Headlines

ಆಗಸ್ಟ್ 14ರಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ – Kannada News | Basavaraj Horatti Resigns, Saleem Ahmed Proposed as New Karnataka Council Speaker; Election on August 14

ಬೆಂಗಳೂರು, ಆ.11: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್ 14 ರಂದು ಈ ಸ್ಥಾನಕ್ಕೆ ಹೊಸ ಸಭಾಪತಿ ಆಯ್ಕೆಗೆ ಮತದಾನ ನಡೆಯಲಿದೆ. ಪ್ರಸ್ತುತ ಸಭಾಪತಿಯಾಗಿದ್ದ ಬಸವರಾಜ್ ಹೊರಟ್ಟಿ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯು ಸ್ವಯಂಪ್ರೇರಿತವಲ್ಲ, ಬದಲಿಗೆ ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಆದರೆ, ಈ ಕುರಿತು ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಪಕ್ಷದ ವತಿಯಿಂದ, ಸಲೀಮ್ ಅಹಮದ್ ಅವರ ಹೆಸರನ್ನು ವಿಧಾನ…

Read More

ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ – Kannada News | Cauvery water dispute: CWMA Rejects Karnataka’s Appeal, Orders Water Release To Tamil Nadu as per CWRC

ನವದೆಹಲಿ, (ಆಗಸ್ಟ್ 11): ತಮಿಳುನಾಡಿಗೆ 12 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಬಿಡಬೇಕು ಎಂದು ಕರ್ನಾಟಕಕ್ಕೆ (Karnataka) ಕಾವೇರಿ ನಿರ್ವಹಣಾ ಪ್ರಾಧಿಕಾರ (CWMA) ಸಹ ನಿರ್ದೇಶನ ನೀಡಿದೆ. 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮೇಲ್ಮನವಿ ಸಲ್ಲಿಸಿತ್ತು. ಆದ್ರೆ,  ಸಿಡಬ್ಲ್ಯುಆರ್‌ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ…

Read More

ದಕ್ಷಿಣ ಕನ್ನಡದಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆ: ಶೇ.84ರಷ್ಟು ಹುದ್ದೆಗಳು ಖಾಲಿ! – Kannada News | Dakshina Kannada Animal Husbandry Dept Hit Hard: 84 Percent Posts Vacant; 10 Veterinary Hospitals On Verge of Closure

ಮಂಗಳೂರು, ಆಗಸ್ಟ್​​ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಮಂಜೂರಾದ ಒಟ್ಟು ಸಿಬ್ಬಂದಿ ಹುದ್ದೆಗಳ ಪೈಕಿ ಕೇವಲ ಶೇ.16ರಷ್ಟು ಹುದ್ದೆಗಳಲ್ಲಷ್ಟೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 449 ಹುದ್ದೆಗಳು ಮಂಜೂರಾಗಿದ್ದು, 377 ಹುದ್ದೆಗಳು ಖಾಲಿ ಇವೆ.ಪಶುವೈದ್ಯಾಧಿಕಾರಿಗಳಿಗಾಗಿ ಮಂಜೂರಾಗಿರುವ 74 ಹುದ್ದೆಗಳ ಪೈಕಿ 44 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಯೇ ಇಲ್ಲದ ಕಾರಣ ಜಿಲ್ಲೆಯಲ್ಲಿ ಸುಮಾರು 10 ಪಶುವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸದ ಸ್ಥಿತಿಗೆ ತಲುಪಿದೆ. ಆಸ್ಪತ್ರೆಗಳನ್ನು ನಿರ್ವಹಣೆ…

Read More

‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರತಿ ಮನೆಯಲ್ಲೂ ಸಂಭ್ರಮಿಸಿ; ಹೊಸ ವಿಡಿಯೋ ಮೂಲಕ ಪ್ರಧಾನಿ ಮೋದಿ ಕರೆ – Kannada News | PM Narendra Modi posts new video on Instagram urges Indians to join Har Ghar Tiranga campaign

ನವದೆಹಲಿ, ಆಗಸ್ಟ್ 11: ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಪ್ರಜೆಗಳು ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಪ್ರತಿಯೊಂದು ಮನೆಯಲ್ಲೂ ಇದನ್ನು ಹಬ್ಬದಂತೆ ಸಂಭ್ರಮಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಕರೆ ನೀಡಿದ್ದಾರೆ. ಆಗಸ್ಟ್ 15ರ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. “ಬನ್ನಿ, ನಾವೆಲ್ಲರೂ ಸೇರಿ ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರತಿಯೊಂದು ಮನೆಯಲ್ಲೂ…

Read More

ಮಗುವಿನ ಜನನದ ಬಳಿಕ ಥೈರಾಯ್ಡ್ ಸಮಸ್ಯೆ ಹೆಚ್ಚಾಗಲು ಕಾರಣವೇನು? ಈ ಪರೀಕ್ಷೆ ಮಾಡಿಸಿಕೊಳ್ಳಿ – Kannada News | After Delivery, Don’t Ignore These Thyroid Symptoms: Experts Explain

ಮಗುವಿನ ಜನನದ ಬಳಿಕ ಮಹಿಳೆಯರ ದೇಹದಲ್ಲಿ ಸಾಕಷ್ಟು ಹಾರ್ಮೋನ್ ಮತ್ತು ದೈಹಿಕ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ನಿದ್ರೆ ಸರಿಯಾಗಿ ಆಗದಿರುವುದು, ಅತಿಯಾದ ಸುಸ್ತು, ಮೂಡ್ ಬದಲಾವಣೆ, ತೂಕದಲ್ಲಿ ಏರಿಳಿತ ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಆದರೆ ಇದೇ ಲಕ್ಷಣಗಳು ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆಯ ಸೂಚನೆಯೂ ಆಗಿರಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಡೆಲಿವರಿಯ ನಂತರ ಮೊದಲ ಒಂದು ವರ್ಷದೊಳಗೆ ಕೆಲ ಮಹಿಳೆಯರಲ್ಲಿ ಪ್ರಸವಾನಂತರದ ಥೈರಾಯ್ಡಿಟಿಸ್ (Postpartum Thyroiditis) ಎಂಬ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಲಕ್ಷಣಗಳು ಹೊಸ…

Read More

ಹಿರಿಯ ನಟನ ನರಿಗೆ ಹೋಲಿಸಿದ ನಟಿ ಕಂಗನಾ ರನೌತ್ – Kannada News | Kangana Ranaut compares Naseeruddin Shah with fox

ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ (Kangana Ranaut) ತಮ್ಮ ತೀಕ್ಷ್ಣ ಮಾತು ಟ್ವೀಟುಗಳಿಗಾಗಿ ಜನಪ್ರಿಯರು. ಇತ್ತೀಚೆಗಷ್ಟೆ ಅವರು ಜೆನ್-ಜಿಗಳನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಅವರು ಬಾಲಿವುಡ್​​ನ ಹಿರಿಯ ನಟರೋರ್ವರನ್ನು ನರಿಗೆ ಹೋಲಿಸಿದ್ದಾರೆ. ಕನ್ನಡದ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್​​ನ ಹಿರಿಯ ನಟ ನಸಿರುದ್ಧೀನ್ ಶಾ ಅವರ ಹೇಳಿಕೆಯೊಂದನ್ನು ಕಂಗನಾ ತೀವ್ರವಾಗಿ ಖಂಡಿಸಿದ್ದು, ನಸೀರುದ್ಧೀನ್ ಅವರನ್ನು ನರಿಗೆ ಹೋಲಿಕೆ ಮಾಡಿದ್ದಾರೆ. ಕಳೆದ ತಿಂಗಳು ದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಪ್ರಮುಖ ನಟರು…

Read More

ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು? – Kannada News | PPF Public Provident Fund investment amount, maturity period, returns and other details

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ದೀರ್ಘಾವಧಿ ಹೂಡಿಕೆ ಯೋಜನೆಗಳಲ್ಲಿ ಒಂದು. ಒಂದು ವರ್ಷಕ್ಕೆ ₹500 ನಿಂದ ಹಿಡಿದು ಗರಿಷ್ಠ ₹1.5 ಲಕ್ಷದಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ವರ್ಷದಲ್ಲಿ 12 ಕಂತುಗಳಲ್ಲಿ ಈ ಹಣ ಕಟ್ಟುವ ಅವಕಾಶ ಇರುತ್ತದೆ. ಬೇಕಾದರೆ ಒಂದೇ ಕಂತಿನಲ್ಲಿ ವರ್ಷದ ಹೂಡಿಕೆ ಮಾಡಬಹುದು. ಈ ಪಿಪಿಎಫ್​ನಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾ ಹೋದರೆ ಮೆಚ್ಯೂರಿಟಿಗೆ ಎಷ್ಟು ಹಣ ಸಿಗಬಹುದು? ಸದ್ಯ ಈ ಸ್ಕೀಮ್​ನಲ್ಲಿ ಶೇ. 7.1…

Read More

ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನ: ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ – Kannada News | IPL Star Abhishek Porel Arrested in physical harassment Case After Kolkata High Court Orders Action

ಕೋಲ್ಕತ್ತಾ, ಆ.11: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಆಡುತ್ತಿರುವ ಪಶ್ಚಿಮ ಬಂಗಾಳದ ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ (Abishek Porel) ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ನೀಡಿದ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮೊಗ್ರಾ ಠಾಣೆ ಪೊಲೀಸರು ಅಭಿಷೇಕ್ ಪೊರೆಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಜೂನ್ ತಿಂಗಳಲ್ಲಿ ಮೊಗ್ರಾ ಪೊಲೀಸ್…

Read More

ಮರೆವನ್ನು ಕಡಿಮೆ ಮಾಡಿ ಮೆದುಳಿನ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ; ಇಲ್ಲಿದೆ ತಜ್ಞರ ಸಲಹೆ – Kannada News | Brain Health: 7 Foods That May Help Keep Your Mind Sharp and Active

ಮೆದುಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಯೋಚಿಸುವುದು, ಹೊಸ ವಿಷಯಗಳನ್ನು ಕಲಿಯುವುದು, ನೆನಪಿಟ್ಟುಕೊಳ್ಳುವುದು, ಗಮನವನ್ನು ಕೇಂದ್ರೀಕರಿಸುವುದು ಸೇರಿದಂತೆ ದೈನಂದಿನ ಜೀವನದ ಹಲವು ಪ್ರಮುಖ ಕಾರ್ಯಗಳು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿವೆ. ಹೀಗಾಗಿ ದೇಹದ ಆರೋಗ್ಯದ ಜೊತೆಗೆ ಬ್ರೈನ್ ಹೆಲ್ತ್ (Brain Health) ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ನಮ್ಮ ಜೀವನಶೈಲಿ, ನಿದ್ರೆ, ವ್ಯಾಯಾಮ ಮತ್ತು ಮುಖ್ಯವಾಗಿ ಆಹಾರ ಪದ್ಧತಿ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ…

Read More

ಹಸುಗಳಿಂದ ಟ್ರಾಫಿಕ್​​ ಜಾಮ್​​ ಆಗಿದ್ದಕ್ಕೆ ಅವುಗಳ ಮಾಲೀಕನ ಮೇಲೆ FIR!: ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ – Kannada News | Bengaluru: FIR Filed Against Cow Owner After Cattle Cause Traffic Gridlock on Ring Road

ಹಸುಗಳ ಮಾಲೀಕನ ಮೇಲೆ FIR! Image Credit source: Tv9 Kannada ಬೆಂಗಳೂರು, ಆಗಸ್ಟ್​​ 11: ಬೆಂಗಳೂರು (Bengaluru) ಎಂದಾಕ್ಷಣ ಮೊದಲಿಗೆ ನೆನಪಾಗೋದೇ ನಗರದಲ್ಲಿನ ಟ್ರಾಫಿಕ್ (Traffic)​​ ಸಮಸ್ಯೆ. ವಾಹನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಬಿಎಯಿಂದ ಸಾಕಷ್ಟು ಕ್ರಮಗಳ ಹೊರತಾಗಿಯೂ ಸಂಚಾರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಈ ನಡುವೆ ಸಾರ್ವಜನಿಕರು ಹುಬ್ಬೇರಿಸುವಂತಹ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಹಸುಗಳಿಂದ ಟ್ರಾಫಿಕ್​​ ಜಾಮ್​​ ಉಂಟಾಗಿರುವ ಕಾರಣಕ್ಕೆ ಅವುಗಳ ಮಾಲೀಕನ ವಿರುದ್ಧ ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ (ಎಫ್​​ಐಆರ್​)​ ದಾಖಲಾಗಿದೆ. ಏನಿದು…

Read More