ಇರಾನ್ ಮೇಲಿನ ವೈಮಾನಿಕ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್ – Kannada News | Israel releases first video of Airstrikes on Iran as part of Operation Roaring Lion

ಜೆರುಸಲೇಂ, ಫೆಬ್ರವರಿ 28: ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್ (Iran) ಮೇಲೆ ವೈಮಾನಿಕ ದಾಳಿ ನಡೆಸಿದ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹೊಸ ವಿಡಿಯೋ ಯುನೈಟೆಡ್ ಸ್ಟೇಟ್ಸ್ (US) ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಕ್ಷಣವನ್ನು ತೋರಿಸಿದೆ. ಆದರೆ, ಈ ವಿಡಿಯೋದಲ್ಲಿ ಈ ದಾಳಿಯನ್ನು ಎಲ್ಲಿ ನಡೆಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಆರಂಭಿಸಿದ ‘ಆಪರೇಷನ್ ರೋರಿಂಗ್ ಲಯನ್‌’ನ ಭಾಗವಾಗಿ ನಡೆದ ವೈಮಾನಿಕ ದಾಳಿಯ ಕಾರ್ಯಾಚರಣೆ ಇದಾಗಿದೆ. ಈ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಕಚೇರಿಯನ್ನೂ ಗುರಿಯಾಗಿರಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರೆಗ್ನೆನ್ಸಿಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ? ಇದು ಅಸಿಡಿಟಿ ಹೆಚ್ಚಿಸುತ್ತದೆಯೇ ತಿಳಿದುಕೊಳ್ಳಿ – Kannada News | Is Tea Safe in Pregnancy?

ಗರ್ಭಾವಸ್ಥೆಯ (Pregnancy) ಸಮಯದಲ್ಲಿ ಆಹಾರ ಪದ್ಧತಿಗೆ ವಿಶೇಷ ಗಮನ ನೀಡುವುದು ಅತ್ಯಂತ ಅಗತ್ಯ. ಏಕೆಂದರೆ ಈ ಅವಧಿಯಲ್ಲಿ ಮಹಿಳೆಯ ದೇಹವು ತನ್ನಿಗಷ್ಟೇ ಅಲ್ಲದೆ ಗರ್ಭದಲ್ಲಿರುವ ಶಿಶುವಿಗೂ ಪೋಷಣೆಯನ್ನು ಒದಗಿಸಬೇಕಾಗುತ್ತದೆ. ಅಸಮತೋಲಿತ ಆಹಾರದಿಂದ ದೌರ್ಬಲ್ಯ, ದಣಿವು, ತಲೆ ಸುತ್ತು, ಅನೀಮಿಯಾ, ಅಸಿಡಿಟಿ ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಕಂಡುಬರಬಹುದು. ಪೋಷಕಾಂಶಗಳ ಕೊರತೆ ಶಿಶುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು, ಏನು ತಪ್ಪಿಸಬೇಕು ಎಂಬ ಅರಿವು ಬಹಳ ಮುಖ್ಯ. ಅದರಲ್ಲಿಯೂ ಬಹುತೇಕ ಮಹಿಳೆಯರ ದಿನಚರಿ ಚಹಾದಿಂದ ಆರಂಭವಾಗುವುದರಿಂದ ಗರ್ಭಾವಸ್ಥೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುತ್ತದೆ. ಚಹಾದಲ್ಲಿರುವ ಕೆಫೀನ್, ಹಾಲು ಮತ್ತು ಸಕ್ಕರೆ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸಣ್ಣ ನಿರ್ಲಕ್ಷ್ಯವೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಚಹಾವನ್ನು ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ರೀತಿಯಲ್ಲಿ ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಗರ್ಭಾವಸ್ಥೆಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ?

ಡಾ. ಅನಾಮಿಕಾ ಗೌರ್ ಹೇಳುವ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಿತ ಪ್ರಮಾಣದಲ್ಲಿ ಚಹಾ ಕುಡಿಯುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಅತಿಯಾದ ಸೇವನೆ ಹಾನಿಕಾರಕವಾಗಬಹುದು. ಚಹಾದಲ್ಲಿರುವ ಕೆಫೀನ್ ದೇಹದಲ್ಲಿ ಕಬ್ಬಿಣದ ಅಂಶವನ್ನು ಕಡಿಮೆ ಮಾಡಬಹುದು. ಇದರಿಂದ ಅನೀಮಿಯಾ ಅಪಾಯ ಹೆಚ್ಚಾಗಬಹುದು. ಅಷ್ಟೇಅಲ್ಲ ಹೆಚ್ಚೆಚ್ಚು ಚಹಾ ಕುಡಿಯುವುದರಿಂದ ಅಸಿಡಿಟಿ, ಗ್ಯಾಸು ಮತ್ತು ಎದೆ ಉರಿಯುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ ಗರ್ಭಾವಸ್ಥೆಯಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುವುದರಿಂದ ಅವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಮಹಿಳೆಯರಲ್ಲಿ ಚಹಾ ಸೇವನೆಯಿಂದ ನಿದ್ರೆ ಕೊರತೆ ಮತ್ತು ಹೃದಯ ಬಡಿತ ವೇಗವಾಗಬಹುದು. ಆದ್ದರಿಂದ ದಿನಕ್ಕೆ ಒಂದು ಕಪ್‌ಗಿಂತ ಹೆಚ್ಚು ಚಹಾ ಕುಡಿಯದಂತೆ ಸಲಹೆ ನೀಡಲಾಗುತ್ತದೆ. ಆದರೆ ಅಸಿಡಿಟಿ ಅಥವಾ ವಾಂತಿ ಸಮಸ್ಯೆ ಹೆಚ್ಚಿದ್ದರೆ ಚಹಾವನ್ನು ತಪ್ಪಿಸುವುದು ಒಳಿತು. ವೈದ್ಯರ ಸಲಹೆಯ ಮೇರೆಗೆ ಮಾತ್ರ ಚಹಾ ಸೇವಿಸುವುದು ಸುರಕ್ಷಿತ.

ಚಹಾಕ್ಕೆ ಬದಲಾಗಿ ಏನು ಕುಡಿಯಬಹುದು?

ಗರ್ಭಿಣಿಯರು ಚಹಾಕ್ಕೆ ಬದಲಾಗಿ ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಬಿಸಿ ಹಾಲಿನ ಸೇವನೆ ಮಾಡಬಹುದು. ಇದು ಕ್ಯಾಲ್ಸಿಯಂ ಒದಗಿಸುತ್ತದೆ, ಎಲುಬುಗಳ ಬಲಕ್ಕೆ ಸಹಾಯಕವಾಗಿರುತ್ತದೆ. ಜೊತೆಗೆ ಏಳನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ, ಜೊತೆಗೆ ದಣಿವನ್ನು ಕೂಡ ಕಡಿಮೆ ಮಾಡುತ್ತದೆ. ನಿಂಬು ನೀರು ಕೂಡ ಒಳ್ಳೆಯದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇವುಗಳ ಬದಲು ಅಭ್ಯಾಸವಿದ್ದರೆ ಶುಂಠಿ ಕಷಾಯವನ್ನು ಕೂಡ ಮಾಡಿ ಕುಡಿಯಬಹುದು. ಇದು ವಾಂತಿಯ ಭಾವನೆ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಅಷ್ಟು ಮಾತ್ರವಲ್ಲ, ಹರ್ಬಲ್ ಪಾನೀಯಗಳನ್ನು ಕೂಡ ಕುಡಿಯಬಹುದು. ಆದರೆ ಅದರ ಮೊದಲು ವೈದ್ಯರಿಂದ ಸಲಹೆ ಪಡೆದುಕೊಳ್ಳಬೇಕು. ಈ ಪರ್ಯಾಯಗಳು ದೇಹಕ್ಕೆ ಪೋಷಕಾಂಶ ಒದಗಿಸುವುದರ ಜೊತೆಗೆ ಅಸಿಡಿಟಿ ಅಪಾಯವನ್ನು ಕಡಿಮೆ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಹಲವಾರು ಸಿನಿಮಾಗಳು: ಆಯ್ಕೆ ನಿಮ್ಮದು – Kannada News | OTT Release this week from February 25 to February 30

ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಜಯದೀಪ್ ಅಲಾವತ್ ಮತ್ತು ದಿವಂಗತ ಧರ್ಮೇಂದ್ರ ಅವರು ನಟಿಸಿರುವ ಯುದ್ಧದ ಕುರಿತಾದ ಸಿನಿಮಾ ‘ಇಕ್ಕೀಸ್’ ಚಿತ್ರಮಂದಿರಗಳಲ್ಲಿ ಸಖತ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಹಿಂದೆ ರೆಂಟ್​​ಗೆ ಮಾತ್ರವೇ ಲಭ್ಯವಿತ್ತು.

ಕನ್ನಡದ ಪ್ರತಿಭಾವಂತ ನಟ ನವೀನ್ ಶಂಕರ್ ನಟನೆಯ ‘ಕ್ಷೇತ್ರಪತಿ’ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ಈ ರೈತಪರ ಸಿನಿಮಾ, ಮೂರು ವರ್ಷಗಳ ಬಳಿಕ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 ವರ್ಷಗಳ ಹಿಂದೆ ಸಾಕಷ್ಟು ಸದ್ದು ಮಾಡಿದ್ದ ಗಣೇಶ್ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಸಿದ್ಧ ಎಂಬ ಬಾಲಕನ ಕತೆ ಹೊಂದಿರುವ ಈ ಸಿನಿಮಾವನ್ನು ಸನ್ ನೆಕ್ಸ್ಟ್​​ನಲ್ಲಿ ಈ ವಾರದಿಂದ ವೀಕ್ಷಿಸಬಹುದಾಗಿದೆ.

ಲಿಯೊನಾರ್ಡೊ ಡಿಕ್ಯಾಪ್ರಿಯೊ ನಟಿಸಿರುವ ಹಲವು ಆಸ್ಕರ್ ನಾಮಿನೇಷನ್ ಪಡೆದಿರುವ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಈ ವಾರ ಭಾರತದ ಒಟಿಟಿಗೆ ಬಂದಿದೆ. ಈ ಹಿಂದೆಯೇ ವಿದೇಶದ ಕೆಲವು ಒಟಿಟಿಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈ ವಾರದಿಂದ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

1999 ರ ಸಮಯದಲ್ಲಿ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆದ ನಿಜ ಘಟನೆಗಳನ್ನು ಆಧರಿಸಿದ ಕ್ರೈಂ ಥ್ರಿಲ್ಲರ್ ‘ತಡೆಯುಮ್’. ಸಮುದ್ರಕಿಣಿ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದ್ದು ಜೀ 5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. 19ನೇ ಶತಮಾನದ ಆರಂಭದಲ್ಲಿ ನಡೆಯುವ ಸಮುದ್ರ ದರೋಡೆಕೋರರ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರಿಯಾಂಕಾ ಚೋಪ್ರಾ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

Published On – 4:23 pm, Sat, 28 February 26

Source link

T20 World Cup: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಬಾಬರ್ ಆಝಂ ಔಟ್ – Kannada News | T20 World Cup: Pakistan’s Semi Final Quest Against Sri Lanka; Babar Azam Dropped in Crucial Super 8 Clash

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಈ ಪಂದ್ಯ ಶ್ರೀಲಂಕಾಗೆ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈ ಸುತ್ತಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ತಂಡ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ. ಆದರೆ ಪಾಕಿಸ್ತಾನಕ್ಕೆ ಸೆಮಿಫೈನಲ್​ಗೇರುವ ಅವಕಾಶವಿರುವುದರಿಂದ ಅರ್ಹತೆ ಪಡೆಯಲು ಹೋರಾಟ ನಡೆಸಲಿದೆ. ಹೀಗಾಗಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿದಿರುವ ಪಾಕ್ ತಂಡದ ಪ್ಲೇಯಿಂಗ್​ 11ನಲ್ಲಿ ಬದಲಾವಣೆಗಳಾಗಿವೆ. ಪ್ರಮುಖವಾಗಿ ಮಾಜಿ ನಾಯಕ ಬಾಬರ್ ಆಝಂರನ್ನು ಈ ನಿರ್ಣಾಯಕ ಪಂದ್ಯದಿಂದ ಹೊರಗಿಡಲಾಗಿದೆ.

ಟಾಸ್ ಗೆದ್ದ ಶ್ರೀಲಂಕಾ

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಪಾಕಿಸ್ತಾನ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಮಾಜಿ ನಾಯಕ ಬಾಬರ್ ಆಝಂ, ಸೈಮ್ ಅಯೂಬ್ ಮತ್ತು ಸಲ್ಮಾನ್ ಮಿರ್ಜಾ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಮತ್ತೊಂದೆಡೆ ಶ್ರೀಲಂಕಾ ಕೂಡ ಎರಡು ಬದಲಾವಣೆಗಳನ್ನು ಮಾಡಿದೆ.

ಪಾಕ್ ಸೆಮೀಸ್​ಗೇರಬೇಕೆಂದರೆ ಏನು ಮಾಡಬೇಕು?

ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕೆಂದರೆ, ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿ 160 ರನ್ ಗಳಿಸಿದರೆ, ಆ ಪಂದ್ಯವನ್ನು 64 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆಲ್ಲಬೇಕಾಗುತ್ತದೆ. ಹಾಗೆಯೇ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿ, ಶ್ರೀಲಂಕಾವನ್ನು 160 ರನ್‌ಗಳಿಗೆ ಕಟ್ಟಿಹಾಕಿದರೆ, ಪಂದ್ಯವನ್ನು 40+ ಎಸೆತಗಳಲ್ಲಿ ಅಥವಾ 13.1 ಓವರ್‌ಗಳಲ್ಲಿ ಗೆದ್ದುಕೊಳ್ಳಬೇಕಾಗಿದೆ. ಒಂದು ವೇಳ ಪಾಕಿಸ್ತಾನ ಹಾಗೆ ಮಾಡಲು ವಿಫಲವಾದರೆ, ನ್ಯೂಜಿಲೆಂಡ್ ಉತ್ತಮ ನೆಟ್ ರನ್​ರೇಟ್ ಆಧಾರದ ಮೇಲೆ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಉಭಯ ತಂಡಗಳು

ಪಾಕಿಸ್ತಾನ ತಂಡ: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಅಘಾ (ನಾಯಕ), ಖವಾಜಾ ನಫೆ, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ (ವಿಕೆಟ್ ಕೀಪರ್), ಚರಿತ್ ಅಸಲಂಕ, ಪವನ್ ರತ್ನಾಯಕೆ, ಕಮಿಂದು ಮೆಂಡಿಸ್, ದಸುನ್ ಶನಕ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

Source link

ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ – Kannada News | Iran Israel War: JDS MLC Bhoje Gowda and Family Stranded at Dubai Airport

ದುಬೈ, ಫೆಬ್ರವರಿ 28: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಅತಿದೊಡ್ಡ ಕಾರ್ಯಾಚರಣೆಯನ್ನೇ ಆರಂಭಿಸಿದೆ. ಅಮೆರಿಕದ-ಇಸ್ರೇಲ್ ಸೇನೆ ಹಾರಿಸಿದ ಕ್ಷಿಪಣಿ, ಇರಾನ್ ರಾಜಧಾನಿ ಟೆಹರಾನ್​ಗೆ ಅಪ್ಪಳಿಸುತ್ತಲೇ ಮಧ್ಯಪ್ರಾಚ್ಯ ತಲ್ಲಣಗೊಂಡಿದೆ. ಸದ್ಯ ಈ ಯುದ್ಧದ ಕನ್ನಡಿಗರಿಗೂ ತಟ್ಟಿದೆ. ಯುದ್ಧ ಹಿನ್ನಲೆ ದುಬೈ ಏರ್​​​ಪೋರ್ಟ್​ನಲ್ಲಿ ವಿಮಾನ ಪ್ರಯಾಣ ಸ್ಥಗಿತವಾಗಿದೆ. ಹೀಗಾಗಿ ಕುಟುಂಬ ಸಮೇತರಾಗಿ ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ ದುಬೈ ಏರ್​​​ಪೋರ್ಟ್​ನಲ್ಲಿ ಸಿಲುಕಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ವಿಮಾನ ಪ್ರಯಾಣ ಸ್ಥಗಿತವಾಗಿವೆ. ಈ ಬಗ್ಗೆ ಭೋಜೇಗೌಡ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ವಾರಣಾಸಿ’: ಇನ್ನೂ ಎಷ್ಟು ತಿಂಗಳ ಚಿತ್ರೀಕರಣ ಬಾಕಿ ಇದೆ? – Kannada News | Priyanka Chopra talks about how much months of Varanasi movie shoot left

ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಚಿತ್ರರಂಗದಿಂದ ದೂರವೇ ಉಳಿದಿದ್ದ ಪ್ರಿಯಾಂಕ ಸುಮಾರು 7 ವರ್ಷಗಳ ಸುದೀರ್ಘ ಬಿಡುವಿನ ನಂತರ ಭಾರತೀಯ ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳುತ್ತಿದ್ದಾರೆ. ಅದು ಕೂಡ ಪ್ರಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಆಕ್ಷನ್-ಅಡ್ವೆಂಚರ್ ಚಿತ್ರ ‘ವಾರಣಾಸಿ’ ಮೂಲಕ ಎನ್ನುವುದು ವಿಶೇಷ.

ಇತ್ತೀಚೆಗೆ ಅಮೆರಿಕದ ಖ್ಯಾತ ಜಿಮ್ಮಿ ಫಾಲನ್ ಟಾಕ್ ಶೋನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ‘ದಿ ಬ್ಲಫ್’ ಸಿನಿಮಾದ ಜೊತೆಗೆ ‘ವಾರಣಾಸಿ’ ಸಿನಿಮಾದ ಬಗೆಯೂ ಕೆಲವು ಕುತೂಹಲಕಾರಿ ಅಪ್‌ಡೇಟ್‌ಗಳನ್ನು ಹಂಚಿಕೊಂಡರು. ವಿಶೇಷವಾಗಿ ‘ವಾರಣಾಸಿ’ ಸಿನಿಮಾದ ಶೂಟಿಂಗ್ ಇನ್ನೆಷ್ಟು ದಿನ ಉಳಿದಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶೋನಲ್ಲಿ ‘ವಾರಣಾಸಿ’ ಸಿನಿಮಾ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ‘ನಾವು ಕಳೆದ 14 ತಿಂಗಳುಗಳಿಂದ ಈ ಚಿತ್ರದ ಶೂಟಿಂಗ್ ಮಾಡುತ್ತಿದ್ದೇವೆ. ಇನ್ನೂ ಸುಮಾರು 6 ತಿಂಗಳ ಚಿತ್ರೀಕರಣ ಬಾಕಿ ಇದೆ. ಅಂದರೆ ಒಟ್ಟಾರೆಯಾಗಿ 20 ತಿಂಗಳುಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ’ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಅದೇ ಶೋನಲ್ಲಿ ರಾಜಮೌಳಿ ಅವರ ಪ್ರತಿಭೆಯನ್ನು ಕೊಂಡಾಡಿದ ಪ್ರಿಯಾಂಕಾ, ‘ಅವರು ಭಾರತದ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅವರ ಜೊತೆ ಕೆಲಸ ಮಾಡುವುದು ಒಂದು ಸಾಹಸಮಯ ಅನುಭವದಂತಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ?

‘ವಾರಣಾಸಿ’ ಸಿನಿಮಾದ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ರಾಜಮೌಳಿ ಅವರು ಜಾರ್ಜಿಯಾ ದೇಶಕ್ಕೆ ತೆರಳಿದ್ದಾರೆ. ಅಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಅವರೊಂದಿಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಭಾರತದ ಈವರೆಗಿನ ಭಾರೀ ಬಜೆಟ್‌ ಪ್ಯಾನ್-ಇಂಡಿಯಾ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾವು ಏಪ್ರಿಲ್ 7, 2027 ರಂದು ತೆರೆಕಾಣುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ವಿಂಡೀಸ್ ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್‌ ಎದುರಾಳಿ ಇಂಗ್ಲೆಂಡ್‌ – Kannada News | India vs England T20 WC Semi Final Showdown Looms; Pakistan’s Crucial Match Explained

ಅಲ್ಲದೆ, ಇಂಗ್ಲೆಂಡ್ ಗೆಲುವಿನಿಂದಾಗಿ, ಸೆಮಿಫೈನಲ್‌ನಲ್ಲಿ ಯಾವ 2 ತಂಡಗಳು ಪರಸ್ಪರ ಎದುರಾಗಲಿವೆ? ಎಂಬುದು ಕೂಡ ಭಾಗಶಃ ಖಚಿತವಾಗಿದೆ. ಸೆಮಿಫೈನಲ್ ತಲುಪಲು ಟೀಂ ಇಂಡಿಯಾ ಮಾರ್ಚ್ 1 ರ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ನಲ್ಲಿ ತನ್ನ ಮೂರನೇ ಮತ್ತು ಅಂತಿಮ ಪಂದ್ಯವನ್ನು ಆಡಬೇಕಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ನಲ್ಲಿ ನಿರ್ಣಾಯಕ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

Source link

HPV Vaccination Drive: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷದ ಬಾಲಕಿಯರಿಗೆ HPV ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ – Kannada News | PM Modi launches HPV Vaccination drive for 14 year old girls to combat cervical cancer

ನವದೆಹಲಿ, ಫೆಬ್ರವರಿ 28: ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ 14 ವರ್ಷದ ಎಲ್ಲಾ ಬಾಲಕಿಯರಿಗೆ HPV (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಗರ್ಭಕಂಠದ ಕ್ಯಾನ್ಸರ್ (cervical cancer) ನಿಯಂತ್ರಣಕ್ಕೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಇಂದು ಈ ಹೆಚ್​ಪಿವಿ (HPV) ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರು ಆರೋಗ್ಯವಾಗಿದ್ದಾಗ ಮಾತ್ರ ಕುಟುಂಬವು ಚೆನ್ನಾಗಿರುತ್ತದೆ ಎಂದು ಹೇಳಿದರು.

“ಹಿಂದಿನ ಸರ್ಕಾರವು ಮಹಿಳೆಯರ ಸೌಲಭ್ಯಗಳು ಮತ್ತು ಆರೋಗ್ಯವನ್ನು ಮುಖ್ಯವಲ್ಲ ಎಂದು ಪರಿಗಣಿಸಿತ್ತು. ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದಾಗಿ ಮಹಿಳೆಯರು ಬಳಲುತ್ತಿದ್ದರು. ಹುಡುಗಿಯರು ಹೆಚ್ಚಾಗಿ ಶಾಲೆಯಿಂದ ಹೊರಗುಳಿದಿದ್ದರು. ನಮ್ಮ ಸರ್ಕಾರವು ಈ ವಿಷಯಗಳ ಬಗ್ಗೆ ಯಾವಾಗಲೂ ಸೂಕ್ಷ್ಮವಾಗಿ ಗಮನ ಹರಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಬೆಂಗಳೂರಿನಲ್ಲಿ ಉಚಿತ HPV ಲಸಿಕೆ ಅಭಿಯಾನ ಆರಂಭ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ಥಾನದ ಅಜ್ಮೀರ್‌ನ 14 ವರ್ಷದ ಬಾಲಕಿಯರಿಗೆ ರಾಷ್ಟ್ರವ್ಯಾಪಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದರು. ಇದು ಭಾರತದ ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ನೈರ್ಮಲ್ಯ ಉಪಕ್ರಮಗಳ ಅಡಿಯಲ್ಲಿ ದೊಡ್ಡ ಪ್ರಮಾಣದ ಶೌಚಾಲಯ ನಿರ್ಮಾಣ, ಕೈಗೆಟುಕುವ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವುದು ಮತ್ತು ಲಕ್ಷಾಂತರ ಮನೆಗಳಿಗೆ ಶುದ್ಧ ಅಡುಗೆ ಇಂಧನವನ್ನು ನೀಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರವನ್ನು ನೀಡಲು ಗರ್ಭಿಣಿಯರ ಬ್ಯಾಂಕ್ ಖಾತೆಗಳಿಗೆ 5,000 ರೂ.ಗಳನ್ನು ನೇರವಾಗಿ ವರ್ಗಾಯಿಸುವ ಸುರಕ್ಷಿತ ಮಾತೃತ್ವ ಯೋಜನೆಯ ಬಗ್ಗೆಯೂ ಅವರು ಮಾತನಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:57 pm, Sat, 28 February 26

Source link

ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ? – Kannada News | Crude Oil Price Hike: How Israel Iran Tensions Impact India’s Economy and Fuel Strategy

ದೆಹಲಿ, ಫೆ.28: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಇಂಧನ ಬೆಲೆಗಳು (Petrol-Diesel Prices) ಏರಿಕೆಯಾಗಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಯುದ್ಧದ ಕಾರಣದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಪ್ರತಿ ಬ್ಯಾರೆಲ್‌ಗೆ ಏರಿಕೆಯಾಗುತ್ತಿದೆ.

ಭಾರತವು ತನ್ನ ತೈಲದ ಅಗತ್ಯದ ಶೇ. 80ಕ್ಕಿಂತ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಬೆಲೆ ಏರಿಕೆಯಾದರೆ, ಅದು ನೇರವಾಗಿ ಭಾರತದ ಆರ್ಥಿಕತೆಯ ಮೇಲೆ ಹೊರೆಯಾಗಲಿದೆ. ಕೆಂಪು ಸಮುದ್ರದ (Red Sea) ಮಾರ್ಗವಾಗಿ ನಡೆಯುವ ತೈಲ ಸಾಗಾಣಿಕೆಗೆ ಯುದ್ಧದ ಕಾರಣ ಅಡ್ಡಿಯುಂಟಾದರೆ, ವಿಮೆ ಮತ್ತು ಸಾಗಾಣಿಕೆ ವೆಚ್ಚಗಳು ಹೆಚ್ಚಾಗಲಿವೆ. ಇದು ಅಂತಿಮವಾಗಿ ಇಂಧನ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು. ಸದ್ಯಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ತೈಲ ಕಂಪನಿಗಳು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಜಾಗತಿಕ ಪರಿಸ್ಥಿತಿ ಹದಗೆಟ್ಟರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತದಲ್ಲಿ ಚಿಲ್ಲರೆ ಇಂಧನ ಬೆಲೆಗಳು:

ನವದೆಹಲಿ: ಪೆಟ್ರೋಲ್ 94.77 ರೂ./ಲೀಟರ್, ಡೀಸೆಲ್ 87.57 ರೂ./ಲೀಟರ್

ಮುಂಬೈ: ಪೆಟ್ರೋಲ್ 103.54/ಲೀಟರ್, ಡೀಸೆಲ್ 90.03/ಲೀಟರ್

ಬೆಂಗಳೂರು: ಪೆಟ್ರೋಲ್ 103.06 ರೂ./ಲೀಟರ್, ಡೀಸೆಲ್ 91.09 ರೂ./ಲೀಟರ್

ಹೈದರಾಬಾದ್: ಪೆಟ್ರೋಲ್ 107.50/ಲೀಟರ್, ಡೀಸೆಲ್ 95.70/ಲೀಟರ್

ಚೆನ್ನೈ: ಪೆಟ್ರೋಲ್ 100.93/ಲೀಟರ್, ಡೀಸೆಲ್ 92.48/ಲೀಟರ್

ದಿನಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ

ಡೀಸೆಲ್ ಬೆಲೆ ಏರಿಕೆಯಾದ ತಕ್ಷಣ ಸಾರಿಗೆ ವೆಚ್ಚ (Transportation Cost) ಹೆಚ್ಚಾಗುತ್ತದೆ. ತರಕಾರಿ, ಹಣ್ಣುಗಳು, ಹಾಲು ಮತ್ತು ದಿನಸಿ ಪದಾರ್ಥಗಳನ್ನು ಮಾರುಕಟ್ಟೆಗೆ ತರಲು ಹೆಚ್ಚು ಹಣ ಖರ್ಚಾಗುವುದರಿಂದ, ಇವೆಲ್ಲವುಗಳ ಬೆಲೆ ಜನಸಾಮಾನ್ಯರ ಕೈಗೆಟುಕದಂತಾಗುತ್ತದೆ.

ಸಾಗಾಣಿಕೆ ಮಾರ್ಗದಲ್ಲಿ ಅಡಚಣೆ:

ಇಸ್ರೇಲ್-ಇರಾನ್ ಸಂಘರ್ಷವು ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ (Red Sea) ಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ. ಜಗತ್ತಿನ ಹೆಚ್ಚಿನ ವ್ಯಾಪಾರ ಈ ಮಾರ್ಗಗಳ ಮೂಲಕವೇ ನಡೆಯುತ್ತದೆ. ಯುದ್ಧದ ಭೀತಿಯಿಂದ ಹಡಗುಗಳ ವಿಮೆ (Insurance) ಮತ್ತು ಪ್ರಯಾಣದ ಅವಧಿ ಹೆಚ್ಚಾಗುವುದರಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್, ಚಿನ್ನ ಮತ್ತು ಇತರ ವಸ್ತುಗಳ ಬೆಲೆ ಏರುತ್ತದೆ.

ರೂಪಾಯಿ ಮೌಲ್ಯ ಕುಸಿತ:

ಜಾಗತಿಕ ಅನಿಶ್ಚಿತತೆ ಉಂಟಾದಾಗ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾದ ಚಿನ್ನ ಅಥವಾ ಡಾಲರ್ ಮೇಲೆ ಹೂಡಿಕೆ ಮಾಡುತ್ತಾರೆ. ಇದರಿಂದ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತದೆ. ರೂಪಾಯಿ ದುರ್ಬಲಗೊಂಡಷ್ಟೂ ನಾವು ವಿದೇಶದಿಂದ ತರಿಸಿಕೊಳ್ಳುವ ಪ್ರತಿಯೊಂದು ವಸ್ತುವಿಗೂ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಕುಸಿತ:

ಯುದ್ಧದ ಸುದ್ದಿಯಿಂದಾಗಿ ಹೂಡಿಕೆದಾರರು ಆತಂಕಕ್ಕೊಳಗಾಗಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಇದರಿಂದ ಷೇರು ಮಾರುಕಟ್ಟೆ ಕುಸಿದು, ಸಾಮಾನ್ಯ ಜನರ ಮ್ಯೂಚುಯಲ್ ಫಂಡ್ (MF) ಮತ್ತು ಎಸ್‌ಐಪಿ (SIP) ಹೂಡಿಕೆಗಳ ಮೌಲ್ಯ ಕಡಿಮೆಯಾಗುತ್ತದೆ.

ಈ ಯುದ್ಧದಿಂದ ತೈಲ ಬೆಲೆ ಹೆಚ್ಚಾದರೆ ಭಾರತದ ಮುಂದಿನ ದಾರಿ ?

ಉಕ್ರೇನ್ ಯುದ್ಧದ ನಂತರ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ನೀಡುತ್ತಿದೆ. 2026ರ ಆರಂಭದ ವೇಳೆಗೆ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಮುಂದುವರಿದಿದೆ. ಇದನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವುದರಿಂದ ಭಾರತಕ್ಕೆ ವಾರ್ಷಿಕ ಸುಮಾರು 9 ರಿಂದ 12 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ. ಇದು ದೇಶೀಯ ಬೆಲೆಗಳು ಗಗನಕ್ಕೇರದಂತೆ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

ಎಥನಾಲ್ ಬ್ಲೆಂಡಿಂಗ್:

E20 ಗುರಿ: ಕೇಂದ್ರ ಸರ್ಕಾರವು ಏಪ್ರಿಲ್ 1, 2026 ರಿಂದ ದೇಶಾದ್ಯಂತ ಪೆಟ್ರೋಲ್‌ನಲ್ಲಿ 20% ಎಥನಾಲ್ (E20) ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಿದೆ.

ರೈತರಿಗೆ ಲಾಭ: ಕಬ್ಬು, ಮೆಕ್ಕೆಜೋಳ ಮತ್ತು ಹಾಳಾದ ಧಾನ್ಯಗಳಿಂದ ಎಥನಾಲ್ ಉತ್ಪಾದಿಸಲಾಗುತ್ತದೆ. ಇದು ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡುತ್ತಿದೆ.

ವಿದೇಶಿ ವಿನಿಮಯ ಉಳಿತಾಯ: ಎಥನಾಲ್ ಮಿಶ್ರಣದಿಂದಾಗಿ ಭಾರತ ಈವರೆಗೆ ಸುಮಾರು 1.40 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಕಸವಲ್ಲ, ಆರೋಗ್ಯ ಕಣಜ; ನೆಲ್ಲಿಕಾಯಿಯ ಬೀಜದಲ್ಲಿವೆ ಅದ್ಭುತ ಆಯುರ್ವೇದೀಯ ಗುಣಗಳು; ತ್ಯಾಜ್ಯವೆಂದು ಬಿಸಾಡದಿರಿ – Kannada News | Amla seeds great medicinal properties and health benefits, Patanjali research’s great work

ಅತಿ ಪ್ರಬಲ ಹೀಲಿಂಗ್ ಗುಣ ಇರುವ ಹಣ್ಣುಗಳಲ್ಲಿ ಆಮ್ಲವೂ (Amla) ಒಂದು. ರೋಗನಿರೋಧಕ ಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ. ಆದರೆ ಈ ನೆಲ್ಲಿಕಾಯಿಯ ಒಂದು ಭಾಗವನ್ನು ಹೆಚ್ಚಿನ ಜನರು ನಿರ್ಲಕ್ಷಿಸುತ್ತಾರೆ. ಆ ಭಾಗವೇ ಬೀಜ. ನೆಲ್ಲಿಯ ಬೀಜವನ್ನು ನಿಷ್ಕ್ರಪಯೋಜಕವೆಂದು ಭಾವಿಸಿ ಎಸೆಯುವುಂಟು. ಆಶ್ಚರ್ಯ ಎಂದರೆ ಪತಂಜಲಿ ಸಂಶೋಧನೆಯು ಈ ಆಮ್ಲದ ಬೀಜದ ಬಗ್ಗೆ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ. ಆಚಾರ್ಯ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪತಂಜಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಆಮ್ಲಾ ಬೀಜಗಳನ್ನು ಅಧ್ಯಯನ ಮಾಡಿದ್ದಾರೆ.

ಈ ಅಧ್ಯಯನವು ನೆಲ್ಲಿಕಾಯಿ ಬೀಜಗಳು ಉಪಯುಕ್ತ ಮಾತ್ರವಲ್ಲ, ಅವು ಕಾಯಿಯ ತಿರುಳಿಗಿಂತಲೂ ಹೆಚ್ಚು ಪೋಷಕಾಂಶಗಳಿಂದ ಕೂಡಿವೆ ಎಂದು ಕಂಡುಹಿಡಿದಿದೆ. ಈ ಸಣ್ಣ ಬೀಜಗಳು ಆ್ಯಂಟಿ ಆಕ್ಸಿಡೆಂಟ್ಸ್, ಒಮೆಗಾ ಫ್ಯಾಟಿ ಆ್ಯಸಿಡ್ಸ್, ಲಿನೋಲಿಕ್ ಆ್ಯಸಿಡ್, ಕ್ವೆರ್ಸೆಟಿನ್, ಕ್ಯಾಟೆಚಿನ್‌ಗಳು, ಗ್ಯಾಲಿಕ್ ಆ್ಯಸಿಡ್, ಫ್ಲೇವನಾಯ್ಡ್ಸ್ ಮತ್ತು ಸಪೋನಿನ್‌ಗಳಿಂದ ಸಮೃದ್ಧವಾಗಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ಸರಳವಾಗಿ ಹೇಳುವುದಾದರೆ, ಈ ಬೀಜವು ಹೃದಯ, ಚರ್ಮ, ಕೂದಲು, ಇಮ್ಯೂನಿಟಿ ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಅಂಶಗಳನ್ನು ಒಳಗೊಂಡಿದೆ.

ಹಲವು ಆಯುರ್ವೇದ ಉತ್ಪನ್ನಗಳು

ಈ ಸಂಶೋಧನೆಗಳನ್ನು ಬಳಸಿಕೊಂಡು, ಪತಂಜಲಿ ಸಂಸ್ಥೆ ಹಲವಾರು ಹೊಸ ಆಯುರ್ವೇದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಹೃದಯದ ಆರೋಗ್ಯವನ್ನು ಬೆಂಬಲಿಸುವ ಕ್ಯಾಪ್ಸುಲ್‌ಗಳು, ಚರ್ಮ ಮತ್ತು ಕೂದಲಿನ ಆರೈಕೆಗಾಗಿ ಫೈಟೊನ್ಯೂಟ್ರಿಯೆಂಟ್ ಆಯಿಲ್, ಸ್ಟ್ರೆಸ್ ಮತ್ತು ಇನ್ಫ್ಲೆಮೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಹರ್ಬಲ್ ಟ್ಯಾಬ್ಲೆಟ್ಸ್, ಮತ್ತು ಮಧುಮೇಹ ನಿರ್ವಹಣೆಗೆ ವಿಶೇಷ ಸಪ್ಲಿಮೆಂಟ್ಸ್ ಸೇರಿವೆ. ಈ ಯಶಸ್ಸು ಗಮನಕ್ಕೆ ಬಾರದೇ ಉಳಿದಿಲ್ಲ. ಆಯುಷ್ ಸಚಿವಾಲಯ, ಸಿಎಸ್‌ಐಆರ್ ಮತ್ತು ಹಲವಾರು ಅಂತರರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ಈ ಸಂಶೋಧನೆಯನ್ನು ಆಧುನಿಕ ಆಯುರ್ವೇದಕ್ಕೆ ನೀಡಿದ ಕೊಡುಗೆಗಾಗಿ ಗುರುತಿಸಿವೆ. ಈ ಆವಿಷ್ಕಾರವು ನೈಸರ್ಗಿಕ ಔಷಧದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಅಧ್ಯಯನದ ಪ್ರಭಾವವು ಪ್ರಯೋಗಾಲಯಗಳನ್ನು ಮೀರಿ ಗೋಚರಿಸುತ್ತದೆ. ಇದು ಮೂರು ಪ್ರಮುಖ ಹಂತಗಳಲ್ಲಿ ವಿಷಯಗಳನ್ನು ಪರಿವರ್ತಿಸಿದೆ.

ಇದನ್ನೂ ಓದಿ: Ear Problems: ಕಿವಿ ಸಮಸ್ಯೆಗಳಿಗೆ ಇಯರ್ಗ್ರಿಟ್ ಡ್ರಾಪ್ಸ್ ಎಷ್ಟು ಪರಿಣಾಮಕಾರಿ? ಸಂಶೋಧನೆ ಹೇಳೋದೇನು?

70 ಸಾವಿರ ರೈತರಿಗೆ ಲಾಭ

ಹಿಂದೆ ಬಿಸಾಡಲಾಗುತ್ತಿದ್ದ ಆಮ್ಲಾ ಬೀಜಗಳನ್ನು ಈಗ ಪತಂಜಲಿ ಖರೀದಿಸುತ್ತಿದೆ. 70,000 ಕ್ಕೂ ಹೆಚ್ಚು ರೈತರು ಹೊಸ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ಇದು ಗ್ರಾಮೀಣ ಸಮುದಾಯಗಳನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ. ಬೀಜಗಳ ಬಳಕೆಯು ಶೂನ್ಯ-ತ್ಯಾಜ್ಯ ಹರ್ಬಲ್ ಕೃಷಿಯನ್ನು ಉತ್ತೇಜಿಸಿದೆ. ಈಗ, ಆಮ್ಲಾ ಹಣ್ಣಿನಿಂದ ಏನೂ ವ್ಯರ್ಥವಾಗುವುದಿಲ್ಲ. ಇಡೀ ಪ್ರಕ್ರಿಯೆಯನ್ನು ಹೆಚ್ಚು ಪರಿಸರ ಸ್ನೇಹಿಯನ್ನಾಗಿ ಮಾಡುತ್ತದೆ. ಆಮ್ಲಾ ಬೀಜಗಳಿಂದ ತಯಾರಿಸಿದ ಉತ್ಪನ್ನಗಳನ್ನು ಈಗ ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾಕ್ಕೆ ರಫ್ತು ಮಾಡಲಾಗುತ್ತಿದ್ದು, ಭಾರತಕ್ಕೆ ಹೊಸ ವ್ಯಾಪಾರ ಅವಕಾಶಗಳು ತೆರೆದುಕೊಂಡಿವೆ.

ರಾಷ್ಟ್ರೀಯ ಗುರಿಗೆ ಪೂರಕವಾಗಿದೆ ಈ ಸಂಶೋಧನೆ

ಪತಂಜಲಿಯ ಆಮ್ಲಾ ಬೀಜ ಸಂಶೋಧನೆಯು ಮೂರು ಪ್ರಮುಖ ರಾಷ್ಟ್ರೀಯ ಗುರಿಗಳಾದ ಆರ್ಥಿಕ ಸುಧಾರಣೆ, ಪರಿಸರ ಸುಸ್ಥಿರತೆ ಮತ್ತು ವೈಜ್ಞಾನಿಕ ನಾವೀನ್ಯತೆಗೆ ಪೂರಕವಾಗಿದೆ.

ಗ್ರಾಮೀಣ ಆರ್ಥಿಕ ಪರಿಣಾಮ: ರೈತರು ಸಾಮಾನ್ಯವಾಗಿ ಆಮ್ಲಾ ಬೀಜಗಳನ್ನು ಕೃಷಿ ತ್ಯಾಜ್ಯವೆಂದು ಪರಿಗಣಿಸಿ ಬಿಸುಡುತ್ತಿದ್ದರು. ಆದಾಗ್ಯೂ, ಪತಂಜಲಿಯ ಬೀಜ ಖರೀದಿ ಕಾರ್ಯಕ್ರಮವು ಈಗ ಈ ಬೀಜಗಳನ್ನು ರೈತರಿಂದ ಖರೀದಿಸುತ್ತದೆ. ಈ ಬೀಜಗಳು ರೈತರಿಗೆ ಹೆಚ್ಚುವರಿ ಆದಾಯ ಮೂಲವೆನಿಸಿದೆ. ಪತಂಜಲಿಯು ಸುಯೋಜಿತವಾದ ಸಪ್ಲೈ ಚೈನ್ ಅನ್ನು ನಿರ್ಮಿಸಿದೆ. ಈ ಹಿಂದೆ ತ್ಯಾಜ್ಯವೆಂದು ಪರಿಗಣಿಸಿ ಆಮ್ಲಾ ಬೀಜಗಳನ್ನು ನಿರ್ಲಸುತ್ತಿದ್ದವರು ಈಗ ಹೆಚ್ಚುವರಿ ಫಲ ಪಡೆಯಲಾರಂಭಿಸಿದ್ದಾರೆ. ಪತಂಜಲಿಯ ಈ ಕಾರ್ಯವು ಹಲವಾರು ರಾಜ್ಯಗಳಲ್ಲಿ 75,000 ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಅನುಕೂಲ ತಂದಿದೆ.

ಪರಿಸರ ಸುಸ್ಥಿರತೆ: ಹರ್ಬಲ್ ಫಾರ್ಮುಲಾ ರಚಿಸಲು ಆಮ್ಲಾ ಬೀಜಗಳನ್ನು ಬಳಸುವ ಮೂಲಕ, ಆಮ್ಲಾ ಹಣ್ಣಿನ ಪ್ರತಿಯೊಂದು ಭಾಗವನ್ನು ಬಳಸುವ ಸರ್ಕುಲಾರ್ ಎಕನಾಮಿ ಮಾದರಿಯನ್ನು ಉತ್ತೇಜಿಸಿದೆ. ಇದರಿಂದಾಗಿ ಸಾವಯವ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಸ್ಥಿರ ಹರ್ಬಲ್ ಮೂಲವನ್ನು ಖಚಿತಪಡಿಸುತ್ತದೆ.

ವೈಜ್ಞಾನಿಕ ಆವಿಷ್ಕಾರ: ಆಮ್ಲಾ ಬೀಜಗಳು ಪ್ರೋಟೀನ್-ಭರಿತ ಆಯಿಲ್, ವಿಶೇಷವಾಗಿ ಲಿನೋಲಿಕ್ ಆಸಿಡ್ ಮತ್ತು ಒಮೆಗಾ ಫ್ಯಾಟಿ ಆ್ಯಸಿಡ್​ಗಳನ್ನು ಒಳಗೊಂಡಿರುತ್ತವೆ ಎಂದು ಪತಂಜಲಿ ಸಂಶೋಧನೆಯು ತೋರಿಸಿದೆ. ಇದು ಹೃದಯದ ಆರೋಗ್ಯ, ಚರ್ಮದ ಪೋಷಣೆ ಮತ್ತು ಹಾರ್ಮೋನುಗಳ ನಿಯಂತ್ರಣಕ್ಕೆ ಸೂಕ್ತವಾಗಿದೆ. ಇದು ಫಂಕ್ಷನಲ್ ಫುಡ್ಸ್, ಆಯುರ್ವೇದ ಆಧಾರಿತ ಕಾಸ್ಮೆಟಿಕ್ಸ್ ಮತ್ತು ಥೆರಪ್ಯೂಟಿಕ್ ಸಪ್ಲಿಮೆಂಟ್ಸ್​ಗೆ ಹೊಸ ಕ್ಷೇತ್ರಗಳನ್ನು ತೆರೆದಿದೆ.

ಇದನ್ನೂ ಓದಿ: ಪತಂಜಲಿ ಇಮ್ಯುನೊಚಾರ್ಜ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?

ಹಲವಾರು ಪೇಟೆಂಟ್‌ಗಳ ಸಲ್ಲಿಕೆ

2024 ರಲ್ಲಿ, ಪತಂಜಲಿಯು ಆಮ್ಲಾ ಬೀಜದ ಎಕ್ಸ್​ಟ್ರ್ಯಾಕ್ಟ್ ಫಾರ್ಮುಲೇಶನ್​ಗಳ ಮೇಲೆ ಹಲವಾರು ಪೇಟೆಂಟ್‌ಗಳನ್ನು ಸಲ್ಲಿಸಿತು. ಇದು ಭಾರತಕ್ಕೆ ಹರ್ಬಲ್ ಇನ್ನೋವೇಶನ್​ನಲ್ಲಿ ಜಾಗತಿಕ ಮನ್ನಣೆಯನ್ನು ನೀಡಿತು. ಸಂಶೋಧನಾ ಫಲಿತಾಂಶಗಳನ್ನು ಆಯುಷ್, ಇಂಡಿಯನ್ ಜರ್ನಲ್ ಆಫ್ ನ್ಯಾಚುರಲ್ ಪ್ರಾಡಕ್ಟ್ಸ್ ಮತ್ತು ಇಂಟರ್ನ್ಯಾಷನಲ್ ಜರ್ನಲ್ ಆಫ್ ಹರ್ಬಲ್ ರಿಸರ್ಚ್ ಸೇರಿದಂತೆ ಶೈಕ್ಷಣಿಕ ಜರ್ನಲ್‌ಗಳಲ್ಲಿ ಪ್ರಕಟಿಸಲಾಗಿದೆ. ಇದು ಸೈನ್ಸ್​ನಲ್ಲಿ ಭಾರತದ ಖ್ಯಾತಿಯನ್ನು ಬಲಪಡಿಸಿದೆ. ಇಂದು, ಪತಂಜಲಿಯ ಆಮ್ಲಾ ಬೀಜ ಸಂಶೋಧನೆಯು ಆಯುರ್ವೇದ ಇನ್ನೋವೇಶನ್, ಸಸ್ಟೈನಬಿಲಿಟಿ ಮತ್ತು ನ್ಯಾಷನಲ್ ಪ್ರೈಡ್​ಗೆ ಒಂದು ಕೇಸ್ ಸ್ಟಡಿ ಆಗಿ ಮಾರ್ಪಟ್ಟಿದೆ. ವೈಜ್ಞಾನಿಕ ಮೌಲ್ಯೀಕರಣದಿಂದ ಬೆಂಬಲಿತವಾದಾಗ ಸ್ಥಳೀಯ ಜ್ಞಾನವು ಜಗತ್ತಿಗೆ ಹೇಗೆ ಅದ್ಭುತ ಆರೋಗ್ಯ ಪರಿಹಾರಗಳನ್ನು ತರಬಹುದು ಎಂಬುದನ್ನು ಇದು ನಿರೂಪಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version