ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು, ಏಪ್ರಿಲ್​ 09: ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್(23) ಮೃತ ಯುವಕ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು? 

ಅಭಿಷೇಕ್​ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿ ಮಾಡಿದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇತ್ತ ಯುವತಿಯ ಪೋಷಕರು ಅಭಿಷೇಕ್ ಜತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್​ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ

ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ ಆಗಿರುವಂತಹ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಪ್ರದೇಶದ ಎ ಬ್ಲಾಕ್‌ನಲ್ಲಿ ನಡೆದಿದೆ. ಜೀವಿತಾ(12) ಮೃತ ವಿದ್ಯಾರ್ಥಿನಿ. ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾತ್ರೆ ನೋಡಲು ಹೋಗಿ ಹಸೆಮಣೆ ಏರಬೇಕಿದ್ದವನ ದುರಂತ ಅಂತ್ಯ: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್​ ಹರಿದು ಸಾವು

ಬೊಮ್ಮನ​ಕಟ್ಟೆಯ ಶಾಲೆಯಲ್ಲಿ ಜೀವಿತಾ 6ನೇ ತರಗತಿ ಓದುತ್ತಿದ್ದಳು. ರಜೆ ಇದ್ದ ಕಾರಣ ಮನೆಯಲ್ಲೇ ಇದ್ದಳು. ಆದರೆ ಏಕಾಏಕಿ ದುರ್ಘಟನೆ ಸಂಭವಿಸಿದೆ. ಸದ್ಯ ಬಾಲಕಿ ಜೀವಿತಾ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಸಂಪೂರ್ಣ ತನಿಖೆಯಿಂದಲೇ ನಿಜಾಂಶ ಬಹಿರಂಗವಾಗಬೇಕಿದೆ. ಬಾಲಕಿ ತಾಯಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದದಲ್ಲಿ ನಡೆದಿದೆ. ಮನೋರೋಗದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವಿಜಿ(57) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಲ್ಲಿಕ್ ಮಾಡಿ.

Source link

ಮಧುಬಾಲಾ ಪಾತ್ರ ಮಾಡಲಿರುವ ಧುರಂಧರ್ ನಟಿ ಸಾರಾ ಅರ್ಜುನ್? ಬನ್ಸಾಲಿ ನಿರ್ಮಾಣದ ಚಿತ್ರಕ್ಕೆ ಸಿದ್ಧತೆ

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ನಂತರ, ನಟಿ ಸಾರಾ ಅರ್ಜುನ್ (Sara Arjun) ಅವರು ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಭಾರತೀಯ ಚಿತ್ರರಂಗದ ಎವರ್​ಗ್ರೀನ್ ಬ್ಯೂಟಿ, ದಂತಕಥೆ ಮಧುಬಾಲಾ (Madhubala) ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ವರದಿಗಳು ಬಿತ್ತರವಾಗಿವೆ. ಈ ಚಿತ್ರವನ್ನು ‘ಡಾರ್ಲಿಂಗ್ಸ್’ ಖ್ಯಾತಿಯ ನಿರ್ದೇಶಕಿ ಜಸ್ಮೀತ್ ಕೆ. ರೀನ್ ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಬಂಡವಾಳ ಹೂಡುತ್ತಿದ್ದಾರೆ.

ಈ ಬಹುನಿರೀಕ್ಷಿತ ಚಿತ್ರವು ಪ್ರಸ್ತುತ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಮಧುಬಾಲಾ ಅವರ ಕಾಲದ ಸುವರ್ಣ ಯುಗವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರಿ ತಯಾರಿ ನಡೆಸುತ್ತಿದೆ. ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಮಧುಬಾಲಾ ಅವರ ಮೋಡಿ ಮತ್ತು ಸೌಂದರ್ಯವನ್ನು ತೆರೆಯ ಮೇಲೆ ತರಲು ಸಾರಾ ಅರ್ಜುನ್ ಅವರು ಸಾಕಷ್ಟು ತರಬೇತಿ ಪಡೆಯಬೇಕಿದೆ. ಆ ಕಾಲದ ಭಾಷಾ ಶೈಲಿಯನ್ನು ಕರಗತ ಮಾಡಿಕೊಳ್ಳಲು ಸಾರಾ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಧುಬಾಲಾ ಅವರ ಐಕಾನಿಕ್ ಲುಕ್‌ಗಳನ್ನು ಮರುಸೃಷ್ಟಿಸಲು ಈಗಾಗಲೇ ಹಲವು ಲುಕ್ ಟೆಸ್ಟ್‌ಗಳು ನಡೆಯುತ್ತಿವೆ ಎಂದು ವರದಿ ಆಗಿದೆ.

ನಿರ್ದೇಶಕಿ ಜಸ್ಮೀತ್ ಕೆ. ರೀನ್ ಅವರು ಈ ಚಿತ್ರವನ್ನು ಕೇವಲ ಯಶಸ್ಸಿನ ಕಥೆಯನ್ನಾಗಿ ಮಾತ್ರವಲ್ಲದೆ, ಮಧುಬಾಲಾ ಅವರ ಜೀವನದ ಏರಿಳಿತಗಳು ಮತ್ತು ಭಾವನಾತ್ಮಕ ಹೋರಾಟಗಳನ್ನು ಒಳಗೊಂಡ ತೀವ್ರವಾದ ಡ್ರಾಮಾ ಆಗಿ ರೂಪಿಸುತ್ತಿದ್ದಾರೆ. ಮಧುಬಾಲಾ ಅವರ ರಹಸ್ಯಮಯ ವ್ಯಕ್ತಿತ್ವ ಮತ್ತು ಅವರ ವೃತ್ತಿಜೀವನದ ಮೈಲಿಗಲ್ಲುಗಳನ್ನು ಈ ಚಿತ್ರ ಅನಾವರಣಗೊಳಿಸಲಿದೆ.

‘ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ನಟಿಯ ಜೀವನ ಕಥೆಯನ್ನು ಸಿನಿಮಾ ಮಾಡುವುದು ಒಂದು ಜವಾಬ್ದಾರಿಯುತ ಕೆಲಸ. ಸಾರಾ ಅರ್ಜುನ್ ಈ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ. ಸಾರಾ ಅರ್ಜುನ್ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಈಗಿನಿಂದಲೇ ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ನಟಿ ಸಾರಾ ಅರ್ಜುನ್​ಗೆ ಫ್ಯಾನ್ಸ್ ಮುತ್ತಿಗೆ: ಮಗಳಿಗೆ ಬಾಡಿಗಾರ್ಡ್ ಆದ ತಂದೆ

1950ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದ ಮಧುಬಾಲಾ ಅವರು ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ದಶಕಗಳೇ ಕಳೆದರೂ ಅವರ ಸೌಂದರ್ಯ ಮತ್ತು ನಟನೆ ಇಂದಿಗೂ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ಕಮಿಷನರ್ ಕ್ಲಾಸ್

ಹುಬ್ಬಳ್ಳಿ, (ಏಪ್ರಿಲ್ 09): ಪೊಲೀಸ್ ಆಯುಕ್ತ (Hubballi-Dharwad Police Commissioner ) ಎನ್ ಶಶಿಕುಮಾರ್ ಅವರು ಇಂದು (ಏಪ್ರಿಲ್ 09) ಹುಬ್ಬಳ್ಳಿ ಹಳೇ  ಸಿಎಆರ್​ ಮೈದಾನದಲ್ಲಿ ಅವಳಿ ನಗರದ ವಿವಿಧ ಠಾಣೆಗಳ ರೌಡಿಶೀಟರ್​ಗಳ ಪರೇಡ್ ನಡೆಸಿದರು. ಈ ವೇಳೆ ಅಪರಾಧ ಕೃತ್ಯ ಮುಂದುವರಿಸಿದ ರೌಡಿಶೀಟರ್​ಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೂ ಕಮಿಷನರ್ ಶಶಿಕುಮಾರ್ ತರಾಟೆ ತೆಗೆದುಕೊಂಡಿದ್ದು, ಹೀಗೆ ಮುಂದುವರೆಸಿ ರಸ್ತೆಯಲ್ಲಿ ಸಾಯ್ತಿರಿ. ಯಾವನಾದರೂ ಹೊಡೆದು ಹಾಕುತ್ತಾರೆ ಅಷ್ಟೇ ಎಂದು ಕ್ಲಾಸ್ ತೆಗೆದುಕೊಂಡರು.

Source link

ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಬೆಸ್ಟ್‌

ಇಲಿ, ಹಲ್ಲಿ, ಸೊಳ್ಳೆ, ಜಿರಳೆಗಳ ಕಾಟ ಇರುವಂತೆ ಹೆಚ್ಚಿನ ಮನೆಗಳಲ್ಲಿ ಜೇಡರ ಬಲೆಗಳ  (cobweb) ಸಮಸ್ಯೆಯೂ ಇದ್ದೇ ಇರುತ್ತವೆ. ಮನೆಯ ಸೀಲಿಂಗ್‌, ಮೂಲೆಗಳು, ಗೋಡೆಗಳಲ್ಲಿ ಕಾಣಿಸಿಕೊಳ್ಳುವ ಜೇಡರ ಬಲೆಗಳು ಮನೆಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಈ ಜೇಡರ ಬಲೆಗಳು ಈ ಜೇಡರ ಬಲೆಗಳು ಆಸ್ತಮಾ ಮತ್ತು ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಇದನ್ನು ತೊಡೆದು ಹಾಕಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಪದೇ ಪದೇ ಜೇಡಗಳು ಪದೇ ಪದೇ ಬಲೆ ಕಟ್ಟುತ್ತವೆ. ಹೀಗಿರುವಾಗ ಈ ಜೇಡರಬಲೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಲು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ.

ಜೇಡರ ಬಲೆಗಳನ್ನು ತೊಡೆದುಹಾಕಲು ಇಲ್ಲಿವೆ ಪರಿಣಾಮಕಾರಿ ಮಾರ್ಗ:

ವಿನೆಗರ್: ಜೇಡರ ಬಲೆಗಳನ್ನು ನಿವಾರಿಸಲು ವಿನೆಗರ್‌ ಕೂಡ ಪರಿಣಾಮಕಾರಿ. ಎರಡು ಅಥವಾ ಮೂರು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಪುಡಿಮಾಡಿ ಒಂದು ಕಪ್ ವಿನೆಗರ್‌ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈ ವಿನೆಗರ್ ಮತ್ತು ಬೆಳ್ಳುಳ್ಳಿ ದ್ರವವನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಬಲೆ ಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಜೇಡಗಳು ಬೆಳ್ಳುಳ್ಳಿ ಮತ್ತು ವಿನೆಗರ್‌ನ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಇದು ಅವುಗಳನ್ನು ಓಡಿಹೋಗುವಂತೆ ಮಾಡುತ್ತದೆ.

ಪುದೀನ ನೀರು: ಪುದೀನಾದ ಕಟುವಾದ ವಾಸನೆಯನ್ನು ಜೇಡಗಳು ಇಷ್ಟಪಡುವುದಿಲ್ಲ. ಆದ್ದರಿಂದ, ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ, ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಈ ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಜೇಡ ಗೂಡುಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಈ ಮಿಶ್ರಣದ ಬಲವಾದ ವಾಸನೆಯು ಜೇಡಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಹೊರಗೆ ಹೋಗುವಂತೆ ಮಾಡುತ್ತದೆ.

ದಾಲ್ಚಿನ್ನಿ ಪುಡಿ: ಜೇಡಗಳಿಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುವುದಿಲ್ಲ. ಅದರಿಂದ ಹೊರಹೊಮ್ಮುವ ಬಲವಾದ ಸುವಾಸನೆಯು ಜೇಡಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೇಡಗಳು ಬಲೆ ಕಟ್ಟುವ ಸ್ಥಳಗಳಲ್ಲಿ, ಮನೆಯ ಮೂಲೆಗಳಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿದರೆ,  ದಾಲ್ಚಿನ್ನಿ ಎಣ್ಣೆಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡುವುದರಿಂದ ಜೇಡ ಬಲೆ ಕಟ್ಟುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಸಿಂಪಲ್‌ ಸಲಹೆ ಪಾಲಿಸಿ

ನಿಂಬೆ ಸಿಪ್ಪೆ: ಜೇಡರ ಬಲೆಗಳನ್ನು ತೊಡೆದುಹಾಕಲು ನಿಂಬೆ ಸಿಪ್ಪೆ ಕೂಡ ಪರಿಣಾಮಕಾರಿ.  ನಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಹೆಚ್ಚಾಗಿ ಗೂಡು ಕಟ್ಟುವ ಸ್ಥಳಗಳಾದ ಮನೆಯ ಮೂಲೆಗಳಲ್ಲಿ, ಬಾಗಿಲು ಮತ್ತು ಕಿಟಕಿಗಳ ಹಿಂದೆ ಸಿಂಪಡಿಸಿ. ಸಿಟ್ರಸ್ ವಾಸನೆಯು ಜೇಡಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೆ ಜೇಡರ ಬಲೆಗಳನ್ನು ತೊಡೆದು ಹಾಕಲು ಕರ್ಪೂರವನ್ನು ಸಹ ಬಳಸಬಹುದು.

ಬೇವಿನ ಎಲೆ: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಕೀಟ ನಿವಾರಕ ಗುಣಗಳನ್ನು ಹೊಂದಿವೆ.  ಒಣಗಿದ ಬೇವಿನ ಎಲೆಗಳನ್ನು ಸುಟ್ಟಾಗ ಉತ್ಪತ್ತಿಯಾಗುವ ಹೊಗೆ ಜೇಡಗಳಿಗೆ ಇಷ್ಟವಾಗುವುದಿಲ್ಲ. ಈ ಮೂಲಕ ಜೇಡರ ಬಲೆಗಳನ್ನು ನಿವಾರಿಸಬಹುದು. ಇದಲ್ಲದೆ,  ಸ್ವಲ್ಪ ನೀರಿನೊಂದಿಗೆ ಬೇವಿನ ಎಣ್ಣೆಯನ್ನು ಬೆರೆಸಿ, ಅದರಲ್ಲಿ ಹತ್ತಿಯನ್ನು ಅದ್ದಿ ಮನೆಯ ಮೂಲೆಗಳಲ್ಲಿ ಇಟ್ಟರೆ, ಜೇಡಗಳು ಅಲ್ಲಿಂದ ಓಡಿಹೋಗುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಚಿಂತಿಸಬೇಡಿ, ಯಶಸ್ಸಿಗೆ ಇಲ್ಲಿವೆ ಸಾವಿರ ಹಾದಿಗಳು!

ಪಿಯುಸಿ ಫಲಿತಾಂಶ ಬಂದಾಗ ಅಂಕಗಳು ನಿರೀಕ್ಷೆಯಂತೆ ಇಲ್ಲದಿದ್ದರೆ ಆತಂಕವಾಗುವುದು ಸಹಜ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಂಕಗಳೇ ಭವಿಷ್ಯದ ಅಂತಿಮ ತೀರ್ಪು ಎಂದು ಭಾವಿಸುತ್ತಾರೆ. ಆದರೆ ವಾಸ್ತವವೆನೆಂದರೆ, ಪಿಯುಸಿ ಅಂಕಪಟ್ಟಿ ನಿಮ್ಮ ಬದುಕಿನ ಒಂದು ‘ಬಾಗಿಲು’ ಮಾತ್ರ, ಅದು ನಿಮ್ಮ ಬದುಕಿನ ‘ಅಂತ್ಯ’ವಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪನಿಗಳು ಅಭ್ಯರ್ಥಿಯ ಅಂಕಪಟ್ಟಿ ನೋಡುವುದಕ್ಕಿಂತ ಹೆಚ್ಚಾಗಿ ಅವರಲ್ಲಿರುವ ಕೌಶಲ (Skill) ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ನೋಡುತ್ತಿವೆ. ಕಡಿಮೆ ಅಂಕ ಬಂದರೂ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಅದ್ಭುತ ವೃತ್ತಿಜೀವನದ ದಾರಿಗಳು ಇಲ್ಲಿವೆ. ಆದ್ದರಿಂದ, ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿರುವ ಅವಕಾಶಗಳತ್ತ ಗಮನ ಹರಿಸಿ.

ವೃತ್ತಿಪರ ಡಿಪ್ಲೋಮಾ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳು:

ಕಡಿಮೆ ಅಂಕ ಬಂದವರಿಗೆ ವೃತ್ತಿಪರ ಡಿಪ್ಲೋಮಾ ಕೋರ್ಸ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಪ್ಯಾರಾ ಮೆಡಿಕಲ್ ಕ್ಷೇತ್ರದಲ್ಲಿರುವ ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಅಥವಾ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್‌ಗಳು ತಕ್ಷಣದ ಉದ್ಯೋಗ ಭರವಸೆಯನ್ನು ನೀಡುತ್ತವೆ. ಹಾಗೆಯೇ ತಾಂತ್ರಿಕ ಆಸಕ್ತಿ ಇರುವವರು ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಸಿವಿಲ್ ಡಿಪ್ಲೋಮಾ ಮಾಡುವುದರಿಂದ ಕೈಗಾರಿಕಾ ಕ್ಷೇತ್ರಗಳಲ್ಲಿ ಬೇಗನೆ ನೆಲೆ ಕಂಡುಕೊಳ್ಳಬಹುದು. ಈ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ಇರುವುದರಿಂದ, ಕೆಲಸದ ಮಾರುಕಟ್ಟೆಯಲ್ಲಿ ಇವರಿಗೆ ಹೆಚ್ಚಿನ ಬೇಡಿಕೆಯಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗ:

ಸರ್ಕಾರಿ ಕೆಲಸದ ಕನಸು ಇರುವವರು ಅಂಕಗಳು ಕಡಿಮೆ ಇವೆ ಎಂದು ನಿರಾಶರಾಗಬೇಕಿಲ್ಲ. ಕೇಂದ್ರ ಸರ್ಕಾರದ ಎಸ್‌ಎಸ್‌ಸಿ (SSC) ನಡೆಸುವ ಪರೀಕ್ಷೆಗಳು ಅಥವಾ ರಾಜ್ಯ ಸರ್ಕಾರದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪಿಯುಸಿ ಕೇವಲ ಪಾಸಾಗಿದ್ದರೂ ಸಾಕು. ಇಲ್ಲಿ ನಿಮ್ಮ ಅಂಕಗಳಿಗಿಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ತೋರುವ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ಇರುತ್ತದೆ. ಆದ್ದರಿಂದ, ಸರಿಯಾದ ತರಬೇತಿ ಮತ್ತು ಪರಿಶ್ರಮವಿದ್ದರೆ ಸರ್ಕಾರಿ ಹುದ್ದೆಯನ್ನು ಪಡೆಯುವುದು ಕಷ್ಟವೇನಲ್ಲ.

ಡಿಜಿಟಲ್ ಯುಗದ ಹೊಸ ಕೌಶಲಗಳು (The AI & Digital Wave):

ಡಿಜಿಟಲ್ ಕೌಶಲಗಳನ್ನು ಕಲಿಯುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ. ನೀವು ಯಾವುದೇ ವಿಭಾಗದಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್) ಪಿಯುಸಿ ಮುಗಿಸಿದ್ದರೂ, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನಿಂಗ್ ಅಥವಾ ವಿಡಿಯೋ ಎಡಿಟಿಂಗ್‌ನಂತಹ ಕೋರ್ಸ್‌ಗಳನ್ನು ಮಾಡಬಹುದು. ಇವುಗಳನ್ನು ಕಲಿಯಲು ಕೇವಲ 3 ರಿಂದ 6 ತಿಂಗಳು ಸಾಕು. ಇಂದಿನ ಸ್ಟಾರ್ಟ್‌ಅಪ್ ಯುಗದಲ್ಲಿ ಇಂತಹ ಕ್ರಿಯೇಟಿವ್ ಕೆಲಸ ಮಾಡುವವರಿಗೆ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು ಮತ್ತು ಜಾಹೀರಾತು ಸಂಸ್ಥೆಗಳು ಆಕರ್ಷಕ ಸಂಬಳ ನೀಡಲು ಸಿದ್ಧವಿರುತ್ತವೆ.

ಸೃಜನಶೀಲ ವೃತ್ತಿಜೀವನ (Creative Careers):

ಸೃಜನಶೀಲ ವೃತ್ತಿಜೀವನವನ್ನು ಇಷ್ಟಪಡುವವರಿಗೆ ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನಿಂಗ್ ಮತ್ತು ಅನಿಮೇಷನ್ ಕ್ಷೇತ್ರಗಳು ಬಾಗಿಲು ತೆರೆದಿವೆ. ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದರೆ ಅಥವಾ ವಿನ್ಯಾಸಗಳಲ್ಲಿ ಹೊಸತನ ಹುಡುಕುವ ಹವ್ಯಾಸವಿದ್ದರೆ, ಈ ಕ್ಷೇತ್ರಗಳಲ್ಲಿ ನಿಮ್ಮ ಕಲ್ಪನಾ ಶಕ್ತಿಯೇ ಬಂಡವಾಳವಾಗುತ್ತದೆ. ಪ್ರವಾಸೋದ್ಯಮ ಮತ್ತು ಸಿನೆಮಾ ರಂಗವು ಬೆಳೆಯುತ್ತಿರುವ ಕಾರಣ, ಈ ವೃತ್ತಿಗಳಲ್ಲಿ ಉದ್ಯೋಗದ ಕೊರತೆಯಿಲ್ಲ. ಇದು ನಿಮ್ಮ ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಇರುವ ಸುಸಂದರ್ಭವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾರಾಮತಿ ಉಪಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆ; ಸುನೇತ್ರಾ ಪವಾರ್ ಅವಿರೋಧ ಆಯ್ಕೆ

ಬಾರಾಮತಿ, ಏಪ್ರಿಲ್ 9: ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರು ಏಪ್ರಿಲ್ 23ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಬೇಕೆಂದು ಮಾಡಿದ ಮನವಿಗಳನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಪಕ್ಷವು ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಸುನೇತ್ರಾ ಪವಾರ್ ಅವರ ಎದುರಾಳಿಯಾಗಿ ಯಾವುದೇ ಸ್ಪರ್ಧಿ ಇಲ್ಲದ ಕಾರಣ ಈ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಏಪ್ರಿಲ್ 23ರಂದು ನಡೆಯಲಿರುವ ಬಾರಾಮತಿ ಉಪಚುನಾವಣೆಯಿಂದ ಹಿಂದೆ ಸರಿಯುವಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಹಿರಿಯ ಎನ್‌ಸಿಪಿ ನಾಯಕರು ಕಾಂಗ್ರೆಸ್​​ಗೆ ಮನವಿ ಮಾಡಿದ್ದರು. ಇದಾದ ನಂತರ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Video: ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

ಜನವರಿಯಲ್ಲಿ ಬಾರಾಮತಿಯಲ್ಲಿ ನಡೆಯಲಿದ್ದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದರು. ಆಗ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿಯ ಶಾಸಕರಾಗಿದ್ದರು. ಅದಾದ 1 ತಿಂಗಳ ನಂತರ ಅವರ ಪತ್ನಿ ಸುನೇತ್ರಾ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಯಿತು.ಆದರೆ, ಅವರು ಶಾಸಕಿಯಾಗಿ ಆಯ್ಕೆಯಾಗಬೇಕಾಗಿದ್ದರಿಂದ ಈ ಬಾರಿ ಉಪಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅಜಿತ್ ಪವಾರ್ ಅವರ ಗೌರವಾರ್ಥವಾಗಿ ಕಾಂಗ್ರೆಸ್ ತನ್ನ ಪಕ್ಷ ಅಭ್ಯರ್ಥಿಯನ್ನು ಹಿಂಪಡೆಯುವ ಮೂಲಕ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದೆ.

ಬಾರಾಮತಿ ಸ್ಥಾನವನ್ನು ಪವಾರ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇದನ್ನು 1991ರಿಂದ ಅಜಿತ್ ಪವಾರ್ ಹೊಂದಿದ್ದರು. ಅದಕ್ಕೂ ಮೊದಲು, ಅವರ ಚಿಕ್ಕಪ್ಪ ಶರದ್ ಪವಾರ್ ಬಾರಾಮತಿ ಸ್ಥಾನವನ್ನು ಹೊಂದಿದ್ದರು. ಸುಪ್ರಿಯಾ ಸುಲೆ ಬಾರಾಮತಿಯ ಸಂಸದೆ. ಹೀಗಾಗಿ ಬಾರಾಮತಿ ವಿಧಾನಸಭಾ ಸ್ಥಾನ ಮತ್ತು ಸಂಸದೀಯ ಕ್ಷೇತ್ರ ಎರಡನ್ನೂ ಪವಾರ್ ಕುಟುಂಬವು ಹೊಂದಿದೆ.

ಇದನ್ನೂ ಓದಿ: ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಆಯ್ಕೆ

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾದ ಇಂದು (ಗುರುವಾರ) ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ಘೋಷಿಸಿದರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಅಜಿತ್ ಪವಾರ್ ಅವರ ಮೇಲಿನ ಗೌರವದಿಂದಾಗಿ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.

ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ನೇತೃತ್ವದ ಹಿರಿಯ ಎನ್‌ಸಿಪಿ ನಾಯಕರ ನಿಯೋಗವು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ವೈಯಕ್ತಿಕವಾಗಿ ಸಂಪರ್ಕಿಸಿತ್ತು. ಸುನೇತ್ರಾ ಪವಾರ್ ಕೂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರು ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪ್

ಮಂಗಳೂರು, (ಏಪ್ರಿಲ್ 09): 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಇಂದು (ಏಪ್ರಿಲ್ 09) ಆನ್​​ಲೈನಲ್ಲಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಆನ್​​ಲೈನ್​​​ಲ್ಲಿ ರಿಸಲ್ಟ್ ವೀಕ್ಷಣೆ ಮಾಡಬಹುದಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಪಡೆದುಕೊಂಡಿದ್ದಾರೆ. ಹೌದು…ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಔಟ್ ಆಫ್ ಔಟ್ ಅಂದರೆ 600ಕ್ಕೆ 600 ಅಂಕ ಪಡೆದು ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ.

ಇದನ್ನೂ ನೋಡಿ: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ, ಪಾಸಾದವರು ಎಷ್ಟು ಗೊತ್ತಾ?

Source link

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 114 ಭಾರಿ ಭೂಕಂಪ: ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?

ಬೆಂಗಳೂರು, ಏಪ್ರಿಲ್​​ 09: 2021-2025ರ ಅವಧಿಯಲ್ಲಿ ಕಡಿಮೆ ತೀವ್ರತೆಯ ಭೂಕಂಪಗಳು ಕರ್ನಾಟಕದಲ್ಲಿ ದಾಖಲಾಗುತ್ತಿದ್ದು ವಿಶೇಷವಾಗಿ ಉತ್ತರ ಹಾಗೂ ಉತ್ತರ-ಪೂರ್ವ ಜಿಲ್ಲೆಗಳು ಇವುಗಳ ಕೇಂದ್ರವಾಗಿ ಹೆಚ್ಚು ಹೊರಹೊಮ್ಮಿವೆ ಎಂದು ಭೂ ವಿಜ್ಞಾನ ಸಚಿವಾಲಯವು ಲೋಕಸಭೆಯಲ್ಲಿ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 114 ಘಟನೆಗಳು ಮಾತ್ರ ದಾಖಲಾಗಿವೆ. ವಿಜಯಪುರ, ಬೀದರ್​ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಕಂಪನಗಳು ದಾಖಲಾಗಿವೆ. ಆ ಪೈಕಿ ವಿಜಯಪುರದಲ್ಲಿಯೇ ಭೂಕಂಪನದ ಘಟನೆಗಳು ಹೆಚ್ಚಾಗಿ ನಡೆದಿವೆ ಎನ್ನಲಾಗಿದೆ.

2021ರಲ್ಲಿ 11, 2022ರಲ್ಲಿ 19, 2023ರಲ್ಲಿ 6, 2024ರಲ್ಲಿ 2 ಮತ್ತು 2025ರಲ್ಲಿ 7 ಭೂಕಂಪಗಳು ವಿಜಯಪುರದಲ್ಲಿ ದಾಖಲಾಗಿವೆ. ಬೀದರ್​​ನಲ್ಲೂ ಹಲವು ಬಾರಿ ಭೂಕಂಪನದ ಅನುಭವ ಆಗಿದ್ದು 2021 ಮತ್ತು 2022ರಲ್ಲಿ ತಲಾ 3, 2023ರಲ್ಲಿ 7, ನಂತರದ ವರ್ಷಗಳಲ್ಲಿ 2 ಮತ್ತು 3 ಘಟನೆಗಳು ದಾಖಲಾಗಿವೆ. 2021ರಲ್ಲಿ ಯಾವುದೇ ಕಂಪನವಾಗದ ಕಲಬುರಗಿಯಲ್ಲಿ 2023ರಲ್ಲಿ 5 ಮತ್ತು 2025ರಲ್ಲಿ 4 ಸಲ ಭೂಕಂಪದ ಅನುಭವ ಆಗಿದೆ. ಇತ್ತ ಬಳ್ಳಾರಿಯಲ್ಲಿ 2024ರಲ್ಲಿ ಅಚಾನಕ್ ಏರಿಕೆ ಕಂಡುಬಂದಿದ್ದು, 7 ಭೂಕಂಪಗಳು ದಾಖಲಾಗಿವೆ. ಮೈಸೂರು, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತಿ ಕಡಿಮೆ ಅಥವಾ ವಿರಳ ಭೂಕಂಪ ಘಟನೆಗಳು ಮಾತ್ರ ವರದಿಯಾಗಿವೆ.

ಇದನ್ನೂ ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ

ಸಚಿವಾಲಯ ನೀಡಿದ ಪಟ್ಟಿಯಲ್ಲಿ ಭೂಕಂಪ ದಾಖಲಾಗಿದ 16 ಜಿಲ್ಲೆಗಳಷ್ಟೇ ಸೇರಿವೆ. ಉಳಿದ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಯಾವುದೇ ಗಮನಾರ್ಹ ಭೂಕಂಪ ದಾಖಲಾಗಿಲ್ಲ.ರಾಜ್ಯದಲ್ಲಿ ದಾಖಲಾಗಿರುವ ಬಹುತೇಕ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 3.0 ಕ್ಕಿಂತ ಕಡಿಮೆ ತೀವ್ರತೆ ಹೊಂದಿರುವ ಅಥವಾ ಸಣ್ಣ ಮಟ್ಟದವುಗಳಾಗಿವೆ. 3.0 ರಿಂದ 3.9 ನಡುವಿನವುಗಳು ಕಡಿಮೆ ಸಂಖ್ಯೆಯಲ್ಲಿ ಇದ್ದು, 4.0ಕ್ಕಿಂತ ಹೆಚ್ಚಿನವುಗಳು ವಿರಳವಾಗಿವೆ. 5.0 ಕ್ಕಿಂತ ಹೆಚ್ಚಿನ ಭೂಕಂಪಗಳು ಯಾವುದೇ ವರ್ಷದಲ್ಲೂ ದಾಖಲಾಗಿಲ್ಲ.

ಸುರತ್ಕಲ್‌ನ ಎನ್‌ಐಟಿಕೆ ನಾಗರಿಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಬ್ಲೂ ಚೌಧರಿ ಅವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಭೂಕಂಪ ಕಂಡುಬರುವುದಕ್ಕೆ ಮಳೆಗಾಲ ಹಾಗೂ ನಂತರದ ಅವಧಿಯಲ್ಲಿ ಉಂಟಾಗುವ ಹೈಡ್ರೋಸೀಸ್ಮಿಕ ಪ್ರತಿಕ್ರಿಯೆಗಳು ಮತ್ತು ದೊಡ್ಡ ಮಟ್ಟದ ಗಣಿಗಾರಿಕೆ ಚಟುವಟಿಕೆಗಳು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. 3.0 ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪಗಳು ತಕ್ಷಣದ ಆತಂಕಕ್ಕೆ ಕಾರಣವಾಗುವುದಿಲ್ಲ ಎಂದರೂ, ಇವುಗಳ ಸಂಖ್ಯೆ ಅಥವಾ ತೀವ್ರತೆಯಲ್ಲಿ ಏರಿಕೆ ಕಂಡುಬಂದರೆ ವೈಜ್ಞಾನಿಕವಾಗಿ ಗಂಭೀರವಾಗಿ ಅಧ್ಯಯನ ಮಾಡಬೇಕೆಂದು ಅವರು ಎಚ್ಚರಿಕೆ ನೀಡಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ, ಪಾಸಾದವರು ಎಷ್ಟು ಗೊತ್ತಾ?

ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ (Karnataka 2nd PUC result 2026 declared)  ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಆನ್​​ಲೈನಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್‌ಸೈಟ್‌ https://www.karresults.nic.in/ ಮೂಲಕ ಫಲಿತಾಂಶ ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ಈ ಬಾರಿ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ.

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಆನ್​​​ಲೈನ್​​​ನಲ್ಲಿ ರಿಸಲ್ಟ್ ಪ್ರಕಟ

Source link

‘ಧುರಂಧರ್ 2’ ಯಶಸ್ಸು: ಸಂಜಯ್ ದತ್ ಬಗ್ಗೆ ಮೆಚ್ಚುಗೆಯ ಮಾತಾಡಿದ ರಾಘವ್ ಚಡ್ಡಾ

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಪ್ರೇಕ್ಷಕರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಈ ನಡುವೆ, ರಾಜಕಾರಣಿ ರಾಘವ್ ಚಡ್ಡಾ ಅವರು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಇತ್ತೀಚೆಗೆ ರಾಜಕೀಯದ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದ ರಾಘವ್ ಚಡ್ಡಾ (Raghav Chadha) ಅವರು ಈಗ ಬಾಲಿವುಡ್​ ನಟನ ಸ್ನೇಹದ ಕಾರಣಕ್ಕಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಗುರುವಾರ (ಏ.9) ಇನ್‌ಸ್ಟಾಗ್ರಾಮ್‌ನಲ್ಲಿ ಸಂಜಯ್ ದತ್ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡ ರಾಘವ್ ಚಡ್ಡಾ, ಸಂಜು ಬಾಬಾ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಕುರ್ತಾ ಧರಿಸಿ, ರಾಘವ್ ಅವರ ಮನೆಯ ತೋಟದಲ್ಲಿ ಕುಳಿತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಅವರ ಫೋಸ್ಟ್ ವೈರಲ್ ಆಗಿದೆ.

‘ಕೆಲವು ಸಮಯದ ಹಿಂದೆ ನನ್ನ ನಿವಾಸಕ್ಕೆ ಅತಿಥಿಯಾಗಿ ಬಂದಿದ್ದ ಅತ್ಯಂತ ಆತ್ಮೀಯ ವ್ಯಕ್ತಿಗಳಲ್ಲಿ ಒಬ್ಬರಾದ ಸಂಜಯ್ ದತ್ ಅವರಿಗೆ ಆತಿಥ್ಯ ನೀಡುವ ಅವಕಾಶ ಸಿಕ್ಕಿತು. ಧುರಂಧರ್ ಚಿತ್ರದಿಂದ ನಿಮಗೆ ಸಿಗುತ್ತಿರುವ ಪ್ರೀತಿಯನ್ನು ಕಂಡು ಸಂತೋಷವಾಯಿತು. ನಿಮ್ಮ ಔರಾ ಮೊದಲಿನಂತೆಯೇ ಇದೆ ಮತ್ತು ಪ್ರತಿ ಕಾಲಘಟ್ಟದಲ್ಲೂ ನಿಮ್ಮ ಮೇಲಿರುವ ಅಭಿಮಾನ ಅಚಲವಾಗಿದೆ. ಈ ಯಶಸ್ಸಿಗೆ ನೀವು ಅರ್ಹರು. ನಾನು ಯಾವಾಗಲೂ ನಿಮಗೆ ಬೆಂಬಲವಾಗಿರುತ್ತೇನೆ’ ಎಂದು ರಾಘವ್ ಚಡ್ಡಾ ಬರೆದುಕೊಂಡಿದ್ದಾರೆ.

‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಅವರು ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವು ಪಾಕಿಸ್ತಾನದ ರಿಯಲ್ ಲೈಫ್ ಪೊಲೀಸ್ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಅವರ ಜೀವನದಿಂದ ಪ್ರೇರಿತವಾಗಿದೆ. ಸಂಜಯ್ ದತ್ ಅವರ ಗಂಭೀರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

ವಿಶೇಷವೆಂದರೆ, ಖುದ್ದು ಚೌಧರಿ ಅಸ್ಲಂ ಅವರ ಪತ್ನಿ ನೌರೀನ್ ಅಸ್ಲಂ ಕೂಡ ಸಂಜಯ್ ದತ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ‘ಪರದೆಯ ಮೇಲೆ ನೋಡುವಾಗ ಒಂದು ಕ್ಷಣ ನನ್ನ ಪತಿ ಅಸ್ಲಂ ಅವರೇ ಬಂದಿದ್ದಾರೆ ಎಂದು ಅನಿಸಿತು’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ‘ಧುರಂಧರ್ 2’ ಸಿನಿಮಾದಿಂದಾಗಿ ಸಂಜಯ್ ದತ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version