Headlines

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಇಂಫಾಲ, ಏಪ್ರಿಲ್ 07: ಕಳೆದ ನಾಲ್ಕು ವರ್ಷಗಳಿಂದ ಮಣಿಪುರ(Manipur)ದಲ್ಲಿ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಿವೆ. ಇದೀಗ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 2023ರಲ್ಲಿ ಕುಕಿ ಹಾಗೂ ಮೈಥಿ ಸಮುದಾಯದ ನಡುವೆ ಹುಟ್ಟಿಕೊಂಡ ದ್ವೇಷದ ಜ್ವಾಲೆಯು ಇಡೀ ಮಣಿಪುರವನ್ನೇ ಸುಟ್ಟಿತ್ತು. ಸಾಕಷ್ಟು ಬಾರಿ ಘರ್ಷಣೆಗಳು ನಡೆದು ನೂರಾರು ಮಂದಿ ಸಾವನ್ನಪ್ಪಿದ್ದರು. ಈಗಲೂ ಬೂದಿ ಮುಚ್ಚಿದ ಕೆಂಡದಂತೆಯೇ ಪರಿಸ್ಥಿತಿ ಇದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ದೊಡ್ಡ ದುರಂತವೊಂದು ಸಂಭವಿಸಿದೆ….

Read More

ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

ಬೆಂಗಳೂರು, ಏಪ್ರಿಲ್ 7: ಕರ್ನಾಟಕದಲ್ಲಿ (Karnataka) ಆಟೋ ಗ್ಯಾಸ್ (LPG) ಅಭಾವ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗ್ಯಾಸ್‌ಗಾಗಿ ಎಲ್‌ಪಿಜಿ ಬಂಕ್‌ಗಳ ಮುಂದೆ ಆಟೋ ಸಾರಥಿಗಳು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುವಂತಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ‘ಕರ್ನಾಟಕ ಬಂದ್’ ಮಾಡುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಬೆಂಗಳೂರಿನ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ರಾಜ್ಯದ ಹಲವೆಡೆ ಆಟೋ ಚಾಲಕರು ಇಡೀ ದಿನ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ….

Read More

Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!

ಬೆಂಗಳೂರು, ಏಪ್ರಿಲ್ 07: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ…

Read More

ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ

ಜಜ್ಜರ್​​ಸಿಂಗ್, ಏಪ್ರಿಲ್ 07: ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಅಭಯ್ ಸಿಂಗ್ ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಅವರು ಮತ್ತು ಅವರ ಪತ್ನಿ ಪ್ರೀತಿಕಾ ಮೊದಲ ಬಾರಿಗೆ ತಮ್ಮ ಹುಟ್ಟೂರು ಜಜ್ಜರ್‌ಗೆ ಭೇಟಿ ನೀಡಿದ್ದರು, ಅಲ್ಲಿ ಅವರನ್ನು ನೋಡಲು ಮತ್ತು ಸ್ವಾಗತಿಸಲು ಜನಸಮೂಹ ಸೇರಿತ್ತು. ಅಭಯ್ ತನ್ನ ಬ್ಯಾಂಕ್ ಖಾತೆಯ KYC ನವೀಕರಿಸಲು ತನ್ನ ಪತ್ನಿಯೊಂದಿಗೆ  ಜಜ್ಜರ್‌ಗೆ ಬಂದಿದ್ದರು.ಈ ಸಮಯದಲ್ಲಿ, ಅವರು ತಹಸಿಲ್ ಸಂಕೀರ್ಣದಲ್ಲಿರುವ ತಮ್ಮ ವಕೀಲ ಕರಣ್…

Read More

‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ’ ಧಾರಾವಾಹಿ (Amruthadhare Serial) ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಟಿಆರ್ಪಿಯಲ್ಲೂ ಧಾರಾವಾಹಿ ಟಾಪ್ ಐದರಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಈ ಧಾರಾವಾಹಿಯಲ್ಲಿ ಗೌತಮ್ ಹಾಗು ಭೂಮಿಕಾ ಪಾತ್ರ ಮಾಡಿರುವ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಎಷ್ಟು ಗಮನ ಸೆಳೆದಿದ್ದಾರೋ, ಮಲ್ಲಿ ಪಾತ್ರ ಮಾಡಿರುವ ಅನ್ವಿತಾ ಕೂಡ ಮೆಚ್ಚುಗೆ ಪಡೆದಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ಮೊದಲು ರಾಧಾ…

Read More

‘ಪ್ರೀತಿನೇ ಎಲ್ಲಾ ಅಲ್ಲ, ಆದರೆ, ಪ್ರೀತಿ ಇಲ್ದೆ ಏನೂ ಇಲ್ಲ’; ತ್ರಿಷಾ ಮಾರ್ಮಿಕ ಪೋಸ್ಟ್

ನಟಿ ತ್ರಿಷಾ ಕೃಷ್ಣನ್ (Trisha) ಅವರು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ವಿಜಯ್ ಜೊತೆಗಿನ ಗೆಳೆತನ. ವಿಜಯ್ ಹಾಗೂ ತ್ರಿಷಾ ಮಧ್ಯೆ ಅಫೇರ್ ಇದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಯಾರೂ ಒಪ್ಪಿಕೊಂಡಿಲ್ಲ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ತ್ರಿಷಾ ಹಂಚಿಕೊಂಡ ಸಾಲುಗಳು ಗಮನ ಸೆಳೆದಿವೆ. ತ್ರಿಷಾ ಅವರು ತಮಿಳಿನ ಖ್ಯಾತ ನಟಿ. ಅವರಿಗೆ…

Read More

ಆರ್​​ಸಿಬಿ ಮ್ಯಾಚ್​​ಗಳಲ್ಲಿ ಸದಾ ಅನುಷ್ಕಾ ಶರ್ಮಾ ಪಕ್ಕ ಕೂರುವ ಈ ಸುಂದರಿ ಯಾರು?

ಸದ್ಯ ಐಪಿಎಲ್ ಹವಾ ಜೋರಾಗಿದೆ. ಆರ್​​ಸಿಬಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದು, ಆಡಿದ ಎರಡು ಪಂದ್ಯಗಳ ಪೈಕಿ ಎರಡೂ ಮ್ಯಾಚ್ ಗೆದ್ದಿದೆ. ಆರ್​​​ಸಿಬಿ ಮ್ಯಾಚ್ ನೋಡಲು ನಟಿ ಅನುಷ್ಕಾ ಶರ್ಮಾ ಆಗಮಿಸುತ್ತಿದ್ದಾರೆ. ಆರ್​​ಸಿಬಿಯ ಎರಡೂ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿದ್ದವು. ಹೀಗಾಗಿ, ಅನುಷ್ಕಾ ಶರ್ಮಾ ಅವರು ಬೆಂಗಳೂರಿಗೆ ಬಂದಿದ್ದರು. ಪ್ರತಿ ಪಂದ್ಯದಲ್ಲೂ ಅವರ ಪಕ್ಕ  ಓರ್ವ ಸುಂದರಿ ಕುಳಿತಿರುತ್ತಾರೆ. ಅವರು ಯಾರು ಎನ್ನುವ ಹುಡುಕಾಟ ನಡೆದಿದೆ. ಅನುಷ್ಕಾ ಶರ್ಮಾ ಪಕ್ಕ ಕುಳಿತಿರುವ ಹುಡುಗಿ ಯಾರು ಎಂಬುದನ್ನು ಪತ್ತೆ ಹಚ್ಚಲು ಅನೇಕರು…

Read More

ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್, ಏಪ್ರಿಲ್ 07: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್​ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್ ರಾತ್ರೋರಾತ್ರಿ ನಾಶವಾಗಬಹುದು ಎಂದು ಟ್ರಂಪ್ ಬೆದರಿಸಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, ಇಡೀ ದೇಶ ರಾತ್ರೋ ರಾತ್ರಿ ನಾಶವಾಗಬಹುದು ಮತ್ತು ಆ ರಾತ್ರಿ ಮಂಗಳವಾರವೇ ಆಗಿರಬಹುದು ಎಂದಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಈ ಹೇಳಿಕೆ ಬಂದಿದೆ. ಟ್ರಂಪ್ ಮಂಗಳವಾರ(ಏಪ್ರಿಲ್ 7) ರಾತ್ರಿ 8 ಗಂಟೆಯವರೆಗೆ ಇರಾನ್​ಗೆ ಸಮಯ…

Read More

Daily Devotional: ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆಯಲ್ಲಿ ಕಸ ಯಾವ ದಿಕ್ಕಿನಿಂದ ಗುಡಿಸಲು ಶುರು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕಸವನ್ನು ಗುಡಿಸುವ ದಿಕ್ಕು ಮುಖ್ಯವಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನಯೋಗ ನೆಲಸಬೇಕಾದರೆ, ಈಶಾನ್ಯ ದಿಕ್ಕಿನಿಂದ ಕಸ ಗುಡಿಸಲು ಪ್ರಾರಂಭಿಸಬೇಕು. ನಂತರ ಆಗ್ನೇಯದ ಕಡೆಗೆ ಸಾಗಿ, ವಾಯುವ್ಯ ದಿಕ್ಕಿನ ಮೂಲಕ ನೈರುತ್ಯ ದಿಕ್ಕಿನಲ್ಲಿ ಕಸ ಗುಡಿಸುವುದನ್ನು ಪೂರ್ಣಗೊಳಿಸಬೇಕು. ಈ ವಿಧಾನವು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು…

Read More

ದ್ವಿತೀಯ ಪಿಯುಸಿ ಫಲಿತಾಂಶ ವಿಳಂಬ ಯಾಕೆ ಗೊತ್ತೇ? ಅಸಲಿ ಕಾರಣ ಬಹಿರಂಗ!

ಬೆಂಗಳೂರು, ಏಪ್ರಿಲ್ 7: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd Puc Result) ಇಂದು (ಏಪ್ರಿಲ್ 7) ಪ್ರಕಟವಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಿರಾಸೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿದೆ. ಆದರೆ, ಫಲಿತಾಂಶ ಪ್ರಕಟಿಸುವುದನ್ನು ಮುಂದೂಡಿಕೆ ಮಾಡಲು ಅಸಲಿ ಕಾರಣ ಏನೆಂಬುದು ಈಗ ಬಹಿರಂಗವಾಗಿದೆ. ಚುನಾವಣಾ ನೀತಿ ಸಂಹಿತೆ ಅಡ್ಡಿ ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ…

Read More