Japa: ವಿವಿಧ ಜಪಮಾಲೆಗಳ ಮಹತ್ವ; ಇಷ್ಟಾರ್ಥ ಸಿದ್ಧಿಗೆ ಯಾವ ಮಾಲೆಯಿಂದ ಜಪ ಮಾಡಬೇಕು ಗೊತ್ತಾ? – Kannada News
ವಿವಿಧ ಜಪಮಾಲೆಗಳ ಮಹತ್ವImage Credit source: Pinterest ಜಪ ಎಂದರೆ ಕೇವಲ ಮಂತ್ರ ಪಠಣವಲ್ಲ, ಅದು ಭಗವಂತನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ಒಂದು ಪ್ರಕ್ರಿಯೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ” ಎಂದು ಹೇಳಿದ್ದು, ಭಕ್ತಿಯಿಂದ ಅರ್ಪಿಸಿದ ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನೂ ಸಂತೋಷದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾನೆ. ಹಾಗೆಯೇ, ಜಪವು ನಮ್ಮ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿದೆ. ಪ್ರಾಚೀನ ಕೃತ, ತ್ರೇತಾ, ದ್ವಾಪರ…