SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ

ದಾವಣಗೆರೆ, (ಫೆಬ್ರವರಿ 09): ಪರಿಶಿಷ್ಟ ಜಾತಿ(ಎಸ್​​ಟಿ) ಹಾಗೂ ಪರಿಶಿಷ್ಟ ಪಂಗಡ (ಎಸ್​​​ಸಿ) ಸಮುದಾಯದವರಿಗೆ ಈವರೆಗೆ ಭೂಮಿ ನೀಡಲಾಗುತ್ತಿತ್ತು. ಇದೀಗ ಸೈಟ್​​ ಸಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣೆ ಇಲಾಖೆಯಿಂದ ಎಸ್​​​ಸಿ ಎಸ್​​ಟಿ ಸಮುದಾಯವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ಸೈಟ್​​ ನೀಡಲು ಹಣ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30 40 ಸೈಟ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

EPFO: ಹೊಸ ಇಪಿಎಫ್​ಒ ಆ್ಯಪ್​ನಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾಗೆ ಅವಕಾಶ? – Kannada News | New EPFO mobile app to allow withdrawal of money through UPI

ನವದೆಹಲಿ, ಫೆಬ್ರುವರಿ 9: ಇಪಿಎಫ್ ಹಣವನ್ನು ಎಟಿಎಂನಲ್ಲಿ ವಿತ್​ಡ್ರಾ ಮಾಡುವುದು, ಯುಪಿಐ ಪ್ಲಾಟ್​ಫಾರ್ಮ್​ ಮೂಲಕ ಇಪಿಎಫ್ ಹಣ ವಿತ್ಡ್ರಾ (EPF money withdrawal) ಮಾಡುವುದು ಇವೇ ಮುಂತಾದ ಸೌಲಭ್ಯಗಳು ಇಪಿಎಫ್ ಸದಸ್ಯರಿಗೆ ಸಿಗುತ್ತವೆ ಎನ್ನುವ ಮಾತು ವರ್ಷದಿಂದಲೂ ಕೇಳಿಬರುತ್ತಿದೆ. ಇದೀಗ ಏಪ್ರಿಲ್ ತಿಂಗಳಲ್ಲಿ ಇಪಿಎಫ್​ನ ಹೊಸ ಆ್ಯಪ್​ವೊಂದು ಬಿಡುಗಡೆ ಆಗುತ್ತಿದ್ದು, ಅದರಲ್ಲಿ ಇಪಿಎಫ್ ಹಣವನ್ನು ನೇರವಾಗಿ ವಿತ್​ಡ್ರಾ ಮಾಡುವ ಅವಕಾಶ ಸಿಗಲಿದೆ.

ಏಪ್ರಿಲ್​ನಲ್ಲಿ ಅನಾವರಣಗೊಳ್ಳಲಿರುವ ಹೊಸ ಆ್ಯಪ್​ನಲ್ಲಿ ಯುಪಿಐ ಗೇಟ್​ವೇ ಬಳಸಿ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಮಾತ್ರವಲ್ಲ, ಪಾಸ್​ಬುಕ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ಹಲವು ಇಪಿಎಫ್ ಫೀಚರ್​ಗಳನ್ನು ಬಳಸಬಹುದು. ಸದ್ಯಕ್ಕೆ ಇಪಿಎಫ್ ಸದಸ್ಯರು ತಮ್ಮ ಪಾಸ್​ಬುಕ್ ಪರಿಶೀಲನೆ ಇತ್ಯಾದಿಗೆ ಉಮಂಗ್ ಆ್ಯಪ್ ಅಥವಾ ಯುಎಎನ್ ಪೋರ್ಟಲ್, ಇಪಿಎಫ್ ವೆಬ್​ಸೈಟ್ ಬಳಸಬೇಕು. ಈಗ ಇಪಿಎಫ್​ನದ್ದೇ ಡೆಡಿಕೇಟ್ ಆಗಿರುವ ಹೊಸ ಅಪ್ಲಿಕೇಶನ್ ಸಿದ್ಧವಾಗಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಯುಪಿಐನಲ್ಲಿ ಎಷ್ಟು ಇಪಿಎಫ್ ಹಣ ವಿತ್​ಡ್ರಾ ಸಾಧ್ಯ?

ಇಪಿಎಫ್ ವಿತ್​ಡ್ರಾಯಲ್ ನಿಯಮಗಳನ್ನು ಸರಳಗೊಳಿಸಲಾಗಬಹುದು. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವಾಲಯವು ಪ್ರಯತ್ನ ಮಾಡುತ್ತಿದೆ. ನಿರ್ದಿಷ್ಟ ಪ್ರಮಾಣದಷ್ಟು ಇಪಿಎಫ್ ಹಣವನ್ನು ಫ್ರೀಜ್ ಮಾಡಿ, ಉಳಿದವನ್ನು ವಿತ್​ಡ್ರಾ ಮಾಡಲು ಬಿಡುವ ಯೋಚನೆಯಲ್ಲಿದೆ ಸರ್ಕಾರ. ಅಂದರೆ, ಇಂತಿಷ್ಟು ಪ್ರತಿಶತದಷ್ಟು, ಉದಾಹರಣೆಗೆ ಶೇ. 20, ಅಥವಾ ಶೇ. 30 ಅಥವಾ ಶೇ. 40ರಷ್ಟು ಇಪಿಎಫ್ ಹಣವನ್ನು ಮಾತ್ರ ಫ್ರೀಜ್ ಮಾಡಿ ಉಳಿದವನ್ನು ಬಳಸಲು ಅವಕಾಶ ಕೊಡಲಾಗಬಹುದು.

ಇಪಿಎಫ್ ಆ್ಯಪ್​ನಿಂದ ಹಣವನ್ನು ಜೋಡಿತ ಬ್ಯಾಂಕ್ ಅಕೌಂಟ್​ಗೆ ವರ್ಗಾಯಿಸಲು ಯುಪಿಐ ಪ್ಲಾಟ್​ಫಾರ್ಮ್ ಬಳಸಲಾಗುತ್ತದೆ. ಇದರಿಂದ ಸುಲಭವಾಗಿ ಹಣ ವರ್ಗಾವಣೆ ಆಗುತ್ತದೆ. ಇಪಿಎಫ್​ಒ ಸಂಸ್ಥೆ ಈ ಹೊಸ ಆ್ಯಪ್​ನ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ.

ಈಗ ಇಪಿಎಫ್ ಹಣ ಹಿಂಪಡೆಯಲು ಏನಿದೆ ಪ್ರಕ್ರಿಯೆ?

ಈಗಿರುವ ಪ್ರಕ್ರಿಯೆ ಪ್ರಕಾರ ಇಪಿಎಫ್ ಖಾತೆದಾರರು ಹಣ ವಿತ್​ಡ್ರಾಯಲ್​ಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಇದು ಮ್ಯಾನುಯಲ್ ಆಗಿ ವೆರಿಫಿಕೇಶನ್ ಆಗಿ ಹಣವು ಬ್ಯಾಂಕ್ ಖಾತೆಗೆ ತರಲು ಹಲವು ವಾರಗಳೇ ಆಗುತ್ತವೆ.

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಇದೀಗ ಆಟೊಸೆಟಲ್ಮೆಂಟ್ ಮೋಡ್ ಎನ್ನುವ ಹೊಸ ಫೀಚರ್ ಅಳವಡಿಸಲಾಗುತ್ತಿದೆ. ಇಪಿಎಫ್ ಹಣ ವಿತ್​ಡ್ರಾ ಮಾಡಲು ಅರ್ಜಿ ಸಲ್ಲಿಸಿದ ಮೂರೇ ದಿನದೊಳಗೆ ಸೆಟಲ್ಮೆಂಟ್ ಆಗುತ್ತದೆ. ಈ ರೀತಿ ಆಟೊಸೆಟಲ್ಮೆಂಟ್ ಮೋಡ್​ನ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Teddy Day 2026: ಇದು ಬರೀ ಗಿಫ್ಟ್‌ ಅಲ್ಲ… ಪ್ರತಿ ಬಣ್ಣದ ಟೆಡ್ಡಿಬೇರ್‌ಗೂ ಒಂದು ಅರ್ಥ ಇದೆ – Kannada News | Teddy Day 2026: Each colored teddy bear given on Teddy Day has a meaning know about it

ಟೆಡ್ಡಿ ಬೇರ್‌ಗಳು (teddy bear) ಕೇವಲ ಮುದ್ದಾದ ಉಡುಗೊರೆಯಲ್ಲ, ಅವುಗಳನ್ನು ನೋಡುವುದು ಮತ್ತು ಅಪ್ಪಿಕೊಳ್ಳುವುದರಿಂದ ಸಕಾರಾತ್ಮಕ ಭಾವನೆ ಮೂಡುತ್ತದೆ. ಸಂಶೋಧನೆಯ ಪ್ರಕಾರ, ಟೆಡ್ಡಿ ಬೇರ್ ಅನ್ನು ಮುದ್ದಾಡುವುದರಿಂದ ದೇಹದಲ್ಲಿ ಆಕ್ಸಿಟೋಸಿನ್ (ಸಂತೋಷದ ಹಾರ್ಮೋನ್) ಬಿಡುಗಡೆಯಾಗುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಸಂತೋಷ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ವ್ಯಾಲೆಂಟೈನ್‌ ವೀಕ್‌ನ ಟೆಡ್ಡಿ ಡೇಯಂದು ಸಂಗಾತಿಗೆ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವ ಪ್ರವೃತ್ತಿ ಬೆಳೆದು ಬಂದಿದೆ. ಟೆಡ್ಡಿ ಡೇಯಂದು ಜನ ತಮ್ಮ ಸಂಗಾತಿಗೆ ಬೇರೆ ಬೇರೆ ಬಣ್ಣದ ಕ್ಯೂಟ್‌ ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ಗಿಫ್ಟ್‌ ಮಾಡ್ತಾರೆ. ಇದು ಕೇವಲ ಉಡುಗೊರೆಯಲ್ಲ, ಅದರ ಬಣ್ಣಗಳು ವಿಭಿನ್ನ ಭಾವನೆಗಳನ್ನು ಸಂಕೇತಿಸುತ್ತವೆ. ಹಾಗಿದ್ರೆ ಯಾವ ಬಣ್ಣದ ಟೆಡ್ಡಿ ಬೇರ್ ಏನರ್ಥವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ.

ಯಾವ ಬಣ್ಣದ ಟೆಡ್ಡಿ ಬೇರ್‌ ಏನರ್ಥವನ್ನು ಸೂಚಿಸುತ್ತದೆ?

ಕೆಂಪು ಬಣ್ಣದ ಟೆಡ್ಡಿಬೇರ್:  ಇದು ಪ್ರೀತಿ, ಉತ್ಸಾಹ ಮತ್ತು ಆಕರ್ಷಣೆಯನ್ನು ಸಂಕೇತಿಸುತ್ತದೆ. ದಂಪತಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚಾಗಿ ತಮ್ಮ ಸಂಗಾತಿಗೆ ಕೆಂಪು ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ.

ಹಳದಿ ಟೆಡ್ಡಿಬೇರ್:‌ ಇದು ಸ್ನೇಹವನ್ನು ಸಂಕೇತಿಸುತ್ತದೆ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಬಯಸಿದರೆ, ಹಳದಿ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ.

ಬ್ರೌನ್ ಟೆಡ್ಡಿಬೇರ್: ಇದು ಕಾಳಜಿ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ. ಯಾರಾದರೂ ನಿಮ್ಮ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಿದ್ದರೆ ಮತ್ತು ನಿಮ್ಮೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದರೆ, ಅವರಿಗೆ ಕಂದು ಬಣ್ಣದ ಟೆಡ್ಡಿ ನೀಡಬಹುದು.

ನೀಲಿ ಟೆಡ್ಡಿಬೇರ್:  ಇದು ನಿಜವಾದ ಪ್ರೀತಿ ಮತ್ತು ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಯಾರಾದರೂ ನಿಮಗೆ ನೀಲಿ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿದರೆ, ಅವರು ಯಾವಾಗಲೂ ನಿಮಗೆ ನಿಷ್ಠರಾಗಿರುತ್ತಾರೆ ಎಂದರ್ಥ.

ಪಿಂಕ್ ಟೆಡ್ಡಿಬೇರ್:‌ ಇದು ಪ್ರಣಯ ಭಾವನೆಗಳು ಮತ್ತು ವಾತ್ಸಲ್ಯವನ್ನು ಸಂಕೇತಿಸುತ್ತದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಬಯಸಿದರೆ, ನಿಮಗ ಪಿಂಕ್ ಟೆಡ್ಡಿ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ಭಾಗವಾಗಿದ್ದು ಹೇಗೆ? ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಬಿಳಿ ಟೆಡ್ಡಿಬೇರ್:  ಬಿಳಿ ಬಣ್ಣವು ಶುದ್ಧತೆ, ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಯಾರಿಗಾದರೂ ಬಿಳಿ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವುದು ಅವರ ಮೇಲಿನ ಶುದ್ಧ ಮತ್ತು ನಿಜವಾದ ಭಾವನೆಗಳನ್ನು ಸೂಚಿಸುತ್ತದೆ. ಪ್ರಾಮಾಣಿಕತೆ ಮತ್ತು ನಂಬಿಕೆಯ ಆಧಾರದ ಮೇಲೆ ಸಂಬಂಧಗಳಿಗೆ ಈ ಬಣ್ಣ ಸೂಕ್ತವಾಗಿದೆ.

ಕಿತ್ತಳೆ‌ ಬಣ್ಣದ ಟೆಡ್ಡಿಬೇರ್: ಕಿತ್ತಳೆ ಬಣ್ಣದ ಟೆಡ್ಡಿ ಬೇರ್‌ಗಳು ಸಂಬಂಧಗಳಲ್ಲಿ ಹೊಸ ಆರಂಭವನ್ನು ಸಂಕೇತಿಸುತ್ತವೆ, ಅಂದರೆ ಯಾರಾದರೂ ನಿಮಗೆ ಈ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಅವರು ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತಾರೆ ಎಂದರ್ಥ.

ನೇರಳೆ ಬಣ್ಣದ ಟೆಡ್ಡಿ ಬೇರ್: ನೇರಳೆ ಬಣ್ಣವು ಐಷಾರಾಮಿ ಮತ್ತು ನಿಗೂಢತೆಯನ್ನು ಸೂಚಿಸುತ್ತದೆ. ತಮ್ಮ ಪ್ರೀತಿಪಾತ್ರರಿಗೆ ಅವರು ತುಂಬಾ ವಿಶೇಷರು ಎಂದು ತಿಳಿಸಲು ಬಯಸುವವರಿಗೆ ಈ ಬಣ್ಣ ಸೂಕ್ತವಾಗಿದೆ. ಅಲ್ಲದೆ ಆಳವಾದ ಮತ್ತು ಸೀಕ್ರೆಟ್ ಸಂಬಂಧದಲ್ಲಿ ಇರುವವರಿಗೆ ನೇರಳೆ ಬಣ್ಣದ ಟೆಡ್ಡಿ ಬೇರ್‌ಗಳು ಉತ್ತಮವಾಗಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’ – Kannada News | Bengaluru’s Sakhi Auto: Empowering Women with Safe Transport and No Surge Pricing

ಬೆಂಗಳೂರು, ಫೆ. 9: ಪ್ರೇಮಿಗಳ ದಿನದಂದು ಮಹಿಳೆಯರಿಗೆ ಒಂದು ಗುಡ್​​​​ ನ್ಯೂಸ್​​ ಇದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅತ್ಯಂತ ವಿನೂತನವಾದ ‘ಸಖಿ ಆಟೋ’ (Sakhi Auto) ಸೇವೆ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಸೇವೆಯು ಇದೇ ಫೆಬ್ರವರಿ 14, 2026 ರಂದು (ಪ್ರೇಮಿಗಳ ದಿನದಂದು) ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ಇದು ಮಹಿಳಾ ಪ್ರಯಾಣಿಕರಿಗಾಗಿ, ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ ಇದು ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ 24 ಗಂಟೆಗಳ ಕಾಲ ವಿಸ್ತರಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.

ಇತರ ಆಪ್‌ಗಳಂತೆ ಮಳೆ ಅಥವಾ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನು (Trans women) ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಮೊದಲ 2 ಕಿಲೋಮೀಟರ್‌ಗಳಿಗೆ 50 ರೂ. ಇರುತ್ತದೆ. ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ ಇರುತ್ತದೆ. ಇದೀಗ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮಾಡುತ್ತಿದೆ. ಅಲ್ಲಿಯವರೆಗೆ ride.sakhiwomen.in ಹಾಗೂ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಈ ವಿನೂತನ ಆಲೋಚನೆಯ ಹಿಂದೆ 24 ವರ್ಷದ ಉದ್ಯಮಿ ಕೃಷ್ಣವಿ ಪರೇಖ್ ಅವರ ಶ್ರಮವಿದೆ. ಮುಂಬೈನಲ್ಲಿ ತಾವು ಅನುಭವಿಸಿದ ಅಸುರಕ್ಷಿತ ಪ್ರಯಾಣದ ಅನುಭವಗಳೇ ಈ ಸಂಸ್ಥೆಯನ್ನು ಆರಂಭಿಸಲು ಅವರಿಗೆ ಪ್ರೇರಣೆಯಾಗಿದೆ. ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಹಿಳೆಯರಿಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ: ಪತ್ನಿ ಪ್ರಗತಿ ಶೆಟ್ಟಿಗೆ ಹೊಗಳಿಕೆಯ ಸುರಿಮಳೆ

Source link

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್ – Kannada News | Nikhil Kumaraswamy Hits Back At BJP Leader Preetham Gowda about Alliance In Hassan

ಹಾಸನ, (ಫೆಬ್ರವರಿ 09): ಕರ್ನಾಟಕದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯಲ್ಲಿ ಪಕ್ಷದೊಳಗಿನ ಅಸಮಾಧಾನ ಸ್ಫೋಟವಾಗಿದೆ. ಹಾಸನದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಜೆಡಿಎಸ್​​ನೊಂದಿಗಿನ ಮೈತ್ರಿ ಬಗ್ಗೆ ಬಹಿರಂಗವಾಗಿಯೇ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇದೀಗ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪ್ರೀತಂಗೌಡಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮುಂದೆ ಕಸಗುಡಿಸುತ್ತಿದ್ದಾಕೆ ಮೇಲೆ ಬೆಳ್ಳಂ ಬೆಳಿಗ್ಗೆ ಸರಗಳ್ಳರ ದಾಳಿ: ಕುಸಿದು ಬಿದ್ದು ಮಹಿಳೆ ಸಾವು – Kannada News | Nelamangala Chain Snatching: Woman Dies After Attack in Huskoor Village

ನೆಲಮಂಗಲ, ಫೆಬ್ರವರಿ 09: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಈ ನಡುವೆ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳು ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ಓಲೆಯನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದಿದ್ದ ಜ್ಯೋತಿ ಕೈ ಮೇಲೆ ಮಾರ್ಕ್​​ ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಜ್ಯೋತಿ ಸಹೋದರಿ ನೀತು,  ಮನೆಯ ಬಾಗಿಲ ಬಳಿಯೇ  ಅಟ್ಯಾಕ್ ಮಾಡಿ ಕತ್ತಿನಲ್ಲಿದ್ದ ಚಿನ್ನ ಮತ್ತು ಓಲೆ ಎರಡನ್ನೂ ಕಿತ್ತುಕೊಂಡಿದ್ದಾರೆ. ಬಳಿಕ  ಮುಖಕ್ಕೆ ಸ್ಪ್ರೇ ಮಾಡಿ ಜೋರಾಗಿ ನೂಕಿದ್ದಾರೆ. ಈ ವೇಳೆ ಮನೆಯ ಮುಂದಿನ ಸಂಪ್ ಮುಚ್ಚಳಕ್ಕೆ ಜ್ಯೋತಿ ಅವರ ಮುಖ ತಾಗಿ ಗಾಯಗಳಾಗಿವೆ. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿರೋದಾಗಿ ತಿಳಿಸಿದ್ದಾರೆ.

ವರದಿ: ಮಂಜುನಾಥ್​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:25 pm, Mon, 9 February 26

Source link

ಗಂಟಲಿನ ಸೋಂಕಿನಿಂದ ಎನ್​ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು – Kannada News | NCP Leader Sharad Pawar admitted to hospital in Pune due to throat Problem

ಪುಣೆ, ಫೆಬ್ರವರಿ 9: ಎನ್​ಸಿಪಿ ನಾಯಕ ಶರದ್ ಪವಾರ್ (Sharad Pawar) ಗಂಟಲು ಸಂಬಂಧಿತ ಸಮಸ್ಯೆಗಳು, ಕೆಮ್ಮು ಮತ್ತು ಜ್ವರದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಅವರ ನಿವಾಸದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಬಾರಾಮತಿಯಲ್ಲಿದ್ದಾಗಲೇ ಅವರು ಅಸ್ವಸ್ಥರಾಗಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರೂ ಅವರ ಅನಾರೋಗ್ಯ ಮುಂದುವರಿದ ಕಾರಣದಿಂದ ಚಿಕಿತ್ಸೆಗಾಗಿ ಅವರನ್ನು ಪುಣೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದರು.

ಎನ್‌ಸಿಪಿ ನಾಯಕ ಶರದ್ ಪವಾರ್ ಗಂಟಲು ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಆಸ್ಪತ್ರೆಗೆ ಬಂದ ನಂತರ ವೈದ್ಯರ ತಂಡವು ಅವರನ್ನು ಪರಿಶೀಲಿಸುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಜಿತ್ ಪವಾರ್ ಸಾವಿನಲ್ಲಿ ಷಡ್ಯಂತ್ರವಿಲ್ಲ, ಅದೊಂದು ಅಪಘಾತ; ಶರದ್ ಪವಾರ್ ಮೊದಲ ಪ್ರತಿಕ್ರಿಯೆ

ಎನ್​ಸಿಪಿ ಸಂಸದೆ ಮತ್ತು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಅವರ ಅಳಿಯ ಸದಾನಂದ ಸುಳೆ ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರೊಂದಿಗೆ ಇದ್ದಾರೆ. ಎನ್​ಸಿಪಿ ನಾಯಕರು ಮತ್ತು ಬೆಂಬಲಿಗರು ಶರದ್ ಪವಾರ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮರಣದ ನಂತರವೂ ಶರದ್ ಪವಾರ್ ಜನರನ್ನು ಭೇಟಿ ಮಾಡುವುದನ್ನು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ವೈದ್ಯರು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿ, ಚಿಕಿತ್ಸೆಗೆ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ ಅವರ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:17 pm, Mon, 9 February 26

Source link

T20 World Cup: ಬದಲಿ ತಂಡವಾಗಿ ಬಂದು ಈ ಆವೃತ್ತಿಯ ಮೊದಲ ದ್ವಿಶತಕ ಬಾರಿಸಿದ ಸ್ಕಾಟ್ಲೆಂಡ್ – Kannada News | Unexpected Entry, Dominant Win: Scotland Crushes Italy with T20 World Cup 2026 Highest Total

2026 ರ ಟಿ20 ವಿಶ್ವಕಪ್​ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಟಲಿ (Scotland vs Italy) ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಈ ಉಭಯ ತಂಡಗಳ ಕಾಳಗದ ಮೇಲೆ ಅಷ್ಟು ನಿರೀಕ್ಷೆಗಳಿರಲಿಲ್ಲ. ಆದರೆ ಇಟಲಿಗೆ ಹೋಲಿಸಿಕೊಂಡರೆ ಕೊಂಚ ಬಲಿಷ್ಠವಾಗಿ ಕಾಣುತ್ತಿದ್ದ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸ್ಕಾಟ್ಲೆಂಡ್ 20 ಓವರ್​ಗಳಲ್ಲಿ ಬರೋಬ್ಬರಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಟಲಿ 134 ರನ್​ಗಳಿಗೆ ಆಲೌಟ್ ಆಗುವ ಮೂಲಕ 73 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಬದಲಿ ತಂಡವಾಗಿ ಬಂದ ಸ್ಕಾಟ್ಲೆಂಡ್

ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್​ಗೆ ಸ್ಕಾಟ್ಲೆಂಡ್ ತಂಡ ಅರ್ಹತೆ ಪಡೆದಿರಲಿಲ್ಲ. ಆದರೆ ಬಯಸದೆ ಬಂದ ಭಾಗ್ಯದಂತೆ ಬಾಂಗ್ಲಾದೇಶ ಟಿ20 ವಿಶ್ವಕಪ್​ನಿಂದ ತನ್ನ ಹೆಸರನ್ನು ಹಿಂಪಡೆದುದರಿಂದ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಇಟಲಿ ತಂಡವನ್ನು ಎದುರಿಸಿತು.

ಸ್ಕಾಟ್ಲೆಂಡ್​ಗೆ ಭರ್ಜರಿ ಆರಂಭ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸ್ಕಾಟ್ಲೆಂಡ್ ತಂಡಕ್ಕೆ ಉತ್ತಮ ಜೊತೆಯಾಟ ಸಿಕ್ಕಿತು. ಮೊದಲ ವಿಕೆಟ್​ಗೆ ತಂಡ 126 ರನ್​ಗಳ ಜೊತೆಯಾಟ ಕಂಡಿತು. ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 14 ಓವರ್​ಗಳ ಒಳಗೆ ತಂಡವನ್ನು 126 ರನ್​ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಮುನ್ಸೆ 54 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಔಟಾದರು. ಇದರೊಂದಿಗೆ ಇವರಿಬ್ಬರ ಜೊತೆಯಾಟವೂ ಮುರಿದುಬಿತ್ತು.

200 ರನ್ ದಾಟಿದ ಮೊದಲ ತಂಡ

ಆ ಬಳಿಕ ಜೋನ್ಸ್ ಜೊತೆಯಾದ ಬ್ರಾಂಡನ್ ಮೆಕ್‌ಮುಲ್ಲೆನ್ ಉತ್ತಮ ಜೊತೆಯಾಟ ಕಟ್ಟಿದರು. ಜೋನ್ಸ್ 37 ರನ್ ಬಾರಿಸಿ ಔಟಾದರೆ, ಮೆಕ್‌ಮುಲ್ಲೆನ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 41 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೈಕೆಲ್ ಲೀಸ್ಕ್ 22 ರನ್ ಬಾರಿಸಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. 200 ರನ್​ಗಳ ಗಡಿ ದಾಟುವುದರೊಂದಿಗೆ ಸ್ಕಾಟ್ಲೆಂಡ್ ತಂಡ ಈ ಆವೃತ್ತಿಯಲ್ಲಿ 200 ಕ್ಕೂ ಅಧಿಕ ರನ್​ ಕಲೆಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೆ 7 ಪಂದ್ಯಗಳು ನಡೆದಿದ್ದು, ಈ ಹಿಂದಿನ ಅತ್ಯಧಿಕ ಸ್ಕೋರ್ 184 ರನ್ ಆಗಿತ್ತು. ಅದು ನೇಪಾಳ ವಿರುದ್ಧ ಇಂಗ್ಲೆಂಡ್ ಕಲೆಹಾಕಿದ್ದ ಮೊತ್ತವಾಗಿತ್ತು.

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್

134 ರನ್​​ಗಳಿಗೆ ಇಟಲಿ ಆಲೌಟ್

ಇನ್ನು 207 ರನ್​ಗಳ ಗುರಿ ಬೆನ್ನಟ್ಟಿದ ಇಟಲಿ ತಂಡದ ಅನಾನುಭವ ಎದ್ದು ಕಾಣಿಸುತ್ತಿತ್ತು. ಮೊದಲ ಎಸೆತದಲ್ಲೇ ತಂಡದ ಮೊದಲ ವಿಕೆಟ್ ಪತನವಾಯಿತು. ತಂಡದ ಪರ ಅರ್ಧಶತಕ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದ ಬೆಂಜಮಿನ್ ಮಾನೆಂಟಿ 52 ರನ್​ ಬಾರಿಸಿದರೆ, ಹ್ಯಾರಿ ಮಾನೆಂಟಿ 37 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಇಟಲಿ 100 ರನ್​ಗಳ ಗಡಿ ದಾಟಿತು. ಅಂತಿಮವಾಗಿ 16.4 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಇಟಲಿ 134 ರನ್​ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ – Kannada News | Warren Buffett criticizes investing in the gold, despite its value soaring high

ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ವರ್ಷದ ಹಿಂದೆ ಚಿನ್ನ ಖರೀದಿಸಿದ್ದರೆ ಅದರ ಮೌಲ್ಯ 2-3 ಪಟ್ಟು ಹೆಚ್ಚಾಗುತ್ತಿತ್ತಲ್ಲ ಎಂದು ಯಾರಿಗಾದರೂ ಅನಿಸಿರುತ್ತದೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ, ವಿಶ್ವದ ಅಪ್ರತಿಮ ಹೂಡಿಕೆದಾರರೆನಿಸಿದ ಮತ್ತು ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರೆನಿಸಿದ ವಾರನ್ ಬಫೆಟ್ ಅವರು ಚಿನ್ನದಂತಹ ಲೋಹಗಳ ಮೇಲೆ ಹೂಡಿಕೆ ಮಾಡಲು ಇದೂವರೆಗೆ ಮನಸ್ಸನ್ನೇ ಮಾಡಿಲ್ಲ. ಅವರು ಹೂಡಿಕೆ ದೃಷ್ಟಿಯಲ್ಲಿ ಚಿನ್ನದಿಂದ ದೂರವೇ ಉಳಿದಿದ್ದಾರೆ.

ವಾರನ್ ಬಫೆಟ್ ಅವರು ಚಿನ್ನದ ಮೇಲೆ ಹೂಡಿಕೆ ಮಾಡಿಯೇ ಇಲ್ಲವೆಂದಲ್ಲ, ಆದರೆ ಅವರ ಪ್ರಮುಖ ಹೂಡಿಕೆ ಭಾಗದಲ್ಲಿ ಚಿನ್ನ ಯಾವತ್ತಿಗೂ ಇಲ್ಲ. ಬಹಳ ಬೇಡಿಕೆಯಲ್ಲಿರುವ ಚಿನ್ನದ ಬಗ್ಗೆ ವಾರನ್ ಬಫೆಟ್​ಗೆ ಯಾಕೆ ತಿರಸ್ಕಾರ? ಚಿನ್ನದ ಮೇಲೆ ಹೂಡಿಕೆ ಮಾಡುವುದು ವ್ಯರ್ಥ ಎಂದು ಅವರು ವಾದಿಸುವುದು ಯಾಕೆ? ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸಲು ನಾ ಮುಂದು, ತಾ ಮುಂದು ಎಂದು ಯತ್ನಿಸುತ್ತಿರುವಾಗ ವಾರನ್ ಬಫೆಟ್ ಯಾಕೆ ದೂರ ಉಳಿಯುತ್ತಿದ್ದಾರೆ?

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಚಿನ್ನ ಅನುತ್ಪಾದಕ ಆಸ್ತಿ, ಸೀಮಿತ ಬಳಕೆ

ವಾರನ್ ಬಫೆಟ್ ಪ್ರಕಾರ ಚಿನ್ನ ಅನುತ್ಪಾದಕ ಆಸ್ತಿ. ಇದರ ಪೂರೈಕೆ ಹೆಚ್ಚಾದರೆ ಅದಕ್ಕೆ ಸರಿದೂಗುವಷ್ಟು ಬಳಕೆ ಇಲ್ಲ ಎಂಬುದು ಇವರ ಅನಿಸಿಕೆ. ಚಿನ್ನ ಅನುತ್ಪಾದಕ ಆಸ್ತಿ ಹಾಗೂ ಹೆಚ್ಚು ಉಪಯುಕ್ತವಲ್ಲದ ಆಸ್ತಿ ಎನ್ನುವ ಎರಡು ಅಂಶಗಳು ಇವರು ಮುಂದಿಡುತ್ತಾರೆ. ಚಿನ್ನವನ್ನು ಆಭರಣಕ್ಕೆ ಬಳಸುವುದೇ ಹೆಚ್ಚು. ಎಲೆಕ್ಟ್ರಾನಿಕ್ಸ್ ಇತ್ಯಾದಿ ಔದ್ಯಮಿಕವಾಗಿ ಇದರ ಉಪಯೋಗ ಇರುವುದು ಬಹಳ ಕಡಿಮೆ. ಹೀಗಾಗಿ, ಇದನ್ನು ಅನುತ್ಪಾದಕ ವಸ್ತುವೆಂದು ಇವರು ಪರಿಗಣಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ಬ್ಯುಸಿನೆಸ್, ಫ್ಯಾಕ್ಟರಿಗಳು, ಅಥವಾ ಕೃಷಿ ಭೂಮಿಯೇ ಆದರೂ ಅವು ಉತ್ಪಾದಕತೆಯ ಗುಣ ಹೊಂದಿವೆ. ಇವುಗಳಿಂದ ಹೊಸ ಸರಕು ಮತ್ತು ಸೇವೆಗಳನ್ನು ಸೃಷ್ಟಿಸಬಹುದು. ಆದರೆ, ಚಿನ್ನದಿಂದ ಇದನ್ನು ಮಾಡಲಾಗುವುದಿಲ್ಲ ಎಂಬುದು ಇವರ ವಾದ.

ವಾರನ್ ಬಫೆಟ್ ಅವರು ಔದ್ಯಮಿಕ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲು ಪ್ರಾಶಸ್ತ್ಯ ನೀಡುತ್ತಾರೆ. ಈ ಷೇರುಗಳಿಂದ ಡಿವಿಡೆಂಡ್ ಇತ್ಯಾದಿ ಹೆಚ್ಚುವರಿ ಲಾಭಗಳು ದೊರಕುತ್ತವೆ. ಚಿನ್ನದಿಂದ ಏನೂ ಗೀಟುವುದಿಲ್ಲ ಎನ್ನುತ್ತಾರೆ.

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ಚಿನ್ನದ ಮೇಲಿನ ಹೂಡಿಕೆ ವ್ಯರ್ಥವಾ?

ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ 2-3 ಪಟ್ಟು ಹೆಚ್ಚಿರುವುದು ಹೌದು. ಈ ರೀತಿಯ ಉಬ್ಬರ ವೈಪರೀತ್ಯವು ಆಗೊಮ್ಮೆ ಈಗೊಮ್ಮೆ ಇರುತ್ತದೆ. ದೀರ್ಘಾವಧಿಯಲ್ಲಿ ಚಿನ್ನ ಇದೇ ಸ್ಥಿರತೆ ಹೊಂದಿಲ್ಲ ಎಂಬುದು ಹೌದು. ಎರಡು ದಶಕಕ್ಕಿಂತ ಹೆಚ್ಚು ದೀರ್ಘಾವಧಿಯಲ್ಲಿ ಚಿನ್ನ ಹಾಗೂ ಷೇರು ಹೂಡಿಕೆಯನ್ನು ತುಲನೆ ಮಾಡಿದರೆ ಷೇರು ಹೆಚ್ಚು ರಿಟರ್ನ್ ಕೊಟ್ಟಿರುವುದು ಗಮನಾರ್ಹ ಸಂಗತಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version