Headlines

ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?

ನವದೆಹಲಿ, ಏಪ್ರಿಲ್ 8: ಅಮೆರಿಕ ಇರಾನ್ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ಕಚ್ಛಾ ತೈಲ (global crude oil) ಮಾರುಕಟ್ಟೆ ಗರಿಗೆದರಿ ನಿಂತಿದೆ. ತೈಲ ಬೆಲೆ ಒಮ್ಮೆಯೇ ಶೇ. 20ರಷ್ಟು ಕುಸಿದಿದೆ. ಒಂದು ಬ್ಯಾರಲ್ ತೈಲ ಬೆಲೆ 117.63 ಡಾಲರ್ ಇದ್ದದ್ದು 91.05 ಡಾಲರ್​ಗೆ ಇಳಿದಿದೆ. ಕೆಲವೇ ಗಂಟೆಯಲ್ಲಿ ತೈಲ ಬೆಲೆ ಬರೋಬ್ಬರಿ 26 ಡಾಲರ್​ಗಳಷ್ಟು ಕುಸಿತ ಕಂಡಿದೆ. ಒಂದೇ ದಿನದಲ್ಲಿ ಅತಿಹೆಚ್ಚು ಕುಸಿತ ದಾಖಲಾದ ಸಂದರ್ಭಗಳಲ್ಲಿ ಇದೂ ಒಂದು. ಕೋವಿಡ್ ವೇಳೆ ಈ ರೀತಿಯ ಮಹಾ…

Read More

ರಾತ್ರಿ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಆರು ಜನರ ಸ್ಥಿತಿ ಗಂಭೀರ

ಗದಗ, ಏಪ್ರಿಲ್ 08: ಜಿಲ್ಲೆಯ ಮುಂಡರಗಿ (Gadag) ತಾಲೂಕಿನ ಡೋಣಿ ತಾಂಡಾದಲ್ಲಿ ನಡುರಾತ್ರಿ ನಡೆದ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆ ಮುಂಭಾಗ ಗಾಢ ನಿದ್ರೆಯಲ್ಲಿ ಮಲಗಿದ್ದ ಆರು ಜನರ ಮೇಲೆ ಗ್ರಾಮದ ವ್ಯಕ್ತಿಯೊಬ್ಬನು ಮಾರಣಾಂತಿಕ ಹಲ್ಲೆ  ನಡೆಸಿರುವುದು ಆತಂಕ ಸೃಷ್ಟಿಸಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಂಡಾ ನಿವಾಸಿಗಳು ಕಂಗಾಲು ಘಟನೆ ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನಡೆದಿದ್ದು, ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ ದೊಣ್ಣೆಯಿಂದ ಮಲಗಿದ್ದವರ ಹಲ್ಲೆ ಮನಸೋಇಚ್ಛೆ ಮಾಡಿದ್ದಾನೆ. ಹಲ್ಲೆಗೊಳಗಾದ…

Read More

ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆಗೆ ಭಾರಿ ಆಕ್ಷೇಪ

ಚೆನ್ನೈ, ಏಪ್ರಿಲ್ 08: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ ಅಳಿಸಿಹಾಕಿದ್ದಾರೆ. ಕೇವಲ ಚುನಾವಣೆಗಾಗಿ ಮಾತ್ರ ಈ ನಾಟಕವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬರಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್​ 30ರಿಂದ ಆರಂಭವಾಗಿದೆ. ಏಪ್ರಿಲ್ 6ಕ್ಕೆ ಕೊನೆಗೊಂಡಿದೆ. ಮಂಗಳವಾರ ನಾಮಪತ್ರಗಳ…

Read More

ಚಂದ್ರದ್ರೋಣ ಪರ್ವತದಲ್ಲಿ ಶ್ರೀನಂದಾ ನಾಪತ್ತೆ: ಈ ವಿಡಿಯೋ ಬಳಿಕ ಕೆಲವೇ ನಿಮಿಷಗಳಲ್ಲಿ ಗಯಾಬ್

ಚಿಕ್ಕಮಗಳೂರು, ಏಪ್ರಿಲ್ 08): ಕೇರಳ ಮೂಲದ 14 ವರ್ಷದ  ಶ್ರೀ ನಂದಾ ಎನ್ನುವ ಹುಡುಗಿ ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ (Chandradrona Mountains) ನಾಪತ್ತೆಯಾಗಿದ್ದಾಳೆ. 40 ಜನರ ಪ್ರವಾಸಿ ತಂಡದೊಂದಿಗೆ ಬಂದಿದ್ದ ಶ್ರೀ ನಂದಾ ಮಾಣಿಕ್ಯಧಾರಾ ಬಳಿ ಕಾಣೆಯಾಗಿದ್ದಾಳೆ. ಆದ್ರೆ, ನಾಪತ್ತೆಯಾಗುವ ಕೆಲವು ನಿಮಿಷಗಳ ಮುನ್ನ ವಿಡಿಯೋ ಮಾಡಿಕೊಂಡಿದ್ದಾಳೆ. ಸಂಬಂಧಿ ಬಾಲಕಿಯೊಂದಿಗೆ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದು, ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಶ್ರೀ ನಂದಾ ಏಕಾಏಕಿ ನಾಪತ್ತೆಯಾಗಿದ್ದಾಳೆ. ಹೀಗಾಗಿ ಶ್ರೀ ನಂದಾ ನಾಪತ್ತೆ ಹಿಂದೆ ಹಲವು…

Read More

ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ಬೆಂಗಳೂರು, ಏಪ್ರಿಲ್​​ 08:  ಕಟ್ಟಡದಿಂದ ಜಿಗಿದು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಯಲಹಂಕದಲ್ಲಿರೋ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್​​ನಲ್ಲಿ ನಿನ್ನೆ ನಡೆದಿತ್ತು. ಘಟನೆಯಲ್ಲಿ ಮೂಲತಃ ಜಾರ್ಖಂಡ್​​ನ ರಾಂಚಿ ನಿವಾಸಿ 21 ವರ್ಷದ ಲಕ್ಷ್ಯ ಮಿಶ್ರಾ ಮೃತಪಟ್ಟಿದ್ದರು. ಯಲಹಂಕ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿ ನಸುಕಿನ ಜಾವ 3 ಗಂಟೆ ವೇಳೆಗೆ ಹಾಸ್ಟೆಲ್​​ನ 9ನೇ ಮಹಡಿಯಿಂದ ಜಿಗಿದಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆದರೀಗ ವಿದ್ಯಾರ್ಥಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ….

Read More

RCBಯ ಪಂಚ ಬೌಲರ್​ಗಳೇ ವೈಭವ್​ ಸೂರ್ಯವಂಶಿಯ ಮುಂದಿನ ಟಾರ್ಗೆಟ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ದಿಗ್ಗಜ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್​ಪ್ರೀರ್ ಬುಮ್ರಾ ಅವರ ಓವರ್‌ನಲ್ಲಿ ಅಬ್ಬರಿಸಿದ್ದ ವೈಭವ್, ಈಗ ಏಪ್ರಿಲ್ 10 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬುಮ್ರಾ ವಿರುದ್ಧ ‘ಬಿರುಗಾಳಿ’! ಮುಂಬೈ ಇಂಡಿಯನ್ಸ್ ವಿರುದ್ಧದ ಮಳೆಬಾಧಿತ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತೋರಿದ ಆಟ ಅಪ್ರತಿಮವಾಗಿತ್ತು. ವಿಶ್ವದ…

Read More

ಊಬರ್ ಕಂಪನಿ ಚಾಲಕರಿಗೆ ಮಾಡೋ ಮೋಸ ಎಂಥದ್ದು ಅಂತ ಬಿಚ್ಚಿಟ್ಟ ಚಾಲಕರು!

ಬೆಂಗಳೂರು, ಏಪ್ರಿಲ್ 08: ಬೊಮ್ಮನಹಳ್ಳಿಯ ಊಬರ್ ಕಚೇರಿ ಮುಂದೆ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಊಬರ್ ಕಂಪನಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆಯನ್ನು ಖಂಡಿಸಿ, ಚಾಲಕರು ಮನವಿ ಸಲ್ಲಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಗಳನ್ನು ಊಬರ್ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಿಶೇಷವಾಗಿ, ನಾನ್-ಪೀಕ್ ಅವರ್‌ಗಳಲ್ಲಿ ಸಿಗುವ ದರ ಅತ್ಯಂತ ಕಡಿಮೆಯಾಗಿದ್ದು, ಒಂದು ಟ್ರಿಪ್‌ಗೆ ಕೇವಲ 8 ರಿಂದ 15 ರೂಪಾಯಿ ಮಾತ್ರ ಸಿಗುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್‌ಪಿಜಿ ಮತ್ತು ಸಿಎನ್‌ಜಿ ಇಂಧನ ಬೆಲೆಗಳು ಗಣನೀಯವಾಗಿ…

Read More

ರೈಲಿನಲ್ಲಿ ಹಣಕ್ಕಾಗಿ ಪಟ್ಟು: ಪ್ರಯಾಣಿಕರೆದುರೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಟ್ರಾನ್ಸ್‌ಜೆಂಡರ್

ರೈಲಿನಲ್ಲಿ ಪ್ರಯಾಣಿಸುವಾಗ ಅದರಲ್ಲೂ ಉತ್ತರ ಭಾರತದ ರೈಲುಗಳಲ್ಲಿ ಮಂಗಳಮುಖಿಯರ ಸಂಖ್ಯೆ ಹೆಚ್ಚಿರುತ್ತದೆ. ಹಣ ಕೇಳುತ್ತಾರೆ, ಕೊಟ್ಟರೆ ಆಶೀರ್ವಾದ ಮಾಡುತ್ತಾರೆ, ಕೊಡದಿದ್ದರೆ ಏನೋ ಬೈದು ಶಾಪ ಹಾಕುತ್ತಾ ಹೋಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ವರ್ತನೆ ಮಿತಿ ಮೀರಿದೆ, ಹಣ ಕೊಡದಿದ್ದರೆ ಹೊಡೆಯುವುದು, ಅನುಚಿತವಾಗಿ ವರ್ತಿಸುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅಂಥದ್ದೇ ವಿಡಿಯೋವೊಂದರಲ್ಲಿ ಮಂಗಳಮುಖಿಯೊಬ್ಬರು ಹಣ ಕೇಳಿದಾಗ ಪ್ರಯಾಣಿಕ ಹಣ ಕೊಡದಿದ್ದಕ್ಕೆ ಪ್ರಯಾಣಿಕರೆದುರೇ ಬಟ್ಟೆ ಬಿಚ್ಚಿ ಕೆಟ್ಟದಾಗಿ ವರ್ತಿಸಿದ್ದು, ಎಲ್ಲರಿಗೂ ಮುಜುಗರ ತಂದಿತ್ತು.   ವಿಡಿಯೋ ಸುದ್ದಿಗಳಿಗಾಗಿ…

Read More

ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ನವದೆಹಲಿ, ಏಪ್ರಿಲ್ 8: ತಾನು ನೀಡಿರುವ ಸಾಲವನ್ನು ವಾಪಸ್ ಮಾಡುವಂತೆ ಪಾಕಿಸ್ತಾನಕ್ಕೆ ಯುಎಇ ಕೇಳಿದೆ. ಸಾಲಗಳನ್ನು ಪಡೆದು ವಾಪಸ್ ಮಾಡದೇ ಹಾಗೇ ಉಳಿಸಿಕೊಂಡು ಹೋಗಿ ಅಭ್ಯಾಸಗೊಂಡಿರುವ ಪಾಕಿಸ್ತಾನಕ್ಕೆ (Pakistan) ಈಗ ಒತ್ತಡ ಶುರುವಾಗತೊಡಗಿದೆ. ಯುಎಇ ದೇಶಕ್ಕೆ ಭಿಕ್ಷೆ ಹಾಕುತ್ತಿದ್ದೇವೆ ಎಂಬಂತೆ ಪಾಕಿಸ್ತಾನದ ಕೆಲ ರಾಜಕಾರಣಿಗಳು ಕಿಚಾಯಿಸತೊಡಗಿದ್ದಾರೆ. ಸಾಲದ ಒತ್ತಡವು ಪಾಕಿಸ್ತಾನೀಯರ ಈ ವರ್ತನೆಗೆ ಕಾರಣವಾಗಿರಬಹುದು. ಪಾಕಿಸ್ತಾನಕ್ಕೆ ಯುಎಇ ನೀಡಿದ ಸಾಲದಲ್ಲಿ ಒಂದು ಭಾಗವನ್ನು ವಾಪಸ್ ಮಾಡುವಂತೆ ಕೇಳಲಾಗಿದೆ. ಮೂರು ಕಂತುಗಳಲ್ಲಿ ಪಾಕಿಸ್ತಾನ ಕಟ್ಟಬೇಕು. ಏಪ್ರಿಲ್ 11ರಂದು 450…

Read More

ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ದಾವಣಗೆರೆ, ಏಪ್ರಿಲ್ 8: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಈ ಚುನಾವಣೆಯಲ್ಲಿ ಭಾಗವಹಿಸುವ 1430 ಮಂದಿ ಚುನಾವಣಾ ಸಿಬ್ಬಂದಿಗಳ ಆರೋಗ್ಯ ಸುರಕ್ಷತೆಗೆ ಜಿಲ್ಲಾಡಳಿತ ವಿಶೇಷ ಗಮನ ಹರಿಸಿದೆ. ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತಗಟ್ಟೆಗಳಲ್ಲೇ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆಗಳಿಂದ ಮತಗಟ್ಟೆಗೆ ಬರಲು…

Read More