SSLC Exam: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

SSLC Exam: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ಬೆಂಗಳೂರು, ಏಪ್ರಿಲ್ 8: ರಾಜ್ಯದ ಎಸ್ಎಸ್​ಎಲ್​​ಸಿ (SSLC) ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇತ್ತೀಚೆಗೆ ಕ್ರಾಂತಿಕಾರಿ ನಿರ್ಧಾರ ಪ್ರಕಟಿಸಿದ್ದಾರೆ. ಇನ್ಮುಂದೆ ಎಸ್ಎಸ್​ಎಲ್​​ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕ ಇರುವುದಿಲ್ಲ. ಕೇವಲ ಗ್ರೇಡಿಂಗ್ (Grading system) ವ್ಯವಸ್ಥೆ ಇರಲಿದೆ. ಅಲ್ಲದೆ, ಈ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಮುಖವಾಗಿ ಹಿಂದಿ ಹೇರಿಕೆ ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದರೂ, ತೃತೀಯ ಭಾಷೆಯಾಗಿ ಕನ್ನಡ ಕಲಿಯುವವರಿಗೂ ಇದು ಅನ್ವಯವಾಗುತ್ತದೆ!

ಕರ್ನಾಟಕದಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತ, ಉರ್ದು ಇತ್ಯಾದಿ ಬೇರೆ ಭಾಷೆ ಕಲಿಯುವವರಿಗೆ ಕನ್ನಡ ಮೂರನೇ ಭಾಷೆಯಾಗಿರುತ್ತದೆ. ಹಾಗಾದರೆ ರಾಜ್ಯದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಎಷ್ಟು ತೃತೀಯ ಭಾಷೆಗಳಿವೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಭಾಷೆಗಳು ತೃತೀಯ ಭಾಷೆ ಪಟ್ಟಿಯಲ್ಲಿವೆ?

2025-26ನೇ ಶೈಕ್ಷಣಿಕ ಸಾಲಿನಿಂದ ಕರ್ನಾಟಕ ಎಸ್ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಒಟ್ಟು 9 ಭಾಷೆಗಳನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅವುಗಳೆಂದರೆ;

  • ಹಿಂದಿ
  • ಕನ್ನಡ
  • ಇಂಗ್ಲಿಷ್
  • ಉರ್ದು
  • ಸಂಸ್ಕೃತ
  • ಕೊಂಕಣಿ
  • ತುಳು
  • ಮರಾಠಿ
  • ಅರೇಬಿಕ್

ಪರೀಕ್ಷಾ ಅಂಕಗಳ ಲೆಕ್ಕಾಚಾರ ಬದಲಾವಣೆ

ಈ ಮೊದಲು ಎಸ್ಎಸ್​ಎಲ್​​ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಇದರಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಹೊಸ ನಿಯಮದಂತೆ ತೃತೀಯ ಭಾಷೆಯ ಅಂಕಗಳನ್ನು ಅಂತಿಮ ಫಲಿತಾಂಶದ ಒಟ್ಟು ಮೊತ್ತಕ್ಕೆ ಪರಿಗಣಿಸುವುದಿಲ್ಲ. ಹೀಗಾಗಿ, ಇನ್ಮುಂದೆ ಒಟ್ಟು ಅಂಕಗಳ ಸಂಖ್ಯೆ 525ಕ್ಕೆ ಇಳಿಕೆಯಾಗಲಿದೆ. ಈ ಭಾಷೆಗೆ ಬದಲಾಗಿ ಎ, ಬಿ, ಸಿ, ಡಿ ಎಂಬ ಗ್ರೇಡ್‌ಗಳನ್ನು ನೀಡಲಾಗುತ್ತದೆ.

ಗ್ರೇಡ್ ನಿರ್ಣಯ ಹೇಗೆ?

ಸದ್ಯ, ಎ, ಬಿ, ಸಿ, ಡಿ ಗ್ರೇಡ್ ನಿರ್ಣಯಿಸುವ ಬಗೆ ಹೇಗೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Airports: ಭಾರತದ ವಿಮಾನ ನಿಲ್ದಾಣಗಳಲ್ಲಿನ ಪಾರ್ಕಿಂಗ್​, ಲ್ಯಾಂಡಿಂಗ್ ಶುಲ್ಕ ಕಡಿತ

ನವದೆಹಲಿ, ಏಪ್ರಿಲ್ 08: ದೇಶಾದ್ಯಂತ ಎಲ್ಲಾ ಪ್ರಮುಖ ವಿಮಾನ ನಿಲ್ದಾಣ(Airport)ಗಳಲ್ಲಿ ದೇಶೀಯ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಈ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಡಿತವು ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಮೂರು ತಿಂಗಳ ನಂತರ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು AERA ಮಾರುಕಟ್ಟೆ ಪರಿಸ್ಥಿತಿಗಳು, ವಿಮಾನಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿ ಮತ್ತು ಉದ್ಯಮದ ಸವಾಲುಗಳನ್ನು ಪರಿಶೀಲಿಸುತ್ತದೆ.

ಎನ್​ಡಿಟಿವಿ ಪ್ರಾಫಿಟ್ ಪ್ರಕಾರ, ವಿಮಾನ ನಿಲ್ದಾಣ ಶುಲ್ಕದಲ್ಲಿನ ಈ ಕಡಿತವು ವಿಮಾನಯಾನ ಸಂಸ್ಥೆಗಳಿಗೆ ವೆಚ್ಚದ ಒತ್ತಡದಿಂದ ಪರಿಹಾರವನ್ನು ನೀಡುವ ನಿರೀಕ್ಷೆಯಿದೆ. ವಿಮಾನಯಾನ ಸಂಸ್ಥೆಗಳು ಈ ಪರಿಹಾರವನ್ನು ಪ್ರಯಾಣಿಕರಿಗೆ ವರ್ಗಾಯಿಸಬಹುದು ಎಂಬ ನಿರೀಕ್ಷೆ ಸ್ವಲ್ಪ ಕಡಿಮೆ ಇದೆ. ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಏರುತ್ತಿರುವ ಇಂಧನ ಬೆಲೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ಒತ್ತಡದಲ್ಲಿವೆ.

ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕಗಳು ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚಗಳಲ್ಲಿ ಗಮನಾರ್ಹ ಭಾಗವನ್ನು ಹೊಂದಿವೆ.ಈ ತಾತ್ಕಾಲಿಕ ಪರಿಹಾರವು AERA ನಿಯಂತ್ರಿಸುವ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಅನ್ವಯಿಸುತ್ತದೆ. ಗಗನಕ್ಕೇರುತ್ತಿರುವ ಇಂಧನ ಬೆಲೆಗಳು ಮತ್ತು ಜಾಗತಿಕ ಉದ್ವಿಗ್ನತೆಗಳ ನಡುವೆ ಸಂಕಷ್ಟದಲ್ಲಿರುವ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ.

ಮತ್ತಷ್ಟು ಓದಿ: ‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ ಪ್ರಶಸ್ತಿ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ: ವೇಗ, ಸ್ವಚ್ಛತೆ ಎಲ್ಲದರಲ್ಲೂ ನಂಬರ್​​ ಒನ್

ಪಶ್ಚಿಮ ಏಷ್ಯಾದ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿರುವುದಲ್ಲದೆ, ವಿಮಾನ ಮಾರ್ಗಗಳಲ್ಲಿನ ಬದಲಾವಣೆಗಳಿಂದಾಗಿ ವಿಮಾನಯಾನ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿರುವ ಸಮಯದಲ್ಲಿ ಈ ಐತಿಹಾಸಿಕ ಕ್ರಮವು ಬಂದಿದೆ. ಇದರರ್ಥ ವಿಮಾನಯಾನ ಸಂಸ್ಥೆಗಳು ಈಗ ರನ್‌ವೇ ಬಳಕೆ ಮತ್ತು ವಿಮಾನ ಪಾರ್ಕಿಂಗ್‌ಗೆ ಮೊದಲಿಗಿಂತ ಕಾಲು ಭಾಗದಷ್ಟು ಕಡಿಮೆ ಪಾವತಿಸಬೇಕಾಗುತ್ತದೆ.

ಪ್ರಸ್ತುತ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ (ಪಶ್ಚಿಮ ಏಷ್ಯಾ ಬಿಕ್ಕಟ್ಟು) ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರವು ತನ್ನ ಅಧಿಕೃತ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಯುದ್ಧ ಮತ್ತು ಅಂತಾರಾಷ್ಟ್ರೀಯ ಅಸ್ಥಿರತೆಯಿಂದಾಗಿ ವಾಯುಯಾನ ವಲಯದಲ್ಲಿ ಉಂಟಾಗುತ್ತಿರುವ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ಈ ತುರ್ತು ಪರಿಹಾರವನ್ನು ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಗುರಿನ ಎಷ್ಟು ಭಾಗ ಕತ್ತರಿಸಬೇಕು? ತಪ್ಪು ರೀತಿಯಲ್ಲಿ ಉಗುರು ಕಟ್ ಮಾಡಿದರೆ ಬೆರಳಿನ ಮಾಂಸಕ್ಕೆ ಅಪಾಯ

ನಮ್ಮ ದೇಹದ ಅತಿ ಸಣ್ಣ ಅಂಗವಾದ ಉಗುರುಗಳ ಬಗ್ಗೆ ನಾವು ತೋರುವ ನಿರ್ಲಕ್ಷ್ಯ ದೊಡ್ಡ ಆರೋಗ್ಯ ಸಮಸ್ಯೆಗೆ ದಾರಿಯಾಗಬಹುದು. ಅನೇಕರು ಉಗುರುಗಳನ್ನು ಅತಿಯಾಗಿ ಆಳವಾಗಿ ಕತ್ತರಿಸುತ್ತಾರೆ ಅಥವಾ ಹಲ್ಲುಗಳಿಂದ ಕಚ್ಚಿ ತೆಗೆಯುತ್ತಾರೆ. ಇದು ಬೆರಳಿನ ಮಾಂಸ ಮತ್ತು ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಚರ್ಮರೋಗ ತಜ್ಞರು ಎಚ್ಚರಿಸಿದ್ದಾರೆ.

ಉಗುರಿನ ತುದಿಯಲ್ಲಿ ಬೆಳೆದಿರುವ ಬಿಳಿ ಭಾಗವನ್ನು ಮಾತ್ರ ಕತ್ತರಿಸಬೇಕು. ಚರ್ಮ ಮತ್ತು ಉಗುರು ಸೇರುವ ಜಾಗದಿಂದ ಕನಿಷ್ಠ 1 ರಿಂದ 2 ಮಿಲಿಮೀಟರ್‌ ಅಂತರ ಬಿಡುವುದು ಕಡ್ಡಾಯ ಎಂದು ತಜ್ಞರು ಹೇಳುತ್ತಾರೆ. ಪಾದದ ಉಗುರುಗಳನ್ನು ಮೂಲೆಗಳಲ್ಲಿ ಅತಿಯಾಗಿ ಕತ್ತರಿಸುವ ಬದಲು ಯಾವಾಗಲೂ ನೇರವಾಗಿ ಕತ್ತರಿಸಬೇಕು. ಇದು ಉಗುರು ಮಾಂಸದೊಳಗೆ ಬೆಳೆಯುವುದನ್ನು ತಪ್ಪಿಸುತ್ತದೆ ಎಂಬುದು ವೈದ್ಯರ ಅಭಿಪ್ರಾಯ. ತಪ್ಪು ಕತ್ತರಿಸುವಿಕೆಯಿಂದ ಉಗುರು ಪಕ್ಕದ ಮಾಂಸದೊಳಗೆ ನುಗ್ಗಿ ವಿಪರೀತ ನೋವು ನೀಡುತ್ತದೆ. ಇದು ಹೆಚ್ಚಾಗಿ ಕಾಲ್ಬೆರಳುಗಳಲ್ಲಿ ಕಂಡುಬರುತ್ತದೆ.

ತಪ್ಪು ರೀತಿಯಲ್ಲಿ ಕತ್ತರಿಸುವುದರಿಂದ ಆಗುವ ಅಪಾಯಗಳು

ಇನ್‌ಗ್ರೋನ್ ನೇಲ್ : ನೀವು ಉಗುರುಗಳ ಮೂಲೆಗಳನ್ನು ತುಂಬಾ ಆಳವಾಗಿ ಕತ್ತರಿಸಿದಾಗ, ಹೊಸದಾಗಿ ಬೆಳೆಯುವ ಉಗುರು ಪಕ್ಕದ ಮಾಂಸದೊಳಗೆ ನುಗ್ಗುತ್ತದೆ. ಇದು ತೀವ್ರ ನೋವು, ಊತ ಮತ್ತು ಸೋಂಕಿಗೆ ಕಾರಣವಾಗುತ್ತದೆ.

ಪರೋನಿಚಿಯಾ: ಉಗುರಿನ ಸುತ್ತಲಿನ ಚರ್ಮಕ್ಕೆ ಹಾನಿಯಾದಾಗ ಬ್ಯಾಕ್ಟೀರಿಯಾಗಳು ಸುಲಭವಾಗಿ ಒಳಹೋಗುತ್ತವೆ. ಇದರಿಂದ ಬೆರಳಿನ ಸುತ್ತ ಕೀವು ತುಂಬಿಕೊಳ್ಳುವುದು ಮತ್ತು ಕೆಂಪಗಾಗುವುದು ಸಂಭವಿಸುತ್ತದೆ.

ಹೈಪರ್ ಸೆನ್ಸಿಟಿವಿಟಿ: ಉಗುರುಗಳು ಬೆರಳಿನ ತುದಿಗಳಲ್ಲಿರುವ ಸೂಕ್ಷ್ಮ ನರಗಳಿಗೆ ರಕ್ಷಣೆ ನೀಡುತ್ತವೆ. ಅತಿಯಾಗಿ ಕತ್ತರಿಸಿದಾಗ ವಸ್ತುಗಳನ್ನು ಮುಟ್ಟುವಾಗ ಬೆರಳುಗಳಲ್ಲಿ ಚುಚ್ಚಿದಂತಾಗುವ ಅಥವಾ ನೋವಿನ ಅನುಭವವಾಗಬಹುದು.

ಇದನ್ನೂ ಓದಿ: ಪ್ರತಿನಿತ್ಯ ಈ ಎಲೆ ತಿನ್ನಿ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ, ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತೆ

ವೈದ್ಯಕೀಯ ಸಲಹೆಗಳು:

ನೇಲ್ ಕಟರ್ ಮಾತ್ರ ಬಳಸಿ: ಬ್ಲೇಡ್, ಕತ್ತರಿ ಅಥವಾ ಹಲ್ಲುಗಳಿಂದ ಉಗುರು ಕಡಿಯುವುದು ಅತ್ಯಂತ ಅಪಾಯಕಾರಿ. ಇದು ಉಗುರುಗಳನ್ನು ಸೀಳುವಂತೆ ಮಾಡುತ್ತದೆ.

ಶುಚಿತ್ವಕ್ಕೆ ಆದ್ಯತೆ: ಉಗುರು ಕತ್ತರಿಸುವ ಮೊದಲು ಮತ್ತು ನಂತರ ನೇಲ್ ಕಟರ್ ಅನ್ನು ಆಲ್ಕೋಹಾಲ್ ಅಥವಾ ಸೋಪಿನ ನೀರಿನಿಂದ ಸ್ವಚ್ಛಗೊಳಿಸಿ.

ನೈಸರ್ಗಿಕ ಕವಚವನ್ನು ಮುಟ್ಟಬೇಡಿ: ಉಗುರಿನ ಬುಡದಲ್ಲಿರುವ ತೆಳುವಾದ ಚರ್ಮವನ್ನು (Cuticle) ಎಂದಿಗೂ ಕತ್ತರಿಸಬೇಡಿ. ಇದು ಸೋಂಕು ತಡೆಯುವ ನೈಸರ್ಗಿಕ ತಡೆಗೋಡೆಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Char Dham Yatra 2026: ಕೇದಾರನಾಥ-ಬದರಿನಾಥ ಯಾತ್ರಿಕರ ಗಮನಕ್ಕೆ! ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ

2026ರ ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯ ಋತುವು ಆರಂಭವಾಗುತ್ತಿದ್ದು, ಈ ಬಾರಿ ಕೇದಾರನಾಥ ಮತ್ತು ಬದರಿನಾಥ ಧಾಮಗಳಿಗೆ ಭೇಟಿ ನೀಡುವ ಭಕ್ತರು ತಮ್ಮ ಪ್ರಯಾಣದ ಬಜೆಟ್ ಸ್ವಲ್ಪ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಪೂಜಾ ಶುಲ್ಕಗಳನ್ನು ಪರಿಷ್ಕರಿಸಿದೆ ಮತ್ತು ಹೆಲಿಕಾಪ್ಟರ್ ಸೇವೆಗಳಿಗೂ ಹೊಸ ದರಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ಸಮಾಧಾನದ ಸಂಗತಿಯೆಂದರೆ, ದೇವಾಲಯಗಳಲ್ಲಿನ ಸಾಂಪ್ರದಾಯಿಕ ನಿಯಮಿತ ದರ್ಶನವು ಮೊದಲಿನಂತೆಯೇ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಹೆಲಿಕಾಪ್ಟರ್ ಸೇವೆ ಮತ್ತು ಹೊಸ ದರಗಳು:

ಹೆಲಿಕಾಪ್ಟರ್ ಸೇವೆಗಳಿಗಾಗಿ ಈ ವರ್ಷ ಹೊಸ ಟೆಂಡರ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದ್ದು, ಒಟ್ಟು ಎಂಟು ನಿರ್ವಾಹಕರು ವಿವಿಧ ಮಾರ್ಗಗಳಲ್ಲಿ ಸೇವೆ ಒದಗಿಸಲಿದ್ದಾರೆ. ಹೊಸ ದರದ ಅನ್ವಯ, ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಏಕಮುಖ ಪ್ರಯಾಣಕ್ಕೆ 6,077ರೂ., ಫಟಾದಿಂದ 4,840 ಮತ್ತು ಶಿರಸಿಯಿಂದ ರೂ. 3,043 ನಿಗದಿಪಡಿಸಲಾಗಿದೆ. ಈ ಬೆಲೆಗಳಿಗೆ ಜಿಎಸ್‌ಟಿ (GST) ಮತ್ತು ಆನ್‌ಲೈನ್ ಬುಕಿಂಗ್ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸುವುದರಿಂದ ಒಟ್ಟು ವೆಚ್ಚದಲ್ಲಿ ಏರಿಕೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಟಾ ಮಾರ್ಗದಲ್ಲಿ ಬೆಲೆ ಹೆಚ್ಚಳವು ಗಮನಾರ್ಹವಾಗಿದ್ದರೂ, ಶಿರಸಿ ಮಾರ್ಗದ ಪ್ರಯಾಣಿಕರಿಗೆ ದರವು ತುಲನಾತ್ಮಕವಾಗಿ ಸಮಾಧಾನಕರವಾಗಿದೆ.

ಕೇದಾರನಾಥದಲ್ಲಿ ಪೂಜಾ ಶುಲ್ಕಗಳ ಏರಿಕೆ:

ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಒಂದು ದಿನದ ಪೂಜಾ ಶುಲ್ಕವನ್ನು 28,600 ರಿಂದ 51,00 ರೂ.ಗೆ ಹೆಚ್ಚಿಸಲಾಗಿದ್ದು, ಇದು ಸುಮಾರು ಶೇ.78 ರಷ್ಟು ಹೆಚ್ಚಳವಾಗಿದೆ. ಉಳಿದಂತೆ ಮಹಾಭಿಷೇಕಕ್ಕೆ 11,500, ರುದ್ರಾಭಿಷೇಕಕ್ಕೆ 7,500 ರೂ. ಮತ್ತು ಅಖಂಡ ಜ್ಯೋತಿ ಬೆಳಗಿಸಲು 5,100 ರೂ. ನಿಗದಿಪಡಿಸಲಾಗಿದೆ. ಭಕ್ತರು ಶಿವ ಸಹಸ್ರನಾಮ ಪಠಣಕ್ಕೆ 2,500 ಮತ್ತು ಬಾಲಾ ಭೋಗ್ ನೈವೇದ್ಯಕ್ಕೆ 1,500 ರೂ. ಪಾವತಿಸಬೇಕಾಗುತ್ತದೆ.

ಬದರಿನಾಥ ಧಾಮದ ಪರಿಷ್ಕೃತ ದರಪಟ್ಟಿ:

ಬದರಿನಾಥ ಧಾಮದಲ್ಲಿಯೂ ಸಹ ವಿವಿಧ ಧಾರ್ಮಿಕ ವಿಧಿವಿಧಾನಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಇಲ್ಲಿ ಶ್ರೀಮದ್ ಭಾಗವತ ಕಥಾ ಶ್ರವಣದ ಶುಲ್ಕವನ್ನು 51,000 ರಿಂದ ನೇರವಾಗಿ 1,00,000ರೂ. ಕ್ಕೆ ಏರಿಸಲಾಗಿದೆ. ಹಾಗೆಯೇ ಮಹಾಭಿಷೇಕಕ್ಕೆ 5,500, ವೇದ ಮತ್ತು ಗೀತಾ ಪಠಣಕ್ಕೆ 6,000 ಹಾಗೂ ಅಖಂಡ ಜ್ಯೋತಿಗೆ 5,100 ನಿಗದಿಪಡಿಸಲಾಗಿದೆ. ಕಪೂರ್ ಆರತಿ ಮತ್ತು ಖೀರ್ ಭೋಗ್‌ನಂತಹ ಸೇವೆಗಳ ದರಗಳನ್ನೂ ಸಹ ಭಕ್ತರ ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಲಾಗಿದ್ದರೂ, ಒಟ್ಟಾರೆ ಪೂಜಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಯಾತ್ರಿಕರಿಗೆ ಮುನ್ನೆಚ್ಚರಿಕೆ:

ಈ ವರ್ಷ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯೋಜಿಸುತ್ತಿರುವ ಭಕ್ತರು, ತಮ್ಮ ಪ್ರಯಾಣದ ಯೋಜನೆಯನ್ನು ಸಿದ್ಧಪಡಿಸುವಾಗ ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ವಿಶೇಷ ಪೂಜೆಗಳನ್ನು ಮಾಡಿಸಲು ಇಚ್ಛಿಸುವವರು ಮತ್ತು ಹೆಲಿಕಾಪ್ಟರ್ ಸೇವೆಯನ್ನು ಬಳಸುವವರು ಹೆಚ್ಚುವರಿ ಜಿಎಸ್‌ಟಿ ಮತ್ತು ಸೇವಾ ತೆರಿಗೆಗಳನ್ನು ಒಳಗೊಂಡಂತೆ ವೆಚ್ಚವನ್ನು ಅಂದಾಜು ಮಾಡಿಕೊಳ್ಳಬೇಕು. ದರಗಳಲ್ಲಿ ಏರಿಕೆಯಾಗಿದ್ದರೂ, ಯಾತ್ರೆಯ ಪಾವಿತ್ರ್ಯತೆ ಮತ್ತು ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಸುಗಮಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲು

ಆಟೋ, ಬೈಕ್ ಗಳ ಹಿಂಭಾಗದಲ್ಲಿ ಬರೆದ ಬರಹಗಳನ್ನು ನೀವು ನೋಡಿದ್ದೀರಬಹುದು. ಕೆಲವು ಸಾಲುಗಳು ನಿಮ್ಮ ನಗುವಿಗೆ ಕಾರಣವಾಗುತ್ತದೆ. ಇನ್ನು ಕೆಲವು ಅರ್ಥಪೂರ್ಣ ಸಾಲುಗಳನ್ನು ನೋಡಿದಾಗ ಆಟೋ ಚಾಲಕನ (auto driver) ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುತ್ತೇವೆ. ಇದೀಗ ಆಟೋ ಚಾಲಕನೊಬ್ಬ ಬಾಡಿಗೆ ಇದ್ರೆ ಕಾಲ್ ಮಾಡಿ ಎಂದು ಈ ಸಾಲಿನ ಮೂಲಕ ಹೇಳಿದ್ದಾನೆ. ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು ಆಟೋ ಹಿಂಬದಿ ಬರೆದ ಸಾಲು ನೆಟ್ಟಿಗರ ಗಮನ ಸೆಳೆಯುತ್ತಿದೆ.

raviraj. naik ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಟೋದ ಹಿಂಬದಿ ಬರೆದ ಅರ್ಥಪೂರ್ಣ ಸಾಲುಗಳನ್ನು ನೋಡಬಹುದು. ಆಟೋ ಚಾಲಕನು, ತನ್ನ ಆಟೋದ ಹಿಂದೆ ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬದುಕು ನಿತ್ಯ ನಿರಂತರ ಹೋರಾಟ; ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ

ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನನ್ನ ಆಟೋ ಹಿಂದೆ ಈ ಲೈನ್ 10 ವರ್ಷ ಹಿಂದೆ ಇದ್ದಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಣ್ಣ ನಂಬರ್ ಕೊಡು ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ಅಣ್ಣನ ಬುದ್ಧಿವಂತಿಕೆಗೆ ನೀವು ಮೆಚ್ಚುಗೆ ನೀಡಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪ್ರವಾಸಿಗರನ್ನೇ ದಿಟ್ಟಿಸಿ ನೋಡುತ್ತಾ ಸಾಗಿದ ಹುಲಿರಾಯನ ಖದರ್ ನೋಡಿ!

ಮೈಸೂರು, ಏಪ್ರಿಲ್ 08: ಜಿಲ್ಲೆಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದೆ. ಹೆಚ್.ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಈ ಹುಲಿ, ಗಾಂಭೀರ್ಯದಿಂದ ನಡೆದು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಪ್ರವಾಸಿಗರತ್ತ ದಿಟ್ಟಿಸಿ ನೋಡುತ್ತಲೇ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಫಾರಿ ಪ್ರಿಯರಿಗೆ ಭರ್ಜರಿ ಅನುಭವ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (Samai Raina) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿದ್ದ ಸಮಯ್ ರೈನಾ, ಯೂಟ್ಯೂಬ್​​ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಭಾರಿ ದೊಡ್ಡ ಹಿಟ್ ಆಗಿತ್ತು. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದಾಗಿ ಶೋ ಅನ್ನು ಬಂದ್ ಮಾಡಿದ್ದು, ಮಾತ್ರವಲ್ಲದೆ ಹಳೆಯ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಯ್ತು ಸಮಯ್ ರೈನಾ. ಪೊಲೀಸ್ ಎಫ್​ಐಆರ್, ಹಲವು ಕೇಸುಗಳ ಬಳಿಕ ಈ ಶೋ ಮತ್ತೆ ಪ್ರಾರಂಭವೇ ಆಗುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಸ್ವತಃ ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಮೇಲೆ ಕೇಸು ದಾಖಲಾಗಿತ್ತು. ಶೋಗೆ ಅತಿಥಿಯಾಗಿ ಆಗಮಿಸಿದ್ದ ಮತ್ತೊಬ್ಬ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಹೇಳಿದ್ದ ಒಂದು ಕೆಟ್ಟ ಜೋಕಿನಿಂದಾಗಿ ಶೋ ಮೇಲೆ ಹಾಗೂ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಲವರ ಮೇಲೆ ಹಲವಾರು ಕೇಸುಗಳು ದಾಖಲಾಗಿದ್ದವು. ಸಮಯ್ ರೈನಾ, ಸಹ ಆಗಿನಿಂದ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ, ಆದರೆ ಇದೀಗ ತಮ್ಮ ಹೊಸ ಸ್ಟಾಂಡಪ್​​ ನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಬಯಸಿದ್ದರೂ ಸಹ ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಅದು ಅಷ್ಟು ಜನಪ್ರಿಯತೆ ಇದ್ದಾಗ ಮುಕ್ತಾಯ ಮಾಡಲು ಆಗುತ್ತಿರಲಿಲ್ಲ, ಆದರೆ ಈಗ ಮುಕ್ತಾಯ ಆಗಿರುವುದು ಸೀಸನ್ 1 ಮಾತ್ರ’ ಎಂದಿದ್ದಾರೆ. ಆ ಮೂಲಕ ‘ಇಂಡಿಯಾ ಗಾಟ್ ಲೇಟೆಂಟ್ ಸೀಸನ್ 2’ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಯ್ ರೈನಾ.

ಇದನ್ನೂ ಓದಿ:‘ಇಂಡಿಯಾಸ್ ಗಾಟ್ ಲೇಟೆಂಟ್’ ಪುನರಾರಂಭ ಯಾವಾಗ? ಸಮಯ್ ರೈನಾ ಉತ್ತರವೇನು?

‘ಇಂಡಿಯಾ ಗಾಟ್ ಲೇಟೆಂಟ್’ ವಿವಾದ ಆದಾಗ ಅನುಭವಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಸಮಯ್ ರೈನಾ, ‘ನಾನು ಅಪ್​​ಲೋಡ್ ಮಾಡಿದ ವಿಡಿಯೋದಿಂದ ಹಲವಾರು ಮಂದಿ ತೊಂದರೆಗೆ ಒಳಗಾದರು. ಶೋ ನಡೆದ ಹ್ಯಾಬಿಟಾಟ್ ಜಾಗದ ಮಾಲೀಕ ಬಲರಾಜ್ ಮತ್ತು ಅವರ ವಯ್ಯಸ್ಸಾದ ಪೋಷಕರು ಪೊಲೀಸರಿಂದ ತೀವ್ರ ಕಷ್ಟ ಅನುಭವಿಸುವಂತಾಯ್ತು. ರಣ್ವೀರ್ ಅವರ ತಾಯಿಯ ಕ್ಲಿನಿಕ್ ಮೇಲೆ ದಾಳಿ ಮಾಡಲಾಯ್ತು, ಅಪೂರ್ವಗೆ ಕೊಲೆ ಬೆದರಿಕೆಗಳು ಬಂದವು. ನನ್ನ ಮೇಲೆ ಹಲವಾರು ಎಫ್​​ಐಆರ್​​ಗಳು ದಾಖಲಾದವು, ಹ್ಯಾಬಿಟಾಟ್ ಅನ್ನು ಒಡೆದು ಹಾಕಿದರು’ ಎಂದೆಲ್ಲ ನೋವಿನಿಂದ ಸಮಯ್ ರೈನಾ ಹೇಳಿದ್ದಾರೆ.

ಆ ಕಷ್ಟದ ಸಮಯದಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಮೀಡಿಯಾದವರು, ರಾಜಕಾರಣಿಗಳು ವಿಶೇಷವಾಗಿ ನ್ಯೂಸ್ ಚಾನೆಲ್​​ಗಳವರಿಗೆ ಸಮಯ್ ರೈನಾ ತಮ್ಮ ಹೊಸ ಸ್ಟಾಂಡಪ್​​ನಲ್ಲಿ ತಿರುಗೇಟು ನೀಡಿದ್ದಾರೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ 2’ ಮಾಡುತ್ತಿರುವುದನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಸ್​ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Source link

ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಏಪ್ರಿಲ್ 08: ಹೆಂಡತಿಯ ಅಕ್ರಮ ಸಂಬಂಧಕ್ಕೆ (Extramarital Affair) ಗಂಡ ಬಲಿಯಾದ ಘಟನೆ ಮಾರ್ಚ್ 26 ರಂದು ಬೊಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಪ್ರಿಯಕರ ಆಕೆಯ ಪತಿಯೊಂದಿಗೆ ಸ್ನೇಹ ಬೆಳೆಸಿ, ಮಧ್ಯಪಾನ ಮಾಡಿಸಿ ಕೊನೆಗೆ ಚಾಕುವಿನಿಂದ ಕತ್ತು ಸೀಳಿ ಆತನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದ್ಯಪಾನ ಮಾಡಿಸಿ ಕತ್ತು ಸೀಳಿದ

ಮೃತ ವ್ಯಕ್ತಿಯನ್ನು 42 ವರ್ಷದ ಸುನಿಲ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿ ಬಸುದೇವ್ ಮಲಿಕ್ ಮತ್ತು ಸುನಿಲ್ ನಾಯಕ್ ಅವರ ಪತ್ನಿ ಪುಷ್ಪ ನಡುವೆ ಅಕ್ರಮ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಲಿಕ್, ಸುನಿಲ್ ನಾಯಕ್ ಜೊತೆ ಸ್ನೇಹ ಬೆಳೆಸಿ, ಅವರೊಂದಿಗೆ ಮದ್ಯಪಾನ ಮಾಡುತ್ತಿದ್ದನು. ಬಳಿಕ ಸೂಕ್ತ ಸಂದರ್ಭ ನೋಡಿಕೊಂಡು ಸುನಿಲ್ ನಾಯಕ್ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

ಆರೋಪಿಯ ಬಂಧನ

ಮಾರ್ಚ್ 26ರಂದು ಘಟನೆ ನಡೆದಿದ್ದು, ಮಾಲಿಕ್ ಚಾಕುವಿನಿಂದ ಸುನಿಲ್ ನಾಯಕ್ ಅವರ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬೆಂಗಳೂರು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸಮೀಪದ ಬಾರ್ ಬಳಿ ಎಸೆದು ಪರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹತ್ಯೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RBI Policy: ಆರ್​ಬಿಐನಿಂದ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹಣದುಬ್ಬರ ಶೇ. 4.6 ಎಂದು ಅಂದಾಜು

ನವದೆಹಲಿ, ಏಪ್ರಿಲ್ 8: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಸಮಿತಿಯು (RBI MPC meeting) ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್​ಬಿಐನ ರಿಪೋ ದರ ಅಥವಾ ಬಡ್ಡಿದರವು (Repo Rate) ಶೇ. 5.25ರಲ್ಲಿ ಮುಂದುವರಿಯಲಿದೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದರಿಂದ ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿ ಕರೆದು ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

2026-27ರಲ್ಲಿ ಶೇ. 4.6 ಹಣದುಬ್ಬರ

ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್​ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್​ನಲ್ಲಿ ಶೇ. 4, ಎರಡನೇ ಕ್ವಾರ್ಟರ್​ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್​ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್​ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್​ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ.

ಇನ್ನಷ್ಟು ಮಾಹಿತಿ ನಿರೀಕ್ಷಿಸಿ….

Source link

Exit mobile version