ಹೊಸ ಅವತಾರದಲ್ಲಿ ರುಕ್ಮಿಣಿ ವಸಂತ್; ಇಲ್ಲಿವೆ ಸುಂದರ ಫೋಟೋಗಳು – Kannada News | Rukmini Vasanth Looks Amazing In her New look and New photoshoot

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ. ಈ ಫೋಟೋಶೂಟ್​ ಅಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಡ್ರೆಸ್​​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ರುಕ್ಮಿಣಿ ಅವರು ಮತ್ತಷ್ಟು ಸುಂದರವಾಗಿ ಕಾಣಿಸಿದ್ದಾರೆ.

Source link

ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು! – Kannada News | Thieves Break Car Glass, Loot Rs.2.5 Lakh Meant for Treatment in Nelamangala

ನೆಲಮಂಗಲ, ಫೆಬ್ರುವರಿ 04: ಪತ್ನಿಯ ಚಿಕಿತ್ಸೆಗೆಂದು ಸಂಗ್ರಹಿಸಿದ್ದ ಸಾಲದ ಹಣವನ್ನೇ ಕಳ್ಳರು  ದೋಚಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ. ಚಿಕ್ಕಬಾಣವರ ನಿವಾಸಿ ಹೇಮಣ್ಣ ಎಂಬುವವರು ತಮ್ಮ ಪತ್ನಿ ಅನಸೂಯ ಅವರಿಗೆ ಅನಾರೋಗ್ಯ ಹಿನ್ನೆಲೆ ನಗರೂರು ಸಮೀಪದ ಬಿಜಿಎಸ್ ಆಸ್ಪತ್ರೆಗೆ ಆಯುರ್ವೇದ ಚಿಕಿತ್ಸೆಗಾಗಿ ತೆರಳಿದ್ದರು. ಚಿಕಿತ್ಸೆಗಾಗಿ ಹಾಗೂ ಮತ್ತೊಬ್ಬರಿಗೆ ಹಣ ನೀಡಬೇಕಿದ್ದ ಕಾರಣ ಹೇಮಣ್ಣ ಸುಮಾರು ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಕಾರಿನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Home Positivity: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗಲು ಈ 4 ಸರಳ ಮಾರ್ಗ ಅನುಸರಿಸಿ – Kannada News | Home Positivity: Women’s Role, Cleanliness and Rituals for Peace and Prosperity

ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಕಾರಾತ್ಮಕತೆ ನೆಲೆಸಲು ಕುಟುಂಬದ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾದರೂ, ಅದರಲ್ಲೂ ಮಹಿಳೆಯರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಮನೆಯ ಸ್ವಚ್ಛತೆ, ಪೂಜೆ-ಪಾಠ, ದಿನನಿತ್ಯದ ಸಣ್ಣ ಅಭ್ಯಾಸಗಳು – ಇವೆಲ್ಲವೂ ಮನೆಯ ವಾತಾವರಣವನ್ನು ರೂಪಿಸುತ್ತವೆ. ನಮ್ಮ ಹಿರಿಯರು ಹೇಳುವಂತೆ, ಲಕ್ಷ್ಮೀ ದೇವಿ ಯಾವಾಗಲೂ ಸ್ವಚ್ಛ, ಪ್ರಕಾಶಮಾನ ಮತ್ತು ಸಾತ್ವಿಕ ಶಕ್ತಿಯಿರುವ ಸ್ಥಳದಲ್ಲೇ ವಾಸಿಸುತ್ತಾಳೆ. ಆದ್ದರಿಂದ ಮನೆಗೆ ದೈವಿಕ ಶಕ್ತಿಯನ್ನು ಆಕರ್ಷಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಬಹಳ ಉಪಯುಕ್ತ.

ಮೊದಲನೆಯದಾಗಿ, ಸ್ವಚ್ಛತೆ ಅತ್ಯಂತ ಮುಖ್ಯ. ಅಸ್ತವ್ಯಸ್ತವಾಗಿರುವ ಮನೆ ಮನಸ್ಸಿನಲ್ಲಿಯೂ ಗೊಂದಲವನ್ನು ಉಂಟುಮಾಡುತ್ತದೆ. ಹಳೆಯ, ಹರಿದ ಬಟ್ಟೆಗಳು, ಬಳಕೆಯಾಗದ ವಸ್ತುಗಳು, ಹಳೆಯ ಕಾಗದಗಳು ಇತ್ಯಾದಿ ನಕಾರಾತ್ಮಕತೆಯನ್ನು ಸೆಳೆಯುತ್ತವೆ ಎಂದು ನಂಬಲಾಗಿದೆ. ಮನೆಯನ್ನು ಸ್ವಚ್ಛವಾಗಿ, ಗಾಳಿಯಾಡುವಂತೆ ಮತ್ತು ಬೆಳಕಿನಿಂದ ತುಂಬಿರುವಂತೆ ಇಟ್ಟರೆ ಅದು ಶಾಂತಿಯನ್ನು ಮತ್ತು ಹಿತಕರತೆಯನ್ನು ನೀಡುತ್ತದೆ. “ಸ್ವಚ್ಛತೆಯೇ ದೇವರು” ಎಂಬ ಮಾತಿನ ಅರ್ಥವೂ ಇದೇ.

ದೈನಂದಿನ ದೀಪ ಪೂಜೆ ಕೂಡ ಮನೆಯಲ್ಲಿ ಸಾತ್ವಿಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ವಿಧಾನವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಒಂದು ದೀಪ ಹಚ್ಚಿ, ಹೂವಿಟ್ಟು, ಧೂಪ ಹಚ್ಚುವುದರಿಂದ ಮನೆಯಲ್ಲಿ ಪವಿತ್ರತೆ ಮೂಡುತ್ತದೆ. ದೀಪದ ಬೆಳಕು ಕತ್ತಲನ್ನು ದೂರ ಮಾಡುವಂತೆ, ಮನಸ್ಸಿನಲ್ಲಿರುವ ಭಯ ಮತ್ತು ನಕಾರಾತ್ಮಕತೆಯನ್ನೂ ದೂರ ಮಾಡುತ್ತದೆ. ಹೆಚ್ಚು ಸಮಯವಿಲ್ಲದಿದ್ದರೂ ಈ ಸಣ್ಣ ಆಚರಣೆ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಅದೇ ರೀತಿ, ಮಂಗಳವಾರ, ಶುಕ್ರವಾರ ಅಥವಾ ಇತರ ಶುಭ ದಿನಗಳಲ್ಲಿ ವಿಶೇಷ ಪೂಜೆ, ಲಕ್ಷ್ಮೀ ಆರಾಧನೆ ಅಥವಾ ಇಷ್ಟದೇವರ ಪ್ರಾರ್ಥನೆ ಮಾಡುವುದು ಒಳ್ಳೆಯದು. ತಿಂಗಳಿಗೊಮ್ಮೆ ಭಜನೆ, ಶ್ಲೋಕ ಪಠಣ ಅಥವಾ ಆಧ್ಯಾತ್ಮಿಕ ಚರ್ಚೆಗಳನ್ನು ನಡೆಸಿದರೆ ಮನೆಯ ವಾತಾವರಣ ಇನ್ನಷ್ಟು ಪಾವನವಾಗುತ್ತದೆ. ಇಂತಹ ಸಣ್ಣ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಕುಟುಂಬದವರಲ್ಲಿ ಒಗ್ಗಟ್ಟು ಮತ್ತು ಸಂತೋಷವನ್ನು ಹೆಚ್ಚಿಸುತ್ತವೆ.

ಇವೆಲ್ಲಕ್ಕಿಂತ ಮುಖ್ಯವಾದದ್ದು ನಂಬಿಕೆ ಮತ್ತು ಭಕ್ತಿ. ದೇವರಲ್ಲಿ ದೃಢ ವಿಶ್ವಾಸ ಇಟ್ಟರೆ ಮನಸ್ಸಿಗೆ ಧೈರ್ಯ ಬರುತ್ತದೆ. ಪ್ರಾರ್ಥನೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಭಕ್ತಿಯಿಂದ ಮಾಡಿದ ಸಣ್ಣ ಪೂಜೆಯೂ ದೊಡ್ಡ ಫಲವನ್ನು ನೀಡುತ್ತದೆ ಎಂಬುದು ನಮ್ಮ ಸಂಸ್ಕೃತಿಯ ನಂಬಿಕೆ. ಈ ಸರಳ ಅಭ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ, ಮನೆಯಲ್ಲಿ ಸ್ವಾಭಾವಿಕವಾಗಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕತೆ ನೆಲೆಸುತ್ತದೆ. ಸಂತೋಷದಿಂದ ತುಂಬಿದ, ಶಾಂತಿಯುತ ಮನೆ ನಮ್ಮ ಬದುಕನ್ನೇ ಸುಂದರಗೊಳಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ – Kannada News | SS Rajamouli explains why he choose IMAX camera to Shoot Varanasi movie

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಭಾರತದಲ್ಲಿ ಮಾತ್ರವಲ್ಲ ವಿಶ್ವ ಸಿನಿಮಾ ರಂಗದಲ್ಲಿಯೇ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಶುರುವಾಗಲಿದೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ದಿನ ಮಾತನಾಡಿದ್ದ ರಾಜಮೌಳಿ, ಈ ಸಿನಿಮಾಕ್ಕಾಗಿ ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಾಗಿ ಹೇಳಿದ್ದರು. ಇದೀಗ ತಾವು, ಐಮ್ಯಾಕ್ಸ್ ಕ್ಯಾಮೆರಾಗಳನ್ನೇ ಬಳಸಿದ್ದು ಏಕೆಂದು ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಕ್ಕೆ ಕಾರಣ ನೀಡಿದ್ದಾರೆ. ಸಿನಿಮಾನಲ್ಲಿ ಅಂಟಾರ್ಟಿಕಾದ ಹಿಮ ಬೆಟ್ಟದ ದೃಶ್ಯಗಳು, ರಾಮಾಯಣದ ದೃಶ್ಯಗಳು ಇವೆಲ್ಲ ಇವೆ. ಆ ದೃಶ್ಯಗಳಲ್ಲಿ ಬಳಸಿರುವ ಬೆಟ್ಟಗಳು, ಬೆಂಕಿ, ಇನ್ನೂ ಹಲವು ವಸ್ತುಗಳು ಅಗಲವಾಗಿರುವ ಜೊತೆಗೆ ಬಹಳ ಉದ್ದವಾಗಿಯೂ ಇವೆ. ಹಾಗಾಗಿ ಅವುಗಳ ಬೃಹತ್ತತೆ, ವಿಶೇಷವಾಗಿ ಎತ್ತರವನ್ನು ಸರಿಯಾಗಿ ತೋರಿಸಲೆಂದು ತಾವು ಐಮ್ಯಾಕ್ಸ್ ಕ್ಯಾಮೆರಾ ಬಳಸಿದ್ದಾಗಿ ರಾಜಮೌಳಿ ಹೇಳಿದ್ದಾರೆ.

ನಾನು ಈ ಬಾರಿ ಕ್ಯಾಮೆರಾ ಕುರಿತಾಗಿ ಯಾವುದೇ ತಾಂತ್ರಿಕತೆಯಲ್ಲಿ ತೊಡಗಿಕೊಳ್ಳಲಿಲ್ಲ. ಎಲ್ಲವನ್ನೂ ನಮ್ಮ ಡಿಓಪಿ ನೋಡಿಕೊಂಡರು. ನಾನು ಅವರಿಗೆ ನನ್ನ ವಿಷನ್ ಅಷ್ಟನ್ನೇ ಹೇಳುತ್ತಿದ್ದೆ, ಇದು ನನ್ನ ಕಲ್ಪನೆ ಹೀಗೆ ದೃಶ್ಯ ಬರಬೇಕು ಎಂಬುದು ನನ್ನ ಉದ್ದೇಶ ಎಂದಷ್ಟೆ ಹೇಳುತ್ತಿದ್ದೆ. ನಮ್ಮ ಡಿಓಪಿ ಅದಕ್ಕೆ ತಕ್ಕಂತೆ ಎಲ್ಲವನ್ನೂ ಅರೇಂಜ್ ಮಾಡಿ ನನಗೆ ಔಟ್​​ಪುಟ್ ನೀಡುತ್ತಿದ್ದರು ಎಂದಿದ್ದಾರೆ ರಾಜಮೌಳಿ. ‘ವಾರಣಾಸಿ’ ಸಿನಿಮಾಕ್ಕೆ ಡಿಓಪಿ ಆಗಿ ಕೆಲಸ ಮಾಡಿರುವುದು ಪಿಎಸ್​​ ವಿನೋದ್.

ಇತರೆ ಸಿನಿಮಾಗಳನ್ನು ಸಿನಿಮಾಸ್ಕೋಪ್ ಅಥವಾ 70 ಎಂಎಂ ಕ್ಯಾಮೆರಾಗಳು ತೋರಿಸುವುದಕ್ಕಿಂತಲೂ 26% ಹೆಚ್ಚಿನ ದೃಶ್ಯಗಳನ್ನು ಐಮ್ಯಾಕ್ಸ್ ತೋರಿಸುತ್ತದೆ. ಜೊತೆಗೆ ಇತರೆ ಕ್ಯಾಮೆರಾಗಳಿಗಿಂತಲೂ ಹೆಚ್ಚು ಶಾರ್ಪ್ ಆದ ದೃಶ್ಯಗಳನ್ನು ಐಮ್ಯಾಕ್ಸ್ ಕ್ಯಾಮೆರಾ ಮತ್ತು ಪ್ರೊಜೆಕ್ಷನ್ ನೀಡುತ್ತದೆ. ಇದೇ ಕಾರಣಕ್ಕೆ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ಸಹ ತಮ್ಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿ ಚಿತ್ರೀಕರಿಸುತ್ತಾರೆ. ಅದೂ ಅಲ್ಲದೆ ಅವರು ಡಿಜಿಟಲ್ ಬದಲಿಗೆ ಐಮ್ಯಾಕ್ಸ್ ರೀಲ್​​ಗಳನ್ನು ಚಿತ್ರೀಕರಣಕ್ಕೆ ಬಳಸುತ್ತಾರೆ.

ಇದನ್ನೂ ಓದಿ:94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ

‘ವಾರಣಾಸಿ’ ಸಿನಿಮಾ ಭಾರತದ ಈ ವರೆಗೆ ಭಾರಿ ಬಜೆಟ್ ಸಿನಿಮಾ ಆಗಿದೆ. ಸಿನಿಮಾಕ್ಕಾಗಿ ಸುಮಾರು 1000 ದಿಂದ 1500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಸಿನಿಮಾವು ಭಾರತದ ಪೌರಾಣಿಕ ಕತೆಗಳ ಅಂಶಗಳನ್ನು ಒಳಗೊಂಡಿದೆ. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಇನ್ನೂ ಕೆಲವು ಜನಪ್ರಿಯ ವಿದೇಶಿ ನಟರು ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್ – Kannada News | The little girls went on stage to dance, do you know what happened next?

ಪುಟಾಣಿಗಳು (kids) ಏನು ಮಾಡಿದ್ರು ಅದಕ್ಕೂ ನೋಡೋಕೆ ಚಂದ. ಈ ಮಕ್ಕಳ ಆಟ ತುಂಟಾಟಗಳನ್ನು ಹೆತ್ತವರು ಕಣ್ತುಂಬಿಸಿಕೊಳ್ತಾರೆ. ಇಬ್ಬರೂ ಮುದ್ದಾದ ಪುಟಾಣಿಗಳು ಡ್ಯಾನ್ಸ್ (dance) ಮಾಡಲು ವೇದಿಕೆ ಹತ್ತಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಪುಟಾಣಿಯೊಂದು ಅಳಲು ಶುರು ಮಾಡಿದೆ. ಈ ಪುಟ್ಟ ಹುಡುಗಿಯ ಅಳಲು ಶುರು ಮಾಡಿದ್ದು, ವೇದಿಕೆಯಲ್ಲಿನ ಹೊಗೆ ನೋಡಿ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಲಾಕಾರ್ಸ್ (Kalakaars) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನರ್ಸರಿಯ ವಾರ್ಷಿಕೋತ್ಸವವಾಗಿದ್ದು, ಇಬ್ಬರೂ ಪುಟಾಣಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಡ್ಯಾನ್ಸ್ ಮಾಡಲು ವೇದಿಕೆ ಹತ್ತಿದ್ದಾರೆ. ಮಕ್ಕಳು ರೆಡಿಯಾಗುತ್ತಿದ್ದಂತೆ ಹಿಂದಿನಿಂದ ಟುಸ್​ ಎಂದು ಹೊಗೆ ಬಂದಿದೆ. ಇದರಿಂದ ಸ್ಟೇಜ್ ಮೇಲಿದ್ದ ಒಂದು ಪುಟಾಣಿ ಹೆದರಿ ಓಡಿ ಹೋಗಿದೆ. ಇತ್ತ ಇನ್ನೊಂದು ಪುಟಾಣಿ ಜೋರಾಗಿ ಅಳಲು ಪ್ರಾರಂಭಿಸಿದ್ದು, ಅಲ್ಲೇ ಇದ್ದ ಹೆತ್ತವರು ಬಂದು ಪುಟ್ಟ ಹುಡುಗಿಯನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನನ್ನ ಮಗಳು ಚಿಕ್ಕವಳಿದ್ದಾಗ ಹೀಗೆಯೇ ಮಾಡುತ್ತಿದ್ದಳು ಎಂದಿದ್ದಾರೆ. ಮತ್ತೊಬ್ಬರು, ಅಯ್ಯೋ ಎಷ್ಟು ಮುಗ್ಧತೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಕ್ಕಳಿಗೆ ಪ್ರಾಕ್ಟೀಸ್ ಮಾಡುವಾಗ ಈ ರೀತಿ ಹೊಗೆ ಬಿಡಿ, ಇಲ್ಲದಿದ್ದರೆ ಹೀಗೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತ-ಯುಎಸ್ ವ್ಯಾಪಾರ ಒಪ್ಪಂದ ಐತಿಹಾಸಿಕ, ರೈತರಿಗೆ ಯಾವುದೇ ಹಾನಿ ಇಲ್ಲ: ಪಿಯೂಷ್ ಗೋಯಲ್ – Kannada News | In Lok Sabha, Piyush Goyal Outlines India’s Stand in India US Trade Negotiations

ನವದೆಹಲಿ, ಫೆಬ್ರವರಿ 04: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್(Piyush Goyal) ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಈ ಒಪ್ಪಂದ ಐತಿಹಾಸಿಕವಾಗಿದ್ದು, ರೈತರಿಗೆ ಯಾವುದೇ ಹಾನಿಯಿಲ್ಲ, ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಸಂಸದರು ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆಯೂ ಮಾತನಾಡಿದ ಅವರು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದರು.

ಕೃಷಿ ಕ್ಷೇತ್ರದ ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ ಮತ್ತು ಅಮೆರಿಕದ ಮಾರುಕಟ್ಟೆಗೆ ಭಾರತದ ರಫ್ತು ಹೆಚ್ಚಾಗುತ್ತದೆ. ಕೃಷಿ ವಲಯವನ್ನು ರಕ್ಷಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ಹಲವಾರು ಕ್ಷೇತ್ರಗಳ ಕುರಿತು ಚರ್ಚೆಯ ನಂತರ ಒಮ್ಮತಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು. ಡೈರಿ ಕ್ಷೇತ್ರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಸಹ ರಕ್ಷಿಸಲಾಗಿದೆ ಮತ್ತು ಒಪ್ಪಂದವು ಎರಡೂ ಕಡೆಯವರಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಎರಡೂ ದೇಶಗಳು ಪ್ರಯೋಜನ ಪಡೆಯುತ್ತವೆ. ಭಾರತವು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ಕ್ಷೇತ್ರಗಳಲ್ಲಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ . ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದಿದ ಭಾರತ ಮತ್ತು ಸ್ವಾವಲಂಬಿ ಭಾರತ ಉಪಕ್ರಮಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.

ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಲು ಮತ್ತು ಫಲಕಗಳನ್ನು ಹಿಡಿದು ಪ್ರತಿಭಟಿಸಲು ಪ್ರಾರಂಭಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಗದಗದ ಪ್ರೀತಮ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಪ್ರೀತಮ್ ಮಾತನಾಡೋದನ್ನು ಕೇಳಿ ಅನುಶ್ರೀ ಅವರೇ ಸುಸ್ತಾಗಿ ಹೋಗಿದ್ದಾರೆ. ಪ್ರೀತಮ್ ಡ್ಯಾನ್ಸ್ ಅದ್ಭುತವಾಗಿತ್ತು. ಮಾತು ಕೂಡ ತುಂಬಾನೇ ಚೂಟಿ ಆಗಿತ್ತು. ಆ ವಿಡಿಯೋ ಮೇಲೆ ವೀಕ್ಷಣೆಗೆ ಲಭ್ಯವಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬ್ಯಾಟಲ್ ರೌಂಡ್ ಈ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್! – Kannada News | Education Department’s new plan to improve SSLC students’ results; TV mobile off until the exam is over!

ಬೆಂಗಳೂರು, ಫೆಬ್ರುವರಿ 04: ಎಸ್ಎಸ್ಎಲ್ಸಿ  (SSLC) ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸುಧಾರಿಸಲು ಮಹತ್ವದ ಉಪಕ್ರಮ ಕೈಗೊಂಡಿದೆ. ಇದಕ್ಕಾಗಿ ಮನೆಗೆ ತೆರಳಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನದಡಿ, ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಮುಂಬರುವ ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಉತ್ತಮವಾಗಿ ಸಿದ್ಧರಾಗಲು, ಪ್ರತಿ ಮನೆಯಲ್ಲಿ ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಮೊಬೈಲ್ ಮತ್ತು ಟಿವಿಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಈ ಅವಧಿಯಲ್ಲಿ ಮಕ್ಕಳು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲು ಪ್ರೇರೇಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಲು ಇದು ಸಹಾಯಕವಾಗಲಿದೆ ಎಂದು ಇಲಾಖೆ ತಿಳಿಸಿದೆ. ಸರ್ಕಾರದ ಈ ಆದೇಶವನ್ನು ಕೆಲವು ವಿದ್ಯಾರ್ಥಿಗಳು ಸ್ವಾಗತಿಸಿದ್ದು, ಇದು ಓದಿಗೆ ಸಹಾಯಕವಾಗಲಿದೆ ಎಂದಿದ್ದಾರೆ. ಆದರೆ, ಪೋಷಕರು ಈ ನಿಯಮವನ್ನು ಎಷ್ಟು ಪಾಲಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Video:ಸುಪ್ರೀಂನಲ್ಲಿ ಎಸ್​ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ – Kannada News | Mamata Banerjee Appears in Supreme Court Over Challenge to Bengal Electoral Roll SIR

ನವದೆಹಲಿ, ಫೆಬ್ರವರಿ 04: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್​​ನಲ್ಲಿ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದು ವಾದ ಮಂಡಿಸಲು ಕೋರ್ಟ್​​ಗೆ ತೆರಳಿರುವ ವಿಡಿಯೋ ವೈರಲ್ ಆಗಿದೆ. ಬಿಳಿ ಸೀರೆ ಜತೆ ಕಪ್ಪು ದುಪಟ್ಟಾ ಧರಿಸಿ ಅವರು ಕೋರ್ಟ್​ಗೆ ತೆರಳಿದ್ದರು.

ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ.ಮಮತಾ ಬ್ಯಾನರ್ಜಿ, ಮೋಸ್ತಾರಿ ಬಾನೋ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒ’ಬ್ರೇನ್ ಮತ್ತು ಡೋಲಾ ಸೇನ್ ಅವರು ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್ – Kannada News | Bengaluru Job Crisis 2025: Tech Layoffs and Their Impact on Young Professionals’ Careers

ಬೆಂಗಳೂರು, ಫೆ.4: ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ ಬಗ್ಗೆ ದಿನದಿಂದ ದಿನಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಬೆಂಗಳೂರಿನ ಟೆಕ್ ಉದ್ಯಮದಲ್ಲಿ 2025ರ ಕೊನೆಯ ಅವಧಿಯಲ್ಲಿ ಉಂಟಾದ ಉದ್ಯೋಗ ಕಡಿತ (Layoffs) ಮತ್ತು ಯುವ ವೃತ್ತಿಪರರ ಮಾನಸಿಕ ಸಂಘರ್ಷದ ಬಗ್ಗೆ ಬೆಂಗಳೂರಿನ ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಒಂದು ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 25 ಎಂದರೆ ಎಲ್ಲೆಡೆ ಸಂಭ್ರಮ, ರಜೆಯ ಮೋಜು. ಆದರೆ ಬೆಂಗಳೂರಿನ ಸಾವಿರಾರು ಯುವ ಟೆಕ್ಕಿಗಳಿಗೆ 2025ರ ಕ್ರಿಸ್‌ಮಸ್ ತಂದದ್ದು ಕೇವಲ ಆತಂಕ ಮತ್ತು ಅನಿಶ್ಚಿತತೆ. ಕೆಲಸ ಕಳೆದುಕೊಂಡ ನೋವು ಮತ್ತು ಭವಿಷ್ಯದ ಭಯ ಅವರ ಹಬ್ಬದ ಖುಷಿಯನ್ನು ನುಂಗಿ ಹಾಕಿತ್ತು.

26 ವರ್ಷದ ಯುವ ಡೇಟಾ ಇಂಜಿನಿಯರ್ ಒಬ್ಬರು ರೆಡ್ಡಿಟ್​​​ನಲ್ಲಿ (Reddit) ಹಂಚಿಕೊಂಡ ಕಥೆ ಇಡೀ ಉದ್ಯಮದ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರನ್ನು ಡಿಸೆಂಬರ್ 15 ರಂದು ಹಠಾತ್ತನೆ ಕೆಲಸದಿಂದ ತೆಗೆದುಹಾಕಲಾಯಿತು. ಲೇಆಫ್ ಆದ ಮೇಲೆ ದಿನಕ್ಕೆ 5-6 ಗಂಟೆ ಹೊಸ ಸ್ಕಿಲ್ ಕಲಿಯುವುದು, 3-4 ಗಂಟೆ ಕೆಲಸ ಹುಡುಕುವುದು ನನ್ನ ದಿನಚರಿಯಾಯಿತು. ಕೊನೆಗೂ ಅಮೆಜಾನ್‌ನಂತಹ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ, ಇದರಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 10 ದಿನಗಳು ಕಳೆದರೂ ಒಂದೇ ಒಂದು ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಯಾಕೆಂದರೆ ಮತ್ತೆ ಕೆಲಸ ಕಳೆದುಕೊಂಡರೆ ಎಂಬ ಭಯ.

ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ

ಇಲ್ಲಿದೆ ನೋಡಿ ಪೋಸ್ಟ್​:

Tech Layoffs

ಡಿಸೆಂಬರ್ 10 ರವರೆಗೆ 257 ಟೆಕ್ ಕಂಪನಿಗಳಿಂದ ಸುಮಾರು 1,22,549 ಉದ್ಯೋಗಿಗಳನ್ನು ಹೊರಹಾಕಲಾಗಿದೆ.ಜನವರಿ ತಿಂಗಳೊಂದರಲ್ಲೇ 27 ಕಂಪನಿಗಳಿಂದ 24,818 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಜನ ಹಲವು ರೀತಿಯಲ್ಲಿ ಸಲಹೆ ನೀಡಿದ್ದಾರೆ. ಒಬ್ಬ ರೆಡಿಟ್​​​ ನೆಟ್ಟಿಗರೊಬ್ಬರು 776 ಕಂಪನಿಗಳಿಗೆ ಅರ್ಜಿ ಹಾಕಿ, 100 ದಿನಗಳ ಸತತ ಪ್ರಯತ್ನದ ನಂತರ ಕೆಲಸ ಪಡೆದಿದ್ದೇನೆ ಎಂದು ಹೇಳಿದ್ದಾರೆ. ನೀವು ಜಿಮ್, ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹಬ್ಬಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version