Category Archives: Blog

Your blog category

ವಿಮಾನಗಳು ರದ್ದಾಗಿದ್ರೂ ಯುದ್ಧ ಭೂಮಿಯಿಂದ ಬೆಂಗಳೂರಿಗೆ ಬಂದಿಳಿದ ಶಾಸಕ: ಬಂದಿದ್ಹೇಗೆ ಗೊತ್ತಾ? – Kannada News | MLA ac Srinivas lands in Bengaluru from war zone despite cancelled flights: Do you know how he got there

ಕೆಂಪೇಗೌಡ ವಿಮಾನ ನಿಲ್ದಾಣ, ಶಾಸಕ ಎಸಿ ಶ್ರೀನಿವಾಸ್Image Credit source: tv9 kannada

ದೇವನಹಳ್ಳಿ, ಮಾರ್ಚ್​​ 02: ಕಳೆದ ಮೂರು ದಿನಗಳಿಂದ ಇರಾನ್ ಮೇಲೆ ಇಸ್ರೇಲ್​ ಮತ್ತು ಅಮೆರಿಕಾ ಜಂಟಿ ದಾಳಿ (Israel-Iran Conflict) ಮಾಡುತ್ತಿರುವ ಕಾರಣ ವಿಮಾನ ಹಾರಾಟ ರದ್ದಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ತವರಿಗೆ ವಾಪಸ್​ ಆಗದೆ ಪರದಾಡುತ್ತಿರುವ ಬೆನ್ನಲ್ಲೆ ಓರ್ವ ಶಾಸಕ ಮಾತ್ರ ಯುದ್ಧ ಭೂಮಿಯಿಂದ ಗ್ರೇಟ್​ ಎಸ್ಕೇಪ್​ ಆಗಿ ಬಂದಿದ್ದಾರೆ. ಆ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳ ಹಾರಾಟ ರದ್ದಾಗಿವೆ.

ಯುದ್ಧ ಹಿನ್ನೆಲೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚುತ್ತಿದೆ. ದುಬೈ ಏರ್‌ಪೋರ್ಟ್​ನಲ್ಲೆ ಮೂರು ದಿನಗಳಿಂದ ಕನ್ನಡಿಗರು ವಿಮಾನಗಳಿಲ್ಲದೆ ತವರಿಗೆ ಬರಲಾಗದೆ ಪರದಾಡುತ್ತಿದ್ದಾರೆ. ಕೆಂಪೇಗೌಡ ಏರ್‌ಪೋರ್ಟ್​ನಿಂದಲೂ ತವರಿಗೆ ಹೋಗಲು ಟಿಕೆಟ್ ಬುಕ್ ಮಾಡಿಕೊಂಡಿದ್ದ ಪ್ರಯಾಣಿಕರು ವಿಮಾನಗಳ ಹಾರಾಟವಿಲ್ಲದೆ ಕಂಗಾಲಾಗಿದ್ದಾರೆ. ಇಂದು ಸಹ 24 ವಿಮಾನಗಳು ಹಾರಾಟ ನಡೆಸದೆ ನಿಂತಲ್ಲೆ ನಿಂತಿವೆ.

ಯುದ್ಧ ಭೂಮಿಯಿಂದ ಗ್ರೇಟ್ ಎಸ್ಕೇಪ್

ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ, ಡ್ರೋನ್ ಪ್ರತಾಪ್ ಸೇರಿದಂತೆ ನೂರಾರು ಕನ್ನಡಿಗರು ತವರಿಗೆ ಬರಲಾಗದೆ ದುಬೈನಲ್ಲಿ ಸಿಲುಕಿ ಪರದಾಡುತ್ತಿರುವ ಬೆನ್ನಲ್ಲೆ ಆರು ದಿನದ ಹಿಂದೆ ದುಬೈಗೆ ತೆರಳಿದ್ದ ಪುಲಕೇಶಿ ನಗರ ಶಾಸಕ ಎಸಿ ಶ್ರೀನಿವಾಸ್​​, ಮಸ್ಕಟ್ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೊದಲೇ ಗೋಲ್ಡನ್ ವೀಸಾ ಪಡೆದುಕೊಂಡು ದುಬೈಗೆ ತೆರಳಿದ್ದ ಕಾರಣ ಯದ್ಧ ಭೂಮಿಯಿಂದ ಹರಸಾಹಸ ಪಟ್ಟು 6 ಗಂಟೆಗಳ ಕಾಲ ರಸ್ತೆ ಪ್ರಯಾಣ ಮಾಡಿ ಮಸ್ಕಟ್ ಸೇರಿದ್ದಾರೆ. ಜೊತೆಗೆ ಮಸ್ಕಟ್​ನಿಂದ ವಿಮಾನದಲ್ಲಿ ಇಂದು ಬೆಳಗ್ಗೆ 09 ಗಂಟೆ ಬೆಂಗಳೂರು ತಲುಪುವ ಮೂಲಕ ನಿಟ್ಟುಸಿರುವ ಬಿಟ್ಟಿದ್ದು, ಸುರಕ್ಷಿತವಾಗಿ ಮನೆ ಸೇರಿದ್ದಾರೆ.

24 ವಿಮಾನಗಳು ರದ್ದು

ಕೆಐಎಬಿಯಿಂದ ದುಬೈ ಸೇರಿದಂತೆ ಹೊರದೇಶಗಳಿಗೆ ತೆರಳಲು ಆಗಮಿಸಿರುವ ಪ್ರಯಾಣಿಕರು ಸದ್ಯ ಪರದಾಡುತ್ತಿದ್ದಾರೆ. ಯುದ್ಧ ಹಿನ್ನೆಲೆ ಇಂದು ಸಹ ಇರಾನ್​ನಲ್ಲಿ ವಾಯುನೆಲೆ ಓಪನ್ ಆಗಿಲ್ಲ. ಹೀಗಾಗಿ ಕೆಂಪೇಗೌಡ ಏರ್‌ಪೋರ್ಟ್​ನಿಂದ ದುಬೈ, ದೋಹಾ, ಅಬುಧಾಬಿ, ಜಿದ್ದಾ, ಬಹ್ರೇನ್ ಸೇರಿದಂತೆ ಹಲವೆಡೆ ತೆರಳಬೇಕಿದ್ದ 24 ವಿಮಾನಗಳು ರದ್ದಾಗಿವೆ.

ಇದನ್ನೂ ಓದಿ: ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

ಇನ್ನು ಕಳೆದ ಎರಡು ದಿನಗಳಿಂದ ವಿಮಾನ ರದ್ದಾಗಿದ್ದ ಕಾರಣ ಇಂದು ಹಾರಾಟ ಮಾಡಬಹುದು ಅಂತ ಬಂದಿದ್ದ ಪ್ರಯಾಣಿಕರು ಸಹ ರದ್ಧಾಗಿದ್ದರಿಂದ ವಾಪಸ್​ ಆಗಿದ್ದಾರೆ. ಏರ್‌ಪೋರ್ಟ್​ನ ಟರ್ಮಿನಲ್ 2ರಲ್ಲಿ ಗಂಟೆಗಟ್ಟಲೇ ಕಾದು ಸುಸ್ತಾದ ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್ಪ್ರೆಸ್​ ಕೌಂಟರ್​ನಲ್ಲಿ ತಮ್ಮ ಟಿಕೆಟ್ ಮರು ಬುಕ್ಕಿಂಗ್ ಹಾಗೂ ರದ್ದು ಮಾಡುವ ಬಗ್ಗೆ ಮಾಹಿತಿ ಪಡೆದು ಮನೆಗಳತ್ತ ವಾಪಸ್ ಆದರು.

ಇದನ್ನೂ ಓದಿ: ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ, ಬರುವ ಒಟ್ಟು 24 ವಿಮಾನಗಳು ರದ್ದು: ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಒಟ್ಟಾರೆ ಮೂರನೇ ದಿನ ಕೂಡ ದುಬೈನಿಂದ ಯಾವುದೇ ವಿಮಾನಗಳು ಟೇಕ್ ಆಫ್​ ಆಗದಿರುವುದು, ಪ್ರಯಾಣಿಕರು ತವರು ಸೇರುವ ತವಕದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಂಬೆ ನೀರು ಕುಡಿಯುವುದರಿಂದ ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ? ಇಲ್ಲಿದೆ ಆಯುರ್ವೇದ ತಜ್ಞರ ಅಭಿಪ್ರಾಯ – Kannada News | Lemon Water and Detox: What’s the Truth?

ನಿಂಬೆ (Lemon) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಆಂಟಿ- ಆಕ್ಸಿಡೆಂಟ್ ಗುಣಗಳೂ ಇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂಬೆ ನೀರಿನ ಅನೇಕ ಪ್ರಯೋಜನಗಳನ್ನು ಹೇಳಲಾಗುತ್ತಿದ್ದು, ನಿಯಮಿತವಾಗಿ ನಿಂಬೆ ನೀರು (Lemon Water) ಕುಡಿಯುವುದರಿಂದ ದೇಹದಲ್ಲಿನ ವಿಷಪದಾರ್ಥಗಳು ಸುಲಭವಾಗಿ ಹೊರಹೋಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದು ಎಷ್ಟು ಸತ್ಯ, ನಿಂಬೆ ನೀರು ನಿಜವಾಗಿಯೂ ಪರಿಣಾಮಕಾರಿ ಔಷಧಿಯೇ, ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಕುರಿತು ಆಯುರ್ವೇದ ತಜ್ಞರು ನೀಡಿದ ಮಾಹಿತಿ ಈ ಸ್ಟೋರಿಯಲ್ಲಿದೆ.

ದೆಹಲಿ ಮೂಲದ ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಹೇಳುವ ಪ್ರಕಾರ, ಈ ರೀತಿಯ ಉಪಾಯ ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿಯಾಗುವುದಿಲ್ಲ. ಪ್ರತಿಯೊಬ್ಬರ ದೇಹದ ಸ್ವಭಾವ ಮತ್ತು ಕಾರ್ಯಪದ್ಧತಿ ವಿಭಿನ್ನವಾಗಿರುತ್ತದೆ. ನಮ್ಮ ದೇಹದಲ್ಲಿರುವ ಕಿಡ್ನಿ, ಯಕೃತ್ತು (ಲಿವರ್) ಮತ್ತು ಜೀರ್ಣಾಂಗ ವ್ಯವಸ್ಥೆಗಳು ಸ್ವಾಭಾವಿಕವಾಗಿಯೇ ದೇಹದಲ್ಲಿನ ಕಸದ ಪದಾರ್ಥಗಳನ್ನು ಹೊರಹಾಕುವ ಕೆಲಸ ಮಾಡುತ್ತವೆ. ನಿಂಬೆ ನೀರು ಈ ಪ್ರಕ್ರಿಯೆಗೆ ಸಹಾಯ ಮಾಡಬಹುದು, ಆದರೆ ಇದರಿಂದ ದೇಹ ಸಂಪೂರ್ಣವಾಗಿ ಡಿಟಾಕ್ಸ್ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಿಂಬೆ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಣೆ: ನಿಂಬೆ ವಿಟಮಿನ್ ಸಿಯ ಪ್ರಾಕೃತಿಕ ಮೂಲವಾಗಿದೆ. ಇದರಲ್ಲಿರುವ ಆಂಟಿ- ಆಕ್ಸಿಡೆಂಟ್ ಗುಣಗಳು ಜೀರ್ಣಕ ಎನ್ಜೈಮ್‌ಗಳನ್ನು ಚುರುಕುಗೊಳಿಸಿ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡಲು ಸಹಾಯ ಮಾಡುತ್ತವೆ.

ಯಕೃತ್ತಿಗೆ ಒಳ್ಳೆಯದು: ಕೆಲವರು ನಿಂಬೆ ನೀರು ಯಕೃತ್ತನ್ನು ಶುದ್ಧಗೊಳಿಸುತ್ತದೆ ಎಂದು ನಂಬುತ್ತಾರೆ. ತಜ್ಞರು ಹೇಳುವ ಪ್ರಕಾರ, ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ

ತೂಕ ನಿಯಂತ್ರಣ: ತೂಕ ಕಡಿಮೆ ಮಾಡಲು ಪ್ರಯತ್ನಿಸುವವರು ನಿಂಬೆ ನೀರನ್ನು ನಿಯಮಿತವಾಗಿ ಕುಡಿಯಬಹುದು. ಇದು ಮೆಟಾಬಾಲಿಸಂ ಚುರುಕುಗೊಳಿಸಲು ಸಹಾಯ ಮಾಡುತ್ತದೆ ಹಾಗೂ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಪ್ರತಿದಿನ ನಿಂಬೆ ನೀರು ಕುಡಿಯಬೇಕೇ?

ನಿಂಬೆ ನೀರನ್ನು ಕುಡಿಯುವುದರಿಂದ ಹಲವಾರು ರೀತಿಯ ಲಾಭಗಳಿದ್ದರೂ, ಅದನ್ನು ಪ್ರತಿದಿನ ಕುಡಿಯಲೇಬೇಕು ಎಂಬ ಅನಿವಾರ್ಯವಿಲ್ಲ. ವಾರದಲ್ಲಿ ನಾಲ್ಕು ರಿಂದ ಐದು ದಿನ ಕುಡಿದರೆ ಸಾಕು ಎಂದು ತಜ್ಞರು ಹೇಳುತ್ತಾರೆ. ಆಮ್ಲತ್ವ (ಆಸಿಡಿಟಿ), ಗ್ಯಾಸ್ಟ್ರಿಕ್ ಸಮಸ್ಯೆಗಳು ಅಥವಾ ಹಲ್ಲು ನೋವಿನ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ನಿಂಬೆ ನೀರಿಗೆ ಸಕ್ಕರೆ ಅಥವಾ ಹೆಚ್ಚು ಉಪ್ಪು ಸೇರಿಸಬಾರದು. ಒಟ್ಟಾರೆ, ನಿಂಬೆ ನೀರು ಆರೋಗ್ಯಕ್ಕೆ ಸಹಾಯಕವಾದ ಪಾನೀಯವಾಗಿದ್ದರೂ, ದೇಹವನ್ನು ಸಂಪೂರ್ಣವಾಗಿ ಡಿಟಾಕ್ಸ್ ಮಾಡುತ್ತದೆ ಎಂಬ ಹೇಳಿಕೆ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ – Kannada News | Reports say Dhurandhar 2 movie runtime is nearly 4 hour

2025ರಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ‘ಧುರಂಧರ್’ ಸಿನಿಮಾ ನೋಡಿದ ಎಲ್ಲರೂ ಈಗ ಸೀಕ್ವೆಲ್ ನೋಡಲು ಕಾಯುತ್ತಿದ್ದಾರೆ. ‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆಗೂ ಮೊದಲು ಅನೇಕ ಇಂಟರೆಸ್ಟಿಂಗ್ ವಿಷಯಗಳು ಕೇಳಿಬರುತ್ತಿವೆ. ರಣವೀರ್ ಸಿಂಗ್ (Ranveer Singh) ಅಭಿಮಾನಿಗಳು ‘ಧುರಂಧರ್ 2’ ನೋಡಲು ಹೋದರೆ ಬರೋಬ್ಬರಿ 4 ಗಂಟೆಗಳ ಕಾಲ ಚಿತ್ರಮಂದಿರದ ಒಳಗೆ ಇರಬೇಕಾಗುತ್ತದೆ! ಯಾಕೆಂದರೆ, ಈ ಸಿನಿಮಾದ ಅವಧಿ (Runtime) ಬರೋಬ್ಬರಿ 3 ಗಂಟೆ 55 ನಿಮಿಷ ಇದೆ ಎನ್ನಲಾಗಿದೆ.

ಸಿನಿಮಾದ ಅವಧಿ ದೀರ್ಘವಾಗಿದ್ದರೆ ಚಿತ್ರತಂಡ ರಿಸ್ಕ್ ತೆಗೆದುಕೊಂಡಂತೆಯೇ ಅರ್ಥ. ‘ಧುರಂಧರ್ 2’ ಸಿನಿಮಾದ ಅವಧಿ 3 ಗಂಟೆ 55 ನಿಮಿಷ ಇದ್ದರೆ ಅಷ್ಟು ದೀರ್ಘ ಕಾಲ ಪ್ರೇಕ್ಷಕರನ್ನು ಹಿಡಿದಿರುವುದು ಸುಲಭದ ಮಾತಲ್ಲ. ಹಾಗಾಗಿ ‘ಧುರಂಧರ್ 2’ ಚಿತ್ರತಂಡ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಕಾದುನೋಡಬೇಕು.

ಆದಿತ್ಯ ಧಾರ್ ಅವರು ‘ಧುರಂಧರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಧುರಂಧರ್ 2’ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ ಅವರು ಅತಿಥಿ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅದು ಇನ್ನೂ ಖಚಿತವಾಗಿಲ್ಲ.

‘ಧುರಂಧರ್ 2’ ಟೀಸರ್ ಬಿಡುಗಡೆ ಆದಾಗ ಪ್ರೇಕ್ಷಕರಿಗೆ ನಿರಾಸೆ ಆಗಿತ್ತು. ಸದ್ಯದಲ್ಲೇ ಟ್ರೇಲರ್ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕ್ರೌರ್ಯ ಇನ್ನಷ್ಟು ಜಾಸ್ತಿ ಇರುವ ಸಾಧ್ಯತೆ ಇದೆ. ಚಿತ್ರದ ಅವಧಿ 3 ಗಂಟೆ 55 ನಿಮಿಷ ಇದೆ ಎಂಬುದನ್ನು ಚಿತ್ರತಂಡ ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ಅಷ್ಟು ದೀರ್ಘ ಅವಧಿ ಇರುವುದೇ ನಿಜವಾದರೆ ಮಧ್ಯಂತರದ ಬ್ರೇಕ್ ಸೇರಿ ಈ ಸಿನಿಮಾ ನೋಡಿ ಮುಗಿಸಲು 4 ಗಂಟೆಗೂ ಅಧಿಕ ಸಮಯ ಹಿಡಿಯಲಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

ಕೇವಲ ಹಿಂದಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿತ್ತು. ಆದರೆ ‘ಧುರಂಧರ್ 2’ ಸಿನಿಮಾ ಹಿಂದಿ ಜೊತೆಗೆ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಸಖತ್ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮನವಿ – Kannada News | Middle East situation matter of concern PM Modi calls for diplomacy to resolve conflict

ನವದೆಹಲಿ: ಇಸ್ರೇಲ್-ಇರಾನ್ ಯುದ್ಧದ ಉಲ್ಬಣಗೊಳ್ಳುತ್ತಿರುವ ನಡುವೆ, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಭಾರತ ಶಾಂತಿ ಮತ್ತು ಸ್ಥಿರತೆಗಾಗಿ ವಿನಂತಿಸುತ್ತಲೇ ಇದೆ ಎಂದು ಅವರು ಹೇಳಿದ್ದಾರೆ. ಇಂದು ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಒಮನ್​ನಲ್ಲಿ ಓರ್ವ ಭಾರತೀಯ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರ ಪರವಾಗಿ ಭಾರತ ಯಾವಾಗಲೂ ನಿಲುವು ತಳೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿಶ್ವಾದ್ಯಂತ ನಡೆಯುತ್ತಿರುವ ಅನೇಕ ಉದ್ವಿಗ್ನತೆಗಳ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ. ನಾವು ಯಾವಾಗಲೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕರೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ; ಇರಾನ್‌ ವಿರುದ್ಧ ಅಮೆರಿಕ ಮುಂತಾದ 7 ದೇಶಗಳ ಜಂಟಿ ಹೇಳಿಕೆ

ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯಿಂದ ತೊಂದರೆಗೊಳಗಾದ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಹಲವಾರು ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮೋದಿ ಹೇಳಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಮಯದಲ್ಲಿ, ಪ್ರಧಾನಿ ಮೋದಿ ಯುದ್ಧವನ್ನು ಬೇಗನೆ ಕೊನೆಗೊಳಿಸುವಂತೆ ಕರೆ ನೀಡಿದರು ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳಗಳನ್ನು ತಿಳಿಸಿದರು. ನಾಗರಿಕರ ಸುರಕ್ಷತೆಯು ಮೊದಲ ಆದ್ಯತೆಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೋಕ್ಸೋ ಕೇಸ್: ನಾಪತ್ತೆಯಾಗಿರುವ ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ – Kannada News | Koli kabbaliga community protest supporting mallikarjun mutya in kalaburagi for Take Back pocso Case

ಕಲಬುರಗಿ, (ಮಾರ್ಚ್ 02): ಅಪ್ರಾಪ್ತ ಬಾಲಕಿ ಜೊತೆ ಮಲ್ಲಿಕಾರ್ಜುನ ಮುತ್ಯಾ (mallikarjun mutya) ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೇ ಯಾದಗಿರಿಯ ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ನಾಪತ್ತೆಯಾಗಿರುವ ಮುತ್ಯಾ ಅಜ್ಞಾತ ಸ್ಥಳದಿಂದಲೇ ಪ್ರಕರಣ ರದ್ದು ಕೋರಿ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ ‘ಸುಳ್ಳು’ ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮಠದ ಭಕ್ತರ ಹಾಗೂ ಕೋಲಿ ಸಮುದಾಯದ ನೂರಾರು ಜನರು ಕಲಬುರಗಿಯಲ್ಲಿಂದು (kalaburagi) ಬೃಹತ್ ಪ್ರತಿಭಟನೆ ಮಾಡಿದ್ದಾರೆ.  ಮಲ್ಲಿಕಾರ್ಜುನ ಮುತ್ಯಾ ಭಾವಚಿತ್ರ ಹಿಡಿದು We stand with ಮಲ್ಲಿಕಾರ್ಜುನ ಮುತ್ಯಾ ಎಂದು ಘೋಷಣೆ ಕೂಗುತ್ತ ಮೆರಣಿಗೆ ಮಾಡಿ ಆಕ್ರೋಶ ಹೊರಹಾಕಿದರು.

ಇದನ್ನೂ ನೋಡಿ: ಪೋಕ್ಸೋ ಕೇಸ್​​:ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್

Source link

ಎಲ್ಲಿಗೆ ಬಂತು ಮೈಸೂರು ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ? ಉದ್ಘಾಟನೆ ಯಾವಾಗ? – Kannada News | Mysuru Kidwai Peripheral Cancer Center Nears Completion by Year End

ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಟ್ಟಡ

ಮೈಸೂರು, ಮಾರ್ಚ್​​ 02: ಇದುವರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಬೇಕಾಗಿದ್ದ ಮೈಸೂರು ಭಾಗದ ರೋಗಿಗಳಿಗೆ ಶೀಘ್ರವೇ ದೂರ ಪ್ರಯಾಣದ ತಲೆಬಿಸಿ ತಪ್ಪಲಿದ್ದು, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ರೇಡಿಯೇಷನ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ ಮತ್ತು ಸರ್ಜಿಕಲ್ ಆಂಕಾಲಜಿ ವಿಭಾಗಗಳು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಸೇವೆಯ ವಿಸ್ತರಣೆ ನಡೆಯಲಿದೆ.

ಇಂಡಿಯನ್​​ ಕೌನ್ಸಿಲ್​​ ಆಫ್​​ ಮೆಡಿಕಲ್​​ ರಿಸರ್ಚ್​​ ಹಾಗೂ ನ್ಯಾಷನಲ್​​ ಸೆಂಟರ್​​​ ಫಾರ್​​ ಡಿಸೀಸಸ್​​ ಇನ್​​ಪಾರ್​​ಮ್ಯಾಟಿಕ್ಸ್​​ ಆ್ಯಂಡ್​ ರಿಸರ್ಚ್​​ ವರದಿ ಪ್ರಕಾರ, ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 89,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಸುಮಾರು 2.5 ಲಕ್ಷ ಜನರು ಈ ಕಾಯಿಲೆಯೊಂದಿಗೆ ಬದುಕುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಸರ್ಕಾರ ನಡೆಸುತ್ತಿರುವ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿಯಾಗಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಇದೇ ಆಸ್ಪತ್ರೆಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದ ಚಿಕಿತ್ಸೆಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಒತ್ತಡ ಕಡಿಮೆ ಮಾಡಲು ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್​​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2023ರಲ್ಲಿ ಚಾಲನೆ ನೀಡಿದ್ದರು. ಪ್ರಾರಂಭದಲ್ಲಿ 100 ಹಾಸಿಗೆಗಳ ಸಾಮರ್ಥ್ಯದಿಂದ ಆಸ್ಪತ್ರೆ ಆರಂಭವಾಗಲಿದ್ದು, ಮುಂದಿನ ವರ್ಷಗಳಲ್ಲಿ ಸಾಮರ್ಥ್ಯ ಹೆಚ್ಚಳಕ್ಕೆ ಚಿಂತನೆ ಇದೆ. ಕೆಆರ್‌ಎಸ್ ರಸ್ತೆ ಸಮೀಪದ ಪಿಕೆಟಿಬಿ ಸ್ಯಾನಟೋರಿಯಂ ಹಿಂಭಾಗದ ಐದು ಏಕರೆ ಜಾಗದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ. ಸುಮಾರು 123 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈಗಾಗಲೇ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಆಸ್ಪತ್ರೆ ನಿರ್ಮಾನದಿಂದ ಮೈಸೂರು ಮಾತ್ರವಲ್ಲದೆ ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ.

2025ರ ಅಂಕಿಅಂಶಗಳ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 5,035 ಪುರುಷರು ಹಾಗೂ 6,839 ಮಹಿಳೆಯರು ಕ್ಯಾನ್ಸರ್‌ನೊಂದಿಗೆ ಬದುಕುತ್ತಿದ್ದಾರೆ. ಚಾಮರಾಜನಗರದಲ್ಲಿ 1,533 ಪುರುಷರು ಹಾಗೂ 2,108 ಮಹಿಳೆಯರು, ಹಾಸನದಲ್ಲಿ 2,589 ಪುರುಷರು ಹಾಗೂ 3,512 ಮಹಿಳೆಯರು, ಮಂಡ್ಯ ಜಿಲ್ಲೆಯಲ್ಲಿ 2,630 ಪುರುಷರು ಹಾಗೂ 3,528 ಮಹಿಳೆಯರು ಕ್ಯಾನ್ಸರ್ ಪೀಡಿತರಾಗಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಮನ್​ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿ; ಓರ್ವ ಭಾರತೀಯ ಸಾವು – Kannada News | Indian mariner killed after oil tanker attack in Oman coast

ನವದೆಹಲಿ, ಮಾರ್ಚ್ 2: ಒಮನ್ ಮೇಲೂ ಇರಾನ್ ದಾಳಿ (Iran Attack) ನಡೆಸಿದೆ. ಒಮನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ಹಡಗು ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಇರಾನ್- ಇಸ್ರೇಲ್ ನಡುವಿನ ಯುದ್ಧದಲ್ಲಿ ಮೊದಲ ಭಾರತೀಯನ ಸಾವಾಗಿದೆ. ಈ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಯಿತು. ಆದರೆ, ಈ ದುರಂತದಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಹಗೆತನವು ಹೆಚ್ಚುತ್ತಲೇ ಇದೆ.

ಅಧಿಕಾರಿಗಳ ಪ್ರಕಾರ, ಈ ಮಾನವರಹಿತ ಹಡಗು ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಮುಖ್ಯ ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾರೆ. ಈ ಹಡಗಿನಲ್ಲಿ 16 ಭಾರತೀಯರು, ನಾಲ್ವರು ಬಾಂಗ್ಲಾದೇಶಿಯರು ಮತ್ತು ಒಬ್ಬ ಉಕ್ರೇನಿಯನ್ ಸೇರಿದಂತೆ 21 ಸಿಬ್ಬಂದಿ ಇದ್ದರು. ಬದುಕುಳಿದ ಎಲ್ಲರನ್ನೂ ಪನಾಮ ಧ್ವಜದ ಅಡಿಯಲ್ಲಿ ಸಾಗುವ ವ್ಯಾಪಾರಿ ಹಡಗಿಗೆ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ; ಇರಾನ್‌ ವಿರುದ್ಧ ಅಮೆರಿಕ ಮುಂತಾದ 7 ದೇಶಗಳ ಜಂಟಿ ಹೇಳಿಕೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಹಾರ್ಮುಜ್ ಜಲಸಂಧಿಯನ್ನು ಸಾಗಿಸುವ ಸರಕು ಹಡಗುಗಳ ಮೇಲೆ ಇದು ಎರಡನೇ ದಾಳಿಯಾಗಿದೆ. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:29 pm, Mon, 2 March 26

Source link

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ದಾವಣಗೆರೆ ಕೆಂಪು ಮಣ್ಣಿ‌ನ ಕುಸ್ತಿ: ಬೆಣ್ಣೆನಗರಿಯಲ್ಲಿ ಮಿಂಚಿದ ವಿದೇಶಿ ಪೈಲ್ವಾನ್ಗಳು

Source link

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ? – Kannada News | India crude oil dependence on gulf, effect of price rise on import bill

ನವದೆಹಲಿ, ಮಾರ್ಚ್ 2: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ (crude oil prices) ಬಹಳಷ್ಟು ಏರುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ತೈಲ ಬ್ಯಾರಲ್​ಗೆ 80 ಡಾಲರ್ ಬೆಲೆ ದಾಟಿದೆ. ಬ್ಯಾರಲ್​ಗೆ 60 ಡಾಲರ್ ಆಸುಪಾಸಿನ ಬೆಲೆಯಲ್ಲಿ ತೈಲ ಖರೀದಿ ಮಾಡುತ್ತಿದ್ದ ಭಾರತಕ್ಕೆ ಈಗ ಬೆಲೆ ಏರಿಕೆಯ ಬಿಸಿ ಆರ್ಥಿಕವಾಗಿ ತಾಗಲಿದೆ. ಸದ್ಯ ತೈಲ ಬೆಲೆ ಹಲವು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.

ಕಚ್ಛಾ ತೈಲ ಬೆಲೆ ಏರಿಕೆಯಿಂದ ಭಾರತಕ್ಕೆ ಏನು ನಷ್ಟ?

ಭಾರತಕ್ಕೆ ಅಗತ್ಯವಾದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಇರಾನ್ ಹಾಗೂ ಕೊಲ್ಲಿ ರಾಷ್ಟ್ರಗಳದ್ದು ಸಿಂಹಪಾಲು. ಭಾರತದ ಒಟ್ಟಾರೆ ಆಮದಿನಲ್ಲಿ ತೈಲ ಮತ್ತು ಚಿನ್ನದ ಪಾಲು ಬಹಳ ಹೆಚ್ಚು. ಇದರಿಂದಾಗಿ ಭಾರತದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಅಧಿಕ ಮಟ್ಟದಲ್ಲಿ ಇದೆ. ಹೀಗಾಗಿ, ಆಮದು ಹೆಚ್ಚಿದಂತೆ ಭಾರತದ ಆಮದು ವೆಚ್ಚವೂ ಹೆಚ್ಚುತ್ತಾ ಹೋಗುತ್ತದೆ. ಸಿಎಡಿ ಅಥವಾ ಕರೆಂಟ್ ಅಕೌಂಟ್ ಡೆಫಿಸಿಟ್ ಕೂಡ ಹಿಗ್ಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆಯಲ್ಲಿ ಒಂದು ಡಾಲರ್ ಏರಿದರೆ ಭಾರತದ ವಾರ್ಷಿಕ ಆಮದು ವೆಚ್ಚ 2 ಬಿಲಿಯನ್ ಡಾಲರ್ ಹೆಚ್ಚುವರಿಯಾಗಿ ಹೊರೆ ಬೀಳುತ್ತದೆ. ಅಂದರೆ, ಸುಮಾರು 19,000 ಕೋಟಿ ರೂನಷ್ಟು ಹೆಚ್ಚುವರಿ ಹೊರೆಯನ್ನು ಭಾರತ ಹೊರಬೇಕಾಗುತ್ತದೆ.

ಪಶ್ಚಿಮ ಏಷ್ಯಾ ಮೇಲೆ ತೈಲಕ್ಕೆ ಅವಲಂಬನೆ

ಭಾರತ ತನಗೆ ಬೇಕಾದ ಶೇ. 50ಕ್ಕೂ ಹೆಚ್ಚು ತೈಲವನ್ನು ಇರಾನ್ ಹಾಗು ಕೊಲ್ಲಿ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತದೆ. ಶೇ. 35-50ರಷ್ಟು ತೈಲವು ಹಾರ್ಮುಜ್ ಜಲಸಂಧಿ ಮೂಲಕ ಬರಬೇಕು. ರಷ್ಯಾ, ಅಮೆರಿಕದಿಂದಲೂ ಭಾರತ ತೈಲ ಪೂರೈಕೆ ಪಡೆಯುವುದರಿಂದ ಕೊಲ್ಲಿ ಪ್ರದೇಶದ ಮೇಲೆ ಹೆಚ್ಚಿನ ಅವಲಂಬನೆ ಇಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೂ ಕೂಡ ಹಾರ್ಮುಜ್ ಹಾದಿಗೆ ತಡೆ ಬಿದ್ದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿ ಬೆಲೆ ಏರಿಕೆ ಮತ್ತಷ್ಟು ಆಗುತ್ತದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ರಷ್ಯಾ ಕೂಡ ತೈಲ ಬೆಲೆ ಹೆಚ್ಚಿಸಿದೆ. ಅಮೆರಿಕದ ತೈಲ ಬೆಲೆಯೂ ಏರಿಕೆ ಆಗಿದೆ. ಹೀಗಾಗಿ, ಭಾರತ ತೈಲ ಪಡೆಯಲು ಹೆಚ್ಚಿನ ಬೆಲೆ ತೆರುವುದು ಅನಿವಾರ್ಯವೇ. ಒಂದು ಅಂದಾಜು ಪ್ರಕಾರ 80 ಡಾಲರ್ ಆಸುಪಾಸು ಇರುವ ತೈಲ ಬೆಲೆ ಮುಂದಿನ ದಿನಗಳಲ್ಲಿ 100 ಡಾಲರ್ ದಾಟಿ 110 ಡಾಲರ್ ಸಮೀಪಕ್ಕೆ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಜೈ ಹಿಂದ್ ಜೈ ಸಿಂಧ್’ ಬಾಲಿವುಡ್ ಸಿನಿಮಾಗೆ ಇಂದ್ರಜಿತ್ ಲಂಕೇಶ್ ನಿರ್ದೇಶನ – Kannada News | Kannada director Indrajit Lankesh new Hindi movie Jai Hind Jai Sindh

‘ಐಶ್ವರ್ಯಾ’, ‘ಮೊನಾಲಿಸಾ’, ‘ಲಂಕೇಶ್ ಪತ್ರಿಕೆ’ ಮುಂತಾದ ಸಿನಿಮಾಗಳ ಅನುಭವಿ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರು ಈಗ ಹಿಂದಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಹೌದು, ಅವರೊಂದು ಬಾಲಿವುಡ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಜೈ ಹಿಂದ್ ಜೈ ಸಿಂಧ್’ (Jai Hind Jai Sindh) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಲಾಗಿದೆ. ಇಂದ್ರಜಿತ್ ಲಂಕೇಶ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಚಿತ್ರಕ್ಕೆ ಕೊನೆಯ ಹಂತದ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

ಡೆಹ್ರಾಡೂನ್​ನಲ್ಲಿ ‘ಜೈ ಹಿಂದ್ ಜೈ ಸಿಂಧ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಮೊದಲ ಸುದ್ದಿಗೋಷ್ಠಿ ಅದ್ದೂರಿಯಾಗಿ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಭಾಗಿಯಾಗಿದ್ದರು. ಸಿನಿಮಾದ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.

ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ಸ್ಯಾಮಿ ನನ್ವಾನಿ ಅವರು ‘ಜೈ ಹಿಂದ್ ಜೈ ಸಿಂಧ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದಾ, ಅಮಿತ್ ಬಹಲ್, ಉಪಾಸನಾ ಸಿಂಗ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಇಂದ್ರಜಿತ್ ಲಂಕೇಶ್ ಅವರು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಸದ್ಯದಲ್ಲೇ ಈ ಸಿನಿಮಾಗೆ ಚಿತ್ರೀಕರಣ ಮುಗಿಯಲಿದೆ. ಈ ವರ್ಷದ ಮಧ್ಯಭಾಗದ ಹೊತ್ತಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿದರು. ‘ಇದೊಂದು ಪ್ರೇಮಕಥೆಯಾಗಿದೆ. ದೇಶ ವಿಭಜನೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ

‘ದೇಶ ವಿಭಜನೆ ಆದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು? ಅದರಿಂದ ಹೊರಬಂದು ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ‘ನನ್ನ ಮೊದಲ ಸಿನಿಮಾದಿಂದ ಈವರೆಗೆ ಹಲವು ನಟ-ನಟಿಯರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಈಗ ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link