ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ – Kannada News | Sun, Mercury, Venus, and Mars Conjunction in Shravana Nakshatra, Capricorn: Astrological Impacts and Benefits for 12 zodiac signs

ಗ್ರಹಗಳು ಒಂದೇ ರಾಶಿಯಲ್ಲಿ ಬರುವುದು ಒಂದಾದರೆ, ಒಂದೇ ನಕ್ಷತ್ರದಲ್ಲಿ ಇರುವುದು ಮತ್ತೂ ಸಾಮಿಪ್ಯವನ್ನು ಹೇಳುತ್ತದೆ. ಒಂದೇ ಪಾದವಂತೂ ನಿಕಟವರ್ತಿತ್ವದ ಸೂಚಕ. ಈ ವಾರ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಈ ನಾಲ್ಕು ಪ್ರಮುಖ ಗ್ರಹಗಳು ಶ್ರವಣ ನಕ್ಷತ್ರದಲ್ಲಿ ಅಂದರೆ ಮಕರ ರಾಶಿಯಲ್ಲಿ ಒಂದೇ ಬಾರಿಗೆ ಸಂಧಿಸಿದಾಗ ಅದು ಅತ್ಯಂತ ಪ್ರಭಾವಶಾಲಿ ಸಮಯವಾಗಿರುತ್ತದೆ. ಶ್ರವಣ ನಕ್ಷತ್ರವು ಚಂದ್ರನ ಆಧಿಪತ್ಯದಲ್ಲಿದ್ದು, ಮನಸ್ಸು, ತಾಯಿ, ನೀರಿಗೆ ಸಂಬಂಧಿಸಿದ ವಿಚಾರ, ಜ್ಞಾನ ಮತ್ತು ಶಿಸ್ತಿನ ಸಂಕೇತವಾಗಿದೆ. ​ಈ ಸಂಯೋಜನೆಯಿಂದ ಜ್ಯೋತಿಷ್ಯ ರಿತ್ಯಾ ಬಗ್ಗೋಣ ಪಂಚಾಂಗ ವಿಶ್ಲೇಷಣೆಯ ಪ್ರಕಾರ ಯಾವ ರಾಶಿಗಳಿಗೆ ಏನು ಫಲ ಇಲ್ಲಿದೆ:

ಶುಭ ಫಲ ರಾಶಿಗಳು

​ಮಕರ:
ನಿಮ್ಮದೇ ರಾಶಿಯಲ್ಲಿ ಗ್ರಹಗಳ ಸಮ್ಮಿಲನವಿರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ದೊಡ್ಡ ಬದಲಾವಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ.

ವೃಷಭ:
ಭಾಗ್ಯ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಅದೃಷ್ಟ ಒಲಿಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವಿದೆ.

ಕನ್ಯಾ:
ಪಂಚಮ ಸ್ಥಾನದಲ್ಲಿ ಈ ಸಂಯೋಜನೆ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಯ, ಮಕ್ಕಳಿಂದ ಸುಖ ಮತ್ತು ಆಕಸ್ಮಿಕ ಧನಲಾಭವಾಗಲಿದೆ.

ಮಿಶ್ರ ಫಲ ರಾಶಿಗಳು

​ಮೇಷ:
ದಶಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಯಶಸ್ಸು ಸಿಗಲಿದೆ.

​ಕರ್ಕಾಟಕ:
ಸಪ್ತಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು.

​ವೃಶ್ಚಿಕ:
ಧೈರ್ಯ ಹೆಚ್ಚಲಿದೆ, ಆದರೆ ಸಹೋದರರೊಂದಿಗೆ ಜಾಗರೂಕತೆಯಿಂದ ಇರಿ.

​ಅಶುಭ ಫಲ ರಾಶಿಗಳು

​ಧನು:
ದ್ವಿತೀಯ ಸ್ಥಾನದಲ್ಲಿ ಮಂಗಳ ಮತ್ತು ಸೂರ್ಯ ಇರುವುದರಿಂದ ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಕಲಹ ಸಾಧ್ಯತೆ, ಹಣಕಾಸಿನ ವ್ಯಯವಾಗಬಹುದು.

​ಮಿಥುನ:
ಅಷ್ಟಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.

​ಕುಂಭ:
ವ್ಯಯ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ ಮತ್ತು ನಿದ್ರಾಹೀನತೆ ಕಾಡಬಹುದು.

– ಲೋಹಿತ ಹೆಬ್ಬಾರ್

Source link

ಅಕ್ಷಯ್ ಕುಮಾರ್ ಯಶಸ್ಸಿನ ಗುಟ್ಟು ಬಹಳ ಸರಳ: ನೀವೂ ಪಾಲಿಸಿ – Kannada News | Akshay Kumar talks about how he got opportunities

ಅಕ್ಷಯ್ ಕುಮಾರ್ (Akshay Kumar), ಭಾರತದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್. ಭಾರತದ ಇತರೆ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ನೀಡಲು ಏದುಸಿರು ಬಿಡುತ್ತಿರುವಾಗ ಅಕ್ಷಯ್ ಕುಮಾರ್ ಅನಾಯಾಸವಾಗಿ ಐದಾರು ಸಿನಿಮಾಗಳನ್ನು ಪ್ರತಿ ವರ್ಷ ತೆರೆಗೆ ತರುತ್ತಿರುತ್ತಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ, ಖಾಸಗಿ ಕಾರ್ಯಕ್ರಮಗಳು ಇದೀಗ ಟಿವಿ ರಿಯಾಲಿಟಿ ಶೋ ಅನ್ನೂ ಸಹ ನಡೆಸಿಕೊಡುತ್ತಾರೆ. ಅಷ್ಟಕ್ಕೂ ಸಾಮಾನ್ಯ ಕರಾಟೆ ಶಿಕ್ಷಕ ಹಾಗೂ ಬಾಣಸಿಗ ಆಗಿದ್ದ ಅಕ್ಷಯ್ ಕುಮಾರ್ ಅವರಿಗೆ ಇಷ್ಟು ದೊಡ್ಡ ಯಶಸ್ಸು ದೊರೆತಿದ್ದು ಹೇಗೆ? ಅವರೇ ಆ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅಕ್ಷಯ್ ಕುಮಾರ್, ಒಬ್ಬ ಸಮರ ಕಲೆ ಕಲಿಸುವ ಶಿಕ್ಷಕರಾಗಿದ್ದರು, ಅದಕ್ಕೂ ಮುಂಚೆ ಅವರೊಬ್ಬ ಬಾಣಸಿಗ ಆಗಿದ್ದರು. ಆದರೆ ಅವರ ಸತತ ಪರಿಶ್ರಮ ಅವರನ್ನು ಇಂದು ಭಾರತದ ಅತ್ಯಂತ ಬ್ಯುಸಿ ಸ್ಟಾರ್ ಮಾತ್ರವಲ್ಲ, ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ. ಇದೀಗ ಅಕ್ಷಯ್ ಅವರು ‘ಇಂಡಿಯಾಸ್ ವೀಳ್ ಆಫ್ ಫಾರ್ಚ್ಯೂನ್’ ಟಿವಿ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದು, ಶೋನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ತಮ್ಮ ಯಶಸ್ಸಿನ ಹಿಂದಿನ ಸರಳ ಸೂತ್ರದ ಬಗ್ಗೆ ಮಾತನಾಡಿದ್ದಾರೆ.

ಅಕ್ಷಯ್ ಹೇಳಿರುವಂತೆ, ಅವರ ಯಶಸ್ಸಿಗೆ ಮುಖ್ಯ ಕಾರಣ ಅವರ ಶಿಸ್ತು ಮತ್ತು ಸಮಯ ಪಾಲನೆ. ಅಕ್ಷಯ್ ಹೇಳಿರುವಂತೆ ಅವರು ಈ ವರೆಗೆ ಸಮಯ ಪಾಲನೆ ತಪ್ಪಿಸಿಲ್ಲವಂತೆ. ಇಂದೂ ಅಷ್ಟೆ ಆರಂಭದ ದಿನಗಳಲ್ಲೂ ಅಷ್ಟೆ. ನಿಮಗೆ ಅವಕಾಶಗಳು ಬೇಕಿದ್ದರೆ ಸಮಯಕ್ಕೆ ಸರಿಯಾಗಿ ನೀವು ಆ ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಆ ಅವಕಾಶ ಬೇರೆಯವರ ಪಾಲಾಗುತ್ತದೆ. ನಾನು ಸಮಯ ಪಾಲನೆ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇದ್ದೆ ಹಾಗಾಗಿ ನಾನು ಯಾವ ಅವಕಾಶಗಳನ್ನೂ ಸಹ ಮಿಸ್ ಮಾಡಿಕೊಳ್ಳಲಿಲ್ಲ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ:ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ

‘ಯಾವುದೋ ಒಂದು ಸಂದರ್ಭ, ಒಂದು ಘಳಿಗೆ ನನ್ನ ಜೀವನವನ್ನು ಬದಲಾಯಿಸಲಿಲ್ಲ ಬದಲಿಗೆ ನನ್ನ ಯಶಸ್ಸು ಸತತ ಪ್ರಯತ್ನ, ಸತತ ಶಿಸ್ತು, ಸಮಯ ಪಾಲನೆ, ಸೂಕ್ತ ಆಯ್ಕೆಗಳಿಂದ ಬಂದಿದೆ. ಇದೆಲ್ಲದಕ್ಕಿಂತಲೂ ನಾನು ಆರಾಮದ ಬದಲಿಗೆ ಶ್ರಮವನ್ನು ಆಯ್ಕೆ ಮಾಡಿಕೊಂಡೆ ಅದಕ್ಕಾಗಿ ನನಗೆ ಈ ಯಶಸ್ಸು ದೊರಕಿದೆ. ನನಗೆ ಸಿಕ್ಕಿರುವ ಪ್ರತಿ ಅವಕಾಶವೂ ನನ್ನ ಸಮಯ ಪಾಲನೆ, ಶ್ರಮ ಮತ್ತು ನನ್ನ ಕಲೆಗೆ, ಪ್ರತಿಭೆಗೆ ನಾನು ನ್ಯಾಯ ಒದಗಿಸಿದ್ದರಿಂದಲೇ ದೊರೆತಿದೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

2025 ರಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ಐದು ಸಿನಿಮಾಗಳು ಬಿಡುಗಡೆ ಆಗಿದ್ದವು. 2026ರ ಮೊದಲ ತಿಂಗಳಲ್ಲೇ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವುಗಳಲ್ಲಿ ಎರಡು ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಹೊಸ ರಿಯಾಲಿಟಿ ಶೋ ಅನ್ನು ಸಹ ನಡೆಸಿಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್ ಇದ್ದ ವಿಮಾನ ಅಪಘಾತ: ಕೊನೇ ಸಮಯದಲ್ಲಿ ಪೈಲಟ್ ಬದಲಾವಣೆ ಮಾಡಲಾಗಿತ್ತೇ? – Kannada News | Ajit Pawar Plane Crash Last Minute Pilot Change Sparked Baramati Tragedy

ಪುಣೆ, ಜನವರಿ 30: ಮಹಾರಾಷ್ಟ್ರದ ಪುಣೆಯ ಬಾರಾಮತಿಯಲ್ಲಿ ಬುಧವಾರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಇದ್ದ ವಿಮಾನ ಅಪಘಾತಕ್ಕೀಡಾಗಿ ಐವರು ಸಾವನ್ನಪ್ಪಿದ್ದರು. ಬಾರಾಮತಿ ವಿಮಾನ ನಿಲ್ದಾಣವನ್ನು ಸಮೀಪಿಸಿದ ನಂತರ, ಅವರ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡು, ದೊಡ್ಡ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿತ್ತು.  ನಂತರ, ಇನ್ನೂ ಕೆಲವು ಸ್ಫೋಟಗಳು ಸಂಭವಿಸಿದ್ದವು. ಈ ದುರದೃಷ್ಟಕರ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಅಲ್ಲದೆ, ವಿಮಾನದಲ್ಲಿ ಅವರೊಂದಿಗೆ ಇದ್ದ ಅವರ ಅಂಗರಕ್ಷಕ ವಿದೀಪ್ ಜಾಧವ್, ವಿಮಾನದ ಪೈಲಟ್ ಸುಮಿತ್ ಕಪೂರ್, ಸಹ-ಪೈಲಟ್ ಶಾಂಭವಿ ಪಾಠಕ್ ಮತ್ತು ವಿಮಾನ ಸಹಾಯಕ ಪಿಂಕಿ ಮಾಲಿ ಕೂಡ ಸಾವನ್ನಪ್ಪಿದರು. ಅಜಿತ್ ಪವಾರ್ ಅವರ ಹಠಾತ್ ಸಾವು ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ನಡೆಯಿತು. ಪವಾರ್ ಕುಟುಂಬ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ರಾಜ್ಯದ ಎಲ್ಲಾ ಪಕ್ಷಗಳ ನಾಯಕರು, ರಾಜಕಾರಣಿಗಳು, ಕೆಲವು ಸೆಲೆಬ್ರಿಟಿಗಳು, ಬಾರಾಮತಿಯ ಜನರು ಮತ್ತು ರಾಜ್ಯಾದ್ಯಂತದ ದಾದಾ ಅವರ ಅಭಿಮಾನಿಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ದೊಡ್ಡ ಜನಸಮೂಹ ಹಾಜರಿದ್ದರು.

ವಿಮಾನ ಅಪಘಾತದ ತನಿಖೆ ನಡೆಯುತ್ತಿದ್ದು, ಕಪ್ಪು ಪೆಟ್ಟಿಗೆ ಪತ್ತೆಯಾಗಿದ್ದು, ಅದರ ಪರೀಕ್ಷೆಯಿಂದ ವಿಮಾನ ಅಪಘಾತಕ್ಕೆ ನಿಖರವಾದ ಕಾರಣ ಬಹಿರಂಗವಾಗಬಹುದು. ಏತನ್ಮಧ್ಯೆ, ಈ ಪ್ರಕರಣದಲ್ಲಿ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ವಿಮಾನದ ಕ್ಯಾಪ್ಟನ್ ಸುಮಿತ್ ಕಪೂರ್ ಅವರ ಸ್ನೇಹಿತ ಕೆಲವು ಆಘಾತಕಾರಿ ಮಾಹಿತಿಯನ್ನು ನೀಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಅಜಿತ್ ಪವಾರ್ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಬೇರೆ ಪೈಲಟ್ ಹಾರಿಸಬೇಕಿತ್ತು. ಕಂಪನಿಯು ಬಾರಾಮತಿ ವಿಮಾನಕ್ಕೆ ಮತ್ತೊಬ್ಬ ಪೈಲಟ್ ಅನ್ನು ಆಯ್ಕೆ ಮಾಡಿತ್ತು. ಬುಧವಾರ, ಆ ಪೈಲಟ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ವಿಮಾನಕ್ಕೆ ತಡವಾಗಿ ಬಂದರು. ಅಜಿತ್ ಪವಾರ್ ಬಾರಾಮತಿ ತಲುಪಲು ತಡವಾಗುತ್ತಿದ್ದರಿಂದ, ವಿಮಾನಯಾನ ಸಂಸ್ಥೆಯು ಈ ಜವಾಬ್ದಾರಿಯನ್ನು ಕ್ಯಾಪ್ಟನ್ ಸುಮಿತ್ ಕಪೂರ್ ಅವರಿಗೆ ವಹಿಸಿತು. ಅದರ ನಂತರ, ಸಹ-ಪೈಲಟ್ ಶಾಂಭವಿ ಪಾಠಕ್ ಕೂಡ ಅವರೊಂದಿಗೆ ಈ ವಿಮಾನದಲ್ಲಿ ಹಾರಾಟ ನಡೆಸಿದರು.

ಮತ್ತಷ್ಟು ಓದಿ: ಮಹಾರಾಷ್ಟ್ರದ ಮುಂದಿನ ಉಪಮುಖ್ಯಮಂತ್ರಿಯಾಗುತ್ತಾರಾ ಸುನೇತ್ರಾ ಪವಾರ್? ಶುರುವಾಯ್ತು ಬಿಸಿ-ಬಿಸಿ ಚರ್ಚೆ

ಕ್ಯಾಪ್ಟನ್ ಸುಮಿತ್ ಕಪೂರ್ ಸಾಮಾನ್ಯ ಪೈಲಟ್ ಅಲ್ಲ, ಅವರು ತುಂಬಾ ಅನುಭವಿ, ಅವರಿಗೆ 15 ಸಾವಿರ ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವಿತ್ತು. ಅವರ ಸ್ನೇಹಿತನ ಪ್ರಕಾರ, ಅವರು ತುಂಬಾ ಅನುಭವಿ, ಅವರು ಯಾವುದೇ ತಪ್ಪು ಮಾಡುವ ಸಾಧ್ಯತೆ ಕಡಿಮೆ. ಸುಮಿತ್ ಕೆಲವು ದಿನಗಳ ಹಿಂದೆ ಹಾಂಗ್ ಕಾಂಗ್‌ನಿಂದ ಹಿಂತಿರುಗಿದ್ದರು. ಕ್ಯಾಪ್ಟನ್ ಸುಮಿತ್ ಅವರ ಸ್ನೇಹಿತ ಜಿ.ಎಸ್. ಗ್ರೋವರ್ ಅವರ ಪ್ರಕಾರ, ಈ ವಿಮಾನವನ್ನು ಬಾರಾಮತಿಗೆ ಕರೆದೊಯ್ಯುವ ಕೆಲವೇ ಗಂಟೆಗಳ ಮೊದಲು ಅವರಿಗೆ ವಿಮಾನದ ಬಗ್ಗೆ ಮಾಹಿತಿ ಸಿಕ್ಕಿತ್ತು.

ವಿಮಾನ ಅಪಘಾತದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ರಾಜ್ಯ ಅಪರಾಧ ತನಿಖಾ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ಪ್ರಾಥಮಿಕ ತನಿಖೆ ನಡೆಸಲಾಗುವುದು, ಅಪಘಾತದ ವಿವರಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ – Kannada News | Inspiring story of DRDO scientists indigenously developing GaN chip tech after France denial

ದೃಢ ಸಂಕಲ್ಪ ಮತ್ತು ಅವಶ್ಯಕತೆ ಎರಡೂ ಸೇರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ  (GaN semiconductor technology) ಸಿದ್ಧಿಸಿಕೊಂಡ ಕಥೆ ಸಾಕ್ಷಿಯಾಗಿದೆ. ಗ್ಯಾನ್ ಚಿಪ್​ಗಳನ್ನು ತಯಾರಿಸಬಲ್ಲ ತಂತ್ರಜ್ಞಾನ ಹೊಂದಿದ ಐದಾರು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2023ರಲ್ಲಿ ಡಾ. ಮೀನಾ ಮಿಶ್ರಾ (Dr. Meena Mishra) ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳ ತಂಡವೊಂದು ಈ ಐತಿಹಾಸಿಕ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಸ್ವಾವಲಂಬನೆಯ ಹಾದಿಯಲ್ಲಿ ಅದು ನಿಜಕ್ಕೂ ಮಹತ್ವಪೂರ್ಣವೆನಿಸುವ ಒಂದು ಮೈಲಿಗಲ್ಲು ಎಂದು ಬಣ್ಣಿಲಾಗುತ್ತಿದೆ.

ಏನಿದು ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ?

ಗ್ಯಾನ್ ಎಂದರೆ ಗ್ಯಾಲಿಯಂ ನೈಟ್ರೈಡ್ (Gallium Nitride). ಸಿಲಿಕಾನ್​ಗಿಂತ ಇದು ಹೆಚ್ಚು ಉಷ್ಣ ಮತ್ತು ವಿದ್ಯುತ್ ಗುಣಗಳನ್ನು ಹೊಂದಿರುವ ವಸ್ತು. ರಾಡಾರ್, ಸೆಟಿಲೈಟ್, ಮಿಸೈಲ್, ಸೆನ್ಸರ್ ಇತ್ಯಾದಿ ಡಿಫೆನ್ಸ್ ಟೆಕ್ನಾಲಜಿಗಳಲ್ಲಿ ಗ್ಯಾನ್ ಚಿಪ್​ಗಳನ್ನು ಬಳಸಲಾಗುತ್ತದೆ. ಹೀಗಾಗಿ, ರಕ್ಷಣಾ ಕ್ಷೇತ್ರದಲ್ಲಿ ಗ್ಯಾನ್ ಚಿಪ್​ಗಳಿಗೆ ಬೇಡಿಕೆ ಇದೆ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಕೊರಿಯಾ ಮತ್ತು ಜರ್ಮನಿ ದೇಶಗಳು ಮಾತ್ರ ಇಂಥ ಚಿಪ್ ತಯಾರಿಸಬಲ್ಲ ತಂತ್ರಜ್ಞಾನ ಹೊಂದಿವೆ.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಫ್ರಾನ್ಸ್ ಕೊಡಲ್ಲ ಎಂದಾಗ ಹುಟ್ಟಿಕೊಂಡ ಕಿಚ್ಚು…

2016ರಲ್ಲಿ 36 ರಫೇಲ್ ಫೈಟರ್ ಜೆಟ್​ಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತು. ಈ ವೇಳೆ, ಗ್ಯಾನ್ ಚಿಪ್ ಟೆಕ್ನಾಲಜಿಯನ್ನು ತನಗೆ ವರ್ಗಾಯಿಸಬೇಕೆಂದು (Technology transfer) ಭಾರತ ಮನವಿ ಮಾಡಿಕೊಂಡಿತು. ಫ್ರಾನ್ಸ್ ತಾನು ಬೇಕಾದರೆ ಚಿಪ್​ಗಳನ್ನು ತಯಾರಿಸಿ ಕೊಡುತ್ತೇವೆ, ಟೆಕ್ನಾಲಜಿ ವರ್ಗಾವಣೆ ಸಾಧ್ಯ ಇಲ್ಲ ಎಂದು ಹೇಳಿತು.

ರಫೇಲ್ ಕಾರ್ಯಕ್ಷಮತೆಯಲ್ಲಿ ಈ ಗ್ಯಾನ್ ಚಿಪ್​ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ, ಇಂಥ ವಿಚಾರದಲ್ಲಿ ಬೇರೆ ದೇಶದ ಮೇಲೆ ಅವಲಂಬನೆ ಆಗುವುದರ ಬದಲು ಸ್ವಂತವಾಗಿ ಚಿಪ್ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಉತ್ತಮ ಎಂದು ಆಲೋಚಿಸಿದ ಪರಿಣಾಮ, ಡಿಆರ್​ಡಿಒ ವಿಜ್ಞಾನಿಗಳಿಂದ ಅವಿರತ ಪ್ರಯತ್ನ ಮೊದಲುಗೊಂಡಿತು.

ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

ಡಿಆರ್​ಡಿಒ ಡೈರೆಕ್ಟರ್ ಆದ ಡಾ. ಮೀನಾ ಮಿಶ್ರಾ ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳ ತಂಡವು 2023ರಲ್ಲಿ ಗ್ಯಾಲಿಯಂ ನೈಟ್ರೈಡ್ ಚಿಪ್ ತಯಾರಿಸುವ ತಂತ್ರಜ್ಞಾನದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಡಿಆರ್​ಡಿಒದ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬ್​ನಲ್ಲಿ ನಿರಂತರ ಪ್ರಯೋಗಗಳ ಮೂಲಕ ಈ ಸಾಧನೆ ಮಾಡಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ – Kannada News | Gichchi Gili Gili junior Show To Starts From Today

ಬಿಗ್ ಬಾಸ್ ಹಾಗೂ ‘ಅನುಬಂಧ’ ಅವಾರ್ಡ್ಸ್ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಆರಂಭ ಆಗಿದೆ. ರಾಜ್ಯದ ವಿವಿಧ ಕಡೆಗಳಿಂದ ಪ್ರತಿಭೆ ಉಳ್ಳ ಬಾಲ ಕಲಾವಿದರು ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಎಲ್ಲರನ್ನೂ ನಗಿಸೋ ಕೆಲಸ ಆಗಿದೆ. ಇಂದಿನಿಂದ (ಫೆಬ್ರವರಿ 30) ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ಶೋ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೃಷ್ಣನಗರ: ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ, ಮಹಿಳೆ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದ ವೈದ್ಯರು – Kannada News | Newborn Goes Missing from Government Hospital in Krishnanagar

ಕೃಷ್ಣನಗರ, ಜನವರಿ 30: ಸರ್ಕಾರಿ ಆಸ್ಪತ್ರೆ(Hospital)ಯಿಂದ ನವಜಾತ ಶಿಶು ಕಾಣೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ. ರೋಗಿಯ ಕುಟುಂಬವು ಆಸ್ಪತ್ರೆಯ ಬಾಗಿಲು ಮುಚ್ಚಿ ಪ್ರತಿಭಟಿಸಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯೂ ನಡೆದಿತ್ತು. ಆದರೆ ಮಗು ಮಾತ್ರ ಎಲ್ಲಿಗೆ ಹೋಗಿತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಆದರೆ ಮಗುವನ್ನು ಮಾತ್ರ ಆಸ್ಪತ್ರೆ ವೈದ್ಯರು ಕೊಡಲೇ ಇಲ್ಲ, ಅದರ ಬದಲು ಆಕೆಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮತ್ತೊಂದೆಡೆ, ಕೊನೆಯ ಅಲ್ಟ್ರಾ-ಸೋನೋಗ್ರಫಿಯಲ್ಲಿ 2 ಕೆಜಿ 400 ಗ್ರಾಂ ತೂಕದ ಮಗು ಇದೆ ಎಂದು ವರದಿಯಾಗಿದೆ ಎಂದು ಆಶಾ ಕಾರ್ಯಕರ್ತೆ ಹೇಳಿದ್ದಾರೆ. ಆದರೆ ಮಗು ಎಲ್ಲಿಯೂ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಘಟನೆಯಿಂದ ಆಸ್ಪತ್ರೆಯಲ್ಲಿ ಹೆಚ್ಚಿನ ಉದ್ವಿಗ್ನತೆ ಉಂಟಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮುಖ್ಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ.ನಾಡಿಯಾದ ಕೃಷ್ಣನಗರ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನಬದ್ವೀಪ್‌ನ ಇಪ್ಪತ್ತರ ಹರೆಯದ ಮಂಪಿ ಖಾತುನ್ ಎಂಬ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಅಲ್ಲಿ ಹಲವಾರು ಗಂಟೆಗಳ ಕಾಲ ದಾಖಲಾಗಿದ್ದ ನಂತರ, ಅವರನ್ನು ಹೆರಿಗೆ ಟೇಬಲ್‌ಗೆ ಕರೆದೊಯ್ಯಲಾಯಿತು. ನಂತರ ಅವರಿಗೆ ಹೆರಿಗೆ ಮಾಡಲಾಯಿತು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ರೋಗಿಯ ಕುಟುಂಬವು ಆಸ್ಪತ್ರೆಗೆ ಹಿಂತಿರುಗಿದಾಗ ಅವರಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಹೇಳುತ್ತದೆ. ಗರ್ಭಧಾರಣೆಯಿಂದ ಆಕೆಯ ದೈಹಿಕ ಪರೀಕ್ಷೆಯ ಎಲ್ಲಾ ದಾಖಲೆಗಳು ಅವರ ಬಳಿ ಇವೆ.

ಆಶಾ ಕಾರ್ಯಕರ್ತೆ ರೋಜಿನಾ ಬೀಬಿ ಶೇಖ್ಮ ಮಾತನಾಡಿ, ಮಹಿಳೆಗೆ ಮೋಸ ಮಾಡಲಾಗಿದೆ. ಅವಳು ಗರ್ಭಿಣಿಯಾಗಿದ್ದಾಗಿನಿಂದ ನಾನು ಅವಳನ್ನು ನೋಡುತ್ತಿದ್ದೇನೆ. ಜನವರಿ 21 ರಂದು ಅವಳಿಗೆ USG ಮಾಡಲಾಗಿತ್ತು ಮತ್ತು ಮಗು ಇತ್ತು ಎಂದರು. ಅವರು ನನ್ನನ್ನು ಮಲಗಿಸಿದ್ದರು, ನಂತರ ಹೆರಿಗೆ ಮಾಡಲಾಗಿದೆ ಎಂದು ನಾನು ಭಾವಿಸಿದ್ದೆ ಆದರೆ, ನನ್ನ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು? – Kannada News | Did Prabhas starrer Salaar 2 movie halted what is the new update

ಬಾಹುಬಲಿ 2’ (Bahubali 2) ಸಿನಿಮಾದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಅನ್ನು ಗೆಲುವಿನ ಹಳಿಗೆ ಮರಳಿ ತಂದಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ನೀಲ್ ಅವರೇ ನಿರ್ದೇಶಿಸಿದ್ದ ಕನ್ನಡದ ‘ಉಗ್ರಂ’ ಸಿನಿಮಾದ ಕತೆಯನ್ನೇ ಒಳಗೊಂಡ ಆದರೆ ಪ್ರಭಾಸ್​​ ಸ್ಟಾರ್​​ಡಮ್​​ಗೆ ತಕ್ಕಂತೆ ಅದ್ಧೂರಿತನದಿಂದ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಕಂಡಿತ್ತು. ‘ಸಲಾರ್ 2’ ಸಹ ಬರಲಿದೆ ಎಂದು ‘ಸಲಾರ್’ ಸಿನಿಮಾದ ಅಂತ್ಯದಲ್ಲಿ ಘೋಷಿಸಲಾಗಿತ್ತು. ಆದರೆ ‘ಸಲಾರ್’ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಹಾಗಿದ್ದರೆ ‘ಸಲಾರ್ 2’ ನಿಂತು ಹೋಯ್ತಾ? ಇಲ್ಲಿದೆ ಅಪ್​ಡೇಟ್.

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅವರು ‘ಸಲಾರ್ 2’ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದು, ಈಗಾಗಲೇ ನೀಲ್ ರೆಡಿ ಮಾಡಿಕೊಂಡಿರುವ ‘ಸಲಾರ್ 2’ ಸಿನಿಮಾದ ಕತೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆಯಂತೆ. ಹೀಗೆಂದು ಸಿನಿಮಾಕ್ಕೆ ಸಂಬಂಧಿಸಿದ ಒಬ್ಬರೇ ಹೇಳಿರುವುದಾಗಿ ಪಿಂಕ್​ವಿಲ್ಲಾ ವರದಿ ಮಾಡಿದೆ. ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾಗಳು ಯಶಸ್ಸು ಗಳಿಸದ ಕಾರಣ, ‘ಸಲಾರ್ 2’ ಸಿನಿಮಾದ ಕತೆ, ಪ್ರೆಸೆಂಟೇಷನ್ ಅನ್ನು ಸಂಪೂರ್ಣವಾಗಿ ಬದಲಾಯಿಸುವ ನಿರ್ಧಾರವನ್ನು ನೀಲ್ ಮಾಡಿದ್ದು, ಇದಕ್ಕೆ ಪ್ರಭಾಸ್ ಅವರ ಸಲಹೆಯೇ ಕಾರಣ ಎನ್ನಲಾಗುತ್ತಿದೆ.

‘ಸಲಾರ್’ ಸಿನಿಮಾ ಬಿಡುಗಡೆ ಆದಾಗ ಇದ್ದ ಪ್ರೇಕ್ಷಕರ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಈಗಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ನೀಲ್ ಹಾಗೂ ಪ್ರಭಾಸ್ ಚರ್ಚಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಕತೆ, ಟೋನ್, ನಿರೂಪಣೆ ಇನ್ನೂ ಹಲವು ವಿಷಯಗಳನ್ನು ಬದಲಾವಣೆ ಮಾಡಿ, ಚಿತ್ರೀಕರಣಕ್ಕೆ ಹೋಗುವ ನಿರ್ಧಾರ ಮಾಡಲಾಗಿದೆಯಂತೆ.

ಇದನ್ನೂ ಓದಿ:‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್

‘ಸಲಾರ್’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿತ್ತು. ಪ್ರಭಾಸ್ ಜೊತೆಗೆ ಹೊಂಬಾಳೆ ಫಿಲಮ್ಸ್ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿದ್ದು, ‘ಸಲಾರ್ 2’ ಸಹ ಅದರಲ್ಲಿ ಒಂದಾಗಿದೆ. ಆದರೆ ಪ್ರಭಾಸ್ ಮತ್ತು ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿ ಇರುವುದರಿಂದ ‘ಸಲಾರ್ 2’ ಸಿನಿಮಾ ತಡವಾಗುತ್ತಲೇ ಬರುತ್ತಿದೆ. ಈ ಹಿಂದೆ ಪ್ರಭಾಸ್ ಮತ್ತು ನೀಲ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಪ್ರಭಾಸ್​​ರ ಹೊಸ ಸಿನಿಮಾ ಮುಹೂರ್ತಕ್ಕೆ ನೀಲ್ ಅತಿಥಿಯಾಗಿ ಹಾಜರಾಗಿ ಆ ಸುದ್ದಿಗಳಿಗೆಲ್ಲ ತೆರೆ ಎಳೆದರು.

ಇದೀಗ ಪ್ರಭಾಸ್ ರಘು ಹನುಪುಡಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಶುರು ಮಾಡಲಿದ್ದಾರೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕವಷ್ಟೆ ‘ಸಲಾರ್ 2’ ಪ್ರಾರಂಭ ಆಗಲಿದೆ. ಇನ್ನು ನೀಲ್ ಪ್ರಸ್ತುತ ಜೂ ಎನ್​​ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅದರ ಬಳಿಕ ಅವರು ಅಲ್ಲು ಅರ್ಜುನ್ ಅಥವಾ ರಾಮ್ ಚರಣ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ – Kannada News | Capex growth along with fiscal discipline, Brokerage firm JM Financial expects from 2026 Budget

ನವದೆಹಲಿ, ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್​ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ.

ಕಳೆದ ಬಜೆಟ್​ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ ಪ್ರಾಶಸ್ತ್ಯ ಕೊಟ್ಟಂತಿತ್ತು. ಆದಾಯ ತೆರಿಗೆ ಮತ್ತು ಜಿಎಸ್​ಟಿ ದರಗಳನ್ನು ಇಳಿಸುವ ಮೂಲಕ ಅನುಭೋಗ ಹೆಚ್ಚಿಸಲು ಕ್ರಮ ತೆಗೆದುಕೊಂಡಿತ್ತು. ಅದರ ಫಲವೆಂಬಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನುಭೋಗ ಹೆಚ್ಚಿದೆ. ಬ್ರೋಕರೇಜ್ ಸಂಸ್ಥೆಯಾದ ಜೆಎಂ ಫೈನಾನ್ಷಿಯಲ್ ಈ ಅಂಶವನ್ನು ಗಮನಿಸಿದೆ. ಹಾಗೆಯೇ, ನಗರ ಭಾಗಗಳಲ್ಲಿ ಅನುಭೋಗ ದುರ್ಬಲವಾಗಿರುವ ಸಂಗತಿಯನ್ನೂ ಅದು ಎತ್ತಿ ತೋರಿಸಿದೆ.

ಇದನ್ನೂ ಓದಿ: ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ!

ನಗರ ಭಾಗದಲ್ಲಿ ಅನುಭೋಗ ಹೆಚ್ಚುವುದು ಬಹಳ ಮುಖ್ಯ. ಇಲ್ಲಿ ಅನುಭೋಗ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿರುವುದರಿಂದ ಉತ್ಪಾದಕರು ತಮ್ಮ ಘಟಕ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯೂ ಏರಿಳಿತ ಆಗುತ್ತದೆ. ಆರ್​ಬಿಐ ದತ್ತಾಂಶದ ಪ್ರಕಾರ ಭಾರತದ ಉತ್ಪಾದಕ ಸಂಸ್ಥೆಗಳಲ್ಲಿ ಈಗಿರುವ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 75ಕ್ಕಿಂತ ಕಡಿಮೆ ಬಳಕೆ ಆಗುತ್ತಿದೆ.

ಆರ್​ಬಿಐನ ಈ ಡಾಟಾವನ್ನು ಉಲ್ಲೇಖಿಸಿರುವ ಜೆಎಂ ಫೈನಾನ್ಷಿಯಲ್, ಈ ಬಾರಿಯ ಬಜೆಟ್​ನಲ್ಲಿ ಸರ್ಕಾರವು ಅನುಭೋಗ ಹಾಗೂ ಬಂಡವಾಳ ವೆಚ್ಚದಲ್ಲಿ ಸಮತೋಲನ ತರಲು ಯತ್ನಿಸಬಹುದು ಎಂದು ಅಪೇಕ್ಷಿಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ರೆವಿನ್ಯೂ ಎಕ್ಸ್​ಪೆಂಡಿಚರ್ ಅಥವಾ ಆದಾಯ ವೆಚ್ಚದಂದ ಅನುಭೋಗವು ಅಲ್ಪಾವಧಿಗೆ ಏರಿಕೆ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಅಥವಾ ಬಂಡವಾಳ ವೆಚ್ಚದಿಂದ ಜಿಡಿಪಿಗೆ ಮೂರು ಪಟ್ಟು ಪುಷ್ಟಿ ಕೊಡುತ್ತದೆ. ಸರ್ಕಾರವು ಕ್ರಮೇಣವಾಗಿ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 3ರಷ್ಟು ಮಟ್ಟಕ್ಕೆ ಏರಿಸಬಹುದು ಎಂದು ಜೆಎಂ ಫೈನಾನ್ಷಿಯಲ್ ನಿರೀಕ್ಷಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು – Kannada News | Two Paragliders Rescued After Mid Air Collision in Tehri

ಡೆಹ್ರಾಡೂನ್, ಜನವರಿ 30: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಇಬ್ಬರು ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ನದಿಗೆ ಬಿದ್ದಿರುವ ಘಟನೆ ನಡೆದಿದೆ. ಯಾವುದೇ ದೊಡ್ಡ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಪ್ಯಾರಾಗ್ಲೈಡಿಂಗ್ ಪೈಲಟ್‌ಗಳನ್ನು ರಕ್ಷಿಸಿದೆ. ಮೂರು ದಿನಗಳ ಆಕ್ರೋ ಫೆಸ್ಟಿವಲ್ ಮತ್ತು ಎಸ್‌ಐವಿ ಚಾಂಪಿಯನ್‌ಶಿಪ್ ಟೆಹ್ರಿ 2026 ರ ಸಂದರ್ಭದಲ್ಲಿ ಪ್ಯಾರಾಗ್ಲೈಡರ್‌ಗಳು ನಿಯಂತ್ರಣ ಕಳೆದುಕೊಂಡಾಗ ಈ ಘಟನೆ ಸಂಭವಿಸಿದೆ.

ಕಳೆದ ವರ್ಷ ಜನವರಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಳಿಯುವಾಗ ಪ್ಯಾರಾಚೂಟ್‌ಗಳು ಸಿಕ್ಕಿಹಾಕಿಕೊಂಡಿದ್ದರಿಂದ ಇಬ್ಬರು ನೌಕಾ ಪೈಲಟ್‌ಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಪೂರ್ವ ನೌಕಾ ಕಮಾಂಡ್‌ನ ಕಾರ್ಯಾಚರಣೆ ಪ್ರದರ್ಶನ ಪೂರ್ವಾಭ್ಯಾಸದ ಸಮಯದಲ್ಲಿ ರಾಮ ಕೃಷ್ಣ ಬೀಚ್‌ನಲ್ಲಿ ಕಾರ್ಯಾಚರಣೆ ಪ್ರದರ್ಶನದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಧಿಕಾರಿಗಳು ಸಮುದ್ರಕ್ಕೆ ಬಿದ್ದಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ – Kannada News | Woman Marries Three Men, Cheats Lakhs: Second Husband Reveals Details in Doddaballapura

ದೇವನಹಳ್ಳಿ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ, ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮೂವರನ್ನು ವಂಚಿಸಿರುವುದು ಬಯಲಾಗಿದೆ. ಆಕೆ ಪ್ರೀತಿಸಿ ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಇದೀಗ ಆಕೆಯ ಮೋಸದಾಟದ ಬಗ್ಗೆ ಎರಡನೇ ಗಂಡ ಮಾಧ್ಯಮದ ಎದುರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೊದಲ ಪತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳಿ ಸುಧಾರಾಣಿ ತನ್ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಸುಮಾರು 25 ಲಕ್ಷ ರೂಪಾಯಿಗಳಷ್ಟು ಹಣವನ್ನು ತೆಗೆದುಕೊಂಡಿದ್ದಾಳೆ. ನಂತರ, ಸುಧಾರಾಣಿಗೆ ಮೊದಲ ಪತಿ ಹೀರೇಗೌಡ ಬದುಕಿರುವ ವಿಚಾರ ಗೊತ್ತಾಯಿತು ಎಂದು ಯುವಕ ತಿಳಿಸಿದ್ದಾರೆ. ಸುಧಾರಾಣಿ ಹೈದರಾಬಾದ್​ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ, ಬೆಂಗಳೂರಿನಲ್ಲಿ ಶಿವಗೌಡ ಎಂಬುವವರನ್ನು ಮೂರನೇ ಮದುವೆಯಾಗಿರುವುದೂ ನಂತರ ಗೊತ್ತಾಯಿತು ಎಂದಿರುವ ಯುವಕ, ಪೊಲೀಸರಿಗೆ ದೂರು ನೀಡಿದ್ದಾರೆ.

ವಿವರಗಳಿಗೆ ಓದಿ: ದೊಡ್ಡಬಳ್ಳಾಪುರದಲ್ಲೊಬ್ಬಳು ಖತರ್ನಾಕ್ ಮಹಿಳೆ: 3 ಮದುವೆಯಾಗಿ ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version