‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ – Kannada News | Karna Serial Update Actor Nagabharana Exit from Serial

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕರ್ಣ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ರಮೇಶ್ ಪಾತ್ರ ಮಾಡುತ್ತಿದ್ದ ನಾಗಾಭರಣ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಸ್ಥಾನಕ್ಕೆ ಹಿರಿಯ ನಟ ಅಭಿಜಿತ್ ಆಗಮಿಸಿದ್ದಾರೆ. ಇನ್ನುಮುಂದೆ ಕರ್ಣನ ಪಾತ್ರದಲ್ಲಿ ಅಭಿಜಿತ್ ಅವರೇ ಮುಂದುವರಿಯಲಿದ್ದಾರೆ. ಈ ವಿಷಯವನ್ನು ಜೀ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ರಿಲೀಸ್ ಆಗಿರೋ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಲ್ಲು ಅರ್ಜುನ್ ಮುಂದಿನ ಸಿನಿಮಾ ನಿರ್ದೇಶಿಸಲಿರುವ ಮಲಯಾಳಂ ಸ್ಟಾರ್ ನಟ – Kannada News | Basil Joseph to direct Allu Arjun’s next movie

ಅಲ್ಲು ಅರ್ಜುನ್ (Allu Arjun) ಪ್ರಸ್ತುತ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟರುಗಳಲ್ಲಿ ಒಬ್ಬರು. ಅವರೊಟ್ಟಿಗೆ ಸಿನಿಮಾ ಮಾಡಲು ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರುಗಳು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲು ಅರ್ಜುನ್ ಸಹ ‘ಪುಷ್ಪ 2’ ಬಳಿಕ ಅದಕ್ಕಿಂತಲೂ ದೊಡ್ಡ ಸಿನಿಮಾವನ್ನೇ ಮಾಡಬೇಕು ಎಂಬ ಯೋಜಿತ ನಿರ್ಧಾರ ಹಾಕಿಕೊಂಡೇ ಮುಂದಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದೀಗ ಅಟ್ಲಿ ಜೊತೆಗೆ ಹಾಲಿವುಡ್ ಮಾದರಿಯ ಫ್ಯಾಂಟಸಿ, ಸೂಪರ್ ಹೀರೋ ಸಿನಿಮಾ ಮಾಡುತ್ತಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾಕ್ಕೆ ಭಿನ್ನ ಶೈಲಿಯ ನಿರ್ದೇಶಕರೊಬ್ಬರಿಗೆ ಓಕೆ ಹೇಳಿದ್ದಾರೆ.

ಮಲಯಾಳಂ ಸಿನಿಮಾಗಳ ಮೂಲಕ ತಮ್ಮ ನಟನೆ ಇಂದ ದೇಶದಾದ್ಯಂತ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಗಳಿಸಿರುವ ಬಾಸಿಲ್ ಜೋಸೆಫ್ ಅವರು ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ. ಬಾಸಿಲ್ ಜೋಸೆಫ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅವರ ನಟನೆಯ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ಅವರು ತುಸು ಸಮಯ ನಟನೆಯಿಂದ ವಿರಾಮ ಪಡೆದು ಅಲ್ಲು ಅರ್ಜುನ್ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ.

ಬಾಸಿಲ್ ಅವರು ಅದ್ಭುತ ನಟರಾಗಿರುವ ಜೊತೆಗೆ ಒಳ್ಳೆಯ ನಿರ್ದೇಶಕ ಸಹ, ಈ ಹಿಂದೆ ‘ಮಿನ್ನಲ್ ಮುರಳಿ’ ಹೆಸರಿನ ಅದ್ಭುತ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಿದ್ದರು ಬಾಸಿಲ್. ಇದೀಗ ಅಲ್ಲು ಅರ್ಜುನ್ ಅವರಿಗಾಗಿ ಬಾಸಿಲ್ ಅವರು ಫ್ಯಾಂಟಸಿ ಸೂಪರ್ ಹೀರೋ ಸಿನಿಮಾವನ್ನೇ ನಿರ್ದೇಶಿಸಲಿದ್ದಾರೆ. ಅಸಲಿಗೆ ಬಾಲಿವುಡ್​ ನಟ ರಣ್ವೀರ್ ಸಿಂಗ್ ಅವರಿಗಾಗಿ ಮಾಡಿದ್ದ ಕತೆ ಅದಾಗಿದ್ದು, ಕಾರಣಾಂತರಗಳಿಂದ ರಣ್ವೀರ್ ಸಿಂಗ್ ಆ ಸಿನಿಮಾನಲ್ಲಿ ನಟಿಸಲಿಲ್ಲ. ಇದೀಗ ಅದೇ ಕತೆಯನ್ನು ತುಸು ಬದಲಾವಣೆ ಮಾಡಿ ಅಲ್ಲು ಅರ್ಜುನ್ ಅವರಿಗಾಗಿ ಮಾಡುತ್ತಿದ್ದಾರೆ ಬಾಸಿಲ್.

ಇದನ್ನೂ ಓದಿ:ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ

ಇತ್ತೀಚೆಗಷ್ಟೆ ಬಾಸಿಲ್ ಜೋಸೆಫ್ ಅವರು ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲಿ ಅವರು ‘ಪುಷ್ಪ’ ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಅವರ ಈಗಿನ ಸಿನಿಮಾ ನಿರ್ದೇಶಕ ಅಟ್ಲಿ ಅವರನ್ನು ಭೇಟಿ ಆಗಿದ್ದರು. ಇದೀಗ ಅಲ್ಲು ಅರ್ಜುನ್ ಅಟ್ಲಿ ಜೊತೆಗಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾ ಮುಗಿದೊಡನೆ ಬಾಸಿಲ್ ಜೋಸೆಫ್ ಜೊತೆಗಿನ ಸಿನಿಮಾ ಪ್ರಾರಂಭಿಸಲಿದ್ದಾರೆ.

ಅಲ್ಲು ಅರ್ಜುನ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾನಲ್ಲಿಯೂ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆ ಸಿನಿಮಾ ಮತ್ತೆ ಬೇರೊಬ್ಬ ನಟನ ಪಾಲಾಗಿದೆ ಎನ್ನಲಾಗುತ್ತಿದೆ. ಜೂ ಎನ್​​ಟಿಆರ್ ಅವರು ಆ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Kitchen Sink Vastu: ಅಡುಗೆಮನೆಯ ಸಿಂಕ್ ಅಡಿ ಈ ವಸ್ತು ಇಡಲೇಬೇಡಿ; ಸಂಕಷ್ಟ ತಪ್ಪಿದ್ದಲ್ಲ! – Kannada News | Kitchen Sink Vastu: 5 Things NOT to Keep Under Your Sink for Home Prosperity

ನಮ್ಮ ಮನೆಯ ಅಡುಗೆಮನೆಯು ಕೇವಲ ಅಡುಗೆ ತಯಾರಿಸುವ ಸ್ಥಳವಲ್ಲ, ಬದಲಾಗಿ ಅದು ಇಡೀ ಕುಟುಂಬಕ್ಕೆ ಚೈತನ್ಯ ಮತ್ತು ಆರೋಗ್ಯವನ್ನು ನೀಡುವ ಶಕ್ತಿ ಕೇಂದ್ರ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಮನೆಯ ಸಮೃದ್ಧಿ ಮತ್ತು ಯೋಗಕ್ಷೇಮದ ಅಡಿಪಾಯವಾಗಿದೆ. ಅಡುಗೆಮನೆಯನ್ನು ಎಷ್ಟು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತೇವೆಯೋ, ಅಷ್ಟು ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ. ಆದರೆ, ಅನೇಕ ಮನೆಗಳಲ್ಲಿ ಜಾಗದ ಉಳಿತಾಯಕ್ಕಾಗಿ ಅಥವಾ ಅರಿವಿಲ್ಲದೆ ಅಡುಗೆಮನೆಯ ಸಿಂಕ್ ಅಡಿಯಲ್ಲಿ ಬೇಡದ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತದೆ. ಈ ಸಣ್ಣ ತಪ್ಪು ಹೇಗೆ ದೊಡ್ಡ ವಾಸ್ತು ದೋಷವಾಗಿ ಪರಿಣಮಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವರುಣ ದೇವನ ಸಂಕೇತ:

ಅಡುಗೆಮನೆಯ ಸಿಂಕ್ ನೀರಿನ ಮೂಲವಾಗಿದೆ ಮತ್ತು ಹಿಂದೂ ಧರ್ಮದಲ್ಲಿ ನೀರನ್ನು ವರುಣ ದೇವನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪವಿತ್ರ ಸ್ಥಾನದ ಅಡಿಯಲ್ಲಿ ಕಸದ ಬುಟ್ಟಿಯನ್ನು ಇಡುವುದು ವರುಣ ದೇವನಿಗೆ ಮಾಡುವ ಅಪಮಾನಕ್ಕೆ ಸಮಾನ. ಸಿಂಕ್‌ನ ಒಳಚರಂಡಿ ಮತ್ತು ಕಸದ ಬುಟ್ಟಿಯ ಕೆಟ್ಟ ವಾಸನೆ ಒಂದಾದಾಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ತಾಂಡವವಾಡುತ್ತದೆ. ಇದು ಕುಟುಂಬ ಸದಸ್ಯರ ಮಾನಸಿಕ ಶಾಂತಿಯನ್ನು ಕೆಡಿಸುವುದಲ್ಲದೆ, ಅನಗತ್ಯ ವೈದ್ಯಕೀಯ ಖರ್ಚುಗಳು ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಹೀಗಾಗಿ, ಕಸದ ಬುಟ್ಟಿಯನ್ನು ಯಾವಾಗಲೂ ಅಡುಗೆಮನೆಯ ವಾಯುವ್ಯ (North-West) ಮೂಲೆಯಲ್ಲಿ ಇರಿಸುವುದು ಶ್ರೇಯಸ್ಕರ.

ಪೊರಕೆ ಇಡಬೇಡಿ:

ಅನೇಕ ಗೃಹಿಣಿಯರು ಪೊರಕೆಯನ್ನು ಹೊರಗಿನವರಿಗೆ ಕಾಣದಂತೆ ಇಡಲು ಸಿಂಕ್ ಅಡಿಯಲ್ಲಿ ಅಡಗಿಸಿಡುತ್ತಾರೆ. ಆದರೆ ವಾಸ್ತು ಪ್ರಕಾರ, ಪೊರಕೆಯು ಭೂಮಿಯ ಅಂಶವನ್ನು ಮತ್ತು ಸಿಂಕ್ ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ. ಇವೆರಡೂ ಪರಸ್ಪರ ವಿರುದ್ಧ ಅಂಶಗಳಾಗಿದ್ದು, ಇವುಗಳನ್ನು ಒಟ್ಟಿಗೆ ಇಡುವುದರಿಂದ ಮನೆಯಲ್ಲಿ ಬಡತನ ಆವರಿಸಬಹುದು. ಪೊರಕೆಯು ಲಕ್ಷ್ಮಿಯ ಸಂಕೇತವೂ ಹೌದು, ಅದನ್ನು ನೀರು ಹರಿಯುವ ಸಿಂಕ್ ಅಡಿ ಇಡುವುದು ಶುಭವಲ್ಲ.

ರಾಹು ದೋಷ ತರುವ ಕೊಳಕು ಪಾತ್ರೆಗಳು:

ಇಂದಿನ ಧಾವಂತದ ಜೀವನದಲ್ಲಿ ರಾತ್ರಿ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿ ಬಿಡುವುದು ರೂಢಿಯಾಗಿದೆ. ಆದರೆ, ರಾತ್ರಿಯಿಡೀ ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾಶಿ ಹಾಕುವುದು ಅತ್ಯಂತ ಅಶುಭ. ಇದು ಮನೆಯಲ್ಲಿ ರಾಹು ದೋಷವನ್ನು ಉಂಟುಮಾಡುತ್ತದೆ ಮತ್ತು ಮನೆಯಲ್ಲಿ ಅನಾರೋಗ್ಯದ ವಾತಾವರಣ ಸೃಷ್ಟಿಸುತ್ತದೆ. ಪಾತ್ರೆಗಳಲ್ಲಿನ ಹಳಸಿದ ಆಹಾರದ ಅಂಶಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಆದ್ದರಿಂದ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಉತ್ತಮ. ಅನಿವಾರ್ಯ ಸಂದರ್ಭದಲ್ಲಿ, ಪಾತ್ರೆಗಳು ಒಣಗದಂತೆ ಅವುಗಳ ಮೇಲೆ ನೀರನ್ನು ಸುರಿದು ಇಡಬೇಕು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ರಾಸಾಯನಿಕ ಮತ್ತು ಪ್ಲಾಸ್ಟಿಕ್ ಚೀಲಗಳ ಸಂಗ್ರಹ:

ಸಿಂಕ್ ಅಡಿಯಲ್ಲಿ ಫಿನೈಲ್, ಹಾರ್ಪಿಕ್ ಅಥವಾ ಲಾಂಡ್ರಿ ಸೋಪುಗಳನ್ನು ಇಡುವುದು ಸಾಮಾನ್ಯ ರೂಢಿ. ಆದರೆ ಇವು ಹಾನಿಕಾರಕ ರಾಸಾಯನಿಕಗಳಾಗಿರುವುದರಿಂದ, ಶುದ್ಧ ಆಹಾರ ತಯಾರಿಸುವ ಅಡುಗೆಮನೆಯಲ್ಲಿ ಇವುಗಳ ಪ್ರಭಾವ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ತರಕಾರಿ ತಂದ ಪ್ಲಾಸ್ಟಿಕ್ ಚೀಲಗಳನ್ನು ಸಿಂಕ್ ಅಡಿ ತುರುಕುವುದು ಆರ್ಥಿಕ ಪ್ರಗತಿಗೆ ಅಡ್ಡಿಯುಂಟುಮಾಡುತ್ತದೆ. ಇವುಗಳು ತ್ಯಾಜ್ಯದ ಸಂಕೇತವಾಗಿದ್ದು, ಮನೆಯಲ್ಲಿ ಹಣಕಾಸಿನ ತೊಂದರೆಗಳನ್ನು ತಂದೊಡ್ಡುತ್ತವೆ. ಈ ವಸ್ತುಗಳನ್ನು ಸಂಗ್ರಹಿಸಲು ಪ್ರತ್ಯೇಕ ಕ್ಯಾಬಿನೆಟ್ ಅಥವಾ ಎತ್ತರದ ಸ್ಥಳವನ್ನು ಬಳಸುವುದರಿಂದ ವಾಸ್ತು ದೋಷವನ್ನು ತಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಬ್ಬ ಮಗನನ್ನು ಬಿಟ್ಟು ಉಳಿದ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆದ ತಾಯಿ; ಕೇಸ್ ಹಾಕಿದ ಮಗನಿಗೆ ಸೋಲು; ಕಾರಣ ಏನು? – Kannada News | Can a mother cut a son out of her Will? Kerala HC backs mother who inherited 46 cents of land from her husband and denied son a share

ತಿರುವನಂತಪುರಂ, ಮಾರ್ಚ್ 4: ಗಂಡನಿಂದ ದಾನವಾಗಿ ಬಂದ ಭೂಮಿಯನ್ನು ಮಹಿಳೆಯೊಬ್ಬರು ತನ್ನ ಆರು ಮಕ್ಕಳಲ್ಲಿ ಐವರಿಗೆ ಮಾತ್ರವೇ ಹಂಚಿಕೆ ಮಾಡಿ ವಿಲ್ ಬರೆದಿದ್ದರು. ಈಗ ಆಸ್ತಿ ಸಿಗದ ಆ ಒಬ್ಬ ಮಗ ಕೋರ್ಟ್ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯದಲ್ಲಿ ತಾಯಿಯ ಪರವಾಗಿ ತೀರ್ಪು ಬಂದಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ತನಗೆ ಹಕ್ಕಿದೆ ಎನ್ನುವ ಮಗನ ವಾದವನ್ನು ಕೋರ್ಟ್ ಒಪ್ಪಿಲ್ಲ.

ಏನಿದು ಪ್ರಕರಣ?

ವೆಂಕಿಟನ್ ಎಂಬ್ರಾಂದಿರಿ ಎಂಬುವವರು 1925ರಲ್ಲಿ ಒಂದು ಎಕರೆ 26 ಸೆಂಟ್ ಜಮೀನನ್ನು ಖರೀದಿ ಮಾಡುತ್ತಾರೆ. ಅವರಿಗೆ ಇಬ್ಬರು ಹೆಣ್ಮಕ್ಕಳು ಸೇರಿ ಆರು ಮಕ್ಕಳಿದ್ದರು. ಅವರಲ್ಲಿ ಟಿ.ವಿ. ರಾಮಚಂದ್ರ ರಾವ್ ಒಬ್ಬರು.

ವೆಂಕಿಟನ್ ಮೃತಪಟ್ಟಾಗ ಮಕ್ಕಳೆಲ್ಲರೂ 1967ರಲ್ಲಿ ಪಾರ್ಟಿಶನ್ ಡೀಡ್ ಮಾಡಿದರು. ಆಗ ರಾಮಚಂದ್ರ ರಾವ್ ಅವರಿಗೆ 37 ಸೆಂಟ್ ಆಸ್ತಿ ಸಿಕ್ಕಿತು. ರಾಧಮ್ಮ ಎನ್ನುವ ಸಹೋದರಿಯೊಬ್ಬರು ತನ್ನ ಪಾಲಿನ 9 ಸೆಂಟ್ ಜಾಗವನ್ನು ಬಿಟ್ಟುಕೊಡುತ್ತಾರೆ. ಟಿ.ವಿ. ರಾಮಚಂದ್ರರಾವ್ ಅವರಿಗೆ ಸಿಕ್ಕ ಜಾಗ 46 ಸೆಂಟ್​ಗೆ ಏರುತ್ತದೆ.

ಇದನ್ನೂ ಓದಿ:

1978ರಲ್ಲಿ ರಾಮಚಂದ್ರರಾವ್ ಈ 46 ಸೆಂಟ್ ಜಾಗವನ್ನು ತಮ್ಮ ಧರ್ಮಪತ್ನಿಗೆ ದಾನವಾಗಿ ನೀಡುತ್ತಾರೆ. 1986ರಲ್ಲಿ ರಾವ್ ಮೃತರಾಗುತ್ತಾರೆ. ಇವರಿಗೆ ಆರು ಮಕ್ಕಳಿದ್ದಾರೆ. ರಾಮಚಂದ್ರರಾವ್ ನಿಧನರಾಗಿ ಕೆಲ ವರ್ಷಗಳ ಬಳಿಕ ಅವರ ಪತ್ನಿ ವಿಲ್ ಬರೆಯುತ್ತಾರೆ. ಒಬ್ಬ ಮಗನನ್ನು ಬಿಟ್ಟು ಉಳಿದ ಐವರಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆಯುತ್ತಾರೆ.

ಇದನ್ನು ಆಕ್ಷೇಪಿಸಿ ಮಗ ಕೋರ್ಟ್ ಮೆಟ್ಟಿಲೇರುತ್ತಾನೆ. ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು ತನಗೆ ಹಕ್ಕು ಇದೆ ಎಂದು ವಾದಿಸುತ್ತಾನೆ. ಆದರೆ, ರಾಮಚಂದ್ರ ರಾವ್ ಅವರ ಕಾಪರ್ಸನರಿ ಪ್ರಾಪರ್ಟಿಯಲ್ಲವಾದ್ದರಿಂದ ಅವರ ಮಗನಿಗೆ ಆಸ್ತಿ ಹಕ್ಕು ಇಲ್ಲ. ಇದರ ಪೂರ್ಣ ಹಕ್ಕು ತನಗೇ ಸೇರಿದ್ದು ಎಂದು ಆತನ ತಾಯಿ ವಾದ ಮಾಡುತ್ತಾರೆ. ಕೋರ್ಟ್ ಕೂಡ ಈ ವಾದವನ್ನು ಪುರಸ್ಕರಿಸಿ, ತಾಯಿ ಪರವಾಗಿ ತೀರ್ಪು ಕೊಡುತ್ತದೆ.

ಇದನ್ನೂ ಓದಿ:

ಪಿತ್ರಾರ್ಜಿತ ಆಸ್ತಿ ಎನಿಸುವುದು ಹೇಗೆ?

ನಾಲ್ಕು ತಲೆಮಾರುಗಳಿಂದ ಯಾವುದೇ ಪಾರ್ಟಿಶನ್ ಇಲ್ಲದೇ ಆಸ್ತಿಯು ಬಳುವಳಿಯಾಗಿ ಬಂದಿರಬೇಕು. ಪಾರ್ಟಿಶನ್ ಆದಾಗ ಅದು ಸ್ವಂತ ಸಂಪಾದನೆ ಎಂದು ಪರಿಗಣಿತವಾಗುತ್ತದೆ. ರಾಮಚಂದ್ರರಾವ್ ಅವರು ತಮ್ಮ ತಂದೆಯಿಂದ ಆಸ್ತಿಯನ್ನು ಪಾರ್ಟಿಶನ್ ಡೀಡ್ ಮೂಲಕ ಪಡೆದಿದ್ದರು. ಹೀಗಾಗಿ, ಅದು ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಗೆ ಹಕ್ಕುದಾರರನ್ನಾಗಿ ಮಾಡಿರಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಹ್ರೇನ್​ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ – Kannada News | Iran’s Fresh Attack on US Air Base infra in Bahrain

ಬಹ್ರೇನ್, ಮಾರ್ಚ್ 4: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಕೂಡ ತನ್ನ ದಾಳಿಯನ್ನು ಮುಂದುವರೆಸಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಇರಾನ್ (Iran Attack) ಗುರಿಯಾಗಿಸಿಕೊಂಡಿದೆ. ಈಗಾಗಲೇ ಬಹ್ರೇನ್, ಕುವೈತ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ನಡೆದಿವೆ. ಇಂದು ಮತ್ತೆ ಇರಾನ್ ಬಹ್ರೇನ್​ನ ಯುಎಸ್ ವಾಯುನೆಲೆ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ದೃಶ್ಯವನ್ನು ಬಹ್ರೇನ್ ನಿವಾಸಿಗಳು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ರಿಲೀಸ್ ದಿನಾಂಕದಿಂದ ‘ಧುರಂಧರ್ 2’ ಹಾದಿ ಮತ್ತಷ್ಟು ಸುಲಭ – Kannada News | Toxic Postponement Boosts Dhurandhar 2: War Fears Clear Box Office Path

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸಾಕಷ್ಟು ನಡೆಯಿತು. ಆದರೆ, ಸದ್ಯಕ್ಕೆ ‘ಟಾಕ್ಸಿಕ್’ ತಂಡ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಂಡಿದೆ. ಇದು ಯಶ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ವಿಶ್ವ ಮಟ್ಟದಲ್ಲಿ ಮೂಡಿರುವ ಯುದ್ಧ ಭೀತಿಯ ಕಾರಣದಿಂದ ‘ಟಾಕ್ಸಿಕ್’ ರಿಲೀಸ್ ವಿಳಂಬ ಆಗುತ್ತಿದೆ ಎಂದು ತಂಡ ಹೇಳಿದೆ. ಈ ಬೆಳವಣಿಗೆಯಿಂದ ‘ಧುರಂಧರ್ 2’ ಹಾದಿ ಸುಗಮನ ಆಗಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಅವಕಾಶ ಇದೆ.

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಎರಡೂ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳು. ಎರಡೂ ಸಿನಿಮಾಗಳಿಗೆ ಹೆಚ್ಚಿನ ಚಿತ್ರಮಂದಿರಗಳು ಬೇಕು. ಎರಡೂ ಚಿತ್ರಗಳ ಬಜೆಟ್ ದೊಡ್ಡದಿರುವುದರಿಂದ ಹೆಚ್ಚಿನ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಎಲ್ಲಾ ಕಾರಣದಿಂದ ಯಾವುದಾದರೂ ಒಂದು ಚಿತ್ರ ಮುಂದಕ್ಕೆ ಹೋಗಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಎರಡೂ ತಂಡಗಳು ಹಠ ಹಿಡಿದು ಕುಳಿತಿದ್ದವು. ಆದರೆ, ಯುದ್ಧ ಭೀತಿ ಕಾರಣದಿಂದ ‘ಟಾಕ್ಸಿಕ್’ ಸದ್ಯದ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿಕೊಂಡಿದೆ.

‘ಧುರಂಧರ್ 2’ ಸಿನಿಮಾ ಹಿಂದಿ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿವೆ. ಈಗ ‘ಟಾಕ್ಸಿಕ್’ ರಿಲೀಸ್ ವಿಳಂಬದಿಂದ ದಕ್ಷಿಣ ಭಾರತದಲ್ಲೂ ಚಿತ್ರಕ್ಕೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಇವುಗಳಿಂದ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಬಹುದು. ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ಮೇಲೆ ಬ್ಯಾನ್ ಇರುವುದರಿಂದ ಯುದ್ಧ ಭೀತಿ ಈ ಸಿನಿಮಾ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ

‘ಧುರಂಧರ್ 2’ ಸಿನಿಮಾದ ಅವಧಿ 4 ಗಂಟೆ ಇದೆ ಎನ್ನಲಾಗಿದೆ. ಇಷ್ಟು ದೀರ್ಘ ಅವಧಿ ಇಟ್ಟುಕೊಂಡು ಪ್ರೇಕ್ಷಕರನ್ನು ಥಿಯೇಟರ್​​ಗೆ ಕರೆತರೋದು ಒಂದು ದೊಡ್ಡ ಸವಾಲು. ಅದನ್ನು ಸಿನಿಮಾ ಹೇಗೆ ಎದುರಿಸುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:46 am, Wed, 4 March 26

Source link

ಕರ್ನಾಟಕದಲ್ಲೂ ಬರಬೇಕು ಈ ಕಾಂಬೊ ಸಿನಿಮಾ ಟಿಕೆಟ್ ಆಫರ್ – Kannada News | Combo movie ticket offer with popcorn trending in Tollywood

ಜನರು ಚಿತ್ರಮಂದಿರಗಳಿಗೆ (Theater) ಬರುತ್ತಿಲ್ಲ ಎಂಬ ದೂರು ಹಲವು ವರ್ಷಗಳದ್ದು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಚಿತ್ರತಂಡಗಳು ನಾನಾ ಕಸರತ್ತು ಮಾಡುತ್ತಿವೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಭೇಟಿ ಕಡಿಮೆ ಆಗಲು ಮುಖ್ಯವಾಗಿ ದುಬಾರಿ ಬೆಲೆಯೇ ಕಾರಣ ಎನ್ನಲಾಗುತ್ತಿದೆ. ಈಗಿನ ದುಬಾರಿ ಜಮಾನಾನಲ್ಲಿ ಕುಟುಂಬವೊಂದು ಸಿನಿಮಾ ನೋಡಬೇಕೆಂದರೆ ಕನಿಷ್ಟ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳು ಖರ್ಚಾಗಿಬಿಡುತ್ತದೆ. ಟಿಕೆಟ್ ಬೆಲೆಯಷ್ಟೆ ಅಲ್ಲ ಪಾಪ್​​ಕಾರ್ನ್ ದರ, ಪಾರ್ಕಿಂಗ್ ದರ ಎಲ್ಲವೂ ದುಬಾರಿ ಆಗಿಬಿಟ್ಟಿವೆ. ಆದರೆ ಇದೀಗ ತೆಲುಗಿನಲ್ಲಿ ನಿರ್ಮಾಣ ಸಂಸ್ಥೆಯೊಂದು ಕುಟುಂಬ ಪ್ರೇಕ್ಷಕರನ್ನು ಸೆಳೆಯಲು ಒಳ್ಳೆಯ ಆಫರ್ ನೀಡಿದ್ದು, ಇತರೆ ನಿರ್ಮಾಣ ಸಂಸ್ಥೆಗಳೂ ಸಹ ಇದನ್ನು ಫಾಲೋ ಮಾಡಬಹುದಾಗಿದೆ.

ಇಟಿವಿ ವಿನ್ ಸಂಸ್ಥೆಯು ಟಿಕೆಟ್ ಮತ್ತು ತಿಂಡಿ-ತಿನಿಸುಗಳ ಬೆಲೆಗೆ ಸಂಬಂಧಿಸಿದಂತೆ ಪ್ರೇಕ್ಷಕ ಸ್ನೇಹಿ ಮತ್ತು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಹಿಂದೆ ಅವರು ತಮ್ಮ ಸಿನಿಮಾದ ಬಿಡುಗಡೆ ವೇಳೆ ಕೇವಲ 99 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಿದ್ದರು. ಈಗ, ಮಾರ್ಚ್ 6 ರಂದು ಬಿಡುಗಡೆಯಾಗಲಿರುವ ಅವರದ್ದೇ ನಿರ್ಮಾಣದ ಶಿವಾಜಿ ನಟನೆಯ ‘ಸಂಪ್ರದಾಯಿನಿ ಸುಪ್ಪಿಣಿ ಶುದ್ಧಪೂಸನಿ’ ಚಿತ್ರಕ್ಕಾಗಿ ಅವರು ಕುಟುಂಬ ಪ್ರೇಕ್ಷಕರನ್ನು ಸೆಳೆಯಲು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕುಟುಂಬ ಪ್ರೇಕ್ಷಕರನ್ನು ಸೆಳೆಯಲೆಂದು ಅವರು ಕಾಂಬೊ ಟಿಕೆಟ್ ಆಫರ್ ಬಿಡುಗಡೆ ಮಾಡಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೇವಲ 499 ರೂಪಾಯಿಗಳಿಗೆ ನಾಲ್ಕು ಟಿಕೆಟ್‌ಗಳು ಮತ್ತು ಒಂದು ದೊಡ್ಡ ಪಾಪ್‌ಕಾರ್ನ್ ಬಕೆಟ್ ಒಳಗೊಂಡ ಕಾಂಬೋ ಆಫರ್ ಅನ್ನು ಹೊರತಂದಿದ್ದಾರೆ. ಮಲ್ಟಿಪ್ಲೆಕ್ಸ್​​ನಲ್ಲೂ ಸಹ ಈ ಆಫರ್ ಚಾಲ್ತಿಯಲ್ಲಿದ್ದು 799 ರೂಪಾಯಿಗೆ ಮಲ್ಟಿಪ್ಲೆಕ್ಸ್​​ನಲ್ಲಿ ನಾಲ್ಕು ಜನ ಸಿನಿಮಾ ನೋಡಬಹುದು ಅದೂ ಒಂದು ದೊಡ್ಡ ಪಾಪ್​​ಕಾರ್ನ್ ಬಕೆಟ್ ಉಚಿತವಾಗಿ ಸವಿಯಬಹುದಾಗಿದೆ. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಲು ಇದೊಂದು ಒಳ್ಳೆಯ ಪ್ರಯತ್ನ ಆಗಿದೆ.

ಇದನ್ನೂ ಓದಿ:ಕೆವಿಎನ್​​ಗೆ ಕೈಕೊಟ್ಟ ಅದೃಷ್ಟ, ಎರಡು ದೊಡ್ಡ ಸಿನಿಮಾ ಬಿಡುಗಡೆ ಮುಂದೂಡಿಕೆ

ಕನ್ನಡದಲ್ಲಿ ಈ ಹಿಂದೆ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ ಎಂಬ ಆಫರ್ ಹರಿದಾಡಿತ್ತು. ಕೆಲವು ಸಿನಿಮಾಗಳಿಗೆ ಇದರಿಂದ ಉಪಯೋಗ ಆಗಿತ್ತಾದರೂ ಈ ಆಫರ್​​ಗಳು ಸಿನಿಮಾ ಬಿಡುಗಡೆ ಆದ ಬಳಿಕ ಹೊರತಂದ ಆಫರ್​​ಗಳಾಗಿದ್ದವು. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಇಂಥಹದ್ದೊಂದು ಆಫರ್ ನೀಡಿ, ಜೊತೆಗೆ ಪಾಪ್​​ಕಾರ್ನ್ ಅನ್ನೂ ಸಹ ಅದಕ್ಕೆ ಸೇರಿಸಿರುವುದು ಅಷ್ಟಾಗಿಯೂ ಟಿಕೆಟ್ ಬೆಲೆಯನ್ನು ಕಡಿಮೆಯೇ ಇರಿಸಿರುವುದು ಜಾಣ ಆಫರ್ ಎನಿಸಿಕೊಂಡಿದೆ.

ಈ ಹಿಂದೆ ಇಟಿವಿ ವಿನ್ ಸಂಸ್ಥೆಯು ತಮ್ಮ ‘ರಾಜು ವೆಡ್ಸ್ ರಾಂಭಾಯ್’ ಸಿನಿಮಾಕ್ಕೆ 99 ರೂಪಾಯಿ ಟಿಕೆಟ್ ನೀಡಿತ್ತು. ಅದೇ ದಿನ ಬಿಡುಗಡೆಯಾದ ಪ್ರಿಯದರ್ಶಿ ನಟನೆಯ ‘ಪ್ರೇಮಂತೆ’ ಚಿತ್ರವು ಸಾಮಾನ್ಯ ದರದಲ್ಲಿ ಬಿಡುಗಡೆಯಾಗಿತ್ತು. ಆಗ ಟಿಕೆಟ್ ದರದ ಬಗ್ಗೆ ತುಸು ವಿವಾದ, ಚರ್ಚೆಗಳು ಸಹ ಚಿತ್ರರಂಗದಲ್ಲಿ ಆಗಿದ್ದವು. ಆದರೆ ಇಟಿವಿ ವಿನ್​​ಗೆ ಟಿಕೆಟ್ ಬೆಲೆ ಕಡಿಮೆ ಇರಿಸಿದ್ದರಿಂದ ಲಾಭವೇ ಆಗಿತ್ತು ಎನ್ನಲಾಗಿದೆ.

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿದೆ. ಕರ್ನಾಟಕದಲ್ಲಿ ಕುಟುಂಬವೊಂದು ಸಿನಿಮಾಕ್ಕೆ ಹೋದಾಗ ಆಗುವ ಖರ್ಚು ಬಲು ದುಬಾರಿ ಆಗಿದೆ. ಹಾಗಾಗಿ ಕರ್ನಾಟಕದಲ್ಲಿ ಈ ರೀತಿಯ ಕಾಂಬೊ ಟಿಕೆಟ್ ಆಫರ್​​ಗಳು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.

Source link

ಪತ್ರಕರ್ತೆಯರಿಗೆ ಶುಭಸುದ್ದಿ; ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ತರಬೇತಿಗೆ ಅರ್ಜಿ ಆಹ್ವಾನ – Kannada News | Karnataka Media Academy: Women Journalists AI and Digital Training with Infosys CSR

ರ್ನಾಟಕ ಮಾಧ್ಯಮ ಅಕಾಡೆಮಿಯಿಂದ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು, ಮಾರ್ಚ್ 04: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತೆಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ಫೋಸಿಸ್ (Infosys) ಸಿ.ಎಸ್.ಆರ್ ಕಾರ್ಯಕ್ರಮದಡಿ ಈ ತರಬೇತಿ ನಡೆಯಲಿದ್ದು, ಅರ್ಹ ಪತ್ರಕರ್ತೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾರ್ಚ್ 25ರಿಂದ 27ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮೂರು ದಿನಗಳ ವಸತಿಯುತ ತರಬೇತಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಗೂಗಲ್ ಫಾರ್ಮ್ https://forms.gle/tozr4GxUQibDHBvk9 ಮೂಲಕ ಅಗತ್ಯ ಮಾಹಿತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಅರ್ಜಿ ಸಲ್ಲಿಸುವ ವೇಳೆ ಭಾವಚಿತ್ರ, ವಯಸ್ಸಿನ ಪ್ರಮಾಣಪತ್ರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರ ಅಥವಾ ಅಧಿಕೃತ ಗುರುತಿನ ಚೀಟಿ, ಸಂಬಂಧಿತ ಮಾಧ್ಯಮ ಸಂಸ್ಥೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾನ್ಯ ಪಟ್ಟಿಯಲ್ಲಿ ಸೇರಿರುವ ದಾಖಲೆ ಹಾಗೂ ಕನಿಷ್ಠ ಐದು ವರ್ಷದ ಸೇವಾನುಭವದ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ

ಮೂರು ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ ಬಳಕೆ, ಕೃತಕ ಬುದ್ಧಿಮತ್ತೆ (ಎಐ) ಉಪಯೋಗ, ಸಾಫ್ಟ್ ಸ್ಕಿಲ್ ಅಭಿವೃದ್ಧಿ ಹಾಗೂ ನಾಯಕತ್ವ ತರಬೇತಿ ನೀಡಲಾಗುತ್ತದೆ. ಭಾಗವಹಿಸುವ ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆಯೂ ನೀಡಲಾಗುವುದು. ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಕರ್ನಾಟಕ ಮಾಧ್ಯಮ ಅಕಾಡೆಮಿಯದ್ದೇ ಆಗಿರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದೆ. ಆಸಕ್ತ  ಪತ್ರಕರ್ತೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಬೀದಿ ನಾಯಿಗಳ ಕಾಟ: ಮಕ್ಕಳು, ವೃದ್ಧರ ಮೇಲೆ ಮನಸೋ ಇಚ್ಛೆ ದಾಳಿ – Kannada News | Stray Dog Menace Grips Bengalurus Ahad Serenity Apartment Residents

ಬೆಂಗಳೂರು, ಮಾರ್ಚ್​​ 04: ಅಹದ್ ಸೆರೆನಿಟಿ ಅಪಾರ್ಟ್​ಮೆಂಟ್ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನಿವಾಸಿಗಳು ನಾಯಿಗಳ ಕಾಟದಿಂದ ಮುಕ್ತಿ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಮತ್ತು ವಯಸ್ಕರ ಮೇಲೆ ಬೀದಿ ನಾಯಿಗಳು ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತಿರುವುದು ದೈನಂದಿನ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ತಮ್ಮ ಮಗಳ ಮೇಲೆ 24 ದಿನಗಳ ಹಿಂದೆ ನಾಯಿಗಳು ದಾಳಿ ಮಾಡಿ ಕೈ ಮುರಿದ ಘಟನೆಯನ್ನು ಇದೇ ವೇಳೆ ನಿವಾಸಿ ಒಬ್ಬರು ಹಂಚಿಕೊಂಡಿದ್ದಾರೆ. ಇದರಿಂದ ಆಕೆ ಶಾಲೆಗೂ ಹೋಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಅಪಾರ್ಟ್​ಮೆಂಟ್ ನಿವಾಸಿಗಳು ತಮ್ಮ ರಕ್ಷಣೆಗಾಗಿ ಲಾಠಿ ಹಿಡಿದುಕೊಂಡು ಓಡಾಡುವಂತಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ – Kannada News | Iran Israel war: Modi Government sets up control room for Indians issues helpline numbers

ನವದೆಹಲಿ, ಮಾರ್ಚ್ 4: ಇಸ್ರೇಲ್-ಯುಎಸ್-ಇರಾನ್ ಸಂಘರ್ಷ (Iran Conflict) ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಸಹಾಯ ಒದಗಿಸಲು ವಿದೇಶಾಂಗ ಸಚಿವಾಲಯ (MEA) ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್​ನಲ್ಲಿ ಕೆಲವು ವಿವರಗಳನ್ನು ಹಂಚಿಕೊಂಡಿದ್ದು, “ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ನಿಯಂತ್ರಣ ಕೊಠಡಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸುತ್ತದೆ. ಇದನ್ನು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು. 1800118797 (ಟೋಲ್ ಫ್ರೀ), +91 11 2301 2113, +91 11 2301 4104 ಮತ್ತು +91 11 2301 7905. ವಿದೇಶಾಂಗ ಸಚಿವಾಲಯವು ಈ ಪ್ರದೇಶದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸಿದೆ.

ಇದನ್ನೂ ಓದಿ: Video: ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ

ಭಾರತೀಯ ರಾಯಭಾರ ಕಚೇರಿಗಳಿಗೆ ತುರ್ತು ಸಂಖ್ಯೆಗಳು:

ಬಹ್ರೇನ್: +973 39418071

ಇರಾನ್: +98 9128109115 / +98 912810910 / +98 932179359

ಇರಾಕ್: +964 771 651 1185 / +964 770444 4899

ಇಸ್ರೇಲ್: +972 54 7520711 / +972 54 2428378

ಜೋರ್ಡಾನ್: +962 770 422 276

ಕುವೈತ್: +965 65501946

ಲೆಬನಾನ್: +961 76860128

ಒಮನ್: +968 98282270 (WhatsApp) / 80071234 (ಟೋಲ್ ಫ್ರೀ)

ಕತಾರ್: +974 55647502

ರಮಲ್ಲಾ, ಪ್ಯಾಲೆಸ್ಟೈನ್: +970 592916418

ಸೌದಿ ಅರೇಬಿಯಾ (ರಿಯಾದ್): +966 11 4884697 / 800 247 1234 (ಟೋಲ್ ಫ್ರೀ)

ಸೌದಿ ಅರೇಬಿಯಾ (ಜೆಡ್ಡಾ): +966 126648660 / +966 12 2614093

ಯುನೈಟೆಡ್ ಅರಬ್ ಎಮಿರೇಟ್ಸ್: +971 543090571 (WhatsApp) / 800 46342 (ಟೋಲ್ ಫ್ರೀ)

ಈ ದೇಶಗಳಲ್ಲಿರುವ ಭಾರತೀಯ ಪ್ರಜೆಗಳು ತಮ್ಮ ತಮ್ಮ ರಾಯಭಾರ ಕಚೇರಿಗಳೊಂದಿಗೆ ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version