ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚುಗೆ – Kannada News | UAE’s Kannada Patashale Hails Pralhad Joshi as “Karnataka’s Modi”

ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚು

ನವದೆಹಲಿ, ಜನವರಿ 14: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿ ತೋರುವಲ್ಲಿ ‘ ಕರ್ನಾಟಕದ ಮೋದಿ’ ಎಂದು UAE ನಲ್ಲಿರುವ ‘ಕನ್ನಡ ಪಾಠಶಾಲೆ’ಯ ಸಂಚಾಲಕ ಶಶಿಧರ್ ನಾಗರಾಜಪ್ಪ ಬಣ್ಣಿಸಿದ್ದಾರೆ. ಯುಎಇನಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕಲ್ಯಾಣ ಕಾರ್ಯಕ್ಕೆ ಮಿಸಲಾದಂತೆ, ಕರ್ನಾಟಕದಲ್ಲಿ ಪ್ರಲ್ಹಾದ ಜೋಶಿ ಅವರು ಕನ್ನಡಿಗರ ಪಾಲಿನ ಮೋದಿ ಆಗಿದ್ದಾರೆ ಎಂದು ಹೊಗಳಿದರು.

ಅನಿವಾಸಿ ಭಾರತೀಯರಿಗೆ ಸ್ಫೂರ್ತಿ

ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿಯ ವಿಷಯದಲ್ಲಿ ‘ಕರ್ನಾಟಕದ ಮೋದಿ’ ಎಂದೇ ಗುರುತಿಸಿಕೊಳ್ಳುವಂತಹ ದಕ್ಷ ನಾಯಕರಾಗಿದ್ದಾರೆ ಸಚಿವ ಪ್ರಲ್ಹಾದ ಜೋಶಿ ಅವರೆಂದು ಅಭಿಮಾನ ವ್ಯಕ್ತಪಡಿಸಿದ ಶಶಿಧರ್, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯವೈಖರಿ ಅಪ್ರತಿಮವಾದದ್ದು. ಸಾಗರೋತ್ತರ ಕನ್ನಡಿಗರ ಮತ್ತು ಅನಿವಾಸಿ ಭಾರತೀಯರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುವ ಸಹೃದಯಿ ಎಂದು ಬಣ್ಣಿಸಿದರು. ಇದೇ ವೇಳೆ ವಿದೇಶದಲ್ಲಿ ಕನ್ನಡ ಪಸರಿಸುವ ಕೈಂಕರ್ಯದಲ್ಲಿ ಅಭೂತಪೂರ್ವ ಪ್ರಯತ್ನ ನಡೆಸಿದ ಯುಎಇ ಕನ್ನಡ ಪಾಠಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಶಿಧರ್ ಹೇಳುವಂತೆ, ಯು.ಎ.ಇ ನಲ್ಲಿ ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಹಮ್ಮಿಕೊಂಡಿರುವ ‘ಕನ್ನಡ ಪಾಠಶಾಲೆ’ಯಂತಹ ಪ್ರಯತ್ನಗಳಿಗೆ ಸಚಿವ ಜೋಶಿ ಅವರ ಬೆಂಬಲ, ಮಾರ್ಗದರ್ಶನ ನಮಗೆಲ್ಲಾ ಸ್ಫೂರ್ತಿದಾಯಕ. ಕೇಂದ್ರ ಸಚಿವರಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಅವರ ಔದಾರ್ಯದ ಗುಣ ನಿಜಕ್ಕೂ ಶ್ಲಾಘನೀಯ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಲ್ಹಾದ ಜೋಶಿ ಅವರ ದೂರದೃಷ್ಟಿ ಮತ್ತು ಕಾಳಜಿ ನಮಗೆ ಮತ್ತಷ್ಟು ಶಕ್ತಿ ನೀಡಿದೆ.

ಕನ್ನಡ – ಕನ್ನಡಿಗರ ಹಿರಿಮೆಯನ್ನು ಹೊಗಳಿದ ಜೋಶಿ

ಸಮಾರಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕನ್ನಡ ಭಾಷೆ- ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಮೆರೆಯುತ್ತ, ವಿದೇಶಿ ನೆಲದಲ್ಲಿ ಕನ್ನಡ ಭಾಷಿಕರನ್ನು ಒಗ್ಗೂಡಿಸಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯುಎಇ ಕನ್ನಡ ಪಾಠಶಾಲೆ ಕೈಂಕರ್ಯಕ್ಕೆ ಅಭಿಮಾನ ವ್ಯಕ್ತಪಡಿಸಿದರು. ಯುಎಇಯಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ಪಾಠಶಾಲೆಯನ್ನು ಆರಂಭಿಸಿ, ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತ ಹೊರನಾಡ ಕನ್ನಡಿಗರಿಗೆ ಸೂರ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿ ಕನ್ನಡ – ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸ್ಮರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ – Kannada News | What Era Does the Lakkundi Treasure Belong To? Mystery Finally Revealed

ಗದಗ, ಜನವರಿ 14: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ ಸುಮಾರು 300 ವರ್ಷಗಳಿಗಿಂತಲೂ ಹಳೆಯದ್ದು ಎಂಬುದು ಗೊತ್ತಾಗಿದೆ. ಜಿಲ್ಲಾಧಿಕಾರಿಗಳ ಹೇಳಿಕೆಗಳ ಪ್ರಕಾರ, ಪತ್ತೆಯಾದ ಆಭರಣಗಳು 300 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದು, ಅಂದಿನ ಕಾಲದ ಮೂರು-ನಾಲ್ಕು ರಾಜಮನೆತನಗಳ ಆಳ್ವಿಕೆಗೆ ಸಂಬಂಧಿಸಿರಬಹುದು. ಪತ್ತೆಯಾದ ಆಭರಣಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳನ್ನು ಯಾರೋ ದಷ್ಟಪುಷ್ಟವಾಗಿರುವ ಶ್ರೀಮಂತ ವ್ಯಕ್ತಿಗಳು ಧರಿಸಿರಬೇಕು ಎಂದು ಜಿಲ್ಲಾಧಿಕಾರಿಗಳು ಅಂದಾಜಿಸಿದ್ದಾರೆ. ಈ ನಿಧಿ ಯಾರಿಗೆ ಸೇರಿತ್ತು ಎಂಬುದರ ಕುರಿತು ವರದಿ ಬರಲು ಇನ್ನೂ ಮೂರು ದಿನಗಳು ಬೇಕಾಗಬಹುದು. ವಿಶೇಷವಾಗಿ, ಆಭರಣಗಳ ಮೇಲಿನ ವರ್ಕ್‍ಮನ್‍ಶಿಪ್ (ಕರಕುಶಲತೆ) ಗಮನ ಸೆಳೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ – Kannada News | Congress State Coordinator Threatens Shidlaghatta Municipal Commissioner with Assault and Arson

ರಾಜೀವ್ ಗೌಡ ಹಾಗೂ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ

ಚಿಕ್ಕಬಳ್ಳಾಪುರ, ಜನವರಿ 14: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡ ಅವಾಚ್ಯ ಹಾಗೂ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಡು ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕೋಪಗೊಂಡು, ದೂರವಾಣಿ ಕರೆ ಮೂಲಕ ಅವ್ಯಾಚ್ಚ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿತ ರಾಜೀವ್ ಗೌಡ ಅವರು ಕೆಪಿಸಿಸಿ ರಾಜ್ಯ ಸಂಯೋಜಕರಾಗಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ದೂರವಾಣಿ ಕರೆ ವೇಳೆ ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ದಂಗೆ ಮಾಡಿಸುತ್ತೇನೆ’ ಎಂದು ಗಂಭೀರ ಬೆದರಿಕೆ ಹಾಕಲಾಗಿದೆ ಎಂದು ಪೌರಾಯುಕ್ತೆ ಅಮೃತಾ ಗೌಡ ದೂರಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ಮೇಲೂ ಅವ್ಯಾಚ್ಚ ಹಾಗೂ ಅಶ್ಲಿಲ ಪದಗಳಿಂದ ನಿಂದನೆ ನಡೆದಿದ್ದು, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೂ ಅವಮಾನಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಈ ಘಟನೆಯಿಂದ ಶಿಡ್ಲಘಟ್ಟ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಯಭೀತಗೊಂಡಿದ್ದು, ಸಾರ್ವಜನಿಕ ಸೇವೆ ನಿರ್ವಹಿಸುವ ಅಧಿಕಾರಿಗಳಿಗೆ ಈ ರೀತಿಯ ಬೆದರಿಕೆಗಳು ಅಸಹ್ಯಕರವಾಗಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:02 am, Wed, 14 January 26

Source link

Video: ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ – Kannada News | Traffic Check Turns Tragic as Speeding Biker Mows Down Home Guard in Hyderabad

ಹೈದರಾಬಾದ್, ಜನವರಿ 14: ತೆಲಂಗಾಣದ ಹೈದರಾಬಾದ್‌ನಲ್ಲಿ ಮಂಗಳವಾರ ದಿನನಿತ್ಯದ ಸಂಚಾರ ತಪಾಸಣೆಯ ಸಮಯದಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡಿದ್ದು,ಆತನನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗಾಯಗೊಂಡ ಗೃಹರಕ್ಷಕ ದಳದ ಸಿಬ್ಬಂದಿಯನ್ನು 40 ವರ್ಷದ ಜಂಗಯ್ಯ ಎಂದು ಗುರುತಿಸಲಾಗಿದೆ. ಫಲಕ್ನುಮಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಚೆಕ್ ಪೋಸ್ಟ್ ಸ್ಥಾಪಿಸಲು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದಾಗ ಈ ಘಟನೆ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಳ್ಳಾರಿ ಗಲಭೆಗೆ ಅಮಿತ್ ಶಾ ಕಾರಣವಾ? ಕೆಪಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು – Kannada News | Bellary Riots: BJP’s Srivatsa Files DGP Complaint Against M. Lakshman for False Claims**

ಬಳ್ಳಾರಿ, .14: ಜಿಲ್ಲೆಯ ಗಲಭೆಗೆ ಅಮಿತ್ಶಾ (Amit Shah) ಕಾರಣ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿರುವ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ಶಾಸಕ ಶ್ರೀವತ್ಸ ದೂರು ನೀಡಿದ್ದಾರೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಬಳ್ಳಾರಿ ಗಲಾಟೆಗೆ ಅಮಿತ್ ಶಾ ಕಾರಣ ಎಂದು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಹೆಣ ಬೀಳಿಸಿ ರಾಜಕಾರಣ ಮಾಡಿ ಎಂದು ಅಮಿತ್ ಶಾ ವಿ.ಸೋಮಣ್ಣ ಮೂಲಕ ಜರ್ನಾದನ ರೆಡ್ಡಿ, ರಾಮುಲುಗೆ ಸಂದೇಶ ಕೊಟ್ಟಿದ್ದಾರೆ ವಿ.ಸೋಮಣ್ಣ ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಲ್ಲವೂ ಗೊತ್ತಾಗತ್ತೆ ಅಂತ ಲಕ್ಷ್ಮಣ್ ಸುಳ್ಳು ಆರೋಪವನ್ನು ಮಾಡಿದ್ದಾರೆ. ಇದೆಲ್ಲವೂ ಸುಳ್ಳು ಹಾಗೂ ಸಮಾಜದಲ್ಲಿ ಶಾಂತಿ ಕಾದಾಡುವ ಹೇಳಿಕೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯದ ಪೊಲೀಸ್​​​ ನಿರ್ದೇಶಕ ಡಾ. ಎಂ. . ಸಲೀಂ ಅವರನ್ನು ಭೇಟಿ ಮಾಡಿದ್ದೇವೆ. ಖಂಡಿತ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಸಾರ್ವಜನಿಕರಲ್ಲಿ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುವ ಸುಳ್ಳು ಹೇಳಿಕೆಯನ್ನು ನೀಡುವುದು ತಪ್ಪು, ಅದು ಕೂಡ ಒಳ್ಳೆಯ ಸ್ಥಾನಮಾನದಲ್ಲಿರುವ ವ್ಯಕ್ತಿಗಳೇ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಎಂ. ಲಕ್ಷ್ಮಣ್ ಹೇಳಿದ್ದೇನು?

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ. ಲಕ್ಷ್ಮಣ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚೋದನೆಯಿಂದ ಬಳ್ಳಾರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಅಮಿತ್ಶಾ ಹೊತ್ತಿದ್ದಾರೆ. ಸಚಿವ ಸೋಮಣ್ಣ ಅವರನ್ನು ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿದರೆ, ಬಗ್ಗೆ ಖಂಡಿತ ಸದ್ಯದಲೇ ಎಲ್ಲರಿಗೂ ತಿಳಿಯುತ್ತದೆ. “ಕೇಂದ್ರ ಸಚಿವ ಸೋಮಣ್ಣ ಬಳ್ಳಾರಿಗೆ ಭೇಟಿ ನೀಡಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕರ್ನಾಟಕದ ಮಾಜಿ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚೆ ನಡೆಸಿದ ನಂತರ ಹಿಂಸಾಚಾರ ಸಂಭವಿಸಿದೆ. ಪತ್ರಿಕಾ ಸಭೆಗಳನ್ನು ನಡೆಸಿ ನಿಷ್ಪ್ರಯೋಜಕವಾಗಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಒಂದು ದೇಹವನ್ನು ಉರುಳಿಸಿ ರಾಜಕೀಯ ಮಾಡಿ ಎಂಬಂತಹ ಹೇಳಿಕೆಗಳನ್ನು ಕೇಂದ್ರ ಸಚಿವ ಸೋಮಣ್ಣ ನೀಡಿದ್ದಾರೆ. ಹೇಳಿಕೆಯಿಂದಲ್ಲೇ ಗೊತ್ತಾಗುತ್ತದೆ ಕೇಂದ್ರ ಸಚಿವ ಸೋಮಣ್ಣ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಗೃಹ ಸಚಿವ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಎಂ. ಲಕ್ಷ್ಮಣ್ ಹೇಳಿಕೆಗೆ ಬಿಪಿಜೆ ಅಕ್ರೋಶ:

ಕಾಂಗ್ರೆಸ್ ನಾಯಕ ಲಕ್ಷ್ಮಣ್ ತಮ್ಮ ಹೇಳಿಕೆಯಲ್ಲಿ ಕೇಂದ್ರ ಗೃಹ ಸಚಿವ ಶಾ ಮತ್ತು ಕೇಂದ್ರ ಸಚಿವ ಸೋಮಣ್ಣ ಅವರನ್ನು ನೇರವಾಗಿ ಹೆಸರಿಸಿ, ಯಾವುದೇ ದಾಖಲೆಗಳು, ಪುರಾವೆಗಳು ಅಥವಾ ಆಧಾರಗಳಿಲ್ಲದೆ “ಒಂದು ದೇಹ ಬೀಳಬೇಕು ಮತ್ತು ಅದರ ಮೇಲೆ ರಾಜಕೀಯ ಮಾಡಬೇಕು” ಎಂಬಂತಹ ಅತ್ಯಂತ ಗಂಭೀರ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳು ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಅಶಾಂತಿಯನ್ನು ಉಂಟುಮಾಡುತ್ತವೆ. ಸಾರ್ವಜನಿಕರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ದುರುದ್ದೇಶಪೂರಿತ ಉದ್ದೇಶದಿಂದ, ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ಆಡಳಿತ ಪಕ್ಷದ (ಕಾಂಗ್ರೆಸ್) ಅಧಿಕೃತ ವಕ್ತಾರರು ಕೇಂದ್ರ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಹರಡುವ ಮೂಲಕ ಜನರನ್ನು ಪ್ರಚೋದಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪದೇ ಪದೇ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ, ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಮತ್ತು ಸಾರ್ವಜನಿಕರು ಹಾಗೂ ವಿವಿಧ ಮಾಧ್ಯಮ ವೇದಿಕೆಗಳ ಮುಂದೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಅವರಿಗೆ ವಿನಾಯಿತಿ ನೀಡುವುದು ಮತ್ತು ಅವರ ಇಂತಹ ಮಾತುಗಳನ್ನು ನಿಯಂತ್ರಣ ಮಾಡಿದ್ದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅವರ ವಿರುದ್ಧ ಈಗಾಗಲೇ ಹಲವಾರು ಮಾನನಷ್ಟ ಪ್ರಕರಣಗಳು ದಾಖಲಾಗಿವೆ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಇದರ ಹೊರತಾಗಿಯೂ, ಅವರು ಮಾತನಾಡಲು ಸರ್ಕಾರವೇ ಅವಕಾಶ ನೀಡಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು. ಕಾಂಗ್ರೆಸ್ ನಾಯಕ ಲಕ್ಷ್ಮಣ್ ನೀಡಿದ ಹೇಳಿಕೆಯೂ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 125, 351 ಮತ್ತು 353 ರ ಅಡಿಯಲ್ಲಿ ಶಿಕ್ಷಾರ್ಹ ಗಂಭೀರ ಕ್ರಿಮಿನಲ್ ಅಪರಾಧವಾಗಿದೆ ಹೇಳಿದ್ದಾರೆ.

ಗಲಭೆ ಪ್ರಕರಣ ಚುರುಕುಗೊಳಿಸಿದ CID:

ಈಗಾಗಲೇ ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡಿರುವ ಸಿಐಡಿ, ತನ್ನ ತನಿಖೆಗೆ ವೇಗ ನೀಡಿದೆ. ಘಟನಾ ಸ್ಥಳಕ್ಕೆ CID ADGP ಬಿಕೆ ಸಿಂಗ್ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಮೂಲ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಪೊಲೀಸರು ತಾವು ನಡೆಸಿದ ತನಿಖೆಯ ದಾಖಲೆಗಳನ್ನು ಕೂಡ ನೀಡಿದ್ದಾರೆ. ಜತೆಗೆ ವಿಡಿಯೋ ಸಾಕ್ಷಗಳ ಆಧಾರಿತವಾಗಿ ವಿಚಾರಣೆ ಕರೆಯಲು ಸಿದ್ದತೆಗಳನ್ನು ನಡೆಸಲು ಮುಂದಾಗಿದ್ದಾರೆ. ಇದು ರಾಜಕೀಯ ಪ್ರೇರೆಪಿತ ಘಟನೆ ಆಗಿರುವ ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್​​ ನಾಯಕರಿಗೆ ನೋಟಿಸ್​​ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನೆ ಬಳಿಕ ನಾಪತ್ತೆಯಾದವರ ಜನರ ಮಾಹಿತಿಯನ್ನು ಕೂಡ ADGP ಬಿಕೆ ಸಿಂಗ್ ಕೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 am, Wed, 14 January 26

Source link

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಆಟಗಾರರಿಗೆ ವೀಸಾ ನಿರಾಕರಣೆ – Kannada News | T20 World Cup 2026: India denied Visas to Pakistan born Players

ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದೆ. ಈ ತಂಡಗಳಲ್ಲಿ ಕೆಲ ಟೀಮ್​ಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು.

ಭಾರತದಲ್ಲಿ ನಡೆಯಲಿರುವ ಟಿ20 ಪಂದ್ಯಗಳಿಗೆ ಯುಎಸ್​ಎ ಆಟಗಾರರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ನಾಲ್ವರು ಪಾಕಿಸ್ತಾನ್ ಮೂಲದ ಅಮರಿಕನ್ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಪಾಕಿಸ್ತಾನ್ ಮೂಲದ ಯುಎಸ್​ಎ ವೇಗಿ ಅಲಿ ಖಾನ್ ಭಾರತಕ್ಕೆ ಪ್ರಯಾಣಿಸಲು ವೀಸಾ ನಿರಾಕರಿಸುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.

ಸಂಕಷ್ಟದಲ್ಲಿ 15 ಕ್ಕೂ ಹೆಚ್ಚು ಆಟಗಾರರು:

ಟಿ20 ವಿಶ್ವಕಪ್​​ನಲ್ಲಿ ಭಾಗವಹಿಸಲಿರುವ ಹಲವು ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ. ಅದರಲ್ಲೂ ಯುಎಇ ತಂಡದಲ್ಲಿರುವ ಬಹುತೇಕರು ಪಾಕಿಸ್ತಾನ್ ಮೂಲದವರು. ಯುಎಇ ತಂಡದ ನಾಯಕ ಮುಹಮ್ಮದ್ ವಾಸಿಮ್ ಸೇರಿದಂತೆ 7 ಆಟಗಾರರು ಪಾಕಿಸ್ತಾನದಲ್ಲಿ ಜನಿಸಿದವರು. ಹೀಗಾಗಿ ವೀಸಾ ನಿರಾಕರಣೆಯಿಂದ ಯುಎಇ ತಂಡವು ಹೆಚ್ಚಿನ ತೊಂದರೆಯನ್ನು ಎದುರಿಸಲಿದೆ.

ಯುಎಇ ಜೊತೆಗೆ, ಇಂಗ್ಲೆಂಡ್, ಒಮಾನ್, ಇಟಲಿ, ಕೆನಡಾ, ಝಿಂಬಾಬ್ವೆ ಮತ್ತು ನೆದರ್‌ಲೆಂಡ್ಸ್​ ತಂಡಗಳಲ್ಲೂ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ.  ಅಂದರೆ 15 ಕ್ಕೂ ಹೆಚ್ಚು ಪಾಕಿಸ್ತಾನ್ ಮೂಲದ ಆಟಗಾರರು  ಭಾರತಕ್ಕೆ ವೀಸಾ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪರಿಣಾಮ, ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.

ಐಸಿಸಿಯ ಸಹಾಯ ಕೇಳಿದ ಮಂಡಳಿಗಳು:

ಭಾರತದ ವೀಸಾ ಕಾನೂನುಗಳಿಂದಾಗಿ ಬೆದರಿಕೆಗಳನ್ನು ಎದುರಿಸುತ್ತಿರುವ ಕ್ರಿಕೆಟ್ ಮಂಡಳಿಗಳು ಇದೀಗ ಐಸಿಸಿಯ ಸಹಾಯವನ್ನು ಕೋರಿವೆ. ಈ ಎಲ್ಲಾ ತಂಡಗಳ ಆಟಗಾರರಿಗೆ ವೀಸಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಆದರೆ ಉನ್ನತ ಮಟ್ಟದ ಹಸ್ತಕ್ಷೇಪವಿಲ್ಲದೆ ಸಕಾಲಿಕ ಅನುಮೋದನೆ ಅಸಂಭವವಾಗಿದೆ.

ಇದನ್ನೂ ಓದಿ: ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB

ಸಕಾಲಿಕ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಹಲವಾರು ಪ್ರಮುಖ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಪಂದ್ಯಾವಳಿಯ  ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರಳವಾಗಿ ಹೇಳುವುದಾದರೆ, ಭಾರತದ ವೀಸಾ ಕಾನೂನು ಇದೀಗ ಐಸಿಸಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಕೂಡ ಅನಿವಾರ್ಯವಾಗಿದೆ.

Source link

Optical Illusion: ಈ ಕಾಡಿನಲ್ಲಿ ಮರೆ ಮಾಡಲಾಗಿರುವ ಛತ್ರಿಯನ್ನು ಹುಡುಕಬಲ್ಲಿರಾ – Kannada News | Optical Illusion: Can you find the umbrella in this forest in just 7 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ನೋಡುವುದಕ್ಕೆ ಸುಲಭದಾಯಕವಾಗಿ ಕಂಡರೂ ಈ ಒಗಟಿನ ಆಟಗಳು ಟ್ರಿಕ್ಕಿಯಾಗಿರುತ್ತದೆ. ಆದರೆ ಈ ಕಾಡಿನಲ್ಲಿ ಛತ್ರಿ ಎಲ್ಲಿದೆ ಎಂಬುವುದನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಸವಾಲು. ಆದರೆ ನೀವು ಕೇವಲ ಏಳು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಬೇಕು.

ಈ ಚಿತ್ರ ನೋಡಿದಾಗ ನಿಮಗೆ ಏನು ಕಾಣಿಸುತ್ತದೆ?

ಈ ಇಲ್ಯೂಷನ್ ಚಿತ್ರವು ಕಠಿಣ ಸವಾಲಿನದ್ದಾಗಿದೆ. ಹಚ್ಚ ಹಸಿರಿನಿಂದ ಮರ ಗಿಡಗಳಿಂದ ಆವೃತವಾದ ಕಾಡನ್ನು ನೀವಿಲ್ಲಿ ಕಾಣಬಹುದು. ಮೂರು ಮಕ್ಕಳು ಕಾಡಿನಲ್ಲಿ ಆಟವಾಡುತ್ತಿದ್ದಾರೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳಿರುವುದನ್ನು ಕಾಣಬಹುದು. ಆದರೆ ಈ ಕಾಡಿನಲ್ಲಿ ಒಂದು ಛತ್ರಿಯೂ ಇದೆ. ಅದನ್ನು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಿದ್ರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ

ಛತ್ರಿ ನಿಮ್ಮ ಕಣ್ಣಿಗೆ ಕಾಣಿಸಿತೇ?

ಒಗಟಿನ ಚಿತ್ರಗಳನ್ನು ಬಿಡಿಸುವುದೇ ಸವಾಲುದಾಯಕವಾಗಿದ್ದು, ಕೆಲವೇ ಜನರು ಈ ಒಗಟನ್ನು 7 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಗಿದೆ. ನೀವು ಅವರಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ಅಭಿನಂದನೆಗಳು. ಆದರೆ ಛತ್ರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಎಂದಾದರೆ ಸೋತೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಫೋಟೋ ನೋಡಿ.. ಕಾಡಿನಲ್ಲಿರುವ ಛತ್ರಿಯೂ ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:05 am, Wed, 14 January 26

Source link

ಎರಡೇ ದಿನಕ್ಕೆ 100 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ; ದೊಡ್ಡ ಕಂಬ್ಯಾಕ್ – Kannada News | Megastar Chiranjeevi’s Mana Shankara Varaprasad Garu: 100 Cr Box Office Blockbuster

ಮೆಗಾಸ್ಟಾರ್ ಚಿರಂಜೀವಿ ಅವರ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವು ಅಭೂತಪೂರ್ವ ಯಶಸ್ಸನ್ನು ಗಳಿಸಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಜನವರಿ 12 ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ಈ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಸಾಧನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ. ಈ ಚಿತ್ರ ಮೊದಲ ಎರಡು ದಿನದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರಕ್ಕೆ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಚಿಕ್ಕವರು ಮತ್ತು ಹಿರಿಯರು ಎಲ್ಲರೂ ಈ ಚಿತ್ರವನ್ನು ಅಪಾರವಾಗಿ ಆನಂದಿಸುತ್ತಿದ್ದಾರೆ. ಮೊದಲ ದಿನವೇ ಈ ಚಿತ್ರ ಅದ್ಭುತ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಬಿಡುಗಡೆಯಾದ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ಒಟ್ಟು 84 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಮತ್ತು ಮೊದಲ ದಿನದ ಕಲೆಕ್ಷನ್ ಸೇರಿದಂತೆ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರ ಒಟ್ಟು 84 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಇನ್ನು, ಎರಡನೇ ದಿನ ಸಿನಿಮಾ 19.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 100 ಕೊಟಿ ರೂಪಾಯಿ ದಾಟಿದೆ. ಇದು ಸಿನಿಮಾದ ಸಾಧನೆ ಎಂದೇ ಹೇಳಬಹುದು. ಚಿರಂಜೀವಿ ಅವರು ಹಲವು ವರ್ಷಗಳ ಬಳಿಕ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಗೆದ್ದ ಚಿರಂಜೀವಿ: ‘ಶಂಕರ ವರ ಪ್ರಸಾದ್’ ಗಳಿಸಿದ್ದೆಷ್ಟು? 

ಮೆಗಾಸ್ಟಾರ್ ಅವರ ಅಭಿನಯ, ಡ್ಯಾನ್ಸ್, ನಿರ್ದೇಶಕ ಅನಿಲ್ ರವಿಪುಡಿ ಅವರ ಕೌಟುಂಬಿಕ ಮನರಂಜನೆ, ವೆಂಕಿ ಅವರ ಅತಿಥಿ ಪಾತ್ರ, ನಯನತಾರಾ ಅವರ ಉಪಸ್ಥಿತಿ, ಸಾಂಗ್ಸ್ ಸೇರಿದಂತೆ ಈ ಚಿತ್ರದಲ್ಲಿ ಹಲವು ಸಕಾರಾತ್ಮಕ ಅಂಶಗಳಿವೆ. ಅದರೊಂದಿಗೆ, ಚಿತ್ರವು ಬ್ಲಾಕ್ಬಸ್ಟರ್ ಟಾಕ್ ಆಗಿದೆ. ಅಲ್ಲದೆ, ಇನ್ನೂ ಅನೇಕ ಸೆಲೆಬ್ರಿಟಿಗಳು ಚಿತ್ರದಲ್ಲಿದ್ದಾರೆ. ಚಿತ್ರವು ಸಂಕ್ರಾಂತಿಗೆ ಹಿಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Namma Metro: ಕಾರ್ಡ್ ಬೇಡ, ಡೆಪಾಸಿಟ್ ಬೇಡ! ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ – Kannada News | BMRCL Launches Mobile QR Passes for Namma Metro: Unlimited Digital Travel Now

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ

ಬೆಂಗಳೂರು, ಜನವರಿ 14: ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಂಗಳವಾರ ಮಹತ್ವದ ಘೋಷಣೆ ಮಾಡಿದೆ. ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಸಲುವಾಗಿ BMRCL ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್‌ಗಳನ್ನು ಪರಿಚಯಿಸಿದೆ. ಒಂದು, ಮೂರು ಹಾಗೂ ಐದು ದಿನಗಳ ಕಾಲ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುವ ಈ ಹೊಸ ಪಾಸ್‌ಗಳು ಗುರುವಾರದಿಂದ (ಜ.15) ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್​ನಲ್ಲಿ ಲಭ್ಯವಾಗಲಿವೆ.

ಯಾವುದೇ ಡೆಪಾಸಿಟ್ ಇಲ್ಲದ ಡಿಜಿಟಲ್ ಪಾಸ್

ಈವರೆಗೆ ಇಂತಹ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಕೇವಲ ಕಾನ್ಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್ (CSC) ರೂಪದಲ್ಲಿ ಮಾತ್ರ ನೀಡಲಾಗುತ್ತಿದ್ದು, ಅದಕ್ಕಾಗಿ ಪ್ರಯಾಣಿಕರು ರೂ.50 ಭದ್ರತಾ ಠೇವಣಿ ಪಾವತಿಸಬೇಕಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಪಾಸ್ ಪರಿಚಯದೊಂದಿಗೆ ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ, ಸಂಪೂರ್ಣ ಡಿಜಿಟಲ್ ಮಾಧ್ಯಮದ ಮೂಲಕ ಪಾಸ್ ಪಡೆಯಬಹುದಾಗಿದೆ.

ಪ್ರಯಾಣಿಕರು ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಿ, ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ನಿಲ್ದಾಣಗಳ ಸ್ವಯಂಚಾಲಿತ ಶುಲ್ಕ ಸಂಗ್ರಹಣಾ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಮತ್ತು ನಿರ್ಗಮನ ಎರಡಕ್ಕೂ ಈ ಕ್ಯೂಆರ್ ಬಳಸಬಹುದು. ಇದರಿಂದ ಸಂಪರ್ಕರಹಿತ ಹಾಗೂ ಸುಗಮ ಪ್ರಯಾಣ ಸಾಧ್ಯವಾಗಲಿದೆ.

ಹೊಸ ದರ ವ್ಯವಸ್ಥೆ ಹೇಗಿದೆ?

ಒಂದು ದಿನದ ಅನಿಯಮಿತ ಪ್ರಯಾಣ ಪಾಸ್ 250 ರೂ.ಆಗಿದ್ದು, ಇದು ಸ್ಮಾರ್ಟ್ ಕಾರ್ಡ್‌ನ 300 ರೂ. ದರಕ್ಕಿಂತ ಕಡಿಮೆಯಾಗಿದೆ. ಮೂರು ದಿನಗಳ ಪಾಸ್ 550 ರೂ. ಮತ್ತು ಐದು ದಿನಗಳ ಪಾಸ್ 850 ರೂ. ಎಂದು ನಿಗದಿಪಡಿಸಲಾಗಿದೆ. ಒಟ್ಟಾರೆ ಸ್ಮಾರ್ಟ್​ ಕಾರ್ಡ್​ಗಿಂತ ಕಡಿಮೆ ವೆಚ್ಚದಲ್ಲಿ ಕ್ಯೂಆರ್ ಪಾಸ್ ಸಿಗಲಿದ್ದು,  ಸೇವೆಯನ್ನು ಶೀಘ್ರದಲ್ಲೇ ಇತರೆ ಮೊಬೈಲ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರ ಸಮಯ ಉಳಿಯುಯುವುದರ ಜೊತೆಗೆ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವುದೂ ತಪ್ಪುತ್ತದೆ. ಹೀಗಾಗಿ ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಮೊಬೈಲ್ ಕ್ಯೂಆರ್ ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡಬಾರದು ಯಾಕೆ ಗೊತ್ತಾ? – Kannada News | Daily Devotional Insights: The Risks of Performing Namaskara Facing South

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ
ಹಿಂದೂ ಸಂಪ್ರದಾಯದ ಒಂದು ಪ್ರಮುಖ ಅಂಶವಾದ ನಮಸ್ಕಾರದ ಮಹತ್ವ ಮತ್ತು ಅದರ ನಿರ್ದಿಷ್ಟ ದಿಕ್ಕಿನ ಆಚರಣೆಗಳ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನೀಡಿದ್ದಾರೆ. ನಮಸ್ಕಾರವು ಕೇವಲ ಒಂದು ಕ್ರಿಯೆಯಲ್ಲದೆ, ಒಬ್ಬ ವ್ಯಕ್ತಿಯ ಸಹನೆ, ತಾಳ್ಮೆ, ಒಳ್ಳೆಯತನ ಮತ್ತು ಸಾತ್ವಿಕತೆಯನ್ನು ಪ್ರತಿಬಿಂಬಿಸುವ ಸಂಸ್ಕಾರವಾಗಿದೆ.

ಸಾಮಾನ್ಯವಾಗಿ, ನಮಸ್ಕಾರವನ್ನು ಯಾವುದೇ ದಿಕ್ಕಿಗೆ ಮಾಡಬಹುದಾದರೂ, ಧರ್ಮಗ್ರಂಥಗಳು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕರಿಸುವುದರ ಬಗ್ಗೆ ಎಚ್ಚರಿಕೆ ನೀಡುತ್ತವೆ. ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದು ಕೆಲವು ಆಪತ್ತುಗಳಿಗೆ ಸೂಚಕವಾಗಬಹುದು ಎಂದು ಈ ಗ್ರಂಥಗಳು ತಿಳಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಜ.

ನಾವು ಯಾರನ್ನಾದರೂ ನಮಸ್ಕರಿಸಿದಾಗ, ಅವರಿಂದ ಆಶೀರ್ವಾದವನ್ನು ನಿರೀಕ್ಷಿಸುತ್ತೇವೆ. ಉದಾಹರಣೆಗೆ, ಗುರುಹಿರಿಯರಿಗೆ ನಮಸ್ಕರಿಸಿದಾಗ ಶತಮಾನಂ ಭವತಿ, ದೀರ್ಘ ಸುಮಂಗಲೀಭವ, ದೀರ್ಘಾಯುಷ್ಮಾನ್ ಭವ ಮುಂತಾದ ಶುಭ ಆಶೀರ್ವಾದಗಳು ದೊರೆಯುತ್ತವೆ. ಆದರೆ ಯಮಧರ್ಮರಾಜರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದ ವಿಭಿನ್ನವಾಗಿರುತ್ತದೆ ಎಂದು ಧರ್ಮಗ್ರಂಥಗಳು, ವಿಶೇಷವಾಗಿ ಗರುಡಪುರಾಣದಲ್ಲಿ ಉಲ್ಲೇಖವಿದೆ. ಯಮಧರ್ಮರಾಜನು, ನಮಸ್ಕರಿಸಿದ ವ್ಯಕ್ತಿಯ ಪಾಪಕರ್ಮಗಳನ್ನು ಅನಾರೋಗ್ಯದ ರೂಪದಲ್ಲಿ ಅನುಭವಿಸಲು “ಆಶೀರ್ವದಿಸುತ್ತಾನೆ.” ಇದು ಶಾರೀರಿಕ ಕಷ್ಟಗಳಿಗೆ, ರೋಗಗಳಿಗೆ ಮತ್ತು ಪ್ರಾಣಕ್ಕೆ ಸಂಕಟಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಅನಾರೋಗ್ಯದ ಮೂಲಕ ಪಾಪಗಳನ್ನು ಅನುಭವಿಸಿ ಅವುಗಳನ್ನು ಕರಗಿಸಿಕೊಳ್ಳಲು ಇದು ಒಂದು ಮಾರ್ಗ ಎಂಬರ್ಥದಲ್ಲಿ ಯಮಧರ್ಮರಾಜನು ಆಶೀರ್ವದಿಸುತ್ತಾನೆ ಎಂದು ವಿವರಿಸಲಾಗಿದೆ.

ಹೀಗಾಗಿ, ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡಬಾರದು. ಒಂದು ವೇಳೆ ಹಿರಿಯರು ಅಥವಾ ಗುರುಗಳು ದಕ್ಷಿಣ ದಿಕ್ಕಿನಲ್ಲಿ ನಿಂತಿದ್ದರೆ, ಅವರನ್ನು ಬೇರೆ ಶುಭ ದಿಕ್ಕಿಗೆ ತಿರುಗಿ ನಿಲ್ಲಿಸಿ ನಮಸ್ಕರಿಸುವುದು ಉತ್ತಮ. ಈ ಆಚರಣೆಯು ಶುಭ ಫಲಗಳನ್ನು ನೀಡುತ್ತದೆ ಮತ್ತು ಅನಾರೋಗ್ಯ ಅಥವಾ ಇತರ ಅಶುಭಗಳನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಆದರೆ, ಈ ನಿಯಮಕ್ಕೆ ಒಂದು ಪ್ರಮುಖ ಅಪವಾದವಿದೆ. ಸಂಧ್ಯಾವಂದನೆಯಂತಹ ನಿರ್ದಿಷ್ಟ ಧಾರ್ಮಿಕ ಕ್ರಿಯೆಗಳಲ್ಲಿ ಮಾತ್ರ ನಾಲ್ಕು ದಿಕ್ಕುಗಳಿಗೂ ನಮಸ್ಕರಿಸುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಾಲ್ಕು ದಿಕ್ಕುಗಳಿಗೂ ಸೇರಿ ನಮಸ್ಕರಿಸುವುದರಿಂದ ಯಾವುದೇ ತೊಂದರೆಯಿಲ್ಲ. ಇದು ಒಂದು ವಿಶೇಷ ಪದ್ಧತಿಯಾಗಿರುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದರ ಹಿಂದಿರುವ ನಿಷಿದ್ಧಕ್ಕೆ ಕಾರಣವು ಯಮಧರ್ಮರಾಜನ ಆಶೀರ್ವಾದದ ವಿಶಿಷ್ಟ ಸ್ವರೂಪವಾಗಿದೆ. ಇದು ನಂಬಿಕೆಯ ಆಧಾರದ ಮೇಲೆ ರೂಢಿಯಲ್ಲಿರುವ ಒಂದು ಸಂಪ್ರದಾಯವಾಗಿದ್ದು, ಹಿಂದೂ ಧರ್ಮಗ್ರಂಥಗಳಲ್ಲಿ ಅದರ ಸೂಕ್ಷ್ಮ ಉಲ್ಲೇಖಗಳಿವೆ. ಆದ್ದರಿಂದ, ದೈನಂದಿನ ಜೀವನದಲ್ಲಿ ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದನ್ನು ಆದಷ್ಟು ತಪ್ಪಿಸುವುದು ಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version