ಅಜ್ಮೀರ್ ಹತ್ಯಾಕಾಂಡ: ನಾಲ್ವರನ್ನು ಕೊಂದು ಕಾರೊಳಗೆ ಹಾಕಿ ಸುಟ್ಟ ಪತ್ನಿ, ಮನೆಯಲ್ಲಿ ಎದೆ ಬಡಿದುಕೊಂಡು ಮೊಸಳೆ ಕಣ್ಣೀರು ಸುರಿಸಿದ ಹಂತಕಿ

ಅಜ್ಮೀರ್, ಮೇ 29: ರಾಜಸ್ಥಾನದ ಅಜ್ಮೀರ್​ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆದರೆ ಆ ಸಾವು ಸಹಜ ಸಾವಲ್ಲ ಕೊಲೆ(Murder) ಎಂಬುದು ಈಗ ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಶವಗಳಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಅಚ್ಚರಿಯೆಂದರೆ, ಈ ಇಡೀ ಹತ್ಯಾಕಾಂಡದ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಮೃತರ ಮನೆಯಲ್ಲೇ ಕಣ್ಣೀರಿಡುತ್ತಾ ಮೂರ್ಛೆ ಹೋದಂತೆ ನಟಿಸುತ್ತಿದ್ದ ಮೊದಲ ಪತ್ನಿ.

ಘಟನೆ ಏನು?

ಅಜ್ಮೀರ್ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶ್ರೀರಾಂಪುರ ಗ್ರಾಮದ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋ ಎಸ್‌ಯುವಿ (SUV) ಪತ್ತೆಯಾಗಿತ್ತು. ವಾಹನದೊಳಗೆ ಮೂರು ಮತ್ತು ಹತ್ತಿರದ ಹೊಲದಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಸುಟ್ಟ ಶವಗಳು ಸಿಕ್ಕಿದ್ದವು.

ರಾಮ್ ಸಿಂಗ್ ಚೌಧರಿ (ಮಾಜಿ ಸರಪಂಚ್)

ಪೂಸಿ ದೇವಿ (ರಾಮ್ ಸಿಂಗ್ ತಾಯಿ)

ಸೂರ್ಯಜ್ಞಾನ ದೇವಿ (ರಾಮ್ ಸಿಂಗ್ ಎರಡನೇ ಪತ್ನಿ)

ಮಹಿಮಾ ಚೌಧರಿ (ಚಿಕ್ಕಮ್ಮನ ಮಗಳು)

ಅಪಘಾತವಲ್ಲ, ಇದು ಬರ್ಬರ ಕೊಲೆ

ಆರಂಭದಲ್ಲಿ ಪೊಲೀಸರು ಇದನ್ನು ರಸ್ತೆ ಅಪಘಾತ ಎಂದು ಶಂಕಿಸಿದ್ದರು. ಆದರೆ ವಿಧಿವಿಜ್ಞಾನ ತಜ್ಞರು (FSL) ಮತ್ತು ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ದೇಹದ ಮೇಲಿದ್ದ ಗಾಯಗಳು ಇವು ಕೊಲೆ ಎಂಬುದನ್ನು ಖಚಿತಪಡಿಸಿದವು. ಕೊಲೆಗಾರರು ಮೊದಲು ಮನೆಯಲ್ಲೇ ನಾಲ್ವರನ್ನು ಹತ್ಯೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿಗೆ ತುಂಬಿಸಿ ಹೆದ್ದಾರಿಗೆ ತಂದು ಬೆಂಕಿ ಹಚ್ಚಿದ್ದರು.

ಮತ್ತಷ್ಟು ಓದಿ:
ಬಿಜೆಪಿ ಮುಖಂಡ ವೆಂಕಟೇಶ್ ಕೊಲೆ ಕೇಸ್​​ಗೆ ಬಿಗ್ ಟ್ವಿಸ್ಟ್: ಜೊತೆಗಿದ್ದಕೊಂಡೇ ಮುಹೂರ್ತ ಇಟ್ಟವರ ಬಂಧನ

ಕಣ್ಣೀರಿಡುತ್ತಾ ಪೊಲೀಸರನ್ನೇ ಹಾದಿ ತಪ್ಪಿಸಿದ ಪತ್ನಿ

ಪೊಲೀಸರು ತನಿಖೆಗಾಗಿ ರಾಮ್ ಸಿಂಗ್ ಮನೆಗೆ ಹೋದಾಗ, ಅವರ ಮೊದಲ ಪತ್ನಿ ಸುನೀತಾ ಗ್ರಾಮದ ಮಹಿಳೆಯರ ನಡುವೆ ಕುಳಿತು ಜೋರಾಗಿ ಅಳುತ್ತಾ, ಎದೆಗೆ ಹೊಡೆದುಕೊಳ್ಳುತ್ತಾ ತೀವ್ರ ದುಃಖದಲ್ಲಿರುವಂತೆ ನಟಿಸುತ್ತಿದ್ದಳು. ತಾಯಿಗೆ ಎದೆನೋವು ಬಂದಿದ್ದರಿಂದ ರಾಮ್ ಸಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರಿಗೆ ಸುಳ್ಳು ಕಥೆ ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಳು.

ಪಿತೂರಿ ಬಯಲಾಗಿದ್ದು ಹೇಗೆ?

ಅಜ್ಮೀರ್ ಎಸ್‌ಪಿ ಹರ್ಷವರ್ಧನ್ ಅಗರ್‌ವಾಲ್ ನೇತೃತ್ವದ ತಂಡಕ್ಕೆ ಕೌಟುಂಬಿಕ ಹಿನ್ನೆಲೆ ಕೆದಕಿದಾಗ ಅಸಲಿ ಸತ್ಯ ತಿಳಿಯಿತು. ರಾಮ್ ಸಿಂಗ್ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮದುವೆ ವಿಷಯವಾಗಿ ಮನೆಯಲ್ಲಿ ದೀರ್ಘಕಾಲದ ಆಸ್ತಿ ಮತ್ತು ಕೌಟುಂಬಿಕ ವಿವಾದವಿತ್ತು. ಬುಧವಾರ ತಡರಾತ್ರಿ ಮನೆಯಲ್ಲಿ ಭೀಕರ ಜಗಳ ನಡೆದಿದೆ. ಈ ವೇಳೆ ಮೊದಲ ಪತ್ನಿ ಸುನೀತಾ, ಆಕೆಯ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನು ಭೀಕರವಾಗಿ ಕತ್ತರಿಸಿ ಕೊಂದಿದ್ದಾರೆ.

ಗ್ರಾಮಸ್ಥರು ನೀಡಿದ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಆರೋಪಿ ಸುನೀತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಹಂತಕಿಯ ಈ ಕ್ರೂರ ನಾಟಕ ಇಡೀ ಗ್ರಾಮಸ್ಥರನ್ನು ಆಘಾತಕ್ಕೆ ದೂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಾಭಾರತದ ‘ಕುಂತಿ’ ಶಫಕ್ ನಾಜ್ ಈಗ ಎಲ್ಲಿದ್ದಾರೆ?

ಸ್ಟಾರ್ ಪ್ಲಸ್ ವಾಹಿನಿಯಲ್ಲಿ 2013ರಲ್ಲಿ ಪ್ರಸಾರವಾದ ಪೌರಾಣಿಕ ಧಾರಾವಾಹಿ‘ಮಹಾಭಾರತ’ (Mahabharat) ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸೀರಿಯಲ್‌ಗಳಲ್ಲಿ ಒಂದು. 16 ಸೆಪ್ಟೆಂಬರ್ 2013 ರಿಂದ 16 ಆಗಸ್ಟ್ 2014ರವರೆಗೆ ಒಟ್ಟು 267 ಸಂಚಿಕೆಗಳಾಗಿ ಮೂಡಿಬಂದ ಈ ಅದ್ಭುತ ಸರಣಿಯಲ್ಲಿ ಹಲವು ಪ್ರಮುಖ ನಟರು ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯಲ್ಲಿ ಪಾಂಡವರ ತಾಯಿ ‘ಕುಂತಿ’ ಪಾತ್ರದಲ್ಲಿ ನಟಿಸಿದ್ದ ಮುಸ್ಲಿಂ ನಟಿ ಶಫಕ್ ನಾಜ್ ಅವರ ಬಗ್ಗೆ ಒಂದು ಕುತೂಹಲಕಾರಿ ವಿಷಯ ಇಲ್ಲಿದೆ.

ಕೇವಲ 21ನೇ ವಯಸ್ಸಿಗೆ ತಾಯಿ ಪಾತ್ರ!

ಧಾರಾವಾಹಿಯಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಕಷ್ಟಕರವಾದ ಕುಂತಿ ಪಾತ್ರಕ್ಕೆ ಶಫಕ್ ನಾಜ್ ಆಯ್ಕೆಯಾದಾಗ ಅವರಿಗೆ ಕೇವಲ 21 ವರ್ಷ ವಯಸ್ಸು! ಆಶ್ಚರ್ಯದ ಸಂಗತಿಯೆಂದರೆ, ಅವರ ಮಕ್ಕಳಾಗಿ ನಟಿಸಿದ ಪಾಂಡವರು ಮತ್ತು ಕರ್ಣನ ಪಾತ್ರಧಾರಿಗಳು ನಿಜ ಜೀವನದಲ್ಲಿ ಈ ನಟಿಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಾಗಿದ್ದರು.

ಯುಧಿಷ್ಠಿರ (ರೋಹಿತ್ ಭಾರದ್ವಾಜ್’: ಸರಣಿಯಲ್ಲಿ ಧರ್ಮರಾಯನಾಗಿ ನಟಿಸಿದ್ದ ರೋಹಿತ್ ಭಾರದ್ವಾಜ್ ಅವರಿಗೆ ಆಗ 31 ವರ್ಷ ವಯಸ್ಸು. ಅಂದರೆ ತಾಯಿಯ ಪಾತ್ರ ಮಾಡಿದ್ದ ಶಫಕ್ ನಾಜ್ ಅವರಿಗಿಂತ ರೋಹಿತ್ 10 ವರ್ಷ ದೊಡ್ಡವರಾಗಿದ್ದರು.

ಭೀಮ (ಸೌರವ್ ಗುರ್ಜರ್): ಭೀಮನ ಪಾತ್ರದಲ್ಲಿ ಅಬ್ಬರಿಸಿದ್ದ ಸೌರವ್ ಗುರ್ಜರ್ ಅವರಿಗೆ ಆ ಸಮಯದಲ್ಲಿ 29 ವರ್ಷ ವಯಸ್ಸಾಗಿತ್ತು. ಇವರೂ ಕೂಡ ತೆರೆಯ ಮೇಲಿನ ತಮ್ಮ ತಾಯಿಗಿಂತ ವಯಸ್ಸಿನಲ್ಲಿ ಹಿರಿಯರು.

ಇದನ್ನೂ ಓದಿ: ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?

ಕರ್ಣ (ಅಹಂ ಶರ್ಮಾ): ಸೂರ್ಯಪುತ್ರ ಕರ್ಣನ ಪಾತ್ರದ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಭಾರಿ ಪ್ರಸಿದ್ಧಿ ಪಡೆದ ನಟ ಅಹಂ ಶರ್ಮಾ ಅವರಿಗೆ ಆಗ 24 ವರ್ಷ ವಯಸ್ಸಾಗಿತ್ತು. ಇವರೂ ಸಹ ಶಫಕ್‌ಗಿಂತ ದೊಡ್ಡವರಾಗಿದ್ದರು.

ಈಗ ಎಲ್ಲಿದ್ದಾರೆ ಶಫಕ್ ನಾಜ್?

ಚಿಕ್ಕ ವಯಸ್ಸಿನಲ್ಲೇ ಹಿರಿಯ ನಟರಿಗೆ ತಾಯಿಯಾಗಿ ನಟಿಸಿ, ಆ ಕಠಿಣ ಪಾತ್ರಕ್ಕೆ ಶಫಕ್ ನಾಜ್ ಸಂಪೂರ್ಣ ನ್ಯಾಯ ಒದಗಿಸಿದ್ದರು. ಅವರ ನಟನೆಗೆ ಆಗ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಇನ್ನು ಇವರ ಪ್ರಸ್ತುತ ಜೀವನದ ಬಗ್ಗೆ ಹೇಳುವುದಾದರೆ, ಶಫಕ್ ಸದ್ಯ ಕಿರುತೆರೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ವೆಬ್ ಸರಣಿಗಳಲ್ಲಿ ಸಕ್ರಿಯರಾಗಿದ್ದು, ಡಿಜಿಟಲ್ ಪರದೆಯ ಮೇಲೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ನೀಡಲು ಮುಂದಾದ ಮುಂಬೈ ಇಂಡಿಯನ್ಸ್​

Source link

Vasthu Tips: ಹಳೆಯ ಅಥವಾ ಹರಿದ ಬಟ್ಟೆ ಮನೆ ಒರೆಸಲು ಬಳಸಬಾರದು ಯಾಕೆ ಗೊತ್ತಾ?

ಹರಿದ ಬಟ್ಟೆ ಮನೆ ಒರೆಸಲು ಬಳಸುವುದುImage Credit source: Pinterest

ಶುಚಿತ್ವವು ನಮ್ಮ ಬದುಕು, ಕುಟುಂಬ ಮತ್ತು ಮನೆಗೆ ಶ್ರೇಯಸ್ಸು, ಸಮೃದ್ಧಿ ಹಾಗೂ ನೆಮ್ಮದಿ ತರುತ್ತದೆ. ಮನೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ನಾವು ಬಳಸುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹಿಂದಿನ ಕಾಲದಿಂದಲೂ ಮನೆ ಒರೆಸುವ ವಿಧಾನಗಳಲ್ಲಿ ಬದಲಾವಣೆಗಳಾಗಿವೆ. ಆಧುನಿಕ ಯುಗದಲ್ಲಿ ಮಾಫ್‌ಗಳ ಬಳಕೆ ಸಾಮಾನ್ಯವಾದರೆ, ಕೆಲವರು ಈಗಲೂ ಹಳೆಯ, ಉಪಯೋಗಿಸಿದ, ಹರಿದ ಬಟ್ಟೆಗಳನ್ನು ಮನೆ ಒರೆಸಲು ಬಳಸುತ್ತಾರೆ. ಇದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಉತ್ತರ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ, ಮನೆಯ ಶುಚಿಗೆ ಚಂದ್ರ, ಶುಕ್ರ ಮತ್ತು ರವಿ ಈ ಮೂರು ಗ್ರಹಗಳು ಕಾರಕತ್ವವಾಗಿವೆ. ಇವುಗಳಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಪಾತ್ರ ಪ್ರಧಾನವಾಗಿದೆ. ಚಂದ್ರನು ಶಾಂತಿ, ತಾಳ್ಮೆ, ಸಹನೆ ಮತ್ತು ಮನಸ್ಸಿನ ತಂಪುತನಕ್ಕೆ ಅಧಿಪತಿ. ಶುಕ್ರನು ಐಷಾರಾಮಿ ಜೀವನ, ಉತ್ತಮ ಉಡುಗೆ-ತೊಡುಗೆ ಮತ್ತು ಆಹಾರದ ಸುಖಕ್ಕೆ ಕಾರಕನಾಗಿದ್ದಾನೆ. ಮನೆಯನ್ನು ಶುದ್ಧವಾಗಿ ಇಡಲು ಈ ಗ್ರಹಗಳ ಪ್ರಭಾವ ಅತ್ಯಗತ್ಯ.

ಹಳೆಯ, ಕೊಳಕು ಅಥವಾ ಹರಿದ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸಿದಾಗ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಎಚ್ಚರಿಸುತ್ತಾರೆ. ಇಂತಹ ಬಟ್ಟೆಗಳ ಬಳಕೆಯಿಂದ ಹೊರಗಿನ ಕೆಟ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಚಂದ್ರನಿಗೆ ದಕ್ಕೆ ಉಂಟಾದಾಗ ನಮ್ಮ ಭಾವನೆಗಳಿಗೆ ತೊಂದರೆಯಾಗಿ, ಗಂಡ-ಹೆಂಡತಿಯ ಜಗಳ, ಮಕ್ಕಳ ಕಲಹ, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಶುಕ್ರನ ಪ್ರಭಾವ ಕಡಿಮೆಯಾದಾಗ ಮುಖದ ತೇಜಸ್ಸು ಕುಂದಿ, ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಅವುಗಳಿಂದ ಮನೆ ಒರೆಸುವುದು ಸಹ ಅಶುಭ. ರಾಹು ಗ್ರಹವು ಹರಿದ ಬಟ್ಟೆಗಳಿಗೆ ಕಾರಕನಾಗಿದ್ದು, ಇದರ ಪ್ರಭಾವದಿಂದ ಆಕಸ್ಮಿಕ ಘಟನೆಗಳು, ಕೋಪ, ಮತ್ತು ತಕ್ಷಣದ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹರಿದ ಬಟ್ಟೆಗಳನ್ನು ಧರಿಸುವುದು ಫ್ಯಾಷನ್ ಆಗಿದ್ದರೂ, ಇದು ಶುಭವೆಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದರಿಂದ ಮನೆಯಲ್ಲಿ ಅಸ್ಥಿರತೆ, ಅಶಾಂತಿ, ಅತಿಯಾದ ನಿದ್ರೆ, ದುಃಖ ಮತ್ತು ಒಂಟಿತನ ಕಾಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತಮ ಕಾಲದಲ್ಲಿ ಮನೆ ಒರೆಸುವುದರಿಂದ ಸೂರ್ಯನ ಪ್ರಭಾವವೂ ಮನೆಯ ಮೇಲೆ ಇರುತ್ತದೆ. ಸೂರ್ಯನು ಆರೋಗ್ಯದ ಕಾರಕನಾಗಿರುವುದರಿಂದ, ಹಳೆಯ ಬಟ್ಟೆಗಳ ಬಳಕೆಯು ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಾಜಕೀಯ ವ್ಯಕ್ತಿಗಳು, ವ್ಯಾಪಾರಸ್ಥರು, ಇಂಜಿನಿಯರ್‌ಗಳು ಸೇರಿದಂತೆ ಯಾವುದೇ ವೃತ್ತಿಯಲ್ಲಿರುವವರಿಗೂ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಕಂಟಕಗಳು ಎದುರಾಗಬಹುದು.

ಆದ್ದರಿಂದ, ಮನೆಯನ್ನು ಶುಚಿಗೊಳಿಸಲು ಹೊಸ ಬಟ್ಟೆಗಳನ್ನು ಅಥವಾ ಸೂಕ್ತವಾದ ಶುಚಿಗೊಳಿಸುವ ಸಾಧನಗಳನ್ನು ಬಳಸುವುದು ಅತ್ಯಂತ ಶುಭ. ಹಳೆಯ ಮತ್ತು ಹರಿದ ಬಟ್ಟೆಗಳನ್ನು ಮನೆ ಸ್ವಚ್ಛತೆಗೆ ಬಳಸುವುದನ್ನು ತ್ಯಜಿಸಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಳ್ಳುವಂತೆ ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಜೀ ಕನ್ನಡ ವಾಹಿನಿಯು ಸದಾ ವಿನೂತನ ಕಥಾಹಂದರ ಹೊಂದಿರುವ ಧಾರಾವಾಹಿಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವ ಮತ್ತೊಂದು ಸೀರಿಯಲ್ ಎಂದರೆ ಅದು ‘ಜಗದ್ಧಾತ್ರಿ’. ಸದ್ಯ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿ ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ತನ್ನ ವಿಭಿನ್ನ ಕಥಾಹಂದರ ಹಾಗೂ ತಾರಾಗಣದಿಂದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಎಂದರೆ ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಗೆದ್ದ ಖ್ಯಾತ ನಟಿ ಮೋಕ್ಷಿತಾ ಪೈ. ‘ಪಾರು’ ಸೇರಿದಂತೆ ಹಲವು ಸೀರಿಯಲ್‌ಗಳ ಮೂಲಕ ಈ ಹಿಂದೆ ಜನಪ್ರಿಯತೆ ಗಳಿಸಿದ್ದ ಮೋಕ್ಷಿತಾ, ಈಗ ‘ಜಗದ್ಧಾತ್ರಿ’ಯಾಗಿ ಕಮಾಲ್ ಮಾಡಲು ಮರಳಿದ್ದಾರೆ ಎನ್ನಲಾಗಿದೆ. ಸದಾ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅವರು, ಈ ಸೀರಿಯಲ್‌ನಲ್ಲಿ ವಿಭಿನ್ನ ಶೇಡ್ ಹಾಗೂ ಬಲಿಷ್ಠ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರ ನಟನೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಧಾರಾವಾಹಿ ದೊಡ್ಡ ಹಬ್ಬವಾಗಿ ಪರಿಣಮಿಸಿದೆ.

ಈ ಮಧ್ಯೆ ಕಿರುತೆರೆ ವಲಯದಲ್ಲಿ ಮತ್ತೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹೌದು, ಮೋಕ್ಷಿತಾ ಪೈ ಅವರ ಜೊತೆಗೆ ಕನ್ನಡ ಕಿರುತೆರೆಯ ಮತ್ತೊಬ್ಬ ಸ್ಟಾರ್ ನಟಿ ಕವಿತಾ ಗೌಡ ಕೂಡ ‘ಜಗದ್ಧಾತ್ರಿ’ ಬಳಗವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ‘ಚಿನ್ನು’ ಪಾತ್ರದ ಮೂಲಕ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಕವಿತಾ ಗೌಡ, ಈ ಸೀರಿಯಲ್ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಂದು ವೇಳೆ ಕವಿತಾ ಗೌಡ ಅವರ ಎಂಟ್ರಿ ಅಧಿಕೃತವಾದರೆ, ಮೋಕ್ಷಿತಾ ಮತ್ತು ಕವಿತಾ ಅವರಂತಹ ಇಬ್ಬರು ಪ್ರಭಾವಶಾಲಿ ನಟಿಯರನ್ನು ಒಂದೇ ಪರದೆಯ ಮೇಲೆ ನೋಡುವುದು ವೀಕ್ಷಕರಿಗೆ ಡಬಲ್ ಧಮಾಕಾ ಸಿಕ್ಕಂತಾಗಲಿದೆ. ಇದು ಧಾರಾವಾಹಿಯ ಟಿಆರ್‌ಪಿ (TRP) ರೇಟಿಂಗ್ ಅನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾದ ಮೋಕ್ಷಿತಾ ಪೈ

ಕುತೂಹಲಕಾರಿ ತಿರುವುಗಳು, ಅದ್ದೂರಿ ಮೇಕಿಂಗ್ ಮತ್ತು ಸ್ಟಾರ್ ತಾರಾಗಣವನ್ನು ಹೊಂದಿರುವ ‘ಜಗದ್ಧಾತ್ರಿ’ ಸೀರಿಯಲ್ ಜೀ ಕನ್ನಡದಲ್ಲಿ ಯಾವಾಗ ಪ್ರಸಾರ ಕಾಣಲಿದೆ ಎಂಬ ಕುತೂಹಲ ಮೂಡಿದೆ. ಕವಿತಾ ಗೌಡ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:51 am, Fri, 29 May 26

Source link

Karnataka Weather Forecast: ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಬಿರುಗಾಳಿಯ ಆರ್ಭಟ!

ಮುಂಬರುವ ದಿನಗಳಲ್ಲಿ ಭಾರೀ ಮಳೆಯ ಎಚ್ಚರಿಕೆ
Image Credit source: MediaForge AI

ಬೆಂಗಳೂರು, ಮೇ 29: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹವಾಮಾನದಲ್ಲಿ (Weather) ಭಾರಿ ಏರುಪೇರಾಗಲಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿಯ ಆರ್ಭಟ ಜೋರಿರಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಕರಾವಳಿ ಮತ್ತು ಒಳನಾಡಿನ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ ನಿರೀಕ್ಷೆ.
  • ಕಲ್ಬುರ್ಗಿ, ರಾಯಚೂರು ಭಾಗದಲ್ಲಿ ಭಾರಿ ಬಿರುಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ.
  • ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಗಾಳಿ, ಮಳೆ ಸಾಧ್ಯತೆ.

ಎಲ್ಲೆಲ್ಲಿ ಮಳೆ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಕಲ್ಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹವಾಮಾನದ ತೀವ್ರತೆ ಹೆಚ್ಚಿರಲಿದ್ದು, ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲೂ ಸಹ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಸುರಿಯಬಹುದು.

ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಮಳೆ ನಿರೀಕ್ಷಿಸಲಾಗಿದೆ. ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದ್ದು, ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಅಲ್ಲದೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜಿಟಿಜಿಟಿ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೀಮಿಯಂ ಮದ್ಯ, ಬಿಯರ್ ದರ ಇಳಿಕೆಯಾದ್ರೂ ಹಳೆ ದರದಲ್ಲೇ ಸೇಲ್: ಮದ್ಯ ಮಾರಾಟಗಾರರ ವಿರುದ್ಧ ಎಣ್ಣೆ ಪ್ರಿಯರ ಆಕ್ರೋಶ

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 29: ಕರ್ನಾಟಕ (Karnataka) ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು (Alcohol Content) ಆಧರಿಸಿ ತೆರಿಗೆ ವಿಧಿಸುವ ಹೊಸ ಎಐಬಿ (Alcohol-in-Beverage) ತೆರಿಗೆ ಪದ್ಧತಿಯನ್ನು ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಅದರಂತೆ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ಹಾಗೂ ಕಡಿಮೆ ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ಹೊಸ ನೀತಿಯಿಂದಾಗಿ ಶ್ರೀಮಂತರು ಖರೀದಿಸುವ ಪ್ರೀಮಿಯಂ ವಿಸ್ಕಿ, ಜಿನ್, ಟಕೀಲಾ ಹಾಗೂ ಬಿಯರ್ ಸೇರಿದಂತೆ ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಬಡವರು ಮತ್ತು ಮಧ್ಯಮ ವರ್ಗದವರು ಖರೀದಿಸುವ ಸಾಮಾನ್ಯ ಮದ್ಯದ ಬ್ರ್ಯಾಂಡ್‌ಗಳ ದರ ದುಬಾರಿಯಾಗಿದೆ. ಆದರೆ, ಈ ಬದಲಾವಣೆಯ ನಡುವೆ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಗ್ರಾಹಕರನ್ನು ಲೂಟಿ ಮಾಡುತ್ತಿದ್ದು, ಮದ್ಯಪ್ರಿಯರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿದ ಹೊಸ ತೆರಿಗೆ ನೀತಿಯಿಂದಾಗಿ ಪ್ರೀಮಿಯಂ ಮದ್ಯ ಮತ್ತು ಬಿಯರ್ ದರಗಳು ಶೇ 5 ರಿಂದ ಶೇ 24 ರವರೆಗೆ ಇಳಿಕೆ.
  • ಹೊಸ ತೆರಿಗೆಯಿಂದಾಗಿ ಪ್ರೀಮಿಯಂ ಬ್ರ್ಯಾಂಡ್‌ಗಳು ಅಗ್ಗ.
  • ದರ ಇಳಿಕೆಯಾದರೂ ಹಳೇ ಬೆಲೆಗೇ ಮಾರುತ್ತಿರುವ ಬಾರ್ ಮಾಲೀಕರು.

ಬಾರ್ ಮಾಲೀಕರ ಕಿಲಾಡಿತನ: ಅಬಕಾರಿ ಇಲಾಖೆ ಕ್ರಮಕ್ಕೆ ಆಗ್ರಹ

ರಾಜ್ಯದಲ್ಲಿ ಮೇ 11 ರಿಂದ ಜಾರಿಗೆ ಬಂದಿರುವ ಹೊಸ ನಿಯಮದನ್ವಯ ಎಕ್ಸೈಸ್ ಸ್ಲ್ಯಾಬ್ ಅನ್ನು 16 ರಿಂದ 8 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಬಹುತೇಕ ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ಇದರ ಅಧಿಕೃತ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ಬಹುತೇಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಇಂದಿಗೂ ಬಾಟಲಿಗಳ ಮೇಲಿರುವ ಹಳೆಯ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ತೋರಿಸಿ ಗ್ರಾಹಕರಿಂದ ಜೇಬು ಕತ್ತರಿಸುತ್ತಿವೆ.

ಮತ್ತೊಂದೆಡೆ, ಹೊಸ ತೆರಿಗೆ ನೀತಿಯಿಂದಾಗಿ ಬೆಲೆ ಹೆಚ್ಚಳವಾಗಿರುವ ಸಾಮಾನ್ಯ ಮದ್ಯದ ಬ್ರ್ಯಾಂಡ್‌ಗಳ ಲೇಬಲ್ ಮೇಲೆ ಹಳೆಯ (ಕಡಿಮೆ) ದರವೇ ಮುದ್ರಿತವಾಗಿದ್ದರೂ, ಮಾಲೀಕರು ಹೊಸದಾಗಿ ಹೆಚ್ಚಳಗೊಂಡಿರುವ ದರವನ್ನು ವಸೂಲಿ ಮಾಡುತ್ತಿದ್ದಾರೆ.

ಬಾರ್ ಮಾಲೀಕರ ಕಳ್ಳಾಟದ ವಿರುದ್ಧ ಗ್ರಾಹಕರ ಕಿಡಿ

ಬಾರ್ ಮಾಲೀಕರ ಈ ಇಬ್ಬಂದಿ ನೀತಿಯ ವಿರುದ್ಧ ಗ್ರಾಹಕರಾದ ಮಹೇಶ್, ಶರಣು, ಸುನೀಲ್ ಕುಮಾರ್ ಹಾಗೂ ಶಿವಣ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ‘ದರ ಕಡಿಮೆಯಾಗಿರುವ ಮದ್ಯಕ್ಕೆ ಹಳೆಯ ಹೆಚ್ಚಿನ ಬೆಲೆ ಪಡೆಯುತ್ತಾರೆ, ಆದರೆ ದರ ಹೆಚ್ಚಾಗಿರುವ ಮದ್ಯಕ್ಕೆ ಹೊಸ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಾರೆ. ಇದು ಮದ್ಯಪ್ರಿಯರಿಗೆ ಮಾಡುತ್ತಿರುವ ನೇರ ವಂಚನೆ’ ಎಂದು ಕೆಂಡಕಾರಿದ್ದಾರೆ.

ಇದನ್ನೂ ಓದಿ: ‘ಎಣ್ಣೆ’ ಪ್ರಿಯರ ಕಿಕ್ ಏರಿಸಿದ ಸರ್ಕಾರ! ಇನ್ನು ಶ್ರೀಮಂತರ ಮದ್ಯ ಅಗ್ಗ, ಬಡವರ ಮದಿರೆ ದುಬಾರಿ

ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿದ್ದರೂ, ಮದ್ಯದಂಗಡಿಗಳ ಮೇಲೆ ಸೂಕ್ತ ನಿಗಾ ಇಡದ ಕಾರಣ ಈ ಕಳ್ಳಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆಯು ತಕ್ಷಣವೇ ಇಂತಹ ಮದ್ಯದಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆಮಿಮಾ ಮಿಂಚಿಂಗ್: ಟೀಮ್ ಇಂಡಿಯಾಗೆ ಭರ್ಜರಿ ಜಯ

ಚೆಲ್ಮ್ಸ್‌ಫೋರ್ಡ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (0) ಶೂನ್ಯಕ್ಕೆ ಔಟಾಗಿದ್ದರು. ಇನ್ನು ಶಫಾಲಿ ವರ್ಮಾ ಕಲೆಹಾಕಿದ್ದು ಕೇವಲ 2 ರನ್​ ಮಾತ್ರ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಯಾಸ್ತಿಕಾ ಭಾಟಿಯಾ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ 40 ಎಸೆತಗಳಲ್ಲಿ 54 ರನ್​ಗಳನ್ನು ಬಾರಿಸಿದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆಮಿಮಾರೊಡ್ರಿಗಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 40 ಎಸೆತಗಳನ್ನು ಎದುರಿಸಿದ ಜೆಮಿಮಾ 1 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 69 ರನ್​ ಸಿಡಿಸಿದರು. ಈ ಸ್ಫೋಟಕ ಅರ್ಧಶತಕದೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 188 ರನ್ ಕಲೆಹಾಕಿತು.

189 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 38 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

 

Source link

Horoscope Today: ಇಂದು ಈ ರಾಶಿಯವರ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 29, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ತ್ರಯೋದಶಿ ಮತ್ತು ಸ್ವಾತಿ ನಕ್ಷತ್ರದ ವಿಶೇಷತೆಯನ್ನು ಹೊಂದಿದೆ. ರಾಹುಕಾಲವು ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:16ರ ವರೆಗೆ ಇರಲಿದ್ದು, ಶುಭಕಾಲವು ಮಧ್ಯಾಹ್ನ 12:17 ರಿಂದ 1:53ರ ವರೆಗೆ ಇರುತ್ತದೆ.

ಇಂದು ಶುಕ್ರವಾರವಾದ್ದರಿಂದ ಶ್ರೀ ಮಹಾಲಕ್ಷ್ಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಮಹಾಲಕ್ಷ್ಮಿಯ ದರ್ಶನ ಅಥವಾ ಕುಂಕುಮಾರ್ಚನೆ ಮಾಡುವುದರಿಂದ ಶುಭವಾಗುತ್ತದೆ. ಗ್ರಹಗಳ ಸ್ಥಾನದ ಕುರಿತು ಹೇಳುವುದಾದರೆ, ಇಂದು ಬೆಳಗ್ಗೆ 11:14ಕ್ಕೆ ಬುಧ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚರಿಸಲಿದೆ. ಈಗಾಗಲೇ ಗುರು ಮತ್ತು ಶುಕ್ರ ಮಿಥುನ ರಾಶಿಯಲ್ಲಿ ಇರುವುದರಿಂದ, ಬುಧ ಗ್ರಹದ ಸೇರ್ಪಡೆ ವಿಶೇಷ ಮಹತ್ವವನ್ನು ಪಡೆದಿದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ಜಪಾನ್‌ಗೆ ಭಾರತೀಯ ಮಾವಿನ ರಫ್ತು ತಾತ್ಕಾಲಿಕ ಸ್ಥಗಿತ: ರೈತರಲ್ಲಿ ಆತಂಕ

ನವದೆಹಲಿ, ಮೇ 29: ಸುಮಾರು 20 ವರ್ಷಗಳ ನಿರಂತರ ವ್ಯಾಪಾರದ ನಂತರ, ಜಪಾನ್ ಈ ಋತುವಿನಲ್ಲಿ (ಏಪ್ರಿಲ್-ಜೂನ್) ಭಾರತೀಯ ಮಾವಿನ ಹಣ್ಣುಗಳ(Mangoes) ಆಮದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಇದು ಭಾರತದ ಮಾವು ರಫ್ತುದಾರರು ಮತ್ತು ರೈತರಲ್ಲಿ ಭಾರಿ ಕಳವಳ ಮೂಡಿಸಿದೆ.

ನಿಷೇಧಕ್ಕೆ ಕಾರಣವೇನು?
ಭಾರತದಿಂದ ಮಾವಿನ ಹಣ್ಣುಗಳನ್ನು ಜಪಾನ್‌ಗೆ ಕಳುಹಿಸುವ ಮುನ್ನ ಆವಿ ಶಾಖ ಚಿಕಿತ್ಸೆ (VHT – Vapor Heat Treatment) ಪ್ರಕ್ರಿಯೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದು ಹಣ್ಣಿನ ನೊಣಗಳು ಮತ್ತು ಕೀಟಗಳನ್ನು ಕೊಲ್ಲುವ ವಿಧಾನವಾಗಿದೆ.

ಲೋಪದೋಷ ಪತ್ತೆ: ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿರುವ ವಿಎಚ್‌ಟಿ ಕೇಂದ್ರವನ್ನು ಜಪಾನ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಅಲ್ಲಿನ ನೈರ್ಮಲ್ಯ , ವ್ಯವಸ್ಥೆಯಲ್ಲಿ ಕೆಲವು ತಾಂತ್ರಿಕ ನ್ಯೂನತೆಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಮಾರ್ಚ್ 25, 2026 ರ ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರಗಳಿರುವ ಮಾವಿನ ಸಾಗಣೆಯನ್ನು ಸ್ವೀಕರಿಸುವುದಿಲ್ಲ ಎಂದು ಜಪಾನ್‌ನ ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಘ ತಿಳಿಸಿದೆ. ಭಾರತ ತನ್ನ ತಪಾಸಣಾ ವ್ಯವಸ್ಥೆಯನ್ನು ಸುಧಾರಿಸುವವರೆಗೆ ಈ ನಿಷೇಧ ಮುಂದುವರಿಯಲಿದೆ.

ಮತ್ತಷ್ಟು ಓದಿ: ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಪ್ರಭಾವಕ್ಕೆ ಒಳಗಾಗುವ ತಳಿಗಳು
ಈ ನಿರ್ಧಾರದಿಂದಾಗಿ ಜಪಾನ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಭಾರತದ ಪ್ರಮುಖ ಮಾವಿನ ತಳಿಗಳ ರಫ್ತಿಗೆ ಹೊಡೆತ ಬಿದ್ದಿದೆ:

ಅಲ್ಫೋನ್ಸೊ (ಹಾಪುಸ್)

ಕೇಸರ್ (ಜಪಾನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತಳಿ)

ಲ್ಯಾಂಗ್ರಾ

ಬಂಗನಪಲ್ಲಿ

ಭಾರತದ ವ್ಯಾಪಾರದ ಮೇಲಾಗುವ ಪರಿಣಾಮ
ಭಾರತೀಯ ಮಾವಿನ ಹಣ್ಣಿಗೆ ಯುಎಇ, ಯುಎಸ್ ಮತ್ತು ಯುಕೆ ದೊಡ್ಡ ಮಾರುಕಟ್ಟೆಗಳಾಗಿದ್ದು, ಜಪಾನ್ ಅತಿ ದೊಡ್ಡ ಖರೀದಿದಾರನೇನಲ್ಲ. ಆದರೂ ಈ ನಿಷೇಧವು ಆರ್ಥಿಕವಾಗಿ ಪರಿಣಾಮ ಬೀರಲಿದೆ. ಜಪಾನ್‌ನಲ್ಲಿ ಕೃಷಿ ನಿಯಮಗಳು ಕಠಿಣವಾಗಿರುವುದರಿಂದ, ಅಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಬೇರೆ ದೇಶಗಳಿಗಿಂತ ಹೆಚ್ಚಿನ ಬೆಲೆ (ಪ್ರೀಮಿಯಂ ದರ) ಸಿಗುತ್ತಿತ್ತು. ಇದರಿಂದ ರಫ್ತುದಾರರ ಗಳಿಕೆಗೆ ನಷ್ಟವಾಗಲಿದೆ.

ಈಗಾಗಲೇ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ತೀವ್ರ ಉಷ್ಣ ಅಲೆಯಿಂದಾಗಿ ಅಲ್ಫೋನ್ಸೊ ಇಳುವರಿ ಕಡಿಮೆಯಾಗಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ಸರಕು ಸಾಗಣೆ (ಲಾಜಿಸ್ಟಿಕ್ಸ್) ವೆಚ್ಚವೂ ಹೆಚ್ಚಾಗಿದೆ. ಈ ಸಂಕಷ್ಟದ ಸಮಯದಲ್ಲಿ ಜಪಾನ್ ನಿಷೇಧ ಹೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂದೇನು?: ಈ ನಿಷೇಧ ಯಾವಾಗ ತೆರವಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಭಾರತದ APEDA ಮತ್ತು ಜಪಾನ್‌ನ ಸಸ್ಯ ಸಂರಕ್ಷಣಾ ಕೇಂದ್ರಗಳು ಮಾತುಕತೆಯ ಮೂಲಕ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರವಷ್ಟೇ ರಫ್ತು ಪುನರಾರಂಭಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version