IND vs NZ: ಗುರುವಿಗೆ ತಕ್ಕ ಶಿಷ್ಯ; 2ನೇ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ – Kannada News | Abhishek Sharma’s Record 14 Ball Fifty Powers India to 13th Consecutive T20I Series Win vs NZ

ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯ ತಂಡಗಳನ್ನು ನೋಡಿದರೆ, ಅಭಿಷೇಕ್ ಶರ್ಮಾ ಜಂಟಿಯಾಗಿ ಮೂರನೇ ಅತಿ ವೇಗದ ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ ವಿರುದ್ಧ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಮೀಬಿಯಾದ ಆಟಗಾರ ಜಾನ್ ಫ್ರೈಲಿಂಕ್ ಎರಡನೇ ಸ್ಥಾನದಲ್ಲಿದ್ದಾರೆ. 2016 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಕಾಲಿನ್ ಮುನ್ರೋ ಅವರೊಂದಿಗೆ ಅಭಿಷೇಕ್ ಶರ್ಮಾ ಅವರ ಹೆಸರು ಈಗ ಜಂಟಿಯಾಗಿ ಮೂರನೇ ಸ್ಥಾನದಲ್ಲಿದೆ.

Source link

‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ – Kannada News | Amazon Prime warned Jana Nayagan producer sue over release date chaos

ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಕಾರಣಕ್ಕೆ ತೀವ್ರ ಹಿನ್ನಡೆ ಆಗಿದ್ದು, ಈಗಾಗಲೇ ಬಿಡುಗಡೆ ದಿನಾಂಕ ಮುಂದೆ ಹೋಗಿ ನಿರ್ಮಾಪಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎಂತೆಂಥ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ, ರೀಮೇಕ್ ಸಿನಿಮಾ ಆಗಿರುವ ‘ಜನ ನಾಯಗನ್’ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಪ್ರಕರಣ ಇದೀಗ ಮದ್ರಾಸ್ ಹೈಕೋರ್ಟ್​​ನಲ್ಲಿದೆ. ಹೀಗಿರುವಾಗ ಸಿನಿಮಾದ ನಿರ್ಮಾಪಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಪ್ಪಂದದಂತೆ ಸಿನಿಮಾ ಬಿಡುಗಡೆ ಮಾಡದಿದ್ದರೆ ನಷ್ಟಪರಿಹಾರ ನೀಡಬೇಕೆಂದು ಒಟಿಟಿಯವರು ನಿರ್ಮಾಪಕರಿಗೆ ಎಚ್ಚರಿಸಿದ್ದಾರೆ.

‘ಜನ ನಾಯಗನ್’ ಸಿನಿಮಾದ ಡಿಜಿಟಲ್​​ ಹಕ್ಕುಗಳನ್ನು ಮುಂಗಡವಾಗಿ ಅಮೆಜಾನ್ ಪ್ರೈಂ ವಿಡಿಯೋಕ್ಕೆ ಭಾರಿ ಮೊತ್ತಕ್ಕೆ ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಮಾರಾಟ ಮಾಡಿದ್ದರು. ಅಮೆಜಾನ್ ಜೊತೆಗಿನ ಒಪ್ಪಂದದಂತೆ ಸಿನಿಮಾದ ಬಿಡುಗಡೆ ದಿನಾಂಕದ ನಾಲ್ಕು ವಾರಗಳ ತರುವಾಯ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಬೇಕಿತ್ತು. ಒಪ್ಪಂದದ ಪ್ರಕಾರ ‘ಜನ ನಾಯಗನ್’ ಸಿನಿಮಾವನ್ನು ಅಮೆಜಾನ್​​ನಲ್ಲಿ ಬಿಡುಗಡೆ ಮಾಡಲು ಕೆಲವೇ ದಿನಗಳು ಬಾಕಿ ಇವೆ.

ಇದೀಗ ಅಮೆಜಾನ್ ಪ್ರೈಂ ವಿಡಿಯೋದವರು ನಿರ್ಮಾಪಕ ವೆಂಕಟ್ ನಾರಾಯಣ್ ಅವರಿಗೆ ಎಚ್ಚರಿಕೆ ನೀಡಿದ್ದು, ಒಂದೊಮ್ಮೆ ಒಪ್ಪಂದದ ಪ್ರಕಾರ ನಿಗದಿತ ಸಮಯಕ್ಕೆ ‘ಜನ ನಾಯಗನ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡದಿದ್ದಲ್ಲಿ ಭಾರಿ ಮೊತ್ತದ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದಿದ್ದಾರೆ. ಅಲ್ಲದೆ, ಸಿನಿಮಾ ಬಿಡುಗಡೆ ಮಾಡದೇ ಇದ್ದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿಯು ಪ್ರಮಾಣ ಪತ್ರವನ್ನು ನಿರಾಕರಿಸಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ಮೊದಲಿಗೆ ಸಿನಿಮಾದ ಪರವಾಗಿ ತೀರ್ಪು ಬಂದಿತ್ತು. ಆದರೆ ತೀರ್ಪು ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸಿಬಿಎಫ್​​ಸಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದು, ಸಿನಿಮಾದ ಪರವಾಗಿ ಆದೇಶ ನೀಡಿದ್ದ ಮದ್ರಾಸ್ ಹೈಕೋರ್ಟ್​​ ಸ್ವತಃ ತನ್ನದೇ ಆದೇಶಕ್ಕೆ ತಡೆ ನೀಡಿತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಬಂದಿದ್ದೂ ಆಗಿದೆ. ಜನವರಿ 27 ರಂದು ಪ್ರಕರಣದ ಬಗ್ಗೆ ಆದೇಶ ಹೊರಬೀಳಲಿದೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕಾಗಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಕೆವಿಎನ್​ ಪ್ರೊಡಕ್ಷನ್ಸ್ ಮೂಲಕ ಸಿನಿಮಾದ ನಿರ್ಮಾಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:39 pm, Sun, 25 January 26

Source link

ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಗೌರವ; ಇಲ್ಲಿದೆ 70 ಶೌರ್ಯ ಪ್ರಶಸ್ತಿ ವಿಜೇತರ ಪಟ್ಟಿ – Kannada News | Shubhanshu Shukla gets Ashoka Chakra, as president selects 70 army personnel for gallantry awards

ನವದೆಹಲಿ, ಜನವರಿ 25: ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್​ಗೆ ಪೈಲಟ್ ಆಗಿ ಹೋಗಿ ಬಂದ ಭಾರತದ ಮೊದಲ ಗಗನಯಾತ್ರಿ ಎನಿಸಿರುವ ಶುಭಾಂಶು ಶುಕ್ಲಾ ಅವರಿಗೆ ಸರ್ಕಾರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಅಶೋಕ ಚಕ್ರವು ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಎನಿಸಿದೆ. ಭಾರತೀಯ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಅವರು ಇಸ್ರೋ ವತಿಯಿಂದ ಗಗನಯಾತ್ರಿಯಾಗಿ ಸ್ಪೇಸ್​ಎಕ್ಸ್​ನ ಡ್ರಾಗಾನ್ ಗಗನನೌಕೆ ಮೂಲಕ ಐಎಸ್​ಎಸ್ ತಲುಪಿದ್ದರು.

ಶುಭಾಂಶು ಶುಕ್ಲಾ ಅವರಿಗೆ ನಾಳೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ಪ್ರಶಸ್ತಿ ದಯಪಾಲಿಸಲಿದ್ದಾರೆ. ಶುಭಾಂಶುವೂ ಸೇರಿದಂತೆ ಒಟ್ಟು 70 ಮಂದಿಯನ್ನು ಶೌರ್ಯ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಆರು ಮಂದಿಗೆ ಮರಣೋತ್ತರ ಪ್ರಶಸ್ತಿಗಳು ಸಿಗಲಿವೆ. ಈ 70 ಗ್ಯಾಲಂಟ್ರಿ ಅವಾರ್ಡ್​ಗಳಲ್ಲಿ ಒಂದು ಅಶೋಕ ಚಕ್ರ, 3 ಕೀರ್ತಿ ಚಕ್ರ, 13 ಶೌರ್ಯ ಚಕ್ರ, 1 ಬಾರ್ ಟು ಸೇನಾ ಮೆಡಲ್ ಮತ್ತು 44 ಸೇನಾ ಮೆಡಲ್​ಗಳು ಸೇರಿವೆ.

ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

2026ರ ಗಣರಾಜ್ಯೋತ್ಸವದಂದು 70 ಶೌರ್ಯ ಪ್ರಶಸ್ತಿಗಳ ಪಟ್ಟಿ

ಅಶೋಕ ಚಕ್ರ

  1. ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ

ಕೀರ್ತಿ ಚಕ್ರ

  1. ಮೇಜರ್ ಅರ್ಶದೀಪ್ ಸಿಂಗ್
  2. ನಯೀಬ್ ಸುಬೇದಾರ್ ದೋಲೇಶ್ವರ್ ಸುಬ್ಬ
  3. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್

ಶೌರ್ಯ ಚಕ್ರ

  1. ಲೆಫ್ಟಿನೆಂಟ್ ಕರ್ನಲ್ ಘಟಗೆ ಆದಿತ್ಯ ಶ್ರೀಕುಮಾರ್
  2. ಮೇಜರ್ ಅನ್ಶುಲ್ ಬಲ್ಟೂ
  3. ಮೇಜರ್ ಶಿವಕಾಂತ್ ಯಾದವ್
  4. ಮೇಜರ್ ವಿವೇಕ್
  5. ಮೇಜರ್ ಲೇಶಾಂಗದೆಮ್ ದೀಪಕ್ ಸಿಂಗ್
  6. ಕ್ಯಾಪ್ಟನ್ ಯೋಗೇಂದರ್ ಸಿಂಗ್ ಠಾಕೂರ್
  7. ಸುಬೇದಾರ್ ಪಿ ಎಚ್ ಮೋಸಸ್
  8. ಲ್ಯಾನ್ಸ್ ದಫಾದರ್ ಬಲದೇವ್ ಚಂದ್ (ಮರಣೋತ್ತರ)
  9. ರೈಫಲ್​ಮ್ಯಾನ್ ಮಂಗಲಮ್ ಸ್ಯಾಂಗ್ ವೈಫೇ
  10. ರೈಫಲ್​ಮ್ಯಾನ್ ಧುರ್ಬ ಜ್ಯೋತಿ ದತ್ತ
  11. ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ
  12. ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ
  13. ಅಸಿಸ್ಟೆಂಟ್ ಕಮಾಂಡೆಂಟ್ ವಿಪಿನ್ ವಿಲ್ಸನ್

ಬಾರ್ ಟು ಸೇನಾ ಮೆಡಲ್

  1. ಲ್ಯಾನ್ಸ್ ಹವೀಲ್ದಾರ್ ಸತ್ಯ ಪಾಲ್ ಸಿಂಗ್

ಇದನ್ನೂ ಓದಿ: ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ

ಸೇನಾ ಮೆಡಲ್

  1. ಕರ್ನಲ್ ಅಮಿತ್ ದಾಧವಾಲ್
  2. ಲೆಫ್ಟಿನೆಂಟ್ ಕರ್ನಲ್ ಮೂಡಿಗೆರೆ ರಾಜಗೋಪಾಲ್ ಸುಹಾಸ್
  3. ಲೆಫ್ಟಿನೆಂಟ್ ಕರ್ನಲ್ ಪ್ರದೀಪ್ ಶೌರ್ಯ ಆರ್ಯ
  4. ಮೇಜರ್ ಕುಲಬೀರ್ ಸಿಂಗ್ ಮೋಹನ್
  5. ಮೇಜರ್ ಅನೀಶ್ ಚಂದ್ರನ್ ಸಿ
  6. ಮೇಜರ್ ಚರಣ್​ಜೀತ್ ಸಿಂಗ್
  7. ಮೇಜರ್ ನಾಗವಿಗ್ನೇಶ್ ಕೆ.ಎ.
  8. ಮೇಜರ್ ರೋಹಿತ್ ಕುಮಾರ್
  9. ಮೇಜರ್ ಶಿವಪ್ರಸಾದ್ ಕೆ
  10. ಮೇಜರ್ ಅಕ್ಷಯ್ ಆನಂದ್
  11. ಮೇಜರ್ ಸಿ ಸಾಯಿ ವಿವೇಕ್
  12. ಮೇಜರ್ ವಿಶ್ವ ಪ್ರಕಾಶ್ ದುಬೇ
  13. ಮೇಜರ್ ರೋಹಿತ್ ಕುಮಾರ್
  14. ಮೇಜರ್ ರವಿ ಕುಮಾರ್ ಸಿಂಗ್
  15. ಮೇಜರ್ ತುಷಾರ್ ನಾಗ್ರೇಕ್
  16. ಕ್ಯಾಪ್ಟನ್ ಅಜಿಂಕ್ಯ ಪಂಡಿತ್ ಕಣಸೆ
  17. ಕ್ಯಾಪ್ಟನ್ ಜಗದೀಪ್ ನಾರಾಯಣ್
  18. ಕ್ಯಾಪ್ಟನ್ ಪ್ರಭಾತ್ ಕುಮಾರ್ ಸಿಂಗ್
  19. ಕ್ಯಾಪ್ಟನ್ ಗುರಶರಣ್ ಸಿಂಗ್
  20. ಸುಬೇದಾರ್ ಧರಂವೀರ್ (ಮರಣೋತ್ತರ)
  21. ಸುಬೇದಾರ್ ರಾಜ್ ಕುಮಾರ್ ಮಂಝಿ
  22. ಸುಬೇದಾರ್ ಗೋಪಾಲ್ ಸಿಂಗ್
  23. ಸುಬೇದಾರ್ ಕುಲದೀಪ್ ಸಿಂಗ್ (ಮರಣೋತ್ತರ)
  24. ಸುಬೇದಾರ್ ಶಮಸ್ ದಿನ್
  25. ನಯೀಬ್ ಸುಬೇದಾರ್ ಮೊಹಮದ್ ಇಕ್ಬಾಲ್ ತೀಲಿ
  26. ನಯೀಬ್ ಸುಬೇದಾರ್ ಪವನ್ ಕುಮಾರ್
  27. ನಯೀಬ್ ಸುಬೇದಾರ್ ಸರಿಫುಲ್ ಮಂಡಲ್
  28. ನಯೀಬ್ ರಿಸಾಲ್ದಾರ್ ರಾಣ ಪ್ರತಾಪ್ ಸಿಂಗ್
  29. ಹವೀಲ್ದಾರ್ ಝಂಟು ಅಲಿ ಶೇಖ್ (ಮರಣೋತ್ತರ)
  30. ಹವೀಲ್ದಾರ್ ಆನಂದ್ ಸುಮನ್ ರಾಣಾ
  31. ಹವೀಲ್ದಾರ್ ಮಕ್ಸೂದ್ ದೀನ್
  32. ಹವೀಲ್ದಾರ್ ಪೂರನ್ ಸಿಂಗ್ ಖರಾಯತ್
  33. ಹವೀಲ್ದಾರ್ ಮೊಹಮ್ಮದ್ ಸರೋಜ್ ಖಾನ್
  34. ಹವೀಲ್ದಾರ್ ಯಾಂಗ್ ದೋರ್ಜೀ ಲಾಮಾ
  35. ಲ್ಯಾನ್ಸ್ ದಫಾದಾರ್ ಭಾರವಾದ್ ಮೆಹುಲ್​ಭಾಯ್ ಮೆಪಾಭಾಯ್ (ಮರಣೋತ್ತರ)
  36. ನಾಯ್ಕ್ ರಂಜಯ್ ಕುಮಾರ್
  37. ಲ್ಯಾನ್ಸ್ ನಾಯ್ಕ್ ಅಶೋಕ್ ಕುಮಾರ್ ಭಿಂದರ್
  38. ಸಿಪಾಯ್ ಶಬೀರ್ ಅಹ್ಮದ್
  39. ಸಿಪಾಯ್ ಗ್ಯಾಕಾರ್ ಸಂದೀಪ್ ಪಾಂಡುರಂಗ್ (ಮರಣೋತ್ತರ)
  40. ಸಿಪಾಯಿ ಕದಾವೋಹುಮ್ ಬೆಲ್ಲಾಯ್
  41. ರೈಫಲ್​ಮ್ಯಾನ್ ವಾಯಿಕೋಂ ಮೋಹನ್ ಸಿಂಗ್
  42. ರೈಫಲ್​ಮ್ಯಾನ್ ತಂಗ್ಗೋಲುನ್ ಸಿಂಗ್ಸನ್
  43. ಪ್ಯಾರಟ್ರೂಪರ್ ಬ್ರಿಂಗರ್ ಎಚ್​ಕೆ
  44. ಪ್ಯಾರಾಟ್ರೂಪರ್ ದೀಪ್​ಚಂದ್ ಕರಗ್ವಾಲ್

ನೌಕಾ ಸೇನಾ ಮೆಡಲ್

  1. ಕಮಾಂಡರ್ ನರದೀಪ್ ಸಿಂಗ್
  2. ಲೆಫ್ಟಿನೆಂಟ್ ಕಮಾಂಡರ್ ರಿಷಭ್ ಪುರ್ಬಿಯಾ
  3. ಕಮಾಂಡರ್ ರಾಜೇಶ್ವರ್ ಕುಮಾರ್ ಶರ್ಮಾ
  4. ಲೆಫ್ಟಿನೆಂಟ್ ಕಮಾಂಡರ್ ಪ್ರಶಾಂತ್ ರಾಜ್
  5. ಕಮಾಂಡರ್ ಹರಪ್ರೀತ್ ಸಿಂಗ್
  6. ಕ್ಯಾಪ್ಟನ್ ಪಿಯೂಶ್ ಕಟಿಯಾರ್

ವಾಯು ಸೇನಾ ಮೆಡಲ್

  1. ವಿಂಗ್ ಕಮಾಂಡರ್ ಶೋಭಿತ್ ವ್ಯಾಸ್
  2. ಜೂನಿಯರ್ ವಾರಂಟ್ ಆಫೀಸರ್ ಕೃಪಾಲ್ ಸಿಂಗ್ ಸಲಾರಿಯಾ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ನೇಹಿತರಿಂದಲೇ ರೌಡಿಶೀಟರ್ನ ಡೆಡ್ಲಿ ಮರ್ಡರ್​: ಹಣದ ವಿಷಯಕ್ಕೆ ಹರಿದಿದ್ದು ನೆತ್ತರು – Kannada News | Rowdy Sheeter Auto Naga Killed by Friends Over Money Dispute in Nelamangala

ನೆಲಮಂಗಲ, ಜನವರಿ 25: ಮಾರಕಾಸ್ತ್ರಗಳಿಂದ ಇರಿದು ಸ್ನೇಹಿತರೇ ರೌಡಿಶೀಟರ್​​ನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನೆಲಮಂಗಲ ಬಳಿಯ ಬಾಲಾಜಿ ಫಾರ್ಮ್ ಹೌಸ್​ನಲ್ಲಿ ನಡೆದಿದೆ. ಲಗ್ಗೆರೆ ಮತ್ತು ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಟೋ ನಾಗ ಕೊಲೆಯಾದ ವ್ಯಕ್ತಿಯಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣದ ವಿಚಾರಕ್ಕೆ ಮರ್ಡರ್​​ ನಡೆದಿದೆ ಎನ್ನಲಾಗಿದೆ.

ಮೊದಲು ಪಾರ್ಟಿ, ಆಮೇಲೆ ಮರ್ಡರ್​!

ಗಂಗೊಂಡಹಳ್ಳಿಯಲ್ಲಿದ್ದ ನಾಗ ಇಂದು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮುಂದಾಗಿದ್ದ. ಹೀಗಾಗಿ ಮಧ್ಯಾಹ್ನ 2.30ರ ವೇಳೆಗೆ ಬಾಲಾಜಿ ಫಾರ್ಮ್​​ ಹೌಸ್​​ಗೆ ಬಂದಿದ್ದ. ಸ್ನೇಹಿತರ ಜೊತೆಗೆ ಕೂತು ಚೆನ್ನಾಗಿ ಮದ್ಯವನ್ನೂ ಸೇವಿಸಿದ್ದ. ಎಲ್ಲರೂ ಒಟ್ಟಾಗಿ ಒಂದೇ ತಟ್ಟೆಯಲ್ಲಿ ಊಟವನ್ನೂ ಮಾಡಿದ್ದರು. ಆದರೆ ಬಳಿಕ ನಡೆಯಬಾರದ್ದು ನಡೆದಿದೆ. ನಾಗ ಕುಡಿದ ಮತ್ತಲ್ಲಿ ಇರುವಾಗ ಸ್ನೇಹಿತರೇ ಆತನನ್ನು ಡ್ರಾಗರ್​​ನಿಂದ ಇರಿದು ಕೊಂದಿದ್ದಾರೆ. ಘಟನೆ ಸಂಬಂಧ ಎಸಿಪಿ ಅಶೋಕ್ ಹಾಗೂ ಇನ್ಸ್ಪೆಕ್ಟರ್ ಮುರುಳಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದ ರೌಡಿಶೀಟರ್​​ ತಂದಿದ್ದು ನಕಲಿ ಬಂದೂಕು!

ಹಣದ ವಿಚಾರಕ್ಕೆ ಹರಿದ ನೆತ್ತರು

ಸ್ನೇಹಿತ ಅಭಿ ಎಂಬಾನಿಗೆ ಅಂದರ್ ಬಾಹರ್ ಹಣದಲ್ಲಿ ನಾಗ 22 ಲಕ್ಷ ಸಾಲ ನೀಡಿದ್ದ. ಆದ್ರೆ  ಕೊಟ್ಟ ಹಣ ಹಿಂದಿರುಗಿಸುವಂತೆ ನಾಗ ಇತ್ತೀಚೆಗೆ ಕೇಳಿದ್ದು, ಹಣ ವಾಪಸ್ ಕೊಡಲು ಸಾಧ್ಯವಾಗದ ಕಾರಣ ಕೊಲೆಗೆ ಸ್ಕೆಚ್​​ ರೆಡಿಯಾಗಿತ್ತು. ಇಂದು ಪಾರ್ಟಿ ಮಾಡಿ ಮಾತನಾಡುವ ನೆಪದಲ್ಲಿ ನಾಗನನ್ನು ಕರೆಸಿಕೊಂಡಿದ್ದ ಆರೋಪಿಗಳು ಮರ್ಡರ್​​ ಮಾಡಲು ಸಿದ್ಧವಾಗಿಯೇ ಬಂದಿದ್ದರು. ನಾಗ ಹಾಗೂ ಆರೋಪಿಗಳು ಸೇರಿ ಎರಡು ರೂಂಗಳನ್ನು ಬುಕ್​​ ಮಾಡಿದ್ದರು. ನಾಗ ಬಂದ ಬಳಿಕ ಚೆನ್ನಾಗಿ ಪಾರ್ಟಿ ಮಾಡಿದ್ದು, ಬಳಿಕ ಪ್ಲ್ಯಾನ್​​ನಂತೆ ಆತನನ್ನು ಇರಿದು ಕೊಲ್ಲಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​ : ಮೊದಲ ಹಂತದಲ್ಲಿ 80 ಅರ್ಜಿಗಳು ತಿರಸ್ಕೃತ – Kannada News | Kogilu Layout Demolition: 80 Rehabilitation Applications Rejected

ಬೆಂಗಳೂರು, ಜನವರಿ 25: ಕೋಗಿಲು ಲೇಔಟ್ ಒತ್ತುವರಿದಾರರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. ಮನೆ ಹಂಚಿಕೆಗಾಗಿ ಸಲ್ಲಿಕೆಯಾಗಿದ್ದ 167 ಅರ್ಜಿಗಳ ಪೈಕಿ ಮೊದಲ ಹಂತದಲ್ಲಿ 80 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮನೆ ಒದಗಿಸುವ ಭರವಸೆ ನೀಡಲಾಗಿದ್ದ 26 ಜನರ ಅರ್ಜಿಗಳೂ ಕೂಡ ರಿಜೆಕ್ಟ್​​ ಆಗಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಉಳಿದ 87 ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಡಿಸೆಂಬರ್ 20ರಂದು ಕೋಗಿಲು ಲೇಔಟ್‍ನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿತ್ತು. ವಿಚಾರ ದೇಶಾದ್ಯಂತ ಚರ್ಚೆಯಾದ ಬಳಿಕ ಕೆಲವೇ ದಿನಗಳಲ್ಲಿ ಮನೆ ಹಂಚಿಕೆ ಮಾಡುವುದಾಗಿ ನಿವಾಸಿಗಳಿಗೆ ಸರ್ಕಾರದಿಂದ ಭರವಸೆ ನೀಡಲಾಗಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs NZ: ಅಭಿ, ಸೂರ್ಯ ಸಿಡಿಲಬ್ಬರದ ಅರ್ಧಶತಕ; ಟಿ20 ಸರಣಿ ಗೆದ್ದ ಟೀಂ ಇಂಡಿಯಾ – Kannada News | India Dominates NZ in Guwahati T20, Clinches Series 3 0, Breaks 13 Series Record

ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯವನ್ನೂ ಸಹ ಆತಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಈ ಮೂಲಕ 3-0 ಅಂತರದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಐದು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮಾತ್ರವಲ್ಲದೆ ಸತತ 13ನೇ ಟಿ20 ಸರಣಿಯನ್ನು ಗೆಲ್ಲುವ ಮೂಲಕ ತನ್ನದೇ ಹಳೆದ ದಾಖಲೆಯನ್ನು ಮುರಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 153 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 10 ಓವರ್​ಗಳಲ್ಲಿ 2 ವಿಕೆಟ್​ಗಳನ್ನು ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಮುಟ್ಟಿತು. ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದರು.

Source link

ಬೀದಿ ಬದಿ ವ್ಯಾಪಾರಿಯ ಮನೆಗೆ ಕರೆದು ಉಡುಗೊರೆ ಕೊಟ್ಟು ಸನ್ಮಾನಿಸಿದ ರಜನೀಕಾಂತ್: ಕಾರಣ? – Kannada News | Rajinikanth facilitated a street food vendor know why

ರಜನೀಕಾಂತ್ (Rajinikanth) ಕೇವಲ ಸ್ಟಾರ್ ನಟ ಮಾತ್ರವೇ ಅಲ್ಲ, ಅವರೊಬ್ಬ ಅದ್ಭುತ ವ್ಯಕ್ತಿ. ತಾವು ಒಳಿತು ಮಾಡುವ ಜೊತೆಗೆ ಒಳಿತು ಮಾಡುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಸಹ ಮಾಡುತ್ತಲೇ ಇರುತ್ತಾರೆ. ತಮಗೆ ಹಿಡಿಸಿದ ವ್ಯಕ್ತಿ, ವಿಷಯದ ಬಗ್ಗೆ ಬಹಿರಂಗವಾಗಿ ಹೇಳಿ ಅವರ ಮೌಲ್ಯ ಹೆಚ್ಚು ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ನೋಡಿ ಮೆಚ್ಚಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ, ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿ, ಸನ್ಮಾನ ಮಾಡಿದ್ದರು ರಜನೀಕಾಂತ್. ಇದೀಗ ಬೀದಿ ಬದಿ ವ್ಯಾಪಾರಿಯೊಬ್ಬರನ್ನು ಅವರ ಕುಟುಂಬ ಸಮೇತ ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ ರಜನೀಕಾಂತ್, ಕಾರಣವೇನು ಗೊತ್ತೆ?

ರಜನೀಕಾಂತ್ ಅವರು ಶೇಖರ್ ಹೆಸರಿನ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಮನೆಗೆ ಕರೆಸಿದ್ದರು. ಶೇಖರ್ ಮಾತ್ರವೇ ಅಲ್ಲದೆ ಅವರ ಕುಟುಂಬದವರನ್ನೆಲ್ಲ ಮನೆಗೆ ಕರೆಸಿದ್ದ ರಜನೀಕಾಂತ್, ತಮ್ಮ ಮನೆಯಲ್ಲೇ ಅವರಿಗೆಲ್ಲ ಆತಿಥ್ಯ ನೀಡಿದರು ಮಾತ್ರವಲ್ಲದೆ ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿ ಬಳಿಕ ಅವರಿಗೆ ತಮ್ಮಿಷ್ಟ ಗುರುವಿನ ಚಿತ್ರವನ್ನು ನೀಡಿ ಸನ್ಮಾನ ಸಹ ಮಾಡಿದರು. ಶೇಖರ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಸಹ ರಜನೀಕಾಂತ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲ ರಜನೀಕಾಂತ್ ಮಾಡಿದ್ದೇಕೆ?

ಅಸಲಿಗೆ ಶೇಖರ್, ರಜನೀಕಾಂತ್ ಅವರ ದೊಡ್ಡ ಅಭಿಮಾನಿ. ಆದರೆ ಈ ಕಾರಣಕ್ಕಲ್ಲ, ಅವರನ್ನು ರಜನೀಕಾಂತ್ ಮನೆಗೆ ಕರೆಸಿ ಸನ್ಮಾನಿಸಿದ್ದು. ರಜನೀಕಾಂತ್ ಕರೆಸಲು ಕಾರಣ, ಶೇಖರ್ ಮಾಡುತ್ತಿರುವ ಅಪರೂಪದ ಕಾರ್ಯ. ಮಧುರೈನಲ್ಲಿ ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್, ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಹೋಟೆಲ್​​ಗಳಲ್ಲಿಯೇ ಒಂದು ಪರೋಟಕ್ಕೆ 30ರಿಂದ 50 ರೂಪಾಯಿ ಬೆಲೆ ಇದೆ ಹಾಗಿರುವಾಗ ಶೇಖರ್ ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಇದು ಒಂದು ರೀತಿ ಸಾಧನೆಯೇ.

ಇದನ್ನೂ ಓದಿ:ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ

ರಜನೀಕಾಂತ್ ಅಭಿಮಾನಿ ಆಗಿರುವ ಶೇಖರ್ 15 ವರ್ಷಗಳ ಹಿಂದೆ ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು, ಅಂದಿನಿಂದ ಇಂದಿನವರೆಗೂ ಅದೇ ಬೆಲೆಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಜನೀಕಾಂತ್ ಅಪ್ಪಟ ಅಭಿಮಾನಿ ಆಗಿರುವ ಅವರು, ತಮ್ಮ ಪುಟ್ಟ ಹೋಟೆಲ್​​ನಲ್ಲೆಲ್ಲ ರಜನೀಕಾಂತ್ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಕೈಯ ಮೇಲೆ ರಜನೀಕಾಂತ್ ಚಿತ್ರದ ಹಚ್ಚೆಯನ್ನೂ ಹಾಕಿಕೊಂಡಿದ್ದಾರೆ.

ಇದೇ ಕಾರಣಕ್ಕೆ ರಜನೀಕಾಂತ್ ಅವರು ಶೇಖರ್ ಅವರನ್ನು ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಅವರು ಮಾಡುತ್ತಿರುವ ಸೇವೆಗೆ ಧನ್ಯವಾದ ತಿಳಿಸಿದ್ದಲ್ಲದೆ, ಅವರಿಗೆ ಚಿನ್ನದ ಚೈನು ನೀಡಿ, ಹಣ ಸಹ ನೀಡಿ ಆಶೀರ್ವಾದ ಮಾಡಿದ್ದಾರೆ. ಶೇಖರ್ ಅವರಿಗೆ ರಜನೀಕಾಂತ್ ಸನ್ಮಾನಿಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್ – Kannada News | Sai Kumar talks about Telugu and Kannada languages

ಸಾಯಿಕುಮಾರ್ (Sai Kumar), ಕನ್ನಡ ಸಿನಿಮಾ ಪ್ರೇಮಿಗಳಿಗೆ ದಶಕಗಳ ಪರಿಚಯ. ಆಕ್ಷನ್ ಸಿನಿಮಾಗಳ ಹೊಸ ಮಾದರಿಯನ್ನೇ ಸಾಯಿಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ್ದರು. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಹಲವಾರು ಕನ್ನಡ ಸಿನಿಮಾಗಳಲ್ಲಿ ಸಾಯಿ ಕುಮಾರ್ ನಟಿಸಿದ್ದು, ಕನ್ನಡದವರೇ ಆಗಿಬಿಟ್ಟಿದ್ದಾರೆ. ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಇರುವ ಸಾಯಿ ಕುಮಾರ್, ಇದೀಗ ‘ಘಾರ್ಗಾ’ ಹೆಸರಿನ ಕನ್ನಡ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಇವೆಂಟ್ ಒಂದರಲ್ಲಿ ತಮ್ಮ ಮಾತೃ ಭಾಷೆ ತೆಲುಗು ಆದರೆ ಜೀವನದ ಭಾಷೆ ಕನ್ನಡ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SA20 ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಡೆವಾಲ್ಡ್ ಬ್ರೆವಿಸ್ – Kannada News | SA20 Final: Dewald Brevis Century Powers Pretoria Capitals to 158 at Newlands

ಬ್ರೆವಿಸ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಪ್ರಿಟೋರಿಯಾ ತಂಡ 13 ನೇ ಓವರ್‌ನಲ್ಲಿ 100 ರನ್​ಗಳ ಗಡಿ ತಲುಪಲು ಸಹಾಯ ಮಾಡಿದರು. ಮತ್ತೊಂದೆಡೆ ವಿಕೆಟ್‌ಗಳು ಬೀಳುತ್ತಲೇ ಇದ್ದವು, ಇದು ತಂಡದ ಸ್ಕೋರ್ ಮೇಲೆ ಪರಿಣಾಮ ಬೀರಿತು. ಆದಾಗ್ಯೂ, ಬ್ರೆವಿಸ್ ತಮ್ಮ ದಾಳಿಯನ್ನು ಮುಂದುವರೆಸಿ ಕೇವಲ 53 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಕೇಪ್ ಟೌನ್ ಕ್ರೀಡಾಂಗಣದ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಆದಾಗ್ಯೂ, ಅವರು 19 ನೇ ಓವರ್‌ನಲ್ಲಿ ಔಟಾದರು.

Source link

ಗಣರಾಜ್ಯೋತ್ಸವ 2026: ಪರಪ್ಪನ ಅಗ್ರಹಾರದ ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ – Kannada News | Snacks and Bakery Items Prepared by Prison Inmates Distributed During Republic Day Celebration at Manekshaw Parade Ground

ಬೆಂಗಳೂರು, ಜನವರಿ 25: 77ನೇ ಗಣರಾಜ್ಯೋತ್ಸವಕ್ಕೆ ಮಾಣೆಕ್‌ ಷಾ ಪರೇಡ್‌ ಮೈದಾನ ಸಜ್ಜಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಬೆಳಗ್ಗ 8.55ಕ್ಕೆ ರಾಜ್ಯಪಾಲರು ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಪೊಲೀಸ್ ಬ್ಯಾಂಡ್ ತಂಡದಿಂದ ರಾಷ್ಟ್ರಗೀತೆ ನಡೆದು, ರಾಜ್ಯಪಾಲರು ತೆರೆದ ಜೀಪಿನಲ್ಲಿ ಪರೇಡ್‌ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ. ಬಳಿಕ ರಾಜ್ಯಪಾಲರ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳು ನಾಳೆ ಬೆಳಿಗ್ಗೆ ಮಾಣೆಕ್‌ ಷಾ ಪರೇಡ್ ಗ್ರೌಂಡ್‌ನಲ್ಲಿ ವಿತರಿಸಲಾಗುವ ಉಪಹಾರದ ಭಾಗವಾಗಲಿವೆ. ಈ ಬಗ್ಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್​​ ಕುಮಾರ್​​ ಅವರೇ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version