IND vs ZIM: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ – Kannada News | Abhishek Sharma T20 WC 2026 Comeback: Half Century vs Zimbabwe Marks Form Return

2026 ರ ಟಿ20 ವಿಶ್ವಕಪ್‌ನ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಎಂಟು ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಗಳಿಸಲು ವಿಫಲರಾದರು. ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಅಭಿಷೇಕ್, ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ, ನಾಲ್ಕು ಎಸೆತಗಳನ್ನು ಎದುರಿಸಿ ರನ್ ಗಳಿಸಲು ವಿಫಲರಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ನಿರಾಶೆ ಮೂಡಿಸಿದ್ದರು.

Source link

ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ – Kannada News | Food Safety Department Raids On Dairies For Complaint Milk Adulteration In kolar

ಕೋಲಾರ, (ಫೆಬ್ರವರಿ 26): ಕೋಲಾರ (Kolar) ಹಾಲಿನ ಕಾಂತ್ರಿ ರಾಜ್ಯದಲ್ಲೇ ಹೆಸರು ಮಾಡಿದ್ದ ಜಿಲ್ಲೆ, ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ನೀರಿಗಿಂತ ಹೆಚ್ಚಾಗಿ ಹಾಲಿನ ಹೊಳೆಯ ಹರಿಯುತ್ತದೆ. ಇಂಥ ಜಿಲ್ಲೆಯಲ್ಲಿ ಈಗ ಕಲಬೆರೆಗೆ ಹಾಲಿನ (Milk Adulteration )ದಂಧೆ ಶುರುವಾಗಿದ್ದು, ಜಿಲ್ಲಾಡಳಿತವ ಕಲಬೆರಕೆ ಹಾಲಿನ ವಿರುದ್ದ ಸಮತ ಸಾರಿದೆ.ಕೋಲಾರ ಜಿಲ್ಲೆಯ ಮುಳಬಾಗಿಲು, KGF, ಶ್ರೀನಿವಾಸಪುರ ತಾಲೂಕಿನಲ್ಲಿ ಕಲಬೆರಕೆ ದಂಧೆ ಲ್ಲಿ ಅವ್ಯಾಹತವಾಗಿದೆ. ಸುಮಾರು 32 ಸ್ಥಳದಲ್ಲಿ ಕಲಬೆರಕೆ ಹಾಲಿನ ಬಗ್ಗೆ ದೂರು ಹಿನ್ನೆಲೆಯಲ್ಲಿ KGF ತಾಲೂಕಿನಲ್ಲಿ ಎಸ್​ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 8 ಜನರನ್ನು ಬಂಧಿಸಿದ್ದಾರೆ. ಸದ್ಯ ಕಲಬೆರಕೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಖಾಸಗಿ, ಅನಧಿಕೃತ ಡೇರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Source link

ಪುತ್ತೂರು ಮಹಿಳಾ ಡಿಗ್ರಿ ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್ – Kannada News | Puttur Principal Suspended After Student Protest Over Dust; MLA Argument Goes Viral

ಮಂಗಳೂರು, ಫೆಬ್ರವರಿ 26: ವಿದ್ಯಾರ್ಥಿನಿಯರನ್ನ ಪ್ರತಿಭಟನೆ ಮಾಡಲು ಪ್ರೇರೇಪಿಸಿದ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನಲ್ಲಿರುವ ಮಹಿಳಾ ಡಿಗ್ರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾರನ್ನು ಅಮಾನತು ಮಾಡಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆ ಬಳಿಯೇ ಡಿಗ್ರಿ ಕಾಲೇಜು ಇದೆ. ಆಸ್ಪತ್ರೆ ಕಾಮಗಾರಿಯಿಂದಾಗಿ ತರಗತಿಯಲ್ಲಿ ಧೂಳು ಆಗುತ್ತಿತ್ತು. ಹೀಗಾಗಿ ಕಾಲೇಜಿನ ಅವ್ಯವಸ್ಥೆ ಖಂಡಿಸಿ ಕೆಲ‌ ದಿನಗಳ ಹಿಂದೆ ರಸ್ತೆ ತಡೆದು ವಿದ್ಯಾರ್ಥಿನಿಯರಿಂದ ಧರಣಿ ಮಾಡಲಾಗಿದೆ. ಕಾನೂನು ಉಲ್ಲಂಘನೆ, ಪ್ರತಿಭಟನೆಗೆ ಪ್ರೇರೇಪಣೆ ಆರೋಪದಡಿ ವೇದಶ್ರೀ ನಿಡ್ಯಾರನ್ನು ಅಮಾನತುಗೊಳಿಸಲಾಗಿದೆ. ಇನ್ನು ಸಮಸ್ಯೆ ನನಗೆ ಏಕೆ ಹೇಳಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಿಡಿಕಾರಿದ್ದಾರೆ. ಪ್ರತಿಭಟನೆ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ್ದ ವೇಳೆ ಶಾಸಕ ಮತ್ತು ಕಾಲೇಜು ಪ್ರಾಂಶುಪಾಲೆ ಮಧ್ಯೆ ವಾಗ್ವಾದ ಉಂಟಾಗಿದ್ದು, ಇಬ್ಬರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನಿರ್ದೇಶಕನ ಕಿಡ್ನಾಪ್, ಹಲ್ಲೆ: ‘ಭೀಮ’ ಚಿತ್ರ ನಟಿ ಸೇರಿ 11 ಜನ ಜೈಲುಪಾಲು – Kannada News | Bheema Kannada movie actress arrested in kidnapping case

ಅವ್ರೆಲ್ಲಾ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು ಅಂದುಕೊಂಡಿದ್ದವರು. ಕಿರುಚಿತ್ರ, ಇವೆಂಟ್​ಗಳು ಮಾಡಿ ಒಂದು ಹಂತಕ್ಕೆ ಬಂದಿದ್ದರು. ಒಟಿಟಿಗೆ ಸಿನಿಮಾ ಮಾಡುವ ಹಂತಕ್ಕೂ ಬಂದಿದ್ದರು. ಒಂದು ಹೊಸ‌ ಸಿನಿಮಾವನ್ನೂ ಶುರು ಮಾಡಿದ್ರು. ಅದನ್ನು ಮುಗಿಸಿದ್ರೆ ಪ್ರೊಮೋಷನ್, ಥಿಯೇಟರ್, ಜನ ಅಂತಾ ಓಡಾಡ್ಬೇಕಿತ್ತು. ಆದರೆ ಈಗ ತಾವು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ಸಣ್ಣ ಕಿರಿಕ್​ನಿಂದ ತಮ್ಮದೇ ತಂಡದ ಡೈರೆಕ್ಟರ್​ನ ಕಿಡ್ನಾಪ್ (Kidnap) ಮಾಡಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮ’ (Bheema) ಸಿನಿಮಾದಲ್ಲಿ ನಟಿಸಿದ್ದ ನಟಿಯೋರ್ವಳು ಸೇರಿ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ಅಂದ್ಹಾಗೆ, ಈ ಗ್ಯಾಂಗ್​ನಿಂದ ಕಿಡ್ನಾಪ್ ಆಗಿದ್ದ ನಿರ್ದೇಶಕನ ಹೆಸರು ಅನೀಶ್. ‘ಭರವಸೆಯೇ ಜೀವನ’ ಎಂಬ ಶಾರ್ಟ್ ಮೂವಿ ಮಾಡಿದ್ದ. ಆದರೆ ಅದು ಎಲ್ಲಿಯೂ ರಿಲೀಸ್ ಆಗಿಲ್ಲ. ಈ ಅನೀಶ್ ಶಾರ್ಟ್ ಮೂವಿಗಳನ್ನ ನಿರ್ದೇಶನ ಮಾಡುವಾಗ ಈತನ‌ ಜೊತೆ ಒಂದು ತಂಡವೂ ಇತ್ತು. ಇವೆಂಟ್​​ಗಳನ್ನ ನಡೆಸುತಿದ್ದ ಆಶೀರ್ವಾದ್ ಎಂಬಾತ ಹಾಗೂ ದುನಿಯಾ ವಿಜಯ್ ಅವರ ‘ಭೀಮಾ’ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಎಂಬಾಕೆ ಸೇರಿ 11 ಜನ ಒಂದು ತಂಡ ಆಗಿದ್ದರು.

ಎಲ್ಲರಿಗೂ ಸಿನಿಮಾ ಮಾಡಬೇಕು. ಸ್ಟ್ಯಾಂಡ್ ಆಗಬೇಕು ಅನ್ನೋ ಛಲ ಹೊಂದಿದ್ದರು. ಎಲ್ಲರದ್ದೂ ಒಂದೇ ಕನಸಾಗಿರೋದ್ರಿಂದ ಕೈ ಜೋಡಿಸಿದ್ರು. ಹೊಸ ಸಿನಿಮಾ ಮಾಡೋಕೆ ತಯಾರಿ ಮಾಡಿದ್ರು. ‘ಜೀವನದ ಭಾಷೆ’ ಎಂಬ ಸಿನಿಮಾವನ್ನ ಕೂಡ ಶುರು ಮಾಡಿದ್ರು. ಸಿನಿಮಾಗೆ ಆಶೀರ್ವಾದ್ ಐದು ಲಕ್ಷ ಹಣವನ್ನೂ ಹೂಡಿಕೆ ಮಾಡಿದ್ದ. ಆ್ಯಕ್ಟಿಂಗ್ ಇಷ್ಟ ಅಂತಾ ಹೂಡಿಕೆ ಅಷ್ಟೆ ಅಲ್ಲಾ ನಂಗೆ ಕ್ಯಾರೆಕ್ಟರ್ ಬೇಕು ಅಂತಾ ಆಶೀರ್ವಾದ್ ತಿಳಿಸಿದ್ದ. ಸಿನಿಮಾವನ್ನು ಒಟಿಟಿಗೆ ರಿಲೀಸ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ರು. ಆದ್ರೆ ಇದ್ದಕ್ಕಿದ್ದಹಾಗೆ ಸಿನಿಮಾ ಸ್ಟಾಪ್ ಆಗಿತ್ತು. ಅಲ್ಲಿಂದಲೇ ಎಲ್ಲರ ಮಧ್ಯೆ ಕಿರಿಕ್ ಶುರುವಾಗಿತ್ತು.

ಸಿನಿಮಾ ನಿಂತಿದ್ದು ಎಲ್ಲರಿಗೂ ಬೇಸರ ತಂದಿತ್ತು. ಸಿನಿಮಾ ಸ್ಟಾಪ್ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟ ನಿರ್ದೇಶಕ ಅನೀಶ್ ಮುಂಬೈಗೆ ಶಿಫ್ಟ್ ಆಗಿದ್ದ. ಇತ್ತ ಕ್ಯಾರೆಕ್ಟರ್ ಸಿಗಲಿಲ್ಲ, ಸಿನಿಮಾ ಕೂಡ ಮುಗಿಸಲಿಲ್ಲ. ಹಣವೂ ವಾಪಸ್ಸು ಕೊಟ್ಟಿಲ್ಲಾ ಅಂತಾ ಅನೀಶ್ ಮೇಲೆ ಆಶೀರ್ವಾದ್ ಕೋಪಗೊಂಡಿದ್ದ. ಎಲ್ಲರಿಗೂ ಅರ್ಧಕ್ಕೆ ಕೈ ಕೊಟ್ಟು ಮುಂಬೈಗೆ ಶಿಫ್ಟ್ ಆದ್ನಲ್ಲ ಅಂತಾ ಸಿಟ್ಟಾಗಿದ್ರು. ಹೇಗಾದ್ರು ಮಾಡಿ ವಾಪಸ್ ಕರೆಸ್ಬೇಕು ಅಂತಾ ಕಾಯ್ತಿದ್ರು.

ಇದೇ ಸಮಯಕ್ಕೆ ನಟಿ ಐಶ್ವರ್ಯಾಗೆ ಕಾಲ್ ಮಾಡಿದ್ದ ಅನೀಶ್, ‘ನನ್ನ ಕಾರೊಂದಿದೆ, ಅದನ್ನ ಸೇಲ್ ಮಾಡಬೇಕು’ ಅಂತ ಹೇಳಿದ್ದ. ಈ ವಿಚಾರ ಎಲ್ಲರಿಗೂ ಮುಟ್ಟಿತ್ತು. ಇದೇ ಟೈಮು ಅಂತ ಎಲ್ಲರೂ ಸೇರಿ ಪ್ಲಾನ್ ಮಾಡಿದ್ರು. ಐಶ್ವರ್ಯಾ ಮೂಲಕ ಅನೀಶ್​ಗೆ ಕರೆ ಮಾಡಿಸಿ ಕಾರು ಮಾರಾಟ ಮಾಡಿಸೋದಾಗಿ ಬೆಂಗಳೂರಿಗೆ ಕರೆಸಿದ್ದರು. ಕಳೆದ 9ನೇ ತಾರೀಕು ಆಡುಗೋಡಿ ಠಾಣೆ ವ್ಯಾಪ್ತಿಯ ಒಂದು ಜಾಗಕ್ಕೆ ಕರೆಸಿದ್ದ ಆರೋಪಿಗಳು ಆತನನ್ನ ಕಿಡ್ನಾಪ್ ಮಾಡಿದ್ರು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಸಿಕ್ಕಿದೆ ರಶ್ಮಿಕಾ-ವಿಜಯ್ ಮದುವೆ ಆಹ್ವಾನ?

ಕಾರಿನಲ್ಲಿ ಅನೀಶ್​ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಸೀದಾ ನಗರದ ಹೊರ ವಲಯಕ್ಕೆ ಕರೆದೊಯ್ದು ಅಲ್ಲೊಂದು ರೂಮ್​ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ರು. ಹಾಕಿ ಸ್ಟಿಕ್, ಕ್ರಿಕೆಟ್ ಸ್ಟಂಪ್​ ನಿಂದ ಹಲ್ಲೆ ಮಾಡಿ ಅನೀಶ್ ಮೈಮೆಲಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ರು. ನಂತರ ಮತ್ತೆ ಕಾರಿಗೆ ಹತ್ತಿಸಿ ತುಮಕೂರಿನ ಮಧುಗಿರಿ ಬೆಟ್ಟದ ಬಳಿಯ ಖಾಲಿ ಜಾಗವೊಂದಕ್ಕೆ ಕರೆದೊಯ್ದು ಅಲ್ಲಿ ಕೂಡ ಹಲ್ಲೆ ಮಾಡಿ ಬಿಟ್ಟೋಗಿದ್ರು. ನಂತರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅನೀಶ್​ನ ವೈದ್ಯರು ಪ್ರಶ್ನೆ ಮಾಡಿದಾಗ ವಿಚಾರ‌ ಬೆಳಕಿಗೆ ಬಂದಿದೆ. ಕೂಡಲೇ ಡಾಕ್ಟರ್ ಆಡುಗೋಡಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ನಟಿ ಐಶ್ವರ್ಯಾ, ನಟ ಆಶೀರ್ವಾದ್ ಸೇರಿ ಗ್ಯಾಂಗ್​ನ ಹನ್ನೊಂದು ಜನರನ್ನ ಅರೆಸ್ಟ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಟಿಕ್​ಗಳು, ಕಾರು ಹಾಗೂ ದೋಚಿದ್ದ ಹಣ, ಚಿನ್ನಾಭರಣ ವಶಕ್ಕೆ ಪಡೆದು 11 ಜನರನ್ನು ಜೈಲಿಗೆ ಕಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

Source link

ಗರ್ಭಪಾತದ ನಂತರ ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ! – Kannada News | After Abortion Care: Top Don’ts for Faster Healing

ಗರ್ಭಪಾತದ (Abortion) ನಂತರ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಗಳಾಗುತ್ತದೆ. ಈ ಅವಧಿಯಲ್ಲಿ, ಗರ್ಭಾಶಯಕ್ಕೆ ಅದರ ಸಾಮಾನ್ಯ ಸ್ಥಿತಿಗೆ ಮರಳಲು ಮತ್ತು ದೇಹವು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಸರಿಯಾದ ಆರೈಕೆಯಿಲ್ಲದೆ, ಸೋಂಕು, ಅತಿಯಾದ ರಕ್ತಸ್ರಾವ, ದೌರ್ಬಲ್ಯ ಮತ್ತು ಇತರ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ರೋಗನಿರೋಧಕ ವ್ಯವಸ್ಥೆಯು ಸ್ವಲ್ಪ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಶುಚಿತ್ವ ಮತ್ತು ವಿಶ್ರಾಂತಿ ಅತ್ಯಂತ ಮುಖ್ಯ. ಇದರೊಂದಿಗೆ, ಈ ಹಂತದಲ್ಲಿ ಮಹಿಳೆ ಮಾನಸಿಕವಾಗಿ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಹಾಗಾಗಿ ಗರ್ಭಪಾತದ ನಂತರ ಸರಿಯಾದ ಆರೈಕೆ ಮಾಡುವುದರಿಂದ ಚೇತರಿಕೆ ವೇಗಗೊಳ್ಳುವುದಲ್ಲದೆ, ಭವಿಷ್ಯದಲ್ಲಿ ಬರುವ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಈ ಅವಧಿಯಲ್ಲಿ ಮಾಡುವ ನಿರ್ಲಕ್ಷ್ಯವು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ, ಗರ್ಭಪಾತದ ನಂತರ ಮಹಿಳೆಯರು ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಗರ್ಭಪಾತದ ನಂತರ ಮಹಿಳೆಯರು ಈ ತಪ್ಪುಗಳನ್ನು ಮಾಡಬಾರದು?

ಆರ್‌ಎಂಎಲ್ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಪಾತದ ನಂತರ ಅತಿಯಾಗಿ ಕೆಲಸ ಮಾಡಬಾರದು ಏಕೆಂದರೆ ದೈಹಿಕ ಪರಿಶ್ರಮ, ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಜೊತೆಗೆ ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ನಿಗದಿತ ಔಷಧಿಗಳ ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದು ಸಹ ಹಾನಿಕಾರಕವಾಗಿದೆ. ಅನೇಕರು ನೋವು, ಸೌಮ್ಯ ಜ್ವರ ಅಥವಾ ಅಸಹಜ ರಕ್ತಸ್ರಾವವನ್ನು ಸಾಮಾನ್ಯವೆಂದು ಭಾವಿಸಿ ನಿರ್ಲಕ್ಷಿಸುತ್ತಾರೆ, ಇದು ಸರಿಯಲ್ಲ. ಅಷ್ಟೇ ಅಲ್ಲ, ಶುಚಿತ್ವದಲ್ಲಿ ನಿರ್ಲಕ್ಷ್ಯ ಅಥವಾ ದೀರ್ಘಕಾಲದವರೆಗೆ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ಸೋಂಕುಗಳು ಉಂಟಾಗಬಹುದು. ವೈದ್ಯರು ಸೂಚಿಸಿದ ವಿಶ್ರಾಂತಿ ಅವಧಿಯನ್ನು ನಿರ್ಲಕ್ಷಿಸುವುದು ಮತ್ತು ತಪಾಸಣೆಗಳನ್ನು ತಪ್ಪಿಸುವುದು ಸಹ ಸಾಮಾನ್ಯ ತಪ್ಪುಗಳೆಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಮಾನಸಿಕ ಒತ್ತಡವನ್ನು ನಿಗ್ರಹಿಸುವುದು ಅಥವಾ ಭಾವನಾತ್ಮಕ ಬೆಂಬಲವನ್ನು ಪಡೆಯದಿರುವುದು ಚೇತರಿಕೆಯನ್ನು ನಿಧಾನಗೊಳಿಸುತ್ತದೆ. ಇವುಗಳನ್ನು ತಪ್ಪಿಸುವುದರಿಂದ ದೇಹ ಬೇಗ ಗುಣಮುಖವಾಗಲು ಅವಕಾಶ ನೀಡುತ್ತದೆ.

ಇದನ್ನೂ ಓದಿ: ಪದೇ ಪದೇ ಗರ್ಭಪಾತವಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಈ ರೀತಿ ಮಾಡಿ

ಗರ್ಭಪಾತದ ನಂತರ ಆಹಾರ ಹೇಗಿರಬೇಕು?

ಸಾಮಾನ್ಯವಾಗಿ ಗರ್ಭಪಾತದ ನಂತರ, ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಹಸಿರು ತರಕಾರಿ, ಹಣ್ಣು, ಬೇಳೆಕಾಳುಗಳು, ಹಾಲು ಮತ್ತು ಮೊಸರು ಮುಂತಾದ ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು ಇದು ದೇಹವನ್ನು ಬಲಪಡಿಸುತ್ತವೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ತುಂಬಾ ಎಣ್ಣೆಯುಕ್ತ, ಜಂಕ್ ಅಥವಾ ಅತಿಯಾದ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಜೊತೆಗೆ ಆಲ್ಕೋಹಾಲ್ ಮತ್ತು ಧೂಮಪಾನ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇವೆಲ್ಲವೂ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅತಿಯಾದ ಕೆಫೀನ್ ಸೇವನೆಯು ಸಹ ಹಾನಿಕಾರಕವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನೇ ಹಾಳುಮಾಡಿಬಿಡುತ್ತದೆ – Kannada News | Chanakya Niti: These habits will ruin your personality and respect in society

ಪ್ರತಿಯೊಬ್ಬರೂ ಸಹ ಈ ಸಮಾಜದಲ್ಲಿ ಗೌರವವನ್ನು (respect) ಗಳಿಸಬೇಕು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಈ ಗೌರವವನ್ನು ಗಳಿಸುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಷ್ಟು ಮಾತ್ರವಲ್ಲ ಕೆಲವೊಂದು ಅಭ್ಯಾಸಗಳ ಕಾರಣದಿಂದ ಗಳಿಸಿದ ಗೌರವವೆಲ್ಲಾ ಹಾಳಾಗಿಬಿಡುತ್ತದೆ ಎಂದಿದ್ದಾರೆ. ಕೆಲವೊಮ್ಮೆ  ಕೆಲವರು ತಮ್ಮದೇ ಆದ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಸಮಾಜದಲ್ಲಿ ತಮ್ಮ ಗೌರವ, ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರಂತೆ. ಹಾಗಿದ್ರೆ ಯಾವ ಅಭ್ಯಾಸಗಳು ಗೌರವವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ಸಮಾಜದಲ್ಲಿ ಗೌರವವನ್ನು ಹಾಳು ಮಾಡುವ ಅಭ್ಯಾಸಗಳಿವು:

ಅತಿಯಾಗಿ ಮಾತನಾಡುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಎಲ್ಲೆಡೆ ಯೋಚಿಸದೆ ಮಾತನಾಡುವ ಯಾರಾದರೂ ಸಮಾಜದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾರೆ. ಹೆಚ್ಚು ಮಾತನಾಡುವವರು ತಮ್ಮ ವೈಯಕ್ತಿಕ ವಿಷಯಗಳು, ಯೋಜನೆ ಮತ್ತು ದೌರ್ಬಲ್ಯಗಳನ್ನು ಇತರರಿಗೆ ಬಹಿರಂಗಪಡಿಸುತ್ತಾರೆ. ಸಮಾಜವು ಅಂತಹ ಜನರನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಿತಮಿತವಾಗಿ ಬುದ್ಧಿವಂತಿಕೆಯಿಂದ ಮಾತನಾಡುವವರು ಬುದ್ಧಿವಂತರು, ಅಂತಹವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿರುತ್ತದೆ.

ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವ ಅಭ್ಯಾಸ: ಕೆಲವು ಜನರು ಯಾವಾಗಲೂ ಇತರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಸ್ವಂತ ಆಲೋಚನೆ ಮತ್ತು ಸ್ವಾಭಿಮಾನವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇಂತಹವರಿಗೆ ಯಾವುದೇ ಗೌರವ ಸಹ ಇರುವುದಿಲ್ಲ. ಸಮಾಜದಲ್ಲಿ ನೀವು ಗೌರವಾನ್ವಿತರಾಗಲು ಬಯಸಿದರೆ, ನಿಮ್ಮ ಮಿತಿಗಳನ್ನು ನಿಗದಿಪಡಿಸುವುದು ಮತ್ತು ಯಾವುದೇ ತಪ್ಪನ್ನು ಭಯವಿಲ್ಲದೆ ವಿರೋಧಿಸುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ಶ್…‌ ನಿಮ್ಮ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಬೇಡಿ

 ಕೆಟ್ಟವರ ಸಹವಾಸ:   ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ಎಂಬುದನ್ನು ಆತನ ಸಹವಾಸ ಮತ್ತು ಸ್ನೇಹಿತರಿಂದಲೂ ನಿರ್ಧಾರವಾಗುತ್ತದೆ. ಒಬ್ಬ ವ್ಯಕ್ತಿಯು ನಕಾರಾತ್ಮಕ ಅಥವಾ ಕೆಟ್ಟ ಸ್ವಭಾವದ ಜನರೊಂದಿಗಿನ ಸಹವಾಸದಲ್ಲಿದ್ದರೆ ಕ್ರಮೇಣ ಆತನ ವ್ಯಕ್ತಿತ್ವ, ಗೌರವವೂ ಹಾಳಾಗುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯವರ ಸಹವಾಸವನ್ನು ಮಾಡಬೇಕು. ಇದಲ್ಲದೆ ಕೆಟ್ಟ ಚಟಗಳು ಕೂಡ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು; ಇಸ್ರೇಲ್​ನಲ್ಲಿ ಪ್ರಧಾನಿ ಮೋದಿ – Kannada News | PM Modi Supports Gaza Peace Plan says humanity must never become a victim of conflict

ನವದೆಹಲಿ, ಫೆಬ್ರವರಿ 26: ‘ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಪಶುವಾಗಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಳಜಿ ವ್ಯಕ್ತಪಡಿಸಿದ್ದಾರೆ. ಗಾಜಾ ಶಾಂತಿ ಯೋಜನೆಯು ಶಾಂತಿಯತ್ತ ಒಂದು ಮಾರ್ಗವನ್ನು ಸೃಷ್ಟಿಸಿದೆ. ಭಾರತವು ಈ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಆದರೆ, ಮುಂದಿನ ದಿನಗಳಲ್ಲಿಯೂ ಸಹ ಭಾರತ ಎಲ್ಲಾ ದೇಶಗಳೊಂದಿಗೆ ಸಂವಾದ ಮತ್ತು ಸಹಕಾರವನ್ನು ಮುಂದುವರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

“ಭಯೋತ್ಪಾದನೆಯನ್ನು ಯಾವುದೇ ರೂಪದಲ್ಲಿ ಸ್ವೀಕರಿಸಲಾಗುವುದಿಲ್ಲ. ಭಯೋತ್ಪಾದನೆ ಮತ್ತು ಅದರ ಬೆಂಬಲಿಗರನ್ನು ವಿರೋಧಿಸುವಲ್ಲಿ ನಾವು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ಮುಂದೆಯೂ ಅದನ್ನು ಮುಂದುವರಿಸುತ್ತೇವೆ. ಭಯೋತ್ಪಾದನೆಗೆ ಜಗತ್ತಿನಲ್ಲಿ ಸ್ಥಾನವಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಸಂಸತ್​​ನಲ್ಲಿ ಪ್ರತಿಧ್ವನಿಸಿದ ‘ಮೋದಿ, ಮೋದಿ’ ಘೋಷಣೆ; ಭಾರತದ ಪ್ರಧಾನಿಗೆ ಎದ್ದುನಿಂತು ಸ್ವಾಗತ

ಗಾಜಾದಲ್ಲಿನ ಪರಿಸ್ಥಿತಿಯ ಕುರಿತು ಭಾರತದ ನಿಲುವಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಗಾಜಾ ಶಾಂತಿ ಯೋಜನೆ ಶಾಂತಿಗೆ ಮಾರ್ಗವನ್ನು ತೆರೆದಿದೆ. ಮುಂದಿನ ದಿನಗಳಲ್ಲೂ ಭಾರತವು ಎಲ್ಲಾ ರಾಷ್ಟ್ರಗಳೊಂದಿಗೆ ಸಹಕರಿಸುವುದನ್ನು ಮತ್ತು ಸಂವಾದವನ್ನು ಮುಂದುವರಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ ಎಂಬುದು ಭಾರತ ಮತ್ತು ಇಸ್ರೇಲ್‌ಗೆ ಸ್ಪಷ್ಟವಾಗಿದೆ. ಭಯೋತ್ಪಾದನೆಯನ್ನು ಯಾವುದೇ ರೂಪದಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ಅದರ ಬೆಂಬಲಿಗರ ವಿರುದ್ಧ ನಾವು ಹೋರಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿ ಮೋದಿಯವರ ಎರಡನೇ ಇಸ್ರೇಲ್ ಭೇಟಿಯಾಗಿದೆ. ಮುಂದಿನ ವರ್ಷ ನೆತನ್ಯಾಹು ಭಾರತಕ್ಕೆ ಆಗಮಿಸಲಿದ್ದಾರೆ. ಇದಕ್ಕೂ ಮೊದಲು ಅವರು 2017ರಲ್ಲಿ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೆಲವು ಗೊಂದಲಗಳ ಮಧ್ಯೆಯೂ ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಗೀಕಾರ – Kannada News | Karnataka Governor Thawar Chand Gehlot signed To SC Internal Reservation Bill 2025

ಬೆಂಗಳೂರು, (ಫೆಬ್ರವರಿ 26): ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ( SC Internal Reservation Bill 2025) ಕೊನೆಗೂ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕೆಲವು ಗೊಂದಲಗಳ ಮಧ್ಯೆಯೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (Thawar Chand Gehlot ), ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ ಸಹಿ ಹಾಕಿದ್ದಾರೆ. ಮೀಸಲಾತಿ ವಿಚಾರದಲ್ಲಿ ಒಳ ಪಂಗಡಗಳ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ವಿಧೇಯಕಕ್ಕೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದ್ರೆ, ಇಂದು (ಫೆಬ್ರವರಿ 26) ದಲಿತ ಸಮುದಾಯದ ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ ವಿಧೇಯಕಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಪರಿಶಿಷ್ಟ ಜಾತಿಗಳ ಮೀಸಲಾತಿ ವಿಧೇಯಕಕ್ಕೆ ಅನುಮೋದನೆ ನೀಡಿದ್ದಾರೆ.

ಒಳಮೀಸಲಾತಿ ವಿಧೇಯಕವನ್ನ ವಾಪಸ್ ಕಳುಹಿಸಿದ ರಾಜ್ಯಪಾಲರು

ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ಹಲವು ಸ್ಪಷ್ಟನೆಗಳನ್ನು ಕೋರಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದರಿಂದಾಗಿ ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯ ಆಶಯಕ್ಕೆ ತಾತ್ಕಾಲಿಕ ಧಕ್ಕೆ ಉಂಟಾಗಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ. 6, 6 ಮತ್ತು 5ರ ಅನುಪಾತದಲ್ಲಿ ಕೋಟಾ ನಿಗದಿಪಡಿಸಲಾಗಿತ್ತು, ಆದರೆ ರಾಜ್ಯಪಾಲರು ಜನವರಿ 9 ರಂದೇ ಈ ಫೈಲ್ ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: ದಲಿತ ಸಮುದಾಯಕ್ಕೆ ಗುಡ್​ ನ್ಯೂಸ್: ಒಳ‌ ಮೀಸಲಾತಿ ಫೈನಲ್​, 3 ದಶಕಗಳ ಬೇಡಿಕೆ ಈಡೇರಿಕೆ

ಸಿಎಂ ಸಭೆ ಬಳಿಕ ರಾಜ್ಯಪಾಲರನ್ನ ಭೇಟಿ ಮಾಡಿದ ಸಚಿವರು

ಇದೇ ಮಾರ್ಚ್ 6ರರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 26) ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಒಳಮೀಸಲಾತಿ ವಿಧೇಯಕಕ್ಕೆ ರಾಜಭವನದಲ್ಲಿ ತಡೆ ಉಂಟಾಗಿರುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ ಒಳಮೀಸಲಾತಿ ವಿಧೇಯಕಕ್ಕೆ ಕೂಡಲೇ ಅಂಕಿತ ಹಾಕುವಂತೆ ಕೋರಲು ರಾಜ್ಯಪಾಲರ ಬಳಿ ಸಚಿವರ ನಿಯೋಗ ತೆರಳಲು ನಿರ್ಧರಿಸಲಾಯ್ತು, ಅದರಂತೆ ಪರಿಶಿಷ್ಟ ಜಾತಿ ಸಮಯದಾಯದ ಸಚಿವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಖಾಲಿ ಹುದ್ದೆ ನೇಮಕಾತಿಗೆ ತೊಂದರೆಯಾಗುತ್ತಿದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿರುವ ಬಗ್ಗೆಯೂ ಪ್ರಸ್ತಾಪಿಸಿ ಒಳಮೀಸಲಾತಿ ವಿಧೇಯಕಕ್ಕೆ ಸಹಿ ಹಾಕುವಂತೆ ಮಾನವಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು, ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ಸಹಿ ಹಾಕಿದ್ದಾರೆ.

ಈ ವಿಧೇಯಕಕ್ಕೆ ವಿರೋಧ

ಒಳಮೀಸಲಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕ-2025 ಅನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿದ್ದವು. ಒಳಮೀಸಲಾತಿ ಬಿಟ್ಟು ಹಳೆಯ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಮತ್ತು ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಬೇಕು. ಅಲ್ಲಿಯವರೆಗೂ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:24 pm, Thu, 26 February 26

Source link

ಕೋಟ್ಯಂತರ ರೂ ನಷ್ಟದಲ್ಲಿ ಹುಬ್ಬಳ್ಳಿ ಹೆಸ್ಕಾಂ: ಗ್ರಾಹಕರಿಗೆ ಹೊಡೆಯುತ್ತಾ ಕರೆಂಟ್​ ಶಾಕ್​? – Kannada News | Hubballi KERC Meeting: Public Outrage Over HESCOM Services and 188 Cr Loss Claim

ಹುಬ್ಬಳ್ಳಿ, ಫೆಬ್ರವರಿ 26: ಜನರಿಂದ ತಪ್ಪದೇ ವಿದ್ಯುತ್ ಬಿಲ್ ವಸೂಲಿ ಮಾಡುವ ಹೆಸ್ಕಾಂ (HESCOM), ಅದಕ್ಕೆ ಸರಿಯಾಗಿ ಸೇವೆಯನ್ನು ಮಾತ್ರ ನೀಡುತ್ತಿಲ್ಲ. ಇದೀಗ ಹೆಸ್ಕಾಂ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಅವಕಾಶ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಹೆಸ್ಕಾಂ ವಿರುದ್ದ ಆಯೋಗದ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜನರ ಮೇಲೆ ನಷ್ಟದ ಹೊರೆಯನ್ನು ಹಾಕಬಾರದು ಅಂತ ಆಗ್ರಹಿಸಿದರು.

ಆರ್ಥಿಕ ನಷ್ಟದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ

ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಏಳು ಜಿಲ್ಲೆಯ ಜನರು, ಕೈಗಾರಿಕೆಗಳು, ಐಪಿ ಸೆಟ್​ಗಳಿಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿ, ವಿದ್ಯುತ್ ನೀಡಿದ್ದಕ್ಕೆ ಪ್ರತಿಯಾಗಿ ಬಿಲ್​ನ್ನು ವಸೂಲಿ ಮಾಡುತ್ತದೆ. ಆದರೂ ಕೂಡ ಸಂಸ್ಥೆಗೆ 2024-25 ರ ಸಾಲಿನಲ್ಲಿ 188 ಕೋಟಿ ರೂ ಆದಾಯ ಕೊರತೆಯಾಗಿದೆಯಂತೆ. ಈ ಹಿಂದೆ ಅದನ್ನು 604 ಕೋಟಿ ರೂ ಆದಾಯ ಕೊರತೆ ಅಂತ ಹೇಳಿದ್ದ ಹೆಸ್ಕಾಂ, ಅದರಲ್ಲಿ ಕೆಲವನ್ನು ತಗೆದು 188 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: ಕಚೇರಿ ಬದಲು ಡಾಬಾದಲ್ಲಿ ಕೆಲಸ, ಎಣ್ಣೆ ಪಾರ್ಟಿ ಮಾಡುತ್ತಲೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್

ಆರ್ಥಿಕ ನಷ್ಟವನ್ನು ಸರಿದೂಗಿಸಲು ಅವಕಾಶ ನೀಡಬೇಕು ಅಂತ ಹೆಸ್ಕಾಂ, ಕೆಲ ದಿನಗಳ ಹಿಂದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಜನರ ಅಭಿಪ್ರಾಯ ಸಂಗ್ರಹಿಸಿದರು. ಈ ಸಮಯದಲ್ಲಿ ಹೆಸ್ಕಾಂ ವಿರುದ್ದ ಏಳು ಜಿಲ್ಲೆಗಳಿಂದ ಬಂದಿದ್ದ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಒಂದಡೆ ಹೆಸ್ಕಾಂ ಬೇಕಾಬಿಟ್ಟಿ ವೆಚ್ಚಗಳನ್ನು ಮಾಡುತ್ತಿದೆ. ಕಾಮಗಾರಿಗಳಲ್ಲಿ ಹಗರಣಗಳನ್ನು ಮಾಡುತ್ತಿದೆ. ಬರಬೇಕಾದ ಬಿಲ್​ನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ತಾವು ಪ್ರಮಾಣಿಕವಾಗಿ ಮಾಡಬೇಕಾದ ಕೆಲಸವನ್ನು ಮಾಡದೇ, ಸಂಸ್ಥೆಗೆ ನಷ್ಟವನ್ನುಂಟು ಮಾಡುತ್ತಿದ್ದು, ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಅಂತ ಅರವಿಂದ್ ಪೈ ಎನ್ನುವವರು ಆಗ್ರಹಿಸಿದರು.

ಸಭೆಯಲ್ಲಿ ಹೆಸ್ಕಾಂನ ಅನೇಕ ಹಗರಣಗಳು, ಅಕ್ರಮ ಕೆಲಸಗಳನ್ನು ವಿವಿಧ ಜಿಲ್ಲೆಯಿಂದ ಬಂದಿದ್ದ ಗ್ರಾಹಕರು ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಮತ್ತೊಂದಡೆ ಸರಿಯಾಗಿ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸದೇ ಇರೋದಕ್ಕೆ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಬಿಲ್ ಪಡೆಯುವ ಹೆಸ್ಕಾಂ, ಸೇವೆಯನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಅಂತ ಹರಿಹಾಯ್ದರು. ರೈತರ ಪಂಪಸೆಟ್​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇರೋದು, ಟ್ರಾನ್ಸಪಾರ್ಮ್​ಗಳು ಸುಟ್ಟಾಗ ಅವುಗಳನ್ನು ಬೇಗನೆ ರಿಪೇರಿ ಮಾಡದೇ ನೀಡದೇ ಇರೋದು ಸೇರಿದಂತೆ ಅನೇಕ ದೂರುಗಳನ್ನು ರೈತರು ಮತ್ತು ಸಾರ್ವಜನಿಕರು ಆಯೋಗದ ಮುಂದೆ ಪ್ರಸ್ತಾಪಿಸಿದರು.

ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ: ಅಧ್ಯಕ್ಷ ಪಿ ರವಿಕುಮಾರ್

ಇನ್ನು ಹೆಸ್ಕಾಂ ಹೊರೆಯನ್ನು ಯಾವುದೇ ಕಾರಣಕ್ಕೂ ಗ್ರಾಹಕರ ಮೇಲೆ ಹಾಕಬಾರದು ಅಂತ ಸಭೆಯಲ್ಲಿ ಭಾಗಿಯಾಗಿದ್ದವರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಇಂದಿನ ಸಭೆ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ. ಈಗಾಗಲೇ ಕಳೆದ ವರ್ಷ ಬೆಲೆ ಹೆಚ್ಚಳ ಮಾಡಿರೋದರಿಂದ ಮತ್ತೆ ವಿದ್ಯುತ್ ಬಿಲ್ ಹೆಚ್ಚಳ ಮಾಡಲ್ಲ. ಆದರೆ ಹೆಸ್ಕಾಂ ಆರ್ಥಿಕ ನಷ್ಟವನ್ನು ಸರಿದೂಗಿಸಲು ಆಯೋಗಕ್ಕೆ ಮನವಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರ ವಿಚಾರಗಳನ್ನು ಆಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಒಂದೆಡೆ ಹೆಸ್ಕಾಂಗೆ ಆದಾಯ ಬರುತ್ತಿದ್ದರೂ ಬರುತ್ತಿರುವ ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಸೋರಿಕೆ ಆಗುತ್ತಿದೆ. ಜೊತೆಗೆ ಅನೇಕ ಹಗರಣಗಳು ಹೆಸ್ಕಾಂ ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತಿವೆ. ಹೀಗಾಗಿ ಅಧಿಕಾರದಲ್ಲಿರುವವರು ಹೆಸ್ಕಾಂನಲ್ಲಿ ಆಗುತ್ತಿರುವ ಅವ್ಯವಹಾರ, ಅಕ್ರಮಗಳನ್ನು ತಡೆದರೆ ಸಂಸ್ಥೆ ನಷ್ಟದಿಂದ ಲಾಭದ ಹಳಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಮತ್ತು ಇಂದನ ಇಲಾಖೆ ಚಿಂತಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version