Headlines

ಬಿಹಾರ, ಯುಪಿಗಿಂತ ಕರ್ನಾಟಕದಲ್ಲೇ ಹೆಚ್ಚು ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳು! – Kannada News | Karnataka Girls Dropout Rate Higher Than Bihar, UP: UDISE Report

ಬೆಂಗಳೂರು, ಜುಲೈ 28: ಪ್ರೌಢಶಾಲೆ (9 ಮತ್ತು 10ನೇ ತರಗತಿ) ಹಂತದಲ್ಲಿ ಶಾಲೆ ತೊರೆಯುವ (Dropout) ಹೆಣ್ಣುಮಕ್ಕಳ ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಲೋಕಸಭೆಯಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಯುಡೈಸ್ ಪ್ಲಸ್ (UDISE+) ವರದಿಯಿಂದ ತಿಳಿದುಬಂದಿದೆ. ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಡ್ರಾಪ್‌ಔಟ್ ದರ ಹೆಚ್ಚು 2025-26ರ ಇತ್ತೀಚಿನ ವರದಿಯ ಪ್ರಕಾರ,…

Read More

Chamarajeshwara Rathotsava: ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ – Kannada News | Chamarajeshwara Rathotsava 2026: Ashada Masas Unique Chariot Festival in Chamarajanagara

ಚಾಮರಾಜನಗರದ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಏಕೈಕ ಮತ್ತು ಅತ್ಯಂತ ವಿಶೇಷವಾದ ರಥೋತ್ಸವ ಇದಾಗಿದೆ. ಈ ರಥೋತ್ಸವದ ವಿಶೇಷತೆಯೆಂದರೆ ಆಷಾಢ ಮಾಸದಲ್ಲಿ ಬೇರೆ ಬೇರೆಯಾಗಿರುವ ನವ ದಂಪತಿಗಳನ್ನು ಒಂದಾಗಿಸುವ ವಿಶಿಷ್ಟ ಜಾತ್ರೆಯಾಗಿ ಇದು ಗುರುತಿಸಿಕೊಂಡಿದೆ. ಈ ರಥೋತ್ಸವದಲ್ಲಿ ನವ ದಂಪತಿಗಳು ಭಕ್ತಿಭಾವದಿಂದ ಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ದೃಢ ನಂಬಿಕೆಯಿದೆ. ಇದೇ ಕಾರಣದಿಂದ ರಾಜ್ಯದ ವಿವಿಧ ಭಾಗಗಳಿಂದ ನೂರಾರು ದಂಪತಿಗಳು ಇಲ್ಲಿಗೆ ಆಗಮಿಸಿ…

Read More

ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ನಿಧನ – Kannada News | Telugu Movie actress Pavala Shyamala passed away

ತೆಲುಗು ಸಿನಿಮಾಗಳಲ್ಲಿ (Telugu Cinema) ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಾವಲ ಶಾಮಲ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನೂ ಹಲವರು ಆರ್ಥಿಕ ಸಹಾಯ ಸಹ ಮಾಡಿದ್ದರು. ಆದರೆ ಕೊನೆಗೂ ಅವರು ಇಂದು (ಜುಲೈ 28) ಬೆಳಿಗ್ಗೆ ಹೈದರಾಬಾದ್​​ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ರಂಗಭೂಮಿಯಿಂದ ನಟನೆ ಶುರು ಮಾಡಿದ್ದ ಶಾಮಲ ಅವರಿಗೆ ‘ಪಾವಲ’…

Read More

Video: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ – Kannada News | A foreign woman who succumbed to the loving hospitality of Indians

ಅತಿಥಿ ದೇವೋಭವ ಎನ್ನುವುದು ನಮ್ಮ ದೇಶದ ಸಂಸ್ಕೃತಿ. ಅಪರಿಚಿತರನ್ನು ಇಲ್ಲಿ ನಾವು ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿ ಸತ್ಕರಿಸುತ್ತೇವೆ. ಇಲ್ಲೊಬ್ರು ವಿದೇಶಿ ಮಹಿಳೆ (foreign woman) ಭಾರತೀಯರ ಈ ಪ್ರೀತಿ ತುಂಬಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಭಾರತಕ್ಕೆ ಬಂದ ವಿದೇಶಿ ಮಹಿಳೆಯೊಬ್ಬರು ಅಸ್ಸಾಂನ (Assam) ಹಳ್ಳಿಯ ಜನರ ಒಳ್ಳೆಯ ಮನಸ್ಸಿಗೆ ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ  ಇಲ್ಲಿ ಅಪರಿಚಿತರಿಗೂ ಶುದ್ಧ ಪ್ರೀತಿ ಸಿಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. ನೆದರ್‌ಲ್ಯಾಂಡ್‌ನ ಮೈಕೆ (Meike) ಎಂಬ ಮಹಿಳೆ ತಮ್ಮ ಹೆಸರಿನ…

Read More

ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ‘ಹಳ್ಳಿ ಪವರ್ ರೀಲೋಡೆಡ್’ ಧಮಾಕಾ – Kannada News | Halli Power Reloaded to Premiere on Zee Kannada from August 8: City Girls Set for Rural Challenges

ಕಿರುತೆರೆ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಮತ್ತೊಂದು ಜಬರ್ದಸ್ತ್ ಮನರಂಜನೆಯ ಉಡುಗೊರೆ ನೀಡಲು ಸಜ್ಜಾಗಿದೆ. ಈ ಹಿಂದೆ ಭಾರಿ ಜನಪ್ರಿಯತೆ ಗಳಿಸಿದ್ದ ರಿಯಾಲಿಟಿ ಶೋ ‘ಹಳ್ಳಿ ಪವರ್’, ಈಗ ಮತ್ತಷ್ಟು ಮಜಾವಾಗಿ ‘ಹಳ್ಳಿ ಪವರ್ ರೀಲೋಡೆಡ್’ ಎಂಬ ಹೊಸ ರೂಪದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೇ ಆಗಸ್ಟ್ 8ರಿಂದ ಈ ಶೋ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಘೋಷಣೆ ಮಾಡಿದೆ. ಅಕುಲ್ ಬಾಲಾಜಿ ಶೋನ ನಡೆಸಿಕೊಡಲಿದ್ದಾರೆ. ಸಿಟಿ ಹುಡುಗಿಯರಿಗೆ ಹಳ್ಳಿ ಸವಾಲು…

Read More

ಜಮ್ಮು-ಕಾಶ್ಮೀರದಲ್ಲಿ ಬಸ್ ಅಪಘಾತ: 39 ಅಮರನಾಥ ಯಾತ್ರಿಕರಿಗೆ ಗಾಯ, ಪವಾಡದಂತೆ ಪಾರಾದ ಜನ – Kannada News | Amarnath Yatra Bus Mishap Leaves 39 Pilgrims Injured in Jammu and Kashmir

ಶ್ರೀನಗರ,ಜುಲೈ 28: ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ಪವಿತ್ರ ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಮನೆಗೆ ಉರುಳಿದ ಪರಿಣಾಮ 39 ಯಾತ್ರಿಕರು ಗಾಯಗೊಂಡಿದ್ದಾರೆ.ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ ಹತ್ತಿರದಲ್ಲೇ…

Read More

Vasthu Tips: ಮನೆಯಲ್ಲಿ ಮನಿ ಪ್ಲಾಂಟ್ ಒಂದಿದ್ದರೆ ಸಾಲದು; ಸಂಪತ್ತು ದ್ವಿಗುಣಗೊಳಿಸಲು ಈ ಗಿಡಗಳೂ ಬೇಕು! – Kannada News | Beyond Money Plant: 2 Must Have Vastu Plants for Wealth and Prosperity at Home

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮನಿ ಪ್ಲಾಂಟ್ (Money Plant) ಇರುವುದು ಸಾಮಾನ್ಯ. ಮನೆಗೆ ಸುಂದರ ರೂಪ ನೀಡುವ ಜೊತೆಗೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿ ಎಂಬ ನಂಬಿಕೆಯಿಂದ ಹೆಚ್ಚಿನವರು ಇದನ್ನು ಬೆಳೆಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೇವಲ ಮನಿ ಪ್ಲಾಂಟ್ ಒಂದಿದ್ದರೆ ಸಾಲದು. ಅದರ ಜೊತೆಗೆ ಕೆಲವು ವಿಶೇಷ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ, ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ವಾಸ್ತು ವಿದ್ವಾಂಸರ ಪ್ರಕಾರ, ಮನಿ ಪ್ಲಾಂಟ್ ಹೊರತುಪಡಿಸಿ ನಿಮ್ಮ ಮನೆಯಲ್ಲಿರಬೇಕಾದ ಅತ್ಯಂತ…

Read More

ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್‌ಗಳು ಪತ್ತೆ: ದೆಹಲಿ ಪೊಲೀಸರಿಂದ ಕಾರ್ಯಾಚರಣೆ – Kannada News | Delhi Police Identify Thousands With Criminal Backgrounds During NEET Protest Screening

ನವದೆಹಲಿ,ಜುಲೈ 28: ದೆಹಲಿಯ ಜಂತರ್​ ಮಂತರ್​ನಲ್ಲಿ ಜುಲೈ 20ರಿಂದ 25ರವರೆಗೆ ನೀಟ್(NEET)  ಪರೀಕ್ಷಾ ಅಕ್ರಮವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್​ಗಳು ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಪೊಲೀಸರು ಎಐ ಆಧಾರಿತ ಫೇಶಿಯಲ್ ರೆಕಗ್ನಿಷನ್ ಸಿಸ್ಟಂ ತಂತ್ರಜ್ಞಾನ ಬಳಸಿ 2,823 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಇವರಲ್ಲಿ 989 ವ್ಯಕ್ತಿಗಳು ಕೊಲೆ,ಅತ್ಯಾಚಾರ ಸೇರಿದಂತೆ ತೀವ್ರ ಸ್ವರೂಪದ ಗಂಭೀರ ಅಪರಾಧಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾದ ಅಪರಾಧಿಗಳ ಪೈಕಿ 101 ಜನರು…

Read More

‘ಟಾಕ್ಸಿಕ್ ನೋಡಿದವರು ವಾಟ್​ ದ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’; ಯಶ್ – Kannada News | Yash Opens Up on Toxic Promises a Roller Coaster Ride of Action and Emotion

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಯಶ್ ಅವರು ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಟಾಕ್ಸಿಕ್ ಟೀಸರ್​​ನ ಅದ್ಭುತ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದಾಗ, ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ‘ಟಾಕ್ಸಿಕ್ ಸಿನಿಮಾ ಪ್ರೇಕ್ಷಕರಿಗೆ ಒಂದು ರೋಲರ್ ಕೋಸ್ಟರ್ ರೈಡ್ ಇದ್ದಂತೆ ಇರಲಿದೆ. ಇದು ತುಂಬಾನೇ ವೈಲ್ಡ್ ಆಗಿದ್ದು, ಎಲ್ಲರ ಮನಸೂರೆಗೊಳ್ಳಲಿದೆ’ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಮೇಲ್ನೋಟಕ್ಕೆ ಇದು ಒಂದು ದೊಡ್ಡ ಮಟ್ಟದ ಆಕ್ಷನ್ ಸಿನಿಮಾದಂತೆ ಕಂಡರೂ, ಸಿನಿಮಾದ ಒಳಗೆ ಆಳವಾದ…

Read More

Charanasparsha: ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದೇಕೆ? ಚರಣಸ್ಪರ್ಶದ ಹಿಂದಿನ ರಹಸ್ಯ ಇಲ್ಲಿದೆ – Kannada News | What is the real logic behind touching the feet of elders?

ಭಾರತೀಯ ಸಂಸ್ಕೃತಿಯಲ್ಲಿ ಬಾಲ್ಯದಿಂದಲೂ ನಾವು ನೋಡಿಕೊಂಡು ಬಂದಿರುವ ಸುಂದರ ಸಂಪ್ರದಾಯ ಎಂದರೆ ‘ಹಿರಿಯರ ಪಾದಗಳಿಗೆ ನಮಸ್ಕರಿಸುವುದು’ (ಚರಣಸ್ಪರ್ಶ ಅಥವಾ ಪ್ರಣಾಮ). ಪರೀಕ್ಷೆಗೆ ಹೋಗುವ ಮುನ್ನ ಪೋಷಕರು ಮತ್ತು ಅಜ್ಜಿಯರ ಪಾದಗಳನ್ನು ಮುಟ್ಟುವುದು, ನವವಿವಾಹಿತರು ಹಿರಿಯರ ಆಶೀರ್ವಾದ ಪಡೆಯುವುದು ಅಥವಾ ಶುಭ ಸಮಾರಂಭಗಳಲ್ಲಿ ಕಾಲಿಗೆ ಎರಗುವುದು ನಮ್ಮಲ್ಲಿ ಪವಿತ್ರ ಆಚರಣೆಯಾಗಿದೆ. ಆದರೆ, “ನಾವು ಹಿರಿಯರ ಕಾಲುಗಳಿಗೆ ನಮಸ್ಕರಿಸುವುದೇಕೆ?” ಎಂಬ ಪ್ರಶ್ನೆ ಇಂದಿನ ಯುವ ಪೀಳಿಗೆಯಲ್ಲಿ ಉದ್ಭವಿಸುವುದು ಸಹಜ. ಈ ಪದ್ಧತಿಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ಆಧ್ಯಾತ್ಮಿಕ ಪರಿಕಲ್ಪನೆಗಳು,…

Read More