ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Papamashini Dwadashi 2026: Horoscope for All 12 Zodiac Signs

ಇಂದು 2026ರ ಆಗಸ್ಟ್ 10ರ ಸೋಮವಾರ, ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಕೃಷ್ಣ ಪಕ್ಷದ ದ್ವಾದಶಿ, ಆರ್ದ್ರಾ ನಕ್ಷತ್ರ ಇದ್ದು ರಾಹುಕಾಲವು ಬೆಳಗ್ಗೆ 7:40 ರಿಂದ 9:15 ರವರೆಗೆ ಇರಲಿದೆ. ಶುಭಕಾಲವು 9:15 ರಿಂದ 10:50 ರವರೆಗೆ ಇದೆ. ಈ ದಿನವು ಸೋಮ ಪ್ರದೋಷ ಮತ್ತು ಪಾಪನಾಶಿನಿ ದ್ವಾದಶಿ ಎಂದು ಗುರುತಿಸಲ್ಪಟ್ಟಿದೆ. ಸಂಧ್ಯಾಕಾಲದಲ್ಲಿ ಶಿವನ ನಾಮ ಜಪ, ದರ್ಶನ ಮತ್ತು ಅಭಿಷೇಕವನ್ನು ಮಾಡುವುದರಿಂದ ಅನೇಕ ಸಂಕಟಗಳಿಂದ ಮುಕ್ತಿ ಪಡೆಯಬಹುದಾಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯ ಆರ್ದ್ರಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಜೊತೆ ಒಪ್ಪಂದಕ್ಕೆ ಒತ್ತಾಯ ಮಾಡಬೇಕಾಗುವುದು – Kannada News | Daily Horoscope for August 10, 2026: Astrology Predictions for All Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸಿದ್ಧಿ, ಕರಣ : ಗರಜ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:16, ಯಮಗಂಡ ಕಾಲ 10:51 – 12:25, ಗುಳಿಕ ಕಾಲ 13:59 – 15:33

ಮೇಷ ರಾಶಿ: ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಆದಾಯಕ್ಕೆ ಯೋಗ್ಯವಾದ ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ‌. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು. ಹೊಸ ವ್ಯವಹಾರವನ್ನು ಮಾಡಲು ಉತ್ಸಾಹ ಕಡಿಮೆ‌ ಆಗಲಿದೆ. ಮಾನಸಿಕ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾಗಲಿದೆ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು.

ವೃಷಭ ರಾಶಿ: ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣ ಸಿಗದೇ ಕಷ್ಟವಾದೀತು. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ಸುಳ್ಳುಹೇಳಬಹುದು.

ಮಿಥುನ ರಾಶಿ: ಯಾರಾದರೂ ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ನಿಮಗೆ ಸರಿಯಾದ ಕಲ್ಪನೆ ಸಿಗದೇಹೋಗಬಹುದು. ಸಂಗಾತಿಯ ಮನವೊಲಿಸಲು ಸತತ ಪ್ರಯತ್ನ ಮಾಡುವಿರಿ.‌ ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಸಿಗಬೇಕಾದವರ ಭೇಟಿಯು ಬಹಳ ವಿಳಂಬವಾದೀತು. ಬರಬೇಕಾದ ಹಣದ ಬಗ್ಗೆ ತಿಳಿದಿರಲಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು.

ಕರ್ಕಾಟಕ ರಾಶಿ: ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಸಾಧಿಸಲು ಅವಕಾಶಗಳು ಹಲವಿದ್ದರೂ ಸಾಗಿಸುವ ಬಗ್ಗೆ ನಿಮಗೆ ಪೂರ್ಣ ಕಲ್ಪನೆ ಇರದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.

ಸಿಂಹ ರಾಶಿ: ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ನಿಮ್ಮ ಪ್ರತಿಷ್ಠೆಯನ್ನು ತೋರಿಸುಬಿರಿ. ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸುಲಲಿತವಾಗಿ ಮುಗಿಸಿಕೊಡುವುದು. ವಿದೇಶ ಪ್ರವಾಸವನ್ನು ಕಾರ್ಯ ನಿಮಿತ್ತ ಮಾಡುವಿರಿ. ಒಂಟಿತನ ಭಯವು ನಿಮ್ಮನ್ನು ಕಾಡಬಹುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರ‌ನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ.

ಕನ್ಯಾ ರಾಶಿ: ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ಇಂದಿನ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ನೀವಿಂದು ಹೆಚ್ಚು ಗಮನಕೊಡುವಿರಿ. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು.

ತುಲಾ ರಾಶಿ: ನಿಮ್ಮ ಎಂದಿನ ಬಿಮ್ಮನ್ನು ಬಿಡಬೇಕಾಗಬಹುದು. ನೀವು ಇಂದು ಇಚ್ಛಿಸಿದವರಿಗೆ ದಾನವನ್ನು ಕೊಡುವಿರಿ. ನಿಮ್ಮ‌ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಸಹೋದ್ಯೋಗಿಗಳು ನಿಮ್ಮ ನಕಾರಾತ್ಮಕ ಆಲೋಚನೆ ಉಳ್ಳವರಾಗುವರು. ಕೃಷಿ ಕಾರ್ಯಕ್ಕೆ ಸೂಕ್ತ ಸಮಯವಾಗಿದ್ದು, ಬಿಡುವು ಮಾಡಿಕೊಳ್ಳುವಿರಿ. ನೀವು ಹಣ ಸಂಪಾದನೆಗೆ ಆರಿಸಿಕೊಂಡ‌ ಮಾರ್ಗವು ಸರಿಯೆನಿಸದೇ ಇರಬಹುದು. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ‌ ಜೊತೆ ಹಂಚಿಕೊಳ್ಳುವಿರಿ. ದೂರವಾಣಿ ಕರೆಗಳಿಂದ ಆಯಾಸವಾಗಲಿದೆ. ಕೇಳಿದವರಿಗೆ ಹಣವನ್ನು ನೀಡುವಿರಿ. ಸಂಪತ್ತಿನ ಹಿಂದೆ ನೀವು ಓಡಬೇಕಾಗಿಲ್ಲ.‌ ನಿಮ್ಮ ಕೆಲಸವೇ ಸಂಪತ್ತು ಬರುವಂತೆ ಮಾಡುವುದು. ಎಲ್ಲರನ್ನೂ ಆತ್ಮೀಯವಾಗಿ ಕಾಣುವಿರಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ.

ಧನು ರಾಶಿ: ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ಧಾರ್ಮಿಕ ಆಚರಣೆಯಿಂದ ಶ್ರೇಯಸ್ಸು ಪ್ರಾಪ್ತಿ. ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ.

ಮಕರ ರಾಶಿ: ಇಂದು ನಿಮ್ಮ ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ಸಹೋದರರಿಂದ‌ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನೀವು ಇಂದು ಮಾಡಿಸುವಿರಿ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ.

ಕುಂಭ ರಾಶಿ: ಇಂದಿನ ಹಣಕಾಸಿನ‌ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ‌ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ.‌ ಸ್ಥಾನಮಾನದ ಬಗ್ಗೆ ಹೆಮ್ಮೆ ಇರುವುದು. ನಿರ್ಮಾಣದವರಿಗೆ ಒತ್ತಡ ಹೆಚ್ಚಾಗುವುದು. ನಿಮ್ಮ ಕಾರ್ಯಗಳು ಇಂದು ಮುಕ್ತಾಯಗೊಳ್ಳಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ.

ಮೀನ ರಾಶಿ: ಇಂದು ನೀವೊಬ್ಬರೇ ಯತ್ನಿಸಿದರೂ ಕಾರ್ಯದಲ್ಲಿ ಜಯವು ಸಿಗುವುದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ಹೊರಗಿನಿಂದ ಕಣ್ಣಿಗೆ ತೊಂದರೆ ಬರಲಿದೆ. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ಸಂದರ್ಭೋಚಿತ ನಿಮ್ಮ ವರ್ತನೆಯು ಅಪಾರ್ಥವನ್ನು ಕೊಡಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.

ಲೋಹಿತ್ ಹೆಬ್ಬಾರ್-8762924271 (what’s app only)

Source link

IND vs PAK: ಒಂದೇ ತಿಂಗಳಲ್ಲಿ ಭಾರತ- ಪಾಕ್ ನಡುವೆ ಎರಡೆರಡು ಪಂದ್ಯಗಳು..! – Kannada News | Women’s T20 Asia Cup 2026: India vs Pakistan Set for Two Epic September Clashes

ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ರಸದೌತಣ ಸಿಗಲಿದೆ. ಏಕೆಂದರೆ ಈ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ  (India vs Pakistan) ಕ್ರಿಕೆಟ್ ತಂಡಗಳ ನಡುವೆ ಎರಡೆರಡು ಪಂದ್ಯಗಳು ನಡೆಯಲಿವೆ. ಅಪರೂಪಕ್ಕೊಮ್ಮೆ ಪಂದ್ಯವನ್ನಾಡುವ ಈ ಉಭಯ ದೇಶಗಳ ತಂಡಗಳ ಮುಖಾಮುಖಿಗಾಗಿ ಅಭಿಮಾನಿಗಳು ಕಾದುಕುಳಿತಿದ್ದಾರೆ. ಪ್ರಸ್ತುತ 2026 ರ ಮಹಿಳಾ ಟಿ20 ಏಷ್ಯಾಕಪ್​ನ Women’s T20 Asia Cup 2026() ವೇಳಾಪಟ್ಟಿ ಬಿಡುಗಡೆಯಾಗಿದ್ದು ಈ ಮೆಗಾ ಟೂರ್ನಮೆಂಟ್​ನಲ್ಲಿ ಎರಡೂ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 5 ರಂದು ಮೊದಲ ಪಂದ್ಯ

ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಸೆಪ್ಟೆಂಬರ್ 5 ರಂದು ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಮಹಿಳಾ ಟಿ20 ಏಷ್ಯಾಕಪ್ ಟೂರ್ನಮೆಂಟ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಎಲ್ಲಾ ಪಂದ್ಯಗಳನ್ನು ಆಯೋಜಿಸಲಿದೆ. ಭಾರತ ಮತ್ತು ಪಾಕಿಸ್ತಾನದ ಜೊತೆಗೆ, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ಗುಂಪು ಎ ನಲ್ಲಿ ಸ್ಥಾನ ಪಡೆದಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯ ಸೆಪ್ಟೆಂಬರ್ 5 ರಂದು ನಡೆಯಲಿದೆ.

ಎರಡನೇ ಮುಖಾಮುಖಿಗೆ ಅವಕಾಶವಿದೆ

ಈ ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡನೇ ಪಂದ್ಯ ಖಚಿತವಾಗಿಲ್ಲದಿದ್ದರೂ, ಎರಡೂ ತಂಡಗಳ ಪ್ರದರ್ಶನ ನೋಡಿದರೆ ಅದು ಬಹುತೇಕ ಖಚಿತವಾಗಿದೆ. ಟೂರ್ನಮೆಂಟ್ ನಿಯಮಗಳ ಪ್ರಕಾರ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಮುನ್ನಡೆಯುತ್ತವೆ. ಭಾರತ ಮತ್ತು ಪಾಕಿಸ್ತಾನ ಕೂಡ ತಮ್ಮ ಗುಂಪುಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಎರಡೂ ತಂಡಗಳ ನಡುವೆ ಮತ್ತೊಂದು ಪಂದ್ಯ ನಡೆಯುವ ಸಾಧ್ಯತೆಯಿದೆ.

ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಮುಖಾಮುಖಿ

ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 10 ಮತ್ತು 11 ರಂದು ನಡೆಯಲಿದ್ದು, ಪ್ರಶಸ್ತಿ ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ. ಗುಂಪು ಹಂತದ ಫಲಿತಾಂಶಗಳು ಮತ್ತು ಪಾಯಿಂಟ್ ಟೇಬಲ್‌ನಲ್ಲಿರುವ ಸ್ಥಾನಗಳ ಆಧಾರದ ಮೇಲೆ ಸೆಮಿಫೈನಲ್ ಸಮೀಕರಣಗಳು ಬದಲಾಗುತ್ತವೆ. ಎರಡೂ ತಂಡಗಳು ಪ್ರತ್ಯೇಕ ಸೆಮಿಫೈನಲ್‌ಗಳನ್ನು ಗೆದ್ದರೆ, ಸೆಪ್ಟೆಂಬರ್ 13 ರಂದು ನಡೆಯುವ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿವೆ. ಅಥವಾ ಸೆಮಿಫೈನಲ್‌ನಲ್ಲಿ ನೇರ ಹಣಾಹಣಿ ನಡೆಯುವ ಸಾಧ್ಯತೆಯಿದೆ. ಇದರರ್ಥ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್

ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರಾಬಲ್ಯ

ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ತಂಡ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ ಏಳು ಬಾರಿ ಟೂರ್ನಿಯನ್ನು ಗೆದ್ದಿರುವ ಟೀಂ ಇಂಡಿಯಾ ಈ ಬಾರಿಯೂ ಹಾಟ್ ಫೇವರಿಟ್ ಆಗಿ ಟೂರ್ನಿಗೆ ಪ್ರವೇಶಿಸುತ್ತಿದೆ. ಸೆಪ್ಟೆಂಬರ್ 5 ರಂದು ನಡೆಯಲಿರುವ ಮೊದಲ ಪಂದ್ಯವನ್ನು ಗೆದ್ದು ಸುಲಭವಾಗಿ ನಾಕೌಟ್ ಹಂತವನ್ನು ತಲುಪುವ ಭರವಸೆಯಲ್ಲಿದೆ. ಈ ಹಿಂದೆಯೂ ಪಾಕಿಸ್ತಾನ ವಿರುದ್ಧ ಭಾರತ ತಂಡ ಉತ್ತಮ ದಾಖಲೆಯನ್ನು ಹೊಂದಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಗಳಲ್ಲಿ ಭಾರತೀಯ ಆಟಗಾರ್ತಿಯರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿwse

Source link

ಬೀದರ್‌ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ: 2 ತಿಂಗಳ ಹಸುಗೂಸನ್ನ ಬಾವಿಗೆ ಬಿಸಾಡಿದ ಕಿರಾತಕರು – Kannada News | Tragic Incident: Two Month Old Infant Found Dead in Well

ಪ್ರಾತಿನಿಧಿಕ ಚಿತ್ರImage Credit source: Getty images

ಬೀದರ್‌, ಆಗಸ್ಟ್​​ 09: ಬೀದರ್‌ (bidar) ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ನಡೆದಿದೆ. ಎರಡು ತಿಂಗಳ ಹಸುಗೂಸನ್ನ (baby) ಕಿರಾತಕರು ಬಾವಿಗೆ ಬಿಸಾಡಿದ್ದ ಘಟನೆ ಔರಾದ್ ತಾಲೂಕಿನ ವಡಗಾಂವ್ ಗ್ರಾಮದಲ್ಲಿ ನಡೆದಿದೆ. ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಡೆದಿದ್ದೇನು?

ನಿನ್ನೆ ರಾತ್ರಿಯಿಂದ ಮಗು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಗುವಿನ ಹುಡುಕಾಟದಲ್ಲಿದ್ದರು. ಆದರೆ ಇಂದು ಸಾಯಂಕಾಲ ಗ್ರಾಮದ ಬಾವಿಯಲ್ಲಿ ಹಸುಗೂಸಿನ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ; ಹಿಟ್ ಆ್ಯಂಡ್ ರನ್​​ಗೆ ಬೈಕ್ ಸವಾರರಿಬ್ಬರು ಸಾವು

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಗುವಿನ ಕುಟುಂಬಸ್ಥರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜಮೀನಿನಲ್ಲಿ ಕುರಿ ಮೇಯಿಸುವಾಗ ಹಾವು ಕಚ್ಚಿ ಕುರಿಗಾಹಿ ಸಾವು

ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ 28 ವರ್ಷದ ಯುವ ಕುರಿಗಾಹಿ ಮೃತಪಟ್ಟಿರುವ ದಾರುಣ ಘಟನೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ. ನೆಗಳೂರು ಗ್ರಾಮದ ನಾಗರಾಜ್ ಕರಿಗಾರ (28) ಮೃತ ಯುವಕ. ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಉತ್ತಮ ಭವಿಷ್ಯ ರೂಪಿಸಿಕೊಳ್ಳುವಷ್ಟರಲ್ಲೇ ಯುವಕ ಸಾವು

ಮೃತ ನಾಗರಾಜ್ ಕಳೆದ ವಾರವಷ್ಟೇ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಯ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಶೇ. 75 ಕ್ಕೂ ಹೆಚ್ಚು ಅಂಕ ಗಳಿಸುವ ಮೂಲಕ ಉತ್ತೀರ್ಣರಾಗುವ ಭರವಸೆಯಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?

ಪೊಲೀಸ್ ಇಲಾಖೆಗೆ ಸೇರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದ ಯುವಕ, ಫಲಿತಾಂಶ ಬರುವ ಮುನ್ನವೇ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕಾವೃತ ವಾತಾವರಣ ನಿರ್ಮಿಸಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರಾಫಿಕ್ ಜಾಮ್ ನಲ್ಲಿ ಬೆಂಗಳೂರು ದೇಶದಲ್ಲೇ ಫಸ್ಟ್, ವಿಶ್ವದಲ್ಲಿ ನಂಬರ್ 2: 10 ಕಿಮೀ ಸಂಚಾರಕ್ಕೆ ಎಷ್ಟು ಟೈಮ್ ಬೇಕು ಗೊತ್ತಾ? – Kannada News | Traffic Jam: Bengaluru Number 1 In India And second Place In World

ಬೆಂಗಳೂರು, (ಆಗಸ್ಟ್ 09): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಅಂದ ತಕ್ಷಣ ನೆನಪಾಗೋದು ಟ್ರಾಫಿಕ್ (Traffic) . ಯಾವುದೇ ದಿಕ್ಕಿಗೆ ಹೋದರೂ ವಾಹನ ಭರಾಟೆ ಇದ್ದೆ ಇರುತ್ತೆ. ಈ ಕಾರಣಕ್ಕೆ ಹಲವು ಬಾರಿ ನಗರದ ಟ್ರಾಫಿಕ್,ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ವಿಷಯವೂ ಆಗಿದೆ. ಈ ಮಧ್ಯೆ ಈಗ ಮತ್ತೊಂದು ಶಾಕಿಂಗ್ ಅಂಶ ಒಂದು ಹೊರಬಿದ್ದಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ನಗರದ ಟ್ರಾಫಿಕ್ ಸ್ಥಿತಿ ಇನ್ನೆಲ್ಲಿಗೆ ಹೋಗಿ ತಲುಪುತ್ತೆ ಅನ್ನೋ ಆತಂಕ ಶುರುವಾಗಿದೆ. ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ನಗರಗಳ ಸಾಲಿನಲ್ಲಿ, ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 10 ಕಿಮೀ ಸಂಚಾರ ಮಾಡಲು 35.18 ನಿಮಿಷ ಬೇಕಾಗ್ತಿದ್ದು, ಎರಡನೇ ಸ್ಥಾನವನ್ನು ಕಲ್ಕತ್ತಾ ಪಡೆದುಕೊಂಡಿದೆ. ಪುಣೆಯಲ್ಲಿ 10 ಕಿಮೀ ಸಾಗಲು 33.20 ನಿಮಿಷ ಬೇಕಾಗ್ತಿದ್ದು, ಇದರಿಂದ ಮೂರನೇ ಸ್ಥಾನ ಪಡೆದುಕೊಂಡಿದೆ.

ದೇಶದಲ್ಲಿ ನಂಬರ್ 1, ವಿಶ್ವದಲ್ಲಿ ನಂಬರ್ 2

2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂದು ವರದಿ ಬಿಡುಗಡೆ ಮಾಡಿದೆ. ಬೆಂಗಳೂರು ಈಗಾಗಲೇ ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಷನ್‌ ಟೆಕ್ನಾಲಜಿ ಕಂಪನಿಯಾದ ಟಾಮ್‌ ಟಾಮ್, ವಿಶ್ವದ ಬೇರೆಬೇರೆ ನಗರಗಳ ಸಂಚಾರ ಪರಿಸ್ಥಿತಿಯನ್ನು ಸ್ಟಡಿ ಮಾಡಿ ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. ನಗರದಲ್ಲಿ ಪ್ರತಿದಿನ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿರುವುದೆ ಇದಕ್ಕೆ ಕಾರಣ ಎನ್ನಲಾಗ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿವೆ.

ಇನ್ನೂ ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ಈಗಾಗಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರು ಫುಟ್ ಪಾತ್ ತೆರವು ಮಾಡಲು ಮುಂದಾಗಿದ್ರೆ, ಇತ್ತ ನಗರದಲ್ಲಿರುವ ಅನಾಥ ವಾಹನಗಳಿಗೆ ತೆರವು ಮಾಡಲು ತಮ್ಮ ವಾಹನಗಳ ಮೇಲೆ ನೋಟೀಸ್ ಅಂಟಿಸಿ ಗಡುವು ನೀಡಲಾಗಿತ್ತು, ಆದರೆ ಗಡುವಿನೊಳಗೆ ತಮ್ಮ ವಾಹನಗಳನ್ನು ತೆರವು ಮಾಡದ ವಾಹನಗಳನ್ನು ಹರಾಜು ಹಾಕಲು ಸೀಜ್ ಕೂಡ ಮಾಡಿದೆ. ಇದರಿಂದಲೂ ನಗರದಲ್ಲಿ ತುಂಬಾ ದೊಡ್ಡಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ.

ಒಟ್ನಲ್ಲಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದ್ರೆ, ವಿಶ್ವದಲ್ಲೇ ಅತಿಹೆಚ್ಚು ವಾಹನದಟ್ಟಣೆ ಹೊಂದಿರುವ ನಗರ ಅನ್ನೋ ಕುಖ್ಯಾತಿಗೆ ಒಳಗಾದ್ರು ಒಳಗಾಗಬಹುದು ಅನ್ಸುತ್ತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

World Loin Day 2026: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು – Kannada News | World loin day 2026 here are some interesting facts about lions

ಕಾಡಿನ ರಾಜ ಸಿಂಹ (lion) ತನ್ನ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿ. ಅದೇ ರೀತಿ ಈ ಸಿಂಹಗಳ ಸಂತತಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಈ ಸಿಂಹಗಳು ಕ್ರಮೇಣ ವಿನಾಶದಂಚಿಗೆ ತಲುಪುತ್ತಿವೆ. ಆಧುನೀಕರಣ, ಅರಣ್ಯನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದ ಇಂದು ಕಾಡಿನ ರಾಜನ ಸಂತತಿ ಕ್ಷೀಣಿಸುತ್ತಿದೆ. ಈ ಗಂಭೀರತೆಯನ್ನು ಪರಿಗಣಿಸಿ, ಸಿಂಹಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್‌ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಿಂಹ ದಿನದ ಇತಿಹಾಸವೇನು?

ವಿಶ್ವ ಸಿಂಹ ದಿನದ ಆಚರಣೆ 2013 ರಲ್ಲಿ ಪ್ರಾರಂಭವಾಯಿತು. ಸಿಂಹಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳ ರಕ್ಷಣೆಗಾಗಿ ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್‌ ಕ್ಯಾಟ್ಸ್‌ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕರಾದ ಡೆರೆಕ್‌ ಮತ್ತು ಬೆವರ್ಲಿ ಜೌಬರ್ಟ್‌ ಅವರು ನ್ಯಾಷನಲ್‌ ಜಿಯೋಗ್ರಾಫಿಕ್‌ ಸಹಭಾಗಿತ್ವದಲ್ಲಿ ಸಿಂಹ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖು ಉದ್ದೇಶವಾಗಿದೆ.

ಸಿಂಹಗಳ ವಿಧಗಳು:

  • ಏಷ್ಯಾಟಿಕ್‌ ಸಿಂಹ: ಈ ಜಾತಿಯ ಸಿಂಹಗಳು ಈಗ ಗುಜರಾತ್‌ನಲ್ಲಿರುವ ಗಿರ್‌ ಅರಣ್ಯದಲ್ಲಿ ಮಾತ್ರ ಕಂಡುಬರುತ್ತವೆ, ಇದರ ತೂಕ ಸುಮಾರು 160 ಕೆಜಿಯಿಂದ 190 ಕೆಜಿ. ಇವು ಆಫ್ರಿಕನ್‌ ಸಿಂಹಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ.
  • ಆಫ್ರಿಕನ್‌ ಸಿಂಹ: ಆಫ್ರಿಕನ್‌ ಸಿಂಹಗಳನ್ನು ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತವೆ. ಅವುಗಳ ಘರ್ಜನೆ ಸುಮಾರು ಐದು ಮೈಲಿ ದೂರದವರೆಗೆ ಕೇಳಿಸುತ್ತದೆ.
  • ಬಾರ್ಬರಿ ಸಿಂಹ: ಬಾರ್ಬರಿ ಸಿಂಹಗಳು ಸಿಂಹಗಳ ಜಾತಿಯಲ್ಲೇ ದೊಡ್ಡದಾಗಿದ್ದು, 270 ರಿಂದ 300 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ.
  • ದಕ್ಷಿಣಾ ಆಫ್ರಿಕಾದ ಸಿಂಹಗಳು: ಸೌತ್ ಆಫ್ರಿಕಾ ಸಿಂಹಗಳು ಹೆಚ್ಚಾಗಿ ಬಿಳಿ ಬಣ್ಣದಲ್ಲಿರುತ್ತವೆ. ಇವುಗಳನ್ನು ಟ್ರಾನ್ಸ್‌ವಾಲ್‌ ಸಿಂಹಗಳು ಎಂದೂ ಕರೆಯುತ್ತಾರೆ.
  • ಕಟಾಂಗ ಸಿಂಹ: ಕಟಾಂಗ ಸಿಂಹಗಳು ನೈಋತ್ಯ ಆಫ್ರಿಕಾದಲ್ಲಿ ಕಂಡುಬರುತ್ತವೆ. ಇವುಗಳು ಬಲು ಸುಂದರವಾದ ಕೂದಲನ್ನು ಹೊಂದಿರುತ್ತವೆ.
  • ಕಾಂಗೋ ಸಿಂಹ: ಕಾಂಗೋಲೀಸ್‌ ಸಿಂಹ, ಉಗಾಂಡನ್‌ ಸಿಂಹ ಎಂದೂ ಕರೆಯಲ್ಪಡುವ ಇವುಗಳು ಹೆಚ್ಚಾಗು ಮಧ್ಯ ಆಫ್ರಿಕಾದಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಸಿಂಹಗಳ ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು:

  • ಸಿಂಹದ ಘರ್ಜನೆಯನ್ನು 5 ಮೈಲಿ ಅಂದರೆ 8 ಕಿಲೋಮೀಟರ್ ದೂರದವರೆಗೂ ಕೇಳುತ್ತದೆ.
  • ಸಿಂಹಗಳು ಸಂಘಜೀವಿ. ಅವುಗಳ ಗುಂಪನ್ನು ಪ್ರೈಡ್‌ ಎಂದು ಕರೆಯಲಾಗುತ್ತದೆ. ಸಿಂಹಗಳು ತಮ್ಮ ಪ್ರದೇಶವನ್ನು ರಕ್ಷಿಸಲು ಗುಂಪುಗಳಲ್ಲಿ ವಾಸಿಸುತ್ತವೆ. ತಮ್ಮ ಗುಂಪು ದೊಡ್ಡದಿದ್ದಷ್ಟೂ ಅವು ಆಕ್ರಮಿಸಿಕೊಳ್ಳುವ ಪ್ರದೇಶವು ದೊಡ್ಡದಾಗಿರುತ್ತದೆ ಎಂದು ಅವು ನಂಬುತ್ತವೆ.
  • ಸಿಂಹವು 190 ಕೆಜಿ ವರೆಗೆ ತೂಗುತ್ತದೆ ಮತ್ತು ಸಿಂಹಿಣಿ 130 ಕೆಜಿ ವರೆಗೆ ತೂಗುತ್ತದೆ.
  • ಸಿಂಹಗಳ ಜೀವಿತಾವಧಿ ಸರಿಸುಮಾರು 16 ರಿಂದ 20 ವರ್ಷಗಳು.
  • ಹೆಚ್ಚು ಬೇಟೆಯಾಡೋದು ಗಂಡು ಸಿಂಹಗಳಲ್ಲ ಬದಲಾಗಿ ಸಿಂಹಿಣಿ ಅಂದರೆ ಹೆಣ್ಣು ಸಿಂಹಗಳು.
  • ಸಿಂಹಗಳು  ಗಂಟೆಗೆ 50 ಮೈಲುಗಳಷ್ಟು ವೇಗದಲ್ಲಿ ಓಡಬಲ್ಲದು ಮತ್ತು 36 ಅಡಿಗಳಷ್ಟು ಜಿಗಿಯಬಲ್ಲದು.
  • ಸಿಂಹಗಳು ನಡೆಯುವಾಗ ಅದರ ಹಿಮ್ಮಡಿಗಳು ನೆಲವನ್ನು ಮುಟ್ಟುವುದಿಲ್ಲ.
  • ಸಿಂಹಗಳನ್ನು ಬೆಕ್ಕು ಸಂತತಿಯ ಅತ್ಯಂತ ಸೋಮಾರಿ ಪ್ರಾಣಿ ಎಂದು ಕರೆಯಲಾಗುತ್ತದೆ. ಹಗಲಿನಲ್ಲಿ, ಅವು 21 ರಿಂದ 22 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಅವು ಪ್ರತಿದಿನ ಬೇಟೆಯಾಡಲು ಸುಮಾರು ಎರಡರಿಂದ ಮೂರು ಗಂಟೆಗಳ ಸಮಯವನ್ನು ವ್ಯಯಿಸುತ್ತವೆ.
  • ಸಿಂಹಗಳು ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ.
  • ಗಂಡು ಸಿಂಹಗಳು 1.2 ಮೀಟರ್ ಎತ್ತರ ಮತ್ತು 3.3 ಮೀಟರ್ ಉದ್ದವಿದ್ದರೆ, ಹೆಣ್ಣು ಸಿಂಹಗಳು 1.1 ಮೀಟರ್ ಎತ್ತರ ಮತ್ತು 2.4 ಮೀಟರ್ ಉದ್ದವಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಔಟ್; ಬದಲಿ ಆಟಗಾರನನ್ನ ಘೋಷಿಸಿದ ಬಿಸಿಸಿಐ

Source link

ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಯುಬಿ ಸಿಟಿಯಲ್ಲಿ ಕಾರ್ಯಚರಣೆ – Kannada News | Bengaluru Food Department Raids Hotels: Mega Weekend Drive for Food Safety

ಆಹಾರ ಇಲಾಖೆ ಅಧಿಕಾರಿಗಳ ದಾಳಿImage Credit source: tv9 kannada

ಬೆಂಗಳೂರು, ಆಗಸ್ಟ್​​ 09: ರಾಜಧಾನಿ ಬೆಂಗಳೂರಿನಲ್ಲಿ (Bangaluru) ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಮೆಗಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ವೀಕೆಂಡ್ ಹಿನ್ನೆಲೆ ಐಷಾರಾಮಿ ಹೋಟೆಲ್‌ಗಳು, ಸ್ಟಾರ್ ಹೋಟೆಲ್‌ಗಳು ಹಾಗೂ ಪ್ರಸಿದ್ಧ ಮಾಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಜನರಿಗೆ ಉತ್ತಮ ಆಹಾರ ನೀಡುತ್ತಿದ್ದಾರೆ ಎಂದು ಪರಿಶೀಲನೆ ಮಾಡಿದರು.

ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ನಗರದ ಐಷಾರಾಮಿ ಹೋಟೆಲ್‌ಗಳ ವಿರುದ್ಧ ಸಮರ ಸಾರಿದ್ದಾರೆ. 3 ಸ್ಟಾರ್‌, 5 ಸ್ಟಾರ್‌, 7 ಸ್ಟಾರ್ ಅಂತಾ ಹೋಟೆಲ್‌ಗಳ ಕಿಚನ್​ ಜಾಲಾಡುತ್ತಿದ್ದಾರೆ. ಇಂದು ಕೂಡ ದಾಳಿ ಮುಂದುವರೆದಿದೆ.

ವೀಕೆಂಡ್​ನಲ್ಲೂ ಮೆಗಾ ಆಪರೇಷನ್

ವೀಕೆಂಡ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೋಟೆಲ್‌ಗಳಿಗೆ ಭೇಟಿ ನೀಡುವ ಕಾರಣ, ಅವರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್​​​ ನೇತೃತ್ವದಲ್ಲಿ ರಾತ್ರಿ ಹೊತ್ತಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಯುಬಿ ಸಿಟಿ, ಬ್ರಿಗೇಡ್ ರೋಡ್ ಹಾಗೂ ಎಂ.ಜಿ. ರೋಡ್‌ನಲ್ಲಿರುವ ಪ್ರಮುಖ ಹೋಟೆಲ್‌ಗಳ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದರು.

ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ ಎಂದ ಸಚಿವ ಯು.ಟಿ.ಖಾದರ್

ಇನ್ನು ಬೆಂಗಳೂರಿನ ಹೋಟೆಲ್​ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ‘ತಪಾಸಣೆ ನಮ್ಮ ಜವಾಬ್ದಾರಿ, ಅದು ಮುಂದುವರಿಯುತ್ತದೆ. ಬಹಳಷ್ಟು ಕಡೆ ದಾಳಿ ಮಾಡಿ ಸ್ಯಾಂಪಲ್ಸ್ ಪಡೆಯಲಾಗಿದೆ. ಯಾವುದೇ ಪ್ರದೇಶಕ್ಕೆ ಈ ದಾಳಿಯನ್ನು ಸೀಮಿತ ಮಾಡಲ್ಲ’ ಎಂದರು.

ಇದನ್ನೂ ಓದಿ: ಪಂಚತಾರಾ ಹೋಟೆಲ್ ಸ್ಥಿತಿ ಬಯಲು ಮಾಡಿದ್ದೇವೆ: ತಿನ್ನೋದು ಬಿಡೋದು ಜನರಿಗೆ ಬಿಟ್ಟಿದ್ದು ಎಂದ ಸಚಿವ

‘ಕಿಡ್ನಿ ಸಮಸ್ಯೆ, ಕ್ಯಾನ್ಸರ್​ನಂತಹ ಪ್ರಕರಣಗಳೆಲ್ಲವೂ ಬರ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಷ್ಟೇ ಉದ್ದೇಶವಲ್ಲ. ಪಂಚತಾರಾ ಹೋಟೆಲ್​ಗಳು ಸರಿಪಡಿಸಿಕೊಂಡು ಹೋಗಬೇಕು. ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ – Kannada News | Get Out Vinay Gowda Fumes at Amuku Dumuku Contestant in Bigg Boss Agniparikshe

ಬಿಗ್ ಬಾಸ್ ಅಗ್ನಿಪರೀಕ್ಷೆ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾ ಖ್ಯಾತಿಯ ‘ಅಮುಕು ಡುಮುಕು’ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಲು ಆಗಮಿಸಿದ್ದರು. ತೀರ್ಪುಗಾರರ ಪೀಠದಲ್ಲಿದ್ದ ಸಂಗೀತ ಶೃಂಗೇರಿ ಅವರು, ‘ಸಂಗೀತಾ ಅವರು ನಿಮ್ಮನ್ನು ಕಂಡರೆ ಇಷ್ಟ ಎಂದು ಹೇಳಿಸಬೇಕು’ ಎಂದು ಒಂದು ಟಾಸ್ಕ್ ನೀಡುತ್ತಾರೆ.

ಆದರೆ ಇದಕ್ಕೆ ಉತ್ತರಿಸಿದ ಅಮುಕು ಡುಮುಕು, ‘ನಾನು ಯಾರನ್ನೂ ಇಂಪ್ರೆಸ್ ಮಾಡಲು ಬಂದಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ, ಹೀಗೆಯೇ ಹೋಗುವುದು’ ಎಂದು ತಮ್ಮದೇ ಶೈಲಿಯಲ್ಲಿ ನೇರವಾಗಿ ಹೇಳುತ್ತಾರೆ.

ಈ ಮಾತಿನಿಂದ ಅಸಮಾಧಾನಗೊಂಡ ಮತ್ತೊಬ್ಬ ತೀರ್ಪುಗಾರ ವಿನಯ್ ಗೌಡ, ‘ಆಗಲ್ಲ ಅಂದರೆ ಹೋಗ್ತಾ ಇರು… ಗೆಟ್‌ಔಟ್! ಹೋಗ್ತಾ ಇರು’ ಎಂದು ವೇದಿಕೆಯಲ್ಲೇ ಖಡಕ್ ಆಗಿ ಗದರಿ ಹೊರಗೆ ಕಳುಹಿಸುತ್ತಾರೆ. ವಿನಯ್ ಅವರ ತೀಕ್ಷ್ಣ ಮಾತು ಕೇಳಿ, ಅಮುಕು ಡುಮುಕು ಅವರು ತಮ್ಮ ಸೂಟ್ ಸರಿಮಾಡಿಕೊಳ್ಳುತ್ತಾ ನಿಶ್ಯಬ್ದವಾಗಿ ವೇದಿಕೆಯಿಂದ ನಿರ್ಗಮಿಸುತ್ತಾರೆ.

ಬಿಗ್ ಬಾಸ್ ಮನೆ ಪ್ರವೇಶಿಸಲು 60 ಜನ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿದ್ದು, ತೀರ್ಪುಗಾರರ ಕಟ್ಟುನಿಟ್ಟಿನ ನಿರ್ಧಾರಗಳು ಈ ‘ಅಗ್ನಿಪರೀಕ್ಷೆ’ಯ ತಾಪವನ್ನು ಹೆಚ್ಚಿಸಿವೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ – Kannada News | India’s CWG 2026 Triumph: 39 Medals, PM Modi Meets Victorious Athletes

ಸಂಖ್ಯೆ

ಕ್ರೀಡಾಪಟು

ಕ್ರೀಡೆ

ವಿಭಾಗ

ಪದಕ

1

ಝಂಡು ಕುಮಾರ

ಪುರುಷರ ಹೆವಿವೇಯ್ಟ್

ಪ್ಯಾರಾ ಪವರ್‌ಲಿಫ್ಟಿಂಗ್

ಕಂಚು

2

ರಿಷಿಕಾಂತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 60 ಕೆಜಿ

ಬೆಳ್ಳಿ

3

ಮೀರಾಬಾಯಿ ಚಾನು

ವೇಟ್ ಲಿಫ್ಟಿಂಗ್

ಮಹಿಳೆಯರ 48 ಕೆಜಿ

ಚಿನ್ನ

4

ಮುತ್ತುಪಾಂಡಿ ರಾಜ

ವೇಟ್ ಲಿಫ್ಟಿಂಗ್

ಪುರುಷರ 65 ಕೆಜಿ

ಬೆಳ್ಳಿ

5

ಜ್ಞಾನೇಶ್ವರಿ ಯಾದವ್

ವೇಟ್ ಲಿಫ್ಟಿಂಗ್

ಮಹಿಳೆಯರ 53 ಕೆಜಿ

ಬೆಳ್ಳಿ

6

ಬಿಂದ್ಯಾರಾಣಿ ದೇವಿ

ವೇಟ್ ಲಿಫ್ಟಿಂಗ್

ಮಹಿಳೆಯರ 58 ಕೆಜಿ

ಕಂಚು

7

ಶರ್ಮಿಳಾ ಧಂಕರ್

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಚಿನ್ನ

8

ಸರ್ವೇಶ್ ಕುಶಾರೆ

ಅಥ್ಲೆಟಿಕ್ಸ್

ಪುರುಷರ ಹೈ ಜಂಪ್

ಬೆಳ್ಳಿ

9

ಶಿಲ್ಪಾ ಶೈಲಾ

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಕಂಚು

10

ವಲ್ಲೂರಿ ಅಜಯ್ ಬಾಬು

ವೇಟ್ ಲಿಫ್ಟಿಂಗ್

ಪುರುಷರ 79 ಕೆಜಿ

ಬೆಳ್ಳಿ

11

ಹರ್ಜಿಂದರ್ ಕೌರ್

ವೇಟ್ ಲಿಫ್ಟಿಂಗ್

ಮಹಿಳೆಯರ 69 ಕೆಜಿ

ಬೆಳ್ಳಿ

12

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 10000 ಮೀ.

ಬೆಳ್ಳಿ

13

ಮುರಳಿ ಶ್ರೀಶಂಕರ್

ಅಥ್ಲೆಟಿಕ್ಸ್

ಪುರುಷರ ಲಾಂಗ್ ಜಂಪ್

ಬೆಳ್ಳಿ

14

ದಿಲೀಪ್ ಗವಿತ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಚಿನ್ನ

15

ಮೊಹಮ್ಮದ್ ಬಾಸಿಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಬೆಳ್ಳಿ

16

ಲವ್‌ಪ್ರೀತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 110+ ಕೆಜಿ

ಬೆಳ್ಳಿ

17

ಸೀಮಾ ಕಲಿರಮಣ

ಅಥ್ಲೆಟಿಕ್ಸ್

ಮಹಿಳೆಯರ ಡಿಸ್ಕಸ್ ಥ್ರೋ

ಕಂಚು

18

ಅಸ್ಮಿತಾ ಡೇ

ಜೂಡೋ

ಮಹಿಳೆಯರ 48 ಕೆಜಿ

ಚಿನ್ನ

19

ಹರ್ಷ್ ಸಿಂಗ್

ಜೂಡೋ

ಪುರುಷರ 60 ಕೆಜಿ

ಚಿನ್ನ

20

ಯಾಮಿನಿ ಮೌರ್ಯ

ಜೂಡೋ

ಮಹಿಳೆಯರ 57 ಕೆಜಿ

ಬೆಳ್ಳಿ

21

ತೇಜಸ್ವಿನ್ ಶಂಕರ್

ಅಥ್ಲೆಟಿಕ್ಸ್

ಪುರುಷರ ಡೆಕಾಥ್ಲಾನ್

ಕಂಚು

22

ಯಶ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಕಂಚು

23

ನೀರಜ್ ಚೋಪ್ರಾ

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಬೆಳ್ಳಿ

24

ಪ್ರೀತಿ ಪವಾರ್

ಬಾಕ್ಸಿಂಗ್

ಮಹಿಳೆಯರ 54 ಕೆಜಿ

ಚಿನ್ನ

25

ಪ್ರವೀಣ್ ಚಿತ್ರಾವೆಲ್

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಬೆಳ್ಳಿ

26

ಸೆಲ್ವ ಪ್ರಭು

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಕಂಚು

27

ಜಾಸ್ಮಿನ್ ಲಂಬೋರಿಯಾ

ಬಾಕ್ಸಿಂಗ್

ಮಹಿಳೆಯರ 57 ಕೆಜಿ

ಚಿನ್ನ

28

ಜಾದುಮಣಿ ಸಿಂಗ್

ಬಾಕ್ಸಿಂಗ್

ಪುರುಷರ 55 ಕೆಜಿ

ಬೆಳ್ಳಿ

29

ಶುಭಂ ಜುಯಾಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಚಿನ್ನ

30

ಸೋಮನ್ ರಾಣಾ

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಬೆಳ್ಳಿ

31

ಉನ್ನತಿ ಶರ್ಮಾ

ಜೂಡೋ

ಮಹಿಳೆಯರ 63 ಕೆಜಿ

ಕಂಚು

32

ಸಾಕ್ಷಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 51 ಕೆಜಿ

ಚಿನ್ನ

33

ಪ್ರಿಯಾ ಘಂಘಾಸ್

ಬಾಕ್ಸಿಂಗ್

ಮಹಿಳೆಯರ 60 ಕೆಜಿ

ಚಿನ್ನ

34

ಅರುಂಧತಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 70 ಕೆಜಿ

ಚಿನ್ನ

35

ಲವ್ಲಿನಾ ಬೊರ್ಗೊಹೈನ್

ಬಾಕ್ಸಿಂಗ್

ಮಹಿಳೆಯರ 75 ಕೆಜಿ

ಬೆಳ್ಳಿ

36

ಸಚಿನ್ ಸಿವಾಚ್

ಬಾಕ್ಸಿಂಗ್

ಪುರುಷರ 60 ಕೆಜಿ

ಚಿನ್ನ

37

ಅಂಕುಶ್ ಪಂಗಲ್

ಬಾಕ್ಸಿಂಗ್

ಪುರುಷರ 80 ಕೆಜಿ

ಚಿನ್ನ

38

ನರೇಂದ್ರ ಬೆರ್ವಾಲ್

ಬಾಕ್ಸಿಂಗ್

ಪುರುಷರ 90 ಕೆಜಿ

ಬೆಳ್ಳಿ

39

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 5000 ಮೀ.

ಕಂಚು

Source link

Exit mobile version