T20 World Cup 2026: ಎರಡಂಕಿ ಮೊತ್ತ ದಾಖಲಿಸಿ ಇತಿಹಾಸ ಸೃಷ್ಟಿಸುವ ಹೊಸ್ತಿಲಿನಲ್ಲಿ ಸೂರ್ಯ

Source link

ಸುಡು ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ಈ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ

ಬೇಸಿಗೆ  (summer) ಈಗಾಗ್ಲೆ ಆರಂಭವಾಗಿದ್ದು, ಸುಡು ಬೇಸಿಗೆಯಲ್ಲಿ ವಾತಾವರಣ ಮಾತ್ರವಲ್ಲ ದೇಹ ಕೂಡ ತುಂಬಾನೆ ಬಿಸಿಯಾಗಿರುತ್ತದೆ. ಈ ತಾಪಮಾಣದ ಕಾರಣದಿಂದಾಗಿ ನಿರ್ಜಲೀಕರಣ, ಆಯಾಸದಂತಹ ಸಮಸ್ಯೆಗಳ ಜೊತೆಗೆ ಕಿರಿಕಿರಿಯೂ ಉಂಟಾಗುತ್ತದೆ. ಈ ಕಿರಿಕಿರಿಯನ್ನು ತಪ್ಪಿಸಿ ಆರಾಮದಾಯಕವಾಗಿರಲು, ಬಿಸಿಲಿನ ತಾಪದಿಂದ ದೇಹವನ್ನು ರಕ್ಷಿಸಿಕೊಳ್ಳಲು ಸೂಕ್ತ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾನೇ ಮುಖ್ಯ. ಹೌದು ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕು ಮತ್ತು ಶಾಖ ಇರುವುದರಿಂದ ಈ ಸಮಯದಲ್ಲಿ ದೇಹವನ್ನು ತಂಪಾಗಿ ಮತ್ತು ಆರಾಮದಾಯಕವಾಗಿಡಲು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ?

ಪೀಚ್‌ ಬಣ್ಣದ ಬಟ್ಟೆ: ಸೂರ್ಯನ ಕಿರಣಗಳು ಗಾಢ ಬಣ್ಣದ ಬಟ್ಟೆಗಳ ಮೇಲೆ ಬಿದ್ದಾಗ, ನಮ್ಮ ದೇಹವು ಬೆಚ್ಚಗಾಗುತ್ತದೆ. ಕೆಲವೊಮ್ಮೆ ಶಾಖ ತುಂಬಾ ತೀವ್ರವಾಗಿರುವುದರಿಂದ ಚರ್ಮವು ಉರಿಯಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪೀಚ್‌ ಬಣ್ಣದಂತಹ ತಿಳಿ ಬಣ್ಣದ ಬಟ್ಟೆ ಧರಿಸಬೇಕು. ಇದು ಆರಾಮದಾಯಕವಾಗಿರುತ್ತದೆ.

 ಆಕಾಶನೀಲಿ ಬಣ್ಣ: ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ಆಕಾಶ ನೀಲಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು.  ಇದು ಸೂರ್ಯನ ಕಿರಣಗಳಿಂದ ನಿಮ್ಮನ್ನು ನೀವು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತದೆ.

ಲ್ಯಾವೆಂಡರ್ ಬಣ್ಣ: ಲ್ಯಾವೆಂಡರ್ ಬಣ್ಣದ ಬಟ್ಟೆಗಳು ಬೆಚ್ಚಗಿನ ಹವಾಮಾನಕ್ಕೆ ಸೂಕ್ತವಾಗಿದೆ. ಈ ಮೃದುವಾದ ಬಣ್ಣವು ಶಾಖದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಿಳಿ ಬೂದು ಬಣ್ಣ: ತಿಳಿ ಬೂದು ಬಣ್ಣದ ಬಟ್ಟೆಗಳನ್ನು ಸಹ ಬೇಸಿಗೆಯಲ್ಲಿ ಧರಿಸಬಹುದು, ಏಕೆಂದರೆ ಇದು ನಿಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ, ಇದು ಬೆವರನ್ನು ಹೀರಿಕೊಳ್ಳುತ್ತದೆ. ಜೊತೆಗೆ  ಬೇಸಿಗೆಯಲ್ಲಿ ಈ ಬಣ್ಣದ ಬಟ್ಟೆಗಳು ನಿಮ್ಮ ದೇಹವನ್ನು ಆರಾಮದಾಯಕವಾಗಿರಿಸುತ್ತದೆ.

ತಿಳಿ ಹಳದಿ ಬಣ್ಣ: ತಿಳಿ ಹಳದಿ ಬಣ್ಣದ ಬಟ್ಟೆಗಳು ಬೇಸಿಗೆಯಲ್ಲಿ ಆರಾಮದಾಯಕವಾಗಿರುತ್ತದೆ. ಈ  ಮೃದುವಾದ ಬಣ್ಣವು ನಿಮ್ಮ ದೇಹವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ, ದೇಹವನ್ನು ಬಿಸಿಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಹಣ್ಣುಗಳನ್ನು ಸೇವನೆ ಮಾಡಲೇಬೇಕು

ಬಿಳಿ ಬಣ್ಣದ ಬಟ್ಟೆ: ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ನೀವು ಬಿಳಿ ಬಣ್ಣದ ಬಟ್ಟೆಗಳನ್ನೂ ಧರಿಸಬಹುದು. ಬಿಳಿ  ಮತ್ತು ತಿಳಿ ಬಣ್ಣದ ಬಟ್ಟೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತವೆ, ಇವು ಕಡಿಮೆ ಶಾಖವನ್ನು ಹೀರಿಕೊಂಡಾಗ, ದೇಹವು ಕಡಿಮೆ ಬಿಸಿಯಾಗಿರುತ್ತದೆ. ಇದು ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.

ಬಣ್ಣ ಮಾತ್ರವಲ್ಲ, ಬಟ್ಟೆಯ ಮೆಟಿರಿಯಲ್ ಸಹ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ. ಹತ್ತಿ ಬಟ್ಟೆ ಬೆವರು ಹೀರಿಕೊಳ್ಳುತ್ತವೆ ಮತ್ತು ದೇಹವನ್ನು ತಂಪಾಗಿರಿಸುತ್ತವೆ.  ನೈಲಾನ್, ಸ್ಯಾಟಿನ್, ಸಿಂಥೆಟಿಕ್, ವೆಲ್ವೆಟ್, ಪಾಲಿಯೆಸ್ಟರ್‌ನಂತಹ ಬಟ್ಟೆಗಳನ್ನು ಧರಿಸಿದರೆ, ಇದರಿಂದ ಬೆವರು ಒಣಗುವುದಿಲ್ಲ, ಇದು ಚರ್ಮವನ್ನು ಜಿಗುಟಾಗಿ ಮಾಡುತ್ತದೆ ಮತ್ತು ತುರಿಕೆ, ಕಿರಿಕಿರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಬೇಸಿಗೆಯಲ್ಲಿ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ಬಳಿಕ 1 ವರ್ಷ ಈ ಒಂದು ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದಲ್ಲಿ ಮೇಷ ರಾಶಿಯವರಿಗೆ ದೊರೆಯುವ ಫಲಾಫಲಗಳ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ. ಮೇಷ ರಾಶಿಯವರಿಗೆ ಇದು ಬಹಳಷ್ಟು ಅನುಕೂಲಕರವಾಗಿರುವ ವರ್ಷವಾಗಿದೆ ಎಂದು ಅವರು ಹೇಳಿದ್ದಾರೆ. ರಾಶ್ಯಾಧಿಪತಿಯಾದ ಕುಜನು ರಾಜ ಮತ್ತು ಮಂತ್ರಿಯಾಗಿರುವುದರಿಂದ ಸಾಕಷ್ಟು ಅದೃಷ್ಟಗಳು ಕೂಡಿಬರಲಿವೆ.

ಗ್ರಹಗಳ ಸ್ಥಾನಗಳು ಮತ್ತು ಪ್ರಭಾವ:

ಗುರು ಗ್ರಹವು ಮೂರನೇ ಮನೆಯಿಂದ ನಾಲ್ಕನೇ ಮನೆಗೆ, ನಂತರ ಅಕ್ಟೋಬರ್‌ನಲ್ಲಿ ಐದನೇ ಮನೆಗೆ ಸಾಗಲಿದೆ. ಶನಿ ಗ್ರಹ 12ನೇ ಮನೆಯಲ್ಲಿ, ರಾಹು 11ರಿಂದ 10ಕ್ಕೆ ಮತ್ತು ಕೇತು ಐದರಿಂದ ನಾಲ್ಕಕ್ಕೆ ಚಲಿಸುತ್ತಿವೆ. ಮೇಷ ರಾಶಿಯ ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರಿಗೆ ಸಾಡೇಸಾತಿ ಇದ್ದರೂ, ಅದರ ಪ್ರಭಾವ ಅಷ್ಟಾಗಿ ಇರುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ. ರಾಹು 11ನೇ ಮನೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲಿದ್ದು, ವಾಹನ ಖರೀದಿ, ಆರೋಗ್ಯದಲ್ಲಿ ಚೇತರಿಕೆ ಮತ್ತು ಕೆಲಸ ಕಾರ್ಯಗಳಲ್ಲಿ ಶುಭವನ್ನು ತರಲಿದ್ದಾನೆ.

ಆರ್ಥಿಕ ಸ್ಥಿತಿ ಮತ್ತು ವ್ಯಾಪಾರ:

ಈ ವರ್ಷ ಆದಾಯ 11 ಭಾಗಗಳಾಗಿದ್ದರೆ, ವ್ಯಯ 8 ಭಾಗಗಳಾಗಿರಲಿದ್ದು, ಆದಾಯದ ಮೂರು ಭಾಗ ಮಾತ್ರ ಉಳಿಯಲಿದೆ. ಆದಾಗ್ಯೂ, ಆರ್ಥಿಕವಾಗಿ ಉತ್ತಮ ಪ್ರಗತಿ ಕಂಡುಬರುತ್ತದೆ. ವ್ಯವಹಾರಗಳು ಚೆನ್ನಾಗಿರುತ್ತವೆ. ದೀಪಾವಳಿಯ ನಂತರ ಹೊಸ ವ್ಯಾಪಾರ ಆರಂಭಿಸಲು ಮತ್ತು ಭೂಮಿ ಖರೀದಿಸಲು ಉತ್ತಮ ಯೋಗವಿದೆ. ಉದ್ದಿಮೆದಾರರಿಗೆ, ರಸಗೊಬ್ಬರಗಳ ಮಾರಾಟಗಾರರಿಗೆ ಹಾಗೂ ಸೇನಾ ಮತ್ತು ಪೊಲೀಸ್ ಇಲಾಖೆಯಲ್ಲಿರುವವರಿಗೆ ಅದೃಷ್ಟ ಕೂಡಿಬರಲಿದೆ. ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳಿದ್ದರೂ, ದುರಾಸೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.

ಆರೋಗ್ಯ ಮತ್ತು ಮಾನಸಿಕ ಸ್ಥಿತಿ:

ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತಲೆನೋವು, ಹೊಟ್ಟೆನೋವು, ಕೈ ಕಾಲು ನೋವುಗಳಂತಹ ಅನಗತ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾನಸಿಕವಾಗಿ ಸದೃಢರಾಗಿರಲು ಪ್ರಯತ್ನಿಸಬೇಕು, ಶನಿಯ ವ್ಯಯ ಸ್ಥಾನದ ಪ್ರಭಾವದಿಂದ ಬೇರೆಯವರ ಮಾತುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬಾರದು. ಸುಖದ ಭಾಗ 6 ಇದ್ದರೆ, ದುಃಖದ ಭಾಗ 3 ಇರಲಿದೆ.

ವೃತ್ತಿ ಮತ್ತು ಉದ್ಯೋಗ:

ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಹಿಡಿದ ಹಠವನ್ನು ಬಿಡದೆ ಮುಂದುವರಿಯಬೇಕು. ರೈತಾಪಿ ವರ್ಗದವರಿಗೆ ಹೊಸ ಕಾನೂನುಗಳು ಮತ್ತು ನಿಬಂಧನೆಗಳಿಂದ ಸಾಕಷ್ಟು ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಗಳಿದ್ದು, ಕೆಲವರಿಗೆ ಸರ್ಕಾರಿ ಉದ್ಯೋಗವೂ ಸಿಗಬಹುದು. ಮಹಿಳೆಯರು, ಸರ್ಕಾರಿ ನೌಕರರು ಮತ್ತು ಉದ್ದಿಮೆದಾರರಿಗೆ ಈ ವರ್ಷ ಉತ್ತಮವಾಗಿರುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಸಂಬಂಧಗಳು ಮತ್ತು ವೈಯಕ್ತಿಕ ಜೀವನ:

ಬಂಧುಗಳಿಂದ ಶತ್ರುತ್ವ ಮತ್ತು ಅನಗತ್ಯ ಅಪವಾದಗಳು ಎದುರಾಗಬಹುದು, ಎಚ್ಚರಿಕೆ ವಹಿಸಬೇಕು. ವಿವಾಹ ವಿಷಯಗಳಲ್ಲಿ ಬಹಳಷ್ಟು ಶುಭವಾಗಲಿದೆ. ಪೂರ್ವಿಕರ ಆಸ್ತಿ ಕಲಹಗಳು ಇತ್ಯರ್ಥವಾಗುವ ಸಾಧ್ಯತೆಗಳಿವೆ. ನೂತನ ಗೃಹ ಯೋಗ ಮತ್ತು ಮಕ್ಕಳ ವಿವಾಹದಲ್ಲೂ ಶುಭಫಲಗಳಿವೆ. ಆದಾಗ್ಯೂ, ವರ್ಷದ ಕೊನೆಯ ಭಾಗದಲ್ಲಿ ಸಣ್ಣಪುಟ್ಟ ಟೆನ್ಷನ್‌ಗಳು ಮತ್ತು ಬೇಕಾದವರ ಅಗಲಿಕೆಯು ದುಃಖವನ್ನುಂಟು ಮಾಡಬಹುದು. ಪಾಲುದಾರಿಕೆಯ ವಿಚಾರದಲ್ಲಿ ಬಹಳಷ್ಟು ಹುಷಾರಾಗಿರುವುದು ಅಗತ್ಯ. ರಾತ್ರಿಯ ಪ್ರಯಾಣ ಅಷ್ಟು ಶುಭಕರವಾಗಿರುವುದಿಲ್ಲ.

ಪರಿಹಾರಗಳು ಮತ್ತು ಶುಭ ದಿನಗಳು:

ಮೇಷ ರಾಶಿಯವರಿಗೆ ಬುಧವಾರ ಮತ್ತು ಶುಕ್ರವಾರಗಳು ಅತ್ಯಂತ ಶುಭದಾಯಕ ದಿನಗಳಾಗಿವೆ. ಕೇಸರಿ ಮತ್ತು ಹಳದಿ ಬಣ್ಣಗಳನ್ನು ಹೆಚ್ಚಾಗಿ ಬಳಸಬೇಕು. ಸಾಧ್ಯವಾದಷ್ಟು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ವೆಂಕಟೇಶ್ವರನ ದರ್ಶನ ಭಾಗ್ಯ ದೊರೆಯುತ್ತದೆ. ಪ್ರತಿದಿನ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸಬೇಕು. 9 ಮತ್ತು 4 ಅದೃಷ್ಟದ ಸಂಖ್ಯೆಗಳಾಗಿವೆ. ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡದೆ ಮುಗಿಸಲು ಗುರೂಜಿ ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ, ಈ ವರ್ಷ ಮೇಷ ರಾಶಿಯವರಿಗೆ ಶೇ.60ರಷ್ಟು ಶುಭಫಲಗಳನ್ನು ನೀಡಲಿದೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಲಕ್ನೋ, ಮಾ.8: ಉತ್ತರ ಪ್ರದೇಶದ ಹೆಣ್ಣುಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರ ಶಿಕ್ಷಣಕ್ಕೆ ಬೆಂಬಲ ನೀಡಲು ಜನನದಿಂದ ಪದವಿ ಪೂರೈಸುವವರೆಗೆ ಸಮಗ್ರ ಹಣಕಾಸಿನ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಘೋಷಿಸಿದ್ದಾರೆ. ಇಂದು (ಮಾ.8) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ರೋಜ್‌ಗಾರ್ ಸಂಗಮ್’ (Rozgar Sangam) ಪೋರ್ಟಲ್‌ನ ಮೊಬೈಲ್ ಆಪ್ ಬಿಡುಗಡೆ ಮಾಡಿದರು ಮತ್ತು ನೂತನವಾಗಿ ಆಯ್ಕೆಯಾದ ಸೇವಕಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಹೆಣ್ಣು ಮಗು ಜನಿಸಿದ ತಕ್ಷಣ ಅಧಿಕೃತ ಜನ್ಮ ನೋಂದಣಿ ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿದರೆ, ಮಗುವಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಹೆಣ್ಣು ಮಗುವಿಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸಲು ಸರ್ಕಾರವು ಹಣಕಾಸಿನ ನೆರವು ನೀಡಲಿದೆ.

ಮಗು ಒಂದನೇ ತರಗತಿಗೆ ದಾಖಲಾದಾಗ, 5ನೇ ತರಗತಿ ಪಾಸಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಾಗಲೂ ಆರ್ಥಿಕ ನೆರವು ಸಿಗಲಿದೆ. ಹೈಸ್ಕೂಲ್, ಇಂಟರ್ ಮೀಡಿಯಟ್ ಮುಗಿಸಿ ಉನ್ನತ ಶಿಕ್ಷಣ ಅಥವಾ ಇತರ ವೃತ್ತಿಪರ ಶಿಕ್ಷಣಕ್ಕೆ ಸೇರುವವರೆಗೆ ಈ ಪ್ರಕ್ರಿಯೆಯು ಮುಂದುವರಿಯಲಿದೆ.

ಹೆಣ್ಣುಮಕ್ಕಳು ಇನ್ನು ಮುಂದೆ ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. ಅವರ ಶಿಕ್ಷಣವನ್ನು ಬೆಂಬಲಿಸಲು ಸರ್ಕಾರವು ಹುಟ್ಟಿನಿಂದ ಪದವಿಯವರೆಗೆ ಸಂಪೂರ್ಣ ಪ್ಯಾಕೇಜ್ ಒದಗಿಸಲಿದೆ” ಎಂದು ಸಿಎಂ ಆದಿತ್ಯನಾಥ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಹಣ ಪಾವತಿಯ ಹಂತಗಳು:

ಹಂತ 1 (ಜನನ): ಹೆಣ್ಣು ಮಗು ಜನಿಸಿದಾಗ – ₹5,000.

ಹಂತ 2 (ಲಸಿಕೆ): ಮಗುವಿಗೆ ಒಂದು ವರ್ಷ ತುಂಬಿ, ಎಲ್ಲಾ ಲಸಿಕೆಗಳನ್ನು ಹಾಕಿಸಿದ ನಂತರ – ₹2,000.

ಹಂತ 3 (ಒಂದನೇ ತರಗತಿ): 1ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 4 (ಆರನೇ ತರಗತಿ): 6ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 5 (ಒಂಬತ್ತನೇ ತರಗತಿ): 9ನೇ ತರಗತಿಗೆ ಪ್ರವೇಶ ಪಡೆದಾಗ – ₹5,000.

ಹಂತ 6 (ಉನ್ನತ ಶಿಕ್ಷಣ): 10/12ನೇ ತರಗತಿ ಮುಗಿಸಿ ಪದವಿ ಅಥವಾ ಡಿಪ್ಲೊಮಾಗೆ ಸೇರಿದಾಗ – ₹7,000.

ಅರ್ಹತೆಗಳು: ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಒಂದು ಕುಟುಂಬದ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆಗೆ ಮುಂಚೆಯೇ ‘ಧುರಂಧರ್ 2’ ಇಂದಾಗಿ ಉಸ್ತಾದ್ ಭಗತ್ ಸಿಂಗ್​​ಗೆ ಕೋಟ್ಯಂತರ ರೂಪಾಯಿ ನಷ್ಟ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸಿನಿಮಾದ ಎರಡನೇ ಭಾಗದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ‘ಧುರಂಧರ್ 2’ ಸಿನಿಮಾಕ್ಕೆ ಹೆದರಿ ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಬದಲಿಸಿವೆ. ‘ಟಾಕ್ಸಿಕ್’ ಸಿನಿಮಾ ಸಹ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿತ್ತು, ಆದರೆ ಬಿಡುಗಡೆ ಮುಂದೂಡಲ್ಪಟ್ಟಿತು. ಆದರೆ ‘ಟಾಕ್ಸಿಕ್’ ಮುಂದೂಡಿಕೆ ಬಳಿಕ ಆ ಸ್ಥಾನಕ್ಕೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಂದಿತ್ತು. ‘ಧುರಂಧರ್ 2’ ಜೊತೆಗೆ ಬಿಡುಗಡೆ ಆಗುವುದು ಆರ್ಥಿಕವಾಗಿ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೀಗ ನಿಜವಾಗಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ‘ಧುರಂಧರ್ 2’ ಸಿನಿಮಾದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಅನುಭವಿಸಿದೆ.

ತೆಲುಗಿನ ದೊಡ್ಡ ನಟರ ಸಿನಿಮಾಗಳು ಬಿಡುಗಡೆ ಆಗುವುದಕ್ಕೆ ಒಂದು ದಿನ ಮುಂಚಿತವಾಗಿ ಪ್ರೀಮಿಯರ್ ಶೋ, ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ಹಾಕುವುದು ರೂಢಿ. ಈ ಶೋಗಳ ಟಿಕೆಟ್ ಬೆಲೆ ಹೆಚ್ಚಿರುತ್ತದೆ. ಇದರಿಂದ ನಿರ್ಮಾಪಕರಿಗೆ, ಚಿತ್ರಮಂದಿರದವರಿಗೆ ಒಳ್ಳೆಯ ಲಾಭ ಆಗುತ್ತದೆ. ಸಿನಿಮಾ ಕೆಟ್ಟದಾಗಿದ್ದರೂ ಪ್ರೀಮಿಯರ್ ಶೋಗಳಿಂದ ಒಳ್ಳೆಯ ಮೊತ್ತವೇ ಗಳಿಕೆ ಆಗುತ್ತದೆ. ಪವನ್ ಕಲ್ಯಾಣ್ ಅವರ ಈ ಹಿಂದಿನ ಎರಡು ಸಿನಿಮಾಗಳಿಗೆ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ಒಳ್ಳೆಯ ಮೊತ್ತವನ್ನೇ ಕಲೆಕ್ಟ್ ಮಾಡಲಾಗಿತ್ತು. ಆದರೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಪ್ರೀಮಿಯರ್ ಶೋ ಅನ್ನು ಪ್ರದರ್ಶಿಸಲಾಗುತ್ತಿಲ್ಲ ಇದಕ್ಕೆ ಕಾರಣ ‘ಧುರಂಧರ್ 2’.

ಮಾರ್ಚ್ 18ರ ರಾತ್ರಿ 10 ಗಂಟೆಗೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಪ್ರೀಮಿಯರ್ ಶೋಗಳನ್ನು ನಡೆಸಲು ಯೋಜಿಸಲಾಗಿತ್ತು. ಆದರೆ ಈಗ ಅದನ್ನು ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 18ರಂದೇ ಸಂಜೆ 5 ಗಂಟೆಗೆ ‘ಧುರಂಧರ್ 2’ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಲಿವೆ. ಈ ಚಿತ್ರವು ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಅವಧಿಯದಾಗಿದೆ. ಹೈದರಾಬಾದ್​​ನಲ್ಲಿಯೂ ಸಹ ‘ಧುರಂಧರ್ 2’ ಪ್ರೀಮಿಯರ್ ಶೋ ದೊಡ್ಡ ಸಂಖ್ಯೆಯಲ್ಲಿ ಆಯೋಜನೆಗೊಂಡಿದೆ.

ಇದನ್ನೂ ಓದಿ:‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ಸತತವಾಗಿ ನಾಲ್ಕು ಗಂಟೆಗಳ ಕಾಲ ಒಂದು ಸಿನಿಮಾವನ್ನು ನೋಡಿದ ಪ್ರೇಕ್ಷಕರು, ತಕ್ಷಣವೇ ಮತ್ತೊಂದು ದೊಡ್ಡ ಸಿನಿಮಾವನ್ನು ನೋಡಲು ಆಸಕ್ತಿ ತೋರುವುದು ಕಷ್ಟ ಎಂಬುದು ವಿತರಕರ ಅಭಿಪ್ರಾಯ. ಅಲ್ಲದೆ, ಮಲ್ಟಿಪ್ಲೆಕ್ಸ್ ಸೇರಿದಂತೆ ಹೆಚ್ಚಿನ ಚಿತ್ರಮಂದಿರಗಳು ‘ಧುರಂಧರ್ 2’ ಚಿತ್ರಕ್ಕೆ ಆದ್ಯತೆ ನೀಡುತ್ತಿರುವುದರಿಂದ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳು ಸಿಗುವುದು ಕಷ್ಟವಾಗಬಹುದು ಹೀಗಾಗಿ ಸಿನಿಮಾದ ಪ್ರೀಮಿಯರ್ ಶೋ ಯೋಜನೆಯನ್ನೇ ನಿರ್ಮಾಪಕರು ಕೈಬಿಟ್ಟಿದ್ದಾರೆ.

ವಿತರಕರ ಸಲಹೆಯ ಮೇರೆಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಮಾರ್ಚ್ 18ರ ಪ್ರೀಮಿಯರ್ ಶೋಗಳನ್ನು ಕೈಬಿಟ್ಟು, ಮಾರ್ಚ್ 19ರ ಬೆಳ್ಳಂಬೆಳಿಗ್ಗೆ ‘ಬೆನಿಫಿಟ್ ಶೋ’ಗಳನ್ನು ನಡೆಸಲು ಚಿಂತಿಸುತ್ತಿದೆ. ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಕುತೂಹಲ ಇರುವುದರಿಂದ, ನೇರವಾಗಿ ಬಿಡುಗಡೆಯ ದಿನವೇ ಪ್ರದರ್ಶನ ಆರಂಭಿಸುವುದು ಚಿತ್ರದ ಯಶಸ್ಸಿಗೆ ಪೂರಕವಾಗಲಿದೆ ಎಂದು ಚಿತ್ರತಂಡದ ಅಭಿಪ್ರಾಯ. ಎರಡು ದೊಡ್ಡ ಸಿನಿಮಾಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಚಿತ್ರತಂಡ ತೆಗೆದುಕೊಂಡ ಈ ನಿರ್ಧಾರ ಜಾಣತನದಿಂದ ಕೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ: ಮಾ 12ರಂದು ಕನ್ನಡ ಶಾಲೆಗಳ ಬಂದ್​​ಗೆ ವಾಟಾಳ್​ ನಾಗರಾಜ್​ ಕರೆ ​

ಮೈಸೂರು, ಮಾರ್ಚ್​ 08: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಷೇಧಿಸಲಾಗಿದೆ. ತಮ್ಮ 17ನೇ ದಾಖಲೆಯ ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ (Vatal Nagaraj) ಪ್ರತಿಕ್ರಿಯಿಸಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಮಕ್ಕಳನ್ನ ಜೈಲಿಗೆ ಹಾಕುವುದಕ್ಕೆ ಆಗುತ್ತಾ? 

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್, ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್​ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಮೊಬೈಲ್ ಜಗತ್ತಿನ ಮಾಹಿತಿ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲ. ಮೊಬೈಲ್ ಬ್ಯಾನ್ ಅಥವಾ ಸಾಮಾಜಿಕ ಜಾಲತಾಣ ನಿಷೇಧ ಸರಿಯಲ್ಲ. ಸರ್ಕಾರದ ಈ ಆದೇಶ ಹಿಂಪಡೆಯಬೇಕು ಎಂದು ವಾಟಾಳ್​ ನಾಗರಾಜ್ ಒತ್ತಾಯಿಸಿದ್ದಾರೆ.

ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ

ಇನ್ನು ಬಜೆಟ್​ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಹಿನ್ನೆಲೆ ಇದನ್ನ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka Budget 2026:16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯರನ್ನು ಬಿಟ್ಟರೆ ಉತ್ತಮ ವ್ಯಕ್ತಿ ಯಾರಿದ್ದಾರೆ? ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು. ಈಗ ಇರುವವರಲ್ಲಿ ಸಿದ್ದರಾಮಯ್ಯ ಅವರೇ ಉತ್ತಮ ವ್ಯಕ್ತಿ. ಅವರನ್ನ ಕೆಳಗಿಳಿಸುವುದಕ್ಕೆ ಯಾರಿಂದಲೂ ಆಗಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಕೈಕ ಟೆಸ್ಟ್​ನಲ್ಲಿ ಭಾರತಕ್ಕೆ 10 ವಿಕೆಟ್ ಸೋಲು; ಆಸ್ಟ್ರೇಲಿಯಾಕ್ಕೆ ಬಹು-ಸ್ವರೂಪದ ಸರಣಿ

ಮೂರು ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ವನಿತಾ ಪಡೆ ಮೊದಲು ನಡೆದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಶುಭಾರಂಭ ಮಾಡಿತ್ತು. ಹೀಗಾಗಿ ಉಳಿದೆರಡು ಸರಣಿಗಳಲ್ಲೂ ಭಾರತದಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಟಿ20 ಸರಣಿ ಬಳಿಕ ನಡೆದ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಒಂದೇ ಒಂದು ಗೆಲುವು ದಕ್ಕಲಿಲ್ಲ. ಏಕದಿನ ಸರಣಿಯಲ್ಲಿ ವೈಟ್​ ವಾಶ್ ಆಗಿದ್ದ ಹರ್ಮನ್​ಪ್ರೀತ್ ಕೌರ್ ಪಡೆ, ಇದೀಗ ಏಕೈಕ ಟೆಸ್ಟ್ ಪಂದ್ಯವನ್ನು ಸಹ 10 ವಿಕೆಟ್​ಗಳಿಂದ ಸೋತಿದೆ.

ಪರ್ತ್‌ನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಮಹಿಳಾ ತಂಡ ಸುಲಭವಾಗಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಭಾರತ ವನಿತಾ ತಂಡ ಬಹು-ಸ್ವರೂಪದ ಸರಣಿಯನ್ನು ಕಳೆದುಕೊಂಡಿತು. ಮೂರು ದಿನವೂ ಪೂರ್ಣವಾಗಿ ನಡೆಯದೆ ಈ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಮೂರನೇ ದಿನದ ಮೊದಲ ಸೆಷನ್​ನಲ್ಲಿಯೇ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಭಾರತದ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಮೊದಲ ಸೆಷನ್​ಲ್ಲಿಯೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 62.4 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟ್ ಆಗಿತ್ತು. ಜೆಮಿಮಾ ರೊಡ್ರಿಗಸ್ ಅರ್ಧಶತಕ ಗಳಿಸಿದದರೆ, ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚು ಸಮಯ ನಿಲ್ಲಲು ವಿಫಲರಾದರು. ಆಸ್ಟ್ರೇಲಿಯಾ ಪರ ಅನ್ನಾಬೆಲ್ ಸದರ್ಲ್ಯಾಂಡ್ ಅತ್ಯಧಿಕ ನಾಲ್ಕು ವಿಕೆಟ್‌ಗಳನ್ನು ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 323 ರನ್‌ಗಳನ್ನು ಗಳಿಸಿ 125 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಬೌಲಿಂಗ್ ನಂತರ ಬ್ಯಾಟಿಂಗ್​ನಲ್ಲೂ ಅಬ್ಬರಿಸಿದ ಅನ್ನಾಬೆಲ್ಲೆ ಸದರ್ಲ್ಯಾಂಡ್ 129 ರನ್​ಗಳ ಇನ್ನಿಂಗ್ಸ್ ಆಡಿದರು. ಎಲಿಸ್ ಪೆರ್ರಿ ಕೂಡ 76 ರನ್ ಗಳಿಸಿ, ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದರು. ಏತನ್ಮಧ್ಯೆ, ಭಾರತದ ಸಯಾಲಿ ಸತ್ಘರೆ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರಾದರೂ ಇತರ ಬೌಲರ್​ಗಳ ವೈಫಲ್ಯದಿಂದ ಆಸ್ಟ್ರೇಲಿಯಾ ದೊಡ್ಡ ಮೊತ್ತವನ್ನು ಗಳಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ಎರಡನೇ ಇನ್ನಿಂಗ್ಸ್​ನಲ್ಲೂ ಕಳಪೆ ಬ್ಯಾಟಿಂಗ್‌

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ನಿರಾಶಾದಾಯಕವಾಗಿತ್ತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮತ್ತೊಮ್ಮೆ ಬೇಗನೆ ಔಟಾದರು. ಬೌಲಿಂಗ್​ನಲ್ಲಿ ಸದರ್ಲ್ಯಾಂಡ್ ಮತ್ತು ಲೂಸಿ ಹ್ಯಾಮಿಲ್ಟನ್ ಮತ್ತೊಮ್ಮೆ ಮಿಂಚಿದರು. ಪರಿಣಾಮವಾಗಿ, ಈ ಇನ್ನಿಂಗ್ಸ್‌ನಲ್ಲಿಯೂ ಭಾರತ ತಂಡವು 149 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಪ್ರತೀಕಾ ರಾವಲ್ 63 ರನ್‌ ಬಾರಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾಕ್ಕೆ 25 ರನ್‌ಗಳ ಗುರಿ ನಿಗದಿಯಾಯಿತು. ಆಸ್ಟ್ರೇಲಿಯಾ 4.3 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಈ ಗುರಿ ಬೆನ್ನಟ್ಟಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು.

ಸರಣಿ ಗೆದ್ದುಕೊಂಡ ಆಸ್ಟ್ರೇಲಿಯಾ

ಇದು 3 ಟಿ20, 3 ಏಕದಿನ ಮತ್ತು 1 ಟೆಸ್ಟ್ ಪಂದ್ಯಗಳನ್ನು ಒಳಗೊಂಡ ಬಹು-ಸ್ವರೂಪದ ಸರಣಿಯಾಗಿತ್ತು. ಭಾರತವು ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿತು. ಆದಾಗ್ಯೂ, ಅದರ ನಂತರ ಆಸ್ಟ್ರೇಲಿಯಾ ಬಲವಾದ ಪುನರಾಗಮನವನ್ನು ಮಾಡಿ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡರೆ, ಈಗ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 5-2 ಅಂತರದಿಂದ ಗೆದ್ದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಇವತ್ತು ಮಾರ್ಚ್ 18, ಅಂತರರಾಷ್ಟ್ರೀಯ ಮಹಿಳೆಯರ ದಿನ (International Women’s Day). ಕೇಂದ್ರ ಸರ್ಕಾರ ಮಹಿಳೆಯರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಹಾಕಿದೆ. ಮಹಿಳೆಯರಿಗೆಂದೇ ಸೀಮಿತವಾದ ಸುಕನ್ಯಾ ಸಮೃದ್ದಿ ಯೋಜನೆಯಂತಹ ಸ್ಕೀಮ್​ಗಳಿವೆ. ಹಾಗೆಯೇ, ಸರ್ವರಿಗೂ ಅನ್ವಯವಾಗುವಂತೆ ಸರ್ಕಾರ ರೂಪಿಸಿದ ಕೆಲ ಉತ್ತಮ ಹಣಕಾಸು ಯೋಜನೆಗಳೂ ಕೂಡ ಮಹಿಳೆಯರಿಗೆ ವರದಾನವಾಗಿವೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವ ಮೂರು ಪ್ರಮುಖ ಹಣಕಾಸು ಯೋಜನೆಗಳ ವಿವರ ಇಲ್ಲಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ

ಹತ್ತು ವರ್ಷದ ಹಿಂದೆ ಆರಂಭವಾದ ಪಿಎಂ ಮುದ್ರಾ ಯೋಜನೆಯಲ್ಲಿ (PM Mudra Scheme) ಸಣ್ಣ ಉದ್ದಿಮೆಗಳಿಗೆ ಅಡಮಾನ ರಹಿತವಾದ ಸಾಲ ಕೊಡಲಾಗುತ್ತದೆ. 20 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಈ ರೀತಿ ಮುದ್ರಾ ಸಾಲ ಖಾತೆಗಳನ್ನು ಹೊಂದಿರುವ ಉದ್ದಿಮೆದಾರರಲ್ಲಿ ಮಹಿಳೆಯರೇ ಹೆಚ್ಚು. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದು ಸ್ವಂತ ಉದ್ಯೋಗ ಮತ್ತು ಉದ್ದಿಮೆ ಆರಂಭಿಸಿರುವುದುಂಟು.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

ಪಿಎಂ ಜನ್ ಧನ್ ಯೋಜನೆ

2014ರಲ್ಲಿ ಶುರುವಾದ ಪಿಎಂ ಜನ್ ಧನ್ ಯೋಜನೆಯು (PM Jan Dhan Yojana)ಪ್ರತಿಯೊಬ್ಬ ವ್ಯಕ್ತಿಯನ್ನೂ ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ತರುವ ಬೃಹದ್ ಉದ್ದೇಶ ಹೊಂದಿದೆ. ಸರ್ಕಾರದ ಸ್ಕೀಮ್​ಗಳ ಲಾಭವು ಬ್ಯಾಂಕ್ ಖಾತೆ ಮೂಲಕ ನೇರವಾಗಿ ಫಲಾನುಭವಿಗೆ ದೊರಕಲು ಇದರಿಂದ ಸಹಾಯವಾಗುತ್ತದೆ. ಹಾಗೆಯೇ, ಹಣದ ಉಳಿತಾಯ ಇತ್ಯಾದಿಗೂ ಬ್ಯಾಂಕ್ ಖಾತೆ ನೆರವಾಗುತ್ತದೆ. ಹೀಗಾಗಿ, ಸರ್ಕಾರ ಜನ್ ಧನ್ ಖಾತೆಗಳನ್ನು ಆರಂಭಿಸಿತು. ಇದರಲ್ಲಿ 32 ಕೋಟಿಗೂ ಅಧಿಕ ಮಹಿಳೆಯರು ಜನ್ ಧನ್ ಅಕೌಂಟ್ ಹೊಂದಿದ್ದಾರೆ.

ಜನ್ ಧನ್ ಯೋಜನೆ ವಿಶೇಷತೆಗಳಿವು…

  • ಪಿಎಂ ಜನ್ ಧನ್ ಸ್ಕೀಮ್ ಅಡಿ ತೆರೆಯಲಾಗುವ ಬ್ಯಾಂಕ್ ಖಾತೆಗಳು ಝೀರೋ ಬ್ಯಾಲನ್ಸ್ ಸೌಲಭ್ಯ ಹೊಂದಿರುತ್ತವೆ.
  • ರುಪೇ ಡೆಬಿಟ್ ಕಾರ್ಡ್
  • 2 ಲಕ್ಷ ರೂ ಅಪಘಾತ ವಿಮೆ
  • 10,000 ರೂಗಳ ಓವರ್​ಡ್ರಾಫ್ಟ್ ಸೌಲಭ್ಯ
  • ಡಿಬಿಟಿ, ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ, ಪಿಎಂ ಸುರಕ್ಷಾ ಬಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಇತ್ಯಾದಿ ಸ್ಕೀಮ್​ಗಳಿಗೆ ಜೋಡಿತವಾಗಿರುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಪಿಎಂ ಸ್ವನಿಧಿ ಯೋಜನೆ

ಪಿಎಂ ಸ್ವನಿಧಿ (PM SVANidhi scheme) ಎಂದರೆ ಬೀದಿಬದಿ ಅಂಗಡಿಗಳ ಆತ್ಮನಿರ್ಭರ್ ನಿಧಿ. 2020ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಡಮಾನರಹಿತವಾದ ಸಾಲ ನೀಡಲಾಗುತ್ತದೆ. 50,000 ರೂವರೆಗೂ ಸಾಲ ಪಡೆಯಲು ಅವಕಾಶ ಇರುತ್ತದೆ. ಬಡ್ಡಿಯಲ್ಲೂ ರಿಯಾಯಿತಿ ಇರುತ್ತದೆ. ಈ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ಫೈನಲ್: ಹರಿಯಲಿದೆ ಮನರಂಜನೆ ಮಹಾಪೂರ, ಯಾರ್ಯಾರು ಬರಲಿದ್ದಾರೆ?

ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ 2026 ಟಿ20 ವಿಶ್ವಕಪ್ ಇಂದು (ಮಾರ್ಚ್ 08) ಮುಕ್ತಾಯವಾಗಲಿದೆ. ಇಂದು ಅಹಮದಾಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 2026 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಪಂದ್ಯ ಜಿದ್ದಾಜಿದ್ದಿನದ್ದಾಗಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಪಂದ್ಯ ಆರಂಭಕ್ಕೂ ಮುಂಚೆ ಭರಪೂರ ಮನೊರಂಜನೆ ಪ್ರೇಕ್ಷಕರಿಗೆ ದೊರಕಲಿದೆ. ಕೆಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಾಯಕರುಗಳು ಫೈನಲ್ ಪಂದ್ಯದ ಮುಂಚೆ ಮನರಂಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇಂದಿನ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಆಗಿರುವುದು ಅಂತರಾಷ್ಟ್ರೀಯ ಪಾಪ್ ಲೋಕದ ದಿಗ್ಗಜ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಮಾರ್ಟಿನ್. ಇವರ ಜನಪ್ರಿಯ ಹಾಡುಗಳಾದ ‘ಲೋಕಾ’ ಮತ್ತು ಫುಟ್‌ಬಾಲ್ ಹಾಡು ‘ದಿ ಕಪ್ ಆಫ್ ಲೈಫ್’ ಅಹಮದಾಬಾದ್ ಮೈದಾನದಲ್ಲಿ ಅನುರಣಿಸಲಿವೆ. ಮಾತ್ರವಲ್ಲದೆ ಇನ್ನೂ ಹಲವು ಹಾಡುಗಳನ್ನು ಈ ವಿಶ್ವ ಜನಪ್ರಿಯ ಗಾಯಕ ರಿಕ್ಕಿ ಪಾರ್ಟಿನ್ ಹಾಡಲಿದ್ದಾರೆ.

ಭಾರತದ ಖ್ಯಾತ ಗಾಯಕಿಯರಲ್ಲಿ ಒಬ್ಬರಾಗಿರುವ ಪಾಲ್ಗುಣಿ ಪಾಠಕ್ ಅವರು ಸಹ ಇಂದಿನ ಪಂದ್ಯಕ್ಕೂ ಮುಂಚೆ ಹಾಡುಗಳನ್ನು ಹಾಡಲಿದ್ದಾರೆ. ಫಾಲ್ಗುಣಿ ಪಾಠಕ್ ಸ್ಥಳೀಯ ಗಾಯಕಿ ಸಹ ಆಗಿದ್ದು, ಹಿಂದಿ ಹಾಡುಗಳ ಜೊತೆಗೆ ಗುಜರಾತಿ ಸೊಗಡಿನ ಹಾಡುಗಳನ್ನು ಸಹ ಹಾಡಲಿದ್ದಾರೆ. ‘ಮೈನೆ ಪಾಯಲ್ ಹೈ ಛಂಕಾಯಿ’ ಜೊತೆಗೆ ಹಲವಾರು ಜನಪ್ರಿಯ ಹಾಡುಗಳನ್ನು ಫಾಲ್ಗುಣಿ ಹಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಫಾಲ್ಗುಣಿ ಪಾಠಕ್, ‘ನಾನು ಈ ಪ್ರದರ್ಶನಕ್ಕಾಗಿ ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಜನರೆದುರು ನಾನು ಪ್ರದರ್ಶನ ನೀಡಲಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:IND vs NZ: ಟಿ20 ವಿಶ್ವಕಪ್ ಫೈನಲ್​ಗೆ ಮೋದಿ ಮೈದಾನದಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಗೊತ್ತಾ?

‘ಪ್ರಿನ್ಸ್ ಆಫ್ ಭಾಂಗ್ಡಾ’ ಎಂದೇ ಹೆಸರಾದ ಸುಖ್ಬೀರ್ ಸಿಂಗ್ ತಮ್ಮ ಹಿಟ್ ಹಾಡುಗಳಾದ ‘ಇಷ್ಕ್ ತೇರಾ ತಡ್ಪಾವೆ’ ಸೇರಿದಂತೆ ಇನ್ನೂ ಕೆಲವು ಬಲು ಜನಪ್ರಿಯ ಹಾಡುಗಳನ್ನು ಹಾಡಲಿದ್ದಾರೆ. ಇವರೂ ಸಹ ಗುಜರಾತಿ ಜನರ ಮೆಚ್ಚಿನ ಗಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಸಂಜೆ 5:30ಕ್ಕೆ ಲೈವ್ ಪ್ರದರ್ಶನ ಪ್ರಾರಂಭ ಆಗಲಿದೆ. ರಾತ್ರಿ 7 ಗಂಟೆಗೆ ಪಂದ್ಯ ಪ್ರಾರಂಭ ಆಗಲಿದೆ.

ಟೀಮ್ ಇಂಡಿಯಾವನ್ನು ಬೆಂಬಲಿಸಲು ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ಆಲಿಯಾ ಭಟ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಅವರುಗಳು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಮಿಫೈನಲ್‌ನಲ್ಲೂ ಮಿಂಚಿದ್ದ ಈ ತಾರೆಯರು ಫೈನಲ್ ಪಂದ್ಯಕ್ಕೂ ಸಾಕ್ಷಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಕೂಡ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಸಹ ಆಗಮಿಸುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಊಟ ಮಾಡುವಾಗ ಅಥವಾ ಊಟವಾದ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು? ಆಯುರ್ವೇದ ಏನು ಹೇಳುತ್ತದೆ?

ಆಹಾರ ಮತ್ತು ನೀರು (Water) ಎರಡೂ ಕೂಡ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಆದರೆ ಅವುಗಳನ್ನು ಯಾವ ಸಮಯದಲ್ಲಿ, ಹೇಗೆ ಸೇವನೆ ಮಾಡಬೇಕು ಎಂದು ತಿಳಿದಿರಬೇಕಾಗುತ್ತದೆ. ಇಲ್ಲವಾದಲ್ಲಿ ಈ ರೀತಿಯ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಯುರ್ವೇದದ ಪ್ರಕಾರ, ಆಹಾರ ಸೇವಿಸುವ ಸಮಯ ಮತ್ತು ನೀರು ಕುಡಿಯುವ ಸಮಯವು ಜೀರ್ಣಕ್ರಿಯೆಗೆ (Digestion) ಬಹಳ ಮಹತ್ವದ್ದಾಗಿದ್ದು ಇದು ಸರಿಯಾಗಿ ಆಗದಿದ್ದಲ್ಲಿ ಹೊಟ್ಟೆ ಭಾರವಾಗುವುದು, ಅನಿಲ (ಗ್ಯಾಸ್) ಉಂಟಾಗುವುದು, ಅಜೀರ್ಣ, ಹೊಟ್ಟೆ ಉಬ್ಬುವುದು ಅಥವಾ ಆಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಊಟ ಮಾಡುವಾಗ ಅಥವಾ ಊಟವಾದ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟದ ಜೊತೆ ಅಥವಾ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು?

ಡಾ. ಆರ್.ಪಿ. ಪರಾಶರ್ ಎಂಬುವರು ಹೇಳುವ ಪ್ರಕಾರ, ಆಯುರ್ವೇದದಲ್ಲಿ ಊಟದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಅಗತ್ಯವಿದ್ದರೆ ಊಟದ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬಹುದು. ಸಾಮಾನ್ಯವಾಗಿ ಊಟ ಮಾಡಿದ ಸುಮಾರು 30 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯವಾಗುತ್ತದೆ. ಅದೇ ರೀತಿ, ಊಟಕ್ಕೆ ಸುಮಾರು 30 ನಿಮಿಷಗಳ ಮೊದಲು ನೀರು ಕುಡಿಯುವುದೂ ಕೂಡ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.

ಇದನ್ನೂ ಓದಿ: ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ!

ಊಟ ಮಾಡಿದ ತಕ್ಷಣ ನೀರು ಕುಡಿಯುವುದರಿಂದಾಗುವ ಸಮಸ್ಯೆಗಳು:

ಸಾಮಾನ್ಯವಾಗಿ ಊಟ ಮಾಡಿದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀಳಬಹುದು. ಹೊಟ್ಟೆಯಲ್ಲಿ ಇರುವ ಜೀರ್ಣರಸಗಳು ನೀರಿನಿಂದ ತೆಳ್ಳಗಾಗುವ ಸಾಧ್ಯತೆ ಇದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ಅಡಚಣೆ ಉಂಟಾಗಬಹುದು. ಇದರ ಪರಿಣಾಮವಾಗಿ ಕೆಲವರಿಗೆ ಹೊಟ್ಟೆ ಭಾರವಾಗುವುದು, ಗ್ಯಾಸ್, ಅಜೀರ್ಣ ಅಥವಾ ಆಸಿಡಿಟಿ ಸಮಸ್ಯೆಗಳು ಕಾಣಿಸಬಹುದು. ಕೆಲವರಿಗೆ ಊಟದ ನಂತರ ಸುಸ್ತು ಅಥವಾ ದಣಿದಂತಹ ಅನುಭವವಾಗಬಹುದು. ಆದರೆ ಪ್ರತಿಯೊಬ್ಬರ ಜೀರ್ಣಶಕ್ತಿ ವಿಭಿನ್ನವಾಗಿರುವುದರಿಂದ, ದೇಹದ ಸೂಚನೆಗಳನ್ನು ಗಮನಿಸಿ ಆಹಾರ ಮತ್ತು ನೀರಿನ ಅಭ್ಯಾಸಗಳನ್ನು ಸಮತೋಲನದಲ್ಲಿ ಇಡುವುದು ಅಗತ್ಯವಾಗಿದೆ.

ಜೀರ್ಣಕ್ರಿಯೆಗೆ ಸರಿಯಾಗಿ ಆಗಲು ಏನು ಮಾಡಬೇಕು?

ಉತ್ತಮ ಜೀರ್ಣಕ್ರಿಯೆಗೆ ನೀರು ಕುಡಿಯುವ ಸಮಯ ಮಾತ್ರವಲ್ಲದೆ ಸಂಪೂರ್ಣ ಜೀವನಶೈಲಿಯೂ ಮಹತ್ವದ್ದಾಗಿದೆ. ಆಹಾರವನ್ನು ನಿಧಾನವಾಗಿ ಮತ್ತು ಚೆನ್ನಾಗಿ ಜಗಿದು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಜೊತೆಗೆ ಸಮತೋಲನಯುತ ಆಹಾರ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು, ಸರಿಯಾದ ದಿನಚರಿ, ಪ್ರತಿದಿನ ಸ್ವಲ್ಪ ವ್ಯಾಯಾಮ ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದಲೂ ಕೂಡ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version