು ಹೇಳಿ ಅಲ್ಲಿಂದ ಚುರುಕಾಗಿ ಜಾಗ ಖಾಲಿ ಮಾಡಿದ್ದಾರೆ.

ಈ ವಿವಾದದ ಬಗ್ಗೆ ಶುಕ್ರವಾರ ಹೇಳಿಕೆ ನೀಡಿದ್ದ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಈ ಘಟನೆಯಿಂದ ಆರ್‌ಎಸ್‌ಎಸ್ ಅತ್ಯಂತ ತೀವ್ರ ಆಘಾತ ಮತ್ತು ಆಕ್ರೋಶಗೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು. ಈ ವಿವಾದವು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದನ್ನು ಅಸಾಧಾರಣ ಪ್ರಕರಣವೆಂದು ಪರಿಗಣಿಸಬೇಕು. ಮಂದಿರದ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೊಸಬಾಳೆ ಒತ್ತಿಹೇಳಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಭಕ್ತರ ಕಾಣಿಕೆಗಳನ್ನು ಎಣಿಸುವ ಕೆಲಸದಲ್ಲಿದ್ದ 6 ಮಂದಿ ಹೊರಗುತ್ತಿಗೆ ನೌಕರರು ಮತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಸೇರಿದ್ದಾರೆ. ಬಂಧಿತ ಹೊರಗುತ್ತಿಗೆ ನೌಕರರಲ್ಲಿ ಅವಿನಾಶ್ ಶುಕ್ಲಾ ಕೂಡ ಒಬ್ಬನಾಗಿದ್ದಾನೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಟಾಕ್ ಶೋ ಮೂಲಕ ಬರಲಿರುವ ನಟಿ ಸಮಂತಾ – Kannada News | Samantha Ruth Prabhu to start another talk show in Sony Live

ಸಮಂತಾ ಋತ್ ಪ್ರಭು (Samantha Ruth Prabhu) ಒಳ್ಳೆಯ ನಟಿ ಆಗಿರುವ ಜೊತೆಗೆ ಒಳ್ಳೆಯ ಟಿವಿ ಹೋಸ್ಟ್ ಸಹ. ಅಸಲಿಗೆ ಸಮಂತಾ ತಮ್ಮ ವೃತ್ತಿ ಆರಂಭಿಸಿದ್ದೇ ಕಾರ್ಯಕ್ರಮ ನಿರೂಪಕಿ ಆಗಿ. ಬಳಿಕ ಮಾಡೆಲ್ ಆದರು. ಆ ಬಳಿಕ ಸಿನಿಮಾ ನಟಿ ಆದರು. ಸಿನಿಮಾ ನಟಿಯಾಗಿದ್ದ ಸಮಂತಾ ಕೆಲ ಟಿವಿ ಶೋಗಳ ಹೋಸ್ಟ್ ಸಹ ಆಗಿದ್ದರು. ಅವರ ಮಾಜಿ ಮಾವ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಸಮಂತಾ, ಬಿಗ್​​ಬಾಸ್ ತೆಲುಗು ಅನ್ನು ನಿರೂಪಣೆ ಸಹ ಮಾಡಿದ್ದರು. ಅದರ ಜೊತೆಗೆ ಒಂದು ಟಾಕ್ ಶೋ, ಒಂದು ಪಾಡ್​​ಕಾಸ್ಟ್ ಅನ್ನು ಸಹ ಸಮಂತಾ ಮಾಡಿದ್ದಾರೆ. ಇದೀಗ ಮತ್ತೊಂದು ಟಾಕ್ ಶೋ ಜೊತೆಗೆ ಸಮಂತಾ ಕಿರುಕತೆರೆಗೆ ಮರಳುತ್ತಿದ್ದಾರೆ.

‘ಆಹಾ’ ಒಟಿಟಿಯಲ್ಲಿ ‘ಸ್ಯಾಮ್ ಜಾಮ್’ ಹೆಸರಿನ ಟಾಕ್ ಶೋ ಅನ್ನು ಸಮಂತಾ ನೆಡೆಸಿಕೊಟ್ಟಿದ್ದರು. ಟಾಕ್ ಶೋಗೆ ಹಲವಾರು ನಟ, ನಟಿಯರನ್ನು ಆಹ್ವಾನಿಸಿ ಅವರ ಬಳಿ ಮಾತನಾಡಿದ್ದರು. ಇದೀಗ ಸಮಂತಾ ಅವರು ಮತ್ತೊಂದು ಟಾಕ್ ಶೋ ಜೊತೆ ಕಿರುತೆರೆಗೆ ಮರಳಲಿದ್ದಾರೆ. ಕಳೆದ ಬಾರಿ ತೆಲುಗಿನಲ್ಲಿ ಟಾಕ್ ಶೋ ಮಾಡಿದ್ದ ಸಮಂತಾ, ಈ ಬಾರಿ ತಮಿಳಿನಲ್ಲಿ ಟಾಕ್ ಶೋ ನಡೆಸಿಕೊಡಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ.

ಸಮಂತಾ ಅವರು ಸೋನಿ ಲಿವ್ ಒಟಿಟಿಗಾಗಿ ಟಾಕ್ ಶೋ ನಡೆಸಲಿದ್ದು, ಈ ಟಾಕ್ ಶೋ ಅವರ ‘ಸ್ಯಾಮ್ ಜಾಮ್’ ರೀತಿ ತಮಾಷೆಯಾಗಿ ಇರುವ ಜೊತೆಗೆ ತುಸು ಭಾವುಕತೆಯಿಂದಲೂ ಕೂಡಿರಲಿದೆ. ಸಮಂತಾ, ಅತಿಥಿಗಳಾಗಿ ಬರುವವರ ಖಾಸಗಿ ಅನುಭವಗಳು, ಭಾವನೆಗಳ ಬಗ್ಗೆಯೂ ಮಾತನಾಡಲಿದ್ದಾರಂತೆ. ಇದೊಂದು ಟಾಕ್ ಶೋ ಮಾತ್ರವೇ ಅಲ್ಲದೆ, ಪಾಡ್​​ಕಾಸ್ಟ್ ಸಹ ಆಗಿರಲಿದೆ. ಟಾಕ್ ಶೋನಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ವಿಷಯಗಳನ್ನು ಸಮಂತಾ ಮಾತನಾಡಲಿದ್ದಾರೆ.

ಇದನ್ನೂ ಓದಿ:ಸಮಂತಾ ಋತ್ ಪ್ರಭು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

ಸಮಂತಾ ಈಗ ಗರ್ಭಿಣಿ, ಈಗಲೇ ಅವರು ಟಾಕ್ ಶೋ ಚಿತ್ರೀಕರಣ ಪ್ರಾರಂಭಿಸಲಿದ್ದಾರೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಈಗಲೇ ಟಾಕ್ ಶೋ ಶುರು ಮಾಡಲಿದ್ದಾರೆಯೇ ಅಥವಾ ಇನ್ನೂ ಸುಮಾರು ಒಂದು ವರ್ಷ ಕಾದು ಆ ಬಳಿಕ ಚಿತ್ರೀಕರಣ ಶುರು ಮಾಡಲಿದ್ದಾರೆಯೇ ಕಾದು ನೋಡಬೇಕಿದೆ. ಈಗಾಗಲೇ ಒಂದು ಟಾಕ್ ಶೋ ಮತ್ತು ಒಂದು ಪಾಡ್​​ಕಾಸ್ಟ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸಮಂತಾಗೆ ಮತ್ತೊಂದು ಟಾಕ್ ಶೋ ನಡೆಸುವುದು ದೊಡ್ಡ ಕಷ್ಟವೇನೂ ಆಗದು. ಅಲ್ಲದೆ, ತಮಿಳು ಸಮಂತಾರ ಮಾತೃ ಭಾಷೆ ಆಗಿರುವ ಕಾರಣ ಅದು ಅವರಿಗೆ ಇನ್ನೂ ಸುಲಭ ಆಗಲಿದೆ.

ಸಮಂತಾ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾಕ್ಕೆ ಸಮಂತಾರ ಪತಿ ರಾಜ್ ನಿಧಿಮೋರು ಬಂಡವಾಳ ಹೂಡಿದ್ದರು. ಸಮಂತಾ ಸಹ ನಿರ್ಮಾಪಕಿ ಆಗಿದ್ದರು. ಸಿನಿಮಾವನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version