ಪವನ್​ ಖೇರಾಗೆ ಸುಪ್ರೀಂ ಶಾಕ್, ಜಾಮೀನು ವಿಸ್ತರಣೆಗೆ ನಿರಾಕರಣೆ, ಇನ್ನು ಅಸ್ಸಾಂ ನ್ಯಾಯಾಲಯವೇ ಗತಿ – Kannada News | Pavan Khera Bail: Supreme Court Refuses Extension, Assam Court Now His Only Recourse

ನವದೆಹಲಿ, ಏಪ್ರಿಲ್ 17: ಕಾಂಗ್ರೆಸ್ ಸಂಸದ ಪವನ್ ಖೇರಾ(Pawan Khera) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿರುವ ಪ್ರಕರಣದಲ್ಲಿ ಖೇರಾ ಅವರ ಜಾಮೀನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ವಿಷಯದಲ್ಲಿ ನಾವು ಜಾಮೀನು ವಿಸ್ತರಿಸಲು ಸಾಧ್ಯವಿಲ್ಲ. ಅರ್ಜಿದಾರರು ಈ ಕುರಿತು ಅಸ್ಸಾಂನ ಸಂಬಂಧಪಟ್ಟ  ನ್ಯಾಯಾಲಯವನ್ನೇ ಸಂಪರ್ಕಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ತೆಲಂಗಾಣ ಹೈಕೋರ್ಟ್ ಆದೇಶಕ್ಕೆ ತಡೆ
ಕೆಲವು ದಿನಗಳ ಹಿಂದಷ್ಟೇ ತೆಲಂಗಾಣ ಹೈಕೋರ್ಟ್ ಪವನ್ ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾದಾಗ ಸುಪ್ರೀಂ ಕೋರ್ಟ್ ಆ ಜಾಮೀನಿಗೆ ತಡೆ ನೀಡಿತ್ತು. ಈಗ ಸಾಗಣೆ ಜಾಮೀನನ್ನೂ ವಿಸ್ತರಿಸಲು ನಿರಾಕರಿಸುವ ಮೂಲಕ ಖೇರಾ ಅವರ ಮುಂದಿದ್ದ ಕಾನೂನು ರಕ್ಷಣೆಯ ದಾರಿಗಳು ಕಿರಿದಾಗಿವೆ.

ಈ ಹಿಂದೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನೀಡಿದ್ದ ಯಾವುದೇ ಮಧ್ಯಂತರ ಆದೇಶಗಳು ಅಸ್ಸಾಂನ ಸ್ಥಳೀಯ ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು. ಪವನ್ ಖೇರಾ ಅವರು ಜಾಮೀನು ಕೋರಿ ಅಲ್ಲಿನ ನ್ಯಾಯಾಲಯಕ್ಕೆ ಹೋದಾಗ, ಆ ನ್ಯಾಯಾಲಯವು ಪ್ರಕರಣದ ಅರ್ಹತೆಯ ಆಧಾರದ ಮೇಲೆ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಬಹುದು.

ಮತ್ತಷ್ಟು ಓದಿ: ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ಪವನ್ ಖೇರಾ ಅವರು ಈಗ ಅಸ್ಸಾಂನ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಾದ ಅಥವಾ ಅಲ್ಲಿ ನಿರೀಕ್ಷಣಾ ಜಾಮೀನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಸಕಾಲದಲ್ಲಿ ನ್ಯಾಯಾಲಯವು ಕಾರ್ಯನಿರ್ವಹಿಸದಿದ್ದರೆ, ರಿಜಿಸ್ಟ್ರಿಗೆ ವಿನಂತಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವರಿಗೆ ಸ್ವಾತಂತ್ರ್ಯವಿದೆ ಎಂದು ಪೀಠವು ಹೇಳಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನಹಾನಿ ಅಥವಾ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಈಗ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಪವನ್ ಖೇರಾ ಅವರಿಗೆ ಇದ್ದ ತಾತ್ಕಾಲಿಕ ರಿಲೀಫ್ ಅಂತ್ಯಗೊಂಡಿದೆ. ಈಗ ಅವರು ಅಸ್ಸಾಂನ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರಾಗಿ ತಮ್ಮ ವಾದ ಮಂಡಿಸಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:04 pm, Fri, 17 April 26

Source link

RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ? – Kannada News | Usain Bolt Joins RCB Fan Base: Fastest Man Backs Royal Challengers Bangalore IPL

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ.

Source link

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​ – Kannada News | Karnataka High Court: POCSO Accused Not Entitled to Statutory Bail if Probe Delays

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಹೈ ಕೋರ್ಟ್​
Image Credit source: istockphoto.com

ಬೆಂಗಳೂರು, ಏಪ್ರಿಲ್ 17: ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ರ ಪ್ರಕಾರ, ಪೋಕ್ಸೊ (POCSO) ಕಾಯ್ದೆಯಡಿಯಲ್ಲಿ ಆರೋಪಿಯು 60 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳದ ಕಾರಣ ಗೋವಿಂದ ಎಂಬವರು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ.

ಕೋರ್ಟ್​ ಹೇಳಿದ್ದೇನು?

ಪೋಕ್ಸೋ (POCSO) ಕಾಯಿದೆಯಂತಹ ವಿಶೇಷ ಕಾನೂನುಗಳ ಅಡಿಯಲ್ಲಿನ ಕಾಲಮಿತಿಗಳು ಸಂತ್ರಸ್ತ-ಕೇಂದ್ರಿತವಾಗಿವೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಹೊರತು, ಆರೋಪಿಗಳು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡಲು ಅಲ್ಲ ಎಂದು ನ್ಯಾಯಶಾಸ್ತ್ರವು ನಿರಂತರವಾಗಿ ಒತ್ತಿಹೇಳುತ್ತದೆ. ಶಾಸನಬದ್ಧ ಜಾಮೀನು ಪಡೆಯಲು ಅರ್ಜಿದಾರರು ಬಿಎನ್‌ಎಸ್‌ಎಸ್ (BNSS) ನ ಕಲಂ 193(2) ರ ಸಹಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಎಫ್‌ಎಸ್‌ಎಲ್ ಅಥವಾ ಸಿಡಿಆರ್‌ನ ವರದಿಗಳಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸುವುದರಿಂದ ಕಾನೂನಿನ ದೃಷ್ಟಿಯಲ್ಲಿ ಅಂತಿಮ ವರದಿಯಾಗಿ ಆರೋಪಿಗೆ ಶಾಸನಬದ್ಧ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು 60 ದಿನಗಳ ಕಾಲಮಿತಿ ಮತ್ತು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನಗಳ ಕಾಲಮಿತಿ ಇರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, ಗೋವಿಂದ ಎನ್ನುವವರ ಪ್ರಕರಣದಲ್ಲಿ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿರುವುದರಿಂದ ಮತ್ತು ಅದು ಅಪೂರ್ಣವಾಗಿದೆ ಎಂಬ ಅಂಶವು ‘ಡಿಫಾಲ್ಟ್ ಜಾಮೀನು’ ಪಡೆಯಲು ಕಾನೂನುಬದ್ಧವಾಗಿ ಯಾವುದೇ ಪರಿಣಾಮ ಬೀರದ ಕಾರಣ ಸದರಿ ಆಧಾರದ ಮೇಲೆ ಅರ್ಜಿದಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದೇ ಪ್ರಕರಣದ ಹಿನ್ನೆಲೆ ಈ ಆದೇಶ

ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ಸಂದರ್ಭಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ದೂರುದಾರರ ಮಗಳು ಸುಮಾರು ಒಂದು ವರ್ಷ ಆಸ್ಪತ್ರೆಯಲ್ಲಿ ಮನೆಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಆರೋಪಿಯು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಎಂದು ಆರೋಪಿಸಲಾಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಆಕೆ ಅಪ್ರಾಪ್ತೆ ಎಂದು ತಿಳಿದಿದ್ದೂ ಸಹ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ನಂತರ ಅಕ್ಟೋಬರ್ 2025 ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಆದ್ದರಿಂದ, ದೂರಿನ ನಂತರ ಆರೋಪಿಯನ್ನು ಬಂಧಿಸಿ 2025 ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:15 pm, Fri, 17 April 26

Source link

ಮತ್ತೊಂದು ಹಂತಕ್ಕೆ ತಲುಪಿದ ಕಾಂಗ್ರೆಸ್​​ನ ಬಣ ಬಡಿದಾಟ: ಸಿಎಂ ನಡೆಗೆ ಆಪ್ತರಿಂದಲೇ ಅಸಮಾಧಾನ – Kannada News | Karnataka Congress Infighting: Siddaramaiah’s Allies Express Dissatisfaction Over CM’s Inaction

ಬೆಂಗಳೂರು, ಏಪ್ರಿಲ್​​ 17: ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್​​ನಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್​ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಹೀಗಿದ್ದರೂ ತಮ್ಮ ಆಪ್ತರ ರಕ್ಷಣೆಗೆ ಮುಂದಾಗದ ಮುಖ್ಯಮಂತ್ರಿಗಳ ನಡೆಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ತಮ್ಮ ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ. ಅಸಹಾಯಕರಂತೆ ಅವರು ವರ್ತಿಸುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರಿ ಹಿನ್ನಡೆ ಆಗುತ್ತದೆ. ಪಕ್ಷಕ್ಕೆ ಕೆಲಸ ಮಾಡಿದವರನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗ್ತಿದೆ. ಟಾರ್ಗೆಟ್ ಆಗ್ತಿರೋದು ಕೇವಲ ವ್ಯಕ್ತಿಗಳಲ್ಲ, ಬೇರೆ ಬೇರೆ ಸಮುದಾಯಗಳು. ಹೀಗಾಗಿ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಿವೆ ಎಂದು ಸಿದ್ದರಾಮಯ್ಯ ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇಂತಹ ಅಸಹಾಯಕತೆ ನಿರೀಕ್ಷಿಸಿರಲಿಲ್ಲ’

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್​​. ರಾಜಣ್ಣ, ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ಧ ಕ್ರಮ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಹೀಗೆ ಆಗ್ತಿದ್ದು, ಸಿಎಂ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ ಅನ್ನೋದು ನಮಗೂ ಬೇಸರ ತಂದಿದೆ. ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ. ಆದರೆ ಅವರಿಂದ ಇಂತಹ ಅಸಹಾಯಕತೆ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿ ಎಂದು ಈ ಹಿಂದೆ ಶಾಮನೂರು ಹೇಳಿದ್ದರು. ಆಗ ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಇನ್ನೊಂದು ಪಕ್ಷಕ್ಕೆ ಮತ‌ಹಾಕಿ ಅನ್ನೋದು ಅಶಿಸ್ತು ಅಲ್ಲವೇ? ರಾಜ್ಯ ನಾಯಕರ ಜತೆ ಚರ್ಚಿಸಿಯೇ ಹೈಕಮಾಂಡ್ ತೀರ್ಮಾನಿಸುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್; ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

‘ಪಕ್ಷಕ್ಕೆ ವಿರೋಧವಾಗಿ ಯಾರೇ ಕೆಲಸ ಮಾಡಿದ್ರೂ ಟಾರ್ಗೆಟ್’

ಹೈಕಮಾಂಡ್​ನಿಂದ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಹೆಚ್​.ಸಿ.ಬಾಲಕೃಷ್ಣ, ಏನಾಗಿದೆ ಅಂತಾ ನಾವು ಕೂಡ ಇನ್ನೂ ಗೊಂದಲದಲ್ಲಿ ಇದ್ದೇವೆ. ಪಕ್ಷಕ್ಕೆ ವಿರೋಧವಾಗಿ ಯಾರೇ ಕೆಲಸ ಮಾಡಿದ್ರೂ ಟಾರ್ಗೆಟ್ ಆಗ್ತಾರೆ. ಸಿಎಂ, ಡಿಸಿಎಂ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ಅವರನ್ನೂ ಟಾರ್ಗೆಟ್ ಮಾಡ್ತಾರೆ. ಪಕ್ಷಕ್ಕಿಂತ ದೊಡ್ಡ ವ್ಯಕ್ತಿ ಇಲ್ಲಿ ಯಾರೂ ಇಲ್ಲ, ಪಕ್ಷವೇ ದೊಡ್ಡದು. ಮುಸ್ಲಿಂ ಧರ್ಮ ಗುರುಗಳು ಅವರವರ ಅಭಿಪ್ರಾಯ ಹೇಳಿದ್ದಾರೆ. ನಾವು ಒಂದು ಪಕ್ಷದಲ್ಲಿ ಇದ್ದಾಗ ಆ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಪಕ್ಷದ ಚೌಕಟ್ಟು ಮೀರಿ ನಡೆದಾಗ ಯಾವುದೇ ಜಾತಿ ಮುಂದೆ ಬರಲ್ಲ. ಇದರಲ್ಲಿ ಜಾತಿ ಪ್ರಶ್ನೆ ಎತ್ತೋದು ಸೂಕ್ತ ಅಲ್ಲ ಅಂತಾ ನನ್ನ ಅಭಿಪ್ರಾಯ ಎಂದಿದ್ದಾರೆ.

ಸಿಎಂ-ಡಿಸಿಎಂ ಭೇಟಿಯಾದ ನಾಯಕರು

ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಣ್ಣ, ಎಂ.ಬಿ.ಪಾಟೀಲ್ ಮತ್ತು ಸಲೀಂ ಅಹ್ಮದ್​​ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ನ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಆಗುತ್ತಿರುವ ವಿಚಾರ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:12 pm, Fri, 17 April 26

Source link

ಪೂಜೆಯ ನಂತರ ತೀರ್ಥ ಸ್ವೀಕರಿಸುವಾಗ ಈ ತಪ್ಪು ಮಾಡಬೇಡಿ; ಶಾಸ್ತ್ರೋಕ್ತ ನಿಯಮ ಇಲ್ಲಿದೆ – Kannada News | Hindu Teertha: How to Properly Receive Holy Water and Avoid Common Mistakes for Divine Benefits

ಹಿಂದೂ ಸಂಪ್ರದಾಯದಲ್ಲಿ ದೇವತಾ ಪೂಜೆಯ ನಂತರ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸುವುದು ಅತ್ಯಂತ ಪವಿತ್ರವಾದ ಪ್ರಕ್ರಿಯೆ. ತೀರ್ಥವೆಂದರೆ ಅದು ಕೇವಲ ನೀರಲ್ಲ; ಮಂತ್ರ ಶಕ್ತಿಯಿಂದ ಸಂಸ್ಕಾರಗೊಂಡ ದೈವಿಕ ಚೈತನ್ಯ. ಆದರೆ, ಅನೇಕರು ಭಕ್ತಿಯ ಅವಸರದಲ್ಲಿ ತೀರ್ಥ ಸ್ವೀಕರಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಶಾಸ್ತ್ರಗಳ ಪ್ರಕಾರ ತೀರ್ಥವನ್ನು ಹೇಗೆ ಸ್ವೀಕರಿಸಬೇಕು? ಅದರ ಪ್ರಯೋಜನಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತೀರ್ಥ ಅಂದರೆ ಏನು?

“ತೀರ್ಥ” ಎಂಬ ಪದಕ್ಕೆ ಪವಿತ್ರವಾದುದು ಎಂಬ ಅರ್ಥವಿದೆ. ದೇವರ ಪಾದಗಳನ್ನು ತೊಳೆದ ನೀರು ಅಥವಾ ಮಂತ್ರಘೋಷಗಳ ನಡುವೆ ಪೂಜಿಸಿದ ಕಲಶದ ನೀರನ್ನು ತೀರ್ಥವೆಂದು ಕರೆಯಲಾಗುತ್ತದೆ. ಇದು ಮನಸ್ಸಿನ ಕಲ್ಮಶಗಳನ್ನು ಹೋಗಲಾಡಿಸಿ ದೇಹಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುವ ಶಕ್ತಿಯನ್ನು ಹೊಂದಿದೆ.

ತೀರ್ಥವನ್ನು ಎಷ್ಟು ಬಾರಿ ಮತ್ತು ಹೇಗೆ ಸ್ವೀಕರಿಸಬೇಕು?

ಸಾಮಾನ್ಯವಾಗಿ ಮನೆಯಲ್ಲಿ ಪೂಜೆಯ ನಂತರ ಮೂರು ಬಾರಿ ತೀರ್ಥವನ್ನು ಸ್ವೀಕರಿಸುವ ಸಂಪ್ರದಾಯವಿದೆ. ಆದರೆ ದೇವಸ್ಥಾನಗಳಲ್ಲಿ ಅರ್ಚಕರು ನೀಡುವ ಪದ್ಧತಿಯಂತೆ ಒಮ್ಮೆ ಅಥವಾ ಅವರ ಸಂಪ್ರದಾಯದಂತೆ ಸ್ವೀಕರಿಸಬಹುದು. ತೀರ್ಥವನ್ನು ಕುಡಿಯುವಾಗ ಈ ಕೆಳಗಿನ ಮಂತ್ರವನ್ನು ಪಠಿಸುವುದು ಅತ್ಯಂತ ಫಲಪ್ರದ:

“ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |
ಸಮಸ್ತ ದುರಿತೋಪಶಮನಂ ವಿಷ್ಣುಪಾದೋದಕಂ ಶುಭಂ ||”

ಅರ್ಥ: ಈ ಪವಿತ್ರ ನೀರು ಅಕಾಲಿಕ ಮರಣವನ್ನು ತಪ್ಪಿಸುತ್ತದೆ, ಸಕಲ ರೋಗಗಳನ್ನು ಗುಣಪಡಿಸುತ್ತದೆ ಮತ್ತು ಜೀವನದ ಸಮಸ್ತ ಸಂಕಷ್ಟಗಳನ್ನು ದೂರ ಮಾಡಿ ಮಂಗಳವನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಲೆಯ ಮೇಲೆ ಕೈ ಉಜ್ಜಿಕೊಳ್ಳುವುದು ಸರಿಯೇ?

ತೀರ್ಥ ಸ್ವೀಕರಿಸಿದ ಕೂಡಲೇ ಅನೇಕರು ಮಾಡುವ ದೊಡ್ಡ ತಪ್ಪು ಎಂದರೆ, ಒದ್ದೆಯಾದ ಕೈಯನ್ನು ತಮ್ಮ ತಲೆಯ ಮೇಲೆ ಉಜ್ಜಿಕೊಳ್ಳುವುದು. ವಿದ್ವಾಂಸರ ಪ್ರಕಾರ, ತೀರ್ಥವನ್ನು ಸೇವಿಸಿದ ನಂತರ ಕೈಯನ್ನು ತಲೆಗೆ ಉಜ್ಜಬಾರದು. ಹೀಗೆ ಮಾಡುವುದರಿಂದ ತೀರ್ಥದ ಪವಿತ್ರತೆ ಮತ್ತು ಅದರ ದೈವಿಕ ಶಕ್ತಿ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಬದಲಾಗಿ ತೀರ್ಥ ಸೇವಿಸಿದ ನಂತರ ಅಂಗೈಗಳನ್ನು ಪರಸ್ಪರ ಉಜ್ಜಿಕೊಳ್ಳಬೇಕು ಅಥವಾ ಆ ಕೈಗಳಿಂದ ಕಣ್ಣುಗಳನ್ನು ಮೃದುವಾಗಿ ಒತ್ತಿಕೊಳ್ಳಬೇಕು. ಇದು ಕಣ್ಣುಗಳಿಗೆ ತೇಜಸ್ಸನ್ನು ನೀಡುತ್ತದೆ ಎಂಬ ನಂಬಿಕೆಯಿದೆ.

ತುಳಸಿ ತೀರ್ಥದ ಮಹಿಮೆ:

ವಿಶೇಷವಾಗಿ ತುಳಸಿ ದಳಗಳನ್ನು ಹಾಕಿದ ನೀರನ್ನು ತೀರ್ಥವಾಗಿ ಸೇವಿಸುವುದರಿಂದ ಆಯುರ್ವೇದ ಮತ್ತು ಆಧ್ಯಾತ್ಮಿಕ ಎರಡೂ ದೃಷ್ಟಿಯಿಂದ ಲಾಭವಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಕ್ತ ಕುಡೀತಾಳೆ, ಮಾಟ ಮಾಡ್ತಾಳೆ’: ಕಂಗನಾ ಮೇಲೆ ಬಂದಿತ್ತು ಏನೇನೋ ಆರೋಪ – Kannada News | Kangana Ranaut talks about bad allegation made on her

ಕಂಗನಾ ರನೌತ್ (Kangana Ranaut), ಬಾಲಿವುಡ್​​ನಲ್ಲಿದ್ದರೂ ಬಾಲಿವುಡ್​​ನವರಲ್ಲ ಸ್ಟಾರ್ ನಟಿ. ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಪ್ರಮುಖರಾಗಿರುವ ಕಂಗನಾ ರನೌತ್ ನಟನೆಗೆ ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಸಂಸದೆಯೂ ಆಗಿರುವ ಕಂಗನಾ ರನೌತ್, ಹಲವು ವರ್ಷಗಳಿಂದಲೂ ಬಾಲಿವುಡ್​ ಮಂದಿಯನ್ನು, ಬಾಲಿವುಡ್​​ನ ಪದ್ಧತಿಗಳನ್ನು ಟೀಕಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕರಣ್ ಜೋಹರ್, ಮಹೇಶ್ ಭಟ್ ಇನ್ನೂ ಕೆಲವು ‘ದೊಡ್ಡವರ’ ಬಗ್ಗೆ ಬಹಿರಂಗ ಟೀಕೆಗಳನ್ನು ಮಾಡಿದ್ದಾರೆ. ಇದೀಗ ಕಂಗನಾ, ಸಂದರ್ಶನವೊಂದರಲ್ಲಿ ತಮ್ಮ ಮೇಲೆ ಬಾಲಿವುಡ್​ನ ಕೆಲವರು ಮಾಡಿದ್ದ ನೀಚ ಆರೋಪಗಳ ಬಗ್ಗೆ ಮಾತನಾಡಿದ್ದಾರೆ.

ಹಿಂದೊಮ್ಮೆ ಕಂಗನಾ ರನೌತ್ ಅವರು ನಟ ಅಧ್ಯಯನ್ ಸುಮನ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ರಾಜ್ 2’ ಸಿನಿಮಾನಲ್ಲಿ ನಟಿಸಿದ್ದರು. ಆಗ ಪರಸ್ಪರ ರಿಲೇಷನ್​​ನಲ್ಲಿದ್ದರು. ಆದರೆ ಒಂದೇ ವರ್ಷಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತು. ಆ ಸಮಯದಲ್ಲಿ ಕಂಗನಾ ರನೌತ್ ವಿರುದ್ಧ ಅಧ್ಯಯನ್, ದೈಹಿಕ ಮತ್ತು ಮಾನಸಿಕ ಹಲ್ಲೆಯ ಆರೋಪ ಮಾಡಿ ದೂರು ಸಹ ದಾಖಲಿಸಿದ್ದರು. ಈ ವಿಷಯವನ್ನು ಸಂದರ್ಶನದಲ್ಲಿ ನಟಿ ಕಂಗನಾ ರನೌತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

‘ನನ್ನ ವಿರುದ್ಧ ಆಗ ಏನೇನೋ ಆರೋಪಗಳನ್ನು ಮಾಡಲಾಗಿತ್ತು. ಇವಳು ಮಾಟಗಾತಿ, ರಾಕ್ಷಸಿ, ರಕ್ತ ಕುಡಿಯುತ್ತಾಳೆ. ಕಪ್ಪು ಬಟ್ಟೆ ಇರಿಸಿಕೊಂಡು, ಕತ್ತಲೆ ಕೋಣೆಯಲ್ಲಿ ಕುಳಿತು, ‘ಕಾಲಾ ಜಾದೂ’ (ಮಾಟ) ಮಾಡುತ್ತಾಳೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ನನ್ನ ಕರಿಯರ್ ಅನ್ನು ಮುಗಿಸಿಯೇ ಬಿಡಬೇಕು ಎಂದುಕೊಂಡು ಅವರು ಹೀಗೆಲ್ಲ ಸುದ್ದಿಗಳನ್ನು ಹಬ್ಬಿಸಿದ್ದರು’ ಎಂದು ಕಂಗನಾ ರನೌತ್ ಹೇಳಿದ್ದಾರೆ. ‘ಅವರು (ಬಾಲಿವುಡ್​ನ ಕೆಲ ಮಂದಿ) ನನ್ನ ವಿರುದ್ಧ ಇಷ್ಟೆಲ್ಲ ಮಾಡುವಾಗ ನಾನು ಏಕೆ ಅವರನ್ನು ಸುಮ್ಮನೆ ಬಿಡಬೇಕು ಎಂದು ನನಗೆ ಅನಿಸಿತು. ಹಾಗಾಗಿ ನಾನು ಅಂಥಹವರ ವಿರುದ್ಧ ನೇರವಾಗಿ ಮಾತನಾಡಲು ಆರಂಭಿಸಿದೆ’ ಎಂದಿದ್ದಾರೆ ನಟಿ ಕಂಗನಾ ರನೌತ್.

ಕಂಗನಾ ರನೌತ್, ಬಾಲಿವುಡ್​ನ ಪ್ರತಿಭಾವಂತ ನಟಿ. ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಲವು ವರ್ಷಗಳಿಂದಲೂ ಅವರು ಬಾಲಿವುಡ್ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಇದೀಗ ಅವರು ಬಿಜೆಪಿ ಪಕ್ಷದ ಸದಸ್ಯೆ ಆಗಿದ್ದು, ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆದ್ದು ಸಂಸದೆ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಿಂಡರ್ ಗಾರ್ಡನ್​ನಿಂದ ಮಗುವನ್ನು ಕರೆದುಕೊಂಡು ಬರಲು ಹೋದ ಪೋಷಕರಿಗೆ ಕಾದಿತ್ತು ಅಚ್ಚರಿ

ಬ್ರೆಜಿಲ್, ಏಪ್ರಿಲ್ 17: ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗುವಾಗ ಅಳುತ್ತಾರೆ, ಸಂಜೆ ಮನೆಗೆ ಹೋಗಲು ಪೋಷಕರು ಬಂದಾಗ ಓಡಿ ಹೋಗಿ ಅವರನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಬ್ರೆಜಿಲ್‌ನ ಈ ಕಿಂಡರ್‌ಗಾರ್ಟನ್‌ ಬಾಲಕಿಯ ಕಥೆಯೇ ಬೇರೆ. ದಿನವಿಡೀ ಶಾಲೆಯಲ್ಲಿದ್ದ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಅತೀವ ಸಂಭ್ರಮದಿಂದ ಶಾಲೆಗೆ ಬಂದಿದ್ದರು. ತರಗತಿಯಿಂದ ಹೊರಬಂದ ಪುಟ್ಟ ಹುಡುಗಿ ತನ್ನ ಹೆತ್ತವರನ್ನು ನೋಡಿ ಓಡಿ ಬಂದು ಅಪ್ಪಿಕೊಳ್ಳುತ್ತಾಳೆ ಎಂದು ಅವರು ನಿರೀಕ್ಷಿಸಿದ್ದರು.

ಆದರೆ ಅಲ್ಲಿ ನಡೆದಿದ್ದೇ ಬೇರೆ, ಆಕೆ ತನ್ನ ಪೋಷಕರನ್ನು ಕಂಡೂ ಕಾಣದಂತೆ ಅವರ ಪಕ್ಕದಲ್ಲೇ ನಡೆದು ನೇರವಾಗಿ ಹೋದಳು. ಪೋಷಕರಿಗೆ ಒಂದು ಕ್ಷಣ ದಿಗಿಲಾಯಿತು, ನಮ್ಮ ಮಗಳು ನಮ್ಮನ್ನೇ ಅಪ್ಪಿಕೊಳ್ಳದೆ ಯಾರ ಹಿಂದೆ ಹೋಗುತ್ತಿದ್ದಾಳೆ ಎಂದು ಅವರು ಕುತೂಹಲದಿಂದ ಅವಳನ್ನು ಹಿಂಬಾಲಿಸಿದರು.
ಆ ಪುಟ್ಟ ಬಾಲಕಿ ಓಡಿ ಹೋಗಿ ಅಪ್ಪಿಕೊಂಡಿದ್ದು ಶಾಲೆಯ ಸೆಕ್ಯೂರಿಟಿ ಅಥವಾ ಮಕ್ಕಳನ್ನು ಕರೆದೊಯ್ಯುವ ಸಿಬ್ಬಂದಿಯನ್ನು, ಪ್ರತಿದಿನ ಬೆಳಗ್ಗೆ ಪೋಷಕರು ಕಾರಿನಲ್ಲಿ ಕರೆತಂದಾಗ, ಈ ಸಿಬ್ಬಂದಿಯೇ ಆಕೆಯನ್ನು ಪ್ರೀತಿಯಿಂದ ಎತ್ತಿಕೊಂಡು ತರಗತಿಯವರೆಗೆ ಬಿಡುತ್ತಿದ್ದರು. ಆ ಪುಟ್ಟ ಹೃದಯದಲ್ಲಿ ಆ ವ್ಯಕ್ತಿಯ ಬಗ್ಗೆ ಎಷ್ಟು ಗಾಢವಾದ ಸ್ನೇಹ ಬೆಳೆದಿತ್ತೆಂದರೆ, ಮನೆಗೆ ಹೋಗುವ ಸಮಯದಲ್ಲೂ ಅವರನ್ನು ಬಾಲಕಿ ಮರೆತಿರಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಕಾಲಿಗೆ ಬೀಳಲು ಬಂದ್ರೆ ಹೆದರಿ ಹಿಂದಕ್ಕೆ ಓಡಿದ ಸಿಎಂ ಮಮತಾ ಬ್ಯಾನರ್ಜಿ

ಕಾಲಿಗೆ ಬೀಳಲು ಬಂದವನನ್ನು ದಾಳಿ ಮಾಡಲು ಬಂದ ಎಂದು ತಪ್ಪು ತಿಳಿದುಕೊಂಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆದರಿ ಹಿಂದಕ್ಕೆ ಓಡಿರುವ ಘಟನೆ ನಡೆದಿದೆ. ಮಮತಾ ಬ್ಯಾನರ್ಜಿ ತಪ್ಪ ಪಕ್ಷದ ಸದಸ್ಯರ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ವ್ಯಕ್ತಿಯೊಬ್ಬ ಓಡಿ ಬಂದು ಏಕಾಏಕಿ ಮಮತಾ ಕಾಲಿಗೆ ಬೀಳಲು ಮುಂದಾಗುತ್ತಾರೆ. ಆಗ ಭದ್ರತಾ ಸಿಬ್ಬಂದಿ ಆತನನ್ನು ತಡೆದರೂ ಕೂಡ ಒಮ್ಮೆಲೆ ಗಾಬರಿಗೊಂಡ ಮಮತಾ ಭಯದಿಂದ ಹಿಂದಕ್ಕೆ ಓಡುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ – Kannada News | India Continues Russia Oil Imports Despite US Sanctions for Energy Security

ನವದೆಹಲಿ, ಏಪ್ರಿಲ್ 17: ಅಮೆರಿಕದ ನಿಷೇಧ ಕ್ರಮ ಜಾರಿಯಲ್ಲಿದ್ದರೂ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ದಿ ಮಿಂಟ್​ನಲ್ಲಿ ವರದಿಯಾಗಿದೆ. ಅಧಿಕೃತ ಮೂಲಗಳು ತಿಳಿಸಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಭಾರತದ ವತಿಯಿಂದ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ಬಿಡುಗಡೆ ಆಗಿಲ್ಲ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಲಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ಸ್ವಂತ ನಿರ್ಧಾರವೇ ಹೊರತು ಇನ್ನೊಂದು ರಾಷ್ಟ್ರದ ಕೃಪೆಯಿಂದಲ್ಲ ಎಂಬರ್ಥದಲ್ಲಿ ಸರ್ಕಾರವು ಈ ಹಿಂದೆ ಹೇಳಿದ್ದಿದೆ.

ಇರಾನ್ ಯುದ್ಧ ಶುರುವಾದ ಬಳಿಕ ಗಲ್ಫ್ ರಾಷ್ಟ್ರಗಳಿಂದ ತೈಲ ಸರಬರಾಜು ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ರಷ್ಯನ್ ತೈಲ ಪೂರೈಕೆ ಅತ್ಯಗತ್ಯವೆನಿಸಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಅಮೆರಿಕ ಹಾಕಿದ್ದ ತೈಲ ನಿಷೇಧವನ್ನು ಸಡಿಲಿಸಲಾಗಿತ್ತು. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸಲು ಸಾಧ್ಯವಾಗಿತ್ತು. ಅಮೆರಿಕ ಘೋಷಿಸಿದ್ದ 30 ದಿನಗಳ ವಿನಾಯಿತಿ ಏಪ್ರಿಲ್ 11ಕ್ಕೆ ಮುಗಿದಿದೆ. ಅಮೆರಿಕವು ಈ ವಿನಾಯಿತಿಯನ್ನು ಮುಂದುವರಿಸದೇ ಇರುವುದರಿಂದ, ಅಲ್ಲಿಂದ ಮತ್ತೆ ನಿಷೇಧ ಕ್ರಮ ಜಾರಿಯಲ್ಲಿದ್ದಂತಾಗಿದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಇರಾನ್​ನ ಚಟುವಟಿಕೆಗಳಿಗೆ ಬೆಂಬಲ ನೀಡುವಂತಹ ಯಾವುದೇ ದೇಶದ ವಿರುದ್ಧ ಹೆಚ್ಚುವರಿ ನಿಷೇಧಗಳನ್ನು ಹೇರಲಾಗುತ್ತದೆ ಎಂದು ಅಮೆರಿಕದ ಟ್ರೆಷರಿ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಆದರೆ, ರಷ್ಯನ್ ತೈಲ ಖರೀದಿಯನ್ನು ನಿರ್ದಿಷ್ಟವಾಗಿ ಹೇಳಿಲ್ಲದಿರುವುದು ಅಮೆರಿಕದ ನಿಲುವು ಅಸ್ಪಷ್ಟಗೊಳ್ಳುವಂತೆ ಮಾಡಿದೆ.

ಇಂಧನ ಬಿಕ್ಕಟ್ಟಿನಿಂದ ಪಾರಾಗುವುದು ಭಾರತದ ಗುರಿ

ಆಸ್ಟ್ರೇಲಿಯಾ, ರಷ್ಯಾ ಮತ್ತು ಅಮೆರಿಕದಿಂದ ಭಾರತ ಎಂಟು ಲಕ್ಷ ಟನ್​ಗಳಷ್ಟು ಎಲ್​ಪಿಜಿ ಪೂರೈಕೆ ಭದ್ರಪಡಿಸಿಕೊಂಡಿದೆ. ರಷ್ಯಾದಿಂದ ಕಚ್ಚಾ ತೈಲ ಪೂರೈಕೆಯನ್ನು ಭಾರತ ಹೆಚ್ಚಿಸಿಕೊಂಡಿದೆ. 2023-24, 2024-25ರಲ್ಲಿ ರಷ್ಯಾದಿಂದ ಶೇ. 35ಕ್ಕೂ ಹೆಚ್ಚು ತೈಲವನ್ನು ಭಾರತ ಪಡೆದಿತ್ತು. ಚೀನಾ ನಂತರ ರಷ್ಯನ್ ತೈಲ ಅತಿಹೆಚ್ಚು ಪಡೆಯುತ್ತಿರುವ ದೇಶ ಭಾರತವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

ಭಾರತಕ್ಕೆ ಈಗ ಕಚ್ಚಾ ತೈಲಕ್ಕಿಂತ ಹೆಚ್ಚಾಗಿ ಎಲ್​ಪಿಜಿ ಸಮಸ್ಯೆ ಇದೆ. ಸದ್ಯ ಎಲ್​ಪಿಜಿಗಾಗಿ ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪಶ್ಚಿಮ ಏಷ್ಯಾ ವಾತಾವರಣ ತಿಳಿಯಾದರೆ, ಗಲ್ಫ್ ರಾಷ್ಟ್ರಗಳಿಂದ ಎಲ್​ಪಿಜಿ ಪೂರೈಕೆಯಾಗಲು ಶುರುವಾಗತೊಡಗಿದಾಗ ಸಮಸ್ಯೆ ಕಡಿಮೆ ಆಗಬಹುದು. ಇದೇ ವೇಳೆ, ಎಲ್​ಪಿಜಿ ಪೂರೈಕೆಗಾಗಿ ಭಾರತವು ಕೆಲವೇ ದೇಶಗಳ ಮೇಲೆ ಅವಲಂಬಿತವಾಗುವ ಬದಲು ಮೂಲಗಳನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PM Modi Speech: ರಾಜ್ಯಸಭೆಯಲ್ಲಿ ಹರಿವಂಶ್ ಹ್ಯಾಟ್ರಿಕ್ ಸಾಧನೆ: ಸದನಕ್ಕೆ ಹೊಸ ಕಳೆ ತಂದ ಉಪ ಸಭಾಪತಿ, ವಿಶ್ವಾಸದ ಪ್ರತೀಕ ಎಂದ ಪ್ರಧಾನಿ ಮೋದಿ – Kannada News | Modi Praises Harivansh’s Re Election, Calls It Reflection of House’s Trust

ನವದೆಹಲಿ, ಏಪ್ರಿಲ್ 17: ಭಾರತದ ಸಂಸದೀಯ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನಗಳಲ್ಲಿ ಒಂದಾದ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಗೆ ಹರಿವಂಶ್ ನಾರಾಯಣ್ ಸಿಂಗ್ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಮಾಡಿದ ಭಾಷಣವು ಕೇವಲ ಅಭಿನಂದನೆಯಲ್ಲ, ಅದು ಒಬ್ಬ ನಾಯಕನ ಕರ್ತವ್ಯ ನಿಷ್ಠೆಗೆ ಸಂದ ಗೌರವವಾಗಿತ್ತು. ಸದಸ್ಯರ ಚಪ್ಪಾಳೆ ತಟ್ಟುವ ಧ್ವನಿ ಮತ್ತು ಸಂಭ್ರಮದ ನಡುವೆ ಹರಿವಂಶ್ ನಾರಾಯಣ್ ಸಿಂಗ್ ಅವರು ಮತ್ತೊಮ್ಮೆ ರಾಜ್ಯಸಭೆಯ ಉಪ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದರು. ವಿರೋಧ ಪಕ್ಷಗಳೂ ಸೇರಿದಂತೆ ಇಡೀ ಸದನವು ಅವರನ್ನು ಅವಿರೋಧವಾಗಿ ಬೆಂಬಲಿಸಿದ್ದು ಅವರ ನಿಷ್ಪಕ್ಷಪಾತ ನಾಯಕತ್ವಕ್ಕೆ ಸಾಕ್ಷಿಯಾಯಿತು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹರಿವಂಶ್ ಅವರ ಆಯ್ಕೆಯನ್ನು ‘ಗಾಢವಾದ ನಂಬಿಕೆಯ ಸಂಕೇತ’ ಎಂದು ಬಣ್ಣಿಸಿದರು. ಒಬ್ಬ ವ್ಯಕ್ತಿ ಸತತ ಮೂರನೇ ಅವಧಿಗೆ ಆಯ್ಕೆಯಾಗುತ್ತಿದ್ದಾರೆ ಎಂದರೆ, ಅದು ಈ ಸದನದ ಪ್ರತಿಯೊಬ್ಬ ಸದಸ್ಯರಿಗೂ ನಿಮ್ಮ ಮೇಲಿರುವ ಆಳವಾದ ನಂಬಿಕೆಯನ್ನು ತೋರಿಸುತ್ತದೆ. ನಿಮ್ಮ ಅನುಭವದಿಂದ ಈ ಸದನವು ಕಳೆದ ಅವಧಿಗಳಲ್ಲಿ ಅಪಾರ ಪ್ರಯೋಜನ ಪಡೆದಿದೆ, ಎಂದು ಮೋದಿ ಶ್ಲಾಘಿಸಿದರು. ರಾಜ್ಯಸಭೆಯಂತಹ ವೈವಿಧ್ಯಮಯ ರಾಜಕೀಯ ಸಿದ್ಧಾಂತಗಳಿರುವ ಸದನದಲ್ಲಿ ಕಲಾಪವನ್ನು ಸುಗಮವಾಗಿ ನಡೆಸುವುದು ಸುಲಭದ ಮಾತಲ್ಲ.

ಈ ಬಗ್ಗೆ ಮಾತನಾಡಿದ ಪ್ರಧಾನಿ, ಹರಿವಂಶ್ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಅವರು ಸದನದ ಕಲಾಪಗಳನ್ನು ಕೇವಲ ನಿರ್ವಹಿಸುವುದಿಲ್ಲ, ಬದಲಿಗೆ ತಮ್ಮ ಜ್ಞಾನ ಮತ್ತು ಶಿಸ್ತಿನಿಂದ ಸದನವನ್ನು ಶ್ರೀಮಂತಗೊಳಿಸುತ್ತಾರೆ ಎಂದರು.

ಹರಿವಂಶ್ ಅವರ ಹಿಂದಿನ ಅನುಭವಗಳು ಸದನದ ಬಲವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹೇಳಿದ ಪ್ರಧಾನಿ, ಅವರ ನಾಯಕತ್ವದಲ್ಲಿ ಸದನದ ಘನತೆ ಹೊಸ ಎತ್ತರವನ್ನು ತಲುಪಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಮ್ಮ ಸಮತೋಲಿತ ನಿಲುವು ಮತ್ತು ಸಮರ್ಪಣಾ ಮನೋಭಾವವು ಮುಂದಿನ ದಿನಗಳಲ್ಲೂ ಸದನಕ್ಕೆ ದಾರಿದೀಪವಾಗಲಿದೆ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳ ಮೂಲಕ ಈ ಸದನವು ಪ್ರಜಾಪ್ರಭುತ್ವದ ಹೊಸ ಎತ್ತರವನ್ನು ತಲುಪುತ್ತದೆ ಎಂಬ ಖಚಿತ ಭರವಸೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version