KKR vs SRH Record Alert: ಅಪರೂಪದ ತ್ರಿಶತಕ ಪೂರೈಸಿದ ಅಭಿ‘ಸಿಕ್ಸರ್’ ಶರ್ಮಾ

Source link

ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಬೆಂಗಳೂರು, ಏಪ್ರಿಲ್ 2: ನೀವು ದುಡಿದ ಹಣವೆಲ್ಲವನ್ನೂ ಬಳಸಿ ಬೆಂಗಳೂರಿನಲ್ಲಿ ಮನೆ ಖರೀದಿಸಲು ಹೋಗಬೇಡಿ. ನಿಮ್ಮ ಕೆಲಸ ಯಾವಾಗ ಬೇಕಾದರೂ ಹೋಗಬಹುದು. ಬಾಡಿಗೆ ಮನೆಯಲ್ಲಿ ವಾಸವಿರಿ… ಇದು ಬೆಂಗಳೂರಿನ ಐಟಿ ವೃತ್ತಿಪರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ (Reddit Post) ಹಾಕಿದ ಪೋಸ್ಟ್​ನಲ್ಲಿ ಐಟಿ ಬಿಟಿ ಸಿಟಿಯ ಟೆಕ್ಕಿಗಳಿಗೆ ಕೊಡಲಾಗಿರುವ ಸಲಹೆ. ಇವರ ಪ್ರಕಾರ ಮುಂದಿನ ಮೂರು ವರ್ಷದೊಳಗೆ ಬೆಂಗಳೂರಿನ ಶೇ. 80ರಷ್ಟು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರಂತೆ.

ತನ್ನ ಗುಂಡಿ ತಾನೇ ತೋಡಿದ ಟೆಕ್ಕಿ

ರೆಡ್ಡಿಟ್​ನಲ್ಲಿ ಎಲ್ಲಾ ಸಂಕಟ ಮತ್ತು ವಸ್ತುಸ್ಥಿತಿ ತೋಡಿಕೊಂಡಿರುವ ಈ ವ್ಯಕ್ತಿ, ಬೆಂಗಳೂರಿನ ರಿಯಲ್ ಎಸ್ಟೇಟ್, ಐಟಿ ಭವಿಷ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ದೊಡ್ಡ ಟೆಕ್ ಕಂಪನಿಯೊಂದರಲ್ಲಿ ಎಐ ಮೈಗ್ರೇಶನ್ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಈತ ಈಗ ಕೆಲಸ ಕಳೆದುಕೊಂಡಿದ್ದಾನೆ. ತಾನು ಅದೇ ಕಂಪನಿಯಲ್ಲಿ ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಎಐ ಜಾರಿಗೊಳಿಸುವ ಪ್ರಾಜೆಕ್ಟ್​ನಲ್ಲಿ ತೊಡಗಿದ್ದ. ಅದಾದ ಬಳಿಕ ಆ ಎಐಗೆ ಬಲಿಪಶುವಾದವರಲ್ಲಿ ಆತನೂ ಒಬ್ಬ. ಅದೇ ಅನುಭವದಲ್ಲಿ ಆತ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಭವಿಷ್ಯ ಇಲ್ಲ ಎಂದಿದ್ದಾನೆ.

ಇದನ್ನೂ ಓದಿ: ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?

‘ಐಟಿ ಗುಲಾಮರ ಪೈಕಿ ಶೇ. 70-80ರಷ್ಟು ಮಂದಿ ಸರ್ವಿಸ್ ಆಧಾರಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಹೆಚ್ಚಿನ ಕೆಲಸಗಳನ್ನು ಎಐ ಟೂಲ್​ಗಳಿಂದ ನಿಭಾಯಿಸಬಹುದು. ಕ್ಲೈಂಟ್​ಗಳು ಮನಸ್ಸು ಮಾಡಿದರೆ ಇದು 1-3 ವರ್ಷದಲ್ಲೇ ಆಗಬಹುದು. ಬ್ಯೂರೋಕ್ರಸಿ ಇತ್ಯಾದಿ ಕಾರಣಕ್ಕೆ ಶೇ. 70 ಮಂದಿಗೆ ಕೆಲಸ ಹೋಗುವುದು 3-5 ವರ್ಷ ವಿಳಂಬವಾಗಬಹುದು. ಉಳಿದ ಶೇ. 30 ಮಂದಿಗೆ ಕೆಲಸ ಉಳಿಯುತ್ತದೆ’ ಎಂದು ಈತ ಭವಿಷ್ಯ ನುಡಿದಿದ್ದಾನೆ.

ಕೆಲಸ ಉಳಿಯೋದು ಯಾಕೆಂದರೆ, ಏನಾದರೂ ಹೆಚ್ಚೂಕಡಿಮೆ ಆದರೆ ದೂಷಿಸಲು ಮನುಷ್ಯರು ಇರಬೇಕಲ್ಲ. ಹಾಗೆಯೇ, ಎಐ ಏಜೆಂಟ್​ಗಳಿಂದ ಯಡವಟ್ಟಾದರೆ ಅದನ್ನು ನಿರ್ವಹಿಸಲಾದರೂ ಮನುಷ್ಯರು ಇರಬೇಕಲ್ಲ. ಅದಕ್ಕೆ ಕೆಲವರಿಗೆ ಕಾಯಕ ಉಳಿದಿರುತ್ತದೆ’ ಎಂಬುದು ಈ ಟೆಕ್ಕಿಯ ಅನಿಸಿಕೆ. ಎಐ ಭೂತ ನಿಜ, ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳೋದು ನಿಜ ಎಂದು ಈತ ಬರೆದಿದ್ದಾನೆ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಬೆಂಗಳೂರಿನಲ್ಲಿ ಮನೆಯ ಕೊಳ್ಳಬೇಡಿರಣ್ಣೋ…

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಪರೀತ ಉಬ್ಬಲು ಐಟಿ ಕೂಲಿಗಳೇ ಕಾರಣ ಎಂಬುದು ಈ ಟೆಕ್ಕಿಯ ಅಭಿಪ್ರಾಯ. ಕಳೆದ ವರ್ಷ ತಾನು 2 ಕೋಟಿ ರೂ ಮೌಲ್ಯದ ಮನೆ ಖರೀದಿಸಬಹುದಿತ್ತು. ಅದನ್ನು ಖರೀದಿಸುವಷ್ಟು ಹಣಕಾಸು ಬಲ ತನ್ನಲ್ಲಿತ್ತು. ಆದರೂ ಖರೀದಿಸಲಿಲ್ಲ. ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿದ್ದೆ. ಎಐ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದರಿಂದ ಉದ್ಯೋಗದ ಕಥೆ ಏನಾಗಬಹುದು ಎನ್ನುವ ಅಂದಾಜು ಇತ್ತು. ಮನೆ ಖರೀದಿ ಮಾಡದಿರುವ ನಿರ್ಧಾರ ಈಗ ಸರಿ ಎನಿಸಿದೆ ಎಂದು ಈ ಟೆಕ್ಕಿ ವಿವರಿಸಿದ್ದಾನೆ.

ಹಾಗೆಯೇ, ಮನೆ ಖರೀದಬೇಕೆನ್ನುವವರಿಗೆ ಈತನ ಒಂದು ಟಿಪ್ಸ್ ಉತ್ತಮ ಎನಿಸಬಹುದು. ಒಬ್ಬ ವ್ಯಕ್ತಿಯ ನಿವ್ವಳ ಆಸ್ತಿಮೌಲ್ಯಕ್ಕಿಂತ ಶೇ 150ರಷ್ಟು ಹೆಚ್ಚಿನ ಬೆಲೆಯ ಮನೆಯನ್ನು ಖರೀದಿಸಬಾರದು ಎಂಬುದು ಇವನ ಸಲಹೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯ ದಿಗ್ಬಂಧನ ತೆರೆಯುವ ಕುರಿತ ಇಂಗ್ಲೆಂಡ್​​ನ ಶೃಂಗಸಭೆಯಲ್ಲಿ ಭಾರತ ಭಾಗಿ

ನವದೆಹಲಿ, ಏಪ್ರಿಲ್ 2: ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇಂಗ್ಲೆಂಡ್ (UK) ಡಜನ್‌ಗಟ್ಟಲೆ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಮಧ್ಯೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಯುನೈಟೆಡ್ ಕಿಂಗ್‌ಡಮ್ ಆಯೋಜಿಸಿರುವ ಬಹು-ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಭಾಗವಹಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.

ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತು ಬಹುಪಕ್ಷೀಯ ಮಾತುಕತೆಗಳಿಗೆ ಯುನೈಟೆಡ್ ಕಿಂಗ್‌ಡಮ್ (UK) ಭಾರತ ಸೇರಿದಂತೆ 35 ದೇಶಗಳನ್ನು ಆಹ್ವಾನಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸಭೆಯಲ್ಲಿ ನವದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ಮತ್ತು ಆಧಾರರಹಿತ; ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಇರಾನ್

“ಯುಕೆ ಹಾರ್ಮುಜ್ ಜಲಸಂಧಿಯ ಕುರಿತು ಮಾತುಕತೆಗಾಗಿ ಭಾರತ ಸೇರಿದಂತೆ ಹಲವಾರು ದೇಶಗಳನ್ನು ಆಹ್ವಾನಿಸಿದೆ. ನಮ್ಮ ಕಡೆಯಿಂದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದರು. ಇಂದು ಸಂಜೆ ವಿಕ್ರಮ್ ಮಿಶ್ರಿ ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಶ್ವದ ಅತ್ಯಂತ ಪ್ರಮುಖ ಇಂಧನ ಕಾರಿಡಾರ್‌ಗಳಲ್ಲಿ ಒಂದಾದ ಇದರಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ದೇಶಗಳು ಸಮನ್ವಯವನ್ನು ಹೆಚ್ಚಿಸುತ್ತಿರುವುದರಿಂದ ಈ ಬೆಳವಣಿಗೆ ಸಂಭವಿಸಿದೆ.

ಭಾರತ ಸಹ ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ಪ್ರಾದೇಶಿಕ ಪಾಲುದಾರರೊಂದಿಗೆ ತೊಡಗಿಸಿಕೊಂಡಿದ್ದು, ಹಡಗು ಮಾರ್ಗಗಳನ್ನು ಮುಕ್ತವಾಗಿಡಲು ತೊಡಗಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಯುಕೆ ವರ್ಚುವಲ್ ಆಗಿ ಕರೆದಿರುವ ಈ ಸಭೆಯಲ್ಲಿ ಅಮೆರಿಕ ಭಾಗವಹಿಸುತ್ತಿಲ್ಲ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಯಿಂದ ಉಂಟಾದ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಮುಚ್ಚಿದ ಜಲಮಾರ್ಗವನ್ನು ಸುರಕ್ಷಿತಗೊಳಿಸುವುದು ಅಮೆರಿಕದ ಕೆಲಸವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಸಾಮಾನ್ಯವಾಗಿ ಕೆಲವರಿಗೆ ಸಿಹಿ ಆಹಾರಕ್ಕಿಂತ ಮಸಾಲೆ ಹೆಚ್ಚಿರುವ, ಖಾರ ಖಾರವಾಗಿರುವ ಆಹಾರವೇ ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಫಾಸ್ಟ್ ಫುಡ್‌ನಲ್ಲಿರುವ ಮಸಾಲೆಗಳ ಸೇವನೆ ಮಾಡುತ್ತಾರೆ. ಕೆಲವರಿಗೆ ಮಸಾಲೆ ಇಲ್ಲದೆ ಊಟವೇ ರುಚಿಯಾಗುವುದಿಲ್ಲ. ಆದರೆ ಹೆಚ್ಚು ಮಸಾಲೆ (Spicy Food) ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲಿಯೂ ಮಸಾಲೆ ಅಧಿಕವಾಗಿರುವ ಆಹಾರವು ನಮ್ಮ ಇಂಟೆಸ್ಟೈನ್ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿದಿರಬೇಕಾಗುತ್ತದೆ. ದೇಹದಲ್ಲಿ ಕೆಲವು ಲಕ್ಷಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಜೊತೆಗೆ ಕೆಲವು ಆರೋಗ್ಯಕರ ಸಲಹೆ ಪಾಲನೆ ಮಾಡುವ ಮೂಲಕ ಮಸಾಲೆ ಹೆಚ್ಚಾಗಿರುವ ಆಹಾರ ಸೇವನೆ ಮಾಡುವುದರಿಂದ ಉಂಟಾಗುವ ಹಾನಿಯನ್ನು ತಡೆಯಬಹುದಾಗಿದೆ.

ಮಸಾಲೆ ಆಹಾರ ಇಂಟೆಸ್ಟೈನ್ ಗಳಿಗೆ ಹಾನಿ ಮಾಡುತ್ತದೆಯೇ?

ತಜ್ಞರ ಪ್ರಕಾರ, ಮಸಾಲೆಯುಕ್ತ ಆಹಾರ ಸೇವನೆ ಮಾಡಿದ ತಕ್ಷಣವೇ ದೊಡ್ಡ ಹಾನಿ ಮಾಡುವುದಿಲ್ಲ. ಆದರೆ ಅದನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ಸೇವಿಸಿದರೆ ಇಂಟೆಸ್ಟೈನ್ ಒಳಪದರ (lining) ಹಾನಿಗೊಳಗಾಗಬಹುದು. ಆರಂಭದಲ್ಲಿ ಕೆಲವು ಸಣ್ಣಪುಟ್ಟ ಲಕ್ಷಣಗಳು ಕಾಣಿಸಬಹುದು. ಹೊಟ್ಟೆ ಉರಿ, ಗ್ಯಾಸು, ಆಸಿಡಿಟಿ ಮುಂತಾದವು. ಆದರೆ ಇವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಸಮಸ್ಯೆಗಳಾಗಬಹುದು. ವಾರದಲ್ಲಿ ಮೂರು ನಾಲ್ಕು ದಿನ ಮಸಾಲೆಯುಕ್ತ ಆಹಾರ ಸೇವಿಸುವವರು ಕೆಲ ವರ್ಷಗಳಲ್ಲಿ ಅಲ್ಸರ್ ಮತ್ತು ಐಬಿಎಸ್ ಅಪಾಯದಿಂದ ಬಳಲಬಹುದು. ಜೊತೆಗೆ ಪ್ರತಿ ವ್ಯಕ್ತಿಯ ದೇಹದ ಸಹನಶಕ್ತಿ ವಿಭಿನ್ನವಾಗಿರುತ್ತದೆ. ಕೆಲವರು ಮಸಾಲೆ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ, ಆದರೆ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೂ ಸಹ ಸಮಸ್ಯೆಗಳು ಕಾಣಿಸಬಹುದು.

ಇದನ್ನೂ ಓದಿ: ಮಕ್ಕಳಿಗೆ ಖಾರ ಪದಾರ್ಥ ನೀಡಲು ಯಾವಾಗ ಆರಂಭ ಮಾಡಬೇಕು?

ಈ ಲಕ್ಷಣಗಳು ಕಂಡರೆ ಎಚ್ಚರ!

  • ಹೊಟ್ಟೆ ನೋವು
  • ಚುಚ್ಚುವಂತ ಅನುಭವ
  • ವಾಂತಿ
  • ಹೊಟ್ಟೆಯಲ್ಲಿ ಉರಿ
  • ಆಸಿಡಿಟಿ
  • ಹೊಟ್ಟೆ ತುಂಬಿದ ಅನುಭವ
  • ಸರಿಯಾಗಿ ಮಲವಿಸರ್ಜನೆ ಆಗದಿರುವುದು
  • ಹಸಿವು ಕಡಿಮೆಯಾಗುವುದು

ಯಾರು ಮಸಾಲೆ ಆಹಾರದಿಂದ ದೂರವಿರಬೇಕು?

ತಜ್ಞರ ಸಲಹೆಯಂತೆ, ಮಸಾಲೆ ಆಹಾರ ಸೇವಿಸಿದ ನಂತರ ಮೇಲಿನ ಲಕ್ಷಣಗಳು ಕಾಣಿಸಿದರೆ ಅಂತವರು ಖಾರ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡದಿರುವುದು ಒಳ್ಳೆಯದು. ಕೆಲವೊಮ್ಮೆ ಮಾತ್ರ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಹೊಟ್ಟೆ ಸಂಬಂಧಿತ ಕಾಯಿಲೆಗಳಿರುವವರು (ಜೀರ್ಣ ಸಮಸ್ಯೆಗಳು, ಅಲ್ಸರ್, IBS) ಮಸಾಲೆ ಆಹಾರವನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಡ್​ ನ್ಯೂಸ್: ಏ.5ರಂದು ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಮಧ್ಯರಾತ್ರಿ ವರೆಗೂ ವಿಸ್ತರಣೆ

ಬೆಂಗಳೂರು, ಏಪ್ರಿಲ್ 02): ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಮ್ಯಾಚ್ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಸೇವೆ ಮತ್ತೆ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಉದ್ಘಾಟನಾ ಪಂದ್ಯದ ಸಂದರ್ಭದಲ್ಲೂ ಸಹ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಸಮಯ ವಿಸ್ತರಣೆ ಮಾಡಲಾಗಿತ್ತು. ಇದೀಗ ಏಪ್ರಿಲ್ 5ರಂದು ಆರ್​​ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್  ಪಂದ್ಯ ಇರುವುದರಿಂದ ಅಂದು ಮೆಟ್ರೋ ಸಂಚಾರ ರಾತ್ರಿ 2 ಗಂಟೆವರೆಗೆ ಇರಲಿದೆ. ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾವಾಗಲಿ ಬಿಎಂಆರ್​​ಸಿಎಲ್ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಿದೆ.

ಮೆಟ್ರೋ ಸಂಚಾರ ವೇಳಾಪಟ್ಟಿ ಹೀಗಿದೆ

ಏಪ್ರಿಲ್ 5ರಂದು ಭಾನುವಾರ ಬೆಂಗಳೂರಿನ ಚೆನ್ನಸ್ವಾಮಿ ಸ್ಟೇಡಿಯಂನಲ್ಲಿ ಅರ್​ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ಇದ್ದು, ಅಂದು ಮೆಟ್ರೋ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು, ‘ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45 ಗಂಟೆಗೆ ಹೊರಡುತ್ತವೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12.45 ಗಂಟೆಗೆ ಇನ್ನೂ ಬೊಮ್ಮಸಂದ್ರ ದಿಂದ ರಾತ್ರಿ 12.30 ಹಾಗೂ ಆರ್.ವಿ. ರಸ್ತೆ ಯಿಂದ ರಾತ್ರಿ 02.00ಕ್ಕೆ ಕೊನೆಯ ರೈಲು ಹೊರಡುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡತ್ತವೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಏ 5ರಂದು ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಎರಡು ಮಾರ್ಗಗಳ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಕ್ಯೂಆ‌ರ್ (QR) ಕೋಡ್ ಡಿಜಿಟಲ್ ಐಪಿಎಲ್ ಪಂದ್ಯದ ಟಿಕೆಟ್‌ ಗಳಲ್ಲಿ ಒಳಗೊಂಡಿರುತ್ತದೆ. ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ, ನಿರ್ಗಮನ ಗೇಟ್‌ ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಬೇಕಿದೆ. ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಮೂಲಕ ಬರುವಂತೆ ತಿಳಿಸಿದೆ.

ಮೆಟ್ರೋ ಸ್ಟೇಷನ್​​ಗಳಲ್ಲಿ ಪಾರ್ಕಿಂಗ್

ಕ್ರಿಕೆಟ್ ನಡೆಯುವ ದಿನ ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣ ಖಚಿತಪಡಿಸಲು, ಬಿಎಂಆರ್‌ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯ ನೀಡಿದ್ದು, ಎರಡು ಚಕ್ರ ವಾಹನಗಳಿಗೆ 30 ರೂ., ಕಾರುಗಳಿಗೆ 60 ರೂ. ನಿಗದಿ ಮಾಡಲಾಗಿದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾತ್ರವೇ ಮಾನ್ಯವಾಗಿರುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KKR vs SRH: 4,6,6,4.. ಹೆಡ್ ಹಂಟ್​ಗೆ ವೈಭವ್ ಹರೋಹರ

ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್‌ ಮಾಡುತ್ತಿದ್ದು, ತಂಡದ ಆರಂಭಿಕರಿಬ್ಬರು ಸ್ಫೋಟಕ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಆರಂಭದಿಂದಲೂ ಅಬ್ಬರಿಸಿದ ಟ್ರಾವಿಸ್ ಹೆಡ್ ಕೆಕೆಆರ್ ಬೌಲರ್​ಗಳನ್ನು ಕಾಡಿದರು.

ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್, ವೈಭವ್ ಅರೋರಾ ಬೌಲ್ ಮಾಡಿದ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನು ಬಾರಿಸಿದರು. ಈ ಓವರ್​ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಹೆಡ್, ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಂತು. ಒಟ್ಟಾರೆ ಈ ಓವರ್​ನಲ್ಲಿ 21 ರನ್​ಗಳು ಬಂದವು.

ಆದಾಗ್ಯೂ ಈ ಪಂದ್ಯದಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ ಹೆಡ್ ಕಾರ್ತಿಕ್ ತ್ಯಾಗಿ ಬೌಲ್ ಮಾಡಿದ 6ನೇ ಓವರ್​ನ 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 21 ಎಸೆತಗಳನ್ನು ಎದುರಿಸಿದ ಹೆಡ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿ ಔಟಾದರು. ಇದರ ಜೊತೆಗೆ ಹೆಡ್, ಅಭಿಷೇಕ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್​ಗೆ 5.4 ಓವರ್​ಗಳಲ್ಲಿ 82 ರನ್​ಗಳ ಜೊತೆಯಾಟ ಕಟ್ಟಿ ತಂಡವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರದಲ್ಲೊಂದು ಅಪರೂಪದ ಜಾತ್ರೆ: ಕಹಿ ಬೇವಿನ ಸೊಪ್ಪೇ ಇಲ್ಲಿ ಪ್ರಸಾದ

ಚಿಕ್ಕಬಳ್ಳಾಪುರ, ಏಪ್ರಿಲ್​ 02: ಅಲ್ಲೊಂದು ಅಪರೂಪದಲ್ಲಿ ಅಪರೂಪದ ಜಾತ್ರೆ (Jatre) ನಡೆಯುತ್ತೆ. ಆ ಜಾತ್ರೆಯಲ್ಲಿ ಕಹಿ ಬೇವು (Neem), ಬೆಲ್ಲದಂತೆ ಸಿಹಿಯಾಗುತ್ತಂತೆ. ಇದರಿಂದ ಜನ ಬೃಹತ್ ಬೇವಿನ ಮರವೇರಿ ಕಹಿ ಬೇವಿನ ಸೊಪ್ಪು ತಿನ್ನುತ್ತಾರೆ. ಎಲ್ಲಡೆ ದೇವರ ಪ್ರಸಾದವಾಗಿ ಸಿಹಿ ಲಾಡು, ಸ್ವೀಟ್, ಅನ್ನಸಂತರ್ಪಣೆ ಮಾಡಿದರೆ, ಇಲ್ಲಿ ಮಾತ್ರ ಕಹಿ ಬೇವಿನ ಸೊಪ್ಪು ಪ್ರಸಾದವಾಗಿ ನೀಡಲಾಗುತ್ತದೆ.

ಈ ಜಾತ್ರೆಯಲ್ಲಿ ಬೇವಿನ ಸೊಪ್ಪೇ ಪ್ರಸಾದ

ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಮಂಚೇನಹಳ್ಳಿ ತಾಲೂಕಿನ ಮೀಣಕನಗುರ್ಕಿ ಗ್ರಾಮದಲ್ಲಿ ಮಹೇಶ್ವರಮ್ಮ ಜಾತ್ರೆ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಜಾತ್ರೆ ಪ್ರಯುಕ್ತ ಬ್ರಹ್ಮ ರಥೋತ್ಸವ ನಡೆಯುತ್ತೆ. ಈ ರಥೋತ್ಸವ ಅದೊಂದು ಬೇವಿನ ಮರದ ಬಳಿ ಬರ್ತಿದ್ದಂತೆ, ಜನರು ಇದ್ದಕ್ಕಿದ್ದಂತೆ ಬೃಹತ್ ಬೇವಿನ ಮರವನ್ನು ಏರಿ ಬೇವಿನ ಸೊಪ್ಪು ಕಿತ್ತು ತಿನ್ನುತ್ತಾರೆ. ಕೆಳಗಿದ್ದವರು ನಮಗೂ ಸ್ವಲ್ಪ ಬೇವಿನ ಸೊಪ್ಪಿನ ಪ್ರಸಾದ ಕೊಡಿ ಅಂತ ಮುಗಿಬಿದ್ದು ಬೆಲ್ಲದಂತೆ ಸೊಪ್ಪು ತಿನ್ನುತ್ತಾರೆ.

ಇದನ್ನೂ ಓದಿ: ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂಬ ಕಾರಣಕ್ಕೆ ಬಾರದ ಜನ

ಮಹೇಶ್ವರಮ್ಮ ರಥ ಬೇವಿನ ಮರದ ಬಳಿ ಬರ್ತಿದ್ದಂತೆ ಕಹಿ ಬೇವು ಕೆಲಕಾಲ ಸಿಹಿಯಾಗುತ್ತೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಇದರಿಂದ ಭಕ್ತರು ಪ್ರಸಾದದ ರೂಪದಲ್ಲಿ ಬೇವಿನ ಸೊಪ್ಪುನ್ನು ತಿನ್ನುತ್ತಾರೆ. ಮಹೇಶ್ವರಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನ ಬೇವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಇನ್ನು ಜಾತ್ರೆಗೆ ಬಂದ ಜನ ಬೇವಿನ ಸೊಪ್ಪನ್ನು ತಮ್ಮ ಮನೆಗೂ ತೆಗೆದುಕೊಂಡು ಹೋಗಿ ಜನರಿಗೆ ಹಂಚುತ್ತಾರೆ.

ಇದನ್ನೂ ಓದಿ: ತರಕಾರಿಯಲ್ಲಿ ರಾಸಾಯನಿಕ ಪತ್ತೆಗೆ ಕಾರಣ ರಿವೀಲ್​​: ಪರಿಸರವಾದಿ ಬಿಚ್ಚಿಟ್ರು ಅಸಲಿ ಸತ್ಯ

ಒಟ್ಟಿನಲ್ಲಿ ಕಹಿ ಕಹಿ ಬೇವು ಕೂಡ ಮಹೇಶ್ವರಮ್ಮ ಜಾತ್ರೆಯಲ್ಲಿ ಮಾತ್ರ ಸಿಹಿ ಆಗುತ್ತಂತೆ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಮುಗಿಬಿದ್ದು ಕಹಿ ಬೇವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಇಂದು ಒಂದು ರೀತಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?

ನವದೆಹಲಿ, ಏಪ್ರಿಲ್ 2: ಭಾರತದಲ್ಲಿ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿರುವ ಭಾರ್ತಿ ಏರ್ಟೆಲ್ (Bharti Airtel), ವಿಶ್ವದಲ್ಲೂ ನಂಬರ್ 2 ಎನಿಸಿದೆ. ಏರ್​ಟೆಲ್​ನ ಜಾಗತಿಕ ಗ್ರಾಹಕರ ಸಂಖ್ಯೆ (subscribers base) 65 ಕೋಟಿ ಗಡಿ ದಾಟಿದೆ. ಈ ಮಾಹಿತಿಯನ್ನು ಭಾರ್ತಿ ಏರ್ಟೆಲ್ ಸಂಸ್ಥೆಯೇ ಸ್ವತಃ ಪ್ರಕಟಿಸಿದೆ. ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಕಂಪನಿಗಳಲ್ಲಿ ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ಆ ಸ್ಥಾನಕ್ಕೆ ಜಿಯೋವನ್ನು ಹಿಂದಿಕ್ಕಿದೆ. ಏರ್ಟೆಲ್ ಸಂಸ್ಥೆ ಭಾರತದಲ್ಲಿ 368 ಮಿಲಿಯನ್ ಮೊಬೈಲ್ ಯೂಸರ್​ಗಳನ್ನು ಹೊಂದಿದೆ. ಉಳಿದವರು ಆಫ್ರಿಕಾದ ವಿವಿಧ ದೇಶಗಳಲ್ಲಿದ್ದಾರೆ.

ಭಾರ್ತಿ ಏರ್ಟೆಲ್​ನ ಅಂಗಸಂಸ್ಥೆಯಾದ ಏರ್​ಟೆಲ್ ಆಫ್ರಿಕಾ 14 ದೇಶಗಳಲ್ಲಿ ಗ್ರಾಹಕರ ಬಳಗ ಹೊಂದಿದೆ. ಅಂದರೆ, ಆಫ್ರಿಕಾ ಖಂಡದ 14 ವಿವಿಧ ದೇಶಗಳಲ್ಲಿ ಏರ್ಟೆಲ್ ಆಫ್ರಿಕಾ ಟೆಲಿಕಾಂ ಸರ್ವಿಸ್ ಇದೆ. ಆ 14 ದೇಶಗಳಲ್ಲಿ ಏರ್ಟೆಲ್ ಗ್ರಾಹಕರ ಸಂಖ್ಯೆ 17.9 ಕೋಟಿಯಷ್ಟಿದೆ. ಇದು ಜಿಎಸ್​ಎಂಎ ಇಂಟೆಲಿಜೆನ್ಸ್ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಕೋಟಕ್ ಈಕ್ವಿಟೀಸ್​ನ ವರದಿಯೊಂದರ ಪ್ರಕಾರ ಏರ್​ಟೆಲ್​ನ ಸಬ್​ಸ್ಕ್ರೈಬರ್ ಬೇಸ್ ಸ್ಥಿರವಾಗಿ ಹೆಚ್ಚುತ್ತಿದೆ. ಅದರಲ್ಲೂ ಅದರ ಡಾಟಾ ಬಳಕೆದಾರರ ಪ್ರಮಾಣ ವರ್ಷಕ್ಕೆ ಶೇ. 9.7ರ ದರದಲ್ಲಿ ಹೆಚ್ಚುತ್ತಿದೆ. ಇದು ಏರ್ಟೆಲ್ ಬ್ಯುಸಿನೆಸ್ ಲಾಭ ಹೆಚ್ಚುವಂತೆ ಮಾಡುತ್ತಿದೆ.

ಭಾರತದಲ್ಲಿ ಜಿಯೋ ನಂಬರ್ ಒನ್

ಭಾರತದಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆ ನಂಬರ್ ಒನ್ ಟೆಲಿಕಾಂ ಆಪರೇಟರ್ ಎನ್ನುವ ದಾಖಲೆ ಮುಂದುವರಿಸಿದೆ. ಜಿಯೋದ ಗ್ರಾಹಕರ ಬಳಗ 50 ಕೋಟಿಗೂ ಹೆಚ್ಚಿದೆ. ಏರ್​ಟೆಲ್​ನ ಹೊಚ್ಚ ಹೊಸ ದತ್ತಾಂಶ ಪ್ರಕಟವಾಗುವವರೆಗೂ ಜಿಯೋ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿತ್ತು. ಈಗ ಅದು ಮೂರನೇ ಸ್ಥಾನಕ್ಕೆ ಇಳಿದಿದೆ. ಆದರೆ, ಭಾರತದಲ್ಲಿ ಮಾತ್ರ ನಂಬರ್ ಒನ್ ಎನಿಸಿದೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ವಿಶ್ವದ ಟಾಪ್ ಟೆಲಿಕಾಂ ಕಂಪನಿಗಳು ಹಾಗೂ ಗ್ರಾಹಕರ ಬಳಗ

  1. ಚೈನಾ ಮೊಬೈಲ್: 100 ಕೋಟಿಗೂ ಅಧಿಕ ಗ್ರಾಹಕರು
  2. ಭಾರ್ತಿ ಏರ್ಟೆಲ್: 65 ಕೋಟಿಗೂ ಅಧಿಕ ಗ್ರಾಹಕರು
  3. ರಿಲಾಯನ್ಸ್ ಜಿಯೋ: 50 ಕೋಟಿಗೂ ಅಧಿಕ ಗ್ರಾಹಕರು
  4. ಚೈನಾ ಟೆಲಿಕಾಂ: 42 ಕೋಟಿಗೂ ಅಧಿಕ ಗ್ರಾಹಕರು
  5. ಚೈನಾ ಯೂನಿಕಾಂ: 35 ಕೋಟಿ ಗ್ರಾಹಕರು
  6. ಟೆಲಿಫೋನಿಕಾ, ಬ್ರಿಟನ್: 34 ಕೋಟಿಗೂ ಅಧಿಕ ಗ್ರಾಹಕರು
  7. ಅಮೆರಿಕ ಮೋವಿಲ್, ಮೆಕ್ಸಿಕೋ: 32 ಕೋಟಿಗೂ ಅಧಿಕ ಗ್ರಾಹಕರು
  8. ವೊಡಾಫೋನ್ ಗ್ರೂಪ್, ಬ್ರಿಟನ್: 30 ಕೋಟಿಗೂ ಅಧಿಕ ಗ್ರಾಹಕರು
  9. ಎಂಟಿಎನ್ ಗ್ರೂಪ್, ಸೌತ್ ಆಫ್ರಿಕಾ: 29 ಕೋಟಿಗೂ ಅಧಿಕ ಗ್ರಾಹಕರು
  10. ಡ್ಯೂಶೆ ಟೆಲಿಕಾಂ (Deutshe Telekom), ಎಟಿ ಅಂಡ್ ಟಿ, ವೆರಿಜಾನ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಹಾಡಿಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ

ಖ್ಯಾತ ಗಾಯಕರಾದ ಹನಿ ಸಿಂಗ್ ಮತ್ತು ಬಾದ್‌ಶಾ ಅವರು 2006-07ರಲ್ಲಿ ಜೊತೆಯಾಗಿ ಸಿದ್ಧಪಡಿಸಿದ್ದ ‘ವಾಲ್ಯೂಮ್ 1’ (Volume 1) ವಿವಾದಾತ್ಮಕ ಹಾಡನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಹಾಡು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಗಾಯಕ ಬಾದ್​ಶಾ (Badshah) ಅವರಿಗೆ ಎದುರಾದ ಎರಡನೇ ಕಾನೂನಿನ ಸಂಕಷ್ಟ ಇದಾಗಿದೆ.

ಈ ಹಾಡಿನ ಸಾಹಿತ್ಯವು ಕೇವಲ ಆಕ್ಷೇಪಾರ್ಹ ಮಾತ್ರವಲ್ಲ, ಬದಲಿಗೆ ಮಹಿಳೆಯರನ್ನು ಲೈಂಗಿಕ ವಸ್ತುವಿನಂತೆ ಬಿಂಬಿಸುವ ಮತ್ತು ಅವರನ್ನು ಅಪಹಾಸ್ಯ ಮಾಡುವಂತಿದೆ ಎಂದು ಕೋರ್ಟ್ ಹೇಳಿದೆ. ಈ ಕುರಿತು ಮಾತನಾಡಿದ ನ್ಯಾಯಾಧೀಶರು, ‘ಈ ಹಾಡು ಕಲಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿದೆ. ಇದನ್ನು ಕಲಾತ್ಮಕ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಅಶ್ಲೀಲ ವಿಷಯಗಳು ಅಪ್ರಾಪ್ತರಿಗೆ ಸುಲಭವಾಗಿ ಲಭ್ಯವಿರುವುದು ಸಮಾಜಕ್ಕೆ ಮಾರಕ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಹಾಡಿನ ಲಿಂಕ್‌ಗಳನ್ನು ಕೂಡಲೇ ತೆಗೆದುಹಾಕುವಂತೆ ಸ್ಪಾಟಿಫೈ ಮತ್ತು ಹನಿ ಸಿಂಗ್ ಸೇರಿದಂತೆ ಸಂಬಂಧಪಟ್ಟವರಿಗೆ ನ್ಯಾಯಾಲಯ ಸೂಚಿಸಿದೆ. ‘ಯಾವುದೇ ಸುಸಂಸ್ಕೃತ ಸಮಾಜವು ಇಂತಹ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳಷ್ಟೇ ಬಾದ್‌ಶಾ ಅವರ ಮತ್ತೊಂದು ಹಾಡು ‘ಟಟೀರಿ’ ಕೂಡ ವಿವಾದಕ್ಕೆ ಸಿಲುಕಿತ್ತು. ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅತಿರೇಕದ ಅಶ್ಲೀಲತೆಯಿಂದ ಕೂಡಿವೆ ಎಂದು ಜನರು ಕಿಡಿಕಾರಿದ್ದರು. ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿ, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಇತ್ತೀಚೆಗೆ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಕೂಡ ಇದೇ ರೀತಿ ಅಶ್ಲೀಲ ಸಾಹಿತ್ಯದಿಂದ ಕೂಡಿತ್ತು. ಜೋಗಿ ಪ್ರೇಮ್ ಬರೆದ ಆ ಹಾಡಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಅವರು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದರು. ಭಾರಿ ಟೀಕೆ ಎದುರಾದ ಬಳಿಕ ಹಾಡನ್ನು ಡಿಲೀಟ್ ಮಾಡಲಾಯಿತು. ಆ ಹಾಡಿಗಿಂತಲೂ ಹೆಚ್ಚು ಅಶ್ಲೀಲವಾದ ಸಾಹಿತ್ಯ ‘ವಾಲ್ಯೂಮ್ 1’ ಹಾಡಿನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಒತ್ತಡ (ಸ್ಟ್ರೆಸ್) ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ, ಸಮಯದ ಕೊರತೆ, ನಿದ್ರೆ ಸರಿಯಾಗಿ ಆಗದಿರುವುದು ಮತ್ತು ವೈಯಕ್ತಿಕ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿರಂತರ ಒತ್ತಡ ದೇಹದ ಒಳಗಿನ ವ್ಯವಸ್ಥೆಗೆ ಅರಿವಿಲ್ಲದಂತೆ ಹಾನಿ ಉಂಟುಮಾಡಿ, ನಿಧಾನವಾಗಿ ಪರಿಣಾಮ ಬೀರುತ್ತದೆ. ಅನೇಕರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಹೆಚ್ಚು ಸ್ಟ್ರೆಸ್‌ನಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ಹದಗೆಟ್ಟು ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದಣಿವು, ಗಮನ ಕೊರತೆ, ತಲೆನೋವು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯವಾಗಿದೆ. ಅಷ್ಟೇಅಲ್ಲ, ಅದರ ಜೊತೆಗೆ ಕೂದಲು ಮತ್ತು ಚರ್ಮದಲ್ಲೂ ಬದಲಾವಣೆಗಳು ಕಾಣಿಸಬಹುದು. ಹಾಗಾದರೆ ಸ್ಟ್ರೆಸ್‌ (Stress) ಮಾಡಿಕೊಳ್ಳುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚು ಸ್ಟ್ರೆಸ್‌ನಿಂದ ಕೂದಲಿಗಾಗುವ ಸಮಸ್ಯೆಗಳು:

ಡರ್ಮಟಾಲಜಿಸ್ಟ್ ಡಾ. ಸೌಮ್ಯ ಸಚ್‌ದೇವ ಅವರ ಪ್ರಕಾರ, ಹೆಚ್ಚು ಒತ್ತಡ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರಂತರ ಸ್ಟ್ರೆಸ್‌ನಿಂದ ಕೂದಲು ದುರ್ಬಲವಾಗಿ ಹೇರ್ ಫಾಲ್ ಹೆಚ್ಚಾಗಬಹುದು, ಕೂದಲು ತೆಳುವಾಗಿ ಬೆಳವಣಿಗೆ ನಿಧಾನಗೊಳ್ಳಬಹುದು, ಡ್ಯಾಂಡ್ರಫ್ ಮತ್ತು ಹೇನಿನ ಸಮಸ್ಯೆ ಕಾಣಿಸಬಹುದು, ಜೊತೆಗೆ ಸಮಯಕ್ಕೂ ಮುಂಚೆ ಕೂದಲು ಬಿಳಿಯಾಗಬಹುದು, ಕೂದಲಿನ ಹೊಳಪು ಕಡಿಮೆಯಾಗಿ ಒಣಗಿದಂತೆ ಕಾಣಬಹುದು. ಅಷ್ಟು ಮಾತ್ರವಲ್ಲ, ದೀರ್ಘಕಾಲದ ಒತ್ತಡ ಕೂದಲಿನ ದಟ್ಟತೆಯನ್ನೂ ಕಡಿಮೆ ಮಾಡಬಹುದು.

ಇದನ್ನೂ ಓದಿ: ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ

ಹೆಚ್ಚು ಸ್ಟ್ರೆಸ್‌ನಿಂದ ಚರ್ಮಕ್ಕಾಗುವ ಸಮಸ್ಯೆಗಳು:

ಸ್ಟ್ರೆಸ್‌ನ ಪರಿಣಾಮ ಚರ್ಮದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ಚರ್ಮ ದಣಿದಂತೆ ಕಾಣಿಸುತ್ತದೆ, ಪಿಂಪಲ್ಸ್, ಅಕ್ನೆ ಮತ್ತು ರ್ಯಾಶ್ ಸಮಸ್ಯೆಗಳು ಹೆಚ್ಚಾಗುತ್ತದೆ. ಒಣ ಚರ್ಮದ ಸಮಸ್ಯೆ ಕಾಡಬಹುದು. ಮುಂಚಿತವಾಗಿ ಫೈನ್ ಲೈನ್ಸ್ ಕಾಣಿಸಬಹುದು, ಚರ್ಮ ಸಂವೇದನಾಶೀಲವಾಗಿ, ಉರಿ ಹೆಚ್ಚಾಗಬಹುದು.

ಸ್ಟ್ರೆಸ್‌ನಿಂದ ಹೇಗೆ ರಕ್ಷಿಸಿಕೊಳ್ಳುವುದು?

  • ಸ್ಟ್ರೆಸ್ ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಅಗತ್ಯ
  • ಪ್ರತಿದಿನ ಸರಿಯಾಗಿ ನಿದ್ರೆ ಮಾಡಿ
  • ಸಮಯಕ್ಕೆ ಸರಿಯಾಗಿ ಮಲಗುವ ಮತ್ತು ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ
  • ಯೋಗ, ಧ್ಯಾನ ಮತ್ತು ಲಘು ವ್ಯಾಯಾಮ ಮಾಡಿ
  • ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ
  • ಪೌಷ್ಟಿಕ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ
  • ನಿಮಗಾಗಿ ಸಮಯ ಮೀಸಲಿಟ್ಟು ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version