ಭಾರತೀಯ ಬೌಲರ್​ಗಳ ಬೆಂಡೆತ್ತಿದ ಬೆಥೆಲ್: ಇಂಗ್ಲೆಂಡ್​ಗೆ ಭರ್ಜರಿ ಜಯ – Kannada News | England vs India, 2nd T20I Highlights

ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 50 ರನ್​ ಪೇರಿಸಿದ ಬಳಿಕ ವೈಭವ್ ಸೂರ್ಯವಂಶಿ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಜೊತೆಗೂಡಿ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇನಲ್ಲೇ 65 ರನ್ ಕಲೆಹಾಕಿತು.

ಪವರ್​ಪ್ಲೇ ಮುಕ್ತಾಯವಾಗುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಅಭಿಷೇಕ್ ಶರ್ಮಾ (43 ರನ್, 24 ಎಸೆತಗಳು) ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ನಾಯಕ ಶ್ರೇಯಸ್ ಅಯ್ಯರ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು.

ಮತ್ತೊಂದಡೆ ರನ್​ಗಳಿಸಲು ಪರದಾಡಿದ  ಇಶಾನ್ ಕಿಶನ್ 49 ರನ್​ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು. ಈ ನಿಧಾನಗತಿಯ ಬ್ಯಾಟಿಂಗ್​ನಿಂದ ಭಾರತದ ಸ್ಕೋರ್ ವೇಗವು ಕುಂಠಿತವಾಯಿತು.  ಆ ಬಳಿಕ ಬಂದ ಶಿವಂ ದುಬೆ 5 ರನ್​ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಮೊದಲ ಮೂರು ಎಸೆತಗಳಲ್ಲಿ 6,6,4 ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​ ಕಲೆಹಾಕಿತು.

191 ರನ್​ಗಳ ಗುರಿ:

191 ರನ್​ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಫಿಲ್ ಸಾಲ್ಟ್ (0) ಹಾಗೂ ಜೋಸ್ ಬಟ್ಲರ್ (0) ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ಔಟಾದರು.

ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹ್ಯಾರಿ ಬ್ರೂಕ್ ಕೇವಲ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 39 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಹ್ಯಾರಿ ಬ್ರೂಕ್ (39) ಔಟಾದ ಬಳಿಕ ಜೊತೆಗೂಡಿದ ಜೇಕಬ್ ಬೆಥೆಲ್ ಹಾಗೂ ಟಾಮ್ ಬ್ಯಾಂಟನ್ ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ 3 ವಿಕೆಟ್ ನಷ್ಟದೊಂದಿಗೆ ಇಂಗ್ಲೆಂಡ್ ತಂಡದ ಸ್ಕೋರ್ 100ರ ಗಡಿದಾಟಿತು.

ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಟಾಮ್ ಬ್ಯಾಂಟನ್ (39) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ವಿಲ್ ಜ್ಯಾಕ್ಸ್ (9) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಜೇಕಬ್ ಬೆಥೆಲ್ ತಂಡವನ್ನು ಗುರಿ ಮುಟ್ಟಿಸುವ ಪ್ರಯತ್ನ ಮುಂದುವರೆಸಿದರು. ಈ ಪ್ರಯತ್ನದೊಂದಿಗೆ ಬೆಥೆಲ್ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಇದಾಗ್ಯೂ ಕೊನೆಯ 5 ಓವರ್​ಗಳಲ್ಲಿ ಇಂಗ್ಲೆಂಡ್ ತಂಡಕ್ಕೆ 59 ರನ್​​ಗಳ ಅವಶ್ಯಕೆಯಿತ್ತು. ಈ ಹಂತದಲ್ಲಿ 17ನೇ ಓವರ್​ ಎಸೆದ ರವಿ ಬಿಷ್ಣೋಯ್ ನೀಡಿದ್ದು ಬರೋಬ್ಬರಿ 29 ರನ್​ಗಳು. ಪರಿಣಾಮ ಕೊನೆಯ 18 ಎಸೆತಗಳಲ್ಲಿ ಇಂಗ್ಲೆಂಡ್ ಗುರಿ 20 ಕ್ಕೆ ಬಂದು ನಿಂತಿತು.

ಇತ್ತ 46 ಎಸೆತಗಳನ್ನು ಎದುರಿಸಿದ ಜೇಕಬ್ ಬೆಥೆಲ್ 5 ಭರ್ಜರಿ ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 76 ರನ್ ಬಾರಿಸಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ 19 ಓವರ್​​ಗಖಕ್ಕು 191 ರನ್​ಗಳಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಇತಿಹಾಸ ಬರೆದರೂ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಇಂಗ್ಲೆಂಡ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.

Source link

ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?: ಜಿಲ್ಲಾದ್ಯಂತ ಕಂದಾಯ ಸಿಬ್ಬಂದಿ ಧರಣಿ – Kannada News | Karnataka VAOs Tragic Demise: Association Demands Action Against Senior Officers Over Election Duty Pressure

ತುಮಕೂರು,ಜು.4: ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿ ಕುಮಾರಿ ಭುವನಾ ಅವರು ಎಸ್ಐಆರ್ ಕರ್ತವ್ಯಕ್ಕೆ ತೆರಳುವಾಗ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಧಿಕಾರಿಗಳ ವಿಪರೀತ ಕೆಲಸದ ಒತ್ತಡ ಮತ್ತು ಕಿರುಕುಳವೇ ಅವರ ಸಾವಿಗೆ ಕಾರಣ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಆರೋಪಿಸಿದೆ. ಸಂಘದ ರಾಜ್ಯಾಧ್ಯಕ್ಷ ಯೋಗೇಶ್ ನಾಯಕ್ ಮಾತನಾಡಿ, ಬೆಳಗಿನ ಜಾವ 6:30ರ ಸುಮಾರಿಗೆ ಮೇಲಾಧಿಕಾರಿಗಳ ಒತ್ತಡದಿಂದ ಕೆಲಸಕ್ಕೆ ತೆರಳುತ್ತಿದ್ದ ಭುವನಾ ಅವರು ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ತಹಸೀಲ್ದಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಅತಿಯಾದ ಕೆಲಸದ ಬೇಡಿಕೆ ಮತ್ತು ಹಗಲು-ರಾತ್ರಿ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಅವರು ಖಂಡಿಸಿದ್ದಾರೆ. ಸರ್ಕಾರಿ ನೌಕರರ ಕಾರ್ಯಾವಧಿ ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ ಇರಬೇಕು ಎಂಬ ಸುತ್ತೋಲೆ ಇದ್ದರೂ, ರಾತ್ರಿ 10-11 ಗಂಟೆಯವರೆಗೆ ಸಭೆಗಳನ್ನು ನಡೆಸುವುದು ಮತ್ತು ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡುವುದು ಅವೈಜ್ಞಾನಿಕ ಎಂದು ಯೋಗೇಶ್ ನಾಯಕ್ ತಿಳಿಸಿದ್ದಾರೆ. ಈ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಭುವನಾ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸಂಘವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತುಮಕೂರು ಜಿಲ್ಲೆಯ 500ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಘೋಷಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ? – Kannada News | Which Central Government scheme is best for installing a solar Panel at your home? How to apply?

ನವದೆಹಲಿ, ಜುಲೈ 4: ಭಾರತದಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು (Solar Panels) ಅಳವಡಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯೆಂದರೆ “ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” (PM Surya Ghar: Muft Bijli Yojana). ಪರಿಸರ ಸ್ನೇಹಿ ಜೀವನ ಮತ್ತು ವಿದ್ಯುತ್ ಉಳಿತಾಯಕ್ಕೆ ನಿಮ್ಮ ಮನೆಗೆ ಸೋಲಾರ್ ಫಲಕಗಳನ್ನು ಹಾಕಿಸಲು ನೀವು ಯೋಚಿಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ವಿವರಗಳು ಇಲ್ಲಿವೆ…

ಈ ಯೋಜನೆಯ ಪ್ರಮುಖ ಉದ್ದೇಶಗಳು:

– ದೇಶದ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು.

– ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಪರಿಸರಸ್ನೇಹಿ ಇಂಧನ ಬಳಕೆಯನ್ನು ಹೆಚ್ಚಿಸುವುದು.

– ಸಾರ್ವಜನಿಕರ ವಿದ್ಯುತ್ ಬಿಲ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು.

ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿಯ ವಿವರಗಳು:

ಪಿಎಂ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಸಿಸ್ಟಮ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಭಾರಿ ಸಬ್ಸಿಡಿಯನ್ನು ನೀಡುತ್ತದೆ. ಸಾಮಾನ್ಯ ಮಧ್ಯಮ ವರ್ಗದ ಮನೆಗಳಿಗೆ 2ರಿಂದ 3 ಕಿಲೋವ್ಯಾಟ್ ಸೋಲಾರ್ ಸಿಸ್ಟಮ್ ಸಾಕಾಗುತ್ತದೆ.

1 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 30,000 ರೂ. ಸಬ್ಸಿಡಿ ಸಿಗುತ್ತದೆ.

2 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 60,000 ರೂ. ಸಬ್ಸಿಡಿ ಸಿಗುತ್ತದೆ.

3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ಕಿಲೋವ್ಯಾಟ್​ ಸಾಮರ್ಥ್ಯಕ್ಕೆ: ಗರಿಷ್ಠ 78,000ರವರೆಗೆ ಸಬ್ಸಿಡಿ ದೊರೆಯುತ್ತದೆ.

ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:

– ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.

– ಸ್ವಂತ ಮನೆ ಮತ್ತು ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ, ನೆರಳು ಬೀಳದ ಟೆರೇಸ್ ಹೊಂದಿರಬೇಕು.

– ಮನೆಗೆ ಸೂಕ್ತವಾದ ವಿದ್ಯುತ್ ಸಂಪರ್ಕ ಇರಬೇಕು.

– ಈ ಹಿಂದೆ ಯಾವುದೇ ಸೌರ ಫಲಕ ಯೋಜನೆಯಡಿ ಸರ್ಕಾರದಿಂದ ಸಬ್ಸಿಡಿ ಪಡೆದಿರಬಾರದು.

ಈ ಯೋಜನೆಯಿಂದ ಗ್ರಾಹಕರಿಗೆ ಆಗುವ ಲಾಭಗಳು:

ಉಚಿತ ವಿದ್ಯುತ್: ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುವುದರಿಂದ ವಿದ್ಯುತ್ ಬಿಲ್ ಸಂಪೂರ್ಣ ಉಳಿತಾಯವಾಗುತ್ತದೆ.

ಹೆಚ್ಚುವರಿ ಆದಾಯ: ನಿಮ್ಮ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ನೀವು ಸರ್ಕಾರದ ಗ್ರಿಡ್‌ಗೆ (Bescom, Mescom ಇತ್ಯಾದಿ) ಮಾರಾಟ ಮಾಡಿ ಹಣ ಗಳಿಸಬಹುದು.

ಕಡಿಮೆ ಬಡ್ಡಿದರದಲ್ಲಿ ಸಾಲ: ಸೋಲಾರ್ ಖರೀದಿಸಲು ಹಣದ ಕೊರತೆ ಇದ್ದರೆ ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತ ಸಾಲ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್​​ಟಾಪ್ ಸೋಲಾರ್ ಸ್ಕೀಮ್

ಅರ್ಜಿ ಸಲ್ಲಿಸುವುದು ಹೇಗೆ?:

ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟು…

– ಅಧಿಕೃತ ವೆಬ್‌ಸೈಟ್‌ pmsuryaghar.gov.in ಪೋರ್ಟಲ್‌ಗೆ ಭೇಟಿ ನೀಡಿ.

– ನಿಮ್ಮ ರಾಜ್ಯ, ವಿದ್ಯುತ್ ಸರಬರಾಜು ಕಂಪನಿ (ಉದಾಹರಣೆಗೆ: BESCOM/ HESCOM/ MESCOM), ಗ್ರಾಹಕ ಖಾತೆ ಸಂಖ್ಯೆ (ನಿಮ್ಮ ಕರೆಂಟ್​ ಬಿಲ್​ನಲ್ಲಿರುತ್ತದೆ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.

– ಲಾಗಿನ್ ಆದ ನಂತರ ‘Rooftop Solar’ಗಾಗಿ ಅರ್ಜಿ ಸಲ್ಲಿಸಿ.

– ನಿಮ್ಮ ಸ್ಥಳೀಯ DISCOM ಪರಿಶೀಲಿಸುವವರೆಗೆ ಮತ್ತು ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೆ ಕಾಯಿರಿ.

– ನಿಮ್ಮ ಸ್ಥಳೀಯ ವಿದ್ಯುತ್ ಕಂಪನಿಯಿಂದ ಅನುಮೋದನೆ ಸಿಕ್ಕ ನಂತರ, ನೋಂದಾಯಿತ ವೆಂಡರ್‌ಗಳ (Registered Vendors) ಮೂಲಕ ನಿಮ್ಮ ಮನೆಯ ಮೇಲೆ ಸೋಲಾರ್ ಅಳವಡಿಸಿ.

– ಸೋಲಾರ್ ಅಳವಡಿಕೆ ಪೂರ್ಣಗೊಂಡ ನಂತರ ನೆಟ್ ಮೀಟರ್ (Net Meter) ಅಳವಡಿಕೆಗೆ ಅರ್ಜಿ ಸಲ್ಲಿಸಿ.

– ಸಬ್ಸಿಡಿ ಪಡೆಯಲು ಪಿಎಂ ಸೂರ್ಯ ಘರ್ ಯೋಜನೆಯ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ರದ್ದಾದ ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯೊಂದಿಗೆ ಸಲ್ಲಿಸಿ.

– ಅಪ್ರೂವ್ ಆದ 30 ದಿನದೊಳಗೆ ಸರ್ಕಾರದ ಸಬ್ಸಿಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗ್ರಾಮಾಯಣ’ ಸಿನಿಮಾದ ವಿರುದ್ಧ ತಡೆಯಾಜ್ಞೆ: ಏನಿದು ವಿವಾದ? – Kannada News | Stay on Vinay Rajkumar starrer Gramayana movie

ವಿನಯ್ ರಾಜ್​​ಕುಮಾರ್ (Vinay Rajkumar), ಮೇಘನಾ ಶೆಟ್ಟಿ, ಲೂಸ್ ಮಾದ ಯೋಗಿ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ‘ಗ್ರಾಮಾಯಣ’ ಸಿನಿಮಾ ಇದೇ ವಾರ ಬಿಡುಗಡೆ ಆಗಿದೆ. ಹಲವು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿಕೊಂಡು ಕೊನೆಗೂ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಆದರೆ ಸಿನಿಮಾ ಬಿಡುಗಡೆ ಆದ ಮೇಲೂ ಸಹ ಸಂಕಷ್ಟಗಳು ಕೊನೆಯಾಗಿಲ್ಲ. ಇದೀಗ ಈ ಸಿನಿಮಾದ ವಿರುದ್ಧ ತಡೆ ಆಜ್ಞೆ ತರಲಾಗಿದೆ.

‘ಗ್ರಾಮಾಯಣ’ ಸಿನಿಮಾದ ಮೂಲ ನಿರ್ಮಾಪಕರಾಗಿದ್ದವರ ಮಕ್ಕಳು, ಹಾಗೂ ಕುಟುಂಬಸ್ಥರು ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿನಿಮಾದ ವಿರುದ್ಧ ತಡೆಯಾಜ್ಞೆ ತರಲು ಯಶಸ್ವಿ ಆಗಿದ್ದಾರೆ. ಆದರೆ ಈ ತಡೆ ಆಜ್ಞೆ ಕೇವಲ ಡಿಜಿಟಲ್ ಮತ್ತು ಸ್ಯಾಟಲೈಟ್ ರಿಲೀಸ್​​ಗೆ ಮಾತ್ರವೇ ತರಲಾಗಿದೆ. ಆದರೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವುದಕ್ಕೆ ತಡೆ ಆಜ್ಞೆ ತಂದಿಲ್ಲ. ಹಾಗಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣಬಹುದಾಗಿದೆ.

2020ಕ್ಕೂ ಮುಂಚೆ ಮೊದಲಿಗೆ ‘ಗ್ರಾಮಾಯಣ’ ಸಿನಿಮಾ ಶುರು ಮಾಡಿದ್ದಾಗ ಅದರ ನಿರ್ಮಾಪಕರಾಗಿದ್ದ ಲಕ್ಷ್ಮಿ ನರಸಿಂಹ ಮೂರ್ತಿ ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಲಕ್ಷ್ಮಿ ನರಸಿಂಹ ಮೂರ್ತಿ ಅವರು ಸಿನಿಮಾ ಶುರು ಮಾಡಿದಾಗ ನಿರ್ದೇಶಕ ದೇವನೂರು ಚಂದ್ರು ಅವರು ನಿರ್ದೇಶಕರು. ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಆದರೆ ಕೆಲವೇ ದಿನಗಳಲ್ಲಿ ಕೋವಿಡ್ ಸಮಯದಲ್ಲಿ ನಿರ್ಮಾಪಕರ ಲಕ್ಷ್ಮಿ ನರಸಿಂಹ ಮೂರ್ತಿ ನಿಧನರಾದರು. ಬಳಿಕ ಅವರ ಪತ್ನಿ ಸಿನಿಮಾದ ಹಕ್ಕುಗಳನ್ನು ನಿರ್ದೇಶಕ ದೇವನೂರು ಚಂದ್ರು ಅವರಿಗೆ ಮಾರಾಟ ಮಾಡಿದರು. ಬಳಿಕ ಅದನ್ನು ಲಹರಿ ಸಂಸ್ಥೆ ಖರೀದಿ ಮಾಡಿ ಸಿನಿಮಾ ಮಾಡಿ ಇದೀಗ ಬಿಡುಗಡೆ ಸಹ ಮಾಡಿದೆ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ? ನಿಜಾಂಶವೇನು?

ಆದರೆ ಈಗ ಲಕ್ಷ್ಮಿ ನರಸಿಂಹ ಮೂರ್ತಿ ಅವರ ಪುತ್ರರಾದ ಮನೋಹರ್ ಕೃಷ್ಣ ಮತ್ತು ಕುಮಾರಿ ಅವರುಗಳು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ತಮ್ಮ ಅನುಮತಿ ಪಡೆಯದೇ ತಮ್ಮ ತಾಯಿ ರಹಸ್ಯ ಒಪ್ಪಂದದ ಮೂಲಕ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ಅಸಲಿಗೆ ಸಿನಿಮಾದ ಹಕ್ಕುಸ್ವಾಮ್ಯದಲ್ಲಿ ತಮಗೆ ಮುಕ್ಕಾಲು ಪಾಲು ಭಾಗ ಸಿಗಬೇಕಿತ್ತು. ಅದರಿಂದ ನಾವು ವಂಚಿತರಾಗಿದ್ದೇವೆ ಎಂದು ಲಕ್ಷ್ಮಿ ನರಸಿಂಹ ಮೂರ್ತಿ ಅವರ ಮಕ್ಕಳು ಹೇಳಿದ್ದಾರೆ. ಅವರ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ‘ಗ್ರಾಮಾಯಣ’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಬಿಡುಗಡೆಗೆ ತಡೆ ನೀಡಿದೆ. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತಡೆ ಆಜ್ಞೆ ನೀಡಲಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ; ಪ್ರಿಯಾಂಕ್ ಖರ್ಗೆ – Kannada News | Priyank Kharge Denies Darshan–Vinay Kulkarni Meeting, Says I’m Not in Charge of Celebrities

ಬೆಂಗಳೂರು, ಜುಲೈ 04: ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ. ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ, ಜೈಲು ಆಡಳಿತ ಮತ್ತು ಕೈದಿಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸನ್ನಡತೆ ಆಧಾರದಲ್ಲಿ 24 ಕೈದಿಗಳು ಬಿಡುಗಡೆ ಮಾಡಲಾಗಿದೆ ಎಂದರು. ಇನ್ನು ಜೈಲಿನ ಆಡಳಿತ ವೈಖರಿ ಬಗ್ಗೆ ಮಾಹಿತಿಯನ್ನ ಪಡೆದಿದ್ದೇನೆ. ಸಾಕಷ್ಟು ವಿಚಾರಣಾಧೀನ ಕೈದಿಗಳನ್ನ ಭೇಟಿ ಮಾಡಿ ಮಾತನಾಡಿದೆ. ಸಣ್ಣಪುಟ್ಟ ಕ್ರೈಂ ಮಾಡಿ ಆರ್ಥಿಕ ನೆರವಿಲ್ಲದೆ ಜೈಲಲ್ಲಿದ್ದಾರೆ. ಅಂತಹವರಿಗೆ ಕಾನೂನು, ಆರ್ಥಿಕ ನೆರವು ಬಗ್ಗೆ ಚಿಂತನೆ ಮಾಡಲಾಗುವುದು. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೊಲೆ ಆರೋಪಿ ಪವಿತ್ರಾ ಗೌಡಗೆ ರಾಜಾತಿಥ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು, ಜೈಲಿನಲ್ಲಿ ಯಾರಿಗೂ ಕೂಡ ವಿಶೇಷ ಆತಿಥ್ಯ ನೀಡುತ್ತಿಲ್ಲ. ಆ ರೀತಿ ಕಂಡು ಬಂದರೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ – Kannada News | Remember, I Am Still Alive; Mamata Banerjee angry on Rebel TMC Leaders dares directly join BJP

ಕೊಲ್ಕತ್ತಾ, ಜುಲೈ 4: ಪಶ್ಚಿಮ ಬಂಗಾಳದ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರೆದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷೆ ಮಮತಾ ಬ್ಯಾನರ್ಜಿ ಇಂದು ತಮ್ಮ ಪಕ್ಷದ ಬಂಡಾಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರನ್ನು “ದ್ರೋಹಿಗಳು” ಎಂದು ಕರೆದಿರುವ ಮಮತಾ ಬ್ಯಾನರ್ಜಿ (Mamata Banerjee), ಈ ನಾಯಕರು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಪಕ್ಷದೊಂದಿಗೆ ಉಳಿದಿರುವ ಕಾರ್ಯಕರ್ತರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಟಿಎಂಸಿಯ ಬಂಡಾಯ ಬಣವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, “ಟಿಎಂಸಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಿದ ನಾಯಕರೇ ಈಗ ಪಕ್ಷವು ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿರುವುದು ವಿರೋಧಾಭಾಸವಾಗಿದೆ. ಒಂದು ವೇಳೆ ಅದೇ ನಿಜವಾಗಿದ್ದರೆ, ಅವರು 2026ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಲ್ಲಿ ಹೇಗೆ ಸ್ಪರ್ಧಿಸಿದರು? ಅವರಿಗೆ ಪಕ್ಷದ ಚಿಹ್ನೆಯನ್ನು ನೀಡಿದ್ದು ನಾನು. 2026ರ ಚುನಾವಣೆಗೆ ಅವರ ನಾಮಪತ್ರಗಳಿಗೆ ನಾನೇ ಸಹಿ ಹಾಕಿದ್ದೆ. ಚುನಾವಣೆ ಮುಗಿದ ಕೇವಲ ಎರಡು ತಿಂಗಳಲ್ಲೇ ನೀವು ಹೇಗೆ ದ್ರೋಹಿಗಳಾದಿರಿ? ಎಲ್ಲದಕ್ಕೂ ಒಂದು ಮಿತಿ ಇರಬೇಕು. ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ. ನೀವು ಬೇಕಿದ್ದರೆ ನೇರವಾಗಿ ಬಿಜೆಪಿಗೆ ಸೇರಿ. ಆದರೆ, ನಾನು ಬಿಜೆಪಿ ಎದುರು ತಲೆ ಬಾಗಿಸುವ ಮಾತೇ ಇಲ್ಲ” ಎಂದು ಅವರು ಆಕ್ರೋಶ ಹೊರಹಾಕಿದರು.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀರಾಮನ ಚಿನ್ನಾಭರಣ ದೋಚಲು 200 ಖದೀಮರ ಜಾಲ: ಅಯೋಧ್ಯೆಯಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ? – Kannada News | Ayodhya Ram Mandir Donation Scam: 200 Member Network Exposed; Karnataka Link Emerges

ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್Image Credit source: Getty images

ಬೆಂಗಳೂರು, ಜುಲೈ 04: ಅಯೋಧ್ಯೆ ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್​​​ಗೆ (Ayodhya Ram Mandir Donation Scam) ಸಂಬಂಧಿಸಿದಂತೆ ಬಗೆದಷ್ಟು ಅಕ್ರಮ, ಕೆದಕಿದಷ್ಟು ವಂಚನೆ, ಹುಡುಕುತ್ತಾ ಹೋದಂತೆಲ್ಲಾ ಕಳ್ಳಾಟದ ಹೆಜ್ಜೆ ಜಾಡು ಪತ್ತೆ ಆಗುತ್ತಿದೆ. ಕೇವಲ ಕಾಣಿಕೆ, ದೇಣಿಗೆ, ಹುಂಡಿ ಹಣವನ್ನಷ್ಟೇ ಅಲ್ಲ. ದೇವರಿಗೆ ಸೇರಬೇಕಿದ್ದ ಚಿನ್ನಾಭರಣವನ್ನೂ ಅದೆಷ್ಟು ವ್ಯವಸ್ಥಿತವಾಗಿ ನುಂಗಿ ನೀರು ಕುಡಿದಿದ್ದಾರೆ ಅನ್ನೋದು ಎಸ್​ಐಟಿ ತನಿಖೆಯಲ್ಲಿ ಬಟಾಬಯಲಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕದ (Karnataka) ಲಿಂಕ್ ಬೆಚ್ಚಿಬೀಳಿಸಿದೆ.

ಅಯೋಧ್ಯೆ ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್​ನ ತನಿಖೆ ತೀವ್ರಗೊಂಡಂತೆಲ್ಲಾ ಒಂದೊಂದೇ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ಗರ್ಭಗುಡಿ ಪಕ್ಕದಲ್ಲೇ ಕೂತು ಹುಂಡಿ ಹಣ ಎಣಿಕೆಯಲ್ಲೇ ಕೈಚಳಕ ತೋರಿಸಿದ್ದ ಖದೀಮರು, ಭಕ್ತರು ದೇಣಿಗೆಯಾಗಿ ನೀಡುತ್ತಿದ್ದ ಚಿನ್ನಾಭರಣಗಳನ್ನೂ ಎಗರಿಸುತ್ತಿದ್ದರು. ಪೊಲೀಸರು ಹಾಗೂ ಎಸ್​ಐಟಿ ಅಧಿಕಾರಿಗಳು 8 ಆರೋಪಿಗಳಿಂದ ಈವರೆಗೂ 80 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. ಆದರೆ ಈವರೆಗೂ ಕದ್ದ ದೇವರ ಆಭರಣಗಳನ್ನು ರಿಕವರಿ ಮಾಡಿಕೊಳ್ಳಲು ಆಗಿಲ್ಲ. ಕಾರಣ 200 ಜನರು ವ್ಯವಸ್ಥಿತ ಸಂಚು ಮಾಡಿದ್ದಾರೆ.

ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?

ದೇವರಿಗೆ ಸಮರ್ಪಣೆಯಾದ ಚಿನ್ನಾಭರಣಗಳ ತೂಕದ ವೇಳೆ ದೊಡ್ಡ ಸಂಚೇ ನಡೀತಿದ್ದಂತೆ. ಅಂದರೆ ದೇವರಿಗೆ 26, 27 ಕೆಜಿಯಷ್ಟು ಚಿನ್ನಾಭರಣ ಬಂದರೆ ರೌಂಡ್ ಫಿಗರ್ ಆಗಿ 25 ಕೆಜಿ ಅಂತಾ ಲೆಕ್ಕ ತೋರಿಸುತ್ತಿದ್ದರಂತೆ. ಬಳಿಕ ಚಿನ್ನದ ಆಭರಣಗಳನ್ನ ಕರಗಿಸುವ ನೆಪದಲ್ಲಿ ಅಸಲಿ ಆಟ ಶುರುವಾಗ್ತಿತ್ತು. ಚಿನ್ನ-ಬೆಳ್ಳಿಯನ್ನ ಸ್ಥಳೀಯವಾಗಿ ಕರಗಿಸಲು ಕೊಟ್ಟರೆ ಅಕ್ರಮ ಗೊತ್ತಾಗುತ್ತೆ ಅಂತಾ ಅಯೋಧ್ಯೆಯಿಂದ ಅದೂ ರೈಲಿನಲ್ಲಿ ಕರ್ನಾಟಕಕ್ಕೆ ಕಳಿಸಿ ಕೊಡುತ್ತಿದ್ದರಂತೆ.

ಇದನ್ನೂ ಓದಿ: ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು

ಚಿನ್ನ-ಬೆಳ್ಳಿಯನ್ನ ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಕಳಿಸಿದರೆ, ಖದೀಮರು ಮಾತ್ರ ಫ್ಲೈಟ್ ಹತ್ತಿ ಕರ್ನಾಟಕಕ್ಕೆ ಬರ್ತಿದ್ರಂತೆ. ಹೀಗೆ ಅಯೋಧ್ಯೆಯಿಂದ ಚಿನ್ನ ಕರ್ನಾಟಕಕ್ಕೆ ತರಲು 200 ಜನರು ವ್ಯವಸ್ಥಿತ ಜಾಲವೇ ಇತ್ತು ಅನ್ನೋದು ತನಿಖೆ ವೇಳೆ ಬಯಲಾಗಿದೆ. ಅಷ್ಟೂ ಚಿನ್ನವನ್ನ ಕರಗಿಸಿ ಬಿಸ್ಕೆಟ್ ಮಾಡ್ತಿದ್ದ ಕಾರಣ ಈವರೆಗೂ ಕದ್ದ ಚಿನ್ನ ರಿಕವರಿ ಮಾಡಲು ಆಗಿಲ್ಲ ಅನ್ನೋ ಮಾಹಿತಿ ಸಿಕ್ಕಿದೆ.

ನಿತ್ಯ 6ರಿಂದ 8 ಲಕ್ಷ ಕಾಣಿಕೆ ಲೂಟಿ: ಪಾರ್ಕ್​ನಲ್ಲಿ ಹಣ ಹಂಚಿಕೆ!

ಕೋರ್ಟ್ ಅನುಮತಿ ಪಡೆದು ಆರೋಪಿ ಅವಿನಾಶ್ ಶುಕ್ಲಾನನ್ನ ವಶಕ್ಕೆ ಪಡೆದಿದ್ದ ಎಸ್​ಐಟಿ ಸ್ಫೋಟಕ ಸಂಗತಿಗಳನ್ನೇ ಬಯಲಿಗೆ ಎಳೆದಿದೆ. ನಿತ್ಯ ದೇಗುಲದಲ್ಲಿ 6ರಿಂದ 8ಲಕ್ಷದಷ್ಟು ಕಾಣಿಕೆ ಹಣಕ್ಕೆ ಕನ್ನ ಹಾಕುತ್ತಿದ್ದರಂತೆ. ಬಳಿಕ ದೇಗುಲದ ಪಕ್ಕದಲ್ಲೇ ಇರುವ ಪಾರ್ಕ್​ನಲ್ಲಿ ಎಲ್ಲರು ಸಮಪಾಲಾಗಿ ಹಂಚಿಕೊಳ್ಳುತ್ತಿದ್ದರಂತೆ. ಆದರೆ ಪ್ರಮುಖ ಆರೋಪಿ ಟಿನ್ನು ಯಾದವ್​ಗೆ ಪಾತ್ರ ಒಂದು ಪಾಲು ಹೆಚ್ಚಾಗಿ ಕೊಡ್ಬೇಕಿತ್ತು ಅಂತಾ ಅವಿನಾಶ್ ತನಿಖಾ ತಂಡದ ಮುಂದೆ ಸತ್ಯ ಕಕ್ಕಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಎಸ್​ಬಿಐ ಬ್ಯಾಂಕ್​ನಲ್ಲಿ ಈ ಮೊದಲು ಕಾಣಿಕೆ ಹಣ ನಿತ್ಯ 16ರಿಂದ 18 ಲಕ್ಷ ಡೆಪಾಸಿಟ್ ಆಗ್ತಿತ್ತು. ಆದ್ರೀಗ ನಿತ್ಯ 24ರಿಂದ 26 ಲಕ್ಷದಷ್ಟು ಹಣ ಡೆಪಾಸಿಟ್ ಆಗ್ತಿದೆ. ಅಲ್ಲಿಗೆ ನಿತ್ಯ 6ರಿಂದ 8 ಲಕ್ಷ ಹಣ ಖದೀಮರ ಪಾಲಾಗ್ತಿತ್ತು ಅನ್ನೋದು ಸಾಬೀತಾಗಿದೆ.

ಇನ್ನು ಆರೋಪಿ ಅವಿನಾಶ್ ಶುಕ್ಲಾ ನೀಡಿದ ಮಾಹಿತಿಯಂತೆ ಸಹೋದರ ಅಭಿಷೇಕ್ ಬಳಿ ಸೆಕೆಂಡ್ ಹ್ಯಾಂಡ್ ಕಾರೊಂದನ್ನ ಸೀಜ್ ಮಾಡಲಾಗಿದೆ. ಕಾರಿನಲ್ಲಿ ಒಂದಿಷ್ಟು ಆಭರಣಗಳು, ಹಣ, ಲೆಕ್ಕಪತ್ರಗಳು ಸಿಕ್ಕಿವೆ. ಅವಿನಾಶ್ ಬಾಯ್ಬಿಟ್ಟಿರುವ ಮಾಹಿತಿ ಆಧಾರದಲ್ಲಿ ತನಿಖಾ ತಂಡ ಇದೀಗ ಟಿನ್ನು ಯಾದವ್​ನ ಕಸ್ಟಡಿಗೆ ತೆಗೆದುಕೊಳ್ಳಲು ಮುಂದಾಗಿದೆ. ಅಲ್ಲದೆ ಟ್ರಸ್ಟ್​ನ ಲೆಕ್ಕಪತ್ರಗಳನ್ನ ನೋಡಿಕೊಳ್ತಿದ್ದ ಮೂವರು ಚಾರ್ಟರ್ಡ್ ಅಕೌಂಟೆಂಟ್​ಗಳಿಗೂ ಬೆಂಡೆತ್ತಿದ್ದಾರೆ. ಸಿಎಗಳಾದ ಚಂದನ್ ರೈ, ನರಪತ್ ಥೋಪಿಯಾ ಮತ್ತು ಅಕ್ಷಯ್​ನ ವಿಚಾರಣೆಗೆ ಒಳಪಡಿಸಲಾಗಿದೆ.

ಜುಲೈ 6 ರಂದು ರಾಮಮಂದಿರ ಟ್ರಸ್ಟ್​​ನ ಸಭೆ

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಜುಲೈ 6 ರಂದು ರಾಮಮಂದಿರ ಟ್ರಸ್ಟ್​​ನ ಸಭೆ ನಡೆಯಲಿದೆ. ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ಅಂಗೀಕಾರದ ಬಗ್ಗೆ ಸಭೆಯಲ್ಲಿ ನಿರ್ಧಾರ ಆಗಲಿದೆ. ಪ್ರಕರಣವನ್ನು ಸಿಬಿಐ ಹೆಗಲಿಗೆ ಹಾಕುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಲಕ್ನೋದ ಅಲಹಾಬಾದ್ ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ರಾಮಂದಿರ ದೇಣಿಗೆ ಲೂಟಿ ಕೇಸ್​​: 40 ಸಿಬ್ಬಂದಿಯಿಂದ್ಲೇ ಸಂಚು! SIT ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ದೇವರ ಹೆಸರಿನಲ್ಲಿ ಬರುವ ಕಾಣಿಕೆಯನ್ನೂ ಬಿಡದಂತೆ ದೋಚಿರುವ ಆರೋಪಿಗಳ ನಿಜ ಬಣ್ಣ ಈಗ ಕಳಚಿಕೊಳ್ಳುತ್ತಿದೆ. ತನಿಖೆ ಎಲ್ಲಿಯವರೆಗೆ ಹೋಗಿ ನಿಲ್ಲುತ್ತೆ, ಈ ಹಗರಣದ ಹಿಂದೆ ಇನ್ನು ಯಾವೆಲ್ಲಾ ದೊಡ್ಡ ತಲೆಗಳು ಉರುಳಲಿವೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಬ್ಯೂರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ? ನಿಜಾಂಶವೇನು? – Kannada News | Fake CBFC certificate of Jana Nayagan movie getting viral on social media

ತಮಿಳುನಾಡು ಸಿಎಂ ವಿಜಯ್ (Vijay) ನಟಿಸಿರುವ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಇನ್ನೂ ಬಿಡುಗಡೆ ಭಾಗ್ಯ ಬಂದಿಲ್ಲ. ವಿಜಯ್ ಚುನಾವಣಾ ಪ್ರಚಾರಕ್ಕೆ ಇಳಿಯುವ ಮುಂಚೆ ‘ಜನ ನಾಯಗನ್’ ಸಿನಿಮಾ ಮುಗಿಸಿದ್ದರು, ‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಿಲ್ಲ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹಲವರು ಆರೋಪಿಸಿದ್ದರು. ಈಗ ವಿಜಯ್ ಸಿಎಂ ಆಗಿದ್ದು, ಅಧಿಕಾರ ಅವರ ಕೈಯಲ್ಲಿದೆ. ಆದರೆ ಈಗಲೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಈ ತಿಂಗಳು ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಗಲಿದೆ ಎಂಬ ಸುದ್ದಿ ಕಳೆದ ವಾರ ಹಬ್ಬಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣ ಪತ್ರ ಹರಿದಾಡುತ್ತಿದ್ದು, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರಕಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ‘ಜನ ನಾಯಗನ್’ ಸಿನಿಮಾದ್ದು ಎನ್ನಲಾದ ಸಿಬಿಎಫ್​​ಸಿ ಪ್ರಮಾಣ ಪತ್ರ ಹರಿದಾಡುತ್ತಿದ್ದು, ಪ್ರಮಾಣ ಪತ್ರದಲ್ಲಿ ಇರುವ ಮಾಹಿತಿಯಂತೆ, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ಹಲವಾರು ದೃಶ್ಯಗಳನ್ನು ಡಿಲೀಟ್ ಹಾಗೂ ಮ್ಯೂಟ್ ಮಾಡಿರುವ ಕುರಿತಾಗಿಯೂ ಪ್ರಮಾಣ ಪತ್ರದಲ್ಲಿ ಮಾಹಿತಿ ಇದೆ. ವಿಜಯ್ ಅವರ ಅಭಿಮಾನಿಗಳು, ಸಾಕಷ್ಟು ಸಿನಿಮಾ ಪ್ರೇಮಿಗಳು ಸಹ ಈ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಆ ಪ್ರಮಾಣ ಪತ್ರ ನಕಲಿ ಆಗಿದೆ. ಅಸಲಿಗೆ ಬೇರೊಂದು ಸಿನಿಮಾದ ಸಿಬಿಎಫ್​​ಸಿ ಪ್ರಮಾಣ ಪತ್ರವನ್ನು ಎಡಿಟ್ ಮಾಡಿ ‘ಜನ ನಾಯಗನ್’ ಸಿನಿಮಾ ಹೆಸರು ಸೇರಿಸಲಾಗಿದೆ. ಮೂಲಗಳ ಪ್ರಕಾರ, ಸಿಬಿಎಫ್​​ಸಿ ಇನ್ನೂ ‘ಜನ ನಾಯಗನ್’ ಸಿನಿಮಾಕ್ಕೆ ಯಾವುದೇ ಪ್ರಮಾಣ ಪತ್ರವನ್ನು ನೀಡಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಬೇರೊಂದು ಸಿನಿಮಾದ ಪ್ರಮಾಣ ಪತ್ರವನ್ನು ‘ಜನ ನಾಯಗನ್’ ಸಿನಿಮಾದ್ದು ಎಂದು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೆಲವು ಅಧಿಕೃತ ಫ್ಯಾನ್ ಪೇಜುಗಳ ಸಹ ಅದೇ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದರು. ಬಳಿಕ ಕೆಲವರು ಅದು ಫೇಕ್ ಪ್ರಮಾಣ ಪತ್ರ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:‘ನಿಮ್ಮ ಹೆಸರು ಬಳಸಿಕೊಳ್ಳುತ್ತೇನೆ’: ಸಿಎಂ ವಿಜಯ್​ಗೆ ನೇರವಾಗಿ ಹೇಳಿದ ನಟ ವಿಶಾಲ್

‘ಜನ ನಾಯಗನ್’ ಸಿನಿಮಾ ಜನವರಿ 12ಕ್ಕೆ ಬಿಡುಗಡೆ ಆಗಬೇಕಿತ್ತು. ಸಿನಿಮಾನಲ್ಲಿ ವಿಜಯ ಜೊತೆಗೆ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್. ಸಿನಿಮಾಕ್ಕೆ ಸಿಬಿಎಫ್​​ಸಿಯು ಪ್ರಮಾಣ ಪತ್ರ ನೀಡಲಿಲ್ಲ. ಕೆವಿಎನ್ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತು. ಸಿನಿಮಾ ಬಿಡುಗಡೆಗೆ ಮೊದಲು ಅನುಮತಿ ಸಿಕ್ಕಿತು, ಬಳಿಕ ಅದೇ ದಿನ ಆದೇಶಕ್ಕೆ ತಡೆ ನೀಡಲಾಯ್ತು. ಆ ಬಳಿಕ ಈ ವರೆಗೆ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆತಿಲ್ಲ. ಈ ತಿಂಗಳಲ್ಲಿ ಪ್ರಕರಣ ಇತ್ಯರ್ಥವಾಗಿ ಸಿನಿಮಾಕ್ಕೆ ಪ್ರಮಾಣ ಪತ್ರ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಗೆ ಟ್ರಂಪ್​ಗೆ ಪ್ರಧಾನಿ ಮೋದಿ ಶುಭಾಶಯ – Kannada News | PM Narendra Modi Wishes Donald Trump and Americans On 250th Independence Day

ನವದೆಹಲಿ, ಜುಲೈ 4: ಅಮೆರಿಕದ (USA) ಐತಿಹಾಸಿಕ 250ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ನಾಗರಿಕರಿಗೆ ಭಾರತದ 140 ಕೋಟಿ ಜನರ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಭಾರತ-ಅಮೆರಿಕ ದೇಶಗಳ ಈ ಗಾಢ ಸ್ನೇಹವು ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕ ಕೇವಲ ಕಾರ್ಯತಂತ್ರದ ಪಾಲುದಾರಿಕೆಯನ್ನಷ್ಟೇ ಹೊಂದಿಲ್ಲ, ಬದಲಿಗೆ ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಮತ್ತು ಜನರ ಮಿತಿಯಿಲ್ಲದ ಸಾಮರ್ಥ್ಯದ ಮೇಲಿನ ಸಮಾನ ಬದ್ಧತೆಯನ್ನು ಹಂಚಿಕೊಂಡಿವೆ ಎಂದು ಒತ್ತಿಹೇಳಿದ್ದಾರೆ.

“140 ಕೋಟಿ ಭಾರತೀಯರ ಪರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಜನತೆಗೆ ನಿಮ್ಮ ದೇಶದ ಐತಿಹಾಸಿಕ 250ನೇ ಸ್ವಾತಂತ್ರ್ಯ ದಿನೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಕೇವಲ ಕಾರ್ಯತಂತ್ರದ ಪಾಲುದಾರಿಕೆಗಿಂತ ಹೆಚ್ಚಿನದನ್ನು ಹಂಚಿಕೊಂಡಿವೆ. ಪ್ರಜಾಪ್ರಭುತ್ವ, ಕಾನೂನಿನ ಆಡಳಿತದ ಮೇಲಿನ ನಮ್ಮ ನಂಬಿಕೆ ಮತ್ತು ನಮ್ಮ ಜನರ ಅಪಾರ ಸಾಮರ್ಥ್ಯವು ನಮ್ಮ ಸ್ನೇಹವನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡಿದೆ” ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ

ಭಾರತ-ಅಮೆರಿಕ ಬಾಂಧವ್ಯ ಗಟ್ಟಿಯಾಗುವ ಆಶಯ:

ಮುಂಬರುವ 250 ವರ್ಷಗಳು ಅಮೆರಿಕಕ್ಕೆ ಹೆಚ್ಚಿನ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯನ್ನು ತರಲಿ ಹಾಗೂ ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಇಂಗ್ಲೆಂಡ್​​ಗೆ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ – Kannada News | England vs India, 2nd T20I: Team Innings Highlights

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 190 ರನ್​ ಕಲೆಹಾಕಿದೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 50 ರನ್​ ಪೇರಿಸಿದ ಬಳಿಕ ವೈಭವ್ ಸೂರ್ಯವಂಶಿ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಜೊತೆಗೂಡಿ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇನಲ್ಲೇ 65 ರನ್ ಕಲೆಹಾಕಿತು.

ಪವರ್​ಪ್ಲೇ ಮುಕ್ತಾಯವಾಗುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಅಭಿಷೇಕ್ ಶರ್ಮಾ (43 ರನ್, 24 ಎಸೆತಗಳು) ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ನಾಯಕ ಶ್ರೇಯಸ್ ಅಯ್ಯರ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು.

ಮತ್ತೊಂದಡೆ ರನ್​ಗಳಿಸಲು ಪರದಾಡಿದ  ಇಶಾನ್ ಕಿಶನ್ 49 ರನ್​ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು. ಈ ನಿಧಾನಗತಿಯ ಬ್ಯಾಟಿಂಗ್​ನಿಂದ ಭಾರತದ ಸ್ಕೋರ್ ವೇಗವು ಕುಂಠಿತವಾಯಿತು.  ಆ ಬಳಿಕ ಬಂದ ಶಿವಂ ದುಬೆ 5 ರನ್​ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಮೊದಲ ಮೂರು ಎಸೆತಗಳಲ್ಲಿ 6,6,4 ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​ ಕಲೆಹಾಕಿದೆ.

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಇತಿಹಾಸ ಬರೆದರೂ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಇಂಗ್ಲೆಂಡ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.

Source link

Exit mobile version