ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು

ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು

ಆ್ಯಂಕ್ ಅನುಶ್ರೀ (Anushree) ಅವರು ಹಲವು ಕಷ್ಟಗಳನ್ನು ನೋಡಿ ಇಲ್ಲಿವರೆಗೆ ಬಂದಿದ್ದಾರೆ. ಹಲವು ಏರಿಳಿತಗಳನ್ನು ಅವರು ಕಂಡಿದ್ದಾರೆ. ಅವರು ತುಂಬಾನೇ ಕಷ್ಟಪಟ್ಟು ಇಲ್ಲಿವರೆಗೆ ಬಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಇದೆಲ್ಲವನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಆದಾಗ್ಯೂ ಅವರಲ್ಲಿ ಒಂದು ಬೇಸರ ಇದೆ. ಈ ವಿಷಯವಾಗಿ ಅನುಶ್ರೀ ಅವರು ಮಾತನಾಡಿದ್ದಾರೆ.

ಆರ್ಜೆ ಮಯೂರ್ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು ಇದಕ್ಕೆ , ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಅನುಶ್ರೀ ಅವರು ಸದಾ ಸಂದರ್ಶನ ಮಾಡುತ್ತಿರುವವರು. ಅವರು ಈಗ ಸಂದರ್ಶನ ನೀಡಿದ್ದಾರೆ. ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮಹಿಳಾ ಸೆಲೆಬ್ರಿಟಿಗಳು ಅಥವಾ ಚಿತ್ರರಂಗ ಯಾವುದೇ ಹೀರೋಯಿನ್ಗಳು ಇರಲಿ ಅವರು ಹೊಸ ಕಾರು ಖರೀದಿ ಮಾಡಿದರು, ಮನೆ ಖರೀದಿ ಮಾಡಿದರು ಎಂದರೆ ಅದನ್ನು ಬೇರೆಯದೇ ರೀತಿಯಲ್ಲಿ ನೋಡಲಾಗುತ್ತದೆ ಎಂಬುದು ಅನುಶ್ರೀ ಅಭಿಪ್ರಾಯ. ಈ ಅಭಿಪ್ರಾಯವನ್ನು ಅವರು ಓಪನ್ ಆಗಿ ಹೊರಹಾಕಿದರು.

‘ಅನುಶ್ರೀನೇ ಯಾಕೆ ಅಂತ ಅಲ್ಲ, ಮಹಿಳೆಯರೇ ಟಾರ್ಗೆಟ್ ಯಾಕೆ ಅನ್ನೋದು ಪ್ರಶ್ನೆ. ಮಯೂರ 1 ಕೋಟಿ ರೂಪಾಯಿ ಮನೆ ಖರೀದಿ ಮಾಡಿದ್ರು ಅಂದ್ರೆ ಅದು ಸಾಧನೆ. ಆದರೆ, ಅನುಶ್ರೀ ಮನೆ ತೆಗೆದುಕೊಂಡ್ರೆ ಅದು ಸಾಧನೆ ಅಲ್ಲ, ಬೇರೆನೆ’ ಎಂದು ಅನುಶ್ರೀ ಅವರು ವಿವರಿಸಿದರು.

ಫಿಸಿಕಲ್ ರೇಪ್ ಬೇರೆ, ಮೆಂಟಲ್ ರೇಪ್ ಕೂಡ ಇದೆ. ಕೆಲವರು ಸೈಕೋಗಳು ಕೆಟ್ಟ ರೀತಿಯಲ್ಲಿ ಮಾತನಾಡುತ್ತಾರೆ. ಕೆಟ್ಟ ಕೆಟ್ಟ ಕಮೆಂಟ್ಗಳನ್ನು ಹಾಕುತ್ತಾರೆ. ಕರ್ಕೊಂಡು ಹೋಗಿ ಕಾರಪುಡಿ ಹಾಕಬೇಕು ಎಂದೆಲ್ಲ ಹೇಳುತ್ತಾರೆ. ಈ ರೀತಿಯ ಶಬ್ದಗಳು, ಈ ರೀತಿಯ ಪದಗಳು ನೋವು ತರಿಸುತ್ತವೆ ಎಂದು ಅನುಶ್ರೀ ಬೇಸರ ಹೊರಹಾಕಿದರು.

ಇದನ್ನೂ ಓದಿ: ‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

ಅನುಶ್ರೀ ಅವರು ನೇರ ಮಾತುಗಳಿಗೆ ಖ್ಯಾತಿ ಪಡೆದವರು. ಅವರು ಏನೇ ಆದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ತಮಗೆ ಬರುವ ಟೀಕೆ ಬಗ್ಗೆ ಅವರು ಹಲವು ಬಾರಿ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದು ಇದೆ. ಈಗ ಅವರು ಈಗ ಹೊಸ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಸುವಿನ ಕಾಲನ್ನು ಟ್ರಕ್​ಗೆ ಕಟ್ಟಿ ದರ ದರನೆ ಎಳೆದ ರಭಸಕ್ಕೆ ಕಾಲೇ ಕಿತ್ತು ಬಂತು

ಒಡಿಶಾ, ಏಪ್ರಿಲ್ 06: ವ್ಯಕ್ತಿಯೊಬ್ಬ ಹಸು(Cow)ವಿನ ಕಾಲನ್ನು ಟ್ರಕ್​ಗೆ ಕಟ್ಟಿ ದರದರನೆ ಎಳೆದೊಯ್ದ ಪರಿಣಾಮ ಅದರ ಕಾಲೇ ಕಿತ್ತು ಬಂದಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್​ಭಂಜ್​ನಲ್ಲಿ ನಡೆದಿದೆ. ಟ್ರಕ್ ಚಾಲಕನೊಬ್ಬ ಹಸುವನ್ನು ತನ್ನ ವಾಹನದ ಹಿಂದೆ ಕಟ್ಟಿ ಹಲವಾರು ಮೀಟರ್‌ಗಳಷ್ಟು ಎಳೆದುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ-49 ರಲ್ಲಿ ಈ ಘಟನೆ ನಡೆದಿದ್ದು, ಚಾಲಕನನ್ನು ತಕ್ಷಣ ಬಂಧಿಸಿ ಭಾರೀ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಸುವಿನ ಹಿಂಗಾಲುಗಳನ್ನು ಹಗ್ಗದಿಂದ ಕಟ್ಟಿ ಟ್ರಕ್​ನ ಹಿಂಭಾಗಕ್ಕೆ ಕಟ್ಟಲಾಗಿತ್ತು. ನಂತರ ರಸ್ತೆಯ ಉದ್ದಕ್ಕೂ ಎಳೆದೊಯ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ. ಹಸುವಿನ ಒಂದು ಕಾಲು ಕಾಣೆಯಾಗಿದ್ದು, ದೇಹವು ತೀವ್ರವಾಗಿ ವಿರೂಪಗೊಂಡಿತ್ತು.

ಪೊಲೀಸರ ಪ್ರಾಥಮಿಕ ಹೇಳಿಕೆಗಳು ಕ್ರೌರ್ಯಕ್ಕೆ ಕಾರಣವಾದ ಘಟನೆಗಳ ಸಂಕೀರ್ಣ ಅನುಕ್ರಮವನ್ನು ಸೂಚಿಸುತ್ತವೆ. ಆರಂಭದಲ್ಲಿ ಹಸುವಿಗೆ ಅದೇ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಆ ಹಸು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: ಮನೆ ಒಡತಿಯ ಮಾತು ಕೇಳಿ ಕರುವನ್ನು ಮುದ್ದಿಸಿದ ಹಸು

ಡಿಕ್ಕಿಯ ನಂತರ, ಸ್ಥಳೀಯರು ಚಾಲಕನಿಗೆ ಮೃತದೇಹವನ್ನು ಅಲ್ಲಿಂದ ತೆರವುಗೊಳಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಸರಿಯಾದ ವಿಲೇವಾರಿ ಸೇವೆಗಳ ಮೂಲಕ ದೇಹವನ್ನು ಸ್ಥಳಾಂತರಿಸುವ ಬದಲು, ಚಾಲಕ ಪ್ರಾಣಿಯನ್ನು ತನ್ನ ಟ್ರಕ್‌ಗೆ ಜೋಡಿಸಿ ಸ್ಥಳದಿಂದ ದೂರ ಎಳೆದುಕೊಂಡು ಹೋಗಿದ್ದಾನೆ.

ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲು ಅನೇಕ ನಿವಾಸಿಗಳು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ಪ್ರಾಣಿ ಕಲ್ಯಾಣ ಕಾನೂನುಗಳ ಪ್ರಕಾರ ನ್ಯಾಯ ಒದಗಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್​​ನಲ್ಲೂ ಆಂದೋಲನ

ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಒಂದು ಆಂದೋಲನ ಆರಂಭಿಸಿದ್ದರು. ಪಾರಾಜಿಗಳು ಒಪ್ಪಿಗೆ ಇಲ್ಲದೆ ಬೇಕಾಬಿಟ್ಟಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡುತ್ತಿದ್ದರು. ಇದನ್ನು ಸಪ್ತಮಿ ಗೌಡ ಅವರು ಖಂಡಿಸಿದ್ದರು. ಇದಕ್ಕೆ ಅನೇಕ ನಟಿಯರು ಬೆಂಬಲ ಸೂಚಿಸಿದ್ದರು. ಈಗ ಬಾಲಿವುಡ್​​ ಅಲ್ಲೂ ಇದೇ ರೀತಿ ಆಂದೋಲನ ಶುರುವಾಗುವ ಸೂಚನೆ ಸಿಕ್ಕಿದೆ.

ಕನ್ನಡಕ್ಕಿಂತ ಹಿಂದಿಯಲ್ಲಿ ಪಾಪರಾಜಿ ಸಂಸ್ಕೃತಿ ಮೊದಲು ಬಂದಿದೆ. ಅಲ್ಲಿನ ನಟಿಯರು ಅನೇಕ ಬಾರಿ ಈ ಬಗ್ಗೆ ತಕರಾರರು ತೆಗೆದಿದ್ದಾರೆ. ಈಗ ಜಾನ್ವಿ ಕಪುರ್ ಅವರು ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ದೇಹದ ಕೆಲವು ಭಾಗಗಳನ್ನು ಜೂಮ್ ಮಾಡೋದು ಸರಿ ಅಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

‘ಪಾಪರಾಜಿ ಜೊತೆ ಇತ್ತೀಚೆಗೆ ನಾನು ಮಾತನಾಡಿದೆ. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಉಡುಗೆ ತೊಟ್ಟಿರುತ್ತೇವೆ. ಹಾಗಂದ ಮಾತ್ರಕ್ಕೆ ಅವರು ನಿರ್ದಿಷ್ಟ ದೇಹದ ಭಾಗಗಳನ್ನು ಮಾತ್ರ ಜೂಮ್ ಮಾಡಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಅವರು ಹಣ ಮಾಡಿಕೊಳ್ಳಲು, ವೀವ್ಸ್ ಪಡೆದುಕೊಳ್ಳಲು ಮಹಿಳೆಯ ದೇಹವನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಜಾನ್ವಿ ಆಕ್ರೋಶ ಹೊರಹಾಕಿದ್ದಾರೆ.

‘ಗ್ರಾಹಕರಂತೆ ಕಾಣುತ್ತಿತ್ತು, ಆದರೆ ವಿಷಯವು ದೊಡ್ಡದಾಗಿದೆ – ಇದು ಬಳಕೆಯ ಬಗ್ಗೆ. ಜಾಗತಿಕವಾಗಿ, ಮಹಿಳೆಯರನ್ನು ವಸ್ತುನಿಷ್ಠವಾಗಿ ಚಿತ್ರಿಸುವ ವಿಷಯವು ಹೆಚ್ಚು ಬಳಕೆಯಲ್ಲಿದೆ. ಅದಕ್ಕಾಗಿಯೇ ಅದು ನಿರಂತರವಾಗಿ ಪ್ರಸಾರವಾಗುತ್ತಿದೆ. ನೀವು ಗ್ಲಾಮರ್‌ನಲ್ಲಿ ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ, ಅದು ನಿಮಗೆ ಹೆಚ್ಚು ಸಂಭವಿಸುತ್ತದೆ’ ಎಂದಿದ್ದಾರೆ.

‘ಮಹಿಳೆಯರನ್ನು ಕೆಟ್ಟದಾಗಿ ತೋರಿಸೋದು ವಿಶ್ವ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ನೋಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದು ಪ್ರಸಾರ ಆಗುತ್ತಲೇ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿ ಆದರೆ, ಈ ರೀತಿಯ ತೊಂದರೆ ಹೆಚ್ಚು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರೈಲರ್ ಬಿಡುಗಡೆಗೆ ಆಹ್ವಾನಿಸಿದ ಸಪ್ತಮಿ ಗೌಡ, ನೀನಾಸಂ ಸತೀಶ್

‘ನಾನು ಯಾವುದಕ್ಕೆ ಒಪ್ಪಿಗೆ ನೀಡಿದ್ದೇನೆ ಎಂಬುದನ್ನು ಪ್ರತಿ ಹಂತದಲ್ಲೂ ನೀವು ಕೇಳಬೇಕು. ನಾನು ‘ಭೀಗಿ ಸಾದಿ’ ಎಂಬ ಹಾಡನ್ನು ಮಾಡಿದ್ದೇನೆ. ಅಲ್ಲಿ ನಾನು ಒದ್ದೆಯಾದ ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಯಾರಾದರೂ ಅದನ್ನು ಆಕರ್ಷಕ ಎಂದುಕೊಂಡರೆ ನನಗೆ ತೊಂದರೆ ಇಲ್ಲ. ಆದರೆ ಸಮ್ಮತಿಯಿಲ್ಲದೆ ಯಾರನ್ನಾದರೂ ತಪ್ಪಾಗಿ ತೋರಿಸುವುದು ಸರಿ ಅಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ

ಹುಬ್ಬಳ್ಳಿ, ಏ.6: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್​​​ ಪಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆರಡು ವಿಡಿಯೋಗಳನ್ನು ಯುವತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​​​ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಮತ್ತೊಮ್ಮೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.

“ನಿನ್ನೆ ವೈರಲ್ ಆಗಿರುವ ವಿಡಿಯೋಗಳು ಸುಮಾರು ಒಂದು ವರ್ಷದ ಹಿಂದಿನವು. ಆರೋಪಿ ಮುಪಿಜ್ ಮಿಯಾನವರ ನನ್ನ ಖಾಸಗಿ ಕ್ಷಣಗಳ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆತ ಹೇಳಿದಂತೆ ನಾನು ವಿಡಿಯೋದಲ್ಲಿ ಮಾತನಾಡದಿದ್ದರೆ ಆ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆತನ ಒತ್ತಾಯಕ್ಕೆ ಮಣಿದು ನಾನು ಅಂದು ಆತನ ಪರವಾಗಿ ವಿಡಿಯೋ ಮಾಡಿದ್ದೆ. ಆದರೆ ಈಗ ಅದನ್ನೇ ಬಳಸಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ವಿಡಿಯೋ ವೈರಲ್ ಮಾಡುವ ಹಿಂದೆ ಸ್ಥಳೀಯ ಕಾಂಗ್ರೆಸ್ ಮುಖಂಡನ ಕೈವಾಡವಿದೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ. “ಅಣ್ಣಾ, ನನಗೆ ಅನ್ಯಾಯವಾದಾಗ ಬಂದು ನನ್ನ ನೋವನ್ನು ಒಮ್ಮೆಯೂ ಕೇಳದ ನೀವು, ಈಗ ಹಳೆ ವಿಡಿಯೋಗಳನ್ನು ವೈರಲ್ ಮಾಡಿಸುತ್ತಿದ್ದೀರಿ. ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಮಗಳಿಗೆ ಹೀಗಾಗಿದ್ದರೆ ನೀವು ಸುಮ್ಮನಿರುತ್ತಿದ್ದೀರಾ?” ಎಂದು ಯುವತಿ ಆಕ್ರೋಶಭರಿತವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲವ್​​​ ಜಿಹಾದ್​ ಪ್ರಕರಣ: ಸಮೀರ್ ಲೀಲೆಗಳು ಒಂದೊಂದಾಗಿ ಬಯಲು: ಮತ್ತೊಂದು ವಿಡಿಯೋ ವೈರಲ್

ಕೇಶ್ವಾಪುರ ಠಾಣೆಯಲ್ಲಿ ಮುಪಿಜ್ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಈ ಹಿಂದೆ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಪ್ರಕರಣದ ಬೆನ್ನಲ್ಲೇ ಈ ಎರಡನೇ ಪ್ರಕರಣ ಬೆಳಕಿಗೆ ಬಂದಿರುವುದು ನಗರದಲ್ಲಿ ಆತಂಕ ಮೂಡಿಸಿದೆ. ಹಳೆಯ ವಿಡಿಯೋಗಳನ್ನು ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಸಂತ್ರಸ್ತೆಯ ಪರವಾಗಿ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

VIDEO: ವಿರಾಟ್ ಕೊಹ್ಲಿಯನ್ನು ಕೆಣಕಿ ಕೆಟ್ಟ CSK

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದಮೇಲೆ ಅಲ್ಲಿ ಕೇವಲ ರನ್‌ಗಳ ಮಳೆ ಮಾತ್ರವಲ್ಲ, ಆಟಗಾರರ ನಡುವಿನ ವಾಕ್ಸಮರವೂ ಅಷ್ಟೇ ಜೋರಾಗಿರುತ್ತದೆ. ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂತಹದ್ದೇ ಒಂದು ಘಟನೆ ಅಭಿಮಾನಿಗಳ ಗಮನ ಸೆಳೆಯಿತು. ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಮತ್ತು ಆರ್‌ಸಿಬಿ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಯಿತು.

ಪಂದ್ಯದ ಮೂರನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಎಸೆದ ವೇಗದ ಎಸೆತವೊಂದನ್ನು ಹೊಡೆಯಲು ವಿರಾಟ್ ಕೊಹ್ಲಿ ವಿಫಲರಾದರು. ಈ ವೇಳೆ ಕೊಹ್ಲಿ ಹತ್ತಿರ ಬಂದ ಖಲೀಲ್ ಏನೋ ಅಂದಿದ್ದಾರೆ. ಇದರಿಂದ ಕೆರಳಿದ ವಿರಾಟ್ ಕೊಹ್ಲಿ, ಕೂಡಲೇ ಖಲೀಲ್ ಅವರ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಿ ತಕ್ಕ ಪ್ರತ್ಯುತ್ತರ ನೀಡಿದರು. ಅಂಪೈರ್ ಮಧ್ಯಪ್ರವೇಶಿಸುವವರೆಗೂ ಇಬ್ಬರ ನಡುವೆ ಕಾವೇರಿದ ಚರ್ಚೆ ನಡೆಯಿತು.

ಬ್ಯಾಟ್ ಮೂಲಕವೇ ಉತ್ತರ ನೀಡಿದ ಕೊಹ್ಲಿ:

ಬೌಲರ್ ಕೆಣಕಿದರೆ ಸುಮ್ಮನೆ ಕೂರುವ ಆಟಗಾರ ಕೊಹ್ಲಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಮುಂದಿನ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತವಾದ ‘ನೋ-ಲುಕ್’ (No-look) 85 ಮೀಟರ್‌ಗಳ ಸಿಕ್ಸರ್ ಸಿಡಿಸುವ ಮೂಲಕ ಮೈದಾನದಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದು ಖಲೀಲ್ ಅವರ ಸ್ಲೆಡ್ಜಿಂಗ್‌ಗೆ ಕೊಹ್ಲಿ ನೀಡಿದ ಉತ್ತರವಾಗಿತ್ತು.

ಅದುವರೆಗೂ ತದೇಕಚಿತ್ತದಿಂದ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಕೆಣಕಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಅಲ್ಲಿಂದ ಶುರುವಾದ ಆರ್​ಸಿಬಿ ತಂಡದ ಸಿಡಿಲಬ್ಬರ ನಿಂತದ್ದು 20ನೇ ಓವರ್​ನಲ್ಲಿ. ಅಂದರೆ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ನೀಡಿದ ಕೊಹ್ಲಿಯನ್ನು ಕೆಣಕಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ತಪ್ಪು ಮಾಡಿತು.

ಪರಿಣಾಮ ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 28 ರನ್ ಬಾರಿಸಿ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಸಿಡಿಲಬ್ಬರವನ್ನು ಮುಂದುವರೆಸುವ ಮೂಲಕ ಆರ್​ಸಿಬಿ 20 ಓವರ್​ಗಳಲ್ಲಿ 250 ರನ್ ಕಲೆಹಾಕಿತು. ಇದನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್​ಗಳಲ್ಲಿ 207 ರನ್​​ಗಳಿಸಿ, 43 ರನ್‌ಗಳಿಂದ ಸೋಲೊಪ್ಪಿಕೊಂಡಿತು.

 

Source link

Bengaluru Air Quality: ಉಡುಪಿ, ಮಂಗಳೂರು ಸೇರಿ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ ಉತ್ತಮ

ಬೆಂಗಳೂರು, ಏಪ್ರಿಲ್ 06: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality)  ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 97ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 97
  • ಮಂಗಳೂರು-87
  • ಮೈಸೂರು –100
  • ಬೆಳಗಾವಿ – 130
  • ಕಲಬುರ್ಗಿ-88
  • ಶಿವಮೊಗ್ಗ – 94
  • ಬಳ್ಳಾರಿ – 91
  • ಹುಬ್ಬಳ್ಳಿ- 112
  • ಉಡುಪಿ –85
  • ವಿಜಯಪುರ –86

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಂಟೆಗಳಲ್ಲೇ RCB ದಾಖಲೆಯನ್ನ ಉಡೀಸ್ ಮಾಡಿದ CSK

Source link

Sanju Samson: ಧೋನಿ ಇಲ್ಲದೆ ಸಿಎಸ್​ಕೆ ನಿಷ್ಪ್ರಯೋಜಕ: ರುತುರಾಜ್-ಸ್ಯಾಮ್ಸನ್​ಗೆ 36 ಕೋಟಿ ಹಾಕಿದ್ದು ವೇಸ್ಟ್..?

ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026 ಅನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಅತ್ಯಂತ ದುಬಾರಿ ತಂತ್ರದೊಂದಿಗೆ ಪ್ರಾರಂಭಿಸಿತು. ಆದರೆ ಮೊದಲ ಮೂರು ಪಂದ್ಯಗಳ ನಂತರ, ಈ ನಡೆ ಉಲ್ಟಾ ಹೊಡೆದಂತೆ ಕಾಣುತ್ತದೆ. ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪ್ರಮುಖ ವ್ಯಾಪಾರ ಒಪ್ಪಂದದಲ್ಲಿ ಸಿಎಸ್​ಕೆ ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿಗೆ ಸಹಿ ಹಾಕಿತು. ಸಂಜು ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (₹18 ಕೋಟಿಗೆ ಉಳಿಸಿಕೊಂಡ) ಜೋಡಿಯನ್ನು ಬಳಸಿಕೊಂಡು ಎದುರಾಳಿ ಬೌಲರ್‌ಗಳನ್ನು ಬೆವರು ಸುರಿಸಬೇಕೆಂಬುದು ಆಡಳಿತ ಮಂಡಳಿಯ ಯೋಜನೆಯಾಗಿತ್ತು. ಅದರಂತೆ ₹36 ಕೋಟಿ ಮೌಲ್ಯದ ಈ ಆರಂಭಿಕ ಜೋಡಿಯ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಭಾನುವಾರದ ಪಂದ್ಯದಲ್ಲಿ, ಎಸ್​ಕೆ ತಂಡವು 251 ರನ್‌ಗಳ ಕಠಿಣ ಗುರಿಯನ್ನು ಎದುರಿಸಿತು. ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಲವಾದ ಆರಂಭದ ಅಗತ್ಯವಿತ್ತು, ಆದರೆ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಮತ್ತೊಮ್ಮೆ ನಿರಾಶೆಗೊಳಿಸಿತು.

ನಾಯಕ ರುತುರಾಜ್ ಕೇವಲ 7 ರನ್‌ಗಳಿಗೆ ಔಟಾದರು, ಸಂಜು ಸ್ಯಾಮ್ಸನ್ ಕೇವಲ 9 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರ ಕಳಪೆ ಪ್ರದರ್ಶನದೊಂದಿಗೆ, ಎಸ್​ಕೆ ತಂಡದ ಪವರ್‌ಪ್ಲೇ ಸಂಪೂರ್ಣ ವಿಫಲವಾಯಿತು ಮತ್ತು ತಂಡವು ಪಂದ್ಯದ ಆರಂಭದಲ್ಲಿಯೇ ರೇಸ್‌ನಿಂದ ಹೊರಬಿತ್ತು.

ಸಂಜು-ರುತು ಮೊದಲ ಎರಡು ಪಂದ್ಯಗಳಲ್ಲಿಯೂ ವಿಫಲ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸಿಎಸ್‌ಕೆ ತಂಡದ ಮೊದಲ ಪಂದ್ಯದಲ್ಲೂ ಈ ಜೋಡಿ ವಿಫಲವಾಯಿತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 6 ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಸ್ಯಾಮ್ಸನ್ 7 ರನ್‌ಗಳಿಗೆ ಮತ್ತು ರುತುರಾಜ್ 28 ರನ್‌ಗಳಿಗೆ ಔಟಾದರು. ಪರಿಣಾಮವಾಗಿ, ಈ ಜೋಡಿ ಮೊದಲ ಮೂರೂ ಪಂದ್ಯದಲ್ಲಿ ಸಂಪೂರ್ಣ ವಿಫಲವಾಗಿದೆ.

RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್​​ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?

36 ಕೋಟಿ ನೀರಲ್ಲಿ ಹೋಮ?

ಐಪಿಎಲ್ 2026 ರ ಮೊದಲ ಮೂರು ಪಂದ್ಯಗಳನ್ನು ನೋಡಿದರೆ, ಈ 36 ಕೋಟಿ ರೂಪಾಯಿ ಜೋಡಿ ತಂಡದ ಅತಿದೊಡ್ಡ ದೌರ್ಬಲ್ಯವಾಗಿ ಹೊರಹೊಮ್ಮಿದೆ. ಚೆನ್ನೈನ ಎಲ್ಲೋ ಜೆರ್ಸಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸುವ ನಿರೀಕ್ಷೆಯಿದ್ದ ಸಂಜು ಸ್ಯಾಮ್ಸನ್ ಇಲ್ಲಿಯವರೆಗೆ ರನ್ ಗಳಿಸಲು ಪರದಾಡಿದ್ದಾರೆ.

ಏತನ್ಮಧ್ಯೆ, ನಾಯಕ ಗಾಯಕ್ವಾಡ್ ಮೇಲಿನ ಹೆಚ್ಚಿನ ಧಾರಣ ವೆಚ್ಚ ಮತ್ತು ನಾಯಕತ್ವದ ಒತ್ತಡವು ಅವರ ಬ್ಯಾಟಿಂಗ್ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ತಂಡದ ಅಗ್ರ ಕ್ರಮಾಂಕದ ಕುಸಿತವು ಮಧ್ಯಮ ಕ್ರಮಾಂಕದ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಇದು ಸಿಎಸ್‌ಕೆ ಗೆಲುವಿನ ಹಾದಿಯನ್ನು ಹೆಚ್ಚು ಕಷ್ಟಕರವಾಗಿಸಿದೆ. ಇವೆಲ್ಲದರ ಜೊತೆಗೆ ಅನುಭವಿ, ಮಾಜಿ ನಾಯಕ ಎಂಎಸ್ ಧೋನಿ ಅವರ ಅಲಭ್ಯತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಇಂಜುರಿಯಿಂದ ಗುಣಮುಖರಾಗಿ ಧೋನಿ ಮುಂದಿನ ಪಂದ್ಯಕ್ಕಾದರೂ ಲಭ್ಯರಿರುತ್ತಾರಾ?, ಸಿಎಸ್​ಕೆ ಗೆಲುವಿನ ಲಯಕ್ಕೆ ಮರಳುತ್ತ ಎಂಬುದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಇದು ನಮ್ಮ ಮೈದಾನ, ನಮ್ಮ ಹವಾ!”: ಆರ್​ಸಿಬಿ ಅಭಿಮಾನಿ ಅಬ್ಬರಕ್ಕೆ ಸಿಎಸ್​​ಕೆ ಫ್ಯಾನ್ಸ್ ಗಪ್​​​​ಚುಪ್

ಬೆಂಗಳೂರು, ಏ. 6: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯವು ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ, ಗ್ಯಾಲರಿಯಲ್ಲೂ ಅಭಿಮಾನಿಗಳ ನಡುವೆ ಭಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಆರ್‌ಸಿಬಿ ತಂಡವು ಭರ್ಜರಿ ಸಿಕ್ಸರ್ ಸಿಡಿಸಿದಾಗ ಕೆಂಪು ಜರ್ಸಿ ತೊಟ್ಟಿದ್ದ ಆರ್‌ಸಿಬಿ ಅಭಿಮಾನಿ ಯುವತಿಯೊಬ್ಬರು ಸಂಭ್ರಮಿಸಿದ ರೀತಿ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಮ್ಮ ಎದುರಿಗೇ ಕುಳಿತಿದ್ದ ಹಳದಿ ಜರ್ಸಿ ತೊಟ್ಟ ಸಿಎಸ್‌ಕೆ ಅಭಿಮಾನಿಗಳತ್ತ ನೋಡಿ ಆಕೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಆರ್‌ಸಿಬಿ ತಂಡದ ಪವರನ್ನು ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ, ಸಿಎಸ್‌ಕೆ ಅಭಿಮಾನಿಗಳು ಮೌನವಾಗಿದ್ದರೂ, ಆರ್‌ಸಿಬಿ ಯುವತಿ ಮಾತ್ರ ಎದೆಯುಬ್ಬಿಸಿ “ಆರ್‌ಸಿಬಿ.. ಆರ್‌ಸಿಬಿ..” ಎಂದು ಕೂಗುತ್ತಾ ಕುಣಿದಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು “ನಮ್ಮ ಬೆಂಗಳೂರು, ನಮ್ಮ ಹವಾ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿ ಇಡೀ ಕೆಂಪು ಬಣ್ಣದಿಂದ ತುಂಬಿಹೋಗಿದ್ದು, ಅಭಿಮಾನಿಗಳ ಕಿರುಚಾಟಕ್ಕೆ ಕ್ರೀಡಾಂಗಣವೇ ನಡುಗುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ

ವಾಷಿಂಗ್ಟನ್, ಏಪ್ರಿಲ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್​ಗೆ ಹೊಸ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ಪ್ರಮುಖ ದಾಳಿಯನ್ನು ನಡೆಸಬಹುದು, ಇದರಿಂದಾಗಿ ಇಡೀ ದೇಶದ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಬಹುದು ಎನ್ನುವ ಭಯ ಉಂಟಾಗಿದೆ. ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ.

ಮಾರ್ಚ್ 26 ರಂದು ಟ್ರಂಪ್ 10 ದಿನಗಳ ಅಂತಿಮ ಎಚ್ಚರಿಕೆ ನೀಡಿದ್ದರು. ನಂತರ, ಭಾನುವಾರ ಏಪ್ರಿಲ್ 4 ರಂದು, ಅವರು ಅಂತಿಮ 48 ಗಂಟೆಗಳ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾರ್ಮುಜ್ ಚೋಕ್ ಪಾಯಿಂಟ್, ಬುಶೆಹರ್ ಪರಮಾಣು ಸ್ಥಾವರ, ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರ, ಖಾರ್ಕ್ ದ್ವೀಪದ ತೈಲ ಕೇಂದ್ರ, ಅಬದಾನ್ ಸಂಸ್ಕರಣಾಗಾರ, ಬಂದರ್ ಅಬ್ಬಾಸ್ ಸಂಸ್ಕರಣಾಗಾರ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಹೇಳಿದೆ.

ರಿಯಾದ್ ನಲ್ಲಿರುವ ಸಿಐಎ ಸ್ಟೇಷನ್ ಮೇಲೆ ಇರಾನ್ ದಾಳಿ ನಡೆಸಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಅಮೇರಿಕನ್ ರಾಜತಾಂತ್ರಿಕ ಪೋಸ್ಟ್ ಗಳಂತೆ ರಿಯಾದ್‌ನಲ್ಲಿರುವ ಅಮೇರಿಕನ್ ರಾಯಭಾರ ಕಚೇರಿಯು ತನ್ನದೇ ಆದ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ.

ಮತ್ತಷ್ಟು ಓದಿ:

ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಒಂದೇ ನಿಮಿಷದ ಅಂತರದಲ್ಲಿ 2 ಡ್ರೋನ್ ದಾಳಿ ನಡೆಸಲಾಗಿದೆ. ಎರಡನೇ ಡ್ರೋನ್ ಮೊದಲ ದಾಳಿಯಿಂದ ಉಂಟಾದ ರಂಧ್ರದೊಳಗೆ ನೇರವಾಗಿ ನುಗ್ಗಿ ಸ್ಫೋಟಿಸಿತು. ದಾಳಿ ಮುಗಿಯುವಷ್ಟರಲ್ಲಿ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೂರು ಮಹಡಿಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು ಮತ್ತು ಅದರೊಳಗಿನ ಸಿಐಎ ಕಚೇರಿಗೂ ಹೊಡೆತ ಬಿದ್ದಿತ್ತು.

ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ, ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ತನ್ನ ಅತಿ ವ್ಯಾಪಕ ದಾಳಿಗಳನ್ನು ನಡೆಸಿದೆ. ರಿಯಾದ್ ಮಾತ್ರವಲ್ಲ, ಬಾಗ್ದಾದ್, ದುಬೈ, ಕುವೈತ್ ಮತ್ತು ಇರಾಕ್ ಕುರ್ಡಿಸ್ತಾನದ ಎರ್ಬಿಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳನ್ನೂ ಇರಾನಿಯನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಗುರಿಯಾಗಿಸಿವೆ.

ಆ ದಾಳಿಗಳಲ್ಲಿ ಯಾವುದೂ ಅಮೆರಿಕನ್ ಸಾವುಗಳಿಗೆ ಕಾರಣವಾಗದಿದ್ದರೂ, ಈ ಪ್ರದೇಶದ ಅಮೆರಿಕ ನೆಲೆಗಳ ಮೇಲೆ ತೆಹ್ರಾನ್ ನಡೆಸಿದ ದಾಳಿಗಳು ಏಳು ಅಮೆರಿಕ ಸೈನಿಕರ ಸಾವಿಗೆ, ನೂರಾರು ಮಂದಿಯ ಗಾಯಗಳಿಗೆ ಕಾರಣವಾಗಿದ್ದು, ವಿಮಾನಗಳು ಮತ್ತು ರಕ್ಷಣಾ ಸಾಧನಗಳಿಗೆ ಕೋಟ್ಯಂತರ ಡಾಲರ್ ಮೌಲ್ಯದ ಹಾನಿಯನ್ನುಂಟುಮಾಡಿವೆ.

ಇನ್ನೊಂದೆಡೆ ಹಾರ್ಮುಜ್ ಜಲಸಂಧಿಯನ್ನು ಓಪನ್​ ಮಾಡಲು ಇರಾನ್​ಗೆ ನೀಡಿರುವ 48 ಗಂಟೆಗಳ ಗಡುವು ಸೋಮವಾರ ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್​ಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪುನಃ ಇರಾನ್‌ಗೆ ಹೊಸ ಬೆದರಿಕೆ ಹಾಕಿ, ವಿದ್ಯುತ್​ ಘಟಕಗಳು, ಪವರ್ ಪ್ಲಾಂಟ್‌ಗಳು ಮತ್ತು ದೇಶದ ಪ್ರಮುಖ ಸೇತುವೆಗಳನ್ನು ಏಕಕಾಲದಲ್ಲಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಒಪ್ಪಂದ ಮಾಡಿಕೊಳ್ಳದಿದ್ದರೆ, ಅಮೆರಿಕ ಇಡೀ ದೇಶವನ್ನೇ ನಾಶಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ. ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version