ಒಂದು ಪಾರ್ಟಿಯಿಂದ ಹುಟ್ಟಿತು ‘ಟಾಕ್ಸಿಕ್’ ಸಿನಿಮಾ: ನಿರ್ಮಾಪಕ ಹೇಳಿದ್ದೇನು? – Kannada News | Producer KVN Venkat talks about How did Toxic movie started

ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಸೇರಿದಂತೆ ಹಲವಾರು ಮಂದಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಕೆವಿಎನ್​​ ಮಾಲೀಕ ವೆಂಕಟ್ ಅವರು ಚಿತ್ರತಂಡದ ಎಲ್ಲರಿಗೂ ಧನ್ಯವಾದ ಹೇಳಿದರು. ‘ಟಾಕ್ಸಿಕ್’ ಸಿನಿಮಾ ಆರಂಭ ಹೇಗಾಯ್ತು, ಯಶ್ ಅವರ ಗೆಳೆತನ ಸಿಕ್ಕಿದ್ದು ಹೇಗೆ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಮಾಪಕ ವೆಂಕಟ್ ಮಾತನಾಡಿದರು.

ವೆಂಕಟ್ ಅವರು ಹೇಳಿದಂತೆ ‘ಟಾಕ್ಸಿಕ್’ ಸಿನಿಮಾ ಶುರುವಾಗಿದ್ದು ಒಂದು ಪಾರ್ಟಿಯಿಂದ ಅಂತೆ. ಪಾರ್ಟಿಯೊಂದಕ್ಕೆ ವೆಂಕಟ್ ಅವರು ಕರೆಯದೇ ಹೋಗಿದ್ದರಂತೆ. ಅಲ್ಲಿ ಯಶ್ ಅವರ ಪರಿಚಯ ಆಯ್ತಂತೆ. ವಿಶೇಷವೆಂದರೆ ವೆಂಕಟ್ ಅವರು ಕರೆಯದೇ ಹೋಗಿದ್ದ ಪಾರ್ಟಿ, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿ.

ರಾಧಿಕಾ ಅವರ ಹುಟ್ಟುಹಬ್ಬದ ಪಾರ್ಟಿಗೆ ಯಾರೋ ಗೆಳೆಯರನ್ನು ಭೇಟಿ ಮಾಡಲೆಂದು ವೆಂಕಟ್ ಹೋಗಿದ್ದರಂತೆ. ಆಗ ಕೆಲ ಸಮಯ ಯಶ್ ಅವರೊಟ್ಟಿಗೆ ವೆಂಕಟ್ ಅವರು ಮಾತನಾಡಿದ್ದು, ಅದೇ ಅವರಿಬ್ಬರ ಮೊದಲ ಭೇಟಿಯಂತೆ. ಮೊದಲ ಮಾತು-ಕತೆಯಲ್ಲೇ ಕನೆಕ್ಟ್ ಆದೆ ಎಂದ ವೆಂಕಟ್ ಅವರು. ಆ ನಂತರ ಹಲವು ಭಾರಿ ಭೇಟಿ ಆದೆವು, ಈಗ ಸಿನಿಮಾ ಮಾತ್ರವೇ ಅಲ್ಲದೆ, ಇನ್ನೂ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ಪಾರ್ಟರ್​​ ಆಗಿ ಮಾಡುತ್ತಿದ್ದೇವೆ’ ಎಂದರು ವೆಂಕಟ್.

ಇದನ್ನೂ ಓದಿ:‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ

ಅವರಷ್ಟು ಸಿನಿಮಾ ಬಗ್ಗೆ ಫ್ಯಾಷನ್ ಇರುವ, ಕಷ್ಟ ಪಟ್ಟು ಕೆಲಸ ಮಾಡುವ, ಶಿಸ್ತಿನಿಂದ ಕೆಲಸ ಮಾಡುವ, ದೂರಾಲೋಚನೆಯುಳ್ಳ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರಿಲ್ಲದೆ ಈ ಸಿನಿಮಾ ಆಗುತ್ತಿರಲಿಲ್ಲ. ಅವರ ವೃತ್ತಿಪರತೆ, ಮೌಲ್ಯಗಳು, ಎಲ್ಲವನ್ನೂ ಅದ್ಭುತವಾಗಿ ಮತ್ತು ಅತ್ಯದ್ಭುತವಾಗಿಯೇ ಮಾಡಬೇಕು ಎಂಬ ಅವರ ಹಂಬಲ ನನ್ನನ್ನು ವಿಸ್ಮಿತಗೊಳಿಸಿತು. ಈ ಸಿನಿಮಾಕ್ಕೆ ಕತೆ ಬರೆಯುವ ಜೊತೆಗೆ ಸಹ ನಿರ್ಮಾಣ ಮಾಡಿದ್ದಾರೆ. ಅವರು ಸೆಟ್​​ನಲ್ಲಿ ಇದ್ದಾಗ ಎಲ್ಲವೂ ಸರಿಯಾಗಿ ಹೋಗುತ್ತದೆ. ಏನಾದರೂ ಸರಿಯಿಲ್ಲ ಎಂದರೆ ಅವರು ಅದನ್ನು ಸರಿ ಮಾಡುತ್ತಾರೆ. ಒಬ್ಬ ನಿರ್ಮಾಪಕನಿಗೆ ಇದಕ್ಕಿಂತಲೂ ಇನ್ನೇನು ಬೇಕು. ಇದೊಂದು ನೆನಪಿಟ್ಟಿಕೊಳ್ಳುವಂಥಾ ಜರ್ನಿ ನನ್ನ ಪಾಲಿಗೆ. ‘ಟಾಕ್ಸಿಕ್’ ಜನರೇಷನ್​​ಗಳ ಕಾಲ ನೆನಪುಳಿಯುವ ಸಿನಿಮಾ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಇದು ಕೇವಲ ಎಂಗೇಜಿಂಗ್ ಮತ್ತು ಎಂಟರ್ಟೈನ್​​ ಮಾಡುವ ಸಿನಿಮಾ ಅಲ್ಲ ಇದು ನಿಮ್ಮ ನಾಡಿ ಮಿಡಿತವನ್ನೇ ಬದಲಾಯಿಸುತ್ತದೆ’ ಎಂದಿದ್ದಾರೆ ವೆಂಕಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯಾಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಗಾಯಕ್ಕೆ ತುತ್ತಾದ ಜೆಮಿಮಾ ರೊಡ್ರಿಗಸ್

Source link

ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಮತ್ತೊಂದು ತಿರುವು: ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ – Kannada News | Committee Formed Under the Leadership of Justice Guhanathan Narendar for Comprehensive Review of Bidadi Township Opinions

ಬೆಂಗಳೂರು, (ಆಗಸ್ಟ್ 08): ಬಿಡದಿ ಟೌನ್‌ಶಿಪ್‌ ವಿವಾದ (Bidadi Township) ಮತ್ತೊಂದು ತಿರುವು ಪಡೆದುಕೊಂಡಿದೆ. ಟೌನ್ ಶಿಪ್ ಗೆ ಬಿಜೆಪಿ (BJP) ಹಾಗೂ ಜೆಡಿಎಸ್  (JDS)ಬಲವಾಗಿ ವಿರೋಧಿಸಿದ್ದು, ಆಗಸ್ಟ್ 9 ಮತ್ತು 10ರಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ. ಇದರ ಮಧ್ಯೆ ಇದೀಗ ಡಿಕೆ ಶಿವಕುಮಾರ್ (Dk Shivakumar) ಸರ್ಕಾರ, ಬಿಡದಿ ಟೌನ್‌ಶಿಪ್‌ ಬಗ್ಗೆ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಯೋಜನೆಗೆ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ ಡಿಕೆ ಶಿವಕುಮಾರ್, ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ದಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ ಎಂದಿದ್ದಾರೆ. ಈ ಮೂಲಕ ರೈತರ ವಿರೋಧ ಹಾಗೂ ವಿಪಕ್ಷಗಳ ಪಾದಯಾತ್ರೆ ನಡುವೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಸದಸ್ಯರಾಗಿದ್ದು, ಈ ಸಮತಿ 30 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.

ಇದನ್ನೂ ನೋಡಿ: ಬಿಡದಿ ಟೌನ್‌ಶಿಪ್ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು: ಬೃಹತ್ ಪಾದಯಾತ್ರೆ ನಡೆಸಲು ನಿರ್ಧಾರ

ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ದಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ. 2006ನೇ ಸಾಲಿನಲ್ಲಿ ಬಿಡದಿ ಬಳಿ ಸಮಗ್ರ ಉಪ ನಗರವನ್ನು ಅಭಿವೃದ್ಧಪಡಿಸಲು ತೀರ್ಮಾನಿಸಲಾಗಿತ್ತು. ಇತ್ತೀಚೆಗೆ ಬೆಂಗಳೂರಿನ ಸಮೀಪ ಬಂಡವಾಳ ಹೂಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜನವಸತಿ ಪ್ರದೇಶಗಳ ಕನಿಷ್ಟ ಸ್ಥಳಾಂತರ ಮತ್ತು ಭೂಮಾಲೀಕರಿಗೆ ಉತ್ತಮ ಮೌಲ್ಯ ಒದಗಿಸುವ ಆಶಯದೊಂದಿಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಮುಂದುವರೆಸಲು ಸರ್ಕಾರದ ತೀರ್ಮಾನ ಎಂದಿದ್ದಾರೆ.

ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯನ್ನು ಮಾಡಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’: ತಲೆ ತಗ್ಗಿಸೋಕೆ ಬಿಡಲ್ಲ, ಹೆಮ್ಮೆಯಿಂದ ಸಿನಿಮಾ ನೋಡಿ ಎಂದ ಯಶ್ – Kannada News | Yash speech at Toxic movie trailer release event is here

ನಾನು ಹಾಗೂ ಈ ‘ಟಾಕ್ಸಿಕ್’ (Toxic) ಸಿನಿಮಾ ಇಂದು ಈ ಹಂತಕ್ಕೆ ಬಂದಿರುವುದಕ್ಕೆ ಕರ್ನಾಟಕದ ಜನ ಕಾರಣ. ‘ಟಾಕ್ಸಿಕ್’ ಸಿನಿಮಾದ ನಿರ್ಮಾಣಕ್ಕೆ ನೇರ ಕಾರಣವೇ ಅವರು. ನಾನು ಪ್ರತಿ ಬಾರಿ ಸಿನಿಮಾ ಮಾಡಿದಾಗಲೂ ನನ್ನ ಬೆನ್ನು ತಟ್ಟಿ, ಯಶಸ್ಸು ನೀಡಿದಾಗೆಲ್ಲ, ನಾನು ಇನ್ನೂ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಮುನ್ನಡೆಯುತ್ತಿದ್ದೆ. ಹಾಗೆಯೇ ಮುನ್ನಡೆದು ಮುನ್ನಡೆದು ಈಗ ‘ಟಾಕ್ಸಿಕ್’ ವರೆಗೂ ಬಂದಿದ್ದೀನಿ. ಇದು ನನ್ನ ಹೊಸ ಸಿನಿಮಾ ಆದರೆ ಇದರ ಇಂಧನ ನನ್ನ ಈ ಹಿಂದಿನ ಸಿನಿಮಾಗಳಿಗೆ ನೀವು ನೀಡಿರುವ ಪ್ರೀತಿ’ ಎಂದು ನಟ ಯಶ್ ಹೇಳಿದರು.

ಎಎಂಬಿ ಮಾಲ್​​ನಲ್ಲಿ ಇಂದು (ಆಗಸ್ಟ್ 08) ನಡೆದ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವೆಂಟ್​​ನಲ್ಲಿ ಸುದೀರ್ಘವಾಗಿ ಮಾತನಾಡಿದ ಯಶ್, ಸಿನಿಮಾದ ಬಗ್ಗೆ, ಸಿನಿಮಾ ತಂಡದ ಬಗ್ಗೆ, ತಂತ್ರಜ್ಞರ ಬಗ್ಗೆ ಹಾಗೂ ಒಟ್ಟಾರೆ ಸಿನಿಮಾ ಮಾಡುವಾಗ ಎದುರಿಸಿದ ಸಮಸ್ಯೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ. ನಿಮ್ಮ ತಲೆ ತಗ್ಗಿಸೋಕೆ ಬಿಡಲ್ಲ. ಹೆಮ್ಮೆಯಿಂದ ಸಿನಿಮಾ ನೋಡಿ. ಹೆಮ್ಮೆಯಿಂದ ನೋಡುವಂಥಹ ಸಿನಿಮಾ ಮಾಡಿದ್ದೀವಿ ಎಂದ ಯಶ್, ಇಷ್ಟೋಂದು ಕಲಾವಿದರು ಈ ಸಿನಿಮಾಕ್ಕೆ ಒಂದಾಗಿದ್ದಾರೆ. ಇವರೆಲ್ಲ ಒಂದಾಗಿರುವುದು ಭಾರತೀಯ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು. ನಾವು ಕನ್ನಡ ಮತ್ತಿಉ ಇಂಗ್ಲೀಷ್​​ನಲ್ಲಿ ಸಿನಿಮಾ ಶೂಟ್ ಮಾಡಿದ್ದೇವೆ, ನಾನು ಹಳ್ಳಿಯವನು, ನನ್ನ ಇಂಗ್ಲೀಷ್ ಎಷ್ಟು ಕೆಟ್ಟದಾಗಿತ್ತು ಎಂದು ಎಲ್ಲರಿಗೂ ಗೊತ್ತು, ಆದರೆ ಅಂದುಕೊಂಡರೆ ಸಾಧಿಸಲು ಸಾಧ್ಯ, ಅದನ್ನೇ ಈಗ ಮಾಡಿದ್ದೇವೆ’ ಎಂದರು ಯಶ್.

ಇದನ್ನೂ ಓದಿ:ಬಿಡುಗಡೆ ಆಯ್ತು ‘ಟಾಕ್ಸಿಕ್’ ಟ್ರೈಲರ್, ಇದು ಸಾಮಾನ್ಯ ಸಿನಿಮಾ ಅಲ್ಲ ಬಿಡಿ

‘ದಾರಿ ಯಾವುದಾದರೂ ಆಗಬಹುದು ಗುರಿ ಮುಟ್ಟಬೇಕು, ಹೋರಾಟಕ್ಕೆ ಹೆದರಬಾರದು, ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು. ಯುವಪೀಳಿಗೆಗೆ ಈಗ ಸಾಕಷ್ಟು ಗೊಂದಲಗಳು ಇವೆ, ಅದೆಲ್ಲದರ ಪ್ರತಿನಿಧಿತ್ವ ಈ ಸಿನಿಮಾನಲ್ಲಿ ಇರಲಿದೆ. ಇದು ಸಾಮಾನ್ಯ ಕಮರ್ಶಿಯಲ್ ಸಿನಿಮಾ ಅಲ್ಲ. ಇದು ಮನುಷ್ಯರಿಗೆ ಬೇಕಾದ ಸಿನಿಮಾ, ಮನುಷ್ಯರನ್ನು ಬಾಳ್ವೆಯಲ್ಲಿ ಬೇಕಾದ ಹಲವು ಅಂಶಗಳು ಈ ಸಿನಿಮಾನಲ್ಲಿವೆ’ ಎಂದರು ಯಶ್.

‘ಟಾಕ್ಸಿಕ್’ ಸಿನಿಮಾ ಒಂದು ಕಮರ್ಶಿಯಲ್ ಪ್ಯಾಕೇಜ್ ಅಲ್ಲ, ಇದೊಂದು ಬಹಳ ಭಿನ್ನವಾದ ಕಾಂಬಿನೇಷನ್. ‘ಕೆಜಿಎಫ್’ ಬಳಿಕ ಕಮರ್ಶಿಯಲ್ ಹಾದಿ ಹಿಡಿಯುವ ಅವಕಾಶ ಇತ್ತು. ಆದರೆ ಭಿನ್ನವಾದುದನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ಗೀತು ಮೋಹನ್​​ದಾಸ್ ಸಿಕ್ಕರು. ಅವರಲ್ಲಿ ಅದ್ಭುತ ಫ್ಯಾಷನ್ ಇತ್ತು, ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕು ಎಂಬ ಹಠ ಇತ್ತು. ಅವರು ತಮ್ಮ ಅಮೂಲ್ಯ ಸಮಯ, ಕುಟುಂಬವನ್ನು ತ್ಯಾಗ ಮಾಡಿದ್ದಾರೆ. ಆದರೆ ಅವರ ಪ್ರತಿಭೆ ಎಂಥಹದ್ದು, ಅವರ ತ್ಯಾಗ ಎಂಥಹದ್ದು ಎಂಬುದನ್ನು ನೀವೆಲ್ಲ ತೆರೆಯ ಮೇಲೆ ನೋಡುತ್ತೀರ’ ಎಂದರು ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾಯ್ ಮಾತು – Kannada News | Akshay Oberoi Talks About ‘Toxic’, Yash and Geetu Mohandas at Trailer Launch Event

ಬೆಂಗಳೂರು, ಆಗಸ್ಟ್​ 08: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ (Akshay Oberoi), ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ‘ಟಾಕ್ಸಿಕ್ ಟ್ರೈಲರ್ ಅದ್ಭುತ. ಇಂತಹ ದೊಡ್ಡ ತಾರಾಗಣವಿರುವ ಪ್ರಾಜೆಕ್ಟ್‌ನ ಭಾಗವಾಗಿರುವುದು ಹೆಮ್ಮೆಯ ಸಂಗತಿ’ ಎಂದರು. ಇನ್ನು ‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾರ್ಯವೈಖರಿ ಮತ್ತು ನಟ ಯಶ್ ಅವರ ನಟನಾ ಶಕ್ತಿಯಿಂದ ತಮಗೆ ವೈಯಕ್ತಿಕವಾಗಿ ಹಾಗೂ ವೃತ್ತಿಜೀವನದಲ್ಲಿ ಸಾಕಷ್ಟು ಕಲಿಯಲು ಸಿಕ್ಕಿದೆ. ಈ ಚಿತ್ರದಲ್ಲಿ ನಟಿಸಿರುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವಗಳಲ್ಲಿ ಒಂದು’ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸಿನಿಮಾ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಯುಪಿಐ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | UPI Payments to Remain Free for Consumers Government Clarifies

ನವದೆಹಲಿ, ಆಗಸ್ಟ್ 8: ಗ್ರಾಹಕರಿಗೆ ಯುಪಿಐ (UPI) ಪಾವತಿ ಸಂಪೂರ್ಣ ಉಚಿತವಾಗಿರಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಯುಪಿಐ ಮೂಲಕ ಪಾವತಿ ಮಾಡುವಾಗ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಹುತೇಕ ವರ್ತಕರ ವಹಿವಾಟುಗಳು ಸಹ ಸಂಪೂರ್ಣ ಉಚಿತವಾಗಿ ಉಳಿಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ಎಂಡಿಆರ್ (MDR) ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಸಣ್ಣ ಪ್ರಮಾಣದ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಆ ಮೊತ್ತವೂ ಬಹಳ ಕಡಿಮೆ ಇರಲಿದೆ ಎಂದು ಸರ್ಕಾರ ಖಚಿತಪಡಿಸಿದೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ ತರಲಾದ ತಿದ್ದುಪಡಿಯು ಯುಪಿಐ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಹೊಸ ಮಾದರಿಯ ಸೈಬರ್ ಅಪಾಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವಹಿವಾಟುಗಳ ಪ್ರಮಾಣ ಬೆಳೆದಂತೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆ ಅಗತ್ಯವಾಗಿದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಪ್ರಮುಖ ಭಾಗವಾಗಿ ಯುಪಿಐ ಬೆಳೆಯುತ್ತಿರುವ ಮಹತ್ವವನ್ನು ಸರ್ಕಾರ ಎತ್ತಿಹಿಡಿದಿದೆ. ಕಳೆದ ತಿಂಗಳು ಒಂದರಲ್ಲೇ ಯುಪಿಐ ಮೂಲಕ 2,366 ಕೋಟಿ ವಹಿವಾಟುಗಳ ನಡೆದು, 29.9 ಲಕ್ಷ ಕೋಟಿ ರೂ. ಮೊತ್ತದ ಪಾವತಿಯಾಗಿದೆ. ಪ್ರಸ್ತುತ ಯುಪಿಐ ಜಗತ್ತಿನ 11 ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವ ಎಲ್ಲಾ ವಹಿವಾಟುಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಹೆಚ್ಚಿನ ಪ್ರಮಾಣದ ವರ್ತಕರ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಒಂದು ವೇಳೆ ಎಂಡಿಆರ್ ಶುಲ್ಕವನ್ನು ವಿಧಿಸಿದರೂ, ಅದು ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ಶೇಕಡಾವಾರು ತೀರ ಕಡಿಮೆ ಪ್ರಮಾಣದ ದೊಡ್ಡ ವರ್ತಕರಿಗೆ ಮಾತ್ರ ಅನ್ವಯಿಸಲಿದೆ. ಈ ಶುಲ್ಕವೂ ಸಹ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಎಂಡಿಆರ್‌ಗಿಂತ ಅತ್ಯಂತ ಕಡಿಮೆಯಿರಲಿದೆ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು

ಪಿಎಸ್‌ಎಸ್ ಕಾಯ್ದೆ ತಿದ್ದುಪಡಿ ಏಕೆ?:

ಯುಪಿಐ ದಿನೇ ದಿನೇ ತೀವ್ರವಾಗಿ ಬೆಳೆಯುತ್ತಿದ್ದು, ಜುಲೈ 2026 ಒಂದರಲ್ಲೇ 2,366 ಕೋಟಿ ವಹಿವಾಟುಗಳ ಮೂಲಕ 29.9 ಲಕ್ಷ ಕೋಟಿ ರೂಪಾಯಿಗಳ ಪಾವತಿ ನಡೆದಿದೆ. ಇಷ್ಟೊಂದು ಬೃಹತ್ ಮಟ್ಟದ ವ್ಯವಸ್ಥೆಗೆ ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ಆಧುನಿಕಗೊಳಿಸಲು ಖಾಸಗಿ ಕಂಪನಿಗಳ ಹೂಡಿಕೆ ಹಾಗೂ ಸ್ವಯಂ-ಸುಸ್ಥಿರ ಆದಾಯ ಮಾದರಿಯ ಅಗತ್ಯವಿದೆ. ಕೇವಲ ಸರ್ಕಾರಿ ಸಬ್ಸಿಡಿಗಳ ಮೇಲೆ ಆಧರಿಸುವುದು ಭವಿಷ್ಯದ ಬೆಳವಣಿಗೆಗೆ ಸಾಲದು ಎಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ – Kannada News | Iran supreme leader Mojtaba Khamenei in critical condition rushed to hospital says Iranian Reports

ಟೆಹ್ರಾನ್, ಆಗಸ್ಟ್ 8: ಇರಾನ್‌ನ ಸುಪ್ರೀಂ ನಾಯಕ (Supreme Leader) ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಒಳಗಿನ ಮೂಲಗಳನ್ನು ಉಲ್ಲೇಖಿಸಿ ಜೆರುಸಲೇಮ್ ಪೋಸ್ಟ್ ಮಾಡಿದ ವರದಿಗಳ ಪ್ರಕಾರ, ಖಮೇನಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಸದ್ಯದಲ್ಲೇ ಅವರ ಸಾವಿನ ಸುದ್ದಿ ಕೇಳಿಬಂದರೂ ಆಶ್ಚರ್ಯವಿಲ್ಲ” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಝೇಶ್ಕಿಯನ್ ಅವರ ಆಡಳಿತದ ಮೂಲವೊಂದು ತಿಳಿಸಿದೆ.

ಇರಾನ್​ನ ಸುಪ್ರೀಂ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಬಹಳ ಸಮಯದಿಂದ ಚರ್ಚೆಗಳು ನಡೆಯುತ್ತಲೇ ಇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೂ ಮೊಜ್ತಬಾ ಖಮೇನಿ ಬದುಕಿರುವ ಸಾಧ್ಯತೆಯೇ ಇಲ್ಲ ಎಂದಿದ್ದರು.

ಈ ವರ್ಷ ಫೆಬ್ರವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಮಿಲಿಟರಿ ದಾಳಿಯಲ್ಲಿ ತಂದೆ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಸಾರ್ವಜನಿಕವಾಗಿ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಅವರು ಕೇವಲ ಲಿಖಿತ ಹೇಳಿಕೆಗಳ ಮೂಲಕವೇ ಸಂದೇಶ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ

ತಂದೆಯ ನಿವಾಸದ ಮೇಲೆ ನಡೆದ ಆರಂಭಿಕ ದಾಳಿಯಲ್ಲೇ ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದು, ಅವರ ಮುಖ ವಿರೂಪಗೊಂಡಿರುವ ಸಾಧ್ಯತೆಯಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ತಲೆಮರೆಸಿಕೊಂಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಮಧ್ಯವರ್ತಿಗಳ ನಿಧಾನಗತಿಯ ನೆಟ್‌ವರ್ಕ್ ಬಳಸುತ್ತಿದ್ದಾರೆ ಎನ್ನಲಾಗಿದೆ. ಅವರ ತಂದೆ ಅಯತೊಲ್ಲಾ ಅಲಿ ಖಮೇನಿಯವರ ಅಂತ್ಯಕ್ರಿಯೆಗೆ ಎಲ್ಲ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರೂ ಮೊಜ್ತಬಾ ಖಮೇನಿ ಮಾತ್ರ ಭಾಗಿಯಾಗಿರಲಿಲ್ಲ.

ಈ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಝೇಶ್ಕಿಯನ್ ಕೂಡ ಸರ್ಕಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಖಮೇನಿ ಅವರೊಂದಿಗೆ ನೇರ ಸಂಪರ್ಕ ಸಾಧಿಸುವುದು ಪ್ರಸ್ತುತ ಬಹಳ ಕಷ್ಟಕರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಜುಲೈನಲ್ಲಿ ಸೌದಿ ಮಾಧ್ಯಮ ಸಂಸ್ಥೆ ‘ಅಲ್-ಹದತ್’ ಇಸ್ರೇಲಿ ಭದ್ರತಾ ಮೂಲವನ್ನು ಉಲ್ಲೇಖಿಸಿ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ಲ ಎಂದು ವರದಿ ಮಾಡಿತ್ತು. ಅದೇ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಇರಾನ್‌ನ ಉನ್ನತ ಮಿಲಿಟರಿ ನಾಯಕತ್ವವನ್ನು ಅಂತ್ಯಗೊಳಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಯ ನಂತರ ಖಮೇನಿ ಸಾಯುವ ಹಂತ ತಲುಪಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಆರಂಭದಲ್ಲಿ ಇರಾನ್‌ನ ಸರ್ಕಾರಿ ಅಧಿಕಾರಿಗಳು ಅವರ ಗಾಯಗಳು ಸಣ್ಣಪುಟ್ಟವು ಎಂದು ಹೇಳಿಕೊಂಡಿದ್ದರು. ಆದರೆ ಅವರು ಸುದೀರ್ಘ ಕಾಲದಿಂದ ನೇರ ಸಾರ್ವಜನಿಕ ಭಾಷಣ ಮಾಡದಿರುವುದು ಅವರ ಆರೋಗ್ಯ ಮತ್ತು ದೇಶದ ನಾಯಕತ್ವದ ಸ್ಥಿರತೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅನುಮಾನಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳ ಮತ್ತು ವಿರೋಧಿ ದೇಶಗಳ ಗೂಢಚಾರಿ ಮೂಲಗಳು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳುತ್ತಿದ್ದರೆ, ಇರಾನ್ ಅಧಿಕಾರಿಗಳು ಮಾತ್ರ ಅವರು ಇಂದಿಗೂ ದೇಶಕ್ಕೆ ತಾಂತ್ರಿಕ ಮಾರ್ಗದರ್ಶನ ಮತ್ತು ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೊಜ್ತಬಾ ಖಮೇನಿ ಮೃತಪಟ್ಟರೆ ಯಾರಾಗಲಿದ್ದಾರೆ ಇರಾನ್ ಸುಪ್ರೀಂ ನಾಯಕ? – Kannada News | Who Will be Irans Supreme Leader If Mojtaba Khamenei Dies

ಟೆಹ್ರಾನ್, ಆಗಸ್ಟ್ 8: ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ನಂತರ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದ ಮೊಜ್ತಬಾ ಖಮೇನಿ (Mojtaba Khamenei) ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ. ಇಸ್ರೇಲಿ ಮಾಧ್ಯಮ ಸಂಸ್ಥೆ ‘ಚಾನೆಲ್ 14’ ಈ ಬಗ್ಗೆ ವರದಿ ಮಾಡಿದ್ದರೆ, ಇತರ ಕೆಲವು ವರದಿಗಳು ಅವರ ಸಾವು ಶೀಘ್ರದಲ್ಲೇ ಸಂಭವಿಸಬಹುದು ಎಂದು ಹೇಳಿವೆ. ಅಧಿಕಾರ ವಹಿಸಿಕೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅವರೇನಾದರೂ ಮೃತಪಟ್ಟರೆ ಇರಾನ್​ ದೇಶದಲ್ಲಿ ಮುಂದಿನ ಸುಪ್ರೀಂ ನಾಯಕ ಯಾರು ಆಗಲಿದ್ದಾರೆ? ಎಂಬ ಪ್ರಶ್ನೆಯನ್ನು ಈ ವರದಿಗಳು ಹುಟ್ಟುಹಾಕಿವೆ.

ಇರಾನ್ ಸಂವಿಧಾನದ 111ನೇ ವಿಧಿಯ ಪ್ರಕಾರ, ಸುಪ್ರೀಂ ನಾಯಕ ಮೃತಪಟ್ಟರೆ, ರಾಜೀನಾಮೆ ನೀಡಿದರೆ ಅಥವಾ ಕಾರ್ಯನಿರ್ವಹಿಸಲು ಅಸಮರ್ಥರಾದರೆ, ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ತಾತ್ಕಾಲಿಕ ನಾಯಕತ್ವ ಮಂಡಳಿ ಅಧಿಕಾರ ವಹಿಸಿಕೊಳ್ಳುತ್ತದೆ. ಈ ಮಂಡಳಿಯು ಮೂರು ಸದಸ್ಯರನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಇರಾನ್ ಅಧ್ಯಕ್ಷ (ಪ್ರಸ್ತುತ ಮಸೌದ್ ಪೆಝೇಶ್ಕಿಯನ್), ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥ (ಪ್ರಸ್ತುತ ಗುಲಾಮ್-ಹುಸೇನ್ ಮೊಹ್ಸೇನಿ-ಎಜೆ), ಗಾರ್ಡಿಯನ್ ಕೌನ್ಸಿಲ್‌ನಿಂದ ಆಯ್ಕೆಯಾದ ಒಬ್ಬರು ಧಾರ್ಮಿಕ ನ್ಯಾಯಶಾಸ್ತ್ರಜ್ಞರನ್ನು ಈ ಸಮಿತಿ ಒಳಗೊಂಡಿರುತ್ತದೆ.

ಮುಂದಿನ ಸುಪ್ರೀಂ ನಾಯಕನನ್ನು ಆಯ್ಕೆ ಮಾಡುವವರು ಯಾರು?:

88 ಸದಸ್ಯರನ್ನು ಒಳಗೊಂಡ ‘ಆಕ್ಸ್‌ಫರ್ಡ್ ಆಫ್ ಎಕ್ಸ್‌ಪರ್ಟ್ಸ್’ (Assembly of Experts) ಮಂಡಳಿಯು ಇರಾನ್‌ನ ಸುಪ್ರೀಂ ನಾಯಕನನ್ನು ಆಯ್ಕೆ ಮಾಡುವ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೊಂದಿದೆ. ಸೇನೆ, ನ್ಯಾಯಾಂಗ, ವಿದೇಶಾಂಗ ನೀತಿ ಸೇರಿದಂತೆ ದೇಶದ ಎಲ್ಲಾ ಪ್ರಮುಖ ರಂಗಗಳ ಮೇಲೆ ಈ ಹುದ್ದೆಯು ಅಪಾರ ಅಧಿಕಾರ ಹೊಂದಿರುವುದರಿಂದ, ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯು ಅತ್ಯಂತ ನಿರ್ಣಾಯಕವಾಗಲಿದೆ.

ರೇಸ್‌ನಲ್ಲಿರುವ ಪ್ರಮುಖ ಅಭ್ಯರ್ಥಿಗಳು ಯಾರು?:

ಆಯತೊಲ್ಲಾ ಅಲಿರೆಝಾ ಅರಾಫಿ: ಗಾರ್ಡಿಯನ್ ಕೌನ್ಸಿಲ್‌ನ ಹಿರಿಯ ಸದಸ್ಯ ಹಾಗೂ ಪ್ರಭಾವಿ ಧಾರ್ಮಿಕ ಮುಖಂಡರಾಗಿರುವ ಅರಾಫಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ

ಆಯತೊಲ್ಲಾ ಹಶೇಮ್ ಹುಸೇನಿ ಬುಶೆಹ್ರಿ: ಧಾರ್ಮಿಕ ಕೇಂದ್ರವಾದ ಕುಮ್ ನಗರದಲ್ಲಿ ತೀವ್ರ ಪ್ರಭಾವ ಹೊಂದಿರುವ ಇವರು ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ನಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿದ್ದಾರೆ.

ಗುಲಾಮ್-ಹುಸೇನ್ ಮೊಹ್ಸೇನಿ-ಎಜೆ: ಇರಾನ್‌ನ ಪ್ರಸ್ತುತ ನ್ಯಾಯಾಂಗ ಮುಖ್ಯಸ್ಥರಾಗಿರುವ ಇವರು ಕಠಿಣ ನಿಲುವಿನ ನಾಯಕರೆಂದು ಗುರುತಿಸಿಕೊಂಡಿದ್ದಾರೆ.

ಹಸನ್ ಖಮೇನಿ: ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಆಯತೊಲ್ಲಾ ರೂಹೊಲ್ಲಾ ಖಮೇನಿ ಅವರ ಮೊಮ್ಮಗನಾದ ಇವರ ಹೆಸರೂ ಸಹ ಚರ್ಚೆಯಲ್ಲಿದೆ.

ಒಂದುವೇಳೆ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಒಬ್ಬನೇ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, ಸಂವಿಧಾನದ ಚೌಕಟ್ಟಿನಲ್ಲಿ ‘ನಾಯಕತ್ವ ಮಂಡಳಿ’ಯ ಮೂಲಕ ಸಾಮೂಹಿಕ ನಾಯಕತ್ವ ನೀಡುವ ವ್ಯವಸ್ಥೆಯನ್ನೂ ಮಾಡಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ

ಬೆಂಗಳೂರು, ಆಗಸ್ಟ್​​​ 08: ರಾಕಿಂಗ್​​ ಸ್ಟಾರ್​ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆಗಸ್ಟ್​ 26ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇಂದು ಬೆಂಗಳೂರಿನ ಎಎಂಬಿ ಮಾಲ್​​ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ‘ಆಲ್ ದಿ ಬೆಸ್ಟ್ ಯಶ್’ ಹಾಗೂ ‘ಆಲ್ ದಿ ಬೆಸ್ಟ್ ಟಾಕ್ಸಿಕ್’ ಎಂದು ಹೇಳುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿ ಟ್ರೇಲರ್ ಬಿಡುಗಡೆ ಮಾಡಿದರು. ಇನ್ನು ಟ್ರೈಲರ್ ರಿಲೀಸ್ ಇವೆಂಟ್​ನಲ್ಲಿ ನಟಿ ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ನಟಿಯರು ಹಾಗೂ ಅಕ್ಷಯ್ ಒಬೆರಾಯ್ ಭಾಗಿಯಾಗಿದ್ದಾರೆ.

ಮತ್ತಷ್ಟು ಸಿನಿಮಾ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಮಸ್ಯೆಯಲ್ಲಿದ್ದವರಿಗೆ ಪರಿಹಾರ: ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್! – Kannada News | Cabinet Expansion Unrest: HD Kumaraswamy open Offers Disgruntled Congress MLAs To Join JDS

ಹಾಸನ, (ಆಗಸ್ಟ್ 08): ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ (Cabinet Expansion) ಬೆನ್ನಲ್ಲೇ ಕಾಂಗ್ರೆಸ್​​​​ನಲ್ಲಿ (Karnataka Congress) ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್ (DK Shivakumar),  ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ಇತ್ತ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಗಾಳ ಹಾಕಿದ್ದು, ಜೆಡಿಎಸ್​​​​​​ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.

ಈ ಬಗ್ಗೆ ಹಾಸನದ ಹರದನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನೊಂದವರಿಗೆ, ನೋವಿನಲ್ಲಿರುವವರಿಗೆ ಹಾಗೂ ಸಮಸ್ಯೆಯಲ್ಲಿದ್ದವರಿಗೆ ಪರಿಹಾರ ಕೊಡುವ ಪಕ್ಷ. ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುತ್ತೆ. ನೋವಿಗೆ ಪರಿಹಾರನೂ ದೊರಕುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಫರ್ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾಮಗ್ರೆಸ್ ಶಾಸಕರು ಜೆಡಿಎಸ್​​ನತ್ತ ಮುಖ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version