ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಬೆಂಗಳೂರು, ಏಪ್ರಿಲ್ 4: ಐಪಿಎಲ್ (IPL) ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ (RCB vs SRH) ಪಂದ್ಯದ ವೇಳೆ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಂತಾಗಿದೆ. ಸದ್ಯ ಪೊಲೀಸರು 51 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಆರ್‌ಸಿಬಿ ಟೀ ಶರ್ಟ್ ಧರಿಸಿ ಎಂಟ್ರಿ!

ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿದ್ದ 18 ಅಪ್ರಾಪ್ತರು ಸೇರಿದಂತೆ ಒಟ್ಟು 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಈ ಕಳ್ಳರೆಲ್ಲರೂ ಜಾರ್ಖಂಡ್ ಮೂಲದವರಾಗಿದ್ದು, ಪಂದ್ಯದ ವೇಳೆ ಅಭಿಮಾನಿಗಳಂತೆ ಕಾಣಲು ಆರ್‌ಸಿಬಿ ತಂಡದ ಜೆರ್ಸಿ (T-shirt) ಧರಿಸುತ್ತಿದ್ದರು. ಅಭಿಮಾನಿಗಳಿಂದ ಟಿಕೆಟ್‌ಗಳನ್ನು ಕಸಿದುಕೊಂಡು ಅಥವಾ ಕಳ್ಳತನ ಮಾಡಿ ಕ್ರೀಡಾಂಗಣದ ಒಳಗೆ ಪ್ರವೇಶಿಸುತ್ತಿದ್ದ ಈ ಗ್ಯಾಂಗ್, ಜನಜಂಗುಳಿಯ ನಡುವೆ ಮೊಬೈಲ್‌ಗಳನ್ನು ಲಪಟಾಯಿಸುತ್ತಿತ್ತು.

ಮಾಸ್ಟರ್ ಮೈಂಡ್ ಬಂಧನ

ಈ ಬೃಹತ್ ಜಾಲದ ಹಿಂದೆ ಇದ್ದ ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶುಭಮ್ ಮಾತ್ರ ವಯಸ್ಕನಾಗಿದ್ದು, ಉಳಿದ 18 ಮಂದಿ ಅಪ್ರಾಪ್ತ ಬಾಲಕರು. ಈ ಬಾಲಕರನ್ನು ಬಳಸಿಕೊಂಡು ಶುಭಮ್ ನಗರದ ವಿವಿಧೆಡೆ ಕಳ್ಳತನ ಮಾಡಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಕಳೆದ RCB vs SRH ಪಂದ್ಯದ ವೇಳೆ ಸ್ಟೇಡಿಯಂ ಒಳಗಡೆ ಹೋಗುವ ಗೇಟ್‌ಗಳ ಬಳಿ ಹಾಗೂ ಗ್ಯಾಲರಿಗಳಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಸದ್ಯ ಪೊಲೀಸರು ಕಳ್ಳತನವಾಗಿದ್ದ 51 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಳ್ಳೇಗಾಲ ರೆಸಾರ್ಟ್​ನಲ್ಲಿ ನಡೀತು ಡ್ರಗ್ಸ್ ಪಾರ್ಟಿ; ಗಾಂಜಾ, ಚರಸ್ ಸೇವಿಸಿ ಮೋಜುಮಸ್ತಿಯಲ್ಲಿದ್ದವರು ಪೊಲೀಸ್ ಬಲೆಗೆ!

ಚಾಮರಾಜನಗರ, ಏಪ್ರಿಲ್ 04: ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ (Drugs Party) ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.

15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢ

ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ಅವರ ರೆಸಾರ್ಟ್‌ನಲ್ಲಿ ನಡೆದಿದ್ದು, ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರ ಆಪ್ತನೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!

ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಭಾಗಿಯಾಗಿದ್ದರೆಂದು ಮೂಲಗಳು ತಿಳಿಸಿವೆ. ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಲೇಡಿ ಕಾನ್ಸ್ಟೇಬಲ್‌ಗಳು ವಿಚಾರಣೆ ಮುಂದುವರಿಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳನ್ನು ಕೊಳ್ಳೇಗಾಲ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Tech Utility: ಭಾರತದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಹೊಂದಿರುವ ಟಾಪ್ 3 ನಗರಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ?

ಬೆಂಗಳೂರು (ಏ. 04): ಇತ್ತೀಚಿನ ದಿನಗಳಲ್ಲಿ ವೇಗದ ಇಂಟರ್ನೆಟ್ (Internet) ಎಲ್ಲರಿಗೂ ಅನಿವಾರ್ಯ. ಆನ್‌ಲೈನ್ ಕ್ಲಾಸ್, ಮನೆಯಿಂದ ಕೆಲಸ ಮಾಡುವುದಾಗಲಿ ಅಥವಾ ಮನರಂಜನೆಯಾಗಲಿ, ಎಲ್ಲದಕ್ಕೂ ಹೈ-ಸ್ಪೀಡ್ ಇಂಟರ್ನೆಟ್ ಅತ್ಯಗತ್ಯ. ಭಾರತದಲ್ಲಿ, ವಿಶೇಷವಾಗಿ ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ವೇಗವು ಸುಧಾರಿಸುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದ ಕೆಲವು ನಗರಗಳು ಇಂಟರ್ನೆಟ್ ವೇಗದ ವಿಷಯದಲ್ಲಿ ಇತರರಿಗಿಂತ ಬಹಳ ಮುಂದಿವೆ.

ಓಕ್ಲಾ ವರದಿಯ ಪ್ರಕಾರ, ಚೆನ್ನೈ ಭಾರತದಲ್ಲಿ ಅತಿ ಹೆಚ್ಚು ಇಂಟರ್ನೆಟ್ ವೇಗವನ್ನು ಹೊಂದಿರುವ ನಗರವಾಗಿದೆ. ಇಲ್ಲಿನ ಸರಾಸರಿ ಮೊಬೈಲ್ ಇಂಟರ್ನೆಟ್ ವೇಗ ಸುಮಾರು 51 Mbps ಆಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಎಂದು ವರದಿ ಹೇಳುತ್ತದೆ. ಚೆನ್ನೈನ ಬಲಿಷ್ಠ ನೆಟ್‌ವರ್ಕ್ ಮೂಲಸೌಕರ್ಯ ಮತ್ತು ವೇಗವಾಗಿ ವಿಸ್ತರಿಸುತ್ತಿರುವ 5G ಸೇವೆಗಳು ಅದನ್ನು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿವೆ.

ಸಿಲಿಕಾನ್ ಸಿಟಿ ಬೆಂಗಳೂರು ಇಂಟರ್ನೆಟ್ ವೇಗದಲ್ಲಿ ಎರಡನೇ ಸ್ಥಾನದಲ್ಲಿದೆ, ಸರಾಸರಿ ವೇಗ ಸುಮಾರು 42.50 Mbps. ಐಟಿ ಕೇಂದ್ರವಾಗಿರುವುದರಿಂದ, ನಗರವು ಬಲವಾದ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿದ್ದು, ಬಳಕೆದಾರರಿಗೆ ವೇಗದ ಮತ್ತು ಸ್ಥಿರವಾದ ಇಂಟರ್ನೆಟ್ ಸಂಪರ್ಕಗಳನ್ನು ಒದಗಿಸುತ್ತದೆ.

ಈ ಪಟ್ಟಿಯಲ್ಲಿ ಹೈದರಾಬಾದ್ ಮೂರನೇ ಸ್ಥಾನದಲ್ಲಿದ್ದು, ಸರಿಸುಮಾರು 41.68 Mbps ಇಂಟರ್ನೆಟ್ ವೇಗವನ್ನು ಹೊಂದಿದೆ. ಹೈದರಾಬಾದ್‌ನಲ್ಲಿ ಹೆಚ್ಚುತ್ತಿರುವ ಟೆಕ್ ಕಂಪನಿಗಳ ಉಪಸ್ಥಿತಿ ಮತ್ತು ಸುಧಾರಿತ ನೆಟ್‌ವರ್ಕ್ ಕವರೇಜ್ ಈ ವೇಗ ಹೆಚ್ಚಳಕ್ಕೆ ಕಾರಣವಾಗಿವೆ.

Haier New AC: ಭಾರತದ ಮೊದಲ ಸ್ವಯಂ ಶುಚಿಗೊಳಿಸುವ ಎಸಿ ಬಿಡುಗಡೆ, 10 ಸೆಕೆಂಡುಗಳಲ್ಲಿ ಫುಲ್ ಕೂಲ್: ಬೆಲೆ ಕೇವಲ…

ಈ ನಗರಗಳು ಮೊದಲ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದರೂ, ನವದೆಹಲಿ ಮತ್ತು ಮುಂಬೈನಂತಹ ನಗರಗಳು ಸಹ ತಮ್ಮ ಇಂಟರ್ನೆಟ್ ವೇಗವನ್ನು ವೇಗವಾಗಿ ಸುಧಾರಿಸುತ್ತಿವೆ. ದೆಹಲಿಯು ಸರಾಸರಿ 32 Mbps ವೇಗವನ್ನು ಹೊಂದಿದೆ ಮತ್ತು 5G ಬಿಡುಗಡೆಯಾದ ನಂತರ ಇದು ಸ್ಥಿರವಾಗಿ ಸುಧಾರಿಸುತ್ತಿದೆ.

ಭಾರತದಲ್ಲಿ ಇಂಟರ್ನೆಟ್ ವೇಗ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ. ಅತ್ಯಂತ ಮಹತ್ವದ ಕಾರಣವೆಂದರೆ 5G ತಂತ್ರಜ್ಞಾನದ ತ್ವರಿತ ವಿಸ್ತರಣೆ, ಇದು ಮೊಬೈಲ್ ಇಂಟರ್ನೆಟ್ ಅನ್ನು ಹಿಂದೆಂದಿಗಿಂತಲೂ ವೇಗಗೊಳಿಸಿದೆ. ಇದಲ್ಲದೆ, ಫೈಬರ್ ನೆಟ್‌ವರ್ಕ್‌ಗಳ ವಿಸ್ತರಣೆ, ಹೆಚ್ಚಿದ ಸ್ಪರ್ಧೆ ಮತ್ತು ಡಿಜಿಟಲ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯೂ ಈ ಬದಲಾವಣೆಗೆ ಕಾರಣವಾಗಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!

ಬೆಂಗಳೂರು, ಏಪ್ರಿಲ್ 4: ಬೆಂಗಳೂರಿನ (Bangalore) ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ಶುರುವಾದ ಸಣ್ಣ ವಿವಾದವೊಂದು ಇದೀಗ ಭೀಕರ ಮಾರಾಮಾರಿಯಲ್ಲಿ ಅಂತ್ಯವಾಗಿದೆ. ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಮಾಲೀಕ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಹಾಗೂ ಅದನ್ನು ವಿರೋಧಿಸಿದ್ದಕ್ಕೆ ಕೆಲಸದಿಂದ ತೆಗೆದಿದ್ದೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗಿದೆ.

ಆಲವಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್, ತನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರಿಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ ಇದನ್ನು ಆಕೆ ನಿರಾಕರಿಸಿದ್ದರು. ಈ ವಿಚಾರವಾಗಿ ಮನಸ್ತಾಪ ಉಂಟಾಗಿ ಮೋಹನ್ ಕುಮಾರ್ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಬ್ಯೂಟಿಷಿಯನ್​​ನ ಪತಿ ಆಕ್ರೋಶಗೊಂಡಿದ್ದರು. ಪತ್ನಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆತ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್‌ಗೆ ನುಗ್ಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯ


ಬ್ಯೂಟಿಷಿಯನ್‌ ಪತಿ ಮತ್ತು ಆತನ ಬೆಂಬಲಿಗರು ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಲಾಗಿದ್ದು, ಬಂದವರೆಲ್ಲರೂ ಸೇರಿ ಸಲೂನ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ಈ ಇಡೀ ದಾಳಿಯ ದೃಶ್ಯಗಳು ಸಲೂನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಸದ್ಯ ಹಲ್ಲೆಗೊಳಗಾದ ಮೋಹನ್ ಕುಮಾರ್ ಅವರು ಬ್ಯೂಟಿಷಿಯನ್‌, ಆಕೆಯ ಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

ಆ್ಯಂಕರ್ ಅನುಶ್ರೀ (Anushree) ಅವರು ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ, ತಾವು ನಡೆಸಿಕೊಡೋ ಶೋ ಬಗ್ಗೆ ಏನಾದರೂ ಆರೋಪ ಕೇಳಿ ಬಂದರೆ ನೇರವಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಅವರು ಹಿಂದೂ ಮುಂದೂ ಯೋಚಿಸೋದಿಲ್ಲ. ಈಗ ಸಂದರ್ಶನ ಒಂದರಲ್ಲಿ ಅವರು ನೇರ ಮಾತುಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಅವರು ಹೆಣ್ಣು ಮಕ್ಕಳಿಗೆ ಸೈಲೆಂಟ್ ಆಗಿ ನಡೆಯುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಅನುಶ್ರೀ ಅವರು ಸಂದರ್ಶನ ನೀಡಿದ್ದಕ್ಕಿಂತ, ಸಂದರ್ಶನ ಮಾಡಿದ್ದೇ ಹೆಚ್ಚು. ಅವರು ಅನೇಕ ಸೆಲೆಬ್ರಿಟಿಗಳನ್ನು ಇಂಟರ್​​ವ್ಯೂ ಮಾಡಿದ್ದಾರೆ. ಈಗ ಅವರನ್ನೇ ಸಂದರ್ಶನ ಮಾಡಲಾಗಿದೆ. ಆರ್​​ಜೆ ಮಯೂರ್ ಅವರು ತಮ್ಮ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ ಅಲ್ಲಿ ಅನುಶ್ರೀ ಇಂಟರ್​ವ್ಯೂ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರ ಖಾತೆಗೂ ಅಶ್ಲೀಲ ಕಮೆಂಟ್ ಬಂದೇ ಬರುತ್ತವೆ. ಆದರೆ, ಸೆಲೆಬ್ರಿಟಿಗಳು ಇದಕ್ಕೆ ಸಂತ್ರಸ್ತರಾಗುವ ಸಾಧ್ಯತೆ ಹೆಚ್ಚು. ಜನಸಾಮಾನ್ಯರಾದರೆ ಖಾತೆಯನ್ನು ಖಾಸಗಿಯಾಗಿ ಇಟ್ಟುಕೊಂಡು, ಪರಿಚಯ ಇರುವವರನ್ನು ಮಾತ್ರ ಫಾಲೋ ಮಾಡಲು ಅವಕಾಶ ನೀಡಬಹುದು. ಆದರೆ, ಸೆಲೆಬ್ರಿಟಿಗಳು ತಮ್ಮ ಖಾತೆಯನ್ನು ಓಪನ್ ಆಗಿ ಇಡುತ್ತಾರೆ. ಈ ಕಾರಣಕ್ಕೆ ಗೊತ್ತು ಪರಿಚಯ ಇಲ್ಲದವರು ಬಂದು ಅವರ ಖಾತೆಗೆ ಕಮೆಂಟ್ ಹಾಕುತ್ತಾರೆ. ಈ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಡಗಾರ್ ಎಂಬ ಪದ ಚರ್ಚೆಗೆ ಬಂದಿದೆ. ಡಗಾರ್ ಅಂದರೆ ನಡತೆಗೆಟ್ಟವಳು ಎಂಬ ಅರ್ಥ ನೀಡುತ್ತದೆ. ಈ ಪದ ಹೇಳಲು ಮಯೂರ್ ಅವರು ಮುಜುಗರ ಮಾಡಿಕೊಂಡಿದರು. ಆಗ ಮಾತನಾಡಿದ ಅನುಶ್ರೀ, ‘ನೋಡಿ ನಿಮಗೆ ಅದನ್ನು ಹೇಳಲೇ ಅಷ್ಟು ಮುಜುಗರ ಆಗುತ್ತಿದೆ ಎಂದರೆ ನಮಗೆ ಹಾಗೆ ಕರೆದಾಗ ಹೇಗನಿಸಬೇಡಿ’ ಎಂದು ಅನುಶ್ರೀ ಕೇಳಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ಬೇಸರ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ ನೋಡಿ!

ಮಡಿಕೇರಿ, ಏಪ್ರಿಲ್ 04: ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂಎಲ್‌ಸಿ ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಕಾಫಿ ಕದ್ದಿರುವುದು ಪತ್ತೆಯಾಗಿದೆ. ಶಾಸಕರ ಮನೆಯಲ್ಲೇ ನಡೆದ ಈ ಪ್ರಕರಣದಲ್ಲಿ, ಪೊನ್ನಪ್ಪನನ್ನು ಸುಜಾ ಕುಶಾಲಪ್ಪ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿದ್ದಾಗಿ ಆರೋಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದ್ದು, ತಪ್ಪೊಪ್ಪಿಗೆ ಹಿನ್ನೆಲೆ ಸುಜಾ ಕುಶಾಲಪ್ಪ ಅವರು ಪ್ರಕರಣ ದಾಖಲಿಸದೆ ಮಾನವೀಯತೆ ದೃಷ್ಟಿಯಿಂದ ಕ್ಷಮೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ವಿಕೃತ ಕಾಮಿಯ ಅಟ್ಟಹಾಸ: ‘ನನಗೆ ಎಚ್‌ಐವಿ ಇದೆ’ ಎಂದಿದ್ದಕ್ಕೆ ಮಹಿಳೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

ವಿಜಯವಾಡ, ಏ.4: ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಒಂದು ಅಮಾನೀಯ ಘಟನೆಯೊಂದು ನಡೆದಿದೆ. 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ, ಚಿತ್ರ ಹಿಂಸೆ ನೀಡಿದ್ದಾರೆ. ಗುರುವಾರ ಸಂಜೆ ಸಂತ್ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಚೆರ್ಲಾ ಪಟ್ಟಣದಲ್ಲಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆರೋಪಿಗಳು ಬಂದು ಈ ಅಪರಾಧ ಎಸಗಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಗುರುವಾರ ಮಧ್ಯಾಹ್ನ 3:30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಆರೋಪಿ ಕುಡಿಯಲು ನೀರು ಕೇಳುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿ, ಮಹಿಳೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಚೆರ್ಲಾ ಪಟ್ಟಣದ ಸಿಐ ವೆಂಕಟ ರಮಣ ಎಂಬುವವರು ತಿಳಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ನರಸರಾವ್‌ಪೇಟ ಏರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಹಿಳೆಯ ಮನೆ ಒಳಗೆ ನುಗ್ಗಿದ ನಂತರ, ಆರೋಪಿಯು ಆಕೆಯನ್ನು ಸ್ಕಾರ್ಫ್‌ನಿಂದ ಕಟ್ಟಿ, ಚಾಕು ತೋರಿಸಿ ಅತ್ಯಾಚಾರ ಮಾಡಿ, ಥಳಿಸಿದ್ದಾನೆ. ಈ ವೇಳೆ ಮಹಿಳೆ ತನಗೆ ಎಚ್‌ಐವಿ ಸೋಂಕು ಇದೆ ಎಂದು ಹೇಳಿಕೊಂಡ, ಕೋಪದಿಂದ ಕಬ್ಬಿಣದ ರಾಡ್​​ ಅನ್ನು ಆಕೆಯ ಖಾಸಗಿ ಭಾಗಕ್ಕೆ ತುರುಕಿದ್ದಾನೆ. ನಂತರ ಅಲ್ಲಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ದಾರುಣ ಸಾವು!

ಸಂತ್ರಸ್ತೆಯ ಜೊತೆ ವಾಸವಾಗಿದ್ದ ಆಕೆಯ ಸೋದರಳಿಯ ಹತ್ತನೇ ತರಗತಿ ಪರೀಕ್ಷೆ ಮುಗಿಸಿ ತನ್ನ ಹೆತ್ತವರ ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕ ಸಂತ್ರಸ್ತೆಯ ಮೊಬೈಲ್ ಫೋನ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಏನೋ ಸಮಸ್ಯೆಯಾಗಿದೆ ಎಂದು ತಿಳಿದು ಅವನು ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಆಕೆಯ ಮನೆಗೆ ಭೇಟಿ ನೀಡಿ ವಿಚಾರಿಸುವಂತೆ ಹೇಳಿದ್ದಾನೆ. ಬಾಲಕ ಮಾತಿನಂತೆ ಸ್ಥಳೀಯರು ಮಹಿಳೆಯ ಮನೆಗೆ ಧಾವಿಸಿ ನೋಡಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಮೊದಲು ಮಾಚೆರ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್‌ಪೇಟ ಏರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾದಾತ್ಮಕ ಹೇಳಿಕೆ… ಧೋನಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ, ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ನೀಡುತ್ತಿರುವ ಸರಣಿ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮಾಪಣೆ ಕೇಳಿದ್ದಾರೆ.

ಕ್ಷಮೆಯಾಚನೆಗೆ ಕಾರಣವೇನು?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಳೆದ ಹಲವು ವರ್ಷಗಳಿಂದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.

ಧೋನಿ ವಿರುದ್ಧದ ಆರೋಪ: ಧೋನಿ ಅವರು ಬೇಕೆಂದೇ ಯುವರಾಜ್ ಸಿಂಗ್ ಅವರ ವೃತ್ತಿಜೀವನವನ್ನು ಹಾಳು ಮಾಡಿದರು ಮತ್ತು ಅವರನ್ನು ತಂಡದಿಂದ ಹೊರಹಾಕಲು ಕಾರಣರಾದರು ಎಂದು ಯೋಗರಾಜ್ ಸಿಂಗ್ ಪದೇ ಪದೇ ಹೇಳುತ್ತಿದ್ದರು.

ಕಪಿಲ್ ದೇವ್ ವಿರುದ್ಧದ ದ್ವೇಷ: 1980ರ ದಶಕದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಕಾರಣ ಎಂದು ಯೋಗರಾಜ್ ಅವರು ದಶಕಗಳಿಂದ ಹಗೆತನ ಸಾಧಿಸುತ್ತಿದ್ದರು. ಇತ್ತೀಚೆಗೆ ಅವರು ಕಪಿಲ್ ದೇವ್ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು.

ಯುವರಾಜ್ ಸಿಂಗ್ ಪ್ರತಿಕ್ರಿಯೆ:

ಸ್ಪೋರ್ಟ್ಸ್ ತಕ್ (Sports Tak) ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್ “ನಾನು ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ತಂದೆ ಆಡುವ ಮಾತುಗಳು ಸರಿಯಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ.”

ಈ ಇಬ್ಬರೂ ದಿಗ್ಗಜರು ಭಾರತೀಯ ಕ್ರಿಕೆಟ್‌ಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ.  ತಂದೆಯ ಮಾತುಗಳು ತಮ್ಮ ವೈಯಕ್ತಿಕ ಅಭಿಪ್ರಾಯವಲ್ಲ ಮತ್ತು ತಂದೆ-ಮಗನ ನಡುವಿನ ಆಲೋಚನೆಗಳಲ್ಲಿ ವ್ಯತ್ಯಾಸವಿದೆ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಯೋಗರಾಜ್ ಸಿಂಗ್ ಮಾಡಿದ ಆರೋಪಗಳೇನು?

ಯುವರಾಜ್ ಸಿಂಗ್ ಫಾರ್ಮ್‌ನಲ್ಲಿದ್ದರೂ ಧೋನಿ ಅವರನ್ನು ತಂಡದಿಂದ ಹೊರಹಾಕಲು ಸಂಚು ರೂಪಿಸಿದರು ಮತ್ತು ಅವರ ಕ್ರಿಕೆಟ್ ಬದುಕನ್ನು ಅವಧಿಗಿಂತ ಮುನ್ನವೇ ಕೊನೆಗೊಳಿಸಿದರು ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದರು.

ಮತ್ತೊಮದು  ಸಂದರ್ಶನದಲ್ಲಿ, “ಧೋನಿಗೆ ಒಂದು ದಿನ ಗತಿ ಇಲ್ಲದಂತಾಗುತ್ತದೆ, ಅವರು ಭಿಕ್ಷೆ ಬೇಡಬೇಕಾಗುತ್ತದೆ” ಎಂದು ಶಪಿಸಿದ್ದರು.

ಹಾಗೆಯೇ  ಧೋನಿ ಕೇವಲ ತನ್ನ ಹೆಸರಿಗಾಗಿ ಆಡುತ್ತಾರೆ ಮತ್ತು ತಂಡದ ಇತರ ಪ್ರತಿಭಾವಂತ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದು ಯೋಗರಾಜ್ ಸಿಂಗ್ ದೂರಿದ್ದರು.

ಕಪಿಲ್ ದೇವ್ ಮತ್ತು ಯೋಗರಾಜ್ ಸಿಂಗ್ ಒಟ್ಟಿಗೆ ಕ್ರಿಕೆಟ್ ಆಡಿದವರು. ಆದರೆ ಯೋಗರಾಜ್ ಅವರ ಸಿಟ್ಟು ದಶಕಗಳಷ್ಟು ಹಳೆಯದು.

1981ರಲ್ಲಿ ಕೇವಲ ಒಂದು ಅಂತರಾಷ್ಟ್ರೀಯ ಪಂದ್ಯ ಆಡಿದ ನಂತರ ಯೋಗರಾಜ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಕ್ಕೆ ಕಪಿಲ್ ದೇವ್ ಅವರೇ ಕಾರಣ ಎಂದು ಯೋಗರಾಜ್ ನಂಬಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ತಮಗೆ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಸಿಟ್ಟಾಗಿ ಕಪಿಲ್ ದೇವ್ ಅವರ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. “ಕಪಿಲ್ ದೇವ್ ಅವರ ಕಾಲನ್ನು ಮುರಿದು ಮನೆಗೆ ಕಳುಹಿಸಬೇಕಿತ್ತು” ಎಂಬ ಅರ್ಥದಲ್ಲಿ ಮಾತನಾಡಿ ವಿವಾದ ಹುಟ್ಟು ಹಾಕಿದ್ದರು.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರಿಗೆ ದಂಡದ ಶಿಕ್ಷೆ..!

ಇದೀಗ ತಂದೆಯ ವಿವಾದಾತ್ಮಕ ಹೇಳಿಕೆಗಳಿಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್ ಅವರಲ್ಲಿ ಯುವರಾಜ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Source link

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ, ಏಪ್ರಿಲ್ 4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಸದ್ದು ಮಾಡುತ್ತಿರುವ ‘ಲವ್ ಜಿಹಾದ್ (Love Jihad)’ ಆರೋಪದ ಪ್ರಕರಣ ಕ್ಷಣಕ್ಕೊಂದು ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಡೆಲಿಂಗ್ ಆಸೆ ತೋರಿಸಿ ಯುವತಿಯನ್ನು ನಂಬಿಸಿದ್ದ ಜಿಮ್ ಟ್ರೈನರ್ ಸಮೀರ್, ಆಕೆಯನ್ನು ಗರ್ಭಿಣಿ ಮಾಡಿ ನಂತರ ಗರ್ಭಪಾತ ಮಾಡಿಸಿದ್ದಾನೆಯೇ ಎಂಬ ದಟ್ಟ ಅನುಮಾನ ಇದೀಗ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ವೈದ್ಯಕೀಯ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಯುವತಿಯ ಪೋಷಕರ ಆರೋಪದ ಪ್ರಕಾರ, ಸಮೀರ್ ಆಕೆಗೆ ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ, ಅದಕ್ಕಾಗಿ ನಿತ್ಯ ಜಿಮ್‌ಗೆ ಬಾ’ ಎಂದು ನಂಬಿಸಿದ್ದ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಕನಸು ಕಂಡಿದ್ದ ಯುವತಿ, ಸಮೀರ್ ಮಾತುಗಳನ್ನು ನಂಬಿ ಆತನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಸಮೀರ್, ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬ ಬಲವಾದ ಅನುಮಾನವೂ ಇದೀಗ ಪೊಲೀಸರಿಗೆ ವ್ಯಕ್ತವಾಗಿದೆ.

ಏನಿದು ಪ್ರಕರಣ? ಪೂರ್ಣ ಹಿನ್ನೆಲೆ ಇಲ್ಲಿದೆ

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜಿಮ್ ಟ್ರೈನರ್ ಸಮೀರ್ ವಿರುದ್ಧ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿತ್ತು. ಯುವತಿಯನ್ನು ನಂಬಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು, ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾನೆ, ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.

ಆದರೆ, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದ ಆರೋಪಿ ಸಮೀರ್, ತಾನು ಯಾವುದೇ ಔಷಧ ನೀಡಿಲ್ಲ ಎಂದು ವಾದಿಸಿದ್ದ. ‘ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ನಾನು ಮಾಡಿಲ್ಲ, ಆ ಹುಡುಗಿಯೇ ತನ್ನ ಫೋನ್‌ನಲ್ಲಿ ಚಿತ್ರೀಕರಿಸಿದ್ದಾಳೆ. ಅಂದು ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಇದೀಗ ಗರ್ಭಪಾತದ ಆರೋಪ ಕೇಳಿಬಂದಿರುವುದರಿಂದ ಪೊಲೀಸರು ಯುವತಿ ಮತ್ತು ಸಮೀರ್ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಸದ್ಯ ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬೀಳಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi and Menstruation: ಮುಟ್ಟಿನ ಸಮಯದಲ್ಲಿ ತುಳಸಿ ಗಿಡ ಏಕೆ ಮುಟ್ಟಬಾರದು? ಸತ್ಯ ಮತ್ತು ಮಿಥ್ಯಗಳು

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿಯನ್ನು ಕೇವಲ ಗಿಡವಾಗಿ ನೋಡದೆ ‘ಲಕ್ಷ್ಮಿ’ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹಿರಿಯರು ಇಂದಿಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳುತ್ತಾರೆ. ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳು:

ಪುರಾಣಗಳ ಪ್ರಕಾರ ತುಳಸಿಯು ಅತ್ಯಂತ ಶುದ್ಧ ಮತ್ತು ದೈವಿಕ ಶಕ್ತಿಯ ಸಂಕೇತ. ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ‘ಅಶುದ್ಧತೆ’ ಇರುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಗಿಡವು ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗಿ ಹೋಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ವೈಜ್ಞಾನಿಕ ದೃಷ್ಟಿಕೋನ:

ಆಧುನಿಕ ವಿಜ್ಞಾನದ ಪ್ರಕಾರ, ಮಹಿಳೆಯರ ಋತುಚಕ್ರಕ್ಕೂ ಮತ್ತು ಸಸ್ಯಗಳ ಆರೋಗ್ಯಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಮಹಿಳೆಯರ ದೇಹದಲ್ಲಿ ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಸಸ್ಯಗಳನ್ನು ಒಣಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಯಾವುದೇ ವೈಜ್ಞಾನಿಕ ಸಂಶೋಧನೆಯೂ ಸಹ “ಮಹಿಳೆಯರ ಸ್ಪರ್ಶದಿಂದ ಗಿಡ ಒಣಗುತ್ತದೆ” ಎಂಬ ವಾದವನ್ನು ಸಾಬೀತುಪಡಿಸಿಲ್ಲ. ಗಿಡ ಒಣಗಲು ಮುಖ್ಯ ಕಾರಣಗಳು ನೀರು, ಸೂರ್ಯನ ಬೆಳಕು ಅಥವಾ ಪೋಷಕಾಂಶಗಳ ಕೊರತೆಯೇ ಹೊರತು ಮಾನವ ಸ್ಪರ್ಶವಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಹಿರಿಯರು ಈ ನಿಯಮ ಮಾಡಲು ಅಸಲಿ ಕಾರಣವೇನು?

ಹಿಂದಿನ ಕಾಲದಲ್ಲಿ ಈ ನಿಯಮಗಳನ್ನು ಜಾರಿಗೆ ತರಲು ಕೆಲವು ಪ್ರಾಯೋಗಿಕ ಕಾರಣಗಳಿದ್ದವು:

ವಿಶ್ರಾಂತಿಯ ಅಗತ್ಯ:

ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯಲ್ಲೇ ದೈಹಿಕವಾಗಿ ತುಂಬಾ ಕೆಲಸ ಮಾಡಬೇಕಿತ್ತು. ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಸೊಂಟ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಅವರಿಗೆ ವಿಶ್ರಾಂತಿ ನೀಡಲು ‘ದೂರವಿರುವ’ ಪದ್ಧತಿಯನ್ನು ತರಲಾಯಿತು.

ನೈರ್ಮಲ್ಯದ ಕಾಳಜಿ:

ಅಂದು ಇಂದಿನಂತೆ ಸ್ಯಾನಿಟರಿ ಪ್ಯಾಡ್‌ಗಳ ಸೌಲಭ್ಯವಿರಲಿಲ್ಲ. ಸೋಂಕು ಹರಡದಂತೆ ತಡೆಯಲು ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅವರನ್ನು ದೇವಸ್ಥಾನ ಅಥವಾ ಪವಿತ್ರ ಗಿಡಗಳಿಂದ ದೂರವಿಡಲಾಗುತ್ತಿತ್ತು.

ರೋಗನಿರೋಧಕ ಶಕ್ತಿ: ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುತ್ತದೆ. ತುಳಸಿ ಗಿಡವು ಗಿಡಮೂಲಿಕೆಗಳ ಆಗರವಾಗಿದ್ದರೂ, ತೋಟದ ಕೆಲಸ ಅಥವಾ ಗಿಡದ ಆರೈಕೆಯಲ್ಲಿ ತೊಡಗುವುದರಿಂದ ಅವರಿಗೆ ಆಯಾಸವಾಗಬಾರದು ಎಂಬುದು ಅಂದಿನವರ ಕಾಳಜಿಯಾಗಿತ್ತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version