ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ – Kannada News | Govt thinks of using ethanol as commercial cooking gas, to reduce dependency on LPG

ನವದೆಹಲಿ, ಏಪ್ರಿಲ್ 17: ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಎದುರಿಸಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇರಿಸುತ್ತಿದೆ. ಕಮರ್ಷಿಯಲ್ ಗ್ಯಾಸ್ ಆಗಿ ಬಳಸಲು ಎಲ್​ಪಿಜಿ ಜೊತೆಗೆ ಮತ್ತೊಂದು ಪರ್ಯಾಯವಾದ ಇಂಧನದ ಬಳಕೆ ಕುರಿತು ಯೋಚಿಸಲಾಗುತ್ತಿದೆ. ವಾಣಿಜ್ಯ ಬಳಕೆಯ ಅಡುಗೆ ಇಂಧನವಾಗಿ ‘ಎಥೆನಾಲ್’ (Ethanol) ಬಳಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಭಾರತದಲ್ಲಿ ಪೆಟ್ರೋಲ್‌ಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡಿದ ನಂತರವೂ, ಸುಮಾರು 1,000 ಕೋಟಿ ಲೀಟರ್‌ಗಳಷ್ಟು ಹೆಚ್ಚುವರಿ ಎಥೆನಾಲ್ ಲಭ್ಯವಿದೆ. ಇದನ್ನು ಅಡುಗೆ ಇಂಧನವಾಗಿ ಬಳಸಲು ಉದ್ಯಮ ಪ್ರತಿನಿಧಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೂರೈಕೆಯ ಕೊರತೆಯಿಂದಾಗಿ ಸರ್ಕಾರವು ಎಲ್‌ಪಿಜಿಯನ್ನು ಸದ್ಯಕ್ಕೆ ಮನೆ ಬಳಕೆಗೆ ಮೊದಲ ಆದ್ಯತೆಯಾಗಿ ನೀಡುತ್ತಿದೆ. ಹೀಗಾಗಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ದೊಡ್ಡ ಘಟಕಗಳಲ್ಲಿನ ವಾಣಿಜ್ಯ ಅಡುಗೆ ಮನೆಗಳಲ್ಲಿ ಎಥೆನಾಲ್ ಅನ್ನು ಎಲ್​ಪಿಜಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಬೆಲೆ ಮತ್ತು ಗುಣಮಟ್ಟ

ಇಂಧನ ಮಟ್ಟದ ಎಥನಾಲ್ ಜೊತೆಗೆ ಹೈಡ್ರಸ್ ಅಥವಾ ಜಲಯುಕ್ತ ಎಥನಾಲ್ ಕೂಡ ಇದೆ. ಈ ಹೈಡ್ರಸ್ ಎಥನಾಲ್​ನಲ್ಲಿ ಶೇ. 95ರಷ್ಟು ಇಥನಾಲ್ ಹಾಗೂ ಸ್ವಲ್ಪ ನೀರು ಇರುತ್ತದೆ. ಆದರೆ, ಫುಯಲ್ ಗ್ರೇಡ್ ಎಥನಾಲ್​ಗಿಂತ ಈ ಹೈಡ್ರಸ್ ಎಥನಾಲ್ ಕಡಿಮೆ ಬೆಲೆ.

ವಾಣಿಜ್ಯ ಎಲ್‌ಪಿಜಿ ಬೆಲೆ ಕೆ.ಜಿ.ಗೆ ಸುಮಾರು 103 ರೂ. ಇದ್ದರೆ, ಹೈಡ್ರಸ್ ಎಥೆನಾಲ್ ಬೆಲೆ ಸುಮಾರು 70 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಪಿಜಿಗೆ ಹೋಲಿಸಿದರೆ ಎಥೆನಾಲ್‌ನಲ್ಲಿ ಶಾಖದ ಸಾಮರ್ಥ್ಯ (Calorific value) ಸ್ವಲ್ಪ ಕಡಿಮೆ ಇರುತ್ತದೆ (LPG: 12,000 kcal/kg vs Ethanol: 7,100 kcal/kg). ಅಂದರೆ ಎಲ್‌ಪಿಜಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಎಥೆನಾಲ್ ಬೇಕಾಗಬಹುದು, ಆದರೆ ಇದು ಪರಿಸರ ಸ್ನೇಹಿಯಾಗಿದೆ. ಈ ಹೈಡ್ರಸ್ ಎಥನಾಲ್ ಅನ್ನು ಸದ್ಯ ಆಲ್ಕೋಹಾಲ್ ಸ್ಟವ್ ಅಥವಾ ಬಯೋ ಇಥನಾಲ್ ಬರ್ನರ್​ಗಳಲ್ಲಿ ಬಳಸಲಾಗುತ್ತಿದೆ. ಇದರ ಪ್ರಮುಖ ಕೊರತೆ ಎಂದರೆ ಕಡಿಮೆ ಶಾಖ ಬಿಡುಗಡೆ ಮಾಡುವುದು. ಅಂದರೆ, ಅಡುಗೆ ಮಾಡಲು ಎಲ್​ಪಿಜಿಗಿಂತ ಹೆಚ್ಚು ಹೈಡ್ರಸ್ ಎಥನಾಲ್ ಅನ್ನು ವ್ಯಯಿಸಬೇಕಾಗುತ್ತದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಎಥೆನಾಲ್ ಮೂಲ

ಭಾರತದಲ್ಲಿ ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ ಮತ್ತು ನುಚ್ಚಕ್ಕಿಯಿಂದ (Broken Rice) ತಯಾರಿಸಲಾಗುತ್ತದೆ. ಇದನ್ನು ಅಡುಗೆಗೆ ಬಳಸುವುದರಿಂದ ದೇಶದ ರೈತರಿಗೂ ಹೆಚ್ಚಿನ ಲಾಭ ಸಿಗುವ ನಿರೀಕ್ಷೆಯಿದೆ.

ಮುಂಬರುವ ವಾರಗಳಲ್ಲಿ ಈ ಕುರಿತು ‘ಶ್ವೇತಪತ್ರ’ (White Paper) ವನ್ನು ಅಂತರ-ಸಚಿವಾಲಯ ಸಮಿತಿಗೆ ಸಲ್ಲಿಸಲಾಗುವುದು. ತಾಂತ್ರಿಕ ಸುರಕ್ಷತೆ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ – Kannada News | Rahul Gandhi lowered the dignity of the post of Leader of Opposition Chirag Paswan alleges

ನವದೆಹಲಿ, ಏಪ್ರಿಲ್ 17: ಕೇಂದ್ರ ಸಚಿವ ಮತ್ತು ಎಲ್​ಜೆಪಿ ಸಂಸದ ಚಿರಾಗ್ ಪಾಸ್ವಾನ್ (Chirag Paswan) ಇಂದು ಸಂಸತ್​​ನಲ್ಲಿ ಅಧಿವೇಶನದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಭಾಷಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಉದಾಹರಣೆಗಳನ್ನು ನೀಡುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಮ್ಮ ಜೊತೆ ಎಳೆದುಕೊಂಡು ಮಿತಿ ಮೀರಿ ವರ್ತಿಸಿದ್ದಾರೆ. ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ ಸಂಸದರಾದವರ ಮುಂದೆ ತಮ್ಮ ಗೌರವವನ್ನು ತಾವೇ ಕೆಳಗೆ ಹಾಕಿಕೊಂಡಿದ್ದಾರೆ. ಕಿರಿಯ ಸಂಸದರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ” ಎಂದು ಅವರು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿ ಅವರ ಭಾಷಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಆದರೆ ನನಗೆ ಹೆಂಡತಿಯ ಸಮಸ್ಯೆಯಿಲ್ಲ ಎನ್ನುತ್ತಾ ಲೋಕಸಭಾ ವಿರೋಧ ಪಕ್ಷದ ನಾಯಕರೊಬ್ಬರು ಸದನದಲ್ಲಿ ತನ್ನನ್ನು ತಾನೇ ಅಪಹಾಸ್ಯ ಮಾಡಿಕೊಳ್ಳಲು ಬಯಸಿದರೆ, ಅವರು ಕೇವಲ ಹಾಸ್ಯ ಭಾಷಣಗಳನ್ನು ನೀಡಲು ಬಯಸಿದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರಲ್ಲ ಎಂದು ನನಗೆ ಅನಿಸುತ್ತದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ? – Kannada News | Vignesh Shivan said he wrote a story for Ajit Kumar inspiring with KGF

ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಹಲವು ಸಿನಿಮಾ ನಿರ್ದೇಶಕರಿಗೆ, ನಾಯಕರಿಗೆ, ನಿರ್ಮಾಪಕರಿಗೆ ಮಾದರಿ ಹಾಕಿಕೊಟ್ಟ ಸಿನಿಮಾಗಳು. ನಾಯಕನ ಎಲಿವೇಶನ್, ಚಿತ್ರೀಕರಣದ ರೀತಿ, ಸಿನಿಮಾದ ಸ್ಕೇಲ್, ಆಧುನಿಕ ಗ್ಯಾಂಗ್​​ಸ್ಟರ್ ಕತೆಗಳು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿತ್ತು ಆ ಸಿನಿಮಾ. ‘ಕೆಜಿಎಫ್’ನಿಂದ ಸ್ಪೂರ್ತಿ ಪಡೆದು ಹಲವು ನಿರ್ದೇಶಕರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಕನ್ನಡದಲ್ಲಿ ‘ಕಬ್ಜ’ ಸಿನಿಮಾ ಸಹ ‘ಕೆಜಿಎಫ್’ ಸ್ಪೂರ್ತಿಯಿಂದಲೇ ಬಂದಿದ್ದು. ಅಸಲಿಗೆ ಸ್ಟಾರ್ ನಟಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಸಹ ‘ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಸಿನಿಮಾ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು, ಆದರೆ ಅದು ಸಿನಿಮಾ ಆಗಲಿಲ್ಲ.

ಅವರೇ ಹೇಳಿಕೊಂಡಿರುವಂತೆ, ತಮಿಳಿನ ಸ್ಟಾರ್ ನಟ ಅಜಿತ್ ಅವರನ್ನು ಮನಸಿನಲ್ಲಿಟ್ಟುಕೊಂಡು ದೊಡ್ಡ ಸ್ಕೇಲ್​​ನ ‘ಕೆಜಿಎಫ್’ ಮಾದರಿ ಗ್ಯಾಂಗ್​​ಸ್ಟರ್ ಕತೆಯೊಂದನ್ನು ಅವರು ಮಾಡಿದ್ದರಂತೆ. ಆದರೆ ಬಜೆಟ್ ಸಮಸ್ಯೆಯಿಂದಾಗಿ ಆ ಕತೆ ಸಿನಿಮಾ ಆಗಲಿಲ್ಲ ಎಂದಿದ್ದಾರೆ ವಿಘ್ನೇಶ್ ಶಿವನ್. ಅಸಲಿಗೆ ಅಜಿತ್ ಅವರ 62ನೇ ಸಿನಿಮಾವನ್ನು ವಿಘ್ನೇಶ್ ಶಿವನ್ ಅವರು ನಿರ್ದೇಶಿಸಬೇಕಿತ್ತು. ಆ ಬಗ್ಗೆ ಘೋಷಣೆಯೂ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ವಿಘ್ನೇಶ್ ಅವರ ‘ಎಲ್​ಐಕೆ’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ ಅವರು ಅಜಿತ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

‘ಮದುವೆಯ ದಿನ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರ ಮಂಟಪದಿಂದ ಎದ್ದು ಹೋದರೆ ವಧುವಿನ ಸ್ಥಿತಿ ಹೇಗಿರುತ್ತದೆಯೋ, ಅಜಿತ್ ಸರ್ ಸಿನಿಮಾ ನಿಂತುಹೋದಾಗ ನನಗೂ ಹಾಗೆಯೇ ಅನ್ನಿಸಿತು. ಅಂತಹ ದೊಡ್ಡ ಅವಕಾಶ ಕೈತಪ್ಪಿದಾಗ ಮತ್ತೊಂದು ಸಿನಿಮಾವನ್ನು ಆರಂಭಿಸುವುದು ಬಹಳ ಕಷ್ಟವಾಗಿತ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಅಜಿತ್ ಅವರಿಗಾಗಿ ಕತೆಯೊಂದನ್ನು ಬರೆದಿದ್ದೆ, ಸುಮಾರು ಎರಡು-ಮೂರು ವರ್ಷ ಅದಕ್ಕಾಗಿ ವ್ಯಯಿಸಿದ್ದೆ. ಆದರೆ ನಿರ್ಮಾಣ ತಂಡವು ಚಿತ್ರದ ದ್ವಿತೀಯಾರ್ಧವನ್ನು ಬದಲಾಯಿಸುವಂತೆ ಸಲಹೆ ನೀಡಿತು. ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಚಿತ್ರದ ಕನಸಿಗೆ ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತ್ತು. ನಾನು ಕೆಜಿಎಫ್, ಆರ್ ಆರ್ ಆರ್ ನಂತಹ ಚಿತ್ರಗಳನ್ನು ನೋಡಿ, ಅಜಿತ್ ಸರ್ ಅವರ ಅಭಿಮಾನಿಯಾಗಿ ಅವರ ಜೊತೆ ಅಷ್ಟೇ ಬೃಹತ್ ಮಟ್ಟದ ಸಿನಿಮಾ ಮಾಡಬೇಕೆಂದು ಬಯಸಿದ್ದೆ. ಆದರೆ, ನಾನು ಆ ಚಿತ್ರಕ್ಕಾಗಿ ಅಂದುಕೊಂಡಿದ್ದ ಬಜೆಟ್‌ಗೆ ನಿರ್ಮಾಣ ಸಂಸ್ಥೆಯು ಬೆಂಬಲ ನೀಡಲಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NEET UG ಆಕಾಂಕ್ಷಿಗಳಿಗೆ ಗೂಗಲ್​ನಿಂದ ಭರ್ಜರಿ ಗಿಫ್ಟ್; ಜೆಮಿನಿ ಆ್ಯಪ್‌ನಲ್ಲಿ ಸಿಗಲಿದೆ ಉಚಿತ ಅಣಕು ಪರೀಕ್ಷೆ! – Kannada News | Google Gemini Offers Free NEET UG Mock Tests: Boost Your Exam Prep with AI

ಗೂಗಲ್ ಇಂಡಿಯಾ ತನ್ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ‘ಜೆಮಿನಿ’ (Gemini) ಮೂಲಕ ಉಚಿತ NEET UG ಅಭ್ಯಾಸ ಪರೀಕ್ಷೆಗಳನ್ನು ಪರಿಚಯಿಸಿದೆ. ಸಾಮಾನ್ಯವಾಗಿ ನೀಟ್ ಪರೀಕ್ಷೆಯ ಕೋಚಿಂಗ್ ಪಡೆಯಲು ಲಕ್ಷಾಂತರ ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಇದನ್ನು ಮನಗಂಡ ಗೂಗಲ್ ಇಂಡಿಯಾ, ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ತನ್ನ ಗುರಿಯ ಭಾಗವಾಗಿ ಈ ಯೋಜನೆಯನ್ನು ಘೋಷಿಸಿದೆ. ಗೂಗಲ್ ತನ್ನ ಅಧಿಕೃತ ‘X’ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಈಗ ಸಂಪೂರ್ಣ ಉಚಿತವಾಗಿ ಜೆಮಿನಿ ಅಪ್ಲಿಕೇಶನ್‌ನಲ್ಲಿ ಮಾಡಬಹುದಾಗಿದೆ.

ಅಣಕು ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ?

ಈ ಸೌಲಭ್ಯವನ್ನು ಪಡೆಯಲು ಅಭ್ಯರ್ಥಿಗಳು ಯಾವುದೇ ಕಷ್ಟಪಡಬೇಕಿಲ್ಲ. ಜೆಮಿನಿ ಅಪ್ಲಿಕೇಶನ್ ತೆರೆದು ಕೇವಲ ಒಂದು ವಾಕ್ಯ ಹೇಳಿದರೆ ಸಾಕು:

“ನಾನು ನೀಟ್ ಅಣಕು ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ” (I want to take a NEET mock test)

ಹೀಗೆ ಹೇಳಿದ ತಕ್ಷಣ ಜೆಮಿನಿ ಎಐ ನಿಮ್ಮ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲು ಮತ್ತು ನಿಮ್ಮ ತಯಾರಿಯನ್ನು ಮೌಲ್ಯಮಾಪನ ಮಾಡಲು ಆರಂಭಿಸುತ್ತದೆ. ಇದು ಕೇವಲ ಪ್ರಶ್ನೆಗಳನ್ನಷ್ಟೇ ನೀಡುವುದಿಲ್ಲ, ಬದಲಿಗೆ ಸಂವಾದಾತ್ಮಕವಾಗಿ (Interactive) ಕಲಿಕೆಯ ಅನುಭವವನ್ನು ನೀಡುತ್ತದೆ.

ಈ ಯೋಜನೆಯ ವಿಶೇಷತೆಗಳೇನು?

  • ವಾಸ್ತವಿಕ ಪರೀಕ್ಷಾ ಅನುಭವ: ಈ ಅಭ್ಯಾಸ ಪರೀಕ್ಷೆಗಳು ನಿಜವಾದ NEET UG ಪರೀಕ್ಷೆಯ ಮಾದರಿಯಲ್ಲೇ ಇರಲಿವೆ. ಇದು ಅಭ್ಯರ್ಥಿಗಳಲ್ಲಿ ಪರೀಕ್ಷೆಯ ಬಗೆಗಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬುತ್ತದೆ.
  • ಸರಳ ಇಂಟರ್ಫೇಸ್: ಬಳಕೆದಾರ ಸ್ನೇಹಿ ವಿನ್ಯಾಸದಿಂದಾಗಿ ವಿದ್ಯಾರ್ಥಿಗಳು ಸುಲಭವಾಗಿ ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ವಿವರಣೆಗಳನ್ನು ಪಡೆಯಬಹುದು.
  • ಎಲ್ಲರಿಗೂ ಲಭ್ಯ: ಯಾವುದೇ ಶುಲ್ಕವಿಲ್ಲದೆ, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕ ಉನ್ನತ ಮಟ್ಟದ ತಯಾರಿ ನಡೆಸಲು ಇದು ಸಹಕಾರಿ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸವಾಲುಗಳಿಗೆ ಪರಿಹಾರ:

ಪ್ರತಿ ವರ್ಷ ಸುಮಾರು 1.25 ಲಕ್ಷ MBBS ಸೀಟುಗಳಿಗಾಗಿ ನಡೆಯುವ ಈ ಭೀಕರ ಸ್ಪರ್ಧೆಯಲ್ಲಿ, ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದರು. ಗೂಗಲ್‌ನ ಈ ಉಪಕ್ರಮವು ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಣಗೊಳಿಸುವತ್ತ (Democratization of Education) ದೊಡ್ಡ ಹೆಜ್ಜೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

ನೀಟ್ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಇಂದೇ ಜೆಮಿನಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ವೈದ್ಯಕೀಯ ಕನಸಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:50 pm, Fri, 17 April 26

Source link

ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಐತಿಹಾಸಿಕ ತೀರ್ಪು ಎಂದ ಲಾಯರ್ – Kannada News | Life imprisonment for 16 people including Vinay Kulkarni: A historic verdict, says lawyer

ಬೆಂಗಳೂರು, ಏಪ್ರಿಲ್​ 17: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಆ ಬಳಿಕ 10 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ವಕೀಲ​ ಶಿವಾನಂದ ಪೆರ್ಲಾ ಮಾತನಾಡಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದಿದ್ದಾರೆ.  15 ಜೂನ್ 2016 ರಂದು ಧಾರವಾಡದ ಉದಯ ಜಿಮ್‌ನಲ್ಲಿ ಯೋಗೇಶ್ ಗೌಡ ಅವರ ಭೀಕರ ಕೊಲೆಯಾಗಿತ್ತು. ಪ್ರಕರಣದ ಪ್ರಾರಂಭದಲ್ಲಿ ಧಾರವಾಡ ಪೊಲೀಸರು ಬಸವರಾಜ್ ಮುತ್ತಕಿ ಮತ್ತು ಐದು ಇತರರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನಂತರ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಒಟ್ಟು 21 ಜನರ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

High Court Jobs: ಕರ್ನಾಟಕ ಹೈಕೋರ್ಟ್ ನೇಮಕಾತಿ; 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Karnataka High Court Civil Judge Recruitment 2026: 90 Vacancies for LLB Graduates – Apply Now!

ನ್ಯಾಯಾಂಗ ಸೇವೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಕಾನೂನು ಪದವೀಧರರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಸಿವಿಲ್ ನ್ಯಾಯಾಧೀಶರ (Civil Judges) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರತಿಷ್ಠಿತ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು.

ಹುದ್ದೆಗಳ ವಿವರ ಮತ್ತು ಸಂಬಳದ ಶ್ರೇಣಿ:

ಒಟ್ಟು 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ವೇತನ ಶ್ರೇಣಿಯು ತಿಂಗಳಿಗೆ ರೂ. 77,840 ರಿಂದ 1,36,520/- ವರೆಗೆ ಇರಲಿದ್ದು, ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳೂ ಲಭ್ಯವಿರುತ್ತವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ (LLB) ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ ಗರಿಷ್ಠ ವಯಸ್ಸು 45 ವರ್ಷಗಳು. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ:

  • SC/ST/ಪ್ರವರ್ಗ-I: 05 ವರ್ಷಗಳು ಸಡಿಲಿಕೆ.
  • ಕ್ಯಾಟ್-2A/2B/3A/3B: 03 ವರ್ಷಗಳು ಸಡಿಲಿಕೆ.

ಅರ್ಜಿ ಶುಲ್ಕದ ವಿವರ

ಅಭ್ಯರ್ಥಿಗಳು ಎರಡು ಹಂತದ ಪರೀಕ್ಷಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ:

  • ಪೂರ್ವಭಾವಿ ಪರೀಕ್ಷಾ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳಿಗೆ ರೂ. 500/-
  • SC/ST/ಪ್ರವರ್ಗ-I ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 250/-

ಮುಖ್ಯ ಪರೀಕ್ಷಾ ಶುಲ್ಕ:

(ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು)

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು ಹಂತ-ಹಂತದ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ:

  • ಪೂರ್ವಭಾವಿ ಪರೀಕ್ಷೆ (Preliminary Exam)
  • ಮುಖ್ಯ ಲಿಖಿತ ಪರೀಕ್ಷೆ (Main Written Exam)
  • ಸ್ಟೆನೋಗ್ರಫಿ ಪರೀಕ್ಷೆ (ಅಗತ್ಯವಿದ್ದರೆ)
  • ವೈಯಕ್ತಿಕ ಸಂದರ್ಶನ (Interview)

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

  • ಮೊದಲು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  • ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್ ಮತ್ತು ಫೋಟೋಗಳನ್ನು ಸಿದ್ಧವಾಗಿಡಿ.
  • ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಅರ್ಜಿ ಸಲ್ಲಿಸಿ (Submit), ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ವಿಪೌರತ್ವ ಪ್ರಕರಣ; ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ – Kannada News | Allahabad High Court Orders Case Against Congress Leader Rahul Gandhi In Dual Citizenship Case

ಅಲಹಾಬಾದ್, ಏಪ್ರಿಲ್ 17: ದ್ವಿಪೌರತ್ವದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಪ್ರಕರಣ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹಾಗೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.

ಉತ್ತರ ಪ್ರದೇಶ ಸರ್ಕಾರವು ಈ ಪ್ರಕರಣದ ಬಗ್ಗೆ ಸ್ವತಃ ತನಿಖೆ ನಡೆಸಬೇಕು ಅಥವಾ ಈ ವಿಷಯವನ್ನು ಕೇಂದ್ರೀಯ ಸಂಸ್ಥೆಗೆ ತನಿಖೆಗೆ ವಹಿಸಬೇಕು ಎಂದು ಹೈಕೋರ್ಟ್‌ನ ಲಕ್ನೋ ಪೀಠ ನಿರ್ದೇಶಿಸಿದೆ.

ಜನವರಿ 28ರಂದು ಲಕ್ನೋದ ವಿಶೇಷ ಸಂಸದ ಮತ್ತು ಶಾಸಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ನಿರಾಕರಿಸಿತ್ತು. ಪೌರತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರ ತನಗೆ ಇಲ್ಲ ಎಂದಿದ್ದ ವಿಶೇಷ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನೂ ಓದಿ: Video: ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಸಮಸ್ಯೆ ಇಲ್ಲ ಎಂದ ರಾಹುಲ್ ಗಾಂಧಿ

ಈ ಬಗ್ಗೆ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್, ಈ ವಿಷಯದಲ್ಲಿ ಸರಿಯಾದ ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿದೆ. ಕಾನೂನಿನ ಪ್ರಕಾರ ಈ ವಿಷಯವನ್ನು ಪರಿಶೀಲಿಸುವಂತೆ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?:

ಈ ಪ್ರಕರಣವು ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿರಬಹುದು ಎಂಬ ಆರೋಪಗಳಿಗೆ ಸಂಬಂಧಿಸಿದೆ. ಭಾರತೀಯ ಕಾನೂನಿನಡಿಯಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಇಂಗ್ಲೆಂಡ್ ಮೂಲದ ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಅಲ್ಲಿ ಅವರನ್ನು ಬ್ರಿಟಿಷ್ ಪ್ರಜೆ ಎಂದು ಉಲ್ಲೇಖಿಸಲಾಗಿದೆ. ಅವರ ಅಧಿಕೃತ ದಾಖಲಾತಿಗಳಲ್ಲಿ ಲಂಡನ್ ವಿಳಾಸವನ್ನು ಕೂಡ ಪಟ್ಟಿ ಮಾಡಲಾಗಿದೆ. ಪೌರತ್ವ, ಪಾಸ್‌ಪೋರ್ಟ್‌ಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾನೂನುಗಳು ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ವಿವರವಾದ ತನಿಖೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ರಾಹುಲ್ ಗಾಂಧಿಯ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಕರ್ನಾಟಕದ ನಿವಾಸಿಯಾಗಿರುವ ಅರ್ಜಿದಾರರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಅಧಿಕೃತ ರಹಸ್ಯ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಿ ಎಫ್‌ಐಆರ್ ದಾಖಲಿಸಿ ವಿವರವಾದ ತನಿಖೆ ನಡೆಸುವಂತೆ ಕೋರಿದ್ದಾರೆ.

ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಸಾಬೀತುಪಡಿಸುವ ದಾಖಲೆಗಳು ಮತ್ತು ಬ್ರಿಟಿಷ್ ಸರ್ಕಾರದ ಕೆಲವು ಇಮೇಲ್‌ಗಳು ತಮ್ಮ ಬಳಿ ಇವೆ. ಈ ಕಾರಣದಿಂದಾಗಿ ಅವರು ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು. ಅವರು ಲೋಕಸಭಾ ಸದಸ್ಯ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ – Kannada News | Yogesh Gowda Murder Case fighter Basavaraj koravar talks after Court Life Imprisonment For MLA Vinay Kulkarni

ಧಾರವಾಡ, (ಏಪ್ರಿಲ್ 17): ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ Yogesh Gowda murder case ಅಪರಾಧಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಜನಪ್ರತಿನಿಧಿಗಳ ಕೋರ್ಟ್, ಜೀವಾವಧಿ ಶಿಕ್ಷೆ ವಿಧಿಸಿದೆ 2016ರ ಜೂನ್‌ನಲ್ಲಿ ನಡೆದ ಈ ಹತ್ಯೆ ಪ್ರಕರಣ ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಇಂದು (ಏಪ್ರಿಲ್ 17) ಅಪರಾಧಿಗಳಿಗೆ ಶಿಕ್ಷೆಯಾಗಿದೆ.

ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಯೋಗೇಶ್ ಗೌಡ ಹತ್ಯೆ ಪ್ರಕರಣದ ಹೋರಾಟಗಾರ ಬಸವರಾಜ ಕೊರವರ್, ಮಾಧ್ಯಮಗಳ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಕೆಲವೊಂದಿಷ್ಟು ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ಓದಿ; ಶಾಸಕ ಸ್ಥಾನ ಕಳೆದುಕೊಂಡ ವಿನಯ್ ಕುಲಕರ್ಣಿ: ಧಾರವಾಡ ಕ್ಷೇತ್ರ ಖಾಲಿ, ಮುಂದಿರುವ ಆಯ್ಕೆಗಳೇನು?

Source link

‘ಧುರಂಧರ್ 2’ ಸಿನಿಮಾದಲ್ಲಿ ಅದು ಸರಿಯಿಲ್ಲ: ಮೊದಲ ಬಾರಿ ಟೀಕಿಸಿದ ರಾಮ್ ಗೋಪಾಲ್ ವರ್ಮಾ – Kannada News | Ram Gopal Varma takes U Turn on Dhurandhar 2 Criticizes Dawood Ibrahim portrayal

ಆರಂಭದಿಂದಲೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾವನ್ನು ಹೊಗಳುತ್ತಲೇ ಬಂದಿದ್ದಾರೆ. ಈ ಚಿತ್ರದ ಡೈರೆಕ್ಟರ್ ಆದಿತ್ಯ ಧರ್ ಕೆಲಸವನ್ನು ಆರ್​ಜಿವಿ ಕೊಂಡಾಡಿದ್ದಾರೆ. ಇದು ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ಎಂದು ಹೊಗಳಿದ್ದಾರೆ. ಆದರೆ ಈಗ ಏಕಾಏಕಿ ಯು-ಟರ್ನ್ ಹೊಡೆದಿದ್ದಾರೆ. ‘ಧುರಂಧರ್ 2’ (Dhurandhar 2) ಚಿತ್ರದ ಒಂದು ಪ್ರಮುಖ ಅಂಶದ ಬಗ್ಗೆ ರಾಮ್ ಗೋಪಾಲ್ ವರ್ಮಾ ಅಸಮಾಧಾನ ವ್ಯಕ್ತಪಡಿದ್ದಾರೆ. ಅವರ ಈ ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ.

ಈ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಪಾತ್ರವನ್ನು ತೋರಿಸಿದ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೇಕಿಂಗ್ ಮತ್ತು ನಿರ್ದೇಶನದ ಬಗ್ಗೆ ಆರ್​ಜಿವಿ ಅವರಿಗೆ ಈಗಲೂ ಗೌರವವಿದೆ. ಆದರೆ, ಚಿತ್ರದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಪಾತ್ರವನ್ನು ಬಿಂಬಿಸಿರುವ ರೀತಿ ತಮಗೆ ಸರಿ ಅನಿಸಿಲ್ಲ ಎಂದು ಅವರು ಹೇಳಿದ್ದಾರೆ.

‘ಸಿನಿಮಾ ತಂಡದವರಿಗೆ ತಮ್ಮದೇ ಆದ ಮಾಹಿತಿಯ ಮೂಲಗಳಿರಬಹುದು. ಆದರೆ, ಚಿತ್ರದಲ್ಲಿ ತೋರಿಸಲಾದ ದಾವೂದ್ ಇಬ್ರಾಹಿಂನ ವ್ಯಕ್ತಿತ್ವವು ನಾನು ತಿಳಿದಿರುವ ವಾಸ್ತವಕ್ಕೆ ಹತ್ತಿರವಾಗಿಲ್ಲ. ದಾವೂದ್ ಇಬ್ರಾಹಿಂ ಸುಮಾರು 20 ವರ್ಷಗಳ ಹಿಂದೆಯೇ ಕ್ರಿಮಿನಲ್ ಚಟುವಟಿಕೆಗಳಿಂದ ದೂರ ಸರಿದು ನಿಷ್ಕ್ರಿಯನಾಗಿದ್ದಾನೆ. ಆದರೆ ಸಿನಿಮಾದಲ್ಲಿ ಆತನನ್ನು ಸಕ್ರಿಯವಾಗಿ ತೋರಿಸಿರುವುದು ಸರಿಯಲ್ಲ’ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ವಾದ.

‘ದಾವೂದ್ ಬಗ್ಗೆ ಯಾರು ಕೂಡ ಇಂತದ್ದೇ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾದಲ್ಲಿ ತೋರಿಸಿರುವುದನ್ನು ಸುಳ್ಳು ಎಂದು ಹೇಳಲು ನನ್ನ ಬಳಿಯೂ ಸಾಕ್ಷಿಯಿಲ್ಲ. ಹಾಗೆಯೇ ಅದನ್ನು ನಿಜ ಎಂದು ಸಾಬೀತುಪಡಿಸಲು ನಿರ್ದೇಶಕರಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗೆ ‘ಧುರಂಧರ್ 2’ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ‘ಧುರಂಧರ್’ ಪ್ರದರ್ಶನಕ್ಕೆ ಇಲ್ಲ ತಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಭೂಗತ ಲೋಕದ ಕಥೆಗಳನ್ನು ಆಧರಿಸಿ ‘ಸತ್ಯ’ ಮತ್ತು ‘ಕಂಪನಿ’ ರೀತಿಯ ಸಿನಿಮಾಗಳನ್ನು ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು ದಾವೂದ್ ವಿಷಯದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣ ಆಗಿದೆ. ಸದ್ಯ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವರ್ಮಾ ಅವರ ಈ ಹೇಳಿಕೆಗೆ ನಿರ್ದೇಶಕ ಆದಿತ್ಯ ಧರ್ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್ – Kannada News | Darshan’s former manager Mallikarjuna talks about Darshan

ನಟ ದರ್ಶನ್ (Darshan) ಈಗ ಜೈಲಿನಲ್ಲಿದ್ದಾರೆ. ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಹಲವು ವರ್ಷ ನಾಪತ್ತೆ ಆಗಿದ್ದು, ಇದೀಗ ಹಠಾತ್ತನೆ ಮಾಧ್ಯಮಗಳ ಮುಂದೆ ಬಂದು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಬಗ್ಗೆಯೂ ಮಾತನಾಡಿರುವ ಮಲ್ಲಿಕಾರ್ಜುನ, ದರ್ಶನ್ ತಮಗೆ ಸದಾ ಒಳ್ಳೆಯದೇ ಮಾಡಿದ್ದರು. ನನಗೆ ಸದಾ ಒಳ್ಳೆಯದೇ ಬಯಸಿದ್ದರು ಎಂದಿದ್ದಾರೆ. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸಹ ನಾನು ದರ್ಶನ್ ನನಗೆ ಮಾಡಿದ ಸಹಾಯದ ವಿಷಯ ಹೇಳಲು ಹೋದಾಗ ನನ್ನನ್ನು ಅವರು ತಡೆದಿದ್ದರು’ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version