Category Archives: Blog

Your blog category

ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ – Kannada News | Gangavathi Court Orders Death Penalty Sentence for three men in Israel woman assault And US Tourist Murder Case

ಕೊಪ್ಪಳ, (ಫೆಬ್ರವರಿ 16): ಹಂಪಿ (Hampi) ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ವಿದೇಶಿ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ (Israel woman)ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು (Gangavathi Court), ಇದೇ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷಿ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಸಾಣಾಪೂರ ಬಳಿ ನಡೆದಿದ್ದ ಘೋರ ಕೃತ್ಯ

2025ರ ಮಾರ್ಚ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಿಯ ಸಾಣಾಪೂರ ಬಳಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಅಮಾನವೀಯವಾಗಿ ಅತ್ಯಾಚಾರವೆಸಗಿದ್ದರು. ಈ ಘಟನೆಯಲ್ಲಿ ವಿದೇಶಿ ಯುವಕನ ಕೊಲೆಯಾಗಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿದ್ದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮೂವರೂ ದೋಷಿಗಳು ಎಂದು ಆದೇಶಿಸಿತ್ತು.

Source link

ಬೈಕ್​ನಲ್ಲಿ ಸ್ಟಂಟ್ ಮಾಡಿದ ಪ್ರೇಮಿಯಿಂದ ಮಹಿಳೆಯ ಗುಪ್ತಾಂಗಕ್ಕೆ ಗಾಯ! – Kannada News | Mumbai Woman Injured In Private Parts After her boyfriends Dhoom Style bike Stunt Goes Wrong

ನವದೆಹಲಿ, ಫೆಬ್ರವರಿ 16: ಯುವಕ-ಯುವತಿಯರಿಬ್ಬರ ರಾತ್ರಿಯ ಔಟಿಂಗ್ ಸಂಕಷ್ಟ ತಂದೊಡ್ಡಿದೆ. ಬೈಕ್​ನಲ್ಲಿ ಬಾಯ್​​ಫ್ರೆಂಡ್ (Boyfriend) ಹಿಂದೆ ಕುಳಿತು ಹೋಗುವಾಗ ಸ್ವಲ್ಪ ಸಮಯದವರೆಗೆ ಇಬ್ಬರೂ ಎಂಜಾಯ್ ಮಾಡುತ್ತಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗೇ ಇತ್ತು. ಆಕೆ ಬಾಯ್​​ಫ್ರೆಂಡ್​​ನನ್ನು ಹಿಡಿದು ಕುಳಿತಿದ್ದಾಗ ಆತ ಆಕೆಗೆ ತನ್ನ ಸ್ಟಂಟ್ ತೋರಿಸಲು ಧೂಮ್ ಸಿನಿಮಾ ಸ್ಟೈಲ್​ನಲ್ಲಿ ವೀಲಿಂಗ್ ಮಾಡಿದ್ದಾನೆ. ಇದರ ಸುಳಿವಿಲ್ಲದ ಆಕೆ ಹಿಂದಿನ ಸೀಟಿನಿಂದ ಕೆಳಗೆ ಜಾರಿದಳು. ಆಗ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಜಾಗದಲ್ಲಿ ಆಕೆ ಸಿಲುಕಿಕೊಂಡಳು. ಇದರಿಂದ ಆಕೆಯ ಗುಪ್ತಾಂಗಕ್ಕೆ ಗಾಯವಾಗಿದೆ.

ಆ ಬೈಕ್ ಹಿಂದೆ ಹೋಗುತ್ತಿದ್ದ ಬೇರೆ ಸವಾರರು ಇವರ ಈ ಸಾಹಸವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ. ದಿಢೀರನೆ ಆತ ವೀಲಿಂಗ್ ಮಾಡಿದ್ದರಿಂದ ಆಕೆ ಬ್ಯಾಲೆನ್ಸ್ ತಪ್ಪಿದಳು. ಆಕೆಯ ಕಾಲುಗಳು ಮತ್ತು ಆಕೆಯ ದೇಹದ ಅರ್ಧದಷ್ಟು ಭಾಗವು ಚಕ್ರದ ನಡವಿನ ಜಾಗದಲ್ಲಿ ಸಿಲುಕಿಕೊಂಡಿದ್ದರಿಂದ, ಆಕೆಯ ಖಾಸಗಿ ಜಾಗಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜೈಪುರ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ

ಇದಾದ ನಂತರ ಆ ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ಆಕೆಯನ್ನು ಕಾಪಾಡಲು ಅವನು ತಕ್ಷಣ ತನ್ನ ಬೈಕನ್ನು ನಿಲ್ಲಿಸಿದನು. ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Viral: ಮನೆಯೊಳಗೆ ಸೂರ್ಯನ ಬೆಳಕು ಬೀಳುತ್ತೆ; ವಿಚಿತ್ರ ಕಾರಣ ಕೊಟ್ಟು 80,000 ರೂ ಬಾಡಿಗೆ ಕೇಳಿದ ಮನೆ ಮಾಲೀಕ – Kannada News | Bengaluru: Woman shocked after hearing strange reason from Bengaluru homeowner

ಬೆಂಗಳೂರು, ಫೆಬ್ರವರಿ 16: ಬೆಂಗಳೂರಿನಲ್ಲಿ (Bengaluru) ಕಡಿಮೆ ಬಾಡಿಗೆಯುಳ್ಳ ಮನೆ ಸಿಗುವುದೇ ಕಷ್ಟ. ಹೌದು, ಉದ್ಯೋಗ ಗಿಟ್ಟಿಸಿಕೊಂಡು ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ನೀವೇನಾದ್ರೂ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ರೆ ಮನೆ ಮಾಲೀಕರ ಡಿಮ್ಯಾಂಡ್ ನೋಡಿಯೇ ತಲೆ ಗ್ರಿರ್ ಎನ್ನುತ್ತೆ. ಇದೀಗ ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎನ್ನುವುದಕ್ಕೆ ಈ ಪೋಸ್ಟ್‌ಯೇ ಸಾಕ್ಷಿ. ಬೆಂಗಳೂರಿನಲ್ಲಿ ಬಾಡಿಗೆ ಮನೆ ನೋಡಲು ಹೋದ ಮಹಿಳೆಗೆ ಮನೆ ಮಾಲೀಕರು ನೈಸರ್ಗಿಕ ಬೆಳಕು ಮತ್ತು ಬಿಸಿಲು ಬರುತ್ತದೆ ಎನ್ನುವ ಕಾರಣ ನೀಡಿ 80,000 ರೂಪಾಯಿ ಬಾಡಿಗೆ ಎಂದು ಕೇಳಿದ್ದಾರೆ. ಮನೆ ಮಾಲೀಕರು ಹೇಳಿದ್ದನ್ನು ನೋಡಿ ಶಾಕ್ ಆದ ಮಹಿಳೆಯು ಪೋಸ್ಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನು (Anu) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ ಬೆಂಗಳೂರು ಬಾಡಿಗೆ ನನಗೆ ಅಚ್ಚರಿ ಮೂಡಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮೇಡಂ, ಮನೆಯೊಳಗೆ ಸೂರ್ಯನ ಬೆಳಕು ಬೀಳುತ್ತೆ ಹೀಗಾಗಿ ಅದರ ಬಾಡಿಗೆ 80,000 ರೂ ಅಂದರೆ ಏನರ್ಥ ಎಂದು ಪ್ರಶ್ನೆ ಮಾಡಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ತಿಂಗಳ ಸಂಬಳ 3 ಲಕ್ಷ ರೂ, ಖರ್ಚು ಆಗೋದು 2 ಲಕ್ಷಕ್ಕೂ ಹೆಚ್ಚು; ತನ್ನ ಖರ್ಚು ವೆಚ್ಚಗಳನ್ನು ವಿವರಿಸಿದ ಇಂಜಿನಿಯರ್

ಫೆಬ್ರವರಿ 13 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರಮುಖ ನಗರಗಳಲ್ಲಿಯೂ ಇದೇ ಪರಿಸ್ಥಿತಿ. ಬಾಡಿಗೆ ಹೆಚ್ಚಿಸಲು ಅವರು ಹೊಸ ನವೀನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲವರು ಇಲ್ಲಿ ಬಾಲ್ಕನಿ ಇದೆ, ಬಾಡಿಗೆ 1 ಲಕ್ಷ ಅಂತ ಹೇಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬಾಡಿಗೆಯಲ್ಲಿ ವಿಟಮಿನ್ ಡಿ ಕೂಡ ಸೇರಿದೆಯಂತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ವೆಡ್ಡಿಂಗ್ ಕಾರ್ಡ್ – Kannada News | Vijay Deverakonda and Rashmika Mandanna Wedding: Official Invite Leaked, Date Revealed!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿರುವುದು ಅಧಿಕೃತವಾಗಿದೆ. ಅತಿಥಿಗಳಿಗೆ ನೀಡಲಾದ ಅವರ ವಿವಾಹ ಕಾರ್ಡ್ ವೈರಲ್ ಆಗಿದೆ. ಅವರ ವಿವಾಹ ಫೆಬ್ರವರಿ 26ರಂದು ಅದ್ಧೂರಿಯಾಗಿ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ವಿಜಯ್ ದೇವೆಕೊಂಡ ಮತ್ತು ರಶ್ಮಿಕಾ ವಿವಾಹವಾಗಲಿದ್ದಾರೆ . ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ವಿಜಯ್ ದೇವೆಕೊಂಡ ಮತ್ತು ರಶ್ಮಿಕಾ ಮದುವೆಗೆ ಅತಿಥಿಗಳನ್ನು ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರವನ್ನು ವೈರಲ್ ಮಾಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ಅಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26ರಂದು ನಡೆಯಲಿದೆ ಎಂದು ಬರೆಯಲಾಗಿದೆ.

ಹೈದರಾಬಾದ್​ ಅಲ್ಲಿರುವ ವಿಜಯ್ ಅಭಿಮಾನಿಗಳಿಗೋಸ್ಕರ ವಿಶೇಷ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೌದು, ಮಾರ್ಚ್ 4ರಂದು ಹೈದರಾಬಾದ್​​ನ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್ ಹಾಕಿ ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ

ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ವಿಜಯ್ ಮತ್ತು ರಶ್ಮಿಕಾ ಈಗ ಮದುವೆಯಾಗುತ್ತಿದ್ದಾರೆ. ಅವರ ವಿವಾಹದ ಸುದ್ದಿ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿತ್ತು. ಇತ್ತೀಚೆಗೆ, ಅವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಬಂದಿರಲಿಲ್ಲ. ಈಗ ಅವರ ಆಮಂತ್ರಣ ಪತ್ರದಿಂದ ಎಲ್ಲವೂ ಅಧಿಕೃತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs PAK: ಟಿವಿ ಹೊಡೆದು ಹಾಕುವುದಕ್ಕೆ ಹೊಸ ಮಾರ್ಗ ಕಂಡುಕೊಂಡ ಪಾಕ್ ಫ್ಯಾನ್ಸ್ – Kannada News | T20 World Cup: India’s Unbeaten Run Continues, Pakistan Crushed; Fans’ Rage Explodes

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ, ಬದ್ಧವೈರಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ 61 ರನ್‌ಗಳಿಂದ ಸೋಲಿಸಿ ತನ್ನ ಅಜೇಯ ಓಟವನ್ನು ಮುಂದುವರೆಸಿತು. ಈ ಗೆಲುವಿನೊಂದಿಗೆ ಸೂಪರ್ 8 ಸುತ್ತಿಗೆ ಟಿಕೆಟ್ ಪಡೆದುಕೊಂಡಿತು. ಇತ್ತ ಈ ಪಂದ್ಯದಲ್ಲಾದರೂ ಭಾರತವನ್ನು ಸೋಲಿಸಿ ಅಭಿಮಾನಿಗಳ ಮನಸಲ್ಲಿ ಹೀರೋಗಳಾಗಬೇಕು ಎಂದುಕೊಂಡಿದ್ದ ಪಾಕ್ ಆಟಗಾರರು ಹೀನಾಯ ಸೋಲಿನೊಂದಿಗೆ ಮತ್ತೆ ಕಳನಾಯಕರಾಗಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಪಾಕ್ ಅಭಿಮಾನಿಗಳ ಅಸಹನೆಯ ಕಟ್ಟೆ ಒಡೆದಿದೆ. ಭಾರತದ ವಿರುದ್ಧ ಪಾಕಿಸ್ತಾನ ಸೋತಾಗಲೆಲ್ಲ ಅಭಿಮಾನಿಗಳು ತಮ್ಮ ಕೋಪವನ್ನು ಟಿವಿಗಳ ಮೇಲೆ ತೋರಿಸುವುದು ಹೊಸದೇನೆಲ್ಲ. ಪಾಕ್ ಅಭಿಮಾನಿಗಳ ಇಂತಹ ಕೃತ್ಯವನ್ನು ಬಹಳ ವರ್ಷಗಳಿಂದಲೇ ನೋಡುತ್ತಿದ್ದೇವೆ. ಇದೀಗ ಅಭಿಮಾನಿಗಳು ಟಿವಿಗಳನ್ನು ಹೊಡೆದು ಹಾಕುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅದೆನೆಂದರೆ ತಾವು ಧರಿಸಿದ್ದ ಶೂಗಳನ್ನು ಕಳಚಿ ಟಿವಿಗಳ ಮೇಲೆ ಎಸೆದು, ಶೂಗಳಿಂದ ಹಾಗೂ ಇಟ್ಟಿಗೆಗಳಿಂದ ಟಿವಿಯನ್ನು ಹೊಡೆದು ಹಾಕುವಷ್ಟರ ಮಟ್ಟಿಗೆ ಪಾಕ್ ಅಭಿಮಾನಿಗಳು ತಮ್ಮ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 175 ರನ್ ಕಲೆಹಾಕಿತು. ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕಲೆಹಾಕಿದ ಅತ್ಯಧಿಕ ಸ್ಕೋರ್ ಇದಾಗಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ನಿರೀಕ್ಷೆಯಂತೆ ಭಾರತದ ಮಾರಕ ದಾಳಿಗೆ ತತ್ತಿರಿಸಿ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೈವದ ಗಗ್ಗರ ಕಟ್ಟಲು ಕಾಲುಗಳೇ ಇಲ್ಲ: ದೈವ ನರ್ತಕನಿಗೆ ಆಸರೆಯಾದ 2.10 ಲಕ್ಷ ರೂ. ಕೃತಕ ಕಾಲು – Kannada News | Mangalore Rotary Gives Dhaiva Nartaka Babu a Second Chance: Prosthetic Leg Changes Life

ಮಂಗಳೂರು, ಫೆ.16: ತುಳುನಾಡಿನ ನಂಬಿಕೆಯ ಪ್ರಕಾರ, ದೈವಗಳು ದೇವರಿಗಿಂತ ಭಿನ್ನ. ದೇವರು “ಕಣ್ಣಿಗೆ ಕಾಣದ ಶಕ್ತಿ”ಯಾದರೆ, ದೈವಗಳು “ನೆಲದ ಮೇಲೆ ಸಂಚರಿಸುವ, ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿಗಳು”. ದೈವಗಳನ್ನು ‘ನಂಬಿದವರ ಕೈ ಬಿಡದ ಶಕ್ತಿಗಳು’ ಎಂದು ಕರೆಯಲಾಗುತ್ತದೆ. ದೈವಗಳ ನೇಮೋತ್ಸವದಂದು ಗಗ್ಗರ ಸೇವೆ ಮೊದಲು ನಡೆಯುತ್ತದೆ. ಈ ವೇಳೆ ದೈವ ನರ್ತಕರು ಕಾಲಿಗೆ ಗಗ್ಗರ ಕಟ್ಟುತ್ತಾರೆ. ಆದರೆ ಇಲ್ಲೊಬ್ಬ ನರ್ತಕರಿಗೆ ಅದನ್ನು ಕಟ್ಟಲು ಕಾಲುಗಳೇ ಇಲ್ಲ. ಕಾಸರಗೋಡು ತಾಲೂಕಿನ ಪೆರ್ಮುದೆ ಗ್ರಾಮದ ಹಿರಿಯ ದೈವ ನರ್ತಕ ಬಾಬು (53 ವರ್ಷ) ಅವರಿಗೆ ಮಂಗಳೂರು ಸೆಂಟ್ರಲ್ ರೋಟರಿ ಸಂಸ್ಥೆಯು ಮಾನವೀಯತೆಯ ನೆಲೆಯಲ್ಲಿ ಹೊಸ ಬದುಕು ನೀಡಿದೆ. ಬಾಬು ಅವರು ದೀರ್ಘಕಾಲದಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅತಿಯಾದ ಮಧುಮೇಹದಿಂದಾಗಿ ಅವರ ಎಡಗಾಲಿಗೆ ‘ಗ್ಯಾಂಗ್ರೀನ್’ ರೋಗ ತಗುಲಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವೈದ್ಯರು ಅವರ ಕಾಲನ್ನೇ ಕತ್ತರಿಸಬೇಕಾಯಿತು.

ಕಾಲು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದ ಬಾಬು ಅವರು ರೋಟರಿ ಮಾಜಿ ಜಿಲ್ಲಾ ಗವರ್ನರ್ ಮತ್ತು ಖ್ಯಾತ ವೈದ್ಯರಾದ ಡಾ. ದೇವದಾಸ್ ರೈ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದರು. ಬಾಬು ಅವರ ಕರುಣಾಜನಕ ಸ್ಥಿತಿಯನ್ನು ಮನಗಂಡ ಡಾ. ರೈ ಅವರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಸಮಾಜ ಸೇವಾ ಯೋಜನೆಯಡಿ ಸುಮಾರು 2.10 ಲಕ್ಷ ರೂಪಾಯಿ ಮೌಲ್ಯದ ಕೃತಕ ಕಾಲನ್ನು ಮಂಜೂರು ಮಾಡಿಸಿದರು.

ಇದನ್ನೂ ಓದಿ: ಭಾರತದ ಈ ರೈಲು ನಿಲ್ದಾಣಗಳಿಂದ ನೇರವಾಗಿ ಫಾರಿನ್​ಗೆ ಹೋಗಬಹುದು ಗೊತ್ತೇ!

ಇಲ್ಲಿದೆ ನೋಡಿ ಫೋಟೋ: 

ಇತ್ತೀಚೆಗೆ ಮಂಗಳೂರಿನ ಡಾ. ದೇವದಾಸ್ ರೈ ಅವರ ‘ಸೌರಭ್’ ಚಿಕಿತ್ಸಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಬು ಅವರಿಗೆ ಕೃತಕ ಕಾಲನ್ನು ಜೋಡಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾಜಿ ಅಧ್ಯಕ್ಷ ಸಂತೋಷ್ ಶೆಟ್ ಮತ್ತು ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು. ಈಗ ಬಾಬು ಅವರು ಯಾವುದೇ ಆಧಾರವಿಲ್ಲದೆ ಸುಸೂತ್ರವಾಗಿ ನಡೆದಾಡುತ್ತಿದ್ದು, ತಮಗೆ ಮರುಜೀವ ನೀಡಿದ ರೋಟರಿ ಸಂಸ್ಥೆಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್: ಸ್ಪಾ ನಡೆಸುತ್ತಿದ್ದವನನ್ನ ಹೊತ್ತೊಯ್ದು ಹಣಕ್ಕೆ ಡಿಮ್ಯಾಂಡ್ – Kannada News | Bengaluru: Man Kidnapped in Cinematic Style; 2 Lakh Demanded, Threatened with Murder

ಕಿಡ್ನ್ಯಾಪ್ ಆದ ವ್ಯಕ್ತಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆImage Credit source: tv9 kannada

ಆನೇಕಲ್​, ಫೆಬ್ರವರಿ 16: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪ ಥೇಟ್ ಸಿನಿಮಾ ಸ್ಟೈಲ್​​ನಲ್ಲಿ ಮೂವರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನ ಕಿಡ್ನ್ಯಾಪ್​​​ (Kidnapp) ಮಾಡಿರುವಂತಹ ಘ​​ಟನೆ ಮಾಡಿದೆ. ಬಿಹಾರ ಮೂಲದ ಅಶೀತ್ ಜ್ಹಾ(29) ಕಿಡ್ನ್ಯಾಪ್ ಆದ ವ್ಯಕ್ತಿ. ಎರಡು ಲಕ್ಷ ರೂ ಕೊಟ್ಟರೆ ಮಾತ್ರ ಅಶೀತ್​​​ನನ್ನು ಬಿಡುವುದಾಗಿ ಹೇಳಿರುವ ಅಪಹರಣಕಾರರು, ಒಂದು ವೇಳೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗ ಬೆದರಿಕೆ ಹಾಕಿದ್ದಾರೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬಿಹಾರ ಮೂಲದ ಅಶೀತ್ ಜ್ಹಾ, ತಿರುಪಾಳ್ಯದಲ್ಲಿ ವಾಸವಾಗಿದ್ದು, ಬೇಗೂರಿನ ಅಕ್ಷಯನಗರದಲ್ಲಿ ಸ್ಪಾ ನಡೆಸುತ್ತಿದ್ದರು. ಕಳೆದ ರಾತ್ರಿ ಮ್ಯಾನೇಜರ್ ಮನುಕುಮಾರ್ ಜೊತೆ ಬೈಕ್​​ನಲ್ಲಿ ಸ್ಪಾಯಿಂದ ಮನೆ ಕಡೆಗೆ ಹೊರಟಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಏಕಾಏಕಿ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾರೆ.

ಬೈಕ್​​ನಿಂದ ಕೆಳಗೆ ಬೀಳುತ್ತಿದ್ದಂತೆ ಲಾಂಗ್​​ನಿಂದ ಕಾಲಿಗೆ ಹಲ್ಲೆ ಮಾಡಿ ಅಶೀತ್​​ನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಣಕಾರರು ಸ್ಪಾ ಮಾಲೀಕ ಪ್ರಕಾಶ್ ಮಂಡಲ್​​ಗೆ ಫೋನ್​ ಮಾಡಿ ಎರಡು ಲಕ್ಷ ರೂ ಹಣ ಕೊಟ್ಟರೆ ಅಶೀತ್ ಬಿಡುವುದಾಗಿ ಹೇಳಿದ್ದಾರೆ. ಇಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಇನ್ನು ಕಿಡ್ನ್ಯಾಪ್​ ವೇಳೆ ದುಷ್ಕರ್ಮಿಗಳಿಂದ ಮನುಕುಮಾರ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಮನುಕುಮಾರ್​​​ನನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು 

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್​ ಮಾತನಾಡಿದ್ದು, ಬೈಕ್​ನಲ್ಲಿ ಅಶೀತ್ ಜ್ಹಾ, ಮನುಕುಮಾರ್ ಹೋಗುತ್ತಿದ್ದರು. ರಾತ್ರಿ 9.30 ಸುಮಾರಿಗೆ ಕಿಡ್ನ್ಯಾಪ್ ನಡೆದಿದೆ. ಕಾರಿನಲ್ಲಿ ಬಂದ ಮೂವರು ಈ ಕೃತ್ಯ ಎಸಗಿದ್ದಾರೆ. ಚಾಕು ಮತ್ತೆ ಲಾಂಗ್​ನಿಂದ ಬೆದರಿಸಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ಅಶೀತ್ ಜ್ಹಾ ಎಂಬಾತನನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಜೊತೆಯಲ್ಲಿದ್ದ ಮನುಕುಮಾರ್ ದೂರು ನೀಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ. ಎಸಿಪಿ ಸತೀಶ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನವೀನ್, ಪಿಎಸ್ಐ ದರ್ಶನ್ ಸೇರಿದಂತೆ ಮೂರು ತಂಡ ರಚನೆ ಮಾಡಲಾಗಿದ್ದು, ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ – Kannada News | Mahadevapura Road Accident: Two Year Old Child Dies, Locals Protest Against Poor Infrastructure

ಬೆಂಗಳೂರು, ಫೆಬ್ರವರಿ 16: ಮಹದೇವಪುರದ ಕಿತ್ತಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ತ್ರಿಶೂಲ್ ಸಾವನ್ನಪ್ಪಿದೆ. ರಸ್ತೆಯ ದುಸ್ಥಿತಿಯೇ ಮಗುವಿನ ಸಾವಿಗೆ ಕಾರಣವೆಂದು ಆರೋಪಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯವನ್ನು ಖಂಡಿಸಿ, ಗ್ರಾಮಸ್ಥರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಕಳೆದ ಐದಾರು ವರ್ಷಗಳಿಂದಲೂ ರಸ್ತೆಯ ಸ್ಥಿತಿ ಹೀಗೇ ಇದೆ. ಇದು ಈ ರಸ್ತೆಯಲ್ಲಿ ನಡೆದ ಐದನೇ ಸಾವು ಎಂದು ದೂರಿದ್ದಾರೆ. ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಪಿಡಿಒ ಭೇಟಿ ನೀಡದಿರುವುದು ಅವರ ಸಿಟ್ಟಿಗೆ ಮತ್ತಷ್ಟು ಕಾರಣವಾಗಿದೆ. ರಸ್ತೆ ಸರಿಪಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್ – Kannada News | AI Impact Summit, Ashwini Vaishnaw explains the agenda and message from India

ನವದೆಹಲಿ, ಫೆಬ್ರುವರಿ 16: ಎಐ ಇಂಪ್ಯಾಕ್ಟ್ ಸಮಿಟ್ 2026 (AI Impact Summit) ಇಂದಿನಿಂದ ಐದು ದಿನಗಳ ಕಾಲ ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿದೆ. ಇದು ನಾಲ್ಕನೇ ಆವೃತ್ತಿಯಾಗಿದ್ದು, ಭಾರತ ಆತಿಥ್ಯ ವಹಿಸಿರುವುದು ಇದು ಪ್ರಥಮ. ಬಹಳ ಗುರುತರವಾಗಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ ಹಾಗೂ ಭಾರತದ ಎಐ ದೃಷ್ಟಿಕೋನ ಇತ್ಯಾದಿ ವಿಚಾರದ ಬಗ್ಗೆ ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ಫಿನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಏನು ವಿಶೇಷತೆ?

ಭಾರತದಲ್ಲಿ ನಡೆಯುವ ಈ ವರ್ಷದ ಎಐ ಶೃಂಗಸಭೆಯು ಎಐ ಅನ್ನು ಒಂದು ಅಭಿವೃದ್ಧಿ ಸಾಧನವಾಗಿ ತೋರ್ಪಡಿಸುತ್ತದೆ. ಹೆಲ್ತ್​ಕೇರ್, ಕೃಷಿ, ಪಬ್ಲಿಕ್ ಸರ್ವಿಸ್, ಹಣಕಾಸು ಮತ್ತು ಉದ್ದಿಮೆಗಳ ಕ್ಷಮತೆ ಹೆಚ್ಚಿಸಲು ಎಐ ಅನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಅವಲೋಕಿಸಲಾಗುತ್ತೆ. ನಮ್ಮ ಜೀವನದ ಮೇಲೆ ಎಐನ ಪರಿಣಾಮ ಹೇಗಿರುತ್ತೆ ಎಂಬುದನ್ನೂ ಅವಲೋಕಿಸಲಾಗುತ್ತದೆ ಎಂದು ಡಾ. ಎ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಭಾರತದ ಎಐ ತಂತ್ರಗಾರಿಕೆ ಮತ್ತು ಗುರಿ ಏನು?

‘ಎಐ ಸೇವೆಗಳನ್ನು ಒದಗಿಸುವುದು ನಮ್ಮ ಗುರಿ. ಇಂಡಿಯಾ ಎಐ ಸ್ಟ್ಯಾಕ್​ನ ಎಲ್ಲಾ ಐದು ಲೇಯರ್​ಗಳಲ್ಲಿ ಸಂಯೋಜಿತವಾದ ಮತ್ತು ಪೂರಕವಾದ ನೀತಿ ಇದೆ. ಇಂಡಿಯಾ ಎಐ ಮಿಷನ್ ಮೂಲಕ ಒಂದು ಸಾಮಾನ್ಯ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ರಚಿಸುತ್ತಿದ್ದೇವೆ. ದೇಶೀಯವಾಗಿರುವ ಫೌಂಡೇಶನಲ್ ಎಐ ಮಾಡಲ್​ಗಳನ್ನು ಅಭಿವೃದ್ಧಿಡಿಸುತ್ತಿದ್ದೇವೆ. ಈ ಮಾಡಲ್​ಗಳು ಜಾಗತಿಕ ಗುಣಮಟ್ಟಗಳನ್ನು ತಲುಪುತ್ತಿವೆ. ಸರ್ವಮ್​ನಂತಹ ಮಾಡಲ್​ಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ವಿಮರ್ಶೆ ಸಿಗುತ್ತಿದೆ’ ಎಂದು ಕೇಂದ್ರ ಸಚಿವರು ಈ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ ದೂರಗಾಮಿ ಎಐ ಅಭಿವೃದ್ದಿಗಾಗಿ ಹಾರ್ಡ್​ವೇರ್ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಅನುಮೋದಿತವಾಗಿರುವ ಹತ್ತು ಸೆಮಿಕಂಡಕ್ಟರ್ ಘಟಕಗಳ ಪೈಕಿ ನಾಲ್ಕರಲ್ಲಿ ಪ್ರಾಯೋಗಿಕ ಉತ್ಪಾದನೆ ಶುರುವಾಗಿದೆ. ಈ ವರ್ಷ ಕಮರ್ಷಿಯಲ್ ಆಗಿ ಉತ್ಪಾದನೆ ಆರಂಭವಾಗುತ್ತದೆ. ಭಾರತೀಯ ಕಂಪನಿಗಳು 2ಎನ್​ಎಂ ಚಿಪ್​ಗಳ ಡಿಸೈನ್ ಮಾಡುತ್ತಿವೆ. 2035ರೊಳಗೆ ನಾವು ವಿಶ್ವದ ಅಗ್ರ 3-4 ಸೆಮಿಕಂಡಕ್ಟರ್ ರಾಷ್ಟ್ರಗಳ ಸಾಲಿಗೆ ಸೇರುವ ಹಾದಿಯಲ್ಲಿದ್ದೇವೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ

ಈ ಸಮಿಟ್ ಮೂಲಕ ಭಾರತದಿಂದ ವಿಶ್ವಕ್ಕೆ ಸಂದೇಶವೇನು?

ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಎಐ ಬಳಕೆಯಾಗಬೇಕು ಎಂಬುದು ಭಾರತದ ಭಾವನೆ. ಆರೋಗ್ಯಪಾಲನೆ ಉತ್ತಮಗೊಳಿಸಲು ಹೊಸ ಮಾರ್ಗ ಕಂಡುಕೊಳ್ಳುವುದು, ಎಐನ ತಪ್ಪು ಪರಿಣಾಮಗಳಿಂದ ಜಗತ್ತನ್ನು ರಕ್ಷಿಸುವುದು, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರೋಪಾಯ ಮಾಡುವುದು ಇಂತಹ ಕೆಲಸಗಳನ್ನು ಎಐನಿಂದ ಮಾಡಿಸುವುದು ಭಾರತದ ನಿಲುವು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ – Kannada News | Mani Shankar Aiyar Predicts Another Term for Pinarayi Vijayan in Kerala

ತಿರುವನಂತಪುರಂ, ಫೆಬ್ರವರಿ 16: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ ನುಡಿದಿದ್ದಾರೆ. ಇವರ ಹೇಳಿಕೆ ಕಾಂಗ್ರೆಸ್​​ನಲ್ಲೇ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ರಾಹುಲ್ ಗಾಂಧಿಗೆ ನಾನು ಕಾಂಗ್ರೆಸ್ ಸದಸ್ಯ ಎಂಬುದು ಮರೆತು ಹೋದಂತಿದೆ. ನಾನು ಗಾಂಧಿವಾದಿ ಹೌದು, ನೆಹರು, ರಾಜೀವ್ ಗಾಂಧಿ ಹಾದಿಯನ್ನು ಅನುಸರಿಸುತ್ತೇನೆ ಆದರೆ ರಾಹುಲ್ ಗಾಂಧಿಯನ್ನಲ್ಲ ಎಂದು ಹೇಳಿದ್ದು, ಕಾಂಗ್ರೆಸ್ ಒಳಗೆ ಈ ಹೇಳಿಕೆ ಸಂಚಲನ ಮೂಡಿಸಿದೆ.

ಮೇ 2026 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಅಡಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಅಯ್ಯರ್ ಅವರ ಹೇಳಿಕೆಗಳು ಪಕ್ಷದೊಳಗೆ ಕೋಲಾಹಲವನ್ನು ಹುಟ್ಟುಹಾಕಿದೆ.ಈ ಹೇಳಿಕೆಗಳು ಕಾಂಗ್ರೆಸ್‌ನ ಕೇರಳ ಚುನಾವಣಾ ಕಾರ್ಯತಂತ್ರಕ್ಕೆ ಹಾನಿ ಮಾಡಬಹುದು. ಅಯ್ಯರ್ ಅವರ ಹೊಗಳಿಕೆಯು ಎಲ್‌ಡಿಎಫ್‌ಗೆ ಪ್ರಯೋಜನವನ್ನು ನೀಡಬಹುದು.ಆದರೆ ಕಾಂಗ್ರೆಸ್‌ನ ಆಂತರಿಕ ಒಗ್ಗಟ್ಟು ಮತ್ತು ವಿರೋಧ ಪಕ್ಷದ ಇಮೇಜ್ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link