ಮೈಖಲ್ ಜಾಕ್ಸನ್ ಬಗ್ಗೆ ಮತ್ತೊಂದು ಡಾಕ್ಯುಮೆಂಟರಿ, ಈ ಬಾರಿ ಕರಾಳ ಅಧ್ಯಾಯದ ಮೇಲೆ ಫೋಕಸ್ – Kannada News | Micheal Jackson Darkest Chapter to unvile with explosive Docu Series

ವಿಶ್ವದ ನಂಬರ್ 1 ಪಾಪ್ ಸ್ಟಾರ್, ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದ ಮೈಖಲ್ ಜಾಕ್ಸನ್ (Michael jackson) ನಿಧನ ಹೊಂದಿ 17 ವರ್ಷಗಳಾಗಿವೆ. ಆದರೆ ಇಂದಿಗೂ ಅವರ ಹಾಡುಗಳು ಟಾಪ್ ಟ್ರೆಂಡಿಂಗ್​​ನಲ್ಲಿರುತ್ತವೆ. ಇಂದಿಗೂ ಸಹ ಅವರು ವಿಶ್ವದ ಟಾಪ್ ಪಾಪ್ ಸ್ಟಾರ್​​ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಹಲವು ಏರಿತಗಳುಳ್ಳ ಜೀವನ ಮೈಖಲ್ ಜಾಕ್ಸನ್ ಅವರದ್ದಾಗಿತ್ತು. ಇತ್ತೀಚೆಗಷ್ಟೆ ಮೈಖಲ್ ಜೀವನದ ಕತೆ ಆಧರಿಸಿದ್ದ ಸಿನಿಮಾ ‘ಮೈಖಲ್’ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಯ್ತು. ಇದೀಗ ಮೈಖಲ್ ಜೀವನ ಆಧರಿಸಿ ಡಾಕ್ಯುಮೆಂಟರಿ ಒಂದು ತೆರೆಗೆ ಬರುತ್ತಿದೆ.

ಇತ್ತೀಚೆಗೆ ಬಿಡುಗಡೆ ಆದ ‘ಮೈಖಲ್’ ಸಿನಿಮಾವು ಮೈಖಲ್ ಜಾಕ್ಸನ್ ಜೀವನದ ಮೊದಲಾರ್ಧದ ಕತೆಯನ್ನು ಮಾತ್ರವೇ ಒಳಗೊಂಡಿದೆ. ಅವರ ಜೀವನದ ಕರಾಳ ಅಧ್ಯಾಯನದ ಕತೆ ಸಿನಿಮಾನಲ್ಲಿಲ್ಲ. ಆದರೆ ಇದೀಗ ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಮೈಖಲ್ ಜೀವನದ ಅತ್ಯಂತ ವಿವಾದಾತ್ಮಕ ಮತ್ತು ಕರಾಳ ಅಧ್ಯಾಯವನ್ನು ಆಧರಿಸಿದ ಮೂರು ಭಾಗಗಳ ಸ್ಫೋಟಕ ಸಾಕ್ಷ್ಯಚಿತ್ರ ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸರಣಿಗೆ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಎಂದು ಹೆಸರಿಡಲಾಗಿದ್ದು, ಇದರ ಅಧಿಕೃತ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಈ ಡಾಕ್ಯು-ಸೀರೀಸ್ ಪ್ರಮುಖವಾಗಿ 2003 ರಲ್ಲಿ ಮೈಕಲ್ ಜಾಕ್ಸನ್ ವಿರುದ್ಧ ಕೇಳಿಬಂದಿದ್ದ ಅಪ್ತಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಸುತ್ತ ಸುತ್ತುತ್ತದೆ. ಈ ಆರೋಪಗಳು ಆಗಿನ ಕಾಲದಲ್ಲಿ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ, 2005 ರಲ್ಲಿ ಮೈಕಲ್ ಜಾಕ್ಸನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿತ್ತು. ಆದರೆ ಅಷ್ಟರಲ್ಲಾಗಲೆ ಜಾಕ್ಸನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆರೋಗ್ಯ ಹದತಪ್ಪಿತ್ತು. ಜಾಕ್ಸನ್ ಅವರು ನಿರ್ದೋಷಿ ಎಂದು ಸಾಬೀತಾದರೂ, ಈ ಪ್ರಕರಣದ ಸುತ್ತಲಿನ ವಿವಾದಗಳು ಮತ್ತು ರಹಸ್ಯಗಳು ಇಂದಿಗೂ ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿ ಉಳಿದಿವೆ.

ಇದನ್ನೂ ಓದಿ:ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ?

ಮೈಖಲ್ ಕುರಿತಾದ ಹೊಸ ಡಾಕ್ಯು ಸರಣಿಯನ್ನು ‘ಕ್ಯಾಂಡಲ್ ಟ್ರೂ ಸ್ಟೋರೀಸ್’ ಸಂಸ್ಥೆ ನಿರ್ಮಿಸಿದ್ದು, ನಿಕ್ ಗ್ರೀನ್ ನಿರ್ದೇಶನ ಮಾಡಿದ್ದಾರೆ. ಅಂದು ನ್ಯಾಯಾಲಯದ ಒಳಗೆ ಕ್ಯಾಮೆರಾಗಳಿಗೆ ಅನುಮತಿ ಇಲ್ಲದ ಕಾರಣ, ಸಾರ್ವಜನಿಕರಿಗೆ ಕೇವಲ ಮಾಧ್ಯಮಗಳ ವಿಶ್ಲೇಷಣೆ ಮಾತ್ರ ತಿಳಿಯುತ್ತಿತ್ತು. ನಿಜ ಘಟನೆಗಳು, ದೃಶ್ಯಗಳು, ನಿಜ ವ್ಯಕ್ತಿಗಳ ಸಂದರ್ಶನ, ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಮಾಹಿತಿ, ಅಂದಿನ ನ್ಯಾಯಾಧೀಶರು, ಜ್ಯೂರಿ ಸದಸ್ಯರು, ವಕೀಲರು, ಕೋರ್ಟ್‌ನಲ್ಲಿದ್ದ ಪತ್ರಕರ್ತರು ಮತ್ತು ಪ್ರತ್ಯಕ್ಷದರ್ಶಿಗಳ ಹೊಸ ಸಂದರ್ಶನಗಳು ಹಾಗೂ ಆರ್ಕೈವ್ ಮಾಡಲಾದ ನೈಜ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಅಂದು ಕೋರ್ಟ್‌ ರೂಂನಲ್ಲಿ ನಿಜವಾಗಿ ಏನಾಗಿತ್ತು ಎಂಬುದರ ಹತ್ತಿರದ ಚಿತ್ರಣವನ್ನು ಈ ಸರಣಿ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.

ಮೈಕಲ್ ಜಾಕ್ಸನ್ ಅವರ ಜೀವನದ ಈ ರೋಮಾಂಚಕ ಕಥಾಹಂದರವನ್ನು ಹೊಂದಿರುವ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಸಾಕ್ಷ್ಯಚಿತ್ರ ಸರಣಿಯು ಜೂನ್ 3 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಯೋಪಿಕ್ ಸಿನಿಮಾ ಮೈಕಲ್ ಜಾಕ್ಸನ್ ಅವರ ಜೀವನದ ಕರಾಳ ಮುಖಗಳನ್ನು ಹೆಚ್ಚಾಗಿ ತೋರಿಸದ ಕಾರಣ, ಈ ಡಾಕ್ಯು-ಸೀರೀಸ್ ಆ ಕೊರತೆಯನ್ನು ನೀಗಿಸಲಿದೆ ಮತ್ತು ಸಾರ್ವಜನಿಕರಲ್ಲಿ ಮತ್ತೊಮ್ಮೆ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಧಾನಿಯಲ್ಲಿ ಹೈ ಅಲರ್ಟ್: NTA ಮತ್ತು ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ; ಪೊಲೀಸರೊಂದಿಗೆ ವಾಗ್ವಾದ! – Kannada News | NEET Scam: Youth Congress Stages Freedom Park Protest, Plans Lok Bhavan Siege.

ಬೆಂಗಳೂರು, ಮೇ.21: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಯುವ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಸಾವಿರಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ದೇಶಾದ್ಯಂತ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮಗಳು ಮತ್ತು ಹಗರಣಗಳ ಕುರಿತು ಆತಂಕಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರು ನೀಟ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಾತಾವರಣವು “ಕಾಂಗ್ರೆಸ್” ಘೋಷಣೆಗಳು ಮತ್ತು ಹಾಡುಗಳಿಂದ ತುಂಬಿತ್ತು, ಇದು ಕಾರ್ಯಕರ್ತರ ಆವೇಶವನ್ನು ಸೂಚಿಸುತ್ತಿತ್ತು. ಯುವ ಕಾಂಗ್ರೆಸ್ ಕಾರ್ಯಕರ್ತರು ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು, ಅದಕ್ಕಾಗಿ ಫ್ರೀಡಂಪಾರ್ಕ್ ಮತ್ತು ಲೋಕಭವನದ ಸುತ್ತಮುತ್ತ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಧ್ವನಿ ಎತ್ತುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿತ್ತು. ಪ್ರತಿಭಟನೆ ವೇಳೆ ಸಂಗೀತ ಮತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂದಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ? – Kannada News | Modi’s 5 Nation Tour: $40 Billion Investment & Economic Boost for India

ನವದೆಹಲಿ, ಮೇ 21: ಯುಎಇ, ನೆದರ್​ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ಈ ಐದು ದೇಶಗಳಿಗೆ ನರೇಂದ್ರ ಮೋದಿ ನೀಡಿದ ಭೇಟಿ (PM Narendra Modi’s 5 nation tour) ಬಹುತೇಕ ಫಲಪ್ರದವಾಗಿದೆ ಎಂದು ಹೇಳಲಾಗುತ್ತಿದೆ. ಈ ಐದು ದೇಶಗಳ ಪ್ರವಾಸದಿಂದ ಮೋದಿ ಅವರು ಭಾರತಕ್ಕೆ 40 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ) ಹೂಡಿಕೆ ಹರಿದುಬರಲು ನೆರವಾಗಿದ್ದಾರೆ. ಇದರಲ್ಲಿ ಹೊಸ ಹೂಡಿಕೆಗಳು ಸೇರಿವೆ. ಹಾಗೆಯೇ, ಹೆಚ್ಚುವರಿ ಹೂಡಿಕೆಗಳಿಗೂ ಕೆಲ ಕಂಪನಿಗಳು ಬದ್ಧವಾಗಿವೆ.

ಮೋದಿ ಅವರು ಹೂಡಿಕೆಗಳನ್ನು ಸೆಳೆದಿರುವುದು ಮಾತ್ರವಲ್ಲ, ಇಂಧನ ಭದ್ರತೆಗೂ ವ್ಯವಸ್ಥೆ ಬಿಗಿ ಮಾಡಿದ್ದಾರೆ. ಯುಎಇಗೆ ಮೊದಲು ತೆರಳಿದ ಪ್ರಧಾನಿಗಳು ಅಲ್ಲಿ ದೀರ್ಘಾವಧಿ ಎಲ್​ಪಿಜಿ ಪೂರೈಕೆ ಮತ್ತು ಕಚ್ಚಾ ತೈಲ ಸಂಗ್ರಹಕ್ಕೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ನೆದರ್​ಲ್ಯಾಂಡ್ಸ್​ನಲ್ಲಿ ಮೋದಿ ಅವರು ಅಲ್ಲಿಯ ಪ್ರಧಾನಿ ಜೊತೆಗೂಡಿ ವಿವಿಧ ಕ್ಷೇತ್ರಗಳಲ್ಲಿನ 50ಕ್ಕೂ ಹೆಚ್ಚು ಜಾಗತಿಕ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಕಂಪನಿಗಳ ಒಟ್ಟೂ ಮೌಲ್ಯ ಅಂದಾಜು 3 ಟ್ರಿಲಿಯನ್ ಡಾಲರ್​ನಷ್ಟು ಇದೆ. ಈ ಹೆಚ್ಚಿನ ಕಂಪನಿಗಳು ಭಾರತದಲ್ಲಿ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿವೆ. ಭಾರತದಲ್ಲಿ ಅವುಗಳು ಮಾಡಿರುವ ಹೂಡಿಕೆ ಒಟ್ಟು 180 ಬಿಲಿಯನ್ ಡಾಲರ್ ಇರಬಹುದು.

ವಿವಿಧ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು 17 ಒಪ್ಪಂದಗಳನ್ನು ಮಾಡಿಕೊಂಡಿವೆ. ಇದರಲ್ಲಿ ಪ್ರಮುಖವಾದುದು ಎಎಸ್​ಎಂಎಲ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ನಡುವಿನ ಸೆಮಿಕಂಡಕ್ಟರ್ ಡೀಲ್. ಎಎಸ್​ಎಂಎಲ್ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪಿಸಲು ಟಾಟಾ ಎಲೆಕ್ಟ್ರಾನಿಕ್ಸ್​ಗೆ ನೆರವಾಗಲಿದೆ. ಈ ಬೆಳವಣಿಗೆ ಭಾರತದ ಮಟ್ಟಿಗೆ ಐತಿಹಾಸಿಕವೆನಿಸಿದೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ 40 ಬಿಲಿಯನ್ ಡಾಲರ್ ಮೊತ್ತದಷ್ಟು ಹೂಡಿಕೆಗಳು ಭಾರತಕ್ಕೆ ಹರಿದುಬರಲು ಸಿದ್ಧವಾಗಿರುವುದು ಗಮನಾರ್ಹ. ಜಾಗತಿಕ ಹೂಡಿಕೆಗಳಿಗೆ ಭಾರತವು ಆದ್ಯತಾ ರಾಷ್ಟ್ರಗಳಲ್ಲಿ ಒಂದೆನಿಸಿರುವುದು ಗಮನಾರ್ಹ. ಹಾಗೆಯೇ, ವಿದೇಶ ಪ್ರವಾಸ ಮಾಡಬೇಡಿರೆಂದು ಸಾಮಾನ್ಯ ಜನರಿಗೆ ಹೇಳುವ ಪ್ರಧಾನಿಗಳು ತಾವೇ ಖುದ್ದಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಈ ಸಂಭಾವ್ಯ ಹೂಡಿಕೆಗಳೇ ಉತ್ತರವೆನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿ.ಕೆ. ಶಿವಕುಮಾರ್​​ – Kannada News | DyCM DK Shivakumar Visits Historic Madhyaranga Temple in Chamarajanagar’s Kollegal

ಚಾಮರಾಜನಗರ, ಮೇ 21: ಕೊಳ್ಳೇಗಾಲ ತಾಲೂಕಿನಲ್ಲಿರುವ ಐತಿಹಾಸಿಕ ಮಧ್ಯರಂಗ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ನದಿಯ ತೀರದಲ್ಲಿರುವ ಈ ಪುಣ್ಯಕ್ಷೇತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ. ರಾಜಕಾರಣದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ನಂಬಿಕೆ ಇದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಇದು ಭಕ್ತಿ ಮತ್ತು ಭಗವಂತನ ನಡುವಿನ ಸಂಬಂಧಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ – Kannada News | Man Reportedly Dragged Away by Crocodile During Funeral Rituals in Uttar Pradesh

ಮೊಸಳೆ ದಾಳಿಗೆ ಬಲಿಯಾದ ವ್ಯಕ್ತಿImage Credit source: India Today

ಲಕ್ನೋ, ಮೇ 21: ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆ(Crocodile)ಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು.

ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ನಂತರ, ಅವರು ಸ್ನಾನ ಮಾಡಲು ಸರಯು ನದಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿದ್ದಾಗ ಹಠಾತ್ ಆಗಿ ಬಂದ ದೊಡ್ಡ ಮೊಸಳೆಯೊಂದು, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ನದಿಯಲ್ಲಿ ಮೊಸಳೆಗಳ ಕಾಟ ಇರುವುದರಿಂದ ನೀರಿಗೆ ಇಳಿಯದಂತೆ ದೀಪಕ್ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅವರು ಈ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದೀಪಕ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ನದಿಯಲ್ಲಿ ಹುಡುಕಾಟ ನಡೆಸಿದರೂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಕ್ನೋದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಕರೆಯಿಸಲಾಗಿದೆ. ಇಡೀ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಯುವಕನ ದೇಹಕ್ಕಾಗಿ ನದಿಯ ದಡದಲ್ಲಿ ಕಣ್ಣೀರು ಹಾಕುತ್ತಾ ಕಾಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಹೀಗಾದ್ರೆ CSK ಪ್ಲೇಆಫ್​ಗೇರುವುದು ಖಚಿತ..!

Source link

ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್​ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು – Kannada News | Bengaluru Veg Seller Uses AI Tool for Rs 350 per Hr Extra Income & Data Collection

ಬೆಂಗಳೂರಿನ ತರಕಾರಿ ವ್ಯಾಪಾರಿ ತಲೆಯಲ್ಲಿ ಎಐ ಪರಿಕರImage Credit source: Vai.bhaaavvv Insta account

ಬೆಂಗಳೂರು, ಮೇ 21: ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬೆಳೆಯುತ್ತಾ ಹೋದಂತೆ ಬ್ರಹ್ಮರಾಕ್ಷಸನಂತೆ ಡಾಟಾ ಆಹಾರ ಬಯಸುತ್ತಲೇ ಇರುತ್ತದೆ. ಎಲ್ಲಾ ರೀತಿಯ ದತ್ತಾಂಶಗಳನ್ನು ಅದು ಬಯಸುತ್ತದೆ. ಮನುಷ್ಯರ ವರ್ತನೆ, ಮಾತುಕತೆ, ನಗರಗಳ ವಾತಾವರಣ ಇವೆಲ್ಲವೂ ತುಂಬಾ ಸೂಕ್ಷ್ಮ ರೂಪದಲ್ಲಿ ಎಐಗೆ ಫೀಡ್ ಮಾಡಲಾಗುತ್ತದೆ. ಈ ರೀತಿ ಡಾಟಾ ಕಲೆಹಾಕಲೆಂದೇ ನಾನಾ ಏಜೆನ್ಸಿಗಳಿವೆ. ಇವು ಜನಸಾಮಾನ್ಯರ ಮೂಲಕ ದತ್ತಾಂಶ ಕಲೆಹಾಕುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಬಳಕೆದಾರ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ಬೆಂಗಳೂರಿನ ಬೀದಿಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಹುಡುಗ (Street vendor) ತಲೆಗೆ ಎಐ ಪರಿಕರಣಗಳನ್ನು ಸಿಕ್ಕಿಸಿಕೊಂಡಿರುವ ದೃಶ್ಯ ಕಾಣುತ್ತದೆ. ಆ ಹುಡುಗ ತರಕಾರಿ ವ್ಯಾಪಾರ ಮಾಡಿ ಹಣ ಮಾಡುವುದರ ಜೊತೆಗೆ, ಎಐ ಪರಿಕರ ಸಿಕ್ಕಿಸಿಕೊಂಡು ಗಂಟೆಗೆ 350 ರೂ ಹೆಚ್ಚುವರಿ ಆದಾಯ ಗಳಿಸುತ್ತಾನಂತೆ.

ವೈಭವ್ ಎನ್ನುವ ಇನ್ಸ್​ಟಾ ಯೂಸರ್ ಈ ಪೋಸ್ಟ್ ಹಾಕಿದ್ದಾರೆ. ರಸ್ತೆಯಲ್ಲಿ ವಾಹನದಲ್ಲಿ ಹೋಗುವಾಗ ತಲೆಗೆ ಎಐ ಪರಿಕರವನ್ನು ಸಿಕ್ಕಿಸಿಕೊಂಡಿರುವ ತರಕಾರಿ ವ್ಯಾಪಾರಿಯೊಬ್ಬನನ್ನು ನೋಡಿದೆ ಎಂದು ವಿವರಿಸಿದ್ದಾರೆ. ಗಾಡಿ ನಿಲ್ಲಿ ಅದು ಏನೆಂದು ವಿಚಾರಿಸಿದೆ ಎಂದು ತಿಳಿಸಿರುವ ವೈಭವ್, ಆ ಯುವಕನಿಗೆ ಗಂಟೆಗೆ 350 ರೂ ಕೊಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

ಗಂಟೆಗೆ 350 ರೂ ಸಿಕ್ಕರೆ ಒಂದು ದಿನದಲ್ಲಿ 10 ಗಂಟೆಯಲ್ಲಿ ಆತ 3,500 ರೂ ಗಳಿಸುತ್ತಾನೆ. ತಿಂಗಳಿಗೆ 1,05,000 ರೂ ಆಗುತ್ತದೆ. ಅರ್ಧದಷ್ಟು ಕಾರ್ಪೊರೇಟ್ ಉದ್ಯೋಗಿಗಳ ಸಂಬಳವನ್ನು ಈತ ಮೀರಿಸುತ್ತಾನೆ ಎಂದು ವೈಭವ್ ಅವರು ಚರ್ಚೆ ಹುಟ್ಟುಹಾಕಿದ್ದಾರೆ.

ಈ ಪೋಸ್ಟ್ ಸಾಕಷ್ಟು ವೀಕ್ಷಣೆ ಪಡೆದಿದೆ. ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಇದೇ ರೀತಿಯ ಎಐ ಗ್ಯಾಜೆಟ್​ಗಳ ಸೆಟಪ್ ಅನ್ನು ತಮ್ಮ ಕಾಲೊನಿಯ ಎಲ್ಲಾ ಗೃಹಿಣಿಯರಿಗೂ ಕೊಡಲಾಗಿತ್ತು. ಅದಾದ ಬಳಿಕ ಎಲ್ಲಾ ಮನೆಗಳು ಎಂದಿಗಿಂತ ಹೆಚ್ಚು ಸ್ವಚ್ಛವಾಗತೊಡಗಿದವು. ಒಂದು ತಿಂಗಳವರೆಗೆ ನಡೆದು ಈಗ ಅದು ನಿಂತಿದೆ ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಶಾಪಿಂಗ್​ಗೆ ಅಸಿಸ್ಟೆಂಟ್​ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ

ಈ ರೀತಿಯ ಡಾಟಾ ಸಂಗ್ರಹಣೆ ನಿರಂತರವಾಗಿ ನಡೆಯುವುದಿಲ್ಲ. ಆ ಹುಡುಗ ಒಂದು ತಿಂಗಳಲ್ಲಿ ಕೆಲ ಗಂಟೆ ಮಾತ್ರ ಈ ಪರಿಕರ ಬಳಸಲು ಅವಕಾಶ ಕೊಡಲಾಗುತ್ತದೆ. ಇಡೀ ಪ್ರಾಜೆಕ್ಟ್ ಅವಧಿಯಲ್ಲಿ ಆ ಹುಡುಗ 10-20 ಗಂಟೆ ಕೆಲಸ ಮಾತ್ರವೇ ಪಡೆಯಬಹುದು ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕು ದಿನಗಳಿಂದ ವಿದ್ಯುತ್ ಕಡಿತ: ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು – Kannada News | HESCOM Faces Anger as Hubballis Gandhinagar Endures Prolonged Power Cut

ಹುಬ್ಬಳ್ಳಿ, ಮೇ.21: ನಗರದ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ಕಡಿತದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿಗೂ, ಶೌಚಾಲಯಕ್ಕೂ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಹೆಸ್ಕಾಂ (HESCOM) ಅಧಿಕಾರಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರಗಳನ್ನು ತೆರವುಗೊಳಿಸುವಲ್ಲಿ ಮತ್ತು ವಿದ್ಯುತ್ ಕಂಬಗಳನ್ನು ಸರಿಪಡಿಸುವಲ್ಲಿ ವಿಳಂಬವಾಗಿದೆ. ರಾತ್ರಿ ಹೊತ್ತು ಮನೆಯಲ್ಲಿ ಇರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maruti 800 Viral Bill: ಕೇವಲ 60,000 ರೂ.ಗೆ ಸಿಗುತ್ತಿತ್ತು ಮಾರುತಿ 800 ಕಾರು! ಹಳೇ ಬಿಲ್ ನೋಡಿ ನೆಟ್ಟಿಗರು ಶಾಕ್! – Kannada News | Maruti 800 Viral Bill: 1984 Car Price Shocks Internet, Sparks Authenticity Debate

ಮಾರುತಿ 800 ಹಳೆಯ ಬಿಲ್ ವೈರಲ್Image Credit source: instagram

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ (Maruti 800) ಕಾರಿಗೆ ಎಂದಿಗೂ ವಿಶೇಷ ಸ್ಥಾನವಿದೆ. ಮಧ್ಯಮ ವರ್ಗದ ಕುಟುಂಬಗಳ ಕಾರು ಮಾಲೀಕತ್ವದ ಕನಸನ್ನು ನನಸು ಮಾಡಿದ ಕೀರ್ತಿ ಈ ಪುಟ್ಟ ಕಾರಿಗೆ ಸಲ್ಲುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದಶಕಗಳಷ್ಟು ಹಳೆಯದಾದ ಕಾರು ಖರೀದಿಯ ರಶೀದಿಯೊಂದು (ಬಿಲ್) ಸಖತ್ ವೈರಲ್ ಆಗುತ್ತಿದ್ದು, ಅಂದಿನ ದಿನಗಳಲ್ಲಿ ವಾಹನಗಳು ಎಷ್ಟು ಅಗ್ಗವಾಗಿದ್ದವು ಎಂಬುದನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ 1984ರ ಬಿಲ್:

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ‘namma_mysuru1994’ ಎಂಬ ಖಾತೆಯಲ್ಲಿ 1984ರ ಜುಲೈ 12ರ ದಿನಾಂಕ ಹೊಂದಿರುವ ಕಾರು ಖರೀದಿಯ ರಶೀದಿಯೊಂದನ್ನು ಹಂಚಿಕೊಳ್ಳಲಾಗಿದೆ. ಈ ಬಿಲ್ ಪ್ರಕಾರ, ಮಧ್ಯಪ್ರದೇಶದ ಬಾಗನ್ ಗ್ರಾಮದ ಶಾಮ್ ರಾವ್ ಎಂಬ ಗ್ರಾಹಕರು ಆಗಿನ ಕಾಲದ ಮಾರುತಿ 800 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಅಂದಿನ ಎಕ್ಸ್ ಶೋರೂಮ್ ಬೆಲೆ ಕೇವಲ 47,500 ರೂಪಾಯಿಗಳಾಗಿತ್ತು! ಇದಕ್ಕೆ ಇನ್ಶೂರೆನ್ಸ್, ತೆರಿಗೆಗಳು ಮತ್ತು ಇತರೆ ಶುಲ್ಕಗಳನ್ನು ಸೇರಿಸಿದ ನಂತರ ಒಟ್ಟು ಆನ್ ರೋಡ್ ಬೆಲೆ ಸುಮಾರು 60,000 ರೂಪಾಯಿಗಳಾಗಿದೆ.

Maruti 800 Viral Bill

ಅಂದಿನ 60 ಸಾವಿರ ಇಂದಿನ 5-6 ಲಕ್ಷಕ್ಕೆ ಸಮಾನ:

ಈ ಬಿಲ್‌ನಲ್ಲಿರುವ ಬೆಲೆಯನ್ನು ನೋಡಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ನೆಟ್ಟಿಗರು ಗಮನಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ, 1984ರ ಕಾಲದ 60,000 ರೂಪಾಯಿಗಳು ಇಂದಿನ ಹಣದುಬ್ಬರ ಮತ್ತು ಮೌಲ್ಯದ ಲೆಕ್ಕಾಚಾರದಲ್ಲಿ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಿಗೆ ಸಮಾನವಾಗಿದೆ. ಅಂದಿನ ದಿನಗಳಲ್ಲಿ ಮಾರುತಿ 800 ಕಾರಿನಲ್ಲಿ ಕನಿಷ್ಠ ಹವಾನಿಯಂತ್ರಣ (AC) ಸೌಲಭ್ಯ ಕೂಡ ಇರುತ್ತಿರಲಿಲ್ಲ. ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಇದು ಶ್ರೀಮಂತಿಕೆ ಅಥವಾ ಅಂತಸ್ತಿನ ಸಂಕೇತವಾಗಿ ಗುರುತಿಸಲ್ಪಟ್ಟಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಹಳೆಯ ನೆನಪುಗಳ ನಡುವೆ ಬಿಲ್‌ನ ಅಸಲಿತನದ ಬಗ್ಗೆ ಸಂಶಯ:

ಈ ವೈರಲ್ ಬಿಲ್ ಅನೇಕರಲ್ಲಿ ಹಳೆಯ ದಿನಗಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದರೆ, ಇನ್ನೂ ಕೆಲವು ನೆಟ್ಟಿಗರು ಈ ಬಿಲ್‌ನ ಅಸಲಿತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಲ್‌ನಲ್ಲಿ ಬಳಕೆಯಾಗಿರುವ ಅಕ್ಷರಗಳ ಶೈಲಿ (Font) ಹಾಗೂ ಚಾಸಿಸ್ ವಿವರಗಳಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ಗಮನಿಸಿರುವ ಕೆಲವರು, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ಚಿತ್ರವನ್ನು ಪೋಸ್ಟ್ ಮಾಡಿದ ಮೂಲ ಖಾತೆಯಿಂದ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ – Kannada News | Prashanth Neel said Jr NTR is the most costliest villain in Indian Cinema history

ಸಿನಿಮಾ (Cinema) ಯಾವಾಗಲೂ ನಾಯಕ ಪ್ರಧಾನ. ನಾಯಕನ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಧಾನ್ಯತೆ ಸಿಗುವುದು ತೀರಾ ವಿರಳ. ಇದೇ ಕಾರಣಕ್ಕೆ ನಾಯಕ ನಟರಿಗೆ ಭಾರಿ ದೊಡ್ಡ ಸಂಭಾವನೆ. ಕೆಲವು ಸ್ಟಾರ್ ನಟರ ಸಂಭಾವನೆ ಇಡೀ ಸಿನಿಮಾದ ಬಜೆಟ್​ನ 60 ರಿಂದ 70% ಇರುತ್ತದೆ. ಕೆಲವೊಮ್ಮೆ ಇನ್ನೂ ಹೆಚ್ಚು. ಇತ್ತೀಚೆಗೆ ವಿಲನ್​​ಗಳನ್ನು ಸ್ಟೈಲಿಷ್ ಆಗಿ ತೋರಿಸುವುದು, ಖ್ಯಾತ ನಟರನ್ನು ವಿಲನ್​​ಗಳಾಗಿ ಹಾಕಿಕೊಳ್ಳುವ ಪದ್ಧತಿ ಹೆಚ್ಚಾಗಿದೆ. ಆದರೂ ವಿಲನ್​​ಗಳು ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಉದಾಹರಣೆ ಇಲ್ಲ. ಆದರೆ ಇದೀಗ ‘ವಿಲನ್’ ಒಬ್ಬರಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗಿದೆ. ಆದರೆ ಇಲ್ಲಿ, ‘ನಾಯಕ’ ನಟನೇ ‘ವಿಲನ್’ ಆಗಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶಿಸಿ, ಜೂ ಎನ್​​ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಟೀಸರ್ ರಿಲೀಸ್ ಆದ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದು, ಈ ಸಿನಿಮಾನಲ್ಲಿ ಜೂ ಎನ್​​ಟಿಆರ್ ‘ನಾಯಕ’ ಅಲ್ಲ ಬದಲಿಗೆ ‘ವಿಲನ್’ ಎಂದಿದ್ದಾರೆ. ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ವಿಲನ್ ಜೂ ಎನ್​​ಟಿಆರ್ ಎಂದು ಸಹ ಹೇಳಿದ್ದಾರೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ‘ಲೂಗರ್’ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾದಕ ವಸ್ತು ಸರಬರಾಜು ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳು ಪರಸ್ಪರ ಬಡಿದಾಡಿಕೊಳ್ಳುವ ಕತೆಯನ್ನು ‘ಡ್ರ್ಯಾಗನ್’ ಒಳಗೊಂಡಿದ್ದು, ‘ಲೂಗರ್’ ಸಹ ಒಬ್ಬ ಗ್ಯಾಂಗಿನ ಸದಸ್ಯನಾಗಿದ್ದು, ಕಿರಾತಕ ಗ್ಯಾಂಗ್​​​ಸ್ಟರ್​​ಗಳ ನಡುವೆ ಆತನೂ ಒಬ್ಬ ಕಿರಾತಕ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್, ಜೂ ಎನ್​​ಟಿಆರ್, ಭಾರತದ ಅತ್ಯಂತ ದುಬಾರಿ ವಿಲನ್ ಎಂದಿದ್ದಾರೆ.

ಇದನ್ನೂ ಓದಿ:‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?

ಜೂ ಎನ್​​ಟಿಆರ್ ಈ ಹಿಂದೆ ‘ಲವ-ಕುಶ’ ಸಿನಿಮಾನಲ್ಲಿ ಅಪ್ಪಟ ವಿಲನ್ ರೀತಿಯ ಪಾತ್ರದಲ್ಲಿ ನಟಿಸಿದ್ದರು. ‘ಊಸರವಳ್ಳಿ’ ಸಿನಿಮಾನಲ್ಲಿ ಮೊದಲು ವಿಲನ್ ಆಗಿದ್ದು ಬಳಿಕ ಹೀರೋ ಆಗುವ ರೀತಿಯ ಪಾತ್ರದಲ್ಲೂ ನಟಿಸಿದ್ದಾರೆ. ಆದರೆ ‘ಡ್ರ್ಯಾಗನ್’ ಸಿನಿಮಾನಲ್ಲಿ ಅಪ್ಪಟ ವಿಲನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ ಜೂ ಎನ್​​ಟಿಆರ್.

‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Thu, 21 May 26

Source link

Exit mobile version