Headlines

ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು, ಏಪ್ರಿಲ್​​ 09: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (Biometric) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (IATA) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ…

Read More

ಕೆಲ ಮನೆಗಳಲ್ಲಿ ನೀರು ತುಂಬಿದ ಲೋಟದೊಳಗೆ ನಿಂಬೆಹಣ್ಣು ಇಟ್ಟಿರುವುದನ್ನು ನೋಡಿದ್ದೀರಾ? ಅದರ ಅದ್ಭುತ ಲಾಭಗಳೇನು ಗೊತ್ತಾ?

ನಮ್ಮ ಸುತ್ತಮುತ್ತಲಿನ ವಾತಾವರಣವು ಮನಸ್ಸು ಮತ್ತು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇದ್ದರೆ ಮಾತ್ರ ನೆಮ್ಮದಿ ನೆಲೆಸಲು ಸಾಧ್ಯ. ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ನಿಂಬೆಹಣ್ಣು ಕೇವಲ ಆಹಾರ ಪದಾರ್ಥವಲ್ಲ, ಅದು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿದೆ. ನೀವು ಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳಿಂದ ಬೇಸತ್ತಿದ್ದರೆ, ಈ ಕೆಳಗಿನ ಸರಳ ಹಾಗೂ ಪ್ರಭಾವಶಾಲಿ ವಾಸ್ತು ಸಲಹೆಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಈ ಪರಿಹಾರವನ್ನು ಮಾಡುವುದು ಹೇಗೆ? ಒಂದು ಶುದ್ಧವಾದ…

Read More

ಮುಖಾಮುಖಿ ಆಗಲಿವೆ ‘ಧುರಂಧರ್ 2’-‘ಟಾಕ್ಸಿಕ್’; ಹೇಗೆ?

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ನಡುವೆ ಕ್ಲ್ಯಾಶ್ ಆಗಲಿದೆ ಎಂಬ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಯಾವಾಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಯಿತೋ ಆಗ ಈ ಚರ್ಚೆ ಕೂಡ ಕೊನೆ ಆಯಿತು. ಈಗ ‘ಧುರಂದರ್ 2’ ಹಾಗೂ ‘ಟಾಕ್ಸಿಕ್’ ಒಂದೇ ಸಮಯದಲ್ಲಿ ರಿಲೀಸ್ ಆಗಲಿವೆ! ಅರೆ ಇದೇನು ಅಂತೀರಾ? ಆ ಬಗ್ಗೆ ಇಲ್ಲಿದೆ ವಿವರ. ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ‘ಧುರಂಧರ್: ದಿ ರಿವೇಂಜ್’ ಮೂಲಕ ಹಲ್​ಚಲ್ ಸೃಷ್ಟಿಸಿದ್ದಾರೆ. ಈ ಚಿತ್ರ ಬಾಕ್ಸ್…

Read More

ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಮಧ್ಯಮ ವರ್ಗದ ಜನರು ಶ್ರೀಮಂತಿಕೆ (wealthy) ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ಖರ್ಚು ಮಾಡಲು ನಾನಾ ಮಾರ್ಗಗಳು ತೆರೆದುಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಹಣ ಉಳಿಸುವುದು ಬಹಳ ಕಷ್ಟದ ಕೆಲಸ. ಹಣದ ವಿಚಾರದಲ್ಲಿ ಎಸಗುವ ಒಂದು ತಪ್ಪು ಹಲವು ಸಂಪತ್ತು ಗಳಿಕೆಯನ್ನು ನಶಿಸುವಂತೆ ಮಾಡಬಲ್ಲುದು. ಮಧ್ಯಮ ವರ್ಗದ ಜನರು ಹಣವಂತರಾಗಬೇಕೆಂದರೆ ಕೆಲ ತಪ್ಪುಗಳಿಂದ ದೂರ ಇರುವುದು ಲೇಸು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. ಇತಿ ಮಿತಿ ಮೀರಿ ಹೋಗುವುದು… ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ದೊಡ್ಡವರು…

Read More

ವಿರಾಟ್ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ಕೆರಳಿ ಕೆಂಡವಾದ ಬಾಬರ್ ಆಝಂ

ಕೆಲವೇ ಕೆಲವು ವರ್ಷಗಳ ಹಿಂದೆ, ಪ್ರಸ್ತುತ ವಿಶ್ವ ಕ್ರಿಕೆಟ್​ನ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಬಾಬರ್ ಆಝಂ (Babar Azam) ಅವರ ಹೆಸರನ್ನು ಸಹ ಹೇಳಲಾಗುತಿತ್ತು. ವಿರಾಟ್ ಕೊಹ್ಲಿ ಎರಡು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕವೂ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಬಾಬರ್ ಆಝಂ ಹಾಗಲ್ಲ. ಸತತ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಬಾಬರ್​ ಈಗಲೂ ಎಲ್ಲಾ ಮಾದರಿಯಲ್ಲಿ ಆಡುತ್ತಿದ್ದಾರೆ. ಆದರೆ ಅವಮಾನವೆಂಬಂತೆ ಪಾಕ್ ಆಯ್ಕೆ ಮಂಡಳಿ ಅವರನ್ನು…

Read More

ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು, ಏಪ್ರಿಲ್​ 09: ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್(23) ಮೃತ ಯುವಕ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಡೆದಿದ್ದೇನು?  ಅಭಿಷೇಕ್​ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿ ಮಾಡಿದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು….

Read More

ಮಧುಬಾಲಾ ಪಾತ್ರ ಮಾಡಲಿರುವ ಧುರಂಧರ್ ನಟಿ ಸಾರಾ ಅರ್ಜುನ್? ಬನ್ಸಾಲಿ ನಿರ್ಮಾಣದ ಚಿತ್ರಕ್ಕೆ ಸಿದ್ಧತೆ

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ನಂತರ, ನಟಿ ಸಾರಾ ಅರ್ಜುನ್ (Sara Arjun) ಅವರು ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಭಾರತೀಯ ಚಿತ್ರರಂಗದ ಎವರ್​ಗ್ರೀನ್ ಬ್ಯೂಟಿ, ದಂತಕಥೆ ಮಧುಬಾಲಾ (Madhubala) ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ವರದಿಗಳು ಬಿತ್ತರವಾಗಿವೆ. ಈ ಚಿತ್ರವನ್ನು ‘ಡಾರ್ಲಿಂಗ್ಸ್’ ಖ್ಯಾತಿಯ ನಿರ್ದೇಶಕಿ ಜಸ್ಮೀತ್ ಕೆ. ರೀನ್ ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು…

Read More

ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ಕಮಿಷನರ್ ಕ್ಲಾಸ್

ಹುಬ್ಬಳ್ಳಿ, (ಏಪ್ರಿಲ್ 09): ಪೊಲೀಸ್ ಆಯುಕ್ತ (Hubballi-Dharwad Police Commissioner ) ಎನ್ ಶಶಿಕುಮಾರ್ ಅವರು ಇಂದು (ಏಪ್ರಿಲ್ 09) ಹುಬ್ಬಳ್ಳಿ ಹಳೇ  ಸಿಎಆರ್​ ಮೈದಾನದಲ್ಲಿ ಅವಳಿ ನಗರದ ವಿವಿಧ ಠಾಣೆಗಳ ರೌಡಿಶೀಟರ್​ಗಳ ಪರೇಡ್ ನಡೆಸಿದರು. ಈ ವೇಳೆ ಅಪರಾಧ ಕೃತ್ಯ ಮುಂದುವರಿಸಿದ ರೌಡಿಶೀಟರ್​ಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೂ ಕಮಿಷನರ್ ಶಶಿಕುಮಾರ್ ತರಾಟೆ ತೆಗೆದುಕೊಂಡಿದ್ದು, ಹೀಗೆ ಮುಂದುವರೆಸಿ ರಸ್ತೆಯಲ್ಲಿ ಸಾಯ್ತಿರಿ….

Read More

ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಬೆಸ್ಟ್‌

ಇಲಿ, ಹಲ್ಲಿ, ಸೊಳ್ಳೆ, ಜಿರಳೆಗಳ ಕಾಟ ಇರುವಂತೆ ಹೆಚ್ಚಿನ ಮನೆಗಳಲ್ಲಿ ಜೇಡರ ಬಲೆಗಳ  (cobweb) ಸಮಸ್ಯೆಯೂ ಇದ್ದೇ ಇರುತ್ತವೆ. ಮನೆಯ ಸೀಲಿಂಗ್‌, ಮೂಲೆಗಳು, ಗೋಡೆಗಳಲ್ಲಿ ಕಾಣಿಸಿಕೊಳ್ಳುವ ಜೇಡರ ಬಲೆಗಳು ಮನೆಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಈ ಜೇಡರ ಬಲೆಗಳು ಈ ಜೇಡರ ಬಲೆಗಳು ಆಸ್ತಮಾ ಮತ್ತು ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಇದನ್ನು ತೊಡೆದು ಹಾಕಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಪದೇ ಪದೇ ಜೇಡಗಳು ಪದೇ…

Read More

ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಚಿಂತಿಸಬೇಡಿ, ಯಶಸ್ಸಿಗೆ ಇಲ್ಲಿವೆ ಸಾವಿರ ಹಾದಿಗಳು!

ಪಿಯುಸಿ ಫಲಿತಾಂಶ ಬಂದಾಗ ಅಂಕಗಳು ನಿರೀಕ್ಷೆಯಂತೆ ಇಲ್ಲದಿದ್ದರೆ ಆತಂಕವಾಗುವುದು ಸಹಜ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಂಕಗಳೇ ಭವಿಷ್ಯದ ಅಂತಿಮ ತೀರ್ಪು ಎಂದು ಭಾವಿಸುತ್ತಾರೆ. ಆದರೆ ವಾಸ್ತವವೆನೆಂದರೆ, ಪಿಯುಸಿ ಅಂಕಪಟ್ಟಿ ನಿಮ್ಮ ಬದುಕಿನ ಒಂದು ‘ಬಾಗಿಲು’ ಮಾತ್ರ, ಅದು ನಿಮ್ಮ ಬದುಕಿನ ‘ಅಂತ್ಯ’ವಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪನಿಗಳು ಅಭ್ಯರ್ಥಿಯ ಅಂಕಪಟ್ಟಿ ನೋಡುವುದಕ್ಕಿಂತ ಹೆಚ್ಚಾಗಿ ಅವರಲ್ಲಿರುವ ಕೌಶಲ (Skill) ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ನೋಡುತ್ತಿವೆ. ಕಡಿಮೆ ಅಂಕ ಬಂದರೂ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಅದ್ಭುತ…

Read More